Homeಕರ್ನಾಟಕನುಡಿನಮನ: ಹೋರಾಟದ ಸಂಗಾತಿ ಪಟ್ಟಾಭಿಯವರ ನೆನಪುಗಳು

ನುಡಿನಮನ: ಹೋರಾಟದ ಸಂಗಾತಿ ಪಟ್ಟಾಭಿಯವರ ನೆನಪುಗಳು

ಪಟ್ಟಾಭಿರಾಮ ಸೋಮಯಾಜಿಯವರು "ನನಗೆ ದೇಶವಾಸಿಗಳ ತೆರಿಗೆಯ ದುಡ್ಡಿನಿಂದ ಸಂಬಳ ಬರುತ್ತಿದೆ. ದೇಶವಾಸಿಗಳಲ್ಲಿ ಒಂದು ವಿಭಾಗಕ್ಕೆ ಅನ್ಯಾಯವಾಗುವಾಗ ಅದನ್ನು ವಿರೋಧಿಸುವುದು ಜವಾಬ್ದಾರಿಯುತ ನಾಗರಿಕನಾಗಿ ನನ್ನ ಕರ್ತವ್ಯ" ಎಂದಿದ್ದರು.

- Advertisement -
- Advertisement -

ಪಟ್ಟಾಭಿ ನಮ್ಮನ್ನಗಲಿ ಅವರ ದೇಹ ಬೂದಿಯಾಗಿಯೂ ಆಯಿತು. ಒಂದು ಕಾಲದಲ್ಲಿ ಚಳವಳಿಗಳಲ್ಲಿ ಒಡನಾಡಿಯಾಗಿದ್ದರೂ ಕಳೆದೆರಡು ವರ್ಷಗಳಿಂದ ಸಂಪರ್ಕವೂ ಇರಲಿಲ್ಲ. ಸಂಪರ್ಕವಿರದ ಕಾಲಕ್ಕಾಗಲೀ, ಅವರು ಅಗಲಿದ ಈ ಹೊತ್ತಿಗಾಗಲೀ ಸಂಪರ್ಕವಿಟ್ಟುಕೊಂಡಿರಲಿಲ್ಲ ಎಂಬ ಖೇದ ನನಗಂತೂ ಇಲ್ಲ. ಅವರು ಯಾರನ್ನೂ ಮನಸ್ಸಿಗೆ ಹಚ್ಚಿಕೊಂಡು ಗೆಳೆತನವಿಟ್ಟುಕೊಂಡವರಲ್ಲ. ಹಾಗಿರುವಾಗ ಆತ್ಮೀಯತೆ ಇಟ್ಟುಕೊಳ್ಳಲು ಸಾಧ್ಯವಾಗಲಿಲ್ಲ ಅಷ್ಟೆ. ಆದರೆ ನಮಗೆ ಒಡನಾಟವಿದ್ದ ಕಾಲದಲ್ಲಿ ಅವರ ಕೋಮುವಾದ ವಿರೋಧೀ ಹೋರಾಟದ ಕಾರಣಕ್ಕಾಗಿ ಅವರ ಉದ್ಯೋಗಕ್ಕೆ ಕುತ್ತು ಬಂದಾಗ ಅವರ ಪರವಾಗಿ ನಾವು ಎರಡೆರಡು ಬಾರಿ ಮಂಗಳೂರು ಯುನಿವರ್ಸಿಟಿಯ ಕುಲಪತಿಗಳ ಜೊತೆ ಮಾತುಕತೆ ನಡೆಸಿದ್ದೇವೆ. ಒಮ್ಮೆಯಂತೂ ಆಗಿನ ಕುಲಪತಿ‌ ಟಿ.ಸಿ.ಶಿವಶಂಕರ ಮೂರ್ತಿಗೆ ನನ್ನ ಕಟುವಾದ ಮಾತಿನಿಂದ ಸಿಟ್ಟು ಬಂದು ನನ್ನ ಮೇಲೆ ರೇಗಿದ್ದರು.

