Homeಕರ್ನಾಟಕಸರಳತೆ ನೇರಗುಣ ದಿಟ್ಟತನಗಳನ್ನು ಬದುಕಿದ ಲೇಖಕಿ

ಸರಳತೆ ನೇರಗುಣ ದಿಟ್ಟತನಗಳನ್ನು ಬದುಕಿದ ಲೇಖಕಿ

- Advertisement -
- Advertisement -

ಕರಾವಳಿಯಿಂದಲೇ ‘ಇಂದಿರಾಬಾಯಿ’, ‘ಚೋಮನದುಡಿ’, ‘ಚಂದ್ರಗಿರಿಯ ತೀರದಲ್ಲಿ’ ಕಾದಂಬರಿಗಳು ಬಂದಿದ್ದು ಕುತೂಹಲಕರ. ಇವು ನಮ್ಮ ಸಮಾಜದ ವಿಧವಾಪದ್ಧತಿ, ಅಸ್ಪೃಶ್ಯತೆ, ಭೂಮಿಪ್ರಶ್ನೆ, ಸ್ತ್ರೀಶೋಷಣೆಯಂತಹ ಪ್ರಧಾನವಾದ ಸಮಸ್ಯೆಗಳನ್ನು ಕುರಿತವಾಗಿವೆ. ಒಂದರ್ಥದಲ್ಲಿ ಸಾರಾ, ಎಂಟು ದಶಕಗಳ ತರುವಾಯ ‘ಇಂದಿರಾಬಾಯಿ’ಯ ಉತ್ತರಾಧಿಕಾರಿಗಳಂತಿರುವ ಕತೆ ಕಾದಂಬರಿಗಳನ್ನು ರಚಿಸಿದರು. ವಿಧವೆಯಾಗಿ ಸಾರ್ವಜನಿಕ ಬದುಕನ್ನು ಕಳೆದುಕೊಳ್ಳುವ, ಜೀವನ ಅನುಭವಿಸಬೇಕಾದ ಸ್ವಾತಂತ್ರ್ಯ ಕಳೆದುಕೊಳ್ಳುವ ಸಮಸ್ಯೆಯನ್ನು ಗುಲ್ವಾಡಿಯವರಂತೆ ಅವರ ಬರೆಹವೂ ಜೀವನ್ಮರಣದ ತುರ್ತಿನಲ್ಲಿ ಶೋಧಿಸಿತು.

