Homeಮುಖಪುಟಚುನಾವಣಾ ಆಯೋಗದ ಪಕ್ಷಪಾತ: ಬಿಜೆಪಿಯ ಉಲ್ಲಂಘನೆಗಳಿಗೆ ಮೌನಸಮ್ಮತಿ?!

ಚುನಾವಣಾ ಆಯೋಗದ ಪಕ್ಷಪಾತ: ಬಿಜೆಪಿಯ ಉಲ್ಲಂಘನೆಗಳಿಗೆ ಮೌನಸಮ್ಮತಿ?!

- Advertisement -
- Advertisement -

ಕಳೆದ ಎರಡು ವಾರಗಳಲ್ಲಿ ಹಲವಾರು ಸಲ ನೀತಿ ಸಂಹಿತೆ ಉಲ್ಲಂಘನೆಯಾಗಿದೆ, ಆಗುತ್ತಲೇ ಇದೆ. ವಿಪಕ್ಷಗಳ ವಿಚಾರದಲ್ಲಿ ಕಠೋರ ನಿಲುವು ತಾಳುತ್ತಿರುವ ಚುನಾವಣಾ ಆಯೋಗ ಗಂಭೀರ ತಪ್ಪು ಮಾಡಿದ ಬಿಜೆಪಿ ನಾಯಕರಿಗೆ ‘ಅಸಂತೋಷ’ದ ಸೂಚನೆ ನೀಡುತ್ತಿದೆ… ಇದನ್ನೆಲ್ಲ ಗಮಿನಿಸಿದರೆ, ಸಿಬಿಐ, ಐಟಿ ಇಲಾಖೆ ಹಾದಿಯಲ್ಲೇ ಆಯೋಗವೂ ಸಾಗುತ್ತಿರುವ ಸಾಧ್ಯತೆಗಳು ಗೋಚರಿಸುತ್ತಿವೆ..

ನಿನ್ನೆ ಏಪ್ರಿಲ್ 5ರಂದು ದೇಶದ ಪ್ರಜಾಪ್ರಭುತ್ವದ ‘ಒಂಬುಡ್ಸ್‍ಮನ್’ ಎಂದು ಕರೆಯಲ್ಪಡುವ ಚುನಾವಣಾ ಆಯೋಗವು ನೀತಿ ಸಂಹಿತೆ ಉಲ್ಲಂಘನೆಯ ಎರಡು  ಪ್ರಕರಣಗಳ ಕುರಿತಂತೆ ತಪ್ಪು  ತೀರ್ಪುಗಳನ್ನು ನೀಡಿದೆ. ಒಂದು, ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥರು, ಭಾರತೀಯ ಸೇನೆಯನ್ನು ಮೋದಿಸೇನೆ ಎಂದ ಪ್ರಕರಣ.

ಮೋದಿ ಸಂಪುಟದ ಸಚಿವ ವಿ.ಕೆ. ಸಿಂಗ್ ಸೇರಿದಂತೆ, ಹಲವಾರು ಜನರ ಖಂಡನೆಯ ನಂತರ ಚುನಾವಣಾ ಆಯೋಗವು ಯೋಗಿಗೆ ‘ಜಾರೂಕರಾಗಿರುವಂತೆ ಸಲಹೆ’ ನೀಡುವ ಪತ್ರವನ್ನು ಕಳಿಸಿದೆ!

ಎರಡನೇಯ ನೀತಿ ಸಂಹಿತೆ ಉಲ್ಲಂಘನೆ, ನೀತಿ ಆಯೋಗದ ಉಪಾಧ್ಯಕ್ಷ  ರಾಜೀವಕುಮಾರ್, ಕಾಂಗ್ರೆಸ್‍ನ ‘ಕನಿಷ್ಠ ಆದಾಯ ಖಾತ್ರಿ’ಯ ಭರವಸೆ ಕುರಿತು ಮಾಡಿದ ಟೀಕೆ ಕುರಿತದ್ದು. ಈ ಕುರಿತಂತೆ ರಾಜೀವಕುಮಾರರಿಗೂ ಪತ್ರ ಕಳಿಸಿರುವ ಆಯೋಗ,  ಸಾರ್ವಜನಿಕ ಸೇವಕರು ನೀತಿ ಸಂಹಿತೆ ಪಾಲಿಸುವುದು, ಚುನಾವಣಾ ಪಾವಿತ್ರ್ಯವನ್ನು ಕಾಪಾಡುವುದು ಅಗತ್ಯ’ ಎಂದು ‘ಬೋಧನೆ’ ಮಾಡಿರುವ ಅದು, ‘ತಮ್ಮ ನಡೆ ಬಗ್ಗೆ ಆಯೋಗಕ್ಕೆ ಅಸಂತೋಷವಿದೆ, ಇನ್ನುಂದೆ ಹುಷಾರಾಗಿರಿ’ ಎಂದಿದೆ!

