Homeಕರ್ನಾಟಕಸರಳತೆ ನೇರಗುಣ ದಿಟ್ಟತನಗಳನ್ನು ಬದುಕಿದ ಲೇಖಕಿ

ಸರಳತೆ ನೇರಗುಣ ದಿಟ್ಟತನಗಳನ್ನು ಬದುಕಿದ ಲೇಖಕಿ

- Advertisement -
- Advertisement -

ಕರಾವಳಿಯಿಂದಲೇ ‘ಇಂದಿರಾಬಾಯಿ’, ‘ಚೋಮನದುಡಿ’, ‘ಚಂದ್ರಗಿರಿಯ ತೀರದಲ್ಲಿ’ ಕಾದಂಬರಿಗಳು ಬಂದಿದ್ದು ಕುತೂಹಲಕರ. ಇವು ನಮ್ಮ ಸಮಾಜದ ವಿಧವಾಪದ್ಧತಿ, ಅಸ್ಪೃಶ್ಯತೆ, ಭೂಮಿಪ್ರಶ್ನೆ, ಸ್ತ್ರೀಶೋಷಣೆಯಂತಹ ಪ್ರಧಾನವಾದ ಸಮಸ್ಯೆಗಳನ್ನು ಕುರಿತವಾಗಿವೆ. ಒಂದರ್ಥದಲ್ಲಿ ಸಾರಾ, ಎಂಟು ದಶಕಗಳ ತರುವಾಯ ‘ಇಂದಿರಾಬಾಯಿ’ಯ ಉತ್ತರಾಧಿಕಾರಿಗಳಂತಿರುವ ಕತೆ ಕಾದಂಬರಿಗಳನ್ನು ರಚಿಸಿದರು. ವಿಧವೆಯಾಗಿ ಸಾರ್ವಜನಿಕ ಬದುಕನ್ನು ಕಳೆದುಕೊಳ್ಳುವ, ಜೀವನ ಅನುಭವಿಸಬೇಕಾದ ಸ್ವಾತಂತ್ರ್ಯ ಕಳೆದುಕೊಳ್ಳುವ ಸಮಸ್ಯೆಯನ್ನು ಗುಲ್ವಾಡಿಯವರಂತೆ ಅವರ ಬರೆಹವೂ ಜೀವನ್ಮರಣದ ತುರ್ತಿನಲ್ಲಿ ಶೋಧಿಸಿತು.

