Homeಕರ್ನಾಟಕಸರಳತೆ ನೇರಗುಣ ದಿಟ್ಟತನಗಳನ್ನು ಬದುಕಿದ ಲೇಖಕಿ

ಸರಳತೆ ನೇರಗುಣ ದಿಟ್ಟತನಗಳನ್ನು ಬದುಕಿದ ಲೇಖಕಿ

- Advertisement -
- Advertisement -

ಕರಾವಳಿಯಿಂದಲೇ ‘ಇಂದಿರಾಬಾಯಿ’, ‘ಚೋಮನದುಡಿ’, ‘ಚಂದ್ರಗಿರಿಯ ತೀರದಲ್ಲಿ’ ಕಾದಂಬರಿಗಳು ಬಂದಿದ್ದು ಕುತೂಹಲಕರ. ಇವು ನಮ್ಮ ಸಮಾಜದ ವಿಧವಾಪದ್ಧತಿ, ಅಸ್ಪೃಶ್ಯತೆ, ಭೂಮಿಪ್ರಶ್ನೆ, ಸ್ತ್ರೀಶೋಷಣೆಯಂತಹ ಪ್ರಧಾನವಾದ ಸಮಸ್ಯೆಗಳನ್ನು ಕುರಿತವಾಗಿವೆ. ಒಂದರ್ಥದಲ್ಲಿ ಸಾರಾ, ಎಂಟು ದಶಕಗಳ ತರುವಾಯ ‘ಇಂದಿರಾಬಾಯಿ’ಯ ಉತ್ತರಾಧಿಕಾರಿಗಳಂತಿರುವ ಕತೆ ಕಾದಂಬರಿಗಳನ್ನು ರಚಿಸಿದರು. ವಿಧವೆಯಾಗಿ ಸಾರ್ವಜನಿಕ ಬದುಕನ್ನು ಕಳೆದುಕೊಳ್ಳುವ, ಜೀವನ ಅನುಭವಿಸಬೇಕಾದ ಸ್ವಾತಂತ್ರ್ಯ ಕಳೆದುಕೊಳ್ಳುವ ಸಮಸ್ಯೆಯನ್ನು ಗುಲ್ವಾಡಿಯವರಂತೆ ಅವರ ಬರೆಹವೂ ಜೀವನ್ಮರಣದ ತುರ್ತಿನಲ್ಲಿ ಶೋಧಿಸಿತು.