ಎರಡು ವರ್ಷಗಳ ಹಿಂದೊಮ್ಮೆ ಕರೆಮಾಡಿ, ‘ಜಿ.ರಾಜಶೇಖರ್ ಕುರಿತು ಒಂದು ಪುಸ್ತಕ ತರಬೇಕಿದೆ. ನೀವು ಅವರ ಕುರಿತು ಬರೆದ ಲೇಖನ ಓದಿದೆ, ಚೆನ್ನಾಗಿತ್ತು, ಸ್ವಲ್ಪ ವಿಸ್ತರಿಸಿ ಕೊಡಿ’ ಎಂದು ಕೇಳಿದ್ದರು. ನನ್ನದಾದರೋ ಒಮ್ಮೆ ಬರೆದ ಬಳಿಕ ಅದರಿಂದ ಕಳಚಿಬಿಡುವ ಅಭ್ಯಾಸ. ಅದನ್ನು ಪುನಃ ಬರೆದು ಕೊಡಿ ಎಂದು ಯಾರಾದರೂ ಒಮ್ಮೆ ಅಪೇಕ್ಷಿಸಿದರೆ ನಾನು ಈ ವರೆಗೆ ಯಾರಿಗೂ ಯಾವ ಬರಹವನ್ನು ಕೊಟ್ಟದ್ದಿಲ್ಲ. ಮೂರು ಬಾರಿ ಕೇಳಿದರೆ ಅವರ ಸೀರಿಯಸ್ಸಾಗಿಯೇ ಕೇಳುತ್ತಿದ್ದಾರೆ ಎಂದು ಭಾವಿಸುತ್ತೇನೆ. ಆಗ ಅದನ್ನು ಹುಡುಕಿ ಹಿಗ್ಗಿಸಿಯೋ, ಕುಗ್ಗಿಸಿಯೋ ಕೊಡುತ್ತೇನೆ. ಪಟ್ಟಾಭಿಯವರಲ್ಲಿ ಒಬ್ಬನಿಗೆ ಪದೇ ಪದೇ ಕರೆ ಮಾಡಿ ಅಂಗಲಾಚುವ ಸ್ವಭಾವ ಬಿಲ್ಕುಲ್ ಇರಲಿಲ್ಲ. ಅಂತಹ ಸ್ವಭಾವವನ್ನು ಅವರಿಗೆ ಕಲ್ಪಿಸಿಕೊಳ್ಳಲೂ ಸಾಧ್ಯವಾಗದಷ್ಟು ಬಿಗಿ ವ್ಯಕ್ತಿತ್ವ ಅವರದ್ದು.

ಪಟ್ಟಾಭಿ ನನಗಂತಲ್ಲ.. ಅವರ ಹೆಚ್ಚಿನೆಲ್ಲಾ ಒಡನಾಡಿಗಳಿಗೆ ಅರ್ಥವಾಗದ ಒಗಟು. ಒಂಥರಾ ಅಂತರ್ಮುಖಿ. ಎಲ್ಲಿ ಮಾತನಾಡಬೇಕೋ ಅಲ್ಲಿ ಮಾತನಾಡಬೇಕಾದುದನ್ನು ಖಡಾಖಂಡಿತವಾಗಿ ಮಾತನಾಡುತ್ತಿದ್ದರು. ನನಗೆ ತಿಳಿದಂತೆ ಮಂಗಳೂರಿನಲ್ಲಿ ಸಹೋದ್ಯೋಗಿಗಳ ಹೊರತುಪಡಿಸಿ ಅವರ ಹೆಚ್ಚಿನೆಲ್ಲಾ ಸಂಪರ್ಕ ಮುಸ್ಲಿಮರ ಜೊತೆಗೇ ಇದ್ದದ್ದು. ಕೋಮುವಾದದ ಪ್ರಬಲ ಶತ್ರುವಾಗಿದ್ದ ಪಟ್ಟಾಭಿ ಆ ವಿಚಾರದಲ್ಲಿ ನೆಹರೂ ಅವರ ಸೈದ್ಧಾಂತಿಕ ಧಾರೆಯವರು. ಅವರು ಬಹುಸಂಖ್ಯಾತ ಕೋಮುವಾದವನ್ನು ವಿರೋಧಿಸಿದಷ್ಟು ಅಲ್ಪಸಂಖ್ಯಾತ ಕೋಮುವಾದದ ವಿರುದ್ಧ ಮಾತನಾಡಿಲ್ಲ. ನೆಹರೂ ಹೇಳುವ ಪ್ರಕಾರ “ಅಲ್ಪಸಂಖ್ಯಾತ ಕೋಮುವಾದ ಸ್ವತಃ ಆ ಸಮುದಾಯಕ್ಕೆ ಮಾರಕ, ಬಹುಸಂಖ್ಯಾತ ಕೋಮುವಾದ ದೇಶಕ್ಕೆ ಮಾರಕ”. ಆದುದರಿಂದಲೋ ಏನೋ ಪಟ್ಟಾಭಿ ಬಹುಸಂಖ್ಯಾತ ಕೋಮುವಾದದ ವಿರುದ್ಧ ಕಟುವಾಗಿ ಮಾತನಾಡುತ್ತಿದ್ದರು.

