Homeಮುಖಪುಟಹೆಸರಿಗಷ್ಟೇ ಆಯ್ತು ಮೋದಿಯ ‘ಉಜ್ವಲಾ’, ನಿಲ್ಲಲೇ ಇಲ್ಲ ಒಲೆ ಮುಂದೆ ಝಳ ಝಳ!

ಹೆಸರಿಗಷ್ಟೇ ಆಯ್ತು ಮೋದಿಯ ‘ಉಜ್ವಲಾ’, ನಿಲ್ಲಲೇ ಇಲ್ಲ ಒಲೆ ಮುಂದೆ ಝಳ ಝಳ!

- Advertisement -
- Advertisement -
ಈ ಚಿತ್ರ ಉಜ್ವಾಲ ಯೋಜನೆಯ ಬಗ್ಗೆ ಏನು ಹೇಳುತ್ತದೆ

ಚುನಾವಣಾ ಪ್ರಚಾರದಲ್ಲಿ ಹಾಲಿ ಬಿಜೆಪಿಯ ಎಂಪಿಗಳು ‘ಉಜ್ವಲಾ’ ಯೋಜನೆ ಬಗ್ಗೆ ವಿಪರೀತವಾಗಿ ಬಡಾಯಿ ಕೊಚ್ಚಿಕೊಳ್ಳುತ್ತಿದ್ದಾರೆ. ಆದರೆ ಸುಮ್ಮನೆ ಹೆಸರಿಗಷ್ಟೇ ಎಂಬಂತೆ ಆಗಿರುವ ಈ ಯೋಜನೆ ಬಡವರನ್ನು ಒಂದು ರೀತಿಯಲ್ಲಿ ಅವಮಾನಿಸುತ್ತಲೂ ಇದೆ. ಫಲಾನುಭವಿಗಳ ಪೈಕಿ ಶೇ. 85ರಷ್ಟು ಕುಟುಂಬಗಳು ಈಗಲೂ ಸೌದೆ ಒಲೆ, ಸೀಮೆಎಣ್ಣೆ ಸ್ಟವ್‍ಗಳನ್ನೇ ಆಶ್ರಯಿಸಿವೆ. ಬಡವರ ಆದಾಯ ಹೆಚ್ಚಿಸುವ ಯಾವ ದೊಡ್ಡ ಯೋಜನೆಯನ್ನು ಜಾರಿಗೆ ತರದ ಸರ್ಕಾರ, ಬಡ ಕುಟುಂಬಗಳು 800-1000 ತೆತ್ತು ಗ್ಯಾಸ್ ರಿಫಿಲ್ ಮಾಡಬೇಕೆಂದು ಬಯಸುತ್ತಿದೆ. ಮೋದಿ ಸರ್ಕಾರದ ಮೂರ್ಖತನದ ಯೋಜನೆಗಳಿಗೆ ಈ ‘ಉಜ್ವಲಾ’ ಸ್ಕೀಮ್ ಕೂಡ ಒಂದು ಸಾಕ್ಷಿ.

ಆಗಾಗ, ಹಲವಾರು ಸಂಘಸಂಸ್ಥೆಗಳು ಇದರ ವೈಫಲ್ಯದ ಬಗ್ಗೆ ಧ್ವನಿ ಎತ್ತುತ್ತಲೇ ಬಂದಿವೆ. ಈಗ ‘ರಿಸರ್ಚ್ ಇನ್ಸ್ಟಿಟ್ಯೂಟ್ ಫಾರ್ ಕಂಪಾಸಿನೇಟ್ ಎಕಾನಮಿ’ ( RICE ) ನಾಲ್ಕು ರಾಜ್ಯಗಳಲ್ಲಿ ಅಧ್ಯಯನ ಮಾಡಿದ್ದು, ‘ಉಜ್ವಲಾ’ ಫಲಾನುಭವಿಗಳ ಪೈಕಿ ಶೇ. 85ರಷ್ಟು ಕುಟುಂಬಗಳು ಈಗಲೂ ಸೌದೆ ಒಲೆಯನ್ನೇ ಉಪಯೋಗಿಸುತ್ತಿವೆ. ಗ್ಯಾಸ್ ಸ್ಟವ್ ಕೊಟ್ಟು ಕೈ ತೊಳೆದುಕೊಂಡ ಮೋದಿ ಸರ್ಕಾರ, ಗ್ಯಾಸ್ ರಿಫಿಲ್ ಬಗ್ಗೆ ಎಂದೂ, ಇಂದಿಗೂ ಯೋಚಿಸಲೇ ಇಲ್ಲ. ಜೊತೆಗೆ ಸಿಲಿಂಡರ್ ದರದಲ್ಲೂ ಏರಿಕೆ ಮಾಡುತ್ತಲೇ ಬಂದಿತು.

