Homeಅಂತರಾಷ್ಟ್ರೀಯಸುಡಾನ್ ಬಿಕ್ಕಟ್ಟಿನ ಮೂಲವೇನು?

ಸುಡಾನ್ ಬಿಕ್ಕಟ್ಟಿನ ಮೂಲವೇನು?

- Advertisement -
- Advertisement -

ಏಪ್ರಿಲ್ 15, 2023ರಿಂದ ಸುಡಾನ್ ದೇಶವು- ರಾಜಧಾನಿ ಖಾರ್ಟೂಮ್ ಮತ್ತು ದರ್ಫರ್ ನಗರಗಳಲ್ಲಿ ಪ್ರಸ್ತುತ ಮಿಲಿಟರಿ ಆಡಳಿತದ ಪ್ರತಿಸ್ಪರ್ಧಿ ಬಣಗಳ ನಡುವಿನ ಹಿಂಸಾತ್ಮಕ ಘರ್ಷಣೆಗಳನ್ನು ಕಂಡಿದೆ. ರ್‍ಯಾಪಿಡ್ ಸಪೋರ್ಟ್ ಫೋರ್ಸಸ್ (ಆರ್‌ಎಸ್‌ಎಫ್) ಎಂಬ ಸೇನಾ ಘಟಕವು ಸರಕಾರದ ಪ್ರಮುಖ ನೆಲೆಗಳ ಮೇಲೆ ದಾಳಿ ಮಾಡುವುದರೊಂದಿಗೆ ಈ ಘರ್ಷಣೆ ಆರಂಭವಾಯಿತು. ಘರ್ಷಣೆಯಲ್ಲಿ ಈಗಾಗಲೇ ಐನೂರಕ್ಕೂ ಹೆಚ್ಚು ಮಂದಿ ಸತ್ತಿದ್ದಾರೆ. ಆರ್‌ಎಸ್‌ಎಫ್ ಘಟಕದ ನಾಯಕ ಮೊಹಮ್ಮದ್ ಹಮ್ದಾನ್ ದಗಾಲೊ ಮತ್ತು ಸೇನಾ ನಾಯಕ ಅಬ್ದೆಲ್ ಫತಾಹ್ ಅಲ್-ಬುರ್ಹಾನ್ ಅವರಿಬ್ಬರೂ- ತಾವು ಸೇನಾ ಮುಖ್ಯಸ್ಥರ ನಿವಾಸ, ಖಾರ್ಟೂಮ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ, ಸೇನಾ ಮುಖ್ಯ ಕಚೇರಿ, ಅಧ್ಯಕ್ಷೀಯ ಅರಮನೆ ಮುತ್ತು ಸುಡಾನ್ ಟಿವಿ ಮುಖ್ಯ ಕಚೇರಿ ಮುಂತಾದ ಸರಕಾರದ ಪ್ರಮುಖ ತಾಣಗಳನ್ನು ನಿಯಂತ್ರಿಸುತ್ತಿರುವುದಾಗಿ ಹೇಳಿಕೊಂಡಿದ್ದಾರೆ.

ಈ ಬಿಕ್ಕಟ್ಟು ಸುಡಾನಿನ ಕೆಲವು ವರ್ಷಗಳ ತೀವ್ರತರ ರಾಜಕೀಯ ಅಸ್ಥಿರತೆಯ ನಂತರ ಬಂದಿದೆ. ಈ ಅಸ್ಥಿರತೆಯು 2019ರಲ್ಲಿ ಹಿಂದಿನ 30 ವರ್ಷಗಳ ಕಾಲ ದೇಶದ ಆಡಳಿತ ನಡೆಸುತ್ತಿದ್ದ ಅಧ್ಯಕ್ಷ ಒಮರ್ ಅಲ್ ಬಶೀರ್ ಅವರ ಉಚ್ಚಾಟನೆ ಮಾಡಿದಾಗ ಆರಂಭವಾಯಿತು. ಅವರ ಆಡಳಿತದ ಕೊನೆಯು ಸಾಮೂಹಿಕ ಪ್ರತಿಭಟನೆಗಳಿಂದ ಗುರುತಿಸಲ್ಪಡುತ್ತದೆ. ಡಿಸೆಂಬರ್ 2018ರಲ್ಲಿ ಆರಂಭವಾದ ಪ್ರತಿಭಟನೆಗಳು ಹಲವಾರು ತಿಂಗಳುಗಳ ಕಾಲ ಮುಂದುವರಿದು, ಅವರ 30 ವರ್ಷಗಳ ಆಡಳಿತ ಕೊನೆಗೊಳಿಸುವ ಮತ್ತು ಪ್ರಜಾಸತ್ತಾತ್ಮಕ ಸುಧಾರಣೆಗಳನ್ನು ತರುವ ಬೇಡಿಕೆಗಳನ್ನು ಮುಂದಿಟ್ಟಿದವು. ಆರಂಭದಲ್ಲಿ ಈ ಪ್ರತಿಭಟನೆಗಳಿಗೆ ಕಿಡಿ ಹಚ್ಚಿದ್ದು ಏರುತ್ತಿದ್ದ ಆಹಾರ ಬೆಲೆಗಳು. ಆದರೆ, ನಂತರ ಇದು ವ್ಯಾಪಕವಾದ ಸರಕಾರ ವಿರೋಧಿ ಪ್ರಜಾಸತ್ತಾತ್ಮಕ ಆಂದೋಲನವಾಗಿ ಬೆಳೆಯಿತು.

