Homeಪುಸ್ತಕ ವಿಮರ್ಶೆಪ್ರಕಟವಾಗಲಿರುವ ಪುಸ್ತಕ: ಆ 117 ದಿನಗಳು

ಪ್ರಕಟವಾಗಲಿರುವ ಪುಸ್ತಕ: ಆ 117 ದಿನಗಳು

- Advertisement -
- Advertisement -

ಪ್ರಿಯ ಮಿತ್ರರಾದ ಗಿರೀಶ್ ತಾಳಿಕಟ್ಟೆ ಅನುವಾದ ಮಾಡಿರುವ, ಮರಲಿನ್ ಮತ್ತು ಮರೈಸ್ ಬೈಲಿ ಅವರು ರಚಿಸಿರುವ ‘ಆ 117 ದಿನಗಳು’ ಪುಸ್ತಕದ ಹಸ್ತಪ್ರತಿಯನ್ನು ಒಂದೇ ಗುಕ್ಕಿನಲ್ಲಿ ಓದಿ ಮುಗಿಸಿದೆ. ಪ್ರವಾಸಪ್ರಿಯನಾದ ನನಗಿದು ಬಹಳ ಖುಷಿ ಕೊಟ್ಟಿತು. ಸಾಹಸಿಗಳಾದ ಮರಲಿನ್ ಮತ್ತು ಮೈರಸ್ ದಂಪತಿಗಳು ಇಂಗ್ಲೆಂಡಿನಿಂದ ಚಿಕ್ಕದೊಂದು ನಾವೆಯಲ್ಲಿ ಹೊರಟು, ಅಟ್ಲಾಂಟಿಕ್ ಮತ್ತು ಪೆಸಿಫಿಕ್ ಸಮುದ್ರಗಳನ್ನು ಹಾಯುತ್ತ, ನಡುವೆ ನಾವೆ ದುರಂತಕ್ಕೊಳಗಾಗಿ, ಜೀವನ್ಮರಣದ ಗಳಿಗೆಗಳನ್ನು ಎದುರಿಸುತ್ತ ಬದುಕಿ ಬಂದ ಕಥೆಯದು. ಅವರು ಪಯಣ ಆರಂಭಿಸಿದ ಮತ್ತು ತಲುಪಿದ ಬಿಂದುಗಳ ನಡುವಿನ ಕಡಲಿನ ಹರಹನ್ನು ಭೂಪಟದಲ್ಲಿ ನೋಡಿದರೆ ದಂಗುಬಡಿಯುತ್ತದೆ. ಈ ಕಥನದಲ್ಲಿ ಪಯಣದ ಪೂರ್ವದಲ್ಲಿ, ಪಯಣದಲ್ಲಿ ಹಾಗೂ ಪಯಣದ ಬಳಿಕ ಅವರ ಬಾಳಿನಲ್ಲಿ ಪ್ರೇಮ ಸಾಹಸ ಆನಂದ ದುಃಖ ಅಗಲಿಕೆಗಳು, ಸಮುದ್ರದ ಅಲೆಗಳಂತೆ ಒಂದಾದಮೇಲೆಒಂದು ಬಂದು ಅಪ್ಪಳಿಸುತ್ತವೆ. ಇದೊಂದು ರೋಚಕವಾದ ಪ್ರವಾಸ ಕಥನ. ಇದನ್ನು ಓದುವಾಗ, ತೇಜಸ್ವಿಯವರ ‘ಮಹಾಪಲಾಯನ’ ನೆನಪಿಗೆ ಬಂದಿತು; ಎವರೆಸ್ಟ್ ಶಿಖರವನ್ನು ಏರಿ ಹಿಮಪಾತಕ್ಕೆ ಸಿಕ್ಕು ಸಾವಿನಿಂದ ಕೂದಲೆಳೆ ಅಂತರದಲ್ಲಿ ಬಚಾವಾಗಿ ಬಂದ ಅಮೆರಿಕನ್ ಪರ್ವತಾರೋಹಿ ಪೇವರ್ ಮೈಕಲ್‌ನ ‘ಥಿನ್ ಏರ್’; ಸುನ್ ಶುಯೆನ್ ಎಂಬ ಇತಿಹಾಸಜ್ಞೆ, ಚೀನಾದಿಂದ ಭಾರತಕ್ಕೆ ಹ್ಯೂಯನ್‌ತ್ಸಾಂಗ್ ಪಯಣಿಸಿದ ಹಾದಿಯಲ್ಲೆ ಪಯಣಿಸುತ್ತ ಬಂದು ಬರೆದ ಕಥನ, ‘ಟೆನ್‌ಥೌಸಂಡ್ ಮೈಲ್ಸ್ ವಿಥೌಟ್ ಕ್ಲೌಡ್’ ಮುಂತಾದ ಕೃತಿಗಳು ಮನಃಪಟಲದ ಮೇಲೆ ಹಾದುಹೋದವು.