ಮಹಿಳೆಯರಿಗೆ ಬಿಡುಗಡೆ ಮಾಡುವುದು ಆಧುನಿಕ ಶಿಕ್ಷಣವೆಂದು ನಂಬಿದ್ದ ಭಾರತದ ಪ್ರಥಮ ಶಿಕ್ಷಕಿ ಫಾತಿಮಾ ಶೇಖ್ ಅವರ ಜನ್ಮದಿನದ ಮಾರನೇದಿನವೇ ಸಾರಾ ಅವರು ತೀರಿಕೊಂಡಿದ್ದು ಮಾರ್ಮಿಕ. ಫಾತಿಮಾ ಒಬ್ಬ ಶಿಕ್ಷಕಿಯಾಗಿ ಕೊಟ್ಟ ಸೂಚನೆಯನ್ನು, ‘ಮುಸ್ಲಿಂ ಹುಡುಗಿ ಶಾಲೆ ಕಲಿತಿದ್ದು’ ಎಂಬ ಲೇಖನದ ಮೂಲಕ ಬರವಣಿಗೆ ಆರಂಭಿಸಿದ ಸಾರಾ, ಒಬ್ಬ ವಿದ್ಯಾರ್ಥಿಯಾಗಿ ಬದುಕಿ ಸಾಧಿಸಿದವರು. ವಸಾಹತುಶಾಹಿ ಶಾಲೆಗಳಲ್ಲಿ ಕಲಿತ ನಾವು ನಮ್ಮ ಪರಂಪರೆಯ ಮೂಲಬೇರುಗಳನ್ನು ಕಳೆದುಕೊಂಡೆವು ಎಂದು ಅಳಲುವವರು ಇದ್ದಾರೆ. ಅವರ ಮಾತಲ್ಲಿ ಕೆಲವು ನಿಜಗಳಿವೆ. ಆದರೆ ಬ್ರಿಟಿಷರು ಬಾರದೆ ಹೋಗಿದ್ದರೆ, ಸ್ಕೂಲು ಕಾಲೇಜುಗಳನ್ನು ಮುಕ್ತವಾಗಿ ತೆರೆಯದೆ ಹೋಗಿದ್ದರೆ, ನಾವು ನಾವಾಗಿರುತ್ತಿರಲಿಲ್ಲ ಎಂದು ಈ ದೇಶದ ದಲಿತರು ಮತ್ತು ಮಹಿಳೆಯರು ಮತ್ತೆಮತ್ತೆ ಯಾಕೆ ಹೇಳುತ್ತಾರೆ ಎಂಬ ಪ್ರಶ್ನೆಯನ್ನು ಅವರು ಸೂಕ್ಷ್ಮವಾಗಿ ಪರಿಶೀಲಿಸುವುದಿಲ್ಲ. ಸಾರಾ ಓದಿದ್ದು ಹತ್ತನೇ ತರಗತಿ ಮಾತ್ರ. ಬರೆಯಲು ಆರಂಭಿಸಿದ್ದು ತಮ್ಮ 50ರ ಪ್ರಾಯದಲ್ಲಿ. ಈ ಸೀಮಿತ ಶಿಕ್ಷಣ, ವಯಸ್ಸುಗಳ ಮಿತಿ, ಅವರ ಬರೆಹಕ್ಕೆ ದೊಡ್ಡ ತೊಡಕುಗಳಾಗಲಿಲ್ಲ. ಅವರು ಆಧುನಿಕ ಶಿಕ್ಷಣದಂತೆ ಸಾಹಿತ್ಯ ಕೂಡ ಬದುಕನ್ನು ಬದಲಿಸಬಹುದು ಎಂದು ನಂಬಿದ್ದವರು. ತಮ್ಮ ಕತೆ ಕಾದಂಬರಿ ಓದಿ, ತಮ್ಮ ಆಲೋಚನೆ ಬದಲಿಸಿಕೊಂಡ ಮಹಿಳೆಯರ ನಿದರ್ಶನಗಳನ್ನು ಅವರು ಸದಾ ಉಲ್ಲೇಖಿಸುತ್ತಿದ್ದರು. ಆಕ್ಟಿವಿಸ್ಟ್ ಬರೆಹಗಾರರನ್ನು ಸಿದ್ಧ ಕಲಾ ಮಾನದಂಡಗಳಿಂದ ಅಳೆಯುವುದು ಸುಲಭವಲ್ಲ.

