Homeಅಂತರಾಷ್ಟ್ರೀಯನ್ಯಾಯಾಂಗ ’ಸುಧಾರಣೆ’ಗಳ ವಿರುದ್ಧ ಪ್ರತಿಭಟಿಸುತ್ತಿರುವ ಇಸ್ರೇಲ್

ನ್ಯಾಯಾಂಗ ’ಸುಧಾರಣೆ’ಗಳ ವಿರುದ್ಧ ಪ್ರತಿಭಟಿಸುತ್ತಿರುವ ಇಸ್ರೇಲ್

- Advertisement -
- Advertisement -

ಜನವರಿ 7 2023ರಂದು ಇಸ್ರೇಲಿನಾದ್ಯಂತ ಪ್ರತಿಭಟನೆಗಳು ಭುಗಿಲೆದ್ದು, ರಾಜಧಾನಿ ಟೆಲ್ ಅವೀವ್ ಮತ್ತು ಇತರ ನಗರಗಳ ಜನರು ಬೀದಿಗಿಳಿದರು. ಈಗ ಈ ಪ್ರತಿಭಟನೆ 11ನೇ ವಾರಕ್ಕೆ ಕಾಲಿಟ್ಟಿದೆ. ನ್ಯಾಯಾಂಗ ಸುಧಾರಣೆ ಎಂದು ಸರಕಾರ ಹೇಳುತ್ತಿರುವ, ಆದರೆ ಇಸ್ರೇಲಿನಲ್ಲಿ ಸರ್ವಾಧಿಕಾರದ ಕಡೆಗೆ ಇನ್ನೊಂದು ಹೆಜ್ಜೆ ಇದೆಂದು ಬಹುಜನರು ಭಾವಿಸುತ್ತಿರುವ ಸಂವಿಧಾನದ ತಿದ್ದುಪಡಿಯ ವಿರುದ್ಧ ಈ ಪ್ರತಿಭಟನೆಗಳು ನಡೆಯುತ್ತಿದ್ದವು. ಸುಧಾರಣೆ ಎಂದು ಹೇಳಲಾಗುತ್ತಿರುವ ಈ ಕ್ರಮವು 1992ರ ಆಹ್ರೋನ್ ಬರಾಕ್ ಸಾಂವಿಧಾನಿಕ ತಿದ್ದುಪಡಿಯನ್ನು ಇಲ್ಲವಾಗಿಸಿ, ಇಸ್ರೇಲಿ ಸುಪ್ರೀಂಕೋರ್ಟಿನ ಅಧಿಕಾರವನ್ನು ಸೀಮಿತಗೊಳಿಸುತ್ತದೆ. ಈ ಸುಧಾರಣೆಗಳು (ಇವುಗಳನ್ನು ಮುಂದೆ ಸುಧಾರಣೆಗಳ ಬದಲು ಬದಲಾವಣೆಗಳು ಎಂದೇ ಬರೆಯಲಾಗುವುದು) ನೇಮಕಾತಿ ಮತ್ತು ಸಾಂವಿಧಾನಿಕ ಅಧಿಕಾರಗಳಲ್ಲಿ ಶಾಸಕಾಂಗಕ್ಕೆ ನ್ಯಾಯಾಂಗಕ್ಕೂ ಮೀರಿದ ಹೆಚ್ಚಿನ ಮಹತ್ವ ನೀಡುವುದು, ಅಲ್ಲದೇ ನ್ಯಾಯಾಂಗದ ಪುನರ್‌ವಿಮರ್ಶೆಯ ಅವಕಾಶವನ್ನು ಸೀಮಿತಗೊಳಿಸುವುದು.

ಪ್ರಸ್ತಾಪಿತ ಈ ಬದಲಾವಣೆಗಳು ವ್ಯಾಪಕವಾದ ವಿರೋಧವನ್ನು ಎದುರಿಸುತ್ತಿವೆ. ಈತನಕ 150ಕ್ಕೂ ಹೆಚ್ಚು ಪ್ರತಿಭಟನಾಕಾರರನ್ನು ಬಂಧಿಸಲಾಗಿದೆ. ಪ್ರತಿಭಟನೆಯು ಎಡಪಂಥೀಯರಿಂದ ಹಿಡಿದು ಬಲಪಂಥೀಯರ ತನಕ ಹಲವು ವಲಯಗಳಿಂದ ಬೆಂಬಲ ಪಡೆದಿದೆ. ಆಡಳಿತ ವ್ಯವಸ್ಥೆಯ ಒಳಗೇ ಹಲವು ಧ್ವನಿಗಳು ಈ ಬದಲಾವಣೆಗಳನ್ನು ವಿರೋಧಿಸಿವೆ. ಆಡಳಿತ ವ್ಯವಸ್ಥೆ ಮತ್ತು ಸೇನೆಯ ಹಲವಾರು ಸದಸ್ಯರು ಈ ಬದಲಾವಣೆಗಳನ್ನು ಕಾನೂನು ಆಡಳಿತದ ಅಂತ್ಯವೆಂದೇ ಭಾವಿಸಿದ್ದಾರೆ. ಪ್ರತಿಪಕ್ಷಗಳ ಸದಸ್ಯರು ಇದನ್ನು ಪ್ರಜಾಪ್ರಭುತ್ವಕ್ಕೆ ಬಿದ್ದಿರುವ ದೊಡ್ಡ ಹೊಡೆತ ಎಂದೇ ಟೀಕಿಸಿದ್ದಾರೆ. ರಾಜಕೀಯದ ಎಲ್ಲಾ ಬಣ್ಣಗಳ ಜನರು ಈ ಬದಲಾವಣೆಗಳನ್ನು ವಿರೋಧಿಸಿದ್ದಾರೆ. ಪ್ರತಿಭಟನೆಗಳು ಮತ್ತು ಈ ಸಾಂವಿಧಾನಿಕ ಬದಲಾವಣೆಗಳ ಹರವು ಆರ್ಥಿಕ ಅಭದ್ರತೆ ಮತ್ತು ಅಸ್ಥಿರತೆಗೂ ಕಾರಣವಾಗಿವೆ.