ಸರಕಾರಿ ಉದ್ಯೋಗಿಯಾಗಿಯೂ ಸರಕಾರದ ವಿರುದ್ಧ ಮಾತನಾಡುತ್ತಿದ್ದರು ಎಂದು ಎಲ್ಲರೂ ಹೇಳುತ್ತಿದ್ದರು. ಪಟ್ಟಾಭಿಯವರಲ್ಲಿ ಆ ವಿಚಾರಕ್ಕೆ ಸಂಬಂಧಿಸಿದಂತೆ ಸ್ಪಷ್ಟ ನಿಲುವೊಂದಿತ್ತು. “ನಾನು ಮಾತನಾಡುವುದು ಅಧಿಕಾರದಲ್ಲಿ ಕೂತ ವ್ಯಕ್ತಿಯ ಸ್ವಜನ ಪಕ್ಷಪಾತ, ಕೋಮುವಾದ, ಕೆಡುಕು ಇವುಗಳ ವಿರುದ್ಧವೇ ಹೊರತು ಸರಕಾರ ಎಂಬ ಸಂಸ್ಥೆಯ ವಿರುದ್ಧವಲ್ಲ. ನನಗೆ ಅವರ್ಯಾರೂ ತಮ್ಮ ಜೇಬಿನಿಂದ ಸಂಬಳ ಕೊಡುವುದಲ್ಲ. ದೇಶವಾಸಿಗಳ ತೆರಿಗೆಯ ದುಡ್ಡಿನಿಂದ ಸಂಬಳ ಬರುತ್ತಿದೆ. ದೇಶವಾಸಿಗಳಲ್ಲಿ ಒಂದು ವಿಭಾಗಕ್ಕೆ ಅನ್ಯಾಯವಾಗುವಾಗ ಅದನ್ನು ವಿರೋಧಿಸುವುದು ಜವಾಬ್ದಾರಿಯುತ ನಾಗರಿಕನಾಗಿ ನನ್ನ ಕರ್ತವ್ಯ” ಎಂದಿದ್ದರು. ನೋಟೀಸುಗಳ ಮೇಲೆ ನೋಟೀಸು ಹೋದರೂ, ವರ್ಗಾವಣೆಯಾದರೂ, ಅಮಾನತ್ತಾದರೂ ಅವರು ತನ್ನ ವ್ಯವಸ್ಥೆಯ ವಿರೋಧೀ ಮನೋಧರ್ಮವನ್ನು ತ್ಯಜಿಸಲೇ ಇಲ್ಲ.

ಪಟ್ಟಾಭಿ ಅಪ್ಪಟ ಗಾಂಧಿವಾದಿ. ಗಾಂಧಿವಾದವೆಂದರೆ ಗಾಂಧೀಜಿಯ ಉಡುಪಲ್ಲ, ಗಾಂಧೀಜಿಯ ಧಾರ್ಮಿಕ ವಿಶ್ವಾಸವೂ ಅಲ್ಲ, ಗಾಂಧೀಜಿಯ ಆಹಾರ ಶೈಲಿಯೂ ಅಲ್ಲ. ಗಾಂಧೀಜಿ ದೇಶದ ಹಿತಕ್ಕಾಗಿ ಆಯ್ದುಕೊಂಡ ಹೋರಾಟದ ದಾರಿ. ಪಟ್ಟಾಭಿ ಶಾಸ್ತ್ರೋಕ್ತವಾಗಿ ಮಂಗಳೂರಿನ ಶರವು ಮಹಾಗಣಪತಿ ದೇವಸ್ಥಾನದಲ್ಲಿ ಮದುವೆಯಾದಾಗ ಅವರ ಹಲವು ಒಡನಾಡಿಗಳೇ ಅವರನ್ನು ವಿಮರ್ಶಿಸಿದರು. ಅದನ್ನು ಕೆಲವು ಎಡಬಿಡಂಗಿತನವೆಂದರು. ಪಟ್ಟಾಭಿ ಯಾರಿಗೂ ಉತ್ತರಿಸುವ ಗೋಜಿಗೆ ಹೋಗಲಿಲ್ಲ. ಆಗ ನಾನು ಪಟ್ಟಾಭಿಯನ್ನು ಹೀಗೆ ಅರ್ಥೈಸಿದ್ದೆ. “ಪಟ್ಟಾಭಿ ಧಾರ್ಮಿಕ ವಿಧಿ ವಿಧಾನಗಳನುಸಾರ ಮದುವೆಯಾದರೆ ತಪ್ಪೇನು? ಅವರೆಲ್ಲಾದರೂ ಹಿಂದೂ ಧಾರ್ಮಿಕ ವಿಧಿ ವಿಧಾನಗಳನ್ನು ಟೀಕಿಸಿದ್ದಾರಾ..? ಖಂಡಿತಾ ಇಲ್ಲವಲ್ಲಾ. ಅವರು ವಿರೋಧಿಸಿದ್ದು ಹಿಂದೂಯಿಸಂನ ಹೆಸರಲ್ಲಿ ನಡೆಯುತ್ತಿದ್ದ ಬರ್ಬರತೆಯನ್ನು ಮಾತ್ರವಲ್ಲವೇ..?”
ಅವರು ಮದುವೆಯ ಹೊರತಾಗಿ ವೈಯಕ್ತಿಕವಾಗಿಯೂ ಧಾರ್ಮಿಕ ಆಚರಣೆಗಳನ್ನು ಆಚರಿಸಿದ್ದನ್ನು ಹತ್ತು ವರ್ಷಗಳ ಕಾಲದ ಅವರ ಜೊತೆಗಿನ ಒಡನಾಟದಲ್ಲಿ ಕಂಡಿಲ್ಲ. ಅವರಿಗೆ ಗಾಂಧಿಯ ಬಗ್ಗೆ ಇದ್ದ ಒಲವು ಅಪಾರವಾದುದು. ಭಾರತದ ಸಂಕಟಗಳಿಗೆ ಗಾಂಧಿ ಮಾರ್ಗದಲ್ಲಿ ಪರಿಹಾರ ಕಾಣಬಹುದೆಂದು ಅವರು ನಂಬಿದ್ದರು. ಅವರು ಗಾಂಧಿ ಕುರಿತು ತನ್ನ ಕಾಲೇಜಿನಲ್ಲಿ ಪ್ರತೀ ವರ್ಷ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದ್ದರು ಕೂಡಾ.

