Homeಪುಸ್ತಕ ವಿಮರ್ಶೆಪ್ರಕಟವಾಗಲಿರುವ ಪುಸ್ತಕ: ಆ 117 ದಿನಗಳು

ಪ್ರಕಟವಾಗಲಿರುವ ಪುಸ್ತಕ: ಆ 117 ದಿನಗಳು

- Advertisement -
- Advertisement -

ಪ್ರಿಯ ಮಿತ್ರರಾದ ಗಿರೀಶ್ ತಾಳಿಕಟ್ಟೆ ಅನುವಾದ ಮಾಡಿರುವ, ಮರಲಿನ್ ಮತ್ತು ಮರೈಸ್ ಬೈಲಿ ಅವರು ರಚಿಸಿರುವ ‘ಆ 117 ದಿನಗಳು’ ಪುಸ್ತಕದ ಹಸ್ತಪ್ರತಿಯನ್ನು ಒಂದೇ ಗುಕ್ಕಿನಲ್ಲಿ ಓದಿ ಮುಗಿಸಿದೆ. ಪ್ರವಾಸಪ್ರಿಯನಾದ ನನಗಿದು ಬಹಳ ಖುಷಿ ಕೊಟ್ಟಿತು. ಸಾಹಸಿಗಳಾದ ಮರಲಿನ್ ಮತ್ತು ಮೈರಸ್ ದಂಪತಿಗಳು ಇಂಗ್ಲೆಂಡಿನಿಂದ ಚಿಕ್ಕದೊಂದು ನಾವೆಯಲ್ಲಿ ಹೊರಟು, ಅಟ್ಲಾಂಟಿಕ್ ಮತ್ತು ಪೆಸಿಫಿಕ್ ಸಮುದ್ರಗಳನ್ನು ಹಾಯುತ್ತ, ನಡುವೆ ನಾವೆ ದುರಂತಕ್ಕೊಳಗಾಗಿ, ಜೀವನ್ಮರಣದ ಗಳಿಗೆಗಳನ್ನು ಎದುರಿಸುತ್ತ ಬದುಕಿ ಬಂದ ಕಥೆಯದು. ಅವರು ಪಯಣ ಆರಂಭಿಸಿದ ಮತ್ತು ತಲುಪಿದ ಬಿಂದುಗಳ ನಡುವಿನ ಕಡಲಿನ ಹರಹನ್ನು ಭೂಪಟದಲ್ಲಿ ನೋಡಿದರೆ ದಂಗುಬಡಿಯುತ್ತದೆ. ಈ ಕಥನದಲ್ಲಿ ಪಯಣದ ಪೂರ್ವದಲ್ಲಿ, ಪಯಣದಲ್ಲಿ ಹಾಗೂ ಪಯಣದ ಬಳಿಕ ಅವರ ಬಾಳಿನಲ್ಲಿ ಪ್ರೇಮ ಸಾಹಸ ಆನಂದ ದುಃಖ ಅಗಲಿಕೆಗಳು, ಸಮುದ್ರದ ಅಲೆಗಳಂತೆ ಒಂದಾದಮೇಲೆಒಂದು ಬಂದು ಅಪ್ಪಳಿಸುತ್ತವೆ. ಇದೊಂದು ರೋಚಕವಾದ ಪ್ರವಾಸ ಕಥನ. ಇದನ್ನು ಓದುವಾಗ, ತೇಜಸ್ವಿಯವರ ‘ಮಹಾಪಲಾಯನ’ ನೆನಪಿಗೆ ಬಂದಿತು; ಎವರೆಸ್ಟ್ ಶಿಖರವನ್ನು ಏರಿ ಹಿಮಪಾತಕ್ಕೆ ಸಿಕ್ಕು ಸಾವಿನಿಂದ ಕೂದಲೆಳೆ ಅಂತರದಲ್ಲಿ ಬಚಾವಾಗಿ ಬಂದ ಅಮೆರಿಕನ್ ಪರ್ವತಾರೋಹಿ ಪೇವರ್ ಮೈಕಲ್‌ನ ‘ಥಿನ್ ಏರ್’; ಸುನ್ ಶುಯೆನ್ ಎಂಬ ಇತಿಹಾಸಜ್ಞೆ, ಚೀನಾದಿಂದ ಭಾರತಕ್ಕೆ ಹ್ಯೂಯನ್‌ತ್ಸಾಂಗ್ ಪಯಣಿಸಿದ ಹಾದಿಯಲ್ಲೆ ಪಯಣಿಸುತ್ತ ಬಂದು ಬರೆದ ಕಥನ, ‘ಟೆನ್‌ಥೌಸಂಡ್ ಮೈಲ್ಸ್ ವಿಥೌಟ್ ಕ್ಲೌಡ್’ ಮುಂತಾದ ಕೃತಿಗಳು ಮನಃಪಟಲದ ಮೇಲೆ ಹಾದುಹೋದವು.