ಮೇಲ್ಕಾಣಿಸಿದ ಪ್ರವಾಸ ಕಥನಗಳ ವಿಶಿಷ್ಟತೆಯೆಂದರೆ, ಕೆಲವು ಸಾಹಸಿಗಳಾದ ವ್ಯಕ್ತಿಗಳು ತಮ್ಮ ಜೀವನದಲ್ಲಿ ವಿಶಿಷ್ಟವಾದ ಗುರಿಯನ್ನು ಇಟ್ಟುಕೊಂಡು, ಕಷ್ಟ ಅಪಾಯಗಳಿಂದ ಕೂಡಿರುವ ಹಾದಿಯಲ್ಲಿ ಪಯಣಿಸುವುದು. ಘಾತಕ ತಿರುವುಗಳಲ್ಲಿ ಮೃತ್ಯುವಿನ ಜತೆ ಮುಖಾಬಿಲೆ ಮಾಡುತ್ತ, ಬದುಕಿನ ಹೊಸ ಅನುಭವಗಳಿಗೆ ತೆರೆದುಕೊಳ್ಳುವುದು. ಎಂತಲೇ ಅವರ ಅನುಭವದಿಂದ ಹುಟ್ಟಿದ ಈ ಕೃತಿಗಳು ಕೇವಲ ಹುಚ್ಚುಸಾಹಸಿಗಳು ಮಾಡಿದ ರೋಚಕ ಪ್ರವಾಸ ವರದಿಗಳಾಗಿಲ್ಲ. ದಾರ್ಶನಿಕವಾಗಿ ಮಾನವ ಚೈತನ್ಯದಲ್ಲಿ ಹುದುಗಿರುವ ಅದಮ್ಯ ಸಾಹಸ ಪ್ರವೃತ್ತಿಯನ್ನು ಲೋಕಕ್ಕೆ ಕಾಣಿಸುವ ಕಥನಗಳಾಗಿವೆ. ನೂರರಲ್ಲಿ ಒಬ್ಬರಾಗಿ ಸಾಮಾನ್ಯ ಲಯದ ಬದುಕನ್ನು ಬಾಳಲು ನಿರಾಕರಿಸಿ, ಎಲ್ಲರಿಗಿಂತ ವಿಶಿಷ್ಟವಾದ ಬದುಕನ್ನು ನಡೆಸುವ ವಿಶಿಷ್ಟ ಲೋಕದೃಷ್ಟಿಯುಳ್ಳವರ ಜೀವನಗಾಥೆಗಳಾಗಿವೆ. ಅಪಾರವಾದ ಜೀವನಪ್ರೀತಿಯುಳ್ಳ ವ್ಯಕ್ತಿಗಳು ತಾವು ಹೋಗುವ ಅಪರಿಚಿತ ಎಡೆಯಲ್ಲಿ ಸಿಗುವ ಜನರೊಟ್ಟಿಗೆ ಮನುಷ್ಯ ಸಂಬಂಧ ಬೆಳೆಸುವ ಮಾನವೀಯ ಅಧ್ಯಾಯಗಳಾಗಿವೆ. ಆನಂದದಾಯಕವೂ ಕಠೋರವೂ ಆದ ಬಾನು ಕಡಲು ಕಾಡು ಮರುಭೂಮಿಯಂತಹ ನಿಸರ್ಗದ ಜತೆ ಅನುಸಂಧಾನ ಮಾಡುವ ಪ್ರಯೋಗಗಳಾಗಿವೆ.