ಒಮರ್ ಅಲ್ ಬಶೀರ್

ಅವರ ಉಚ್ಛಾಟನೆಯ ನಂತರ ಒಂದು ತಾತ್ಕಾಲಿಕವಾದ ನಾಗರಿಕ-ಸೇನಾ ಜಂಟಿ ಸರಕಾರದ ಸರಕಾರದ ಸ್ಥಾಪನೆಯಾಯಿತು. ಆದರೆ ನಂತರ ಅಕ್ಟೋಬರ್ 2021ರಲ್ಲಿ ಬುರ್ಹಾನ್ ಮತ್ತು ದಗಾಲೊ ನೇತೃತ್ವದಲ್ಲಿ ಕ್ರಾಂತಿ ನಡೆದು, ಸೇನೆಯು ಸಂಪೂರ್ಣ ಅಧಿಕಾರವನ್ನು ತನ್ನ ವಶಕ್ಕೆ ಪಡೆಯಿತು. ಮಿಲಿಟರಿ ಕೂಟವು ನಂತರ ಒಂದು ನಾಗರಿಕ ಸರಕಾರಕ್ಕೆ ಅಧಿಕಾರ ಬಿಟ್ಟುಕೊಡಲು ಒಪ್ಪಿತಾದರೂ, ದಗಾಲೊ ಮತ್ತು ಬುರ್ಹಾನ್ ನಡುವಿನ ಸಂಘರ್ಷದ ಮೇಲಾಟವು ಒಂದು ಔಪಚಾರಿಕ ಒಪ್ಪಂದವನ್ನು ವಿಳಂಬಗೊಳಿಸಿತು.

ಆರ್‌ಎಸ್‌ಎಫ್ ಪಡೆಗಳನ್ನು ಅಧಿಕೃತ ಸೇನೆಯೊಂದಿಗೆ ವಿಲೀನಗೊಳಿಸುವುದಕ್ಕೆ ಸಂಬಂಧಿಸಿ, ದಗಾಲೊ ಮತ್ತು ಬುರ್ಹಾನ್ ಮತ್ತೆಮತ್ತೆ ಘರ್ಷಣೆಗೆ ಇಳಿದಿದ್ದಾರೆ. ಆರ್‌ಎಸ್‌ಎಫ್ ಒಂದು ಅರೆ ಸೈನಿಕ ಮಿಲಿಟರಿ ಪಡೆಯಾಗಿದ್ದು, ದರ್ಫರ್ ಕದನದ ಸಮಯದಲ್ಲಿ ಸೇನೆಯ ಜೊತೆಗೆ ಹೋರಾಡಿತ್ತು. 2019ರಲ್ಲಿ ಒಮರ್ ಅಲ್ ಬಶೀರ್ ಉಚ್ಚಾಟನೆಗಾಗಿ ಆಂದೋಲನ ನಡೆಸುತ್ತಿದ್ದ ಪ್ರತಿಭಟನಾಕಾರರ ವಿರುದ್ಧ ಆರ್‌ಎಸ್‌ಎಫ್ ಪಡೆಗಳನ್ನು ಬಳಸಲಾಗುತ್ತಿತ್ತು. ಏಪ್ರಿಲ್ 11, 2023ರಲ್ಲಿ ದಗಾಲೊ ಆರ್‌ಎಸ್‌ಎಫ್ ಪಡೆಗಳನ್ನು ಮೆರೋವೆ ಮತ್ತು ಖಾರ್ಟೂಮ್ ಪ್ರದೇಶಗಳಲ್ಲಿ ನಿಯೋಜಿಸಿದರು. ಅವುಗಳನ್ನು ಹಿಂದೆ ಹೋಗುವಂತೆ ಬುರ್ಹಾನ್ ಅವರ ಪಡೆಗಳು ಆಗ್ರಹಿಸಿದಾಗ ಅವು ನಿರಾಕರಿಸಿದವು; ಇದರಿಂದ ಕದನ ಆರಂಭವಾಯಿತು. ಏಪ್ರಿಲ್ 13, 2023ರಲ್ಲಿ ಕಾದಾಟ ಉಲ್ಬಣಿಸಿತು.