ಮೇಲ್ಕಾಣಿಸಿದ ಪ್ರವಾಸ ಕಥನಗಳ ವಿಶಿಷ್ಟತೆಯೆಂದರೆ, ಕೆಲವು ಸಾಹಸಿಗಳಾದ ವ್ಯಕ್ತಿಗಳು ತಮ್ಮ ಜೀವನದಲ್ಲಿ ವಿಶಿಷ್ಟವಾದ ಗುರಿಯನ್ನು ಇಟ್ಟುಕೊಂಡು, ಕಷ್ಟ ಅಪಾಯಗಳಿಂದ ಕೂಡಿರುವ ಹಾದಿಯಲ್ಲಿ ಪಯಣಿಸುವುದು. ಘಾತಕ ತಿರುವುಗಳಲ್ಲಿ ಮೃತ್ಯುವಿನ ಜತೆ ಮುಖಾಬಿಲೆ ಮಾಡುತ್ತ, ಬದುಕಿನ ಹೊಸ ಅನುಭವಗಳಿಗೆ ತೆರೆದುಕೊಳ್ಳುವುದು. ಎಂತಲೇ ಅವರ ಅನುಭವದಿಂದ ಹುಟ್ಟಿದ ಈ ಕೃತಿಗಳು ಕೇವಲ ಹುಚ್ಚುಸಾಹಸಿಗಳು ಮಾಡಿದ ರೋಚಕ ಪ್ರವಾಸ ವರದಿಗಳಾಗಿಲ್ಲ. ದಾರ್ಶನಿಕವಾಗಿ ಮಾನವ ಚೈತನ್ಯದಲ್ಲಿ ಹುದುಗಿರುವ ಅದಮ್ಯ ಸಾಹಸ ಪ್ರವೃತ್ತಿಯನ್ನು ಲೋಕಕ್ಕೆ ಕಾಣಿಸುವ ಕಥನಗಳಾಗಿವೆ. ನೂರರಲ್ಲಿ ಒಬ್ಬರಾಗಿ ಸಾಮಾನ್ಯ ಲಯದ ಬದುಕನ್ನು ಬಾಳಲು ನಿರಾಕರಿಸಿ, ಎಲ್ಲರಿಗಿಂತ ವಿಶಿಷ್ಟವಾದ ಬದುಕನ್ನು ನಡೆಸುವ ವಿಶಿಷ್ಟ ಲೋಕದೃಷ್ಟಿಯುಳ್ಳವರ ಜೀವನಗಾಥೆಗಳಾಗಿವೆ. ಅಪಾರವಾದ ಜೀವನಪ್ರೀತಿಯುಳ್ಳ ವ್ಯಕ್ತಿಗಳು ತಾವು ಹೋಗುವ ಅಪರಿಚಿತ ಎಡೆಯಲ್ಲಿ ಸಿಗುವ ಜನರೊಟ್ಟಿಗೆ ಮನುಷ್ಯ ಸಂಬಂಧ ಬೆಳೆಸುವ ಮಾನವೀಯ ಅಧ್ಯಾಯಗಳಾಗಿವೆ. ಆನಂದದಾಯಕವೂ ಕಠೋರವೂ ಆದ ಬಾನು ಕಡಲು ಕಾಡು ಮರುಭೂಮಿಯಂತಹ ನಿಸರ್ಗದ ಜತೆ ಅನುಸಂಧಾನ ಮಾಡುವ ಪ್ರಯೋಗಗಳಾಗಿವೆ.