ಮರಲಿನ್ ಮತ್ತು ಮರೈಸ್ ಜೋಡಿಯ ಯಾನವನ್ನು ನೋಡುವಾಗ ‘ಜುಗಾರಿ ಕ್ರಾಸ್’ನ ಸುರೇಶ್ ಮತ್ತು ಗೌರಿಯರು ನೆನಪಾದರು. ತೇಜಸ್ವಿಯವರ ಕಥನಗಳಲ್ಲಿ ಪ್ರೇಮಿಗಳು ಮಾಡುವ ಸಾಹಸಗಳಲ್ಲಿ ಗಂಡು ಹೆಚ್ಚು ಕ್ರಿಯಾಶೀಲ, ಧೈರ್ಯಶಾಲಿ. ಮಹಿಳೆ ಅನುಸರಿಸುವವಳು. ಆದರೆ ಈ ಪ್ರವಾಸ ಕಥನ ಬಿಚ್ಚಿಡುವ ಬಾಳಕಡಲಿನಲ್ಲಿ ಕಡೆಗೋಲನ್ನು ಗಂಡು ಕೈಬಿಟ್ಟಾಗಲೆಲ್ಲ ಅದನ್ನು ಎತ್ತಿಕೊಂಡು ಮಹಿಳೆ ದಿಟ್ಟತನವನ್ನು ಪ್ರದರ್ಶಿಸುತ್ತಾಳೆ. ನಿಸರ್ಗವು ಸ್ತ್ರೀಯೊಳಗಿನ ಅಪಾರ ಚೈತನ್ಯ ಧೈರ್ಯ ತಾಯ್ತನಗಳನ್ನು ಲೋಕಕ್ಕೆ ಕಾಣಿಸಲೆಂದೇ ಸೃಷ್ಟಿಸಿದ ನಿಗೂಢ ಪ್ರಾಕೃತಿಕ ನಾಟಕದಂತಿದೆ ಇದು. ಈ ದೃಷ್ಟಿಯಿಂದ ಕೃತಿಯನ್ನು ಗಿರೀಶ್ ಹೆಣ್ಣಿಗೆ ಅರ್ಪಿಸುತ್ತ ಆಡಿರುವ ಮಾತುಗಳು ಮಾರ್ಮಿಕವೂ ಅರ್ಥಪೂರ್ಣವೂ ಆಗಿವೆ. ಮರಲಿನ್ ತೀರಿಕೊಂಡ ಬಳಿಕ ಏಕಾಂಗಿಯಾದ ಮರೈಸ್, ಆಕೆಯನ್ನು ನೆನಪಿಸಿಕೊಳ್ಳುತ್ತ ಹೇಳುವುದು ಕೂಡ ಇದಕ್ಕೆ ಪೂರಕವಾಗಿದೆ; ‘ಎಂಥಾ ಸಂಕಷ್ಟ ಎದುರಾದಾಗಲೂ ಮರಲಿನ್ ತನ್ನೊಳಗಿನ ಬದುಕುವ ತುಡಿತವನ್ನು ಕಳೆದುಕೊಳ್ಳಲಿಲ್ಲ. ಆತ್ಮವಿಶ್ವಾಸವನ್ನು ಘಾಸಿ ಮಾಡಿಕೊಳ್ಳಲಿಲ್ಲ. ಹೆಣ್ಣು ಎಂಬ ಆ ಅದ್ಭುತ ಸೃಷ್ಟಿಗೆ ಇರುವ ಶಕ್ತಿಯೇ ಅಂತಹದ್ದು… ಮರಲಿನ್‌ಳನ್ನು ಭೇಟಿಯಾಗುವವರೆಗೆ ಪ್ರೀತಿ ವಾತ್ಸಲ್ಯ ಎಂಬುದೇ ನನಗೆ ತಿಳಿದಿರಲಿಲ್ಲ. ಆಕೆ ನನ್ನ ಬಾಳಿಗೆ ಬೆಳಕಾದಳು. ನನ್ನ ಬದುಕಿಗೆ ಬೇಕಿದ್ದ ಸುಖ, ಸಂತೋಷ, ನೆಮ್ಮದಿ ಧೈರ್ಯ ಎಲ್ಲವನ್ನೂ ತಂದವಳು. ಆಕೆಯಿಲ್ಲದೆ ನಾನು ಅಪೂರ್ಣ’; ಜ್ಞಾನೋದಯ ಸಾಕ್ಷಾತ್ಕಾರ ಎಂದರೆ ಇದುವೇ.