ಹಿನ್ನೆಲೆ

ಸುಡಾನಿನಲ್ಲಿ ರಾಜಕೀಯ ತಳಮಳ ಈಗ ಕೆಲವು ವರ್ಷಗಳಿಂದ ಇದೆ. 2019ರಲ್ಲಿ ಸೇನೆಯು ಒಮರ್ ಅಲ್ ಬಶೀರ್ ಅವರನ್ನು ಕಿತ್ತೆಸೆದಾಗ ಒಂದು ತಾತ್ಕಾಲಿಕ ಸರಕಾರ ಮತ್ತು ಪ್ರಜಾಪ್ರಭುತ್ವದ ಹಾದಿಯ ಭರವಸೆ ನೀಡಿತ್ತು. ಆದರೆ, ಇತ್ತೀಚಿನ ಬೆಳವಣಿಗೆಗಳಲ್ಲಿ ಮಿಲಿಟರಿಯು ಅಧಿಕಾರವನ್ನು ಬಲಪಡಿಸಿಕೊಂಡು, ಸರಕಾರವನ್ನು ನೇರವಾಗಿ ನಿಯಂತ್ರಿಸುವುದು ಕಂಡುಬಂದಿದ್ದು, ಸುಡಾನಿನಲ್ಲಿ ಪ್ರಜಾಪ್ರಭುತ್ವದ ಭವಿಷ್ಯದ ಬಗ್ಗೆ ಆತಂಕ ಮೂಡಿಸಿದೆ. ಸರಕಾರದ ನೇರ ನಿಯಂತ್ರಣ ತೆಗೆದುಕೊಂಡ ಮೇಲೆ ಜನರಲ್ ಅಬ್ದೆಲ್ ಫತಾಹ್ ಅಲ್ ಬುರ್ಹಾನ್ ಸುದ್ದಿಗೋಷ್ಟಿಯೊಂದನ್ನು ಕರೆದು ತನ್ನ ಕಾರ್ಯಾಚರಣೆಯ ವಿವರಗಳನ್ನು ನೀಡಿದರು. ದೇಶವು ಅವ್ಯವಸ್ಥೆಗೆ ಧುಮುಕುವುದನ್ನು ತಡೆಯಲು ನಿಯಂತ್ರಣ ಅಗತ್ಯವಾಯಿತೆಂದು ಹೇಳಿಕೊಂಡ ಅವರು, ಒಂದು ತುರ್ತುಸ್ಥಿತಿ ಘೋಷಣೆ ಮಾಡಿದರು ಮತ್ತು ತಂತ್ರಜ್ಞರನ್ನು ಒಳಗೊಂಡ ಸರಕಾರವನ್ನು ರಚಿಸುವ ಭರವಸೆ ನೀಡಿದರು.

ಒಮರ್ ಅಲ್ ಬಶೀರ್ ಅವರನ್ನು ಕಿತ್ತು ಹಾಕಿದ್ದು ಸುಡಾನಿನ ಇತಿಹಾಸದಲ್ಲಿ ಒಂದು ಗಮನಾರ್ಹ ಕ್ಷಣ. ಆದರೆ, ಅಂದಿನಿಂದ ದೇಶವು ಕೋವಿಡ್-19 ಮತ್ತು 2020ರ ಒಂದು ವಿಫಲ ದಂಗೆ ಯತ್ನವೂ ಸೇರಿದಂತೆ ಹಲವಾರು ಬಿಕ್ಕಟ್ಟುಗಳನ್ನು ಎದುರಿಸುತ್ತಿದೆ. ಜೊತೆಗೆ ಖಾರ್ಟೂಮ್‌ನಲ್ಲಿ ಮಿಲಿಟರಿ ಪರ ಪ್ರತಿಭಟನೆಗಳು ಕೂಡಾ ನಡೆದಿದ್ದು, ಸೇನೆ ಮತ್ತು ನಾಗರಿಕ ಸರಕಾರದ ನಡುವಿನ ಉದ್ವಿಗ್ನತೆಯನ್ನು ಅದು ತೋರಿಸುತ್ತದೆ. ಹೆಮೆಟ್ಟಿ ಮತ್ತು ರಾಪಿಡ್ ಸಪೋರ್ಟ್ ಫೋರ್ಸಸ್ (ಆರ್‌ಎಸ್‌ಎಫ್) ಸುಡಾನಿನ ರಾಜಕೀಯದ ಎರಡು ಪ್ರಮುಖ ಬಣಗಳು. ಹೆಮೆಟ್ಟಿ ಕೂಡಾ ಒಂದು ಮಾಜಿ ಅರೆಸೈನಿಕ ಪಡೆಯಾಗಿದ್ಧು, ಒಮರ್ ಅಲ್ ಬಶೀರ್ ಪತನದ ನಂತರ ಅಧಿಕಾರಕ್ಕೆ ಏರಿತ್ತು. ಹೀಗಿದ್ದರೂ, ಆರ್‌ಎಸ್‌ಎಫ್ ಯುದ್ಧಾಪರಾಧದ ಆರೋಪಗಳನ್ನು ಎದುರಿಸುತ್ತಿದ್ದು, ಸುಡಾನಿನ ರಾಜಕೀಯದಲ್ಲಿ ಅದರ ಭವಿಷ್ಯದವು ಅನಿಶ್ಚಿತವಾಗಿದೆ.