ಮರಲಿನ್ ಮತ್ತು ಮರೈಸ್ ಜೋಡಿಯ ಯಾನವನ್ನು ನೋಡುವಾಗ ‘ಜುಗಾರಿ ಕ್ರಾಸ್’ನ ಸುರೇಶ್ ಮತ್ತು ಗೌರಿಯರು ನೆನಪಾದರು. ತೇಜಸ್ವಿಯವರ ಕಥನಗಳಲ್ಲಿ ಪ್ರೇಮಿಗಳು ಮಾಡುವ ಸಾಹಸಗಳಲ್ಲಿ ಗಂಡು ಹೆಚ್ಚು ಕ್ರಿಯಾಶೀಲ, ಧೈರ್ಯಶಾಲಿ. ಮಹಿಳೆ ಅನುಸರಿಸುವವಳು. ಆದರೆ ಈ ಪ್ರವಾಸ ಕಥನ ಬಿಚ್ಚಿಡುವ ಬಾಳಕಡಲಿನಲ್ಲಿ ಕಡೆಗೋಲನ್ನು ಗಂಡು ಕೈಬಿಟ್ಟಾಗಲೆಲ್ಲ ಅದನ್ನು ಎತ್ತಿಕೊಂಡು ಮಹಿಳೆ ದಿಟ್ಟತನವನ್ನು ಪ್ರದರ್ಶಿಸುತ್ತಾಳೆ. ನಿಸರ್ಗವು ಸ್ತ್ರೀಯೊಳಗಿನ ಅಪಾರ ಚೈತನ್ಯ ಧೈರ್ಯ ತಾಯ್ತನಗಳನ್ನು ಲೋಕಕ್ಕೆ ಕಾಣಿಸಲೆಂದೇ ಸೃಷ್ಟಿಸಿದ ನಿಗೂಢ ಪ್ರಾಕೃತಿಕ ನಾಟಕದಂತಿದೆ ಇದು. ಈ ದೃಷ್ಟಿಯಿಂದ ಕೃತಿಯನ್ನು ಗಿರೀಶ್ ಹೆಣ್ಣಿಗೆ ಅರ್ಪಿಸುತ್ತ ಆಡಿರುವ ಮಾತುಗಳು ಮಾರ್ಮಿಕವೂ ಅರ್ಥಪೂರ್ಣವೂ ಆಗಿವೆ. ಮರಲಿನ್ ತೀರಿಕೊಂಡ ಬಳಿಕ ಏಕಾಂಗಿಯಾದ ಮರೈಸ್, ಆಕೆಯನ್ನು ನೆನಪಿಸಿಕೊಳ್ಳುತ್ತ ಹೇಳುವುದು ಕೂಡ ಇದಕ್ಕೆ ಪೂರಕವಾಗಿದೆ; ‘ಎಂಥಾ ಸಂಕಷ್ಟ ಎದುರಾದಾಗಲೂ ಮರಲಿನ್ ತನ್ನೊಳಗಿನ ಬದುಕುವ ತುಡಿತವನ್ನು ಕಳೆದುಕೊಳ್ಳಲಿಲ್ಲ. ಆತ್ಮವಿಶ್ವಾಸವನ್ನು ಘಾಸಿ ಮಾಡಿಕೊಳ್ಳಲಿಲ್ಲ. ಹೆಣ್ಣು ಎಂಬ ಆ ಅದ್ಭುತ ಸೃಷ್ಟಿಗೆ ಇರುವ ಶಕ್ತಿಯೇ ಅಂತಹದ್ದು… ಮರಲಿನ್‌ಳನ್ನು ಭೇಟಿಯಾಗುವವರೆಗೆ ಪ್ರೀತಿ ವಾತ್ಸಲ್ಯ ಎಂಬುದೇ ನನಗೆ ತಿಳಿದಿರಲಿಲ್ಲ. ಆಕೆ ನನ್ನ ಬಾಳಿಗೆ ಬೆಳಕಾದಳು. ನನ್ನ ಬದುಕಿಗೆ ಬೇಕಿದ್ದ ಸುಖ, ಸಂತೋಷ, ನೆಮ್ಮದಿ ಧೈರ್ಯ ಎಲ್ಲವನ್ನೂ ತಂದವಳು. ಆಕೆಯಿಲ್ಲದೆ ನಾನು ಅಪೂರ್ಣ’; ಜ್ಞಾನೋದಯ ಸಾಕ್ಷಾತ್ಕಾರ ಎಂದರೆ ಇದುವೇ.