ಸಾರಾ ಅವರ ಬದುಕು, ಆಲೋಚನೆ, ಕ್ರಿಯೆಗಳನ್ನು ರೂಪಿಸಿದ ಅಕ್ಷರ ಮತ್ತು ಬರೆಹಗಳ ಹಿಂದಿನ ವೈಚಾರಿಕತೆಯು, ಅವರು ಜೀವಂತವಾಗಿ ಅನುಭವಿಸಿದ ಬದುಕಿನ ಅನುಭವಗಳಿಂದ ಬಂದಿದ್ದು. ಅವರೊಬ್ಬ ರ್‍ಯಾಶನಲಿಸ್ಟ್ ಆಗಿ ಭಾರತದ ಆಧುನಿಕ ಚಿಂತಕರಿಂದ ಪ್ರೇರಣೆ ಪಡೆದಿದ್ದರು. ಅವರ ಬರೆಹದ ಹಿಂದೆ 70-80ರ ದಶಕಗಳು ಬಿಡುಗಡೆ ಮಾಡಿದ ಚಾರಿತ್ರಿಕ ಶಕ್ತಿಗಳೂ ಇದ್ದವು. ಅವರು ಸಮಾಜವನ್ನು ಅರಿಯಲು, ಎದುರಿಸಲು ಮತ್ತು ಬದಲಿಸಲು ಬೇಕಾದ ಚಿಂತನೆಯನ್ನು ಧಾರ್ಮಿಕ ನೆಲೆಯಿಂದಲೂ ಪಡೆಯುತ್ತಿದ್ದರು. ಅವರು ಕುರಾನಿನಲ್ಲಿ ಗಂಡುಹೆಣ್ಣು ಬೇಧವಿಲ್ಲವೆಂದೂ, ವಿದ್ಯೆ ಕಲಿಯಲು ಚೀನಾದವರೆಗೂ ಹೋಗಬೇಕಾದರೆ ಹೋಗೆಂದು ಪೈಗಂಬರರು ಹೇಳುತ್ತಿದ್ದರೆಂದೂ ಸದಾ ಉಲ್ಲೇಖಿಸುತ್ತಿದ್ದರು. ಧಾರ್ಮಿಕ ಭಾವುಕತೆಯು ಆಳವಾಗಿರುವ ಸಮಾಜದಲ್ಲಿ ಹೀಗೆ ಧಾರ್ಮಿಕ ನೆಲೆಯ ತಿಳಿವನ್ನು ಉಪಯೋಗಿಸುವುದು ಅಗತ್ಯವೂ ಆಗಿತ್ತು. ಯುದ್ಧತಂತ್ರವೋ ಶ್ರದ್ಧೆಯೋ ಹೇಳಲಾಗದ ಈ ವಿಧಾನವು ಅವರ ಸಮಕಾಲೀನ ಬರೆಹಗಾರರಾದ ಫಕೀರ್ ಕಟ್ಪಾಡಿಯವರಲ್ಲೂ, ಚಿಂತಕ ಅಸ್ಘರ್ ಅಲಿ ಇಂಜಿನಿಯರ್ ಅವರಲ್ಲೂ ಇತ್ತು.