ಇದನ್ನೂ ಓದಿ: ನ್ಯಾಯಾಂಗ ’ಸುಧಾರಣೆ’ಗಳ ವಿರುದ್ಧ ಪ್ರತಿಭಟಿಸುತ್ತಿರುವ ಇಸ್ರೇಲ್

ಸುಡಾನಿಗೆ ದೀರ್ಘಕಾಲದ ಸಂಘರ್ಷದ ಇತಿಹಾಸವಿದೆ. ಅಂತಾರಾಷ್ಟ್ರೀಯ ಹಣಕಾಸು ಸಂಸ್ಥೆಯ (ಐಎಂಎಫ್) ಜೊತೆಗೆ ಅದರ ಸಂಬಂಧದಲ್ಲಾದ ಇತ್ತೀಚಿನ ಬದಲಾವಣೆಗಳು ಪರಿಸ್ಥಿತಿಯನ್ನು ಇನ್ನಷ್ಟು ಸಂಕೀರ್ಣಗೊಳಿಸಿವೆ. ಸುಡಾನ್ ಸಾಲಮನ್ನಾ ಪಡೆದು, ಹೊಸ ಸಾಲಗಳಿಗೆ ಅರ್ಹವಾಗಿದ್ದರೂ, ಐಎಂಎಫ್ ಈಗ ಸಾಲ ಮತ್ತು ನೆರವನ್ನು ಅಮಾನತಿನಲ್ಲಿ ಇರಿಸಿದ್ದು, ದೇಶದ ಮೇಲೆ ಗಮನಾರ್ಹ ಪರಿಣಾಮ ಬೀರಿದೆ. ಹೆಚ್ಚುವರಿಯಾಗಿ ಹೊಸ ಸರಕಾರವು ಅಭಿವೃದ್ಧಿ ಸಾಲ ಪಡೆಯುವ ಯೋಜನೆ ಹೊಂದಿದ್ದರೂ, ದೇಶದ ಸಂಘರ್ಷದ ಇತಿಹಾಸವು ಅದರ ಪ್ರಯತ್ನವನ್ನು ಇನ್ನಷ್ಟು ಜಟಿಲಗೊಳಿಸಬಹುದು.

ಸುಡಾನಿನಲ್ಲಿ ಸೇನೆಯು ಅಷ್ಟೊಂದು ಪ್ರಬಲವಾಗಿರುವುದು ಏಕೆ?

’ಭಯೋತ್ಪಾದನೆ ವಿರುದ್ಧ ಯುದ್ಧ’ ಆರಂಭವಾದಾಗ ಹಲವಾರು ಪಾಶ್ಚಿಮಾತ್ಯ ಶಕ್ತಿಗಳು ಉತ್ತರ ಆಫ್ರಿಕಾದ ಹಲವಾರು ಸರಕಾರಗಳ ಜೊತೆ ಸೇನಾ ಸಂಬಂಧಗಳನ್ನು ಸ್ಥಾಪಿಸಿದವು. ಇದು ನಾಗರಿಕ ಸರಕಾರಗಳು ಮತ್ತು ಸೇನೆಗಳ ನಡುವೆ ಗಮನಾರ್ಹವಾದ ಅಧಿಕಾರದ ಅಸಮತೋಲನ ಉಂಟುಮಾಡಿತು. ಹಿಂದಿನಿಂದಲೂ ಇಲ್ಲಿ ನಾಗರಿಕ ಸರಕಾರಗಳು ದುರ್ಬಲವಾಗಿದ್ದು, ಅವುಗಳನ್ನು ವಿದೇಶಿ ಸರಕಾರಗಳು ಬಳಸಿಕೊಂಡುಬಂದಿವೆ. ಸೇನೆಗಳಿಗೆ ಹಣ ಮತ್ತು ಕಣ್ಗಾವಲು ಸಾಧನಗಳು ಸಿಗುತ್ತಿವೆ. ಈ ಅಸಮತೋಲನವು ಹಲವಾರು ಆಫ್ರಿಕನ್ ದೇಶಗಳಲ್ಲಿ ಮತ್ತೆಮತ್ತೆ ಸೇನಾದಂಗೆಗಳಿಗೆ ಕಾರಣವಾಗಿ ಸೇನೆಗಳು ನಾಗರಿಕ ಸರಕಾರಗಳನ್ನು ಉರುಳಿಸುವುದಕ್ಕೆ ಕಾರಣವಾಗಿದೆ.

ತಾವು ರಾಜಕೀಯ ಬಿಕ್ಕಟ್ಟಿಗೆ ಸ್ಪಂದಿಸುತ್ತಿರುವುದಾಗಿಯೂ, ಶೀಘ್ರದಲ್ಲೇ ನಾಗರಿಕ ಸರಕಾರವನ್ನು ಮರಳಿಸಲಾಗುವುದು ಎಂದು ಮಿಲಿಟರಿ ಸರಕಾರಗಳು ಯಾವಾಗಲೂ ಹೇಳಿಕೊಳ್ಳುತ್ತವೆ. ಆದರೆ, ಯಾವತ್ತೂ ಸರಕಾರದ ಎರಡು ಅಂಗಗಳ ನಡುವೆ ಹೆಚ್ಚಾಗಿ ಉದ್ವಿಗ್ನತೆ ಉಂಟಾಗುತ್ತಿರುತ್ತವೆ. ಜಗತ್ತಿನಾದ್ಯಂತ ಖಾಸಗಿ ಮಿಲಿಟರಿ ಪಡೆಗಳು ಇಲ್ಲಿ ಅಸ್ತಿತ್ವದಲ್ಲಿ ಇರುವುದು ಪರಿಸ್ಥಿತಿಯನ್ನು ಇನ್ನಷ್ಟು ಬಿಗಡಾಯಿಸಿದೆ. ಸಂಘರ್ಷದ ಪ್ರದೇಶದಿಂದ ಮಿಲಿಟರಿಗಳು ಹಿಂತೆಗೆದಾಗ ಇವು ಪ್ರವೇಶಿಸಿ, ಆಗಲೇ ಇರುವ ಉದ್ವಿಗ್ನತೆ ಇನ್ನಷ್ಟು ಬಿಗಡಾಯಿಸುವಂತೆ ಮಾಡುತ್ತವೆ.