ಗಿರೀಶ್ ತಾಳಿಕಟ್ಟೆ

ಲವಲವಿಕೆಯ ಗದ್ಯ ಲೇಖಕರಾದ ಗಿರೀಶ್ ತಾಳಿಕಟ್ಟೆ ಕೃತಿಯನ್ನು ಸೊಗಸಾಗಿ ಅನುವಾದಿಸಿದ್ದಾರೆ. ಮತೀಯತೆ, ಜಾತೀಯತೆಯಂತಹ ಮಾರಕ ಕಾಯಿಲೆಗೆ ತುತ್ತಾಗುತ್ತಿರುವ ಭಾರತದ ಹೊಸತಲೆಮಾರಿನ ಹುಡುಗ-ಹುಡುಗಿಯರು ಇಂತಹ ಕಥನಗಳನ್ನು ಓದಬೇಕು; ಇದರಿಂದ ಹೊರಲೋಕದಲ್ಲಿ ಚೈತನ್ಯಶೀಲರಾದ ಜನ ಸಂಪ್ರದಾಯದ ಪಂಕದಲ್ಲಿ ಸಿಕ್ಕಿಕೊಳ್ಳದೆ ಹೇಗೆಲ್ಲ ಬದುಕಿನ ಸಾಹಸಗಳನ್ನು ಮಾಡುವುದಕ್ಕೆ ತುಡಿಯುತ್ತಿದ್ದಾರೆಂದು ತಿಳಿಯುತ್ತದೆ. ದೇಶವನ್ನು ದ್ವೇಷದಿಂದ ಕಟ್ಟಲು ಸಾಧ್ಯವಿಲ್ಲ. ಜ್ಞಾನ ಸಾಹಸ ಪ್ರಯೋಗ ಕ್ರಿಯಾಶೀಲತೆಯಿಂದ ಕಟ್ಟುವುದಕ್ಕೆ ಸಾಧ್ಯ. ಯೂರೋಪು ವಸಾಹತುಶಾಹಿಯಾಗಿ ಏಶಿಯಾ ಆಫ್ರಿಕಾಗಳನ್ನು ವಶಪಡಿಸಿಕೊಂಡು ಮಾಡಿರುವ ಕೃತ್ಯಗಳು ಚಾರಿತ್ರಿಕ ಅಪರಾಧಗಳು ದಿಟ. ಆದರೆ ಅಲ್ಲಿನ ಜನರಲ್ಲಿರುವ ಸಾಹಸಪ್ರವೃತ್ತಿ, ಅನ್ವೇಷಕ ಕುತೂಹಲ, ಸಾವಿಗೆ ಹೆದರದೆ ಕೈಗೊಳ್ಳುವ ಯಾನ, ವಿಜ್ಞಾನ ಮತ್ತು ತಂತ್ರಜ್ಞಾನಗಳು ದೊಡ್ಡ ಮೌಲ್ಯಗಳು. ಶಿವರಾಮ ಕಾರಂತ, ಲಂಕೇಶ್, ತೇಜಸ್ವಿಯವರಿಗೆ ಪಶ್ಚಿಮವು ಸೆಳೆದಿದ್ದೇ ಈ ದಿಸೆಯಲ್ಲಿ. ಈ ಪುಸ್ತಕ ಪ್ರಕಟವಾಗುವ ಕಾಲಕ್ಕೆ ತೇಜಸ್ವಿ ಇದ್ದಿದ್ದರೆ ಖಂಡಿತ ಇಷ್ಟಪಡುತ್ತಿದ್ದರು.

ಪ್ರೊ. ರಹಮತ್ ತರೀಕೆರೆ

ಪ್ರೊ. ರಹಮತ್ ತರೀಕೆರೆ
ರಹಮತ್ ತರೀಕೆರೆ ಕನ್ನಡನಾಡಿನ ಖ್ಯಾತ ಚಿಂತಕರು. ನಾಥಪಂಥ, ಕರ್ನಾಟಕದ ಸೂಫಿಗಳು, ಗುರುಪಂಥಗಳು ಹೀಗೆ ನಾಡಿನ ಹಲವು ಬಹುತ್ವದ ಪಂಥಗಳು ಮತ್ತು ಸೌಹಾರ್ದ ಬದುಕಿನ ಬಗ್ಗೆ ವಿಶೇಷ ಅಧ್ಯಯನಗಳನ್ನು ಮಾಡಿ ಪುಸ್ತಕ ರಚಿಸಿದ್ದಾರೆ. ಇವರ ವಿಮರ್ಶಾ ಸಂಕಲನ ’ಕತ್ತಿಯಂಚಿನ ದಾರಿ’ಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯ ಗೌರವ ಸಂದಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

 


ಇದನ್ನೂ ಓದಿ: ಕವನ; ಕೋಗಿಲೆಗೆ ಸುಖವಿಲ್ಲ!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...