ಸಾರಾ ಅವರು ತಮ್ಮ ಬರೆಹಗಳಲ್ಲಿ ಕಾಣಿಸುವ ಮುಸ್ಲಿಂ ಸಮಾಜವು ಮುಖ್ಯವಾಗಿ ಕರಾವಳಿಯದು ಅಥವಾ ಕೇರಳದ್ದಾಗಿದ್ದರೂ, ಅದು ವಿಶಾಲ ಅರ್ಥದಲ್ಲಿ ಭಾರತದ ಮಹಿಳೆಯರದೂ ಆಗಿತ್ತು. ಮುಸ್ಲಿಂ ಸಮುದಾಯವು ಒಳಗಿನ ಮೂಲಭೂತವಾದ ಮತ್ತು ಹೊರಗಿನ ಮತೀಯವಾದಗಳ ನಡುವೆ ಚಾರಿತ್ರಿಕವಾದ ಇಕ್ಕಟ್ಟಿಗೆ ಸಿಕ್ಕಿಕೊಂಡಿರುವ ಕಾಲದಲ್ಲಿ, ದರ್ಗಾ, ಸಾರಾ, ಕಟ್ಪಾಡಿ, ಬೊಳುವಾರು, ಬಾನುಮುಷ್ತಾಕ್ ಬರೆಯಲು ಆರಂಭಿಸಿದವರು. ಪುರುಷ ಲೇಖಕರು ಎರಡೂ ಕೆಡುಕುಗಳ ವಿರುದ್ಧ ಸಮಾನ ಎಚ್ಚರದಲ್ಲಿ ಬರೆದರೆ, ಮಹಿಳೆಯರು ಹೆಚ್ಚಾಗಿ ಒಳಗಿನ ಸಮಸ್ಯೆಯತ್ತಲೇ ಕೇಂದ್ರೀಕರಿಸಿದರು. ಇದಕ್ಕೆ ಕಾರಣ, ಈ ಸಮಸ್ಯೆಯು ಅವರ ವೈಚಾರಿಕ ಗ್ರಹಿಕೆಯ ಪರಿಣಾಮವಾಗಿರಲಿಲ್ಲ. ಸ್ವಂತಾನುಭವದ್ದಾಗಿತ್ತು. ಆದರೆ ಸಮುದಾಯವನ್ನು ಅದರ ಗಂಡಾಳಿಕೆ ಮತ್ತು ಪುರೋಹಿತಶಾಹಿ ಕೇಡುಗಳ ಬಾಧೆಯ ಚೌಕಟ್ಟಿನಲ್ಲಿ ಗ್ರಹಿಸಿದಾಗ, ಅದು ಧರ್ಮ ಅಥವಾ ಸಮುದಾಯಗಳನ್ನು ದ್ವೇಷಿಸುವ ಮತೀಯವಾದಿಗಳಿಗೆ ಹತ್ಯಾರಗಳು ಕೂಡ ಆಗಿಬಿಡುವ ಅಪಾಯವಿರುತ್ತದೆ. ಸಾರಾ ಅವರ ಪಠ್ಯಗಳನ್ನು ತರಗತಿಗಳಲ್ಲಿ ಪಾಠಮಾಡುತ್ತಿದ್ದ ದುಷ್ಟ ಅಧ್ಯಾಪಕರು, ವಿದ್ಯಾರ್ಥಿಗಳಿಗೆ ಮುಸ್ಲಿಮರ ಬಗ್ಗೆ ಇದೊಂದು ಕೊಳೆತುಹೋದ ಜನಾಂಗವೆಂಬ ಗ್ರಹಿಕೆಯನ್ನು ಉತ್ಪಾದಿಸಿರುವ ಸಾಧ್ಯತೆಗಳಿವೆ. ಒಳವಿಮರ್ಶಕರಾಗಿ ಸಮುದಾಯವನ್ನು ಅನುಸಂಧಾನ ಮಾಡುವ ಎಲ್ಲ ಲೇಖಕರು ಎದುರಿಸಬೇಕಾದ ದುರಂತಮಯ ಇಕ್ಕಟ್ಟು ಇದು.

ಸಾರಾ, ನೇರ ದಿಟ್ಟಗುಣದ ಲೇಖಕಿಯಾಗಿದ್ದರು. ಕೆಲವೊಮ್ಮೆ ಸನ್ನಿವೇಶದ ಜಟಿಲತೆ ಅರ್ಥವಾಗಿಲ್ಲವೇನೋ ಎಂಬಂತೆ ಸರಳವಾಗಿ ಅವರು ಪ್ರತಿಕ್ರಿಯಿಸುತ್ತಿದ್ದರು. ಅವರ ಆಕ್ರೋಶವು ಕೊನೆಯ ತನಕವೂ ಧಗಧಗಿಸುತ್ತಿತ್ತು. ಬದುಕನ್ನು ಅದು ಸಮಸ್ಯಾತ್ಮಕವಾಗಿದೆ ಎಂಬ ನೆಲೆಯಲ್ಲಿ ಅನುಸಂಧಾನ ಮಾಡುವ ಎಲ್ಲ ಸಮಾಜಸುಧಾರಕ ಬರೆಹವೂ, ತನ್ನ ಸಮುದಾಯದ ಸುಖದುಃಖಗಳನ್ನು, ಬಾಳಿನ ಸಣ್ಣಪುಟ್ಟ ಸಂತಸಗಳನ್ನು ಕಾಣಿಸುವ ಕಲಾತ್ಮಕ ಸೂಕ್ಷ್ಮತೆಗೆ ಕೆಲವೊಮ್ಮೆ ಎರವಾಗುತ್ತದೆ. ಹೀಗೆ ಎರವಾದ ಕುಶಲತೆಯನ್ನು ಕುವೆಂಪು, ಕಟ್ಪಾಡಿ, ಬೊಳುವಾರು ಅಂತಹವರಲ್ಲಿ ಕಾಣಬಹುದು. ಸಾರಾ ಬರೆಹ ಈ ಆಯಾಮದಿಂದ ವಂಚಿತವಾಯಿತೇ ಎಂಬ ಶಂಕೆ ನನಗಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