ಆಫ್ರಿಕಾ- ನಿರ್ದಿಷ್ಟವಾಗಿ ಸುಡಾನ್ ಈ ಪ್ರಕ್ರಿಯೆಗೆ ಮತ್ತೆಮತ್ತೆ ಗುರಿಯಾಗಿದೆ. ಶೀತಲ ಸಮರದ ನಂತರದ ವರ್ಷಗಳಲ್ಲಿ ಆಫ್ರಿಕಾವು ಶಸ್ತ್ರಾಸ್ತ್ರ ಮಾರಾಟ ಜಾಲಗಳ ಗುರಿಯಾಗಿದ್ದು, ಖಾಸಗಿ ಸೇನೆಗಳ ಜೊತೆಗೆ ಬಂಡುಕೋರ ಗುಂಪುಗಳು ಮತ್ತು ಸರಕಾರಗಳೆಲ್ಲವೂ ಈ ವ್ಯಾಪಾರದಲ್ಲಿ ತೊಡಗಿಕೊಂಡಿವೆ. ಸುಡಾನ್ ನಿರ್ದಿಷ್ಟವಾಗಿ ಮತ್ತು ವಿಭಜನೆಯ ನಂತರ ದಕ್ಷಿಣ ಸುಡಾನ್ ವಿಶೇಷವಾಗಿ ಇಂತಹ ಹಲವಾರು ಸಂಘರ್ಷಗಳನ್ನು ಕಂಡಿದೆ.

ಸುಡಾನಿನಲ್ಲಿ 2019ರಲ್ಲಿ ತಳಮಟ್ಟದ ಪ್ರಜಾಸತ್ತಾತ್ಮಕ ಆಂದೋಲನವು ಉಂಟಾಗಿತ್ತು. ಆದರೆ, ಇತ್ತೀಚಿನ ಬೆಳವಣಿಗೆಗಳು ಅದನ್ನು ಬುಡಮೇಲು ಮಾಡಿವೆ. ರಾಪಿಡ್ ಸಪೋರ್ಟ್ ಫೋರ್ಸಸ್‌ನ ಭವಿಷ್ಯದ ಕುರಿತ ಅನಿಶ್ಚಿತತೆ ಮತ್ತು ಅದರ ಮೇಲೆ ಇರುವ ಯುದ್ಧಾಪರಾಧಗಳ ಆರೋಪವು ಇತ್ತೀಚೆಗೆ ಬುರ್ಹಾನ್ ಅಧಿಕಾರ ಕಿತ್ತುಕೊಂಡಿರುವುದರಲ್ಲಿ ಅದು ವಹಿಸಿರಬಹುದಾದ ಪಾತ್ರದ ಬಗ್ಗೆ ಊಹಾಪೋಹಗಳಿಗೆ ಕಾರಣವಾಗಿದೆ. ಸುಡಾನಿನಲ್ಲಿ ಸಂಘರ್ಷದ ಮತ್ತು ಅಧಿಕಾರದ ಸಂಚಲನೆಯ ಇತಿಹಾಸವು ಅಲ್ಲಿ ಅಂತಾರಾಷ್ಟ್ರೀಯ ನೆರವಿನ ಮತ್ತು ಸುಡಾನ್ ಪ್ರಜಾಪ್ರಭುತ್ವಕ್ಕೆ ಮರಳುವಲ್ಲಿ ಭಾಗವಹಿಸುವಿಕೆಯ ಅಗತ್ಯವನ್ನು ಒತ್ತಿಹೇಳುತ್ತದೆ. ಪಾಶ್ಚಿಮಾತ್ಯ ಶಕ್ತಿಗಳು ಮತ್ತು ಅಂತಾರಾಷ್ಟ್ರೀಯ ಸಮುದಾಯಗಳು, ಸೇನಾ ಸರಕಾರಗಳು ಅಥವಾ ಖಾಸಗಿ ಮಿಲಿಟರಿ ಪಡೆಗಳನ್ನು ಬೆಂಬಲಿಸುವ ಮೂಲಕ ಈ ರಾಜಕೀಯ ಸಂಚಲನವನ್ನು ಬಿಗಡಾಯಿಸುವುದರಿಂದ ದೂರ ಉಳಿಯುವುದು ನಿರ್ಣಾಯಕ. ಬದಲಾಗಿ ಅವು ಪ್ರಜಾಸತ್ತಾತ್ಮಕ ಮತ್ತು ನಾಗರಿಕ ಸಮಾಜದ ಸಂಸ್ಥೆಗಳ ಬಲಪಡಿಸುವಿಕೆಗೆ ಆದ್ಯತೆ ನೀಡಬೇಕು.