ಓರ್ವ ವ್ಯಕ್ತಿಯ ವ್ಯಕ್ತಿತ್ವದ ದೋಷಗಳನ್ನು ಇಟ್ಟುಕೊಂಡು ಆತ ಸರಿಯಿಲ್ಲ ಎನ್ನುವುದನ್ನು ನಾನಂತೂ ಒಪ್ಪಲಾರೆ. ಆತನಿಂದ ಸಮಾಜಕ್ಕೆ ಹಾನಿಯಾಗದಿದ್ದರಾಯಿತು ಅಷ್ಟೇ. ಹಾಗೆ ಯಾರ ವ್ಯಕ್ತಿತ್ವದಲ್ಲಿ ದೋಷವಿಲ್ಲ ಹೇಳಿ..? ದಿ‌ ಪರ್ಫೆಕ್ಟ್ ಮ್ಯಾನ್ ಎಂದು ಯಾರಿದ್ದಾರೆ..? ಪಟ್ಟಾಭಿ ಕೋಮುವಾದದ ವಿರುದ್ಧ ಯಾವ ನಿಲುವುಗಳನ್ನು ತಾಳಬೇಕಿತ್ತೋ ಆ ನಿಲುವುಗಳನ್ನು ಸದಾ ತಾಳಿದ್ದಾರೆ. ಅವರು ಅಂತಹ ಸಂದರ್ಭಗಳಲ್ಲಿ ಯಾವತ್ತೂ ತನ್ನ ಉದ್ಯೋಗ ಭದ್ರತೆಯ ಕುರಿತು ಯೋಚಿಸಿಲ್ಲ.

