Homeಪುಸ್ತಕ ವಿಮರ್ಶೆಪ್ರಕಟವಾಗಲಿರುವ ಪುಸ್ತಕ: ಆ 117 ದಿನಗಳು

ಪ್ರಕಟವಾಗಲಿರುವ ಪುಸ್ತಕ: ಆ 117 ದಿನಗಳು

- Advertisement -
- Advertisement -

ಪ್ರಿಯ ಮಿತ್ರರಾದ ಗಿರೀಶ್ ತಾಳಿಕಟ್ಟೆ ಅನುವಾದ ಮಾಡಿರುವ, ಮರಲಿನ್ ಮತ್ತು ಮರೈಸ್ ಬೈಲಿ ಅವರು ರಚಿಸಿರುವ ‘ಆ 117 ದಿನಗಳು’ ಪುಸ್ತಕದ ಹಸ್ತಪ್ರತಿಯನ್ನು ಒಂದೇ ಗುಕ್ಕಿನಲ್ಲಿ ಓದಿ ಮುಗಿಸಿದೆ. ಪ್ರವಾಸಪ್ರಿಯನಾದ ನನಗಿದು ಬಹಳ ಖುಷಿ ಕೊಟ್ಟಿತು. ಸಾಹಸಿಗಳಾದ ಮರಲಿನ್ ಮತ್ತು ಮೈರಸ್ ದಂಪತಿಗಳು ಇಂಗ್ಲೆಂಡಿನಿಂದ ಚಿಕ್ಕದೊಂದು ನಾವೆಯಲ್ಲಿ ಹೊರಟು, ಅಟ್ಲಾಂಟಿಕ್ ಮತ್ತು ಪೆಸಿಫಿಕ್ ಸಮುದ್ರಗಳನ್ನು ಹಾಯುತ್ತ, ನಡುವೆ ನಾವೆ ದುರಂತಕ್ಕೊಳಗಾಗಿ, ಜೀವನ್ಮರಣದ ಗಳಿಗೆಗಳನ್ನು ಎದುರಿಸುತ್ತ ಬದುಕಿ ಬಂದ ಕಥೆಯದು. ಅವರು ಪಯಣ ಆರಂಭಿಸಿದ ಮತ್ತು ತಲುಪಿದ ಬಿಂದುಗಳ ನಡುವಿನ ಕಡಲಿನ ಹರಹನ್ನು ಭೂಪಟದಲ್ಲಿ ನೋಡಿದರೆ ದಂಗುಬಡಿಯುತ್ತದೆ. ಈ ಕಥನದಲ್ಲಿ ಪಯಣದ ಪೂರ್ವದಲ್ಲಿ, ಪಯಣದಲ್ಲಿ ಹಾಗೂ ಪಯಣದ ಬಳಿಕ ಅವರ ಬಾಳಿನಲ್ಲಿ ಪ್ರೇಮ ಸಾಹಸ ಆನಂದ ದುಃಖ ಅಗಲಿಕೆಗಳು, ಸಮುದ್ರದ ಅಲೆಗಳಂತೆ ಒಂದಾದಮೇಲೆಒಂದು ಬಂದು ಅಪ್ಪಳಿಸುತ್ತವೆ. ಇದೊಂದು ರೋಚಕವಾದ ಪ್ರವಾಸ ಕಥನ. ಇದನ್ನು ಓದುವಾಗ, ತೇಜಸ್ವಿಯವರ ‘ಮಹಾಪಲಾಯನ’ ನೆನಪಿಗೆ ಬಂದಿತು; ಎವರೆಸ್ಟ್ ಶಿಖರವನ್ನು ಏರಿ ಹಿಮಪಾತಕ್ಕೆ ಸಿಕ್ಕು ಸಾವಿನಿಂದ ಕೂದಲೆಳೆ ಅಂತರದಲ್ಲಿ ಬಚಾವಾಗಿ ಬಂದ ಅಮೆರಿಕನ್ ಪರ್ವತಾರೋಹಿ ಪೇವರ್ ಮೈಕಲ್‌ನ ‘ಥಿನ್ ಏರ್’; ಸುನ್ ಶುಯೆನ್ ಎಂಬ ಇತಿಹಾಸಜ್ಞೆ, ಚೀನಾದಿಂದ ಭಾರತಕ್ಕೆ ಹ್ಯೂಯನ್‌ತ್ಸಾಂಗ್ ಪಯಣಿಸಿದ ಹಾದಿಯಲ್ಲೆ ಪಯಣಿಸುತ್ತ ಬಂದು ಬರೆದ ಕಥನ, ‘ಟೆನ್‌ಥೌಸಂಡ್ ಮೈಲ್ಸ್ ವಿಥೌಟ್ ಕ್ಲೌಡ್’ ಮುಂತಾದ ಕೃತಿಗಳು ಮನಃಪಟಲದ ಮೇಲೆ ಹಾದುಹೋದವು.