LEAVE A REPLY

Please enter your comment!
Please enter your name here

- Advertisment -

ಬಂಗಾಳ SIR : ನ್ಯಾಯಮಂಡಳಿಗಳಿಂದ ಪರಿಹಾರ ಪಡೆದವರು ಕೇವಲ 0.01% ಜನ

ಪಶ್ಚಿಮ ಬಂಗಾಳದಲ್ಲಿ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಪ್ರಕ್ರಿಯೆಯ ನಂತರ ಮತದಾರರ ಪಟ್ಟಿಯಲ್ಲಿ ಉಂಟಾದ ವಿವಾದಗಳನ್ನು ಬಗೆಹರಿಸಲು ಮೇಲ್ಮನವಿ ನ್ಯಾಯಮಂಡಳಿಗಳನ್ನು ಸ್ಥಾಪಿಸಲಾಗಿದೆ. ಎಸ್‌ಐಆರ್ ಪ್ರಕ್ರಿಯೆಯ ನಂತರ ಮತದಾರರ ಪಟ್ಟಿಯಿಂದ ಹೆಸರುಗಳನ್ನು ಕೈಬಿಟ್ಟಿರುವುದರ ಅಥವಾ...

ಪ.ಬಂಗಾಳ ಎಸ್‌ಐಆರ್‌ : ದೇಶ ಕಾದ ಯೋಧನಿಂದ ತೀರ್ಪು ಕೊಟ್ಟ ನ್ಯಾಯಾಧೀಶರವರೆಗೆ.. ಮತ ಹಕ್ಕು ಕಳೆದುಕೊಂಡ ಲಕ್ಷಾಂತರ ಜನರು

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ದೇಶದಲ್ಲಿ ಪ್ರಸ್ತುತ ಚರ್ಚೆಯಲ್ಲಿರುವ ಪ್ರಮುಖ ವಿಚಾರ. ಹಲವು ಗೊಂದಲಗಳ ನಡುವೆ ಮೊದಲ ಹಂತದಲ್ಲಿ ಬಿಹಾರದಲ್ಲಿ ಎಸ್‌ಐಆರ್‌ ಪೂರ್ತಿಗೊಳಿಸಿದ ಚುನಾವಣಾ ಆಯೋಗ, ನಂತರ ಅಲ್ಲಿ ವಿಧಾನಸಭಾ...

ತೆಲಂಗಾಣ ಜಾತಿ ಸಮೀಕ್ಷೆ: ಜನರ ಆರ್ಥಿಕ ಭವಿಷ್ಯ ನಿರ್ಧರಿಸುತ್ತಿರುವ ಜಾತಿ ಹಿನ್ನೆಲೆ

ತೆಲಂಗಾಣದಲ್ಲಿರುವ ಎಲ್ಲಾ ಪರಿಶಿಷ್ಟ ಜಾತಿ ಕಾರ್ಮಿಕರಲ್ಲಿ ಸುಮಾರು ಅರ್ಧದಷ್ಟು ಜನರು ದಿನಗೂಲಿ ಕಾರ್ಮಿಕರು. ಆದರೆ, ಸಾಮಾನ್ಯ ಜಾತಿ ಕಾರ್ಮಿಕರಲ್ಲಿ 10 ರಲ್ಲಿ ಒಬ್ಬರು ಮಾತ್ರ ದಿನಗೂಲಿ ಮಾಡುತ್ತಾರೆ. ಬ್ರಾಹ್ಮಣರು ಎಸ್‌ಟಿ ಸಮುದಾಯದ ಕೋಲಂಗಿಂತ...