ನನ್ನ ತಂಗಿ ಪಟ್ಟಾಭಿಯವರ ವಿದ್ಯಾರ್ಥಿನಿಯಾಗಿದ್ದಳು. ಅವಳು ಹೇಳುವ ಪ್ರಕಾರ ಮತ್ತು ಅವರ ಇತರ ವಿದ್ಯಾರ್ಥಿಗಳು ಹೇಳುವ ಪ್ರಕಾರ ಪಟ್ಟಾಭಿ ಓರ್ವ ಅದ್ಭುತ ಅಧ್ಯಾಪಕ. ಅಕಾಡೆಮಿಕ್ ಆಗಿ ಅವರ ಮೇಲೆ ಬೆರಳು ತೋರಿಸುವ ಅರ್ಹತೆ ಇದ್ದ ಇನ್ನೊಬ್ಬ ಅಧ್ಯಾಪಕ ಇಡೀ ಮಂಗಳೂರು ಯುನಿವರ್ಸಿಟಿಯಲ್ಲಿರಲಿಲ್ಲ. ಹಾಗೆ ಯಾರೂ ಅವರ ವಿರುದ್ಧ ದೂರಿದ್ದು ನನಗಂತೂ ಗೊತ್ತಿಲ್ಲ. ಅವರು ತನ್ನ ಸೈದ್ಧಾಂತಿಕ ಒಲವು ನಿಲುವುಗಳನ್ನು ಕ್ಯಾಂಪಸ್ ಒಳಗೆ ತೋರಿಸಿದ್ದೇ ಇಲ್ಲ. ತರಗತಿಯಲ್ಲಿ ಏನು ಪಾಠ ಮಾಡಬೇಕೋ ಅದನ್ನು ಮಾತ್ರ ಪಾಠ ಮಾಡುತ್ತಿದ್ದರು. ಇಂಗ್ಲಿಷ್ ಅಧ್ಯಾಪಕರಾದುದರಿಂದ ಶೇಕ್ಸ್ ಪಿಯರ್, ಬ್ರೆಕ್ಟ್ ಮುಂತಾದ ಪಾಶ್ಚಾತ್ಯ ಸಾಹಿತಿ, ನಾಟಕಕಾರರುಗಳ ಸಾಹಿತ್ಯವನ್ನು ಮುಂದಿರಿಸಿಕೊಂಡು ಪ್ರಗತಿಪರ ವಿಚಾರಗಳ ಬಗ್ಗೆ ಮಾತನಾಡುತ್ತಿದ್ದರಷ್ಟೆ.
ಅವರಿಗೆ ತನ್ನ ಸಹೋದ್ಯೋಗಿಗಳ ಜೊತೆಗೆ ಜಗಳವೂ ಇರಲಿಲ್ಲ. ಯಾಕೆಂದರೆ ಅವರು ಕ್ಯಾಂಪಸ್ ಒಳಗೆ ತನ್ನ ಸಬ್ಜೆಕ್ಟ್ ಹೊರತಾಗಿ ಬೇರೇನನ್ನೂ ಮಾತಾಡುತ್ತಿರಲಿಲ್ಲ. ಅವರು ಕ್ಯಾಂಪಸ್ ಒಳಗೆ ಏನೇ ಮಾತನಾಡುವುದಾದರೂ ಅಳೆದು ತೂಗಿ ಮಾತನಾಡುತ್ತಿದ್ದರು.

ಬಿಜೆಪಿ ಸಂಘಪರಿವಾರವನ್ನು ಶತ್ರುವೆಂದು ಪರಿಗಣಿಸಿದರೂ ಸೈದ್ಧಾಂತಿಕವಾಗಿ ವಿರುದ್ಧ ಧ್ರುವಗಳಂತಿದ್ದ ಕಮ್ಯೂನಿಸ್ಟರು, ಜಮಾ‌ಅತೇ ಇಸ್ಲಾಮಿಯವರು, ಪಾಪ್ಯುಲರ್ ಫ್ರಂಟ್‌ನವರು ಹೀಗೆ ಎಲ್ಲರೂ ತಂತಮ್ಮ ಕಾರ್ಯಕ್ರಮಗಳಿಗೆ ಪಟ್ಟಾಭಿಯವರನ್ನು ಆಹ್ವಾನಿಸುತ್ತಿದ್ದರು ಎನ್ನುವುದೇ ಅವರ ವ್ಯಕ್ತಿತ್ವದ ವಿಶೇಷ. ಪಟ್ಟಾಭಿ ಸಂಘಪರಿವಾರದ ತಪ್ಪುಗಳನ್ನು ಖಂಡಿಸುವ, ವಿರೋಧಿಸುವ ಒಂದೇ ಒಂದು ಅವಕಾಶಗಳನ್ನು ಮಿಸ್ ಮಾಡುತ್ತಿರಲಿಲ್ಲ.

ಅವರ ಇಂಗ್ಲಿಷ್ ಜ್ಞಾನ ಅದ್ಭುತವಾಗಿತ್ತು. ಅವರು ಇಂಗ್ಲಿಷ್‌ನಲ್ಲಿ ಬರೆಯುತ್ತಿದ್ದರೆ ಶಶಿ ತರೂರ್‌ರನ್ನೂ ಮೀರಿಸುತ್ತಿದ್ದರೇನೋ.. ಅಪಾರವಾದ ವಿದ್ವತ್ತು ಮತ್ತು ಆಳವಾದ ಓದು ಇದ್ದರೂ ಅವರು ಬರೆದದ್ದು ಕಡಿಮೆ. ಬರೆಯುತ್ತಿದ್ದರೆ ಓರ್ವ ಶ್ರೇಷ್ಠ ಗುಣಮಟ್ಟದ ವಿಮರ್ಶಕಗಾಗುತ್ತಿದ್ದರು. ಅವರದ್ದು ಮೌಖಿಕ ಪರಂಪರೆಯಾಗಿತ್ತು. ಬರೆಯಬೇಕಾದುದನ್ನು ಮಾತನಾಡಿಯೇ ಮುಗಿಸುತ್ತಿದ್ದರು.