ಮಹಿಳೆಯರಿಗೆ ಬಿಡುಗಡೆ ಮಾಡುವುದು ಆಧುನಿಕ ಶಿಕ್ಷಣವೆಂದು ನಂಬಿದ್ದ ಭಾರತದ ಪ್ರಥಮ ಶಿಕ್ಷಕಿ ಫಾತಿಮಾ ಶೇಖ್ ಅವರ ಜನ್ಮದಿನದ ಮಾರನೇದಿನವೇ ಸಾರಾ ಅವರು ತೀರಿಕೊಂಡಿದ್ದು ಮಾರ್ಮಿಕ. ಫಾತಿಮಾ ಒಬ್ಬ ಶಿಕ್ಷಕಿಯಾಗಿ ಕೊಟ್ಟ ಸೂಚನೆಯನ್ನು, ‘ಮುಸ್ಲಿಂ ಹುಡುಗಿ ಶಾಲೆ ಕಲಿತಿದ್ದು’ ಎಂಬ ಲೇಖನದ ಮೂಲಕ ಬರವಣಿಗೆ ಆರಂಭಿಸಿದ ಸಾರಾ, ಒಬ್ಬ ವಿದ್ಯಾರ್ಥಿಯಾಗಿ ಬದುಕಿ ಸಾಧಿಸಿದವರು. ವಸಾಹತುಶಾಹಿ ಶಾಲೆಗಳಲ್ಲಿ ಕಲಿತ ನಾವು ನಮ್ಮ ಪರಂಪರೆಯ ಮೂಲಬೇರುಗಳನ್ನು ಕಳೆದುಕೊಂಡೆವು ಎಂದು ಅಳಲುವವರು ಇದ್ದಾರೆ. ಅವರ ಮಾತಲ್ಲಿ ಕೆಲವು ನಿಜಗಳಿವೆ. ಆದರೆ ಬ್ರಿಟಿಷರು ಬಾರದೆ ಹೋಗಿದ್ದರೆ, ಸ್ಕೂಲು ಕಾಲೇಜುಗಳನ್ನು ಮುಕ್ತವಾಗಿ ತೆರೆಯದೆ ಹೋಗಿದ್ದರೆ, ನಾವು ನಾವಾಗಿರುತ್ತಿರಲಿಲ್ಲ ಎಂದು ಈ ದೇಶದ ದಲಿತರು ಮತ್ತು ಮಹಿಳೆಯರು ಮತ್ತೆಮತ್ತೆ ಯಾಕೆ ಹೇಳುತ್ತಾರೆ ಎಂಬ ಪ್ರಶ್ನೆಯನ್ನು ಅವರು ಸೂಕ್ಷ್ಮವಾಗಿ ಪರಿಶೀಲಿಸುವುದಿಲ್ಲ. ಸಾರಾ ಓದಿದ್ದು ಹತ್ತನೇ ತರಗತಿ ಮಾತ್ರ. ಬರೆಯಲು ಆರಂಭಿಸಿದ್ದು ತಮ್ಮ 50ರ ಪ್ರಾಯದಲ್ಲಿ. ಈ ಸೀಮಿತ ಶಿಕ್ಷಣ, ವಯಸ್ಸುಗಳ ಮಿತಿ, ಅವರ ಬರೆಹಕ್ಕೆ ದೊಡ್ಡ ತೊಡಕುಗಳಾಗಲಿಲ್ಲ. ಅವರು ಆಧುನಿಕ ಶಿಕ್ಷಣದಂತೆ ಸಾಹಿತ್ಯ ಕೂಡ ಬದುಕನ್ನು ಬದಲಿಸಬಹುದು ಎಂದು ನಂಬಿದ್ದವರು. ತಮ್ಮ ಕತೆ ಕಾದಂಬರಿ ಓದಿ, ತಮ್ಮ ಆಲೋಚನೆ ಬದಲಿಸಿಕೊಂಡ ಮಹಿಳೆಯರ ನಿದರ್ಶನಗಳನ್ನು ಅವರು ಸದಾ ಉಲ್ಲೇಖಿಸುತ್ತಿದ್ದರು. ಆಕ್ಟಿವಿಸ್ಟ್ ಬರೆಹಗಾರರನ್ನು ಸಿದ್ಧ ಕಲಾ ಮಾನದಂಡಗಳಿಂದ ಅಳೆಯುವುದು ಸುಲಭವಲ್ಲ.