ಗಿರೀಶ್ ತಾಳಿಕಟ್ಟೆ

ಲವಲವಿಕೆಯ ಗದ್ಯ ಲೇಖಕರಾದ ಗಿರೀಶ್ ತಾಳಿಕಟ್ಟೆ ಕೃತಿಯನ್ನು ಸೊಗಸಾಗಿ ಅನುವಾದಿಸಿದ್ದಾರೆ. ಮತೀಯತೆ, ಜಾತೀಯತೆಯಂತಹ ಮಾರಕ ಕಾಯಿಲೆಗೆ ತುತ್ತಾಗುತ್ತಿರುವ ಭಾರತದ ಹೊಸತಲೆಮಾರಿನ ಹುಡುಗ-ಹುಡುಗಿಯರು ಇಂತಹ ಕಥನಗಳನ್ನು ಓದಬೇಕು; ಇದರಿಂದ ಹೊರಲೋಕದಲ್ಲಿ ಚೈತನ್ಯಶೀಲರಾದ ಜನ ಸಂಪ್ರದಾಯದ ಪಂಕದಲ್ಲಿ ಸಿಕ್ಕಿಕೊಳ್ಳದೆ ಹೇಗೆಲ್ಲ ಬದುಕಿನ ಸಾಹಸಗಳನ್ನು ಮಾಡುವುದಕ್ಕೆ ತುಡಿಯುತ್ತಿದ್ದಾರೆಂದು ತಿಳಿಯುತ್ತದೆ. ದೇಶವನ್ನು ದ್ವೇಷದಿಂದ ಕಟ್ಟಲು ಸಾಧ್ಯವಿಲ್ಲ. ಜ್ಞಾನ ಸಾಹಸ ಪ್ರಯೋಗ ಕ್ರಿಯಾಶೀಲತೆಯಿಂದ ಕಟ್ಟುವುದಕ್ಕೆ ಸಾಧ್ಯ. ಯೂರೋಪು ವಸಾಹತುಶಾಹಿಯಾಗಿ ಏಶಿಯಾ ಆಫ್ರಿಕಾಗಳನ್ನು ವಶಪಡಿಸಿಕೊಂಡು ಮಾಡಿರುವ ಕೃತ್ಯಗಳು ಚಾರಿತ್ರಿಕ ಅಪರಾಧಗಳು ದಿಟ. ಆದರೆ ಅಲ್ಲಿನ ಜನರಲ್ಲಿರುವ ಸಾಹಸಪ್ರವೃತ್ತಿ, ಅನ್ವೇಷಕ ಕುತೂಹಲ, ಸಾವಿಗೆ ಹೆದರದೆ ಕೈಗೊಳ್ಳುವ ಯಾನ, ವಿಜ್ಞಾನ ಮತ್ತು ತಂತ್ರಜ್ಞಾನಗಳು ದೊಡ್ಡ ಮೌಲ್ಯಗಳು. ಶಿವರಾಮ ಕಾರಂತ, ಲಂಕೇಶ್, ತೇಜಸ್ವಿಯವರಿಗೆ ಪಶ್ಚಿಮವು ಸೆಳೆದಿದ್ದೇ ಈ ದಿಸೆಯಲ್ಲಿ. ಈ ಪುಸ್ತಕ ಪ್ರಕಟವಾಗುವ ಕಾಲಕ್ಕೆ ತೇಜಸ್ವಿ ಇದ್ದಿದ್ದರೆ ಖಂಡಿತ ಇಷ್ಟಪಡುತ್ತಿದ್ದರು.

ಪ್ರೊ. ರಹಮತ್ ತರೀಕೆರೆ

ಪ್ರೊ. ರಹಮತ್ ತರೀಕೆರೆ
ರಹಮತ್ ತರೀಕೆರೆ ಕನ್ನಡನಾಡಿನ ಖ್ಯಾತ ಚಿಂತಕರು. ನಾಥಪಂಥ, ಕರ್ನಾಟಕದ ಸೂಫಿಗಳು, ಗುರುಪಂಥಗಳು ಹೀಗೆ ನಾಡಿನ ಹಲವು ಬಹುತ್ವದ ಪಂಥಗಳು ಮತ್ತು ಸೌಹಾರ್ದ ಬದುಕಿನ ಬಗ್ಗೆ ವಿಶೇಷ ಅಧ್ಯಯನಗಳನ್ನು ಮಾಡಿ ಪುಸ್ತಕ ರಚಿಸಿದ್ದಾರೆ. ಇವರ ವಿಮರ್ಶಾ ಸಂಕಲನ ’ಕತ್ತಿಯಂಚಿನ ದಾರಿ’ಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯ ಗೌರವ ಸಂದಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