ಮಹಿಳೆಯರಿಗೆ ಬಿಡುಗಡೆ ಮಾಡುವುದು ಆಧುನಿಕ ಶಿಕ್ಷಣವೆಂದು ನಂಬಿದ್ದ ಭಾರತದ ಪ್ರಥಮ ಶಿಕ್ಷಕಿ ಫಾತಿಮಾ ಶೇಖ್ ಅವರ ಜನ್ಮದಿನದ ಮಾರನೇದಿನವೇ ಸಾರಾ ಅವರು ತೀರಿಕೊಂಡಿದ್ದು ಮಾರ್ಮಿಕ. ಫಾತಿಮಾ ಒಬ್ಬ ಶಿಕ್ಷಕಿಯಾಗಿ ಕೊಟ್ಟ ಸೂಚನೆಯನ್ನು, ‘ಮುಸ್ಲಿಂ ಹುಡುಗಿ ಶಾಲೆ ಕಲಿತಿದ್ದು’ ಎಂಬ ಲೇಖನದ ಮೂಲಕ ಬರವಣಿಗೆ ಆರಂಭಿಸಿದ ಸಾರಾ, ಒಬ್ಬ ವಿದ್ಯಾರ್ಥಿಯಾಗಿ ಬದುಕಿ ಸಾಧಿಸಿದವರು. ವಸಾಹತುಶಾಹಿ ಶಾಲೆಗಳಲ್ಲಿ ಕಲಿತ ನಾವು ನಮ್ಮ ಪರಂಪರೆಯ ಮೂಲಬೇರುಗಳನ್ನು ಕಳೆದುಕೊಂಡೆವು ಎಂದು ಅಳಲುವವರು ಇದ್ದಾರೆ. ಅವರ ಮಾತಲ್ಲಿ ಕೆಲವು ನಿಜಗಳಿವೆ. ಆದರೆ ಬ್ರಿಟಿಷರು ಬಾರದೆ ಹೋಗಿದ್ದರೆ, ಸ್ಕೂಲು ಕಾಲೇಜುಗಳನ್ನು ಮುಕ್ತವಾಗಿ ತೆರೆಯದೆ ಹೋಗಿದ್ದರೆ, ನಾವು ನಾವಾಗಿರುತ್ತಿರಲಿಲ್ಲ ಎಂದು ಈ ದೇಶದ ದಲಿತರು ಮತ್ತು ಮಹಿಳೆಯರು ಮತ್ತೆಮತ್ತೆ ಯಾಕೆ ಹೇಳುತ್ತಾರೆ ಎಂಬ ಪ್ರಶ್ನೆಯನ್ನು ಅವರು ಸೂಕ್ಷ್ಮವಾಗಿ ಪರಿಶೀಲಿಸುವುದಿಲ್ಲ. ಸಾರಾ ಓದಿದ್ದು ಹತ್ತನೇ ತರಗತಿ ಮಾತ್ರ. ಬರೆಯಲು ಆರಂಭಿಸಿದ್ದು ತಮ್ಮ 50ರ ಪ್ರಾಯದಲ್ಲಿ. ಈ ಸೀಮಿತ ಶಿಕ್ಷಣ, ವಯಸ್ಸುಗಳ ಮಿತಿ, ಅವರ ಬರೆಹಕ್ಕೆ ದೊಡ್ಡ ತೊಡಕುಗಳಾಗಲಿಲ್ಲ. ಅವರು ಆಧುನಿಕ ಶಿಕ್ಷಣದಂತೆ ಸಾಹಿತ್ಯ ಕೂಡ ಬದುಕನ್ನು ಬದಲಿಸಬಹುದು ಎಂದು ನಂಬಿದ್ದವರು. ತಮ್ಮ ಕತೆ ಕಾದಂಬರಿ ಓದಿ, ತಮ್ಮ ಆಲೋಚನೆ ಬದಲಿಸಿಕೊಂಡ ಮಹಿಳೆಯರ ನಿದರ್ಶನಗಳನ್ನು ಅವರು ಸದಾ ಉಲ್ಲೇಖಿಸುತ್ತಿದ್ದರು. ಆಕ್ಟಿವಿಸ್ಟ್ ಬರೆಹಗಾರರನ್ನು ಸಿದ್ಧ ಕಲಾ ಮಾನದಂಡಗಳಿಂದ ಅಳೆಯುವುದು ಸುಲಭವಲ್ಲ.