ಕೆಸ್ತೆನ್‌ಬಾಮ್ ಸಿದ್ಧಾಂತ

ಈ ಸಾಂವಿಧಾನಿಕ ಬದಲಾವಣೆಗಳ ಮೂಲ ಉದ್ದೇಶವೆಂದರೆ, 1992ರ ಸಾಂವಿಧಾನಿಕ ಕ್ರಾಂತಿಯೆಂದು ಕರೆಯಲಾಗುವ ಸುಪ್ರೀಂ ಕೋರ್ಟಿನ ನ್ಯಾಯಾಧೀಶ ಆಹ್ರೋನ್ ಬರಾಕ್ ಅವರ ನೇತೃತ್ವದಲ್ಲಿ ನಡೆದ ತಿದ್ದುಪಡಿಯನ್ನು ಇಲ್ಲವಾಗಿಸುವುದು. ಅವರೇ ಕೆಸ್ತೆನ್‌ಬಾಮ್ ಸಿದ್ಧಾಂತವನ್ನು ರೂಪಿಸಿದವರು. ಅದರ ಪ್ರಕಾರ ಮಾನವ ಹಕ್ಕುಗಳ ತತ್ವಗಳೇ ವೈಯಕ್ತಿಕ ಕಾನೂನಿನ ನಿರ್ದೇಶಕ ತತ್ವಗಳಾಗಿರಬೇಕು.

ಆಹ್ರೋನ್ ಬರಾಕ್

ಆದರೆ, ಇದು ನ್ಯಾಯಾಧೀಶರಿಗೆ ಅತಿಯಾದ ಅಧಿಕಾರವನ್ನು ಕೊಡುತ್ತದೆ ಎಂದು ಟೀಕಿಸಲಾಗಿತ್ತು. ನ್ಯಾಯಾಧೀಶರು ಇಲ್ಲಿ ಪ್ರಮುಖವಾಗುವುದರಿಂದ, ಅವರು ಒಂದು ಕಾನೂನು ಖಟ್ಲೆಯಲ್ಲಿ ಆ ತನ್ನ ನ್ಯಾಯದ ವೈಯಕ್ತಿಕ ತಿಳಿವಳಿಕೆಯ ಆಧಾರದಲ್ಲಿ ತೀರ್ಪು ನೀಡುತ್ತಾರೆ ಮತ್ತು ಈ ನ್ಯಾಯದ ವ್ಯಾಖ್ಯಾನವು ಕಾನೂನು ವಿಷಯದಲ್ಲಿ ಅನಿಶ್ಚಿತತೆಯನ್ನು ಉಂಟುಮಾಡಬಹುದು ಎಂದು ವಿಮರ್ಶಿಸಲಾಗಿತ್ತು. ಪ್ರಸ್ತಾಪಿತ ಬದಲಾವಣೆಯು ಈ ಅಧಿಕಾರವನ್ನು ಮಿತಿಗೊಳಿಸುವ ಉದ್ದೇಶ ಹೊಂದಿದೆ ಎಂದು ಸರಕಾರ ಹೇಳಿದರೆ, ಆದರೆ ಈ ಬದಲಾವಣೆಯ ಟೀಕಾಕಾರರು ಇದು ಪ್ರಜಾಪ್ರಭುತ್ವಕ್ಕೆ ಒಂದು ಹಿನ್ನಡೆಯೆಂದು ಹೇಳುತ್ತಾರೆ. ಇಸ್ರೇಲ್‌ನಲ್ಲಿ ಒಂದು ಸ್ಥಿರವಾದ ಸರ್ಕಾರವನ್ನು ಸ್ಥಾಪಿಸಲು ಒದ್ದಾಡುತ್ತಿರುವ ಪರಿಸ್ಥಿತಿಯಲ್ಲಿ ಈ ಸಾಂವಿಧಾನಿಕ ಬದಲಾವಣೆಗಳು ಬಂದಿವೆ. ಈ ಸುಧಾರಣೆಗಳು ಅಥವಾ ಬದಲಾವಣೆಗಳ ಉದ್ದೇಶ ಸರಕಾರದ ಹಲವಾರು ಅಂಗಗಳ ಅಧಿಕಾರವನ್ನು ಹೆಚ್ಚಿಸುವುದಾಗಿದೆ.