 


ಇದನ್ನೂ ಓದಿ: ಕವನ; ಕೋಗಿಲೆಗೆ ಸುಖವಿಲ್ಲ!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಬಿಡದಿ ಟೌನ್‌ಶಿಪ್ ಸರ್ವೆಗೆ ರೈತರ ತೀವ್ರ ವಿರೋಧ: ಅಧಿಕಾರಿಗಳಿಗೆ ಪೊರಕೆ ಏಟು, ಕಾರುಗಳು ಜಖಂ

ರಾಮನಗರ: ಬಿಡದಿ ಉಪನಗರ (ಟೌನ್‌ಶಿಪ್) ಯೋಜನೆಯನ್ನು ವಿರೋಧಿಸಿ ಸ್ಥಳೀಯ ರೈತರು ನಡೆಸುತ್ತಿರುವ ಹೋರಾಟ ದಿನದಿಂದ ದಿನಕ್ಕೆ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದ್ದು, ಸೋಮವಾರ (ಜುಲೈ 13) ಬೆಂಗಳೂರು ದಕ್ಷಿಣ ಜಿಲ್ಲೆಯ ರಾಮನಗರ ತಾಲೂಕಿನ ಮಂಡಲಹಳ್ಳಿ...

ಮನೆಕೆಲಸದಾಕೆ ಮೇಲಿನ ದೌರ್ಜನ್ಯ ಆರೋಪ ಪ್ರಕರಣ : ಜೆಡಿಎಸ್ ಶಾಸಕ ಹೆಚ್​​​.ಡಿ. ರೇವಣ್ಣಗೆ ಸುಪ್ರೀಂ ಕೋರ್ಟ್​ ನೋಟಿಸ್​

ಮಹಿಳೆಯ ಘನತೆಗೆ ಧಕ್ಕೆ ಹಾಗೂ ಲೈಂಗಿಕ ಕಿರುಕುಳ ಆರೋಪಗಳಿಗೆ ಸಂಬಂಧಿಸಿದ ಪ್ರಕರಣದಲ್ಲಿ ಕರ್ನಾಟಕ ಹೈಕೋರ್ಟ್‌ ನೀಡಿದ್ದ ಆದೇಶ ಪ್ರಶ್ನಿಸಿ ರಾಜ್ಯ ಸರ್ಕಾರ ಸಲ್ಲಿಸಿರುವ ಮೇಲ್ಮನವಿಗೆ ಸಂಬಂಧಿಸಿದಂತೆ, ಸುಪ್ರೀಂ ಕೋರ್ಟ್‌ ಸೋಮವಾರ (ಜು.13) ಜೆಡಿಎಸ್‌...

ದಲಿತ ಯುವಕರಿಗೆ ವಿದ್ಯುತ್ ಶಾಕ್‌ ಶಿಕ್ಷೆ: ಕಳ್ಳತನ ಆರೋಪದ ಮೇಲೆ ಇಬ್ಬರಿಗೆ ಚಿತ್ರಹಿಂಸೆ

ದಲಿತ ಯುವಕರ ಮೇಲೆ ಮಧ್ಯಪ್ರದೇಶದಲ್ಲಿ ನಡೆದಿರುವ ಅಮಾನವೀಯ ಕೃತ್ಯವೊಂದರ ವಿಡಿಯೋ ಇದೀಗ ನಾಗರಿಕ ಸಮಾಜವನ್ನೇ ಆಘಾತಕ್ಕೀಡು ಮಾಡಿದೆ. ನೀರಿನ ಪಂಪ್ ಮೋಟಾರ್ ಕದ್ದಿದ್ದಾರೆ ಎಂಬ ಶಂಕೆಯ ಮೇಲೆ ಇಬ್ಬರು ದಲಿತ ಯುವಕರನ್ನು ಕಂಬಕ್ಕೆ...