ನೀತಿಸಂಹಿತೆ ಉಲ್ಲಂಘನೆ ಪ್ರಕರಣಗಳು, ಅದರಲ್ಲೂ ಬಿಜೆಪಿಗೆ ಸಂಬಂಧಿಸಿದ ಪ್ರಕರಣಗಳು ದಾಖಲಾಗುತ್ತಲೇ ಇವೆ. ನಿನ್ನೆಯೇ (ಏ.5) ವಿಪಕ್ಷಗಳು ‘ಹಫ್‍ಫೋಸ್ಟ್  ಬಯಲು ಮಾಡಿರುವ ‘’ಅಸೋಷಿಯೇಷನ್ ಆಫ್ ಬಿಲಿಯನ್ ಮೈಂಡ್ಸ್’ ಸಂಸ್ಥೆಯ ಮೇಲೆ ತ್ವರಿತ ಕಾನೂನು ಕ್ರಮಕ್ಕೆ ಆಗ್ರಹಿಸಿವೆ. ಬಿಜೆಪಿಯಿಂದ ತೆರೆಮರೆಯಲ್ಲಿ ನಡೆಸಲ್ಪಡುವ ಈ ಎನ್‍ಜಿಒ, ಕಳೆದ ಐದು ವರ್ಷಗಳ ಕಾಲ ಆನ್‍ಲೈನಿನಲ್ಲಿ ಬಿಜೆಪಿ ಪ್ರಪಗಂಡಾಗಳನ್ನು ವ್ಯವಸ್ಥಿತವಾಗಿ ಹರಡುವ ಕೆಲಸ ಮಾಡುತ್ತಿದೆ.

ಇದರ ವಿರುದ್ಧ ಆಯೋಗ ತ್ವರಿತ ಕ್ರಮ ಕೈಗೊಳ್ಳುತ್ತದೆ ಎಂದು ನಿರೀಕ್ಷಿಸುವುದೇ ಮೂರ್ಖತನವೇನೋ?  ‘ಈ ಸಮಾಜಕ್ಕಾಗಿ ಮೋದಿ ಮತ್ತೆ ಪ್ರಧಾನಿಯಾಗಬೇಕು’ ಎಂದ ರಾಜಸ್ಥಾನದ ರಾಜ್ಯಪಾಲ ಕಲ್ಯಾಣಸಿಂಗ್ ವಿಷಯದಲ್ಲೂ ಆಯೋಗ ಕಾಟಾಚಾರದ ಆಟವಾಡಿದೆ.

ಮೋದಿಯ ‘ಮೈ ಭಿ ಚೌಕಿದಾರ್’ ಕಾರ್ಯಕ್ರಮ ನೇರ ಪ್ರಸಾರ ಮಾಡಿದ ದೂರದರ್ಶನ, ನಿಯಮಗಳನ್ನು ಉಲ್ಲಂಘಿಸಿ ಹಠಾತ್ತನೇ ಹುಟ್ಟಿದ ‘ನಮೋ ಟಿವಿ’- ಇವೆಲ್ಲವಕ್ಕೂ ಆಯೋಗ ಸ್ಪಷ್ಟೀಕರಣ ಕೇಳುವ ಕೆಲಸ ಮಾಡುತ್ತಿದೆಯಷ್ಟೇ. ಮೋದಿಯ ಜೀವನಾಧಾರಿತ ಚಿತ್ರ ಬಿಡುಗಡೆಗೂ ಆಯೋಗದ ಆಕ್ಷೇಪವಿಲ್ಲ.

ಆದರೆ, ಆಂಧ್ರ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡುರಿಗೆ ಆಪ್ತರೆನ್ನಲಾದ ಅಲ್ಲಿನ ಮುಖ್ಯ ಕಾರ್ಯದರ್ಶಿಯನ್ನು ಹಳೆಯ ಆದೇಶವೊಂದರ ನೆಪದಲ್ಲಿ ಆಯೋಗ ಸಸ್ಪೆಂಡ್ ಮಾಡಿದೆ.