ಇಸ್ರೇಲಿ ಸರಕಾರವು 2018ರಿಂದ ಅಸ್ಥಿರವಾಗಿದೆ. ಕಳೆದ ನಾಲ್ಕು ವರ್ಷಗಳಲ್ಲಿ ಐದು ದಿಢೀರ್ ಚುನಾವಣೆಗಳು ನಡೆದಿವೆ. ಯಾವುದೇ ಪಕ್ಷವೂ ಬಹುಮತ ಪಡೆಯಲು ಸಾಧ್ಯ ಆಗಿಲ್ಲ. ಹಲವಾರು ಸಾಂಪ್ರದಾಯಿಕ ಪಕ್ಷಗಳು ಈಗಿನ ಪ್ರಧಾನಿ ನೆತನ್ಯಾಹು ಜೊತೆಗಿಲ್ಲ. ಯಾಕೆಂದರೆ, ಇಸ್ರೇಲಿನಲ್ಲಿ ಹಲವಾರು ವಿಧಗಳ ಸಾಂಪ್ರದಾಯಿಕ ಪಕ್ಷಗಳು ಇವೆ.

ಭ್ರಷ್ಟಾಚಾರ

2019ರಲ್ಲೀ ನೆತನ್ಯಾಹುವನ್ನು ಮೋಸ ಮತ್ತು ಭ್ರಷ್ಟಾಚಾರದ ಆರೋಪದಲ್ಲಿ ತಪ್ಪಿತಸ್ಥ ಎಂದು ಘೋಷಿಸಲಾಗಿತ್ತು. 2020ರಲ್ಲಿ ಆತ ನ್ಯಾಯಾಂಗದ ಮುಂದೆ ತಪ್ಪೊಪ್ಪಿಕೊಂಡು ಚೌಕಾಸಿ ಮಾಡಿದ್ದರು (ಇದನ್ನು ಪ್ಲೀ ಡೀಲ್ ಎಂದು ಕರೆಯುತ್ತಾರೆ). 2021ರಲ್ಲಿ ಆಧಿಕಾರ ಕಳೆದುಕೊಂಡರು. ಆದರೆ ಡಿಸೆಂಬರ್ 2022ರಲ್ಲಿ ಮೈತ್ರಿಕೂಟ ರಚಿಸಿ, ಸರಕಾರ ಸ್ಥಾಪಿಸಿ, ಮತ್ತೆ ಇಸ್ರೇಲಿನ ಪ್ರಧಾನಿಯಾಗಿ ಅಧಿಕಾರಕ್ಕೆ ಮರಳಿದರು. ಈ ಒಕ್ಕೂಟವು ಸಾರ್ವಜನಿಕ ಜೀವನದಲ್ಲಿ ಧರ್ಮದ ಪಾತ್ರವನ್ನು ವಿಸ್ತರಿಸುವ ಭರವಸೆಗಳನ್ನು ನೀಡಿತು.

ನೆತನ್ಯಾಹು ಇನ್ನೂ ಕೂಡ ಬಹಳಷ್ಟು ಭ್ರಷ್ಟಾಚಾರಗಳ ಆರೋಪ ಎದುರಿಸುತ್ತಿದ್ದಾರೆ. ಈ ಸಾಂವಿಧಾನಿಕ ಬದಲಾವಣೆಗಳು ಆತನಿಗೆ ತನ್ನ ವಿರುದ್ಧ ಇರುವ ಭ್ರಷ್ಟಾಚಾರಗಳ ಆರೋಪಗಳ ವಿರುದ್ಧ ಹೋರಾಡಲು ಬೇಕಾದ ಹಣವನ್ನು ದಾನದ ಮೂಲಕ ಪಡೆಯಲು ಅವಕಾಶ ಒದಗಿಸುತ್ತದೆ.