ಲೆಬನಾನ್‌ನಲ್ಲಿ ಯೇಸುವಿನ ಪ್ರತಿಮೆ ಧ್ವಂಸ ಮಾಡಿದ ಇಸ್ರೇಲಿ ಸೈನಿಕ; ಫೋಟೋ ವೈರಲ್

ಇಸ್ರೇಲಿ ಸೈನಿಕನೊಬ್ಬ ದಕ್ಷಿಣ ಲೆಬನಾನ್‌ನಲ್ಲಿ ಸ್ಲೆಡ್ಜ್ ಹ್ಯಾಮರ್‌ನಿಂದ ಯೇಸುಕ್ರಿಸ್ತನ ಪ್ರತಿಮೆಯನ್ನು ಧ್ವಂಸ ಮಾಡುತ್ತಿರುವುದನ್ನು ತೋರಿಸುವ ವೈರಲ್ ಚಿತ್ರದ ಸತ್ಯಾಸತ್ಯತೆಯನ್ನು ಇಸ್ರೇಲ್ ರಕ್ಷಣಾ ಪಡೆಗಳು (ಐಡಿಎಫ್‌) ದೃಢಪಡಿಸಿದ್ದು, ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಎಕ್ಸ್ ನಲ್ಲಿ 6.8...

TCS ನಾಸಿಕ್ ಪ್ರಕರಣ : ಮಾಧ್ಯಮಗಳ ಸುಳ್ಳು ಮತ್ತು ಕಂಪನಿ ಹೇಳಿದ ಸತ್ಯ

ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್‌) ಕಂಪನಿಯ ಬಿಪಿಒ ಘಟಕದಲ್ಲಿ ನಡೆದಿದೆ ಎನ್ನಲಾದ ಪ್ರಕರಣವೊಂದು ಪ್ರಸ್ತುತ ಇಡೀ ದೇಶದಾದ್ಯಂತ ಭಾರೀ ಚರ್ಚೆಯ ವಿಷಯವಾಗಿದೆ. ಈ ಪ್ರಕರಣದಲ್ಲಿ ಮುಖ್ಯವಾಗಿ ಲೈಂಗಿಕ ಕಿರುಕುಳ ಮತ್ತು...

‘ಅಮೆರಿಕದೊಂದಿಗೆ ಮಾತುಕತೆ ಇಲ್ಲ..’; ಇಸ್ಲಾಮಾಬಾದ್‌ ಸಭೆಯಲ್ಲಿ ಇರಾನ್ ಭಾಗವಹಿಸುವುದು ಅನುಮಾನ

ಯುನೈಟೆಡ್ ಸ್ಟೇಟ್ಸ್ (ಅಮೆರಿಕ) ಜೊತೆ ಹೊಸ ಸುತ್ತಿನ ಮಾತುಕತೆಗಾಗಿ ಇಸ್ಲಾಮಾಬಾದ್‌ಗೆ ಸಂಧಾನಕಾರರನ್ನು ಕಳುಹಿಸುವ ಯಾವುದೇ ಯೋಜನೆ ಇಲ್ಲ ಎಂದು ಇರಾನ್ ಸೂಚಿಸಿದೆ. ಕದನ ವಿರಾಮ ಮುಕ್ತಾಯಗೊಳ್ಳಲು 48 ಗಂಟೆಗಳ ಮೊದಲು ಯುದ್ಧ ನಿರತ...

ಇರಾನ್, ಇಸ್ರೇಲ್-ಅಮೆರಿಕ ಯುದ್ಧ : ವಿನಾಶದ ನಡುವೆಯೂ ಲಾಭ ಪಡೆದವರು ಯಾರು?

ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್‌) 2026ರ ಜಾಗತಿಕ ಬೆಳವಣಿಗೆಯ ಅಂದಾಜನ್ನು ಶೇಕಡ 3.3 ರಿಂದ 3.1ಕ್ಕೆ ಇಳಿಸಿದೆ. ಇರಾನ್ ವಿರುದ್ಧದ ಅಮೆರಿಕ-ಇಸ್ರೇಲ್ ಯುದ್ಧದ ಪರಿಣಾಮ ಮತ್ತು ಹಾರ್ಮುಝ್ ಜಲಸಂಧಿಯನ್ನು ಮುಚ್ಚಿರುವುದು ವಿಶ್ವ ಆರ್ಥಿಕತೆಯ...

ಕ್ಷೇತ್ರ ಮರುವಿಂಗಡಣೆ ವಿರುದ್ಧ ದಕ್ಷಿಣದ ರಾಜ್ಯಗಳ ಪಟ್ಟು: ಭವಿಷ್ಯದ ಮರುಚಿಂತನೆಗೆ ಇದುವೇ ಸೂಕ್ತ ಕಾಲ

ಲೋಕಸಭೆಯಲ್ಲಿ 131 ನೇ ಸಾಂವಿಧಾನಿಕ ತಿದ್ದುಪಡಿ ಮಸೂದೆಯನ್ನು ತಿರಸ್ಕರಿಸಿರುವುದು ಭಾರತದ ಪ್ರಜಾಪ್ರಭುತ್ವ ಪಥದಲ್ಲಿ ಮಹತ್ವದ ಕ್ಷಣವಾಗಿದೆ. ಇದು ಕೇವಲ ಶಾಸಕಾಂಗದ ಹಿನ್ನಡೆಯನ್ನು ಮಾತ್ರವಲ್ಲ, ಒಕ್ಕೂಟ ವ್ಯವಸ್ಥೆಯ ಸೂಕ್ಷ್ಮ ಸಮತೋಲನವನ್ನು ಹಾಳುಮಾಡುವ ಅಪಾಯವನ್ನುಂಟುಮಾಡುವ ಪ್ರಸ್ತಾಪಗಳ...

ಮೋದಿ ಸರ್ಕಾರದ ಯೂಟರ್ನ್ : ಜನಸಂಖ್ಯಾ ಸ್ಫೋಟದ ಕಳವಳದಿಂದ ಹೆಚ್ಚು ಜನಸಂಖ್ಯೆಯ ರಾಜ್ಯಗಳಿಗೆ ಗಿಫ್ಟ್ ಕೊಡುವವರೆಗೆ

ಭಾರತದ ಜನಸಂಖ್ಯೆಯ ಬಗ್ಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಅವರ ಸರ್ಕಾರ ನಿಜವಾಗಿಯೂ ಬಹಳ ಕಳವಳ ವ್ಯಕ್ತಪಡಿಸುತ್ತಿದೆ– ಅಥವಾ ಅವರು ನಮಗೆ ಆ ರೀತಿ ನಂಬುವಂತೆ ಮಾಡಿದ್ದಾರೆ. ಏಕೆಂದರೆ... 2019ರ ಸ್ವಾತಂತ್ರ್ಯ ದಿನಾಚರಣೆಯಂದು ಮೋದಿಯವರು,...

ದೇಶವನ್ನುದ್ದೇಶಿಸಿ ಮೋದಿ ಭಾಷಣ : ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆ

ಕ್ಷೇತ್ರ ಮರುವಿಂಗಡನೆಗೆ ಉದ್ದೇಶಿಸಿದ್ದ ಸಂವಿಧಾನದ 131ನೇ ತಿದ್ದುಪಡಿ ಮಸೂದೆಗೆ ಲೋಕಸಭೆಯಲ್ಲಿ ಸೋಲಾದ ಬೆನ್ನಲ್ಲೇ ಶನಿವಾರ (ಏ.18) ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಪ್ರತಿಪಕ್ಷಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ಸಂಸತ್ತಿನಲ್ಲಿ ವಿರೋಧ...