ಭಾರತೀಯರ ಬಗ್ಗೆ ಆತಂಕ

ಸುಡಾನಿನಲ್ಲಿ ಸಿಕ್ಕಿಬಿದ್ದಿರುವ ಭಾರತೀಯರ ಸುರಕ್ಷತೆ ಕುರಿತು ಭಾರತದ ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರು ಸೌದಿ ಅರೇಬಿಯಾ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್ ಅಧಿಕಾರಿಗಳ ಜೊತೆಗೆ ಮಾತನಾಡಿದ್ದಾರೆ. ಒಬ್ಬ ಭಾರತೀಯ ನಾಗರಿಕ ಮೃತಪಟ್ಟಿರುವುದಾಗಿ ಏಪ್ರಿಲ್ 16, 2023ರಂದು ಸುಡಾನಿನಲ್ಲಿರುವ ಭಾರತೀಯ ದೂತಾವಾಸವು ದೃಢೀಕರಿಸಿದ್ದು, ಅಲ್ಲೊಂದು ನಿಯಂತ್ರಣ ಕೇಂದ್ರವನ್ನು ಸ್ಥಾಪಿಸಿ, ಭಾರತೀಯರಿಗೆ ಸುರಕ್ಷಾ ಸೂಚನೆಗಳನ್ನು ಹೊರಡಿಸಿದೆ. ಸಿದ್ದರಾಮಯ್ಯ ಅವರು ಟ್ವಿಟ್ಟರಿನಲ್ಲಿ, ಕರ್ನಾಟಕದ ಹಕ್ಕಿಪಿಕ್ಕಿ ಆದಿವಾಸಿ ಸಮುದಾಯದ 31 ಮಂದಿಯನ್ನು ಸುರಕ್ಷಿತವಾಗಿ ಮರಳಿ ತರುವಂತೆ ಒತ್ತಾಯಿಸಿದ್ದಾರೆ. ಆದರೆ ಜೈಶಂಕರ್ ಮಾತ್ರ ಸಿದ್ದರಾಮಯ್ಯ ಅವರು ವಿಷಯವನ್ನು ರಾಜಕೀಯಗೊಳಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಇದು ರಾಜಕೀಯ ಆರೋಪ ಪ್ರತ್ಯಾರೋಪಗಳಿಗೆ ಕಾರಣವಾಗಿತ್ತು. 24, ಏಪ್ರಿಲ್ 2023ರಂದು ಭಾರತೀಯರ ಒಂದು ತಂಡವನ್ನು ರಕ್ಷಿಸಿ ಕರೆತಂದಿರುವ ಬಗ್ಗೆ ಜೈಶಂಕರ್ ಅವರು ಮಾಡಿದ ಒಂದು ಟ್ವೀಟ್‌ಗೆ ಸಿದ್ದರಾಮಯ್ಯ ಧನ್ಯವಾದ ಸಲ್ಲಿಸಿದ್ದರು.

ಕನ್ನಡಕ್ಕೆ: ನಿಖಿಲ್ ಕೋಲ್ಪೆ

ಕಿಶೋರ್ ಗೋವಿಂದ

ಕಿಶೋರ್ ಗೋವಿಂದ
ಬೆಂಗಳೂರಿನಲ್ಲಿ ನೆಲೆಸಿರುವ ಕಿಶೋರ್ ಅವರು ಗಣಿತಶಾಸ್ತ್ರಜ್ಞರು. ಜಾಗತಿಕ ರಾಜಕೀಯ ಆಗುಹೋಗುಗಳನ್ನು ನಿಕಟವಾಗಿ ಗಮನಿಸುವ ಅವರು ಪತ್ರಿಕೆಗಳಿಗೆ ಲೇಖನಗಳನ್ನು ಬರೆದಿದ್ದಾರೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕುಸಿಯುವುದರಲ್ಲಿ ರೂಪಾಯಿ ಮತ್ತು ಬಿಜೆಪಿ ವರ್ಚಸ್ಸಿನ ನಡುವೆ ತೀವ್ರ ಪೈಪೋಟಿಯಿದೆ : ಅಖಿಲೇಶ್ ಯಾದವ್ ವ್ಯಂಗ್ಯ

ಕುಸಿಯುವುದರಲ್ಲಿ ರೂಪಾಯಿ ಮತ್ತು ಬಿಜೆಪಿ ವರ್ಚಸ್ಸಿನ ನಡುವೆ ತೀವ್ರ ಪೈಪೋಟಿ ನಡೆಯುತ್ತಿದೆ ಎಂದು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ವ್ಯಂಗ್ಯವಾಡಿದ್ದಾರೆ. ಬಿಜೆಪಿ ನಾಯಕರು ಹಾಗೂ ಅವರ ಸಹವರ್ತಿಗಳ ಭ್ರಷ್ಟಾಚಾರ ಮತ್ತು ದುರ್ನಡತೆಯ ಪ್ರಕರಣಗಳು...

ಅಂತರ್ಧರ್ಮೀಯ ‘ಲಿವ್-ಇನ್’ ಸಂಬಂಧ ಅಪರಾಧವಲ್ಲ: ಅಲಹಾಬಾದ್ ಹೈಕೋರ್ಟ್

ಅಂತರ್ಧರ್ಮೀಯ ಲಿವ್-ಇನ್ ಸಂಬಂಧವನ್ನು ನಿಷೇಧಿಸಲಾಗಿಲ್ಲ ಅಥವಾ ಯಾವುದೇ ಕಾನೂನಿನ ಅಡಿಯಲ್ಲಿ ಅಪರಾಧವಲ್ಲಎಂದು ತೀರ್ಪು ನೀಡಿರುವ ಅಲಹಾಬಾದ್ ಹೈಕೋರ್ಟ್, ಮಹಿಳೆಯ ಕುಟುಂಬದಿಂದ ಬೆದರಿಕೆ ಎದುರಿಸುತ್ತಿರುವ ದಂಪತಿಗಳಿಗೆ ರಕ್ಷಣೆ ನೀಡಿದೆ. ಸೋನ್‌ಭದ್ರಾದ ಕಾಜಲ್ ಪ್ರಜಾಪತಿ ಮತ್ತು ಅವರ...

‘ವೇತನ ಸಹಿತ ಪಿತೃತ್ವ ರಜೆಯನ್ನು ಕಾನೂನುಬದ್ಧಗೊಳಿಸಬೇಕು’; ರಾಜ್ಯಸಭೆಯಲ್ಲಿ ಎಎಪಿ ಸಂಸದ ರಾಘವ್ ಚಡ್ಡಾ ಒತ್ತಾಯ

ಭಾರತದಲ್ಲಿ ವೇತನ ಸಹಿತ ಪಿತೃತ್ವ ರಜೆಯನ್ನು ಕಾನೂನುಬದ್ಧ ಹಕ್ಕನ್ನಾಗಿ ಮಾಡಲು, ಹಂಚಿಕೆಯ ಆರೈಕೆ ಜವಾಬ್ದಾರಿಗಳನ್ನು ಒತ್ತಿಹೇಳಲು ಕಾನೂನನ್ನು ಜಾರಿಗೆ ತರಬೇಕೆಂದು ಎಎಪಿ ಸಂಸದ ರಾಘವ್ ಚಡ್ಡಾ ಒತ್ತಾಯಿಸಿದ್ದಾರೆ. ರಾಜ್ಯಸಭೆಯಲ್ಲಿ ಮಾತನಾಡಿದ ಅವರು, ತಂದೆ ಉದ್ಯೋಗ...

ಬಿಜೆಪಿ ಇತರ ರಾಜ್ಯಗಳ ಅಕ್ರಮ ಮತದಾರರನ್ನು ಸೇರಿಸುತ್ತಿದೆ : ಮಮತಾ ಬ್ಯಾನರ್ಜಿ ಆರೋಪ

ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮಂಗಳವಾರ (ಮಾ.31) ಬಿಜೆಪಿ ಬಿಹಾರ, ರಾಜಸ್ಥಾನ, ಹರಿಯಾಣ ಮತ್ತು ಉತ್ತರ ಪ್ರದೇಶದ ಅಕ್ರಮ ಮತದಾರರನ್ನು ರಾಜ್ಯದ ಮತದಾರರ ಪಟ್ಟಿಯಲ್ಲಿ ಸೇರಿಸಲು ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದರು. ಪಶ್ಚಿಮ...

ಬಿಹಾರ: ವಿವಾಹಿತ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರಕ್ಕೆ ಯತ್ನ; ಹಲ್ಲೆ ಮಾಡಿ ವಿಡಿಯೋ ಹರಿಬಿಟ್ಟ ದುಷ್ಟರು: ಇಬ್ಬರ ಬಂಧನ 

ಬಿಹಾರದ ನಳಂದ ಜಿಲ್ಲೆಯಲ್ಲಿ ನಾಚಿಕೆಗೇಡಿನ ಮತ್ತು ಆತಂಕಕಾರಿ ಘಟನೆಯೊಂದು ಬೆಳಕಿಗೆ ಬಂದಿದೆ. ನೂರ್ಸರಾಯ್ ಪೊಲೀಸ್ ಠಾಣೆ ವ್ಯಾಪ್ತಿಯ ಹಳ್ಳಿಯೊಂದರಲ್ಲಿ ಮೂವರು ಪುರುಷರು ವಿವಾಹಿತ ಮಹಿಳೆಯ ಮೇಲೆ ಸಾರ್ವಜನಿಕವಾಗಿ ಸಾಮೂಹಿಕ ಅತ್ಯಾಚಾರಕ್ಕೆ ಯತ್ನಿಸಿದ್ದಾರೆ. ದೌರ್ಜನ್ಯ ವಿರೋಧಿಸಿ...

‘ಹಿಂದುತ್ವ ಉಗ್ರವಾದವನ್ನು ಏಕೆ ನಿರ್ಲಕ್ಷಿಸಬೇಕು..?’; ಸಂಸತ್ತಿನಲ್ಲಿ ಪ್ರಶ್ನಿಸಿದ ರುಹುಲ್ಲಾ ಮೆಹದಿ

"ದೇಶದಲ್ಲಿ ಹೆಚ್ಚುತ್ತಿರುವ ಬಲಪಂಥೀಯ ಉಗ್ರವಾದವನ್ನು ನಿರ್ಲಕ್ಷಿಸಿ ಎಡಪಂಥೀಯ ಬೆದರಿಕೆಗಳ ಮೇಲೆ ಮಾತ್ರ ಗಮನಹರಿಸಲಾಗುತ್ತಿದೆ" ಎಂದು ಲೋಕಸಭೆಯಲ್ಲಿ ಜಮ್ಮು-ಕಾಶ್ಮೀರದ ಶ್ರೀನಗರ ಸಂಸದ ಆಗಾ ಸೈಯದ್ ರುಹುಲ್ಲಾ ಮೆಹದಿ ನರೇಂದ್ರ ಮೋದಿ ನೇತೃತ್ವದ ಸರ್ಕಾರದ ಮೇಲೆ...

ವಿರೋಧದ ನಡುವೆಯೂ ಟ್ರಾನ್ಸ್‌ಜೆಂಡರ್ ತಿದ್ದುಪಡಿ ಮಸೂದೆಗೆ ರಾಷ್ಟ್ರಪತಿ ಅಂಕಿತ

ತೀವ್ರ ವಿರೋಧಗಳ ನಡುವೆಯೂ ಟ್ರಾನ್ಸ್‌ಜೆಂಡರ್‌ ವ್ಯಕ್ತಿಗಳ (ಹಕ್ಕುಗಳ ರಕ್ಷಣೆ) ತಿದ್ದುಪಡಿ ಮಸೂದೆಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಅಂಕಿತ ಹಾಕಿದ್ದಾರೆ ಎಂದು ಕೇಂದ್ರ ಕಾನೂನು ಸಚಿವಾಲಯ ಸೋಮವಾರ (ಮಾ. 30) ಗೆಜೆಟ್ ಅಧಿಸೂಚನೆಯಲ್ಲಿ...

ಮಶಾದ್ ವಿಮಾನ ನಿಲ್ದಾಣದ ಮೇಲೆ ಅಮೆರಿಕ ದಾಳಿ: ದೆಹಲಿಗೆ ತೆರಳುತ್ತಿದ್ದ ನೆರವು ವಿಮಾನಕ್ಕೆ ಡಿಕ್ಕಿ: ಇದು ‘ಯುದ್ಧ ಅಪರಾಧ’ ಎಂದ ಇರಾನ್ 

ಇರಾನ್‌ನ ಮಶಾದ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅಮೆರಿಕದ ವಾಯುದಾಳಿಯ ಸಂದರ್ಭದಲ್ಲಿ ನವದೆಹಲಿಗೆ ಹಾರಲು ನಿಗದಿಯಾಗಿದ್ದ ಮಹಾನ್ ಏರ್ ವಿಮಾನವು ಡಿಕ್ಕಿ ಹೊಡೆದಿದೆ ಎಂದು ವರದಿಯಾಗಿದೆ.  ಈ ವಿಮಾನವು ಔಷಧಿಗಳು ಸೇರಿದಂತೆ ಮಾನವೀಯ ನೆರವು ಸಾಗಣೆಗೆ...

ಪ್ಯಾಲೆಸ್ತೀನಿಯರಿಗೆ ಮರಣದಂಡನೆ ವಿಧಿಸುವ ಕಾನೂನು ಅಂಗೀಕಾರ : ಇಸ್ರೇಲ್ ಕ್ರಮಕ್ಕೆ ಜಾಗತಿಕ ಖಂಡನೆ

ಮಾರಣಾಂತಿಕ ದಾಳಿಗಳ ಅಪರಾಧ ಸಾಬೀತಾದ ಪ್ಯಾಲೆಸ್ತೀನಿಯರಿಗೆ ಮರಣದಂಡನೆಯನ್ನು ಕಡ್ಡಾಯ ಶಿಕ್ಷೆಯನ್ನಾಗಿ ನಿಗದಿಪಡಿಸಿದ ಇಸ್ರೇಲ್‌ನ ಹೊಸ ಕಾನೂನನ್ನು ಮಾನವ ಹಕ್ಕುಗಳ ಸಂಘಟನೆಗಳು, ವಿವಿಧ ರಾಷ್ಟ್ರಗಳ ನಾಯಕರು ಸೇರಿದಂತೆ ಜಾಗತಿಕ ಸಮುಯದಾಯ ತೀವ್ರವಾಗಿ ವಿರೋಧಿಸಿದೆ. ಈ...

ಬರೇಲಿ: ಮುಸ್ಲಿಂ ಯುವಕರ ಮೇಲೆ ಹಲ್ಲೆ, ಹಿಂದುತ್ವ ಘೋಷಣೆಗಳನ್ನು ಪಠಿಸುವಂತೆ ಬಲವಂತ; ಪ್ರಮುಖ ಆರೋಪಿ ಬಂಧನ

ಉತ್ತರ ಪ್ರದೇಶದ ಬರೇಲಿಯಲ್ಲಿ ಮುಸ್ಲಿಂ ಯುವಕನ ಮೇಲೆ ಹಲ್ಲೆ, ಅವಮಾನ ಮತ್ತು ಹಿಂದುತ್ವ ಘೋಷಣೆಗಳನ್ನು ಪಠಿಸುವಂತೆ ಒತ್ತಾಯಿಸಲಾಗಿದೆ ಎಂದು ಆರೋಪಿಸಲಾಗಿದೆ. ಪ್ರಮುಖ ಆರೋಪಿ ರಿಷಭ್ ಠಾಕೂರ್ ನನ್ನು ಪೊಲೀಸರು ಬಂಧಿಸಿದ್ದು, ಮತ್ತಷ್ಟು ಬಂಧನಗಳು ನಡೆಯುವ...