ಇದನ್ನೂ ಓದಿ: ಜಾಗತಿಕ ಆರ್ಥಿಕ ಬಿಕ್ಕಟ್ಟು ಮತ್ತು ರಾಜಕೀಯ ಚಿತ್ರಣ

ನೆತನ್ಯಾಹು ಸರಕಾರ ಏನು ಹೇಳುತ್ತಿದೆ ಎಂದರೆ ಈ ಸಾಂವಿಧಾನಿಕ ಬದಲಾವಣೆಗಳು ತನ್ನ ಸರಕಾರಕ್ಕೆ ಹೆಚ್ಚಿನ ಸ್ಥಿರತೆ ತರುತ್ತದೆಂದು. ಈ ಬದಲಾವಣೆಗಳನ್ನು ಕಾನೂನು ಸಚಿವ ಯಾರಿವ್ ಲೆವಿನ್ ಘೋಷಿಸಿದರು. ಈತ ತೀರಾ ಇತ್ತೀಚೆಗೆ ನೇಮಕಗೊಂಡ ಒಬ್ಬ ಸಚಿವ. ಇದೇ ವರ್ಷದ 4ನೇ ಜನವರಿಯಲ್ಲಿ ಆತ ಈ ಸಾಂವಿಧಾನಿಕ ಬದಲಾವಣೆಗಳನ್ನು ಘೋಷಿಸಿದ್ದರು. ಅವರ ಈ ಸಾಂವಿಧಾನಿಕ ಬದಲಾವಣೆಗಳ ಯೋಜನೆಯೇ ಪ್ರಸ್ತುತ ಪ್ರತಿಭಟನೆಗಳಿಗೆ ಕಾರಣವಾದದ್ದು.

ಈಗ ಇಸ್ರೇಲಿನಾದ್ಯಂತ ಪ್ರತಿಭಟನೆಗಳು ನಡೆದಿದ್ದು ಇದನ್ನು ಬರೆಯುವ ಹೊತ್ತಿಗಾಗಲೇ 150ಕ್ಕೂ ಹೆಚ್ಚು ಜನ ಪ್ರತಿಭಟನಾಕಾರರನ್ನು ಬಂಧಿಸಲಾಗಿದೆ.

ಎಡ ಬಲ ಮತ್ತು ಮಧ್ಯ ಹಾಗೂ ಪ್ರತಿಭಟನೆಗಳು

ಪ್ರತಿಭಟನಾಕಾರರಲ್ಲಿ ಬಹಳ ಸಂಖ್ಯೆಯ ಇಸ್ರೇಲಿ ಮಿಲಿಟರಿ ಸದಸ್ಯರೂ ಇದ್ದಾರೆ. ಅವರೀಗ ಪ್ಯಾಲೆಸ್ತೀನ್ ಹೋರಾಟದಲ್ಲಿ ಇಲ್ಲ. ಪ್ಯಾಲೆಸ್ತೀನ್ ಧ್ವನಿಗಳು ಇಲ್ಲಿಯತನಕ ಹೆಚ್ಚಾಗಿ ಈ ಪ್ರತಿಭಟನೆಗಳಿಂದ ದೂರವೇ ಉಳಿದಿವೆ. ಯಾಕೆಂದರೆ ಬಹಳಷ್ಟು ಜನರು ತಥಾಕಥಿತ ಕರಾಳ ಸಾಂವಿಧಾನಿಕ ಬದಲಾವಣೆಗಳು ಮತ್ತು ಉದಾರವಾದಿ ಪ್ರಜಾಪ್ರಭುತ್ವದ ನಡುವಿನ ವ್ಯತ್ಯಾಸ ತೀರಾ ಕಡೆಗಣಿಸಬಹುದಾದಂಥದದ್ದು ಎಂದು ಚಿಂತಿಸುತ್ತಿದ್ದಾರೆ. ಇಸ್ರೇಲಿ ನ್ಯಾಯಾಂಗವು ಯಾವತ್ತೂ ಪ್ಯಾಲೆಸ್ತೀನೀಯರಿಗೆ ಸಮಸ್ಯೆಯಾಗುವ ತರಹದಲ್ಲಿಯೇ ತೀರ್ಪು ನೀಡಿದೆ. ಈಗಿನ ಇಸ್ರೇಲಿ ಸಾಂವಿಧಾನಿಕ ಬದಲಾವಣೆಯು ಈ ಪ್ರದೇಶದಲ್ಲಿ ಮಾನವ ಹಕ್ಕುಗಳ ಉಲ್ಲಂಘನೆಗಳನ್ನು ’ಪ್ರತಿಭಟನೆಗಳು ಇರದಂತೆ ಸರಿದಾರಿ’ಗೆ ತರುವ ಉದ್ದೇಶ ಮಾತ್ರವೇ ಹೊಂದಿದೆ ಎಂದು ಭಾವಿಸಲಾಗುತ್ತಿದೆ.

ನೆತನ್ಯಾಹು

ಪ್ರತಿಭಟನೆಗಳು ತೀವ್ರವಾಗಿ ನಡೆಯುತ್ತಿದ್ದು, ಮಾರ್ಚ್ ತಿಂಗಳಲ್ಲಿ ಲಕ್ಷಾಂತರ ಪ್ರತಿಭಟನಾಕಾರರು ರಸ್ತೆಗಳನ್ನು ಮುಚ್ಚಿದ್ದಾರೆ. ಈ ಸಾಂವಿಧಾನಿಕ ಬದಲಾವಣೆಗಳು ಪ್ರಜಾಪ್ರಭುತ್ವದ ಆಗತ್ಯವಾದ ಸಮತೋಲನಕ್ಕೆ