ಸಾರಾ ಅವರ ಬದುಕು, ಆಲೋಚನೆ, ಕ್ರಿಯೆಗಳನ್ನು ರೂಪಿಸಿದ ಅಕ್ಷರ ಮತ್ತು ಬರೆಹಗಳ ಹಿಂದಿನ ವೈಚಾರಿಕತೆಯು, ಅವರು ಜೀವಂತವಾಗಿ ಅನುಭವಿಸಿದ ಬದುಕಿನ ಅನುಭವಗಳಿಂದ ಬಂದಿದ್ದು. ಅವರೊಬ್ಬ ರ್‍ಯಾಶನಲಿಸ್ಟ್ ಆಗಿ ಭಾರತದ ಆಧುನಿಕ ಚಿಂತಕರಿಂದ ಪ್ರೇರಣೆ ಪಡೆದಿದ್ದರು. ಅವರ ಬರೆಹದ ಹಿಂದೆ 70-80ರ ದಶಕಗಳು ಬಿಡುಗಡೆ ಮಾಡಿದ ಚಾರಿತ್ರಿಕ ಶಕ್ತಿಗಳೂ ಇದ್ದವು. ಅವರು ಸಮಾಜವನ್ನು ಅರಿಯಲು, ಎದುರಿಸಲು ಮತ್ತು ಬದಲಿಸಲು ಬೇಕಾದ ಚಿಂತನೆಯನ್ನು ಧಾರ್ಮಿಕ ನೆಲೆಯಿಂದಲೂ ಪಡೆಯುತ್ತಿದ್ದರು. ಅವರು ಕುರಾನಿನಲ್ಲಿ ಗಂಡುಹೆಣ್ಣು ಬೇಧವಿಲ್ಲವೆಂದೂ, ವಿದ್ಯೆ ಕಲಿಯಲು ಚೀನಾದವರೆಗೂ ಹೋಗಬೇಕಾದರೆ ಹೋಗೆಂದು ಪೈಗಂಬರರು ಹೇಳುತ್ತಿದ್ದರೆಂದೂ ಸದಾ ಉಲ್ಲೇಖಿಸುತ್ತಿದ್ದರು. ಧಾರ್ಮಿಕ ಭಾವುಕತೆಯು ಆಳವಾಗಿರುವ ಸಮಾಜದಲ್ಲಿ ಹೀಗೆ ಧಾರ್ಮಿಕ ನೆಲೆಯ ತಿಳಿವನ್ನು ಉಪಯೋಗಿಸುವುದು ಅಗತ್ಯವೂ ಆಗಿತ್ತು. ಯುದ್ಧತಂತ್ರವೋ ಶ್ರದ್ಧೆಯೋ ಹೇಳಲಾಗದ ಈ ವಿಧಾನವು ಅವರ ಸಮಕಾಲೀನ ಬರೆಹಗಾರರಾದ ಫಕೀರ್ ಕಟ್ಪಾಡಿಯವರಲ್ಲೂ, ಚಿಂತಕ ಅಸ್ಘರ್ ಅಲಿ ಇಂಜಿನಿಯರ್ ಅವರಲ್ಲೂ ಇತ್ತು.

ಸಾರಾ ಅವರು ತಮ್ಮ ಬರೆಹಗಳಲ್ಲಿ ಕಾಣಿಸುವ ಮುಸ್ಲಿಂ ಸಮಾಜವು ಮುಖ್ಯವಾಗಿ ಕರಾವಳಿಯದು ಅಥವಾ ಕೇರಳದ್ದಾಗಿದ್ದರೂ, ಅದು ವಿಶಾಲ ಅರ್ಥದಲ್ಲಿ ಭಾರತದ ಮಹಿಳೆಯರದೂ ಆಗಿತ್ತು. ಮುಸ್ಲಿಂ ಸಮುದಾಯವು ಒಳಗಿನ ಮೂಲಭೂತವಾದ ಮತ್ತು ಹೊರಗಿನ ಮತೀಯವಾದಗಳ ನಡುವೆ ಚಾರಿತ್ರಿಕವಾದ ಇಕ್ಕಟ್ಟಿಗೆ ಸಿಕ್ಕಿಕೊಂಡಿರುವ ಕಾಲದಲ್ಲಿ, ದರ್ಗಾ, ಸಾರಾ, ಕಟ್ಪಾಡಿ, ಬೊಳುವಾರು, ಬಾನುಮುಷ್ತಾಕ್ ಬರೆಯಲು ಆರಂಭಿಸಿದವರು. ಪುರುಷ ಲೇಖಕರು ಎರಡೂ ಕೆಡುಕುಗಳ ವಿರುದ್ಧ ಸಮಾನ ಎಚ್ಚರದಲ್ಲಿ ಬರೆದರೆ, ಮಹಿಳೆಯರು ಹೆಚ್ಚಾಗಿ ಒಳಗಿನ ಸಮಸ್ಯೆಯತ್ತಲೇ ಕೇಂದ್ರೀಕರಿಸಿದರು. ಇದಕ್ಕೆ ಕಾರಣ, ಈ ಸಮಸ್ಯೆಯು ಅವರ ವೈಚಾರಿಕ ಗ್ರಹಿಕೆಯ ಪರಿಣಾಮವಾಗಿರಲಿಲ್ಲ. ಸ್ವಂತಾನುಭವದ್ದಾಗಿತ್ತು. ಆದರೆ ಸಮುದಾಯವನ್ನು ಅದರ ಗಂಡಾಳಿಕೆ ಮತ್ತು ಪುರೋಹಿತಶಾಹಿ ಕೇಡುಗಳ ಬಾಧೆಯ ಚೌಕಟ್ಟಿನಲ್ಲಿ ಗ್ರಹಿಸಿದಾಗ, ಅದು ಧರ್ಮ ಅಥವಾ ಸಮುದಾಯಗಳನ್ನು ದ್ವೇಷಿಸುವ ಮತೀಯವಾದಿಗಳಿಗೆ ಹತ್ಯಾರಗಳು ಕೂಡ ಆಗಿಬಿಡುವ ಅಪಾಯವಿರುತ್ತದೆ. ಸಾರಾ ಅವರ ಪಠ್ಯಗಳನ್ನು ತರಗತಿಗಳಲ್ಲಿ ಪಾಠಮಾಡುತ್ತಿದ್ದ ದುಷ್ಟ ಅಧ್ಯಾಪಕರು, ವಿದ್ಯಾರ್ಥಿಗಳಿಗೆ ಮುಸ್ಲಿಮರ ಬಗ್ಗೆ ಇದೊಂದು ಕೊಳೆತುಹೋದ ಜನಾಂಗವೆಂಬ ಗ್ರಹಿಕೆಯನ್ನು ಉತ್ಪಾದಿಸಿರುವ ಸಾಧ್ಯತೆಗಳಿವೆ. ಒಳವಿಮರ್ಶಕರಾಗಿ ಸಮುದಾಯವನ್ನು ಅನುಸಂಧಾನ ಮಾಡುವ ಎಲ್ಲ ಲೇಖಕರು ಎದುರಿಸಬೇಕಾದ ದುರಂತಮಯ ಇಕ್ಕಟ್ಟು ಇದು.