ಪಟ್ಟಾಭಿಯ ಸಾವಿನಿಂದ ನಾಡು ಒಂದು ಪ್ರಬಲ ಜನಪರವಾದ ಧ್ವನಿಯನ್ನು ಕಳಕೊಂಡಿದೆ. ನಾಡು ಅವರು ಮಾಡಿದ ಕೆಲಸಗಳಿಗಾಗಿ ಅವರನ್ನು ಬಹುಕಾಲ ನೆನಪಿಡುತ್ತೆ. ಸಂತಾಪಗಳು ಪಟ್ಟಾಭಿ ಸರ್…

ಇಸ್ಮತ್ ಪಜೀರ್

(ಕರ್ನಾಟಕ ಕೋಮು ಸೌರ್ಹಾದ ವೇದಿಕೆಯ ಒಡನಾಡಿ)

ಇದನ್ನೂ ಓದಿ: ಹಾಸನ: ಶಾಲೆಯಲ್ಲಿ ಬಕ್ರಿದ್ ಆಚರಣೆ ವಿರುದ್ದ ಹಿಂದುತ್ವ ಸಂಘಟನೆಗಳ ಆಕ್ರೋಶ; ಆಡಳಿತ ಮಂಡಳಿ ಸ್ಪಷ್ಟನೆ…

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಗುಜರಾತ್: ‘ಲವ್ ಜಿಹಾದ್’ ತಡೆಗೆ ವಿವಾಹ ನೋಂದಣಿ ಪ್ರಕ್ರಿಯೆಯಲ್ಲಿ ಗಮನಾರ್ಹ ಬದಲಾವಣೆಗಳನ್ನು ಮಾಡುತ್ತೇವೆ; ಡಿಸಿಎಂ ಹರ್ಷ ಸಾಂಘವಿ ಘೋಷಣೆ

ಅಹಮದಾಬಾದ್: ಗುಜರಾತ್‌ನ ಉಪಮುಖ್ಯಮಂತ್ರಿ ಹರ್ಷ ಸಾಂಘವಿ ಶುಕ್ರವಾರ, ರಾಜ್ಯ ಸರ್ಕಾರವು ವಿವಾಹ ನೋಂದಣಿ ಕಾರ್ಯವಿಧಾನದಲ್ಲಿ ಬದಲಾವಣೆಗಳನ್ನು ತರಲಿದೆ ಎಂದು ಘೋಷಿಸಿದ್ದು, "ಸಮಾಜ ವಿರೋಧಿ ಶಕ್ತಿಗಳು", ವಿಶೇಷವಾಗಿ ಗುಜರಾತ್‌ನ ಹೆಣ್ಣುಮಕ್ಕಳನ್ನು "ಲವ್ ಜಿಹಾದ್" ಗಾಗಿ...

ಬಂಗಾಳ ಎಸ್ಐಆರ್ ಪ್ರಕ್ರಿಯೆ: ಚುನಾವಣಾ ಆಯೋಗದ ಸಹಾಯಕ್ಕೆ ನ್ಯಾಯಾಂಗ ಅಧಿಕಾರಿಗಳನ್ನು ನೇಮಿಸಲು ಕಲ್ಕತ್ತಾ ಹೈಕೋರ್ಟ್‌ಗೆ ಸುಪ್ರೀಂ ಸೂಚನೆ

ನವದೆಹಲಿ: ಪಶ್ಚಿಮ ಬಂಗಾಳ ಸರ್ಕಾರ ಮತ್ತು ಚುನಾವಣಾ ಆಯೋಗದ ನಡುವೆ ಮತದಾರರ ಪಟ್ಟಿ ಶುದ್ಧೀಕರಣ ಅಭಿಯಾನಕ್ಕೆ ಸಂಬಂಧಿಸಿದಂತೆ ದುರದೃಷ್ಟಕರ ಆರೋಪದ ಆಟ ನಡೆಯುತ್ತಿದೆ ಎಂದು ಪ್ರತಿಕ್ರಿಯಿಸಿರುವ ಸುಪ್ರೀಂ ಕೋರ್ಟ್, ವಿಶೇಷ ತೀವ್ರ ಪರಿಷ್ಕರಣೆ...