ಬರುವ ದಿನಗಳಲ್ಲಿ ಆಯೋಗವು ಬಿಜೆಪಿಯ ನೀತಿ ಸಂಹಿತೆ ಉಲ್ಲಂಘನೆಗಳ ವಿರುದ್ಧ ಕಠಿಣವಾಗಿ ವರ್ತಿಸಲಾರದು ಎಂಬ ಸಂದೇಶ ಈಗಾಗಲೇ ಬಿಜೆಪಿ ನಾಯಕರಿಗೆ ಮನದಟ್ಟಾಗುತ್ತಿದ್ದು, ಇನ್ನಷ್ಟು ದ್ವೇಷಾಸೂಯೆಯ, ಸೇನೆಯ ಹೆಸರು ದುರ್ಬಳಕೆಯ ಭಾಷಣಗಳು ಕೇಳಿ ಬರಲಿವೆ. ಜನ ಮಾತ್ರ ಇಂಥದಕ್ಕೆಲ್ಲ ಬಲಿಯಾಗಬಾರದು.

ಮೋದಿಯ ಬುಟ್ಟಿಯಲ್ಲಿ ಈಗ ಆಯೋಗವೂ ಸ್ಥಾನ ಪಡೆದುಕೊಂಡಿದೆ!

 

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಭಾರತದಲ್ಲಿ ಬೆಂಕಿ ದುರಂತ ‘ದಿನವೊಂದಕ್ಕೆ ಬಲಿಯಾಗುತ್ತಿವೆ 16 ಜೀವಗಳು’ NCRB ವರದಿ

ಇತ್ತೀಚೆಗೆ ದೆಹಲಿಯ ಮಾಳವೀಯ ನಗರದ ಹೋಟೆಲ್‌ ಒಂದರಲ್ಲಿ ನಡೆದ ಭೀಕರ ಬೆಂಕಿ ದುರಂತ (ಇದರಲ್ಲಿ 22 ಜನರು ಸಜೀವ ದಹನವಾಗಿದ್ದರು) ಇಡೀ ದೇಶವನ್ನೇ ನಡುಗಿಸಿದೆ. ಈ ದುರಂತದ ಬೆನ್ನಲ್ಲೇ ಕರ್ನಾಟಕದಲ್ಲೂ ವಾಣಿಜ್ಯ ಮತ್ತು...

ಈದ್ ಹಬ್ಬದ ವೇಳೆ ಮುಸ್ಲೀಮರನ್ನು ಗುರಿಯಾಗಿಸಿ 46 ದ್ವೇಷ ಅಪರಾಧಗಳು, ಮೂವರ ಹತ್ಯೆ: APCR ಆತಂಕಕಾರಿ ವರದಿ

ಇತ್ತೀಚಿನ ಬಕ್ರೀದ್ (ಈದ್ ಉಲ್-ಅಧಾ) ಹಬ್ಬದ ಆಚರಣೆಯ ಸಂದರ್ಭದಲ್ಲಿ ದೇಶದ ವಿವಿಧೆಡೆ ಅಲ್ಪಸಂಖ್ಯಾತರನ್ನು ಗುರಿಯಾಗಿಸಿಕೊಂಡು ನಡೆದ ಕೋಮು ಕಿರುಕುಳ, ದ್ವೇಷ ಭಾಷಣ ಹಾಗೂ ಹಿಂಸಾಚಾರದ ಘಟನೆಗಳ ಕುರಿತು 'ನಾಗರಿಕ ಹಕ್ಕುಗಳ ರಕ್ಷಣಾ ಸಂಘ'...

ಗ್ರೇಟ್ ನಿಕೋಬಾರ್ : ಕಾರ್ಪೊರೇಟ್ ಹಿತಾಸಕ್ತಿಗೆ ಬಲಿಯಾಗುತ್ತಿರುವ ಪರಿಸರ, ಆದಿವಾಸಿಗಳ ಅಸ್ತಿತ್ವ

ಬಂಗಾಳಕೊಲ್ಲಿಯಲ್ಲಿರುವ ಭಾರತದ ದಕ್ಷಿಣ ತುದಿಯ ದ್ವೀಪದ ಸಮಗ್ರ ಅಭಿವೃದ್ಧಿಯ ಹೆಸರಿನಲ್ಲಿ ಕೇಂದ್ರ ಸರ್ಕಾರ ಬರೋಬ್ಬರಿ 72 ಸಾವಿರದಿಂದ 81 ಸಾವಿರ ಕೋಟಿ ರೂಪಾಯಿ ವೆಚ್ಚದ ’ಗ್ರೇಟ್ ನಿಕೋಬಾರ್ ದ್ವೀಪ ಅಭಿವೃದ್ಧಿ ಯೋಜನೆ’ಯನ್ನು ರೂಪಿಸಿದೆ.ಈ...