ಸಾರಾ ಅವರ ಬದುಕು, ಆಲೋಚನೆ, ಕ್ರಿಯೆಗಳನ್ನು ರೂಪಿಸಿದ ಅಕ್ಷರ ಮತ್ತು ಬರೆಹಗಳ ಹಿಂದಿನ ವೈಚಾರಿಕತೆಯು, ಅವರು ಜೀವಂತವಾಗಿ ಅನುಭವಿಸಿದ ಬದುಕಿನ ಅನುಭವಗಳಿಂದ ಬಂದಿದ್ದು. ಅವರೊಬ್ಬ ರ್‍ಯಾಶನಲಿಸ್ಟ್ ಆಗಿ ಭಾರತದ ಆಧುನಿಕ ಚಿಂತಕರಿಂದ ಪ್ರೇರಣೆ ಪಡೆದಿದ್ದರು. ಅವರ ಬರೆಹದ ಹಿಂದೆ 70-80ರ ದಶಕಗಳು ಬಿಡುಗಡೆ ಮಾಡಿದ ಚಾರಿತ್ರಿಕ ಶಕ್ತಿಗಳೂ ಇದ್ದವು. ಅವರು ಸಮಾಜವನ್ನು ಅರಿಯಲು, ಎದುರಿಸಲು ಮತ್ತು ಬದಲಿಸಲು ಬೇಕಾದ ಚಿಂತನೆಯನ್ನು ಧಾರ್ಮಿಕ ನೆಲೆಯಿಂದಲೂ ಪಡೆಯುತ್ತಿದ್ದರು. ಅವರು ಕುರಾನಿನಲ್ಲಿ ಗಂಡುಹೆಣ್ಣು ಬೇಧವಿಲ್ಲವೆಂದೂ, ವಿದ್ಯೆ ಕಲಿಯಲು ಚೀನಾದವರೆಗೂ ಹೋಗಬೇಕಾದರೆ ಹೋಗೆಂದು ಪೈಗಂಬರರು ಹೇಳುತ್ತಿದ್ದರೆಂದೂ ಸದಾ ಉಲ್ಲೇಖಿಸುತ್ತಿದ್ದರು. ಧಾರ್ಮಿಕ ಭಾವುಕತೆಯು ಆಳವಾಗಿರುವ ಸಮಾಜದಲ್ಲಿ ಹೀಗೆ ಧಾರ್ಮಿಕ ನೆಲೆಯ ತಿಳಿವನ್ನು ಉಪಯೋಗಿಸುವುದು ಅಗತ್ಯವೂ ಆಗಿತ್ತು. ಯುದ್ಧತಂತ್ರವೋ ಶ್ರದ್ಧೆಯೋ ಹೇಳಲಾಗದ ಈ ವಿಧಾನವು ಅವರ ಸಮಕಾಲೀನ ಬರೆಹಗಾರರಾದ ಫಕೀರ್ ಕಟ್ಪಾಡಿಯವರಲ್ಲೂ, ಚಿಂತಕ ಅಸ್ಘರ್ ಅಲಿ ಇಂಜಿನಿಯರ್ ಅವರಲ್ಲೂ ಇತ್ತು.