ಬಾಲಿವುಡ್ ನಟ ರಣವೀರ್ ಸಿಂಗ್ ಗೆ ಬಿಷ್ಣೋಯಿ ಗ್ಯಾಂಗ್ ನಿಂದ ಜೀವಬೆದರಿಕೆ: ಅಮೆರಿಕಾ ನಂಬರ್ ನಿಂದ 10ಕೋಟಿ ರೂ. ಬೇಡಿಕೆ 

ಬಿಷ್ಣೋಯ್ ಗ್ಯಾಂಗ್ ಬಾಲಿವುಡ್ ನಟ ರಣವೀರ್ ಸಿಂಗ್ ಅವರಿಂದ 10 ಕೋಟಿ ರೂ.ಗೆ ಬೇಡಿಕೆ ಇಟ್ಟಿದೆ ಎನ್ನಲಾಗಿದೆ. ಅಮೆರಿಕದ ಸಂಖ್ಯೆಯಿಂದ ಬಂದ ವಾಯ್ಸ್ ನೋಟ್ ಮೂಲಕ ಬೆದರಿಕೆ ಹಾಕಲಾಗಿದೆ ಎಂದು ವರದಿಯಾಗಿದೆ. ಮುಂಬೈ ಪೊಲೀಸ್...

‘ರಾಜಿ ಮಾಡಿಕೊಂಡ ಪ್ರಧಾನಿ’: ಎಐ ಇಂಪ್ಯಾಕ್ಟ್ ಶೃಂಗಸಭೆಯಲ್ಲಿ ಯುವ ಕಾಂಗ್ರೆಸ್‌ ಕಾರ್ಯಕರ್ತರಿಂದ ಶರ್ಟ್‌ ಬಿಚ್ಚಿ ಪ್ರತಿಭಟನೆ

ಎಐ ಇಂಪ್ಯಾಕ್ಟ್ ಶೃಂಗಸಭೆಗೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿಯವರನ್ನು ಗುರಿಯಾಗಿಸಿಕೊಂಡು ಮತ್ತು ಪ್ರಧಾನಿ "ರಾಜಿ ಮಾಡಿಕೊಂಡಿದ್ದಾರೆ" ಎಂದು ಆರೋಪಿಸಿ ಭಾರತೀಯ ಯುವ ಕಾಂಗ್ರೆಸ್ ಕಾರ್ಯಕರ್ತರು ಶುಕ್ರವಾರ ಭಾರತ್ ಮಂಟಪದಲ್ಲಿ ಶರ್ಟ್ ಧರಿಸದೆ ಪ್ರತಿಭಟನೆ...

ಬಾಗಲಕೋಟೆ: ಶಿವಾಜಿ ಜಯಂತಿ ಮೆರವಣಿಗೆ ವೇಳೆ ಕಲ್ಲು ತೂರಾಟ, ಉದ್ವಿಗ್ನ ಪರಿಸ್ಥಿತಿ: ಫೆ.24ರವರೆಗೆ ನಿಷೇಧಾಜ್ಞೆ ಜಾರಿ

ಬಾಗಲಕೋಟೆಯಲ್ಲಿ ಗುರುವಾರ ಛತ್ರಪತಿ ಶಿವಾಜಿ ಮಹಾರಾಜರ ಜಯಂತಿಯಂದು ನಡೆದ ಪ್ರತಿಮೆ ಮೆರವಣಿಗೆಯ ಸಂದರ್ಭದಲ್ಲಿ ಕಲ್ಲು ತೂರಾಟ ನಡೆದ ಘಟನೆ ವರದಿಯಾಗಿದೆ. ಹಳೆಯ ನಗರ ಪ್ರದೇಶದ ಪಂಕ ಮಸೀದಿ ಬಳಿ ಮೆರವಣಿಗೆ ಸಾಗುತ್ತಿದ್ದಾಗ ಈ...

ನಿಯಮಿತವಾಗಿ ಎಸ್‌ಸಿ/ಎಸ್‌ಟಿ ಕಾಯ್ದೆ ಕೋಶದ ಸಭೆ ನಡೆಸುತ್ತಿಲ್ಲ ಎಂದು ಆರೋಪಿಸಿದ ಮೇವಾನಿ; ಗುಜರಾತ್ ವಿಧಾನಸಭೆಯಲ್ಲಿ ಕಾಂಗ್ರೆಸ್- ಬಿಜೆಪಿ ನಡುವೆ ವಾಗ್ವಾದ

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ (ದೌರ್ಜನ್ಯ ತಡೆ) ಕಾಯ್ದೆಯಡಿಯಲ್ಲಿ ರಚಿಸಲಾದ ರಾಜ್ಯ ಮೇಲ್ವಿಚಾರಣಾ ಕೋಶದ (ಎಸ್‌ಎಂಸಿ) ನಿಯಮಿತ ಸಭೆಗಳನ್ನು ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಕರೆಯುತ್ತಿಲ್ಲ ಎಂದು ವಡ್ಗಾಮ್‌ನ ಕಾಂಗ್ರೆಸ್ ಶಾಸಕ ಜಿಗ್ನೇಶ್...