ಸಾರಾ, ನೇರ ದಿಟ್ಟಗುಣದ ಲೇಖಕಿಯಾಗಿದ್ದರು. ಕೆಲವೊಮ್ಮೆ ಸನ್ನಿವೇಶದ ಜಟಿಲತೆ ಅರ್ಥವಾಗಿಲ್ಲವೇನೋ ಎಂಬಂತೆ ಸರಳವಾಗಿ ಅವರು ಪ್ರತಿಕ್ರಿಯಿಸುತ್ತಿದ್ದರು. ಅವರ ಆಕ್ರೋಶವು ಕೊನೆಯ ತನಕವೂ ಧಗಧಗಿಸುತ್ತಿತ್ತು. ಬದುಕನ್ನು ಅದು ಸಮಸ್ಯಾತ್ಮಕವಾಗಿದೆ ಎಂಬ ನೆಲೆಯಲ್ಲಿ ಅನುಸಂಧಾನ ಮಾಡುವ ಎಲ್ಲ ಸಮಾಜಸುಧಾರಕ ಬರೆಹವೂ, ತನ್ನ ಸಮುದಾಯದ ಸುಖದುಃಖಗಳನ್ನು, ಬಾಳಿನ ಸಣ್ಣಪುಟ್ಟ ಸಂತಸಗಳನ್ನು ಕಾಣಿಸುವ ಕಲಾತ್ಮಕ ಸೂಕ್ಷ್ಮತೆಗೆ ಕೆಲವೊಮ್ಮೆ ಎರವಾಗುತ್ತದೆ. ಹೀಗೆ ಎರವಾದ ಕುಶಲತೆಯನ್ನು ಕುವೆಂಪು, ಕಟ್ಪಾಡಿ, ಬೊಳುವಾರು ಅಂತಹವರಲ್ಲಿ ಕಾಣಬಹುದು. ಸಾರಾ ಬರೆಹ ಈ ಆಯಾಮದಿಂದ ವಂಚಿತವಾಯಿತೇ ಎಂಬ ಶಂಕೆ ನನಗಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...