ಮಾರಕವೆಂದು ಅನೇಕ ಅಂತಾರಾಷ್ಟ್ರೀಯ ವೀಕ್ಷಕರು ಭಾವಿಸಿರುವುದರಿಂದ ಈ ಪ್ರತಿಭಟನೆಗಳಿಗೆ ವ್ಯಾಪಕ ಅಂತಾರಾಷ್ಟ್ರೀಯ ಬೆಂಬಲ ವ್ಯಕ್ತವಾಗಿದೆ. ಇಸ್ರೇಲಿ ಸರ್ಕಾರ ಹೋಗುತ್ತಿರುವ ದಿಕ್ಕಿನ ಬಗ್ಗೆ ಹಲವು ದೇಶಗಳ ಮುಖಂಡರು ಕಳವಳ ವ್ಯಕ್ತಪಡಿಸಿದ್ದಾರೆ. ಈ ಸಾಂವಿಧಾನಿಕ ಬದಲಾವಣೆಗಳು ಕಾನೂನು ಆಡಳಿತ ಮತ್ತು ಪ್ರಜಾಪ್ರಭುತ್ವದ ಆಧಾರ ಸಂಸ್ಥೆಗಳಿಗೇ ಮಾರಕ ಎಂದು ಭಾವಿಸಲಾಗುತ್ತಿದೆ ಮತ್ತು ಇಸ್ರೇಲಿ ಸರಕಾರವು ತನ್ನ ನಿಲುವನ್ನು ಮರುಪರಿಶೀಲಿಸಬೇಕೆಂಬ ಒತ್ತಡ ಹೇರಲಾಗುತ್ತಿದೆ.

ಇಸ್ರೇಲಿನ ಪ್ರತಿಭಟನೆಗಳು ಇಡೀ ಜಗತ್ತಿನಾದ್ಯಂತ ಪ್ರಜಾಪ್ರಭುತ್ವದ ಇಳಿಮುಖವನ್ನು ಪ್ರತಿಫಲಿಸುತ್ತದೆ. ಪ್ರಜಾಪ್ರಭುತ್ವದ ವಿಧಿವಿಧಾನಗಳು ಮತ್ತು ಸಂಸ್ಥೆಗಳ ಸವಕಳಿಯು ಇಂದು ಒಂದು ಜಾಗತಿಕ ವಿದ್ಯಮಾನವಾಗಿದೆ. ಇಸ್ರೇಲ್ ಈ ವಿದ್ಯಮಾನ ಕೇವಲ ಒಂದು ಉದಾಹರಣೆಯಾಗಿದೆ. ಸರ್ವಾಧಿಕಾರಿ ನಾಯಕರು ಮತ್ತು ಜನಮರುಳು (ಪಾಪ್ಯುಲಿಸ್ಟ್) ಚಳವಳಿಗಳು, ಪ್ರಜಾಸತ್ತಾತ್ಮಕ ಸಂಸ್ಥೆಗಳ ಶಿಥಿಲೀಕರಣದ ಜೊತೆಗೆ ಸೇರಿ ಜಾಗತಿಕ ಶಾಂತಿ ಮತ್ತು ಸ್ಥಿರತೆಗೆ ಬೆದರಿಕೆಗಳಾಗಿವೆ. ನಾವೆಲ್ಲರೂ ಸೇರಿ ಜಗತ್ತಿನಾದ್ಯಂತ ಪ್ರಜಾಪ್ರಭುತ್ವದ ರಕ್ಷಣೆಗಾಗಿ ಕ್ರಮ ಕೈಗೊಳ್ಳುವುದು ಅನಿವಾರ್ಯವಾಗಿದೆ.