ನೆಲಮಂಗಲದಲ್ಲಿ ಹಾಸಿಗೆ ಹಿಡಿದ ಪತಿಯ ಎದುರೇ 60ವರ್ಷದ ಮಹಿಳೆಯ ಕೊಲೆ; ಐದು ಗಂಟೆಗಳಲ್ಲಿ ಆರೋಪಿ ಬಂಧನ

ಬೆಂಗಳೂರು: ಬೆಂಗಳೂರು ಹೊರವಲಯ ನೆಲಮಂಗಲದ ಪೇಟೆ ಬೀದಿಯಲ್ಲಿ ವೀಲ್‌ಚೇರ್‌ನಲ್ಲಿ ಕುಳಿತಿದ್ದ ಗಂಡನ ಮುಂದೆಯೇ ಮಹಿಳೆಯೊಬ್ಬಳ ಕೊಲೆಯಾದ ಐದು ಗಂಟೆಗಳಲ್ಲಿ ನೆಲಮಂಗಲ ಪಟ್ಟಣ ಪೊಲೀಸರು 45 ವರ್ಷದ ದಿನಸಿ ಅಂಗಡಿ ಮಾಲೀಕನನ್ನು ಬಂಧಿಸಿದ್ದಾರೆ. ಫೆಬ್ರವರಿ...

‘ದಿ ಕೇರಳ ಸ್ಟೋರಿ 2’ ಚಿತ್ರ ನಿರ್ಮಾಪಕರು, ಸಿಬಿಎಫ್‌ಸಿ ಮಂಡಳಿಗೆ ನೋಟಿಸ್ ಜಾರಿ ಮಾಡಿದ ಕೇರಳ ಹೈಕೋರ್ಟ್

ಕೊಚ್ಚಿ: 'ದಿ ಕೇರಳ ಸ್ಟೋರಿ 2 - ಗೋಸ್ ಬಿಯಾಂಡ್' ಚಿತ್ರದ ಪ್ರಮಾಣೀಕರಣವನ್ನು ರದ್ದುಗೊಳಿಸುವಂತೆ ಮತ್ತು ಅದರ ಶೀರ್ಷಿಕೆಯ ಮರುಪರಿಶೀಲನೆ ಸೇರಿದಂತೆ ಮಾರ್ಪಾಡುಗಳಿಗೆ ನಿರ್ದೇಶನ ನೀಡಬೇಕೆಂದು ಕೋರಿ ಕಣ್ಣೂರು ಮೂಲದವರು ಸಲ್ಲಿಸಿದ ಅರ್ಜಿಯ...

ಚುನಾವಣಾ ಸಮಯದಲ್ಲಿ ಉಚಿತ ಕೊಡುಗೆಗಳ ಪ್ರವೃತ್ತಿ ಪ್ರಶ್ನಿಸಿದ ಸುಪ್ರೀಂ ಕೋರ್ಟ್

ರಾಜಕೀಯ ಪಕ್ಷಗಳು ಮತ್ತು ರಾಜ್ಯ ಸರ್ಕಾರಗಳು ಚುನಾವಣೆಗೆ ಮುನ್ನ "ಉಚಿತ ಕೊಡುಗೆಗಳ" ಜಾಹೀರಾತು ನೀಡುವ ಅಭ್ಯಾಸ ಹೆಚ್ಚುತ್ತಿರುವ ಬಗ್ಗೆ ಸುಪ್ರೀಂ ಕೋರ್ಟ್ ಗುರುವಾರ ಬಲವಾದ ಮೌಖಿಕ ಅವಲೋಕನಗಳನ್ನು ನೀಡಿದೆ. ವಿದ್ಯುತ್ (ತಿದ್ದುಪಡಿ) ನಿಯಮಗಳು, 2024...

ರಾಹುಲ್ ಗಾಂಧಿಗೆ ಕರ್ಣಿ ಸೇನೆಯಿಂದ ಜೀವ ಬೆದರಿಕೆ: ಬಿಜೆಪಿ-ಆರ್‌ಎಸ್‌ಎಸ್ ಜಾಲವೇ ‘ಗೋಡ್ಸೆ ಕಾರ್ಖಾನೆ’ ಎಂದ ಕಾಂಗ್ರೆಸ್

ನವದೆಹಲಿ: ಲೋಕಸಭಾ ಸ್ಪೀಕರ್ ಓಂ ಬಿರ್ಲಾ ವಿರುದ್ಧ ನಡೆದ ಪ್ರತಿಭಟನೆಗೆ ಸಂಬಂಧಿಸಿದಂತೆ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರಿಗೆ ಕರ್ಣಿ ಸೇನೆ ಜೀವ ಬೆದರಿಕೆ ಹಾಕಿದ್ದು, ಇದು "ಏಕಾಂಗಿ ಸ್ಫೋಟವಲ್ಲ"...