ರಾಮಮಂದಿರ ಹಗರಣ: ಕೇಂದ್ರ ಸರ್ಕಾರ, ಟ್ರಸ್ಟ್, ಉತ್ತರ ಪ್ರದೇಶ ಸರ್ಕಾರಕ್ಕೆ ‘ಸುಪ್ರೀಂ’ ನೋಟಿಸ್ 

ನವದೆಹಲಿ: ವಿಶ್ವಪ್ರಸಿದ್ಧ ಅಯೋಧ್ಯೆಯ ಶ್ರೀ ರಾಮಮಂದಿರಕ್ಕೆ ಸಾರ್ವಜನಿಕ ಭಕ್ತಾದಿಗಳಿಂದ ಹರಿದುಬಂದಿರುವ ಕೋಟ್ಯಂತರ ರೂಪಾಯಿ ದೇಣಿಗೆ ನಿಧಿಯ ಕಳ್ಳತನ, ದುರುಪಯೋಗ ಮತ್ತು ಆಡಳಿತಾತ್ಮಕ ಅಕ್ರಮಗಳ ಆರೋಪ ಇದೀಗ ದೇಶಾದ್ಯಂತ ಭಾರಿ ಸಂಚಲನ ಮೂಡಿಸಿದೆ. ಈ...

ಜಮ್ಮು-ಕಾಶ್ಮೀರ: ಪ್ರತ್ಯೇಕತಾವಾದಿಗಳು, ಉಗ್ರಗಾಮಿಗಳನ್ನು ವೈಭವೀಕರಿಸಿದ ಆರೋಪ: ಮೂವರು ಪ್ರಕಾಶಕರ ಬಂಧನ

ಜಮ್ಮು/ಶ್ರೀನಗರ: ಜಮ್ಮು ಮತ್ತು ಕಾಶ್ಮೀರದಲ್ಲಿ ಪ್ರತ್ಯೇಕತಾವಾದಿ ಹಾಗೂ ಭಯೋತ್ಪಾದಕ ನಾಯಕರನ್ನು ವೈಭವೀಕರಿಸುವ ಪುಸ್ತಕಗಳನ್ನು ಪ್ರಕಟಿಸಿ, ವಿತರಿಸಿದ ಗಂಭೀರ ಆರೋಪದ ಮೇಲೆ ಪ್ರತಿ-ಗುಪ್ತಚರ ವಿಭಾಗದ (ಸಿಐಜೆಕೆ) ಪೊಲೀಸರು ಭಾನುವಾರ ಇಬ್ಬರು ಪ್ರಮುಖ ಪ್ರಕಾಶನ ಸಂಸ್ಥೆಗಳಿಗೆ...

ಕರ್ನಾಟಕ ಎಸ್‍ಐಆರ್: ಮತದಾರರ ಸೌಲಭ್ಯ ಕೇಂದ್ರಗಳ ಕೊರತೆ, ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯಕ್ಕೆ ಅಡ್ಡಿ: ವರದಿ

ಬೆಂಗಳೂರು: ರಾಜ್ಯದಲ್ಲಿ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆ ಆರಂಭವಾಗಿ ಸುಮಾರು ಎರಡು ವಾರಗಳು ಕಳೆಯುತ್ತಾ ಬಂದಿದ್ದರೂ, ಚುನಾವಣಾ ಆಯೋಗವು ಸಾರ್ವಜನಿಕರ ಅನುಕೂಲಕ್ಕಾಗಿ ರಾಜ್ಯಾದ್ಯಂತ ಅಗತ್ಯವಿರುವಷ್ಟು ಮತದಾರರ ಸೌಲಭ್ಯ ಕೇಂದ್ರಗಳನ್ನು...

27 ಮಂದಿಯನ್ನು ‘ವಿದೇಶಿಯರು’ ಎಂದಿದ್ದ ಅಸ್ಸಾಂ ನ್ಯಾಯಮಂಡಳಿಗಳ ಆದೇಶ ರದ್ದುಗೊಳಿಸಿದ ಸುಪ್ರೀಂ ಕೋರ್ಟ್

ಒಬ್ಬ ವ್ಯಕ್ತಿಯ ಪೌರತ್ವ ಮತ್ತು ವಿದೇಶಿಯರ ಸ್ಥಾನಮಾನವನ್ನು ನಿರ್ಧರಿಸುವಾಗ ಕೇವಲ ಯಾಂತ್ರಿಕವಾಗಿ ತೀರ್ಪು ನೀಡಲಾಗದು, ಬದಲಿಗೆ ಅತ್ಯಂತ ನ್ಯಾಯಯುತ, ಕಾನೂನುಬದ್ಧ ಹಾಗೂ ಸಮಂಜಸವಾದ ಪ್ರಕ್ರಿಯೆಯನ್ನು ಕಡ್ಡಾಯವಾಗಿ ಪಾಲಿಸಲೇಬೇಕು ಎಂದು ಸುಪ್ರೀಂ ಕೋರ್ಟ್ ಸೋಮವಾರ...