ಸಾರಾ ಅವರು ತಮ್ಮ ಬರೆಹಗಳಲ್ಲಿ ಕಾಣಿಸುವ ಮುಸ್ಲಿಂ ಸಮಾಜವು ಮುಖ್ಯವಾಗಿ ಕರಾವಳಿಯದು ಅಥವಾ ಕೇರಳದ್ದಾಗಿದ್ದರೂ, ಅದು ವಿಶಾಲ ಅರ್ಥದಲ್ಲಿ ಭಾರತದ ಮಹಿಳೆಯರದೂ ಆಗಿತ್ತು. ಮುಸ್ಲಿಂ ಸಮುದಾಯವು ಒಳಗಿನ ಮೂಲಭೂತವಾದ ಮತ್ತು ಹೊರಗಿನ ಮತೀಯವಾದಗಳ ನಡುವೆ ಚಾರಿತ್ರಿಕವಾದ ಇಕ್ಕಟ್ಟಿಗೆ ಸಿಕ್ಕಿಕೊಂಡಿರುವ ಕಾಲದಲ್ಲಿ, ದರ್ಗಾ, ಸಾರಾ, ಕಟ್ಪಾಡಿ, ಬೊಳುವಾರು, ಬಾನುಮುಷ್ತಾಕ್ ಬರೆಯಲು ಆರಂಭಿಸಿದವರು. ಪುರುಷ ಲೇಖಕರು ಎರಡೂ ಕೆಡುಕುಗಳ ವಿರುದ್ಧ ಸಮಾನ ಎಚ್ಚರದಲ್ಲಿ ಬರೆದರೆ, ಮಹಿಳೆಯರು ಹೆಚ್ಚಾಗಿ ಒಳಗಿನ ಸಮಸ್ಯೆಯತ್ತಲೇ ಕೇಂದ್ರೀಕರಿಸಿದರು. ಇದಕ್ಕೆ ಕಾರಣ, ಈ ಸಮಸ್ಯೆಯು ಅವರ ವೈಚಾರಿಕ ಗ್ರಹಿಕೆಯ ಪರಿಣಾಮವಾಗಿರಲಿಲ್ಲ. ಸ್ವಂತಾನುಭವದ್ದಾಗಿತ್ತು. ಆದರೆ ಸಮುದಾಯವನ್ನು ಅದರ ಗಂಡಾಳಿಕೆ ಮತ್ತು ಪುರೋಹಿತಶಾಹಿ ಕೇಡುಗಳ ಬಾಧೆಯ ಚೌಕಟ್ಟಿನಲ್ಲಿ ಗ್ರಹಿಸಿದಾಗ, ಅದು ಧರ್ಮ ಅಥವಾ ಸಮುದಾಯಗಳನ್ನು ದ್ವೇಷಿಸುವ ಮತೀಯವಾದಿಗಳಿಗೆ ಹತ್ಯಾರಗಳು ಕೂಡ ಆಗಿಬಿಡುವ ಅಪಾಯವಿರುತ್ತದೆ. ಸಾರಾ ಅವರ ಪಠ್ಯಗಳನ್ನು ತರಗತಿಗಳಲ್ಲಿ ಪಾಠಮಾಡುತ್ತಿದ್ದ ದುಷ್ಟ ಅಧ್ಯಾಪಕರು, ವಿದ್ಯಾರ್ಥಿಗಳಿಗೆ ಮುಸ್ಲಿಮರ ಬಗ್ಗೆ ಇದೊಂದು ಕೊಳೆತುಹೋದ ಜನಾಂಗವೆಂಬ ಗ್ರಹಿಕೆಯನ್ನು ಉತ್ಪಾದಿಸಿರುವ ಸಾಧ್ಯತೆಗಳಿವೆ. ಒಳವಿಮರ್ಶಕರಾಗಿ ಸಮುದಾಯವನ್ನು ಅನುಸಂಧಾನ ಮಾಡುವ ಎಲ್ಲ ಲೇಖಕರು ಎದುರಿಸಬೇಕಾದ ದುರಂತಮಯ ಇಕ್ಕಟ್ಟು ಇದು.

ಸಾರಾ, ನೇರ ದಿಟ್ಟಗುಣದ ಲೇಖಕಿಯಾಗಿದ್ದರು. ಕೆಲವೊಮ್ಮೆ ಸನ್ನಿವೇಶದ ಜಟಿಲತೆ ಅರ್ಥವಾಗಿಲ್ಲವೇನೋ ಎಂಬಂತೆ ಸರಳವಾಗಿ ಅವರು ಪ್ರತಿಕ್ರಿಯಿಸುತ್ತಿದ್ದರು. ಅವರ ಆಕ್ರೋಶವು ಕೊನೆಯ ತನಕವೂ ಧಗಧಗಿಸುತ್ತಿತ್ತು. ಬದುಕನ್ನು ಅದು ಸಮಸ್ಯಾತ್ಮಕವಾಗಿದೆ ಎಂಬ ನೆಲೆಯಲ್ಲಿ ಅನುಸಂಧಾನ ಮಾಡುವ ಎಲ್ಲ ಸಮಾಜಸುಧಾರಕ ಬರೆಹವೂ, ತನ್ನ ಸಮುದಾಯದ ಸುಖದುಃಖಗಳನ್ನು, ಬಾಳಿನ ಸಣ್ಣಪುಟ್ಟ ಸಂತಸಗಳನ್ನು ಕಾಣಿಸುವ ಕಲಾತ್ಮಕ ಸೂಕ್ಷ್ಮತೆಗೆ ಕೆಲವೊಮ್ಮೆ ಎರವಾಗುತ್ತದೆ. ಹೀಗೆ ಎರವಾದ ಕುಶಲತೆಯನ್ನು ಕುವೆಂಪು, ಕಟ್ಪಾಡಿ, ಬೊಳುವಾರು ಅಂತಹವರಲ್ಲಿ ಕಾಣಬಹುದು. ಸಾರಾ ಬರೆಹ ಈ ಆಯಾಮದಿಂದ ವಂಚಿತವಾಯಿತೇ ಎಂಬ ಶಂಕೆ ನನಗಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