ಮೇಲ್ಕಾಣಿಸಿದ ಪ್ರವಾಸ ಕಥನಗಳ ವಿಶಿಷ್ಟತೆಯೆಂದರೆ, ಕೆಲವು ಸಾಹಸಿಗಳಾದ ವ್ಯಕ್ತಿಗಳು ತಮ್ಮ ಜೀವನದಲ್ಲಿ ವಿಶಿಷ್ಟವಾದ ಗುರಿಯನ್ನು ಇಟ್ಟುಕೊಂಡು, ಕಷ್ಟ ಅಪಾಯಗಳಿಂದ ಕೂಡಿರುವ ಹಾದಿಯಲ್ಲಿ ಪಯಣಿಸುವುದು. ಘಾತಕ ತಿರುವುಗಳಲ್ಲಿ ಮೃತ್ಯುವಿನ ಜತೆ ಮುಖಾಬಿಲೆ ಮಾಡುತ್ತ, ಬದುಕಿನ ಹೊಸ ಅನುಭವಗಳಿಗೆ ತೆರೆದುಕೊಳ್ಳುವುದು. ಎಂತಲೇ ಅವರ ಅನುಭವದಿಂದ ಹುಟ್ಟಿದ ಈ ಕೃತಿಗಳು ಕೇವಲ ಹುಚ್ಚುಸಾಹಸಿಗಳು ಮಾಡಿದ ರೋಚಕ ಪ್ರವಾಸ ವರದಿಗಳಾಗಿಲ್ಲ. ದಾರ್ಶನಿಕವಾಗಿ ಮಾನವ ಚೈತನ್ಯದಲ್ಲಿ ಹುದುಗಿರುವ ಅದಮ್ಯ ಸಾಹಸ ಪ್ರವೃತ್ತಿಯನ್ನು ಲೋಕಕ್ಕೆ ಕಾಣಿಸುವ ಕಥನಗಳಾಗಿವೆ. ನೂರರಲ್ಲಿ ಒಬ್ಬರಾಗಿ ಸಾಮಾನ್ಯ ಲಯದ ಬದುಕನ್ನು ಬಾಳಲು ನಿರಾಕರಿಸಿ, ಎಲ್ಲರಿಗಿಂತ ವಿಶಿಷ್ಟವಾದ ಬದುಕನ್ನು ನಡೆಸುವ ವಿಶಿಷ್ಟ ಲೋಕದೃಷ್ಟಿಯುಳ್ಳವರ ಜೀವನಗಾಥೆಗಳಾಗಿವೆ. ಅಪಾರವಾದ ಜೀವನಪ್ರೀತಿಯುಳ್ಳ ವ್ಯಕ್ತಿಗಳು ತಾವು ಹೋಗುವ ಅಪರಿಚಿತ ಎಡೆಯಲ್ಲಿ ಸಿಗುವ ಜನರೊಟ್ಟಿಗೆ ಮನುಷ್ಯ ಸಂಬಂಧ ಬೆಳೆಸುವ ಮಾನವೀಯ ಅಧ್ಯಾಯಗಳಾಗಿವೆ. ಆನಂದದಾಯಕವೂ ಕಠೋರವೂ ಆದ ಬಾನು ಕಡಲು ಕಾಡು ಮರುಭೂಮಿಯಂತಹ ನಿಸರ್ಗದ ಜತೆ ಅನುಸಂಧಾನ ಮಾಡುವ ಪ್ರಯೋಗಗಳಾಗಿವೆ.