ಸುಧಾರಣೆ ಅಗತ್ಯ ಆದರೆ, ಈ ರೀತಿಯಲ್ಲಲ್ಲ

ಬಹುತೇಕ ಇಸ್ರೇಲಿಗರು ಅಲ್ಲಿನ ನ್ಯಾಯಾಂಗ ವ್ಯವಸ್ಥೆಯ ಬಗ್ಗೆ ಹತಾಶೆ ಹೊಂದಿದ್ದಾರೆ ಮತ್ತು ಬದಲಾವಣೆ ಬಯಸಿದ್ದಾರೆ ಎಂದು ಜನಮತಗಣನೆಗಳು ಹೇಳಿವೆ. ಆದರೂ ಇದೇ ಹೊತ್ತಿಗೆ ಬಹುತೇಕ ಇಸ್ರೇಲಿಗರು ಈಗಿನ ಬದಲಾವಣೆಗಳನ್ನು ವಿರೋಧಿಸುತ್ತಾರೆ. ವಿರೋಧಗಳು ಹಲವಾರು ಕಡೆಗಳಿಂದ ಮತ್ತು ಹಲವಾರು ವಲಯಗಳಿಂದ ಬರುತ್ತಿರುವುದರಿಂದ ಇಸ್ರೇಲಿ ಜನತೆಗೆ ಯಾವರೀತಿಯ ಬದಲಾವಣೆ ಅಥವಾ ಸುಧಾರಣೆಗಳು ಬೇಕಾಗಿದೆ ಎಂಬುದು ಸ್ಪಷ್ಟವಾಗಿಲ್ಲ. ಇಸ್ರೇಲಿನಲ್ಲಿ ಕೇಂದ್ರೀಕರಣ ಮತ್ತು ಸಾರ್ವಜನಿಕ ಜೀವನದಲ್ಲಿ ಜುದಾಯಿಸಂಗೆ ಹೆಚ್ಚಿನ ಸ್ಥಾನಮಾನ ಸಿಗಬೇಕು ಎಂಬುದಕ್ಕೆ ಬಲವಾದ ಬೆಂಬಲವಿದೆ. ಆದರೆ ಪ್ರಜಾಪ್ರಭುತ್ವದ ಮೌಲ್ಯಗಳ ಬಗ್ಗೆ ಕಾಳಜಿ ಇಲ್ಲದೆ, ಇಸ್ರೇಲಿ ಜನರ ಸಂಕಲ್ಪವು ಕುಸಿಯುತ್ತಿದೆ. ಇಸ್ರೇಲಿ ಆಡಳಿತದಲ್ಲಿ ಬಲವಾದ ಧಾರ್ಮಿಕ ಮತ್ತು ಮಿಲಿಟರಿ ಅಸ್ತಿತ್ವ ಇದ್ದು ಯಾವತ್ತೂ ಪ್ರಜಾಪ್ರಭುತ್ವದ ಚೇತನಕ್ಕೆ ವಿರುದ್ಧವಾಗಿಯೇ ಇದೆ ಮತ್ತು ಇಸ್ರೇಲಿ ಜನರು ಇನ್ನೂ ಇದರ ಜೀವಾಳವಾಗಿದ್ದಾರೆ.

ಕನ್ನಡಕ್ಕೆ: ನಿಖಿಲ್ ಕೋಲ್ಪೆ

ಕಿಶೋರ್ ಗೋವಿಂದ

ಕಿಶೋರ್ ಗೋವಿಂದ
ಬೆಂಗಳೂರಿನಲ್ಲಿ ನೆಲೆಸಿರುವ ಕಿಶೋರ್ ಅವರು ಗಣಿತಶಾಸ್ತ್ರಜ್ಞರು. ಜಾಗತಿಕ ರಾಜಕೀಯ ಆಗುಹೋಗುಗಳನ್ನು ನಿಕಟವಾಗಿ ಗಮನಿಸುವ ಅವರು ಪತ್ರಿಕೆಗಳಿಗೆ ಲೇಖನಗಳನ್ನು ಬರೆದಿದ್ದಾರೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಒಮಾನ್ ಕರಾವಳಿಯಲ್ಲಿ ಮತ್ತೊಂದು ಹಡಗಿನ ಮೇಲೆ ದಾಳಿ: ಭಾರತೀಯ ಪ್ರಜೆ ನಾಪತ್ತೆ, 10 ಜನರ ರಕ್ಷಣೆ: ವಿದೇಶಾಂಗ ಸಚಿವಾಲಯ ಮಾಹಿತಿ

ನವದೆಹಲಿ: ಜುಲೈ 12 ರಂದು ಒಮಾನ್ ಕರಾವಳಿಯ ಅಂತರರಾಷ್ಟ್ರೀಯ ಜಲಮಾರ್ಗದಲ್ಲಿ ಸಾಗುತ್ತಿದ್ದ ‘ಜಿಎಫ್‌ಎಸ್ ಗ್ಯಾಲಕ್ಸಿ’ (GFS Galaxy) ಎಂಬ ವಾಣಿಜ್ಯ ಹಡಗಿನ ಮೇಲೆ ನಡೆದ ದಾಳಿಯನ್ನು ಭಾರತ ಸರ್ಕಾರ ತೀವ್ರವಾಗಿ ಖಂಡಿಸಿದೆ. ಭೀಕರ...

SIR ಪ್ರಕ್ರಿಯೆಯಲ್ಲಿ ಎಐ ಬಳಕೆ, ಭಾರೀ ಪ್ರಮಾಣದಲ್ಲಿ ಮತದಾರರ ಹೆಸರು ಡಿಲೀಟ್ : ಕಳವಳ ವ್ಯಕ್ತಪಡಿಸಿದ ವಿಶ್ವಸಂಸ್ಥೆಯ ವಿಶೇಷ ವರದಿಗಾರರು

ಭಾರತೀಯ ಚುನಾವಣಾ ಆಯೋಗ (ಇಸಿಐ) ಕೈಗೊಂಡ ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆಯು (ಎಸ್‌ಐಆರ್) ವ್ಯಾಪಕ ಪ್ರಮಾಣದಲ್ಲಿ ಮತದಾರರ ಹೆಸರುಗಳ ಅಳಿಸುವಿಕೆಗೆ ಕಾರಣವಾಗಿದೆ ಮತ್ತು ಇದು ಮುಸ್ಲಿಮರು ಹಾಗೂ ಇತರ ಅಲ್ಪಸಂಖ್ಯಾತ ಸಮುದಾಯಗಳ...