LEAVE A REPLY

Please enter your comment!
Please enter your name here

- Advertisment -

ಕೇಂದ್ರದ ವಿಬಿ-ಜಿ ರಾಮ್ ಜಿಗೆ ಟಕ್ಕರ್ : ಪ. ಬಂಗಾಳದ ‘ಕರ್ಮಶ್ರೀ’ ಯೋಜನೆಗೆ ಮಹಾತ್ಮ ಗಾಂಧಿ ಹೆಸರಿಡುವುದಾಗಿ ಘೋಷಿಸಿದ ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳ ಸರ್ಕಾರದ ಉದ್ಯೋಗ ಖಾತರಿ ಯೋಜನೆ 'ಕರ್ಮಶ್ರೀ'ಯನ್ನು ಮಹಾತ್ಮ ಗಾಂಧಿ ಹೆಸರಿನಲ್ಲಿ ಮರುನಾಮಕರಣ ಮಾಡುವುದಾಗಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗುರುವಾರ (ಡಿಸೆಂಬರ್ 18) ಘೋಷಿಸಿದ್ದಾರೆ. ನರೇಗಾ ಯೋಜನೆಯಿಂದ ಮಹಾತ್ಮಾ ಗಾಂಧಿಯವರ ಹೆಸರನ್ನು ಕೈಬಿಟ್ಟಿರುವುದಕ್ಕೆ...

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ: ಶಾಸಕ ಕುಣಿಗಲ್ ರಂಗನಾಥ್ ವಿರುದ್ಧ ಕೆ.ಎನ್. ರಾಜಣ್ಣ ವಾಗ್ದಾಳಿ

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ ಮಾಡುವುದನ್ನು ಮಾಜಿ ಸಹಕಾರಿ ಸಚಿವ ಕೆ.ಎನ್. ರಾಜಣ್ಣ ಗುರುವಾರ ಬಲವಾಗಿ ಸಮರ್ಥಿಸಿಕೊಂಡಿದ್ದಾರೆ. ಆಡಳಿತ ಪಕ್ಷದೊಳಗಿನ ಸಾರ್ವಜನಿಕ ಭಿನ್ನಾಭಿಪ್ರಾಯದ ನಡುವೆಯೂ, "ಸಂಘಗಳಿಗೆ ವಿತರಿಸಲಾದ ನಿಧಿ ಠೇವಣಿದಾರರ ಹಣ,...

ತನ್ನದೇ ಶಾಸಕರ ಅನರ್ಹತೆ ಕೋರಿ ಬಿಆರ್‌ಎಸ್‌ ಅರ್ಜಿ : ತಿರಸ್ಕರಿಸಿದ ತೆಲಂಗಾಣ ಸ್ಪೀಕರ್

ಆಡಳಿತಾರೂಢ ಕಾಂಗ್ರೆಸ್‌ಗೆ ನಿಷ್ಠೆ ಬದಲಾಯಿಸಿದ್ದಾರೆಂದು ಹೇಳಲಾದ ಹತ್ತು ಬಿಆರ್‌ಎಸ್ ಶಾಸಕರನ್ನು ಅನರ್ಹಗೊಳಿಸುವಂತೆ ಕೋರಿದ್ದ ಅರ್ಜಿಗಳ ಪೈಕಿ ಐದು ಅರ್ಜಿಗಳನ್ನು ತೆಲಂಗಾಣ ವಿಧಾನಸಭೆಯ ಸ್ಪೀಕರ್ ಗದ್ದಂ ಪ್ರಸಾದ್ ಕುಮಾರ್ ಬುಧವಾರ (ಡಿಸೆಂಬರ್ 18) ತಿರಸ್ಕರಿಸಿದ್ದಾರೆ....