ಶಿಕ್ಷಕ ‘ಖಾನ್ ಸರ್‌’ಗೆ ಪಟ್ನಾ ಕೋರ್ಟ್‌ನಲ್ಲಿ ಜಯ: ಕೋಚಿಂಗ್ ಸೆಂಟರ್ ದಾಳಿ ಪ್ರಕರಣದಲ್ಲಿ ಮುಂಗಡ ಜಾಮೀನು ಮಂಜೂರು

ಬಿಹಾರದ ಖ್ಯಾತ ಶಿಕ್ಷಕ ಫೈಸಲ್ ಖಾನ್ (ಜನಪ್ರಿಯವಾಗಿ ಖಾನ್ ಸರ್ ಎಂದು ಕರೆಯಲ್ಪಡುವ) ಅವರಿಗೆ ಪಟ್ನಾ ನ್ಯಾಯಾಲಯವು ಸೋಮವಾರ ಮುಂಗಡ ಜಾಮೀನು ಮಂಜೂರು ಮಾಡಿದೆ. ಈ ತಿಂಗಳ ಆರಂಭದಲ್ಲಿ ಅವರ ಕೋಚಿಂಗ್ ಇನ್ಸ್ಟಿಟ್ಯೂಟ್...

ಗುಜರಾತ್‌| ದನಗಳನ್ನು ಸಾಗಿಸುತ್ತಿದ್ದ ಟ್ರಕ್ ಚಾಲಕನನ್ನು ಬೆದರಿಸಿದ ನಕಲಿ ಗೋರಕ್ಷಕರು

ಗುಜರಾತ್‌ನ ವಲ್ಸಾದ್ ಜಿಲ್ಲೆಯಲ್ಲಿ ಸ್ವಘೋಷಿತ ಗೋರಕ್ಷಕರ ಗುಂಪೊಂದು ದನಗಳನ್ನು ಸಾಗಿಸುತ್ತಿದ್ದ ಟ್ರಕ್ ಅನ್ನು ಸುಮಾರು 100 ಕಿಲೋಮೀಟರ್‌ಗಳವರೆಗೆ ಬೆನ್ನಟ್ಟಿ, ವಾಹನವನ್ನು ತಡೆದು ಗುಂಪು ಮುಸ್ಲಿಂ ಚಾಲಕನನ್ನು ನಿಂದಿಸಿ ಬೆದರಿಸಿದ್ದಾರೆ. 'ಕ್ಲಾರಿಯನ್ ಇಂಡಿಯಾ' ವರದಿ ಪ್ರಕಾರ,...

ವಿಜಯ್ ಸರ್ಕಾರಕ್ಕೆ ಸುಪ್ರೀಂ ಕೋರ್ಟ್‌ನಲ್ಲಿ ಜಯ: ತಮಿಳುನಾಡು ಗೋಹತ್ಯೆ ನಿಷೇಧದ ಹೈಕೋರ್ಟ್ ಆದೇಶಕ್ಕೆ ತಡೆ

ತಮಿಳುನಾಡಿನಲ್ಲಿ ಹಸು ಮತ್ತು ಕರುಗಳ ಹತ್ಯೆಯನ್ನು ರಾಜ್ಯಾದ್ಯಂತ ಸಂಪೂರ್ಣವಾಗಿ ನಿಷೇಧಿಸಿ ಮದ್ರಾಸ್ ಹೈಕೋರ್ಟ್ ನೀಡಿದ್ದ ಆದೇಶಕ್ಕೆ ಸುಪ್ರೀಂ ಕೋರ್ಟ್ ಸೋಮವಾರ ತಡೆ ನೀಡಿದೆ. ಮುಖ್ಯಮಂತ್ರಿ ವಿಜಯ್ ನೇತೃತ್ವದ ತಮಿಳಗ ವೆಟ್ರಿ ಕಳಗಂ (TVK)...