ಮಹಾರಾಷ್ಟ್ರ: ನಂದೂರ್ಬಾರ್‌ನ ಸರ್ಕಾರಿ ಹಾಸ್ಟೆಲ್‌ನಲ್ಲಿ ಕಲುಷಿತ ಆಹಾರ ಸೇವಿಸಿ 40 ವಿದ್ಯಾರ್ಥಿಗಳು ಅಸ್ವಸ್ಥ; ತೀವ್ರಗೊಂಡ ತನಿಖೆ 

ನಂದೂರ್ಬಾರ್ (ಮಹಾರಾಷ್ಟ್ರ): ಮಹಾರಾಷ್ಟ್ರದ ನಂದೂರ್ಬಾರ್ ಜಿಲ್ಲೆಯ ಶಹಾಡಾ ತಾಲೂಕಿನಲ್ಲಿರುವ ಸರ್ಕಾರಿ ಸಮಾಜ ಕಲ್ಯಾಣ ಇಲಾಖೆಯ ವಸತಿನಿಲಯದಲ್ಲಿ ಶಂಕಿತ ವಿಷಪೂರಿತ ಆಹಾರ ಸೇವಿಸಿ ಸುಮಾರು 40 ವಿದ್ಯಾರ್ಥಿಗಳು ತೀವ್ರವಾಗಿ ಅಸ್ವಸ್ಥಗೊಂಡಿರುವ ಕಳವಳಕಾರಿ ಘಟನೆ ವರದಿಯಾಗಿದೆ.  ಹಾಸ್ಟೆಲ್‌ನಲ್ಲಿ...

ಇರಾನ್‌ನ 140 ಸ್ಥಳಗಳನ್ನು ಗುರಿಯಾಗಿಸಿ ಅಮೆರಿಕದಿಂದ ದಾಳಿ : ಬಹ್ರೇನ್, ಕತಾರ್, ಯುಎಇ ಮೇಲೆ ಇರಾನ್‌ನಿಂದ ಪ್ರತಿದಾಳಿ

ಹಾರ್ಮುಝ್ ಜಲಸಂಧಿಯಲ್ಲಿ ಇರಾನ್ ನಡೆಸಿದ ದಾಳಿಯಿಂದಾಗಿ ಸರಕು ಸಾಗಣೆ ಹಡಗೊಂದು ಹೊತ್ತಿ ಉರಿದು, ಅದರಲ್ಲಿದ್ದ ಸಿಬ್ಬಂದಿ ಹಡಗು ಬಿಟ್ಟು ಹೊರಡುವಂತಾಗಿತ್ತು. ಈ ಘಟನೆಯನ್ನು ಖಂಡಿಸಿ ಅಮೆರಿಕ ಭಾನುವಾರ (ಜು.12) ಮುಂಜಾನೆ ಇರಾನ್ ಮೇಲೆ...

31 ವರ್ಷಗಳ ಹಳೇ ಸಾಲ ತೀರಿಸಲು 1200 ಕಿ.ಮೀ ಪ್ರಯಾಣಿಸಿದ ಕೇರಳದ ಇಸ್ಮಾಯಿಲ್

"ನನ್ನ ಕಣ್ಣುಗಳಿಂದ ಆನಂದಬಾಷ್ಪಗಳು ಉದುರಿದವು. ನನ್ನ ಮನಸ್ಸಿಗೆ ಅದೆಷ್ಟು ನೆಮ್ಮದಿ ಸಿಕ್ಕಿತೆಂದರೆ, ಅದನ್ನು ವಿವರಿಸಲು ಪದಗಳೇ ಸಾಲದು. ಆತನಿಗೂ ಅಷ್ಟೇ ದೊಡ್ಡ ಸಮಾಧಾನ." ಹೀಗೆ ಭಾವುಕರಾಗಿ ನುಡಿಯುತ್ತಾರೆ ಮೊಹಮ್ಮದ್ ಇಸ್ಮಾಯಿಲ್. 1995ರಲ್ಲಿ ಸೌದಿ...

ಬಂಡಾಯದ ಬಳಿಕ ಟಿಎಂಸಿಗೆ ಮತ್ತೊಂದು ಸವಾಲು : ಪಕ್ಷದ ಬ್ಯಾಂಕ್ ಖಾತೆಗಳು ಫ್ರೀಝ್

ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಪಕ್ಷದ ಮೂರು ಬ್ಯಾಂಕ್ ಖಾತೆಗಳಲ್ಲಿರುವ 440 ಕೋಟಿ ರೂಪಾಯಿ ಹಣವನ್ನು ಭಾಗಶಃ ಬಳಸಲು ಕಲ್ಕತ್ತಾ ಹೈಕೋರ್ಟ್ ಅನುಮತಿ ನೀಡಿದ ಮರುದಿನವೇ, ಪಶ್ಚಿಮ ಬಂಗಾಳ ಪೊಲೀಸರು...

ಮಂದಿರ ನಿರ್ಮಾಣದ ಕ್ರೆಡಿಟ್‌ಗೆ ಇದ್ದ ಯಜಮಾನಿಕೆ, ಕೊಳ್ಳೆ ಹೊಡೆದಾಗ ಯಾಕಿಲ್ಲ ಸೇವಕರೇ?

ಬಾಲರಾಮನ ಪ್ರಾಣಪ್ರತಿಷ್ಠಾಪನೆಗೆ ಮುನ್ನ ಪ್ರಧಾನಿಯವರು 11 ದಿನಗಳ ಕಾಲ ಕಠಿಣ ಉಪವಾಸ ವ್ರತ ಆಚರಿಸಿದ್ದರು, ಕೇವಲ ಎಳನೀರು ಕುಡಿದರು, ನೆಲದ ಮೇಲೆ ಮಲಗಿದರು ಎಂದು ಇಡೀ ದೇಶಕ್ಕೆ ಸಾರಲಾಗಿತ್ತು. ಅಯೋಧ್ಯೆಯಿಂದ ಹೊಸ ಕಾಲದ...

‘ಫ್ರೀ ಪ್ಯಾಲೆಸ್ತೀನ್’ ಘೋಷಣೆಯನ್ನು ತಮಾಷೆ ಮಾಡಿದ ಸೈಫ್ ಅಲಿ ಖಾನ್ – ನಿರೂಪಕಿ ಅನುಪಮಾ ಚೋಪ್ರಾ

ಸ್ಪ್ಯಾನಿಷ್ ನಟ ಜೇವಿಯರ್ ಬಾರ್ಡೆಮ್ ಅವರ "ಫ್ರೀ ಪ್ಯಾಲೆಸ್ತೀನ್" ಹೇಳಿಕೆ ಕುರಿತು ಸೈಫ್ ಅಲಿ ಖಾನ್ ಮತ್ತು ಚಲನಚಿತ್ರ ಪತ್ರಕರ್ತೆ ಅನುಪಮಾ ಚೋಪ್ರಾ ನಗುತ್ತಿರುವ ಕ್ಲಿಪ್ ಆನ್‌ಲೈನ್‌ನಲ್ಲಿ ವೈರಲ್ ಆಗಿದ್ದು, ನಟನ ಅಸೂಕ್ಷ್ಮ...

ತೆಲಂಗಾಣ : ಪೋಕ್ಸೋ ಪ್ರಕರಣದ ಆರೋಪಿಯಿಂದ ಸಂತ್ರಸ್ತೆ ಸೇರಿ 6 ಜನರ ಹತ್ಯೆ

ಪೋಕ್ಸೋ ಪ್ರಕರಣದ ಆರೋಪಿಯೊಬ್ಬ ಸಂತ್ರಸ್ತೆ ಸೇರಿದಂತೆ ಒಟ್ಟು ಆರು ಜನರನ್ನು ಭೀಕರವಾಗಿ ಹತ್ಯೆ ಮಾಡಿರುವ ಘಟನೆ ತೆಲಂಗಾಣದ ರಂಗಾರೆಡ್ಡಿ ಜಿಲ್ಲೆಯ ಶಾಬಾದ್ ಮಂಡಲದಲ್ಲಿ ಶುಕ್ರವಾರ (ಜು.10) ರಾತ್ರಿ ನಡೆದಿದೆ. 28 ವರ್ಷ ವಯಸ್ಸಿನ...

‘ನನ್ನನ್ನು ಮೌನಗೊಳಿಸಲು, ನೀವು ನನ್ನನ್ನು ಕೊಲ್ಲಬೇಕಾಗುತ್ತದೆ’: ಟಿಎಂಸಿ ಬಿಕ್ಕಟ್ಟಿನ ನಡುವೆ ಬಿಜೆಪಿ ವಿರುದ್ಧ ಮಮತಾ ಬ್ಯಾನರ್ಜಿ ಆಕ್ರೋಶ  

ಕೋಲ್ಕತ್ತಾ: ಪಶ್ಚಿಮ ಬಂಗಾಳದ ಆಡಳಿತಾರೂಢ ತೃಣಮೂಲ ಕಾಂಗ್ರೆಸ್ (TMC) ಪಕ್ಷದಲ್ಲಿ ಆಂತರಿಕ ಬಿಕ್ಕಟ್ಟು ತಾರಕಕ್ಕೇರಿರುವ ಬೆನ್ನಲ್ಲೇ, ಪಕ್ಷದ ಸುಪ್ರೀಮೋ ಹಾಗೂ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಇತ್ತೀಚಿನ ತಿಂಗಳುಗಳಲ್ಲೇ ಅತ್ಯಂತ ಪ್ರಬಲವಾದ ರಾಜಕೀಯ...