ಸಾಮಾಜಿಕ ಬಹಿಷ್ಕಾರ, ದ್ವೇಷ ಭಾಷಣ ತಡೆ ವಿಧೇಯಕಗಳು ವಿಧಾನಸಭೆಯಲ್ಲಿ ಅಂಗೀಕಾರ

ಕರ್ನಾಟಕ ಸಾಮಾಜಿಕ ಬಹಿಷ್ಕಾರ (ಪ್ರತಿಬಂಧ, ನಿಷೇಧ ಮತ್ತು ಪರಿಹಾರ) ವಿಧೇಯಕ-2025 ಗುರುವಾರ (ಡಿ.18) ವಿಧಾನಸಭೆಯಲ್ಲಿ ಸರ್ವಾನುಮತದ ಅಂಗೀಕಾರಗೊಂಡಿತು. ಬೆಳಗಾವಿ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ವಿಧಾನಮಂಡಲ ಅಧಿವೇಶನದ ವಿಧಾನಸಭೆ ಕಲಾಪದಲ್ಲಿ ಸಮಾಜ ಕಲ್ಯಾಣ ಇಲಾಖೆ...

ಆಕ್ರಮಿತ ಪೂರ್ವ ಜೆರುಸಲೆಮ್ ವಸಾಹತು ಪ್ರದೇಶದಲ್ಲಿ 9000 ವಸತಿ ಘಟಕಗಳ ಯೋಜನೆ ಮುಂದಿಟ್ಟ ಇಸ್ರೇಲ್ 

ಆಕ್ರಮಿತ ಪೂರ್ವ ಜೆರುಸಲೆಮ್‌ನಲ್ಲಿರುವ ಕೈಬಿಟ್ಟ ಖಲಾಂಡಿಯಾ ವಿಮಾನ ನಿಲ್ದಾಣದ ಸ್ಥಳ ಬಳಿ ಅಕ್ರಮ ವಸಾಹತು ಪ್ರದೇಶದಲ್ಲಿ ಸುಮಾರು 9,000 ಹೊಸ ವಸತಿ ಘಟಕಗಳನ್ನು ನಿರ್ಮಿಸಲು ಇಸ್ರೇಲಿ ಆಕ್ರಮಿತ ಅಧಿಕಾರಿಗಳು ಯೋಜನೆಗಳನ್ನು ರೂಪಿಸಲು ಸಜ್ಜಾಗಿದ್ದಾರೆ....

ವಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಲೋಕಸಭೆಯಲ್ಲಿ ‘ವಿಬಿ-ಜಿ ರಾಮ್ ಜಿ ಮಸೂದೆ’ ಅಂಗೀಕಾರ

ಪ್ರತಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಗುರುವಾರ (ಡಿ.18) ಲೋಕಸಭೆಯಲ್ಲಿ 'ವಿಕ್ಷಿತ್ ಭಾರತ್ ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕ ಮಿಷನ್ (ಗ್ರಾಮೀಣ್ ) (ವಿಬಿ-ಜಿ ರಾಮ್ ಜಿ) ಮಸೂದೆ ಅಂಗೀಕಾರಗೊಂಡಿತು. ಈ ಮಸೂದೆ 2005ರಲ್ಲಿ...

ರಾಹುಲ್ ಗಾಂಧಿ ಆಪ್ತ ಸಹಾಯಕನ ಪತ್ನಿ ಪ್ರಜ್ಞಾ ಸತವ್ ಕಾಂಗ್ರೆಸ್ ಎಂಎಲ್‌ಸಿ ಸ್ಥಾನಕ್ಕೆ ರಾಜೀನಾಮೆ; ಬಿಜೆಪಿ ಸೇರುವ ನಿರೀಕ್ಷೆ

ಕಾಂಗ್ರೆಸ್ಸಿಗ ಮತ್ತು ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರ ಆಪ್ತರಾಗಿದ್ದ ದಿವಂಗತ ರಾಜೀವ್ ಸತವ್ ಅವರ ಪತ್ನಿ ಸತವ್ ಬಿಜೆಪಿಗೆ ಸೇರುವ ನಿರೀಕ್ಷೆಯಿದೆ. ಮಹಾರಾಷ್ಟ್ರದ ಕಾಂಗ್ರೆಸ್ ನಾಯಕಿ ಪ್ರಜ್ಞಾ ಸತವ್ ಅವರು ಗುರುವಾರ...

ಭೂ ಕಬಳಿಕೆ ಆರೋಪ : ಸದನದಲ್ಲಿ ಚರ್ಚೆಗೆ ಸಿದ್ದ ಎಂದ ಸಚಿವ ಕೃಷ್ಣ ಬೈರೇಗೌಡ

"ಸದನದ ಸದಸ್ಯನಾಗಿ ನನ್ನ ಹಕ್ಕನ್ನು ಬಿಟ್ಟುಕೊಡಲು ಸಿದ್ದನಿದ್ದೇನೆ. ನನ್ನ ಬಗ್ಗೆ ಎತ್ತಿರುವ ವೈಯಕ್ತಿಕ ಆರೋಪದ ಬಗ್ಗೆ ಚರ್ಚೆಗೆ ಸಿದ್ದ" ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದರು. ಗುರುವಾರ (ಡಿ.18) ವಿಧಾನಸಭೆಯ ಶೂನ್ಯ ವೇಳೆಯಲ್ಲಿ, ವಿಧಾನಪರಿಷತ್...

ಡಿಸೆಂಬರ್ 15 ರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕಾಗಿ ಜಾಮಿಯಾ ಮಿಲಿಯಾ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯದಿಂದ ಶೋಕಾಸ್ ನೋಟಿಸ್‌

2019 ರಲ್ಲಿ ವಿದ್ಯಾರ್ಥಿಗಳ ಮೇಲಿನ ಹಿಂಸಾಚಾರ ನಡೆದು ಆರು ವರ್ಷಗಳು ತುಂಬಿದ್ದು, ಅದರ ವಾರ್ಷಿಕ ನೆನಪಿನಲ್ಲಿ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿದ್ಯಾರ್ಥಿಗಳು ಡಿಸೆಂಬರ್ 15 ರಂದು ಕ್ಯಾಂಪಸ್ ಒಳಗೆ ದೊಡ್ಡ ಪ್ರತಿಭಟನೆ ನಡೆಸಿದ್ದರು....

ಅಮೆರಿಕದ ಸುಂಕಗಳು ತಮಿಳುನಾಡಿನ ರಫ್ತು ಕೈಗಾರಿಕೆಗಳನ್ನು ಅಂಚಿಗೆ ತಳ್ಳುತ್ತವೆ: ಪ್ರಧಾನಿ ಮೋದಿಗೆ ಸಿಎಂ ಸ್ಟಾಲಿನ್ ಎಚ್ಚರಿಕೆ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಭಾರತದ ರಫ್ತಿನ ಮೇಲೆ ಅಮೆರಿಕ ವಿಧಿಸಿರುವ ಭಾರೀ ಸುಂಕಗಳು ರಾಜ್ಯದ ಕೆಲವು ಉದ್ಯೋಗ- ಕೈಗಾರಿಕೆಗಳನ್ನು ತೀವ್ರ ಬಿಕ್ಕಟ್ಟಿನತ್ತ...