ಅಸ್ಸಾಂನ ನಾಲ್ವರು ಮುಸ್ಲಿಂ ಮಹಿಳೆಯರ ಗಡೀಪಾರು ಪ್ರಕ್ರಿಯೆಗೆ ಸುಪ್ರೀಂ ತಡೆ: ಕೇಂದ್ರ, ರಾಜ್ಯ ಸರ್ಕಾರಗಳಿಗೆ ನೋಟಿಸ್‌

ಅಸ್ಸಾಂನಲ್ಲಿ 'ವಿದೇಶಿಯರು' ಎಂದು ಘೋಷಿತರಾಗಿ ಗಡೀಪಾರು ಭೀತಿ ಎದುರಿಸುತ್ತಿದ್ದ ನಾಲ್ವರು ಮುಸ್ಲಿಂ ಮಹಿಳೆಯರ ವಿಚಾರದಲ್ಲಿ ಭಾರತದ ಸುಪ್ರೀಂ ಕೋರ್ಟ್ ಮಹತ್ವದ ಮಧ್ಯಪ್ರವೇಶ ಮಾಡಿದೆ. ಈ ಮಹಿಳೆಯರನ್ನು ದೇಶದಿಂದ ಹೊರಹಾಕುವ (ಗಡೀಪಾರು ಮಾಡುವ) ಪ್ರಕ್ರಿಯೆಗೆ...

ದೆಹಲಿಗೆ ಬಂದಿಳಿದ ಕಾಕ್ರೋಚ್ ಪಾರ್ಟಿ ಸಂಸ್ಥಾಪಕ ಅಭಿಜೀತ್ ದೀಪ್ಕೆ : ಜಂತರ್‌ ಮಂತರ್‌ನಲ್ಲಿ ಪ್ರತಿಭಟಿಸಲು ಪೊಲೀಸರಿಂದ ಅನುಮತಿ

ಶನಿವಾರ (ಜೂ.6) ಬೆಳಿಗ್ಗೆ ದೆಹಲಿಗೆ ಆಗಮಿಸಿದ ಕಾಕ್ರೋಚ್ ಜನತಾ ಪಾರ್ಟಿಯ (ಸಿಜೆಪಿ) ಸಂಸ್ಥಾಪಕ ಅಭಿಜೀತ್ ದೀಪ್ಕೆ, ಪ್ರತಿಭಟನೆಗೆ ದೆಹಲಿ ಪೊಲೀಸರು ಅನುಮತಿ ನೀಡಿದ್ದಾರೆ ಎಂದು ತಿಳಿಸಿದ್ದು, ಯೋಜಿತ ಆಂದೋಲನಕ್ಕಾಗಿ ನೇರವಾಗಿ ಜಂತರ್ ಮಂತರ್‌ನಲ್ಲಿ...

ಜಾಗತಿಕವಾಗಿ ಮೂರು ವರ್ಷಗಳಲ್ಲಿ 600 ಪರಿಸರ ರಕ್ಷಕರ ಹತ್ಯೆ: ವಿಶ್ವಸಂಸ್ಥೆ ತೀವ್ರ ಕಳವಳ: ಜಾಗತಿಕ ತಾಪಮಾನಕ್ಕೆ ಸಾಕ್ಷಿಯಾಗುತ್ತಿರುವ ಭಾರತ

ಜೂನ್ 5 ವಿಶ್ವ ಪರಿಸರ ದಿನ. ಜಗತ್ತಿನಾದ್ಯಂತ ಗಿಡ ನೆಡುವ, ಹಸಿರು ಭಾಷಣ ಬಿಗಿಯುವ ಮತ್ತು ಪರಿಸರ ಕಾಳಜಿಯ ಸಡಗರದ ಆಚರಣೆಗಳು ಎಲ್ಲೆಡೆ ವಿಭಿನ್ನ ರೀತಿಗಳಲ್ಲಿ ವಿಜೃಂಭಿಸುತ್ತಿವೆ. ಆದರೆ, ಇದೇ ಹೊತ್ತಿನಲ್ಲಿ ವಿಶ್ವಸಂಸ್ಥೆಯು...

ಮಣಿಪುರ ಎಸ್‌ಐಆರ್ ವಿರೋಧಿಸಿದ ಕುಕಿ-ಝೋ ಗುಂಪುಗಳು

ಮಣಿಪುರ ರಾಜ್ಯದಲ್ಲಿ ಪ್ರಸ್ತುತ ನಡೆಯುತ್ತಿರುವ ಮತದಾರರ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಪ್ರಕ್ರಿಯೆ ವಿರುದ್ಧ ಪ್ರತಿಭಟನೆ ವ್ಯಕ್ತವಾಗಿದೆ. ಕುಕಿ-ಝೋ ಬುಡಕಟ್ಟು ಜನಾಂಗದ ಸಾಂಪ್ರದಾಯಿಕ ಗುಂಪಾದ ಕುಕಿ ಇನ್ಪಿ ಮಣಿಪುರ (ಕೆಐಎಂ) ಮತದಾರರ ಪಟ್ಟಿ...

ಹೇಗಿತ್ತು ‘ಕಾಕ್ರೋಚ್ ಜನತಾ ಪಕ್ಷ’ದ ಮೊದಲ ಸುದ್ದಿಗೋಷ್ಠಿ…? ಧರ್ಮೇಂದ್ರ ಪ್ರಧಾನ್‌ ರಾಜೀನಾಮೆಗೆ ಕರೆ

ಜೂನ್ 6, 2026 ರಂದು ಜಂತರ್ ಮಂತರ್‌ನಲ್ಲಿ ನಡೆಯಲಿರುವ 'ಶಾಂತಿಯುತ ಪ್ರತಿಭಟನೆ'ಗೆ ಮುನ್ನ ಜಿರಳೆ ಜನತಾ ಪಕ್ಷ (ಸಿಜೆಪಿ) ತನ್ನ ಮೊದಲ ಪತ್ರಿಕಾಗೋಷ್ಠಿಯನ್ನು ನಡೆಸಿದೆ. ಬುಧವಾರ ಸಂಜೆ (ಜೂ.3) ಸಿಜೆಪಿಯ ಮೂವರು ವಕ್ತಾರರು...

‘ಇದು ಆತ್ಮಹತ್ಯೆಯಲ್ಲ, ಮೋದಿ ಸರ್ಕಾರದ ಭ್ರಷ್ಟ ವ್ಯವಸ್ಥೆ ಮಾಡಿದ ಕೊಲೆ’: ನೀಟ್ ಆಕಾಂಕ್ಷಿಯ ಸಾವಿಗೆ ರಾಹುಲ್ ಗಾಂಧಿ ಆಕ್ರೋಶ

ದೇಶದ ವೈದ್ಯಕೀಯ ಪ್ರವೇಶ ಪರೀಕ್ಷೆಯಾದ ‘ನೀಟ್-ಯುಜಿ’ (NEET-UG) ವಿವಾದ ಮತ್ತು ವಿದ್ಯಾರ್ಥಿಗಳ ಸಾವುಗಳು ಭಾರತದ ಒಟ್ಟಾರೆ ಶಿಕ್ಷಣ ವ್ಯವಸ್ಥೆಯ ದಯನೀಯ ಸ್ಥಿತಿಗೆ ಕನ್ನಡಿ ಹಿಡಿದಿವೆ. ಪರೀಕ್ಷಾ ಅಕ್ರಮಗಳು, ಪ್ರಶ್ನೆ ಪತ್ರಿಕೆ ಸೋರಿಕೆ ಮತ್ತು...

ತಕ್ಷಣವೇ ‘SIR ಹೆಲ್ಪ್‌ ಡೆಸ್ಕ್‌’ ಸ್ಥಾಪಿಸುವಂತೆ ಅಧಿಕಾರಿಗಳಿಗೆ ಸಿಎಂ ಸೂಚನೆ

ರಾಜ್ಯದಲ್ಲಿ ಭಾರತೀಯ ಚುನಾವಣಾ ಆಯೋಗದಿಂದ ನಡೆಯುತ್ತಿರುವ ಎಸ್‌ಐಆರ್ (Special Electoral Roll Purification) ಪ್ರಕ್ರಿಯೆ ಸಂದರ್ಭದಲ್ಲಿ ರಾಜ್ಯದ ಯಾವುದೇ ಪ್ರಜೆಯೂ ತನ್ನ ಅತ್ಯಮೂಲ್ಯವಾದ ಮತದಾನದ ಹಕ್ಕನ್ನು ಕಳೆದುಕೊಳ್ಳಬಾರದು ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್...