ಮಧ್ಯ ಪ್ರದೇಶ, ರಾಜಸ್ಥಾನ, ಉತ್ತರಪ್ರದೇಶ ಮತ್ತು ಬಿಹಾರ್‍ಗಳಲ್ಲಿ ಈ ಅಧ್ಯಯನ ಮಾಡಲಾಗಿದ್ದು, ಬಹಳಷ್ಟು ಕುಟುಂಬಗಳು ಗ್ಯಾಸ್ ರಿಫಿಲ್ ಮಾಡಿಸಿಕೊಳ್ಳುವ ಆರ್ಥಿಕ ಸಾಮಥ್ರ್ಯ ಹೊಂದಿಲ್ಲ ಎಂಬುದು ಪತ್ತೆಯಾಗಿದೆ. ದೇಶದ ಇತರ ಭಾಗಗಳಲ್ಲೂ ಇಂಥದೇ ಪರಿಸ್ಥಿತಿಯಿದೆ. ಇದರಿಂದಾಗಿ, ಒಲೆ ಮುಂದೆ ಊದುತ್ತ, ಕೆಮ್ಮುತ್ತ ಬೆಂಕಿಯ ಝಳದ ಎದುರು ಮಹಿಳೆಯರು ಹೈರಾಣಾಗುತ್ತಿದ್ದಾರೆ. ಸೌದೆ ಒಲೆ ಬಳಕೆಯಿಂದ ಸಹಜವಾಗಿ ಮನೆಯೊಳಗೆ ವಾಯುಮಾಲಿನ್ಯ ಸಂಭವಿಸುತ್ತಿದೆ. ಇದಕ್ಕೆ ನವಜಾತ ಶಿಶುಗಳು ಪ್ರಾಣವನ್ನೂ ತೆರುತ್ತಿವೆ.

2016ರಲ್ಲಿ ಮೋದಿ ಸರ್ಕಾರ ಭಾರಿ ಸದ್ದಿನೊಂದಿಗೆ ‘ಉಜ್ವಲಾ’ ಯೋಜನೆಯನ್ನು ಆರಂಭಿಸಿತು. ಒಂದು ಗ್ಯಾಸ್ ಸಿಲಿಂಡರ್, ರೆಗುಲೇಟರ್ ಮತ್ತು ಪೈಪ್‍ಗಳನ್ನು ಈ ಯೋಜನೆಯ ಫಲಾನುಭವಿಗಳಿಗೆ ಉಚಿತವಾಗಿ ನೀಡಲಾಗುತ್ತದೆ. ಅಲ್ಲಿಗೆ ಮುಗಿಯಿತು. ಸ್ಟವ್ ಖರೀದಿಸಬೇಕು, ಮೊದಲ ಸಿಲಿಂಡರ್ ಮುಗಿದ ನಂತರ ರಿಫಿಲ್ ಮಾಡಿಸುವ ತಾಪತ್ರಯ ಶುರು. ಅಧ್ಯಯನ ಮಾಡಿದ 4 ರಾಜ್ಯಗಳಲ್ಲಿ ಎಲ್‍ಪಿಜಿ ಹೊಂದಿರುವವರ ಸಂಖ್ಯೆ ಗಣನೀಯವಾಗಿ ಏರಿದೆ ನಿಜ. ಆದರೆ ಉಜ್ವಲಾ ಯೋಜನೆಯಲ್ಲಿ ಎಲ್‍ಪಿಜಿ ಸಂಪರ್ಕ ಪಡೆದ ಶೇ. 85ರಷ್ಟು ಜನರು ಈಗಲೂ ಸೌದೆ ಒಲೆ, ಸೀಮೆ ಎಣ್ಣೆ ಸ್ಟವ್‍ಗಳನ್ನೇ ಬಳಸುತ್ತಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ ಟ್ರೋಲ್

ಆನತೆಯ ಆದಾಯ ಹೆಚ್ಚಿಸುವುದು ಇರಲಿ, ನೋಟ್‍ಬ್ಯಾನ್‍ನಂತಹ ಕ್ರಮಗಳಿಂದ ಬಡವರ ಆದಾಯವನ್ನು ತಗ್ಗಿಸಿದ ಈ ಮೂರ್ಖ ಸರ್ಕಾರ ಜನ ಗ್ಯಾಸ್ ರಿಫಿಲ್ ಮಾಡಿಸಿಕೊಳ್ಳಬೇಕು ಎನ್ನುತ್ತದೆ. ಇದು ಕ್ರೂರ ಮತ್ತು ಅಮಾನವೀಯ ಅಲ್ಲವೇ ಮೋದೀಜಿ?

ಆಧಾರ: ದಿ ಹಿಂದೂ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...

ವಿಧಾನಸಭೆಯಲ್ಲಿ ‘ಗೃಹಲಕ್ಷ್ಮಿ’ ಗದ್ದಲ : ಬಿಜೆಪಿ ಸದಸ್ಯರಿಂದ ಸಭಾತ್ಯಾಗ, ಕ್ಷಮೆ ಕೋರಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಗೃಹಲಕ್ಷಿ ಯೋಜನೆಯ ಹಣ ಬಿಡುಗಡೆ ಸಂಬಂಧ ಸಚಿವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ವಿಚಾರ ಇಂದು (ಡಿ.17 ಬುಧವಾರ) ವಿಧಾನಸಭೆಯಲ್ಲಿ ದೊಡ್ಡ ಮಟ್ಟದ ವಾಗ್ವಾದ, ಆರೋಪ-ಪ್ರತ್ಯಾರೋಪ, ಗದ್ದಲ, ಪ್ರತಿಭಟನೆ, ಸಭಾತ್ಯಾಗ ಮತ್ತು...

ತಂಪು ಪಾನೀಯದಲ್ಲಿ ಮತ್ತು ಬರುವ ಔಷಧ ಬೆರೆಸಿ ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ: ಆರೋಪಿ ಬಂಧನ

ಮುಂಬೈ ನಗರವನ್ನೇ ಬೆಚ್ಚಿಬೀಳಿಸಿದ ಆಘಾತಕಾರಿ ಘಟನೆಯಲ್ಲಿ, ವಕ್ತಿಯೋರ್ವ ಮತ್ತು ಬರುವ ತಂಪು ಪಾನೀಯ ನೀಡಿ ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಅಪರಾಧದ ಅಶ್ಲೀಲ ವೀಡಿಯೊಗಳನ್ನು ರೆಕಾರ್ಡ್ ಮಾಡಿ, ನಂತರ ವೀಡಿಯೊಗಳನ್ನು...

ಮನರೇಗಾ ಬದಲು ವಿಬಿ-ಜಿ ರಾಮ್ ಜಿ : ಲೋಕಸಭೆಯಲ್ಲಿ ಮಸೂದೆ ಅಂಗೀಕಾರದ ವೇಳೆ ಸಭಾತ್ಯಾಗಕ್ಕೆ ನಿರ್ಧರಿಸಿದ ವಿಪಕ್ಷಗಳು

ನರೇಗಾ ಬದಲು ತಂದಿರುವ ವಿಕಸಿತ್ ಭಾರತ್-ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕಾ ಮಿಷನ್ (ಗ್ರಾಮೀಣ್) ಮಸೂದೆ, 2025 (ವಿಬಿ–ಜಿ ರಾಮ್ ಜಿ ಮಸೂದೆ) ಲೋಕಸಭೆಯಲ್ಲಿ ಅಂಗೀಕಾರದ ವೇಳೆ ಸಹಕರಿಸದಿರಲು ವಿರೋಧ ಪಕ್ಷಗಳ ಸಂಸದರು...

ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಆರೋಪ: ಮ್ಯೂಸಿಕ್ ಮೈಲಾರಿ ಮೇಲೆ ಪೋಕ್ಸೋ ಪ್ರಕರಣ ದಾಖಲು 

ಬೆಂಗಳೂರು: ಉತ್ತರ ಕರ್ನಾಟಕದ ಜನಪದ ಗಾಯಕ ಹಾಗೂ ಯೂಟ್ಯೂಬ್ ಸ್ಟಾರ್ ಎಂದೇ ಖ್ಯಾತಿ ಪಡೆದಿದ್ದ ‘ಮ್ಯೂಸಿಕ್ ಮೈಲಾರಿ’ಎಂಬಾತನನ್ನು ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಮಹಾಲಿಂಗಪುರ ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಲಾರಿ...

ಇಂಧನ ಖರೀದಿಗೆ ‘ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ’ ಕಡ್ಡಾಯಗೊಳಿಸಿದ ದೆಹಲಿ ಸರ್ಕಾರ

ರಾಷ್ಟ್ರ ರಾಜಧಾನಿ ದೆಹಲಿಯ ವಾಹನ ಮಾಲೀಕರು ಕಟ್ಟುನಿಟ್ಟಾದ ಆದೇಶ ಎದುರಿಸುತ್ತಾರೆ. ಡಿಸೆಂಬರ್ 18 ರಿಂದ ನಗರದಾದ್ಯಂತದ ಪೆಟ್ರೋಲ್ ಬಂಕ್‌ಗಳಲ್ಲಿ ಇಂಧನ ಖರೀದಿಗೆ ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ (ಪಿಯುಸಿ) ಕಡ್ಡಾಯಗೊಳಿಸಲಾಗಿದೆ. ದೆಹಲಿ ಪರಿಸರ ಸಚಿವ ಮಂಜಿಂದರ್...

ವೈದ್ಯೆಯ ಹಿಜಾಬ್ ಎಳೆದ ಬಿಹಾರ ಸಿಎಂ, ಅವಹೇಳನ ಮಾಡಿದ ಯುಪಿ ಸಚಿವನ ವಿರುದ್ದ ದೂರು ದಾಖಲು

ವೈದ್ಯೆಯ ಹಿಜಾಬ್ ಎಳೆದ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಈ ಘಟನೆಯ ಕುರಿತು ಮಾತನಾಡುವಾಗ ಮಹಿಳೆಯನ್ನು ಅವಮಾನಿಸಿದ ಉತ್ತರ ಪ್ರದೇಶದ ಸಂಪುಟ ಸಚಿವ ಸಂಜಯ್ ನಿಶಾದ್ ವಿರುದ್ದ ಲಕ್ನೋದ ಕೈಸರ್‌ಬಾಗ್ ಪೊಲೀಸ್...

1 ಲಕ್ಷ ರೂಪಾಯಿ ಸಾಲ 74 ಲಕ್ಷ ರೂಪಾಯಿಗೆ ಏರಿಕೆ, ಸಾಲ ತೀರಿಸಲು ಕಿಡ್ನಿ ಮಾರಿದ ರೈತ 

ಅಕ್ರಮವಾಗಿ ಸಾಲ ನೀಡುವವರಿಂದ 1 ಲಕ್ಷ ಸಾಲ ಪಡೆದಿದ್ದು, ಅದಕ್ಕೆ ಹೆಚ್ಚಿನ ದಿನದ ಬಡ್ಡಿ ಸೇರಿ 75 ಲಕ್ಷ ಸಾಲ ಏರಿಕೆಯಾದ ಕಾರಣ ವ್ಯಕ್ತಿಯೊಬ್ಬ ತನ್ನ ಕಿಡ್ನಿಯನ್ನೇ ಮಾರಾಟ ಮಾಡಿರುವ ಘಟನೆ ಮಹಾರಾಷ್ಟ್ರದಲ್ಲಿ...