ಮರಲಿನ್ ಮತ್ತು ಮರೈಸ್ ಜೋಡಿಯ ಯಾನವನ್ನು ನೋಡುವಾಗ ‘ಜುಗಾರಿ ಕ್ರಾಸ್’ನ ಸುರೇಶ್ ಮತ್ತು ಗೌರಿಯರು ನೆನಪಾದರು. ತೇಜಸ್ವಿಯವರ ಕಥನಗಳಲ್ಲಿ ಪ್ರೇಮಿಗಳು ಮಾಡುವ ಸಾಹಸಗಳಲ್ಲಿ ಗಂಡು ಹೆಚ್ಚು ಕ್ರಿಯಾಶೀಲ, ಧೈರ್ಯಶಾಲಿ. ಮಹಿಳೆ ಅನುಸರಿಸುವವಳು. ಆದರೆ ಈ ಪ್ರವಾಸ ಕಥನ ಬಿಚ್ಚಿಡುವ ಬಾಳಕಡಲಿನಲ್ಲಿ ಕಡೆಗೋಲನ್ನು ಗಂಡು ಕೈಬಿಟ್ಟಾಗಲೆಲ್ಲ ಅದನ್ನು ಎತ್ತಿಕೊಂಡು ಮಹಿಳೆ ದಿಟ್ಟತನವನ್ನು ಪ್ರದರ್ಶಿಸುತ್ತಾಳೆ. ನಿಸರ್ಗವು ಸ್ತ್ರೀಯೊಳಗಿನ ಅಪಾರ ಚೈತನ್ಯ ಧೈರ್ಯ ತಾಯ್ತನಗಳನ್ನು ಲೋಕಕ್ಕೆ ಕಾಣಿಸಲೆಂದೇ ಸೃಷ್ಟಿಸಿದ ನಿಗೂಢ ಪ್ರಾಕೃತಿಕ ನಾಟಕದಂತಿದೆ ಇದು. ಈ ದೃಷ್ಟಿಯಿಂದ ಕೃತಿಯನ್ನು ಗಿರೀಶ್ ಹೆಣ್ಣಿಗೆ ಅರ್ಪಿಸುತ್ತ ಆಡಿರುವ ಮಾತುಗಳು ಮಾರ್ಮಿಕವೂ ಅರ್ಥಪೂರ್ಣವೂ ಆಗಿವೆ. ಮರಲಿನ್ ತೀರಿಕೊಂಡ ಬಳಿಕ ಏಕಾಂಗಿಯಾದ ಮರೈಸ್, ಆಕೆಯನ್ನು ನೆನಪಿಸಿಕೊಳ್ಳುತ್ತ ಹೇಳುವುದು ಕೂಡ ಇದಕ್ಕೆ ಪೂರಕವಾಗಿದೆ; ‘ಎಂಥಾ ಸಂಕಷ್ಟ ಎದುರಾದಾಗಲೂ ಮರಲಿನ್ ತನ್ನೊಳಗಿನ ಬದುಕುವ ತುಡಿತವನ್ನು ಕಳೆದುಕೊಳ್ಳಲಿಲ್ಲ. ಆತ್ಮವಿಶ್ವಾಸವನ್ನು ಘಾಸಿ ಮಾಡಿಕೊಳ್ಳಲಿಲ್ಲ. ಹೆಣ್ಣು ಎಂಬ ಆ ಅದ್ಭುತ ಸೃಷ್ಟಿಗೆ ಇರುವ ಶಕ್ತಿಯೇ ಅಂತಹದ್ದು… ಮರಲಿನ್‌ಳನ್ನು ಭೇಟಿಯಾಗುವವರೆಗೆ ಪ್ರೀತಿ ವಾತ್ಸಲ್ಯ ಎಂಬುದೇ ನನಗೆ ತಿಳಿದಿರಲಿಲ್ಲ. ಆಕೆ ನನ್ನ ಬಾಳಿಗೆ ಬೆಳಕಾದಳು. ನನ್ನ ಬದುಕಿಗೆ ಬೇಕಿದ್ದ ಸುಖ, ಸಂತೋಷ, ನೆಮ್ಮದಿ ಧೈರ್ಯ ಎಲ್ಲವನ್ನೂ ತಂದವಳು. ಆಕೆಯಿಲ್ಲದೆ ನಾನು ಅಪೂರ್ಣ’; ಜ್ಞಾನೋದಯ ಸಾಕ್ಷಾತ್ಕಾರ ಎಂದರೆ ಇದುವೇ.

ಗಿರೀಶ್ ತಾಳಿಕಟ್ಟೆ

ಲವಲವಿಕೆಯ ಗದ್ಯ ಲೇಖಕರಾದ ಗಿರೀಶ್ ತಾಳಿಕಟ್ಟೆ ಕೃತಿಯನ್ನು ಸೊಗಸಾಗಿ ಅನುವಾದಿಸಿದ್ದಾರೆ. ಮತೀಯತೆ, ಜಾತೀಯತೆಯಂತಹ ಮಾರಕ ಕಾಯಿಲೆಗೆ ತುತ್ತಾಗುತ್ತಿರುವ ಭಾರತದ ಹೊಸತಲೆಮಾರಿನ ಹುಡುಗ-ಹುಡುಗಿಯರು ಇಂತಹ ಕಥನಗಳನ್ನು ಓದಬೇಕು; ಇದರಿಂದ ಹೊರಲೋಕದಲ್ಲಿ ಚೈತನ್ಯಶೀಲರಾದ ಜನ ಸಂಪ್ರದಾಯದ ಪಂಕದಲ್ಲಿ ಸಿಕ್ಕಿಕೊಳ್ಳದೆ ಹೇಗೆಲ್ಲ ಬದುಕಿನ ಸಾಹಸಗಳನ್ನು ಮಾಡುವುದಕ್ಕೆ ತುಡಿಯುತ್ತಿದ್ದಾರೆಂದು ತಿಳಿಯುತ್ತದೆ. ದೇಶವನ್ನು ದ್ವೇಷದಿಂದ ಕಟ್ಟಲು ಸಾಧ್ಯವಿಲ್ಲ. ಜ್ಞಾನ ಸಾಹಸ ಪ್ರಯೋಗ ಕ್ರಿಯಾಶೀಲತೆಯಿಂದ ಕಟ್ಟುವುದಕ್ಕೆ ಸಾಧ್ಯ. ಯೂರೋಪು ವಸಾಹತುಶಾಹಿಯಾಗಿ ಏಶಿಯಾ ಆಫ್ರಿಕಾಗಳನ್ನು ವಶಪಡಿಸಿಕೊಂಡು ಮಾಡಿರುವ ಕೃತ್ಯಗಳು ಚಾರಿತ್ರಿಕ ಅಪರಾಧಗಳು ದಿಟ. ಆದರೆ ಅಲ್ಲಿನ ಜನರಲ್ಲಿರುವ ಸಾಹಸಪ್ರವೃತ್ತಿ, ಅನ್ವೇಷಕ ಕುತೂಹಲ, ಸಾವಿಗೆ ಹೆದರದೆ ಕೈಗೊಳ್ಳುವ ಯಾನ, ವಿಜ್ಞಾನ ಮತ್ತು ತಂತ್ರಜ್ಞಾನಗಳು ದೊಡ್ಡ ಮೌಲ್ಯಗಳು. ಶಿವರಾಮ ಕಾರಂತ, ಲಂಕೇಶ್, ತೇಜಸ್ವಿಯವರಿಗೆ ಪಶ್ಚಿಮವು ಸೆಳೆದಿದ್ದೇ ಈ ದಿಸೆಯಲ್ಲಿ. ಈ ಪುಸ್ತಕ ಪ್ರಕಟವಾಗುವ ಕಾಲಕ್ಕೆ ತೇಜಸ್ವಿ ಇದ್ದಿದ್ದರೆ ಖಂಡಿತ ಇಷ್ಟಪಡುತ್ತಿದ್ದರು.

ಪ್ರೊ. ರಹಮತ್ ತರೀಕೆರೆ

ಪ್ರೊ. ರಹಮತ್ ತರೀಕೆರೆ
ರಹಮತ್ ತರೀಕೆರೆ ಕನ್ನಡನಾಡಿನ ಖ್ಯಾತ ಚಿಂತಕರು. ನಾಥಪಂಥ, ಕರ್ನಾಟಕದ ಸೂಫಿಗಳು, ಗುರುಪಂಥಗಳು ಹೀಗೆ ನಾಡಿನ ಹಲವು ಬಹುತ್ವದ ಪಂಥಗಳು ಮತ್ತು ಸೌಹಾರ್ದ ಬದುಕಿನ ಬಗ್ಗೆ ವಿಶೇಷ ಅಧ್ಯಯನಗಳನ್ನು ಮಾಡಿ ಪುಸ್ತಕ ರಚಿಸಿದ್ದಾರೆ. ಇವರ ವಿಮರ್ಶಾ ಸಂಕಲನ ’ಕತ್ತಿಯಂಚಿನ ದಾರಿ’ಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯ ಗೌರವ ಸಂದಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

 


ಇದನ್ನೂ ಓದಿ: ಕವನ; ಕೋಗಿಲೆಗೆ ಸುಖವಿಲ್ಲ!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...

ವಿಧಾನಸಭೆಯಲ್ಲಿ ‘ಗೃಹಲಕ್ಷ್ಮಿ’ ಗದ್ದಲ : ಬಿಜೆಪಿ ಸದಸ್ಯರಿಂದ ಸಭಾತ್ಯಾಗ, ಕ್ಷಮೆ ಕೋರಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಗೃಹಲಕ್ಷಿ ಯೋಜನೆಯ ಹಣ ಬಿಡುಗಡೆ ಸಂಬಂಧ ಸಚಿವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ವಿಚಾರ ಇಂದು (ಡಿ.17 ಬುಧವಾರ) ವಿಧಾನಸಭೆಯಲ್ಲಿ ದೊಡ್ಡ ಮಟ್ಟದ ವಾಗ್ವಾದ, ಆರೋಪ-ಪ್ರತ್ಯಾರೋಪ, ಗದ್ದಲ, ಪ್ರತಿಭಟನೆ, ಸಭಾತ್ಯಾಗ ಮತ್ತು...

ತಂಪು ಪಾನೀಯದಲ್ಲಿ ಮತ್ತು ಬರುವ ಔಷಧ ಬೆರೆಸಿ ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ: ಆರೋಪಿ ಬಂಧನ

ಮುಂಬೈ ನಗರವನ್ನೇ ಬೆಚ್ಚಿಬೀಳಿಸಿದ ಆಘಾತಕಾರಿ ಘಟನೆಯಲ್ಲಿ, ವಕ್ತಿಯೋರ್ವ ಮತ್ತು ಬರುವ ತಂಪು ಪಾನೀಯ ನೀಡಿ ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಅಪರಾಧದ ಅಶ್ಲೀಲ ವೀಡಿಯೊಗಳನ್ನು ರೆಕಾರ್ಡ್ ಮಾಡಿ, ನಂತರ ವೀಡಿಯೊಗಳನ್ನು...

ಮನರೇಗಾ ಬದಲು ವಿಬಿ-ಜಿ ರಾಮ್ ಜಿ : ಲೋಕಸಭೆಯಲ್ಲಿ ಮಸೂದೆ ಅಂಗೀಕಾರದ ವೇಳೆ ಸಭಾತ್ಯಾಗಕ್ಕೆ ನಿರ್ಧರಿಸಿದ ವಿಪಕ್ಷಗಳು

ನರೇಗಾ ಬದಲು ತಂದಿರುವ ವಿಕಸಿತ್ ಭಾರತ್-ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕಾ ಮಿಷನ್ (ಗ್ರಾಮೀಣ್) ಮಸೂದೆ, 2025 (ವಿಬಿ–ಜಿ ರಾಮ್ ಜಿ ಮಸೂದೆ) ಲೋಕಸಭೆಯಲ್ಲಿ ಅಂಗೀಕಾರದ ವೇಳೆ ಸಹಕರಿಸದಿರಲು ವಿರೋಧ ಪಕ್ಷಗಳ ಸಂಸದರು...

ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಆರೋಪ: ಮ್ಯೂಸಿಕ್ ಮೈಲಾರಿ ಮೇಲೆ ಪೋಕ್ಸೋ ಪ್ರಕರಣ ದಾಖಲು 

ಬೆಂಗಳೂರು: ಉತ್ತರ ಕರ್ನಾಟಕದ ಜನಪದ ಗಾಯಕ ಹಾಗೂ ಯೂಟ್ಯೂಬ್ ಸ್ಟಾರ್ ಎಂದೇ ಖ್ಯಾತಿ ಪಡೆದಿದ್ದ ‘ಮ್ಯೂಸಿಕ್ ಮೈಲಾರಿ’ಎಂಬಾತನನ್ನು ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಮಹಾಲಿಂಗಪುರ ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಲಾರಿ...

ಇಂಧನ ಖರೀದಿಗೆ ‘ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ’ ಕಡ್ಡಾಯಗೊಳಿಸಿದ ದೆಹಲಿ ಸರ್ಕಾರ

ರಾಷ್ಟ್ರ ರಾಜಧಾನಿ ದೆಹಲಿಯ ವಾಹನ ಮಾಲೀಕರು ಕಟ್ಟುನಿಟ್ಟಾದ ಆದೇಶ ಎದುರಿಸುತ್ತಾರೆ. ಡಿಸೆಂಬರ್ 18 ರಿಂದ ನಗರದಾದ್ಯಂತದ ಪೆಟ್ರೋಲ್ ಬಂಕ್‌ಗಳಲ್ಲಿ ಇಂಧನ ಖರೀದಿಗೆ ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ (ಪಿಯುಸಿ) ಕಡ್ಡಾಯಗೊಳಿಸಲಾಗಿದೆ. ದೆಹಲಿ ಪರಿಸರ ಸಚಿವ ಮಂಜಿಂದರ್...

ವೈದ್ಯೆಯ ಹಿಜಾಬ್ ಎಳೆದ ಬಿಹಾರ ಸಿಎಂ, ಅವಹೇಳನ ಮಾಡಿದ ಯುಪಿ ಸಚಿವನ ವಿರುದ್ದ ದೂರು ದಾಖಲು

ವೈದ್ಯೆಯ ಹಿಜಾಬ್ ಎಳೆದ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಈ ಘಟನೆಯ ಕುರಿತು ಮಾತನಾಡುವಾಗ ಮಹಿಳೆಯನ್ನು ಅವಮಾನಿಸಿದ ಉತ್ತರ ಪ್ರದೇಶದ ಸಂಪುಟ ಸಚಿವ ಸಂಜಯ್ ನಿಶಾದ್ ವಿರುದ್ದ ಲಕ್ನೋದ ಕೈಸರ್‌ಬಾಗ್ ಪೊಲೀಸ್...

1 ಲಕ್ಷ ರೂಪಾಯಿ ಸಾಲ 74 ಲಕ್ಷ ರೂಪಾಯಿಗೆ ಏರಿಕೆ, ಸಾಲ ತೀರಿಸಲು ಕಿಡ್ನಿ ಮಾರಿದ ರೈತ 

ಅಕ್ರಮವಾಗಿ ಸಾಲ ನೀಡುವವರಿಂದ 1 ಲಕ್ಷ ಸಾಲ ಪಡೆದಿದ್ದು, ಅದಕ್ಕೆ ಹೆಚ್ಚಿನ ದಿನದ ಬಡ್ಡಿ ಸೇರಿ 75 ಲಕ್ಷ ಸಾಲ ಏರಿಕೆಯಾದ ಕಾರಣ ವ್ಯಕ್ತಿಯೊಬ್ಬ ತನ್ನ ಕಿಡ್ನಿಯನ್ನೇ ಮಾರಾಟ ಮಾಡಿರುವ ಘಟನೆ ಮಹಾರಾಷ್ಟ್ರದಲ್ಲಿ...