Homeಮುಖಪುಟಅಸಮಾನತೆ ಪೋಷಣೆಗೆ ಪೊಲೀಸರು

ಅಸಮಾನತೆ ಪೋಷಣೆಗೆ ಪೊಲೀಸರು

- Advertisement -
- Advertisement -

ಒಂದು ಊರಲ್ಲಿ ಅಣ್ಣ ಮತ್ತು ತಮ್ಮನ ಮಧ್ಯೆ ಎಂತಹದೋ ಗಲಾಟೆ. ಅಣ್ಣ ಹಣದಲ್ಲಿ ಮುಂದಿದ್ದ. ತಮ್ಮ ಕೂಲಿ ಕೆಲಸ. ತಮ್ಮನಿಗೆ ಬುದ್ಧಿ ಕಲಿಸಬೇಕು ಅಂತ ತನಗೆ ಗೊತ್ತಿರುವ ಪೊಲೀಸ್‌ಗೆ ಅಣ್ಣ ಒಂದಿಷ್ಟು ದುಡ್ಡು ಕೊಟ್ಟ. ಪೊಲೀಸರು ತಮ್ಮನನ್ನು ಜೀಪಲ್ಲಿ ಕರ್‍ಕೊಂಡು ಹೋದರು. ಏನು ಮಾಡಿದ್ರು ಗೊತ್ತಿಲ್ಲ. ಆದರೆ ಸ್ವಲ್ಪ ಹೊತ್ತಿನ ನಂತರ ತಮ್ಮನ ಹೆಂಡತಿಗೆ ಮಾಹಿತಿ ಬಂತು. ಅವರು ಪೊಲೀಸ್ ಸ್ಟೇಷನ್‌ಗೆ ಹೋಗಿ ನೋಡುವಷ್ಟರಲ್ಲಿ ಗಂಡ ರಕ್ತ ವಾಂತಿ ಮಾಡಿಕೊಂಡಿದ್ದರು. “ಏನೋ ತಿಂದು ಬಂದಿದಾನೆ. ಆಸ್ಪತ್ರೆಗೆ ಕರೆದುಕೊಂಡು ಹೋಗು” ಎಂದು ಪೊಲೀಸರು ತಾಕೀತು ಮಾಡಿದರು. ಆ ನಂತರ ಕೆಲವೇ ನಿಮಿಷಗಳಲ್ಲಿ ಆತನ ಪ್ರಾಣ ಹೋಯ್ತು.

ಇನ್ನೊಂದು ಊರಲ್ಲಿ ಒಂದು ಕೊಲೆ. ಆರೋಪಿಗಳ ಹುಡುಕಾಟದಲ್ಲಿ ಪೊಲೀಸರು. ಒಬ್ಬ ಅಧಿಕಾರಿಗೆ ಅಲ್ಲೊಬ್ಬನ ಮೇಲೆ ಅನುಮಾನ. ಕರೆದುಕೊಂಡು ಬಂದು ಸತತವಾಗಿ ಹದಿನೈದು ದಿನ ವಿಚಾರಣೆ ಮಾಡಿದರು. ಕೊಲೆಗೂ, ತನಗೂ ಏನೂ ಸಂಬಂಧ ಇಲ್ಲ ಅಂತ ಎಷ್ಟು ಬಡ್ಕೊಂಡರೂ ಪೊಲೀಸರು ಕೇಳಲಿಲ್ಲ. ಆಮೇಲೆ ಇನ್ನೊಬ್ಬ ಅಧಿಕಾರಿ ’ಇಲ್ಲಿದಾನೆ ನಿಜ ಆರೋಪಿ. ಅವನನ್ನು ಬಿಟ್ಟುಬಿಡಿ’ ಅಂದರು. ಆ ಹದಿನೈದು ದಿನ ಆ ಅಮಾಯಕ ಅನುಭವಿಸಿದ ಯಾತನೆ ಯಾವ ಪ್ರಾಣಿಗೂ ಬೇಡ.

ಯಾವುದೇ ತಯಾರಿ ಇಲ್ಲದೆ ದೇಶಾದ್ಯಂತ ಲಾಕ್‌ಡೌನ್ ಘೋಷಿಸಿದ ನಂತರ ದೆಹಲಿಯಿಂದ ಕಾರ್ಮಿಕರು ತಮ್ಮ ತವರು ಬಿಹಾರಕ್ಕೆ ಸೈಕಲ್ ತುಳಿಯುತ್ತಾ ಹೊರಟಿದ್ದರು. ಸಾಯೋದಾದ್ರೂ ನಾವು ಊರಿಗೆ ಹೋಗಿ ಅಪ್ಪ, ಅಮ್ಮಂದಿರ ಬಳಿಯೇ ಸಾಯೋಣ ಎಂಬ ನಿರ್ಧಾರ ಅವರದು. ಆದರೆ ಅಲ್ಲೊಂದು ಕಡೆ ಅವರನ್ನು ತಡೆದ ಪೊಲೀಸರು ಹಿಗ್ಗಾಮುಗ್ಗಾ ಬಾರಿಸಿದರು. ’ಲಾಕ್ ಡೌನ್ ಇದೆ. ಯಾಕೋ ಹೊರಗಡೆ ಬಂದ್ರಿ? ನಿಮ್ಮ ಅಮ್ಮಂದಿರಿಗೆ ಗಿರಾಕಿ ಹುಡುಕಿಕೊಂಡು ಹೊರಟಿರೇನೋ..?’ ಎನ್ನುತ್ತಾನೆ ಒಬ್ಬ ಪೊಲೀಸ್. ಇನ್ನೊಂದು ಕಡೆ ಜ್ವರದಿಂದ ಬಳಲುತ್ತಿದ್ದ ಮಗನನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿದ್ದ ಅಪ್ಪನನ್ನು ತಲೆ ಒಡೆದು ರಕ್ತ ಬರುವಂತೆ ಬಾರಿಸಿದರು. ಸಿಟ್ಟಿಗೆದ್ದು ಆತ ತಿರುಗಿಬಿದ್ದು ವಾದಿಸಿದಾಗ, ಪೊಲೀಸರಿಗೆ ಎದುರು ಮಾತನಾಡ್ತೀಯಾ ಎಂದು ಅವನನ್ನು ಬಲವಂತವಾಗಿ ಸ್ಟೇಷನ್‌ಗೆ ಕರೆದುಕೊಂಡು ಮತ್ತಷ್ಟು ಹಿಂಸೆ ನೀಡಿದರು. ಇವರನ್ನೆಲ್ಲಾ ಮನುಷ್ಯರೆನ್ನಬೇಕೆ?

ಹೀಗೆ ಹೇಳುತ್ತಾ ಹೋಗಲು ನೂರು ಘಟನೆಗಳಿವೆ. ಯಾವೂ ಸುಳ್ಳಲ್ಲ. ನಡೆದ ಘಟನೆಗಳಿವು. ನಿವೃತ್ತಿಯಾದ ಅಥವಾ ಆತ್ಮೀಯರಾದ ಕೆಲ ಪೊಲೀಸ್ ಅಧಿಕಾರಿಗಳ ಜೊತೆ ಮಾತನಾಡಿದರೆ ಪೊಲೀಸರ ಕ್ರೂರ ವರ್ತನೆ ಅನಾವರಣಗೊಳಿಸುವ ಮತ್ತಷ್ಟು ಕರಳು ಹಿಂಡುವ ಕತೆಗಳು ಗೊತ್ತಾಗಬಹುದು. ಇನ್ನೊಬ್ಬ ಅಧಿಕಾರಿ ಇದ್ದರು. ಪೊಲೀಸರ ಕೆಲಸಗಳಲ್ಲಿ ಒಂದು ಕಳ್ಳತನ ತಡೆಯುವುದು ತಾನೆ. ಆದರೆ ಆ ಮಹಾಶಯ ತಾನು ಕೆಲಸ ಮಾಡುತ್ತಿದ್ದ ಊರಿನ ಬಸ್ ಸ್ಟಾಂಡ್‌ನಲ್ಲಿ ಪಿಕ್‌ಪಾಕೆಟ್ ಮಾಡಲೆಂದು ನುರಿತ ಕಳ್ಳರಿಗೆ ಆಶ್ರಯ ನೀಡಿ ಸಾಕಿಕೊಂಡಿದ್ದರು. ಅವರು ದಿನವಿಡೀ ಪಿಕ್‌ಪಾಕೆಟ್ ಮಾಡಿ ತಂದಿದ್ದನ್ನು ಪೊಲೀಸ್ ಅಧಿಕಾರಿಗೆ ಕೊಟ್ಟು ತನ್ನ ಪಾಲನ್ನು ಪಡೆಯಬೇಕಿತ್ತು. ಇಂತಹ ಅಧಿಕಾರಿಗಳೂ ಇದ್ದಾರೆ ಎಂದರೆ ಅಚ್ಚರಿ ಪಡಬೇಕಿಲ್ಲ. ಅವರಲ್ಲಿ ಕೆಲವರು ಇನ್ನು ಕೆಲವೇ ವರ್ಷಗಳಲ್ಲಿ ಶಾಸಕರೋ, ಮಂತ್ರಿಗಳೋ ಆಗಿ ಆಯ್ಕೆಯಾಗಬಹುದು.

ಕಳ್ಳರನ್ನು, ಕೊಲೆಗಡುಕರನ್ನು ಹಿಡಿದು ನ್ಯಾಯಾಲಯಕ್ಕೆ ಒಪ್ಪಿಸಬೇಕಾದ ಇವರೇ ಕ್ರಿಮಿನಲ್‌ಗಳಾಗಿದ್ದಾರೆ. ಅಲ್ಲಲ್ಲಿ ಸಣ್ಣಪುಟ್ಟ ಕಳ್ಳತನ ಮಾಡುವವರನ್ನು ಹಿಡಿದು ಫೋಟೋ ತೆಗೆಸಿಕೊಳ್ಳುವ ಇವರು, ಮತ್ತಾರದೋ ಹಣ ಲಪಟಾಯಿಸಿ ಅದನ್ನೇ ರಾಜಕಾರಣಿಗಳಿಗೆ ಒಪ್ಪಿಸಿ ಆಯಕಟ್ಟಿನ ಜಾಗಕ್ಕೆ ಬರುತ್ತಾರೆ. ಕೆಲವು ತಿಂಗಳುಗಳ ಹಿಂದೆ ಒಂದು ಆಡಿಯೋ ವೈರಲ್ ಆಗಿತ್ತು. ಅದರಲ್ಲಿ ಉತ್ತಮ ಜಾಗಕ್ಕಾಗಿ ಕಾಯುತ್ತಿದ್ದ ಒಬ್ಬ ಅಧಿಕಾರಿ ಹೇಳಿದ್ದು, “ಈಗಿನ ಶಾಸಕರು ಈ ಹಿಂದೆ ಕೇವಲ ಕಾರ್ಯಕರ್ತರಾಗಿದ್ದಾಗ ಒಂದು ಪ್ರಕರಣದಲ್ಲಿ ನಾನು ಸಹಾಯ ಮಾಡಿದ್ದೆ. ಹಾಗಾಗಿ ನನಗೆ ಆ ಸ್ಟೇಷನ್ ಮಾಡಿಸಿಕೊಡ್ತೀನಿ ಎಂದು ಮಾತು ಕೊಟ್ಟಿದ್ದಾರೆ”. ಆ ಆಡಿಯೋ ಸರಕಾರದ ಗಮನಕ್ಕೆ ಬಂತು. ಆದರೆ ಏನಾಯ್ತು? ಕೆಲವೇ ದಿನಗಳಲ್ಲಿ ಆ ಅಧಿಕಾರಿ ತಾನು ನಿರೀಕ್ಷಿಸಿದ್ದ ಅದೇ ಠಾಣೆಗೆ ನೇಮಕಗೊಂಡರು.

ಕನಿಷ್ಟ ಲಜ್ಜೆ ಇಲ್ಲದ ಹಾಗೂ ಈ ನೆಲದ ಕಾನೂನಿಗೆ ಗೌರವ ಕೊಡದ ತುಂಬಾ ಮಂದಿ ಈ ಇಲಾಖೆಯಲ್ಲಿದ್ದಾರೆ. ಒಂದು ಬೈಕ್ ಕಳೆದುಕೊಂಡವರು ದೂರು ಕೊಡಲು ಹೋದಾಗ ಅನುಭವಿಸುವ ಯಾತನೆ ಯಾರಿಗೂ ಬೇಡ. ಆ ಬೈಕ್ ಮತ್ತೆ ಸಿಕ್ಕ ನಂತರ ಅದನ್ನು ಹಿಂಪಡೆಯುವುದು ಇನ್ನೊಂದು ದಾರುಣ ಕತೆ. ಬೈಕ್ ಕಳ್ಳನಿಂದ ಸುಸ್ಥಿತಿಯಲ್ಲಿ ಸಿಕ್ಕಿದ್ದರೂ ಪೊಲೀಸರು ಹಿಂತಿರುಗಿಸುವಾಗ ಯಾವ ಸ್ಪೇರ್ ಪಾರ್‍ಟ್ಸ್ ಇಲ್ಲದಂತೆ ನೋಡಿಕೊಂಡಿರುತ್ತಾರೆ.

ನಿವೃತ್ತರಾಗಿರುವ ಪೊಲೀಸ್ ಅಧಿಕಾರಿಗಳು ಆಗಾಗ ಟಿವಿ ಚರ್‍ಚೆಗಳಲ್ಲಿ ಭಾಗವಹಿಸಿ ಮಾತನಾಡುವುದನ್ನು ನೋಡಿ. ಅವರ ಮಾತುಗಳಲ್ಲಿ ವೃತ್ತಿ ಕಾಲದ ತಮ್ಮ ಯಾವ ನಡೆಯ ಬಗ್ಗೆಯೂ ಅವರು ವಿಷಾದ ತೋರುವುದಿಲ್ಲ. ಬದಲಿಗೆ ತಮ್ಮ ’ಶೌರ್ಯವನ್ನು’ ವೀರಾವೇಶದಿಂದ ಹೇಳಿಕೊಳ್ಳುತ್ತಾರೆ. ಪೊಲೀಸ್ ಆಡಳಿತ ಸುಧಾರಣೆ ಬಗ್ಗೆ ಮಾತನಾಡುವುದಿಲ್ಲ. ಅಲ್ಲೊಬ್ಬ, ಇಲ್ಲೊಬ್ಬ ನಿಷ್ಠಾವಂತ, ಪ್ರಾಮಾಣಿಕ ಅಧಿಕಾರಿಗಳಿದ್ದಾರೆ ಎಂಬ ಮಾತು ಕೇಳುತ್ತೇವೆ. ಆದರೆ ಅವರು ವ್ಯವಸ್ಥೆಯ ಸುಧಾರಣೆ ಕಡೆ ಯೋಚನೆ ಮಾಡಿದ್ದು ಕಡಿಮೆ. ಪ್ರತಿಷ್ಠಿತ ತರಬೇತಿ ಸಂಸ್ಥೆಗಳಲ್ಲಿ ಭಾರತೀಯ ಪ್ರಜಾಪ್ರಭುತ್ವ, ಬಹುತ್ವದ ಪಾಠ ಕೇಳಿಕೊಂಡು ಫೀಲ್ಡ್‌ಗೆ ಬಂದವರು ತೀರಾ ಅಲ್ಪರಂತೆ ವರ್ತಿಸುತ್ತಾರೆ. ಹಾಗಾಗಿ ತರಬೇತಿ ವ್ಯವಸ್ಥೆಯೇ ಅಮೂಲಾಗ್ರವಾಗಿ ಬದಲಾಗಬೇಕು ಎಂದು ಹೇಳುವವರು ಹಲವರಿದ್ದಾರೆ.

ಆದರೆ ಇದೆಲ್ಲಕ್ಕಿಂತ ಪರಿಣಾಮಕಾರಿಯಾಗಿ ಈ ಪೊಲೀಸಿಂಗ್ ಕೊನೆಯಾಗಬೇಕೆಂದು ಗಟ್ಟಿಯಾಗಿ ಪ್ರತಿಪಾದಿಸಿದವರು ಅಮೆರಿಕಾದ ಅಲೆಕ್ಸ್ ವಿಠಾಲೆ. ಅವರ ಪುಸ್ತಕ ’ದಿ ಎಂಡ್ ಆಫ್ ಪೊಲೀಸಿಂಗ್’ ಪ್ರತಿಪಾದಿಸುವುದು ಪೊಲೀಸ್ ಆಡಳಿತ ಸುಧಾರಣೆಯನ್ನಲ್ಲ, ಬದಲಿಗೆ ಪೊಲೀಸ್ ವ್ಯವಸ್ಥೆಯ ಸಂಪೂರ್ಣ ಅಂತ್ಯ.

ನಾವು ಈಗ ನೋಡುತ್ತಿರುವ ಆಧುನಿಕ ಪೊಲೀಸ್ ವ್ಯವಸ್ಥೆ ಆರಂಭವಾಗಿದ್ದು ಇಂಗ್ಲೆಂಡ್‌ನಲ್ಲಿ 1820ರ ದಶಕದಲ್ಲಿ. ಆಗಿನಿಂದಲೂ ವ್ಯವಸ್ಥೆ ರೂಪುಗೊಂಡಿದ್ದು ಶ್ರೀಮಂತರನ್ನು ಬಡವರಿಂದ ರಕ್ಷಿಸಲು ಹಾಗೂ ಗುಲಾಮಗಿರಿಯನ್ನು ಪೋಷಿಸಲು. ಅಂದಿನಿಂದ ಪೊಲೀಸ್ ವ್ಯವಸ್ಥೆ ಸಮಾಜದಲ್ಲಿ ಅಸಮಾನತೆಯನ್ನು ಕಾಪಾಡಿಕೊಂಡು ಬಂದಿದೆ. ಇಂದಿಗೂ ಪೊಲೀಸರು ಮಾಡುತ್ತಿರುವ ಕೆಲಸ ಅದೇ.

ಹಾಗಾಗಿ ಅವರು ಶಿಫಾರಸ್ಸು ಮಾಡುವುದು ನಮ್ಮ ಪೊಲೀಸ್ ವ್ಯವಸ್ಥೆಯ ಅಂತ್ಯ. ಕಳ್ಳತನ, ಕೊಲೆ ಇನ್ನಿತರೆ ಅಪರಾಧಗಳನ್ನು ಹತ್ತಿಕ್ಕಲು ಆಡಳಿತ ವ್ಯವಸ್ಥೆ ರಾಜಕೀಯ ಪರಿಹಾರಗಳನ್ನು ಕಂಡುಕೊಳ್ಳಬೇಕಿದೆ. ಎಲ್ಲರಿಗೂ ಸೂರು, ದುಡಿಯುವ ಕೈಗಳಿಗೆ ಸೂಕ್ತ ಉದ್ಯೋಗ, ಉದ್ಯೋಗ ಭದ್ರತೆ.. ಇಂತಹ ಪರಿಹಾರಗಳಿಂದ ಸಾಮಾಜಿಕ ವ್ಯವಸ್ಥೆ ಸಾಕಷ್ಟು ಸುಧಾರಣೆ ಆಗುತ್ತದೆ. ಈ ನಿಟ್ಟಿನಲ್ಲಿ ಪ್ರಗತಿಪರ ಸಮಾಜ ಆಲೋಚಿಸಬೇಕಿದೆ.


ಇದನ್ನೂ ಓದಿ: ಮರೀಚಿಕೆಯಾಗಿರುವ ಪೊಲೀಸ್ ಸುಧಾರಣೆ; ನಾಗರಿಕ ಸಮಾಜದ ಒಕ್ಕೊರಲಿನ ದನಿ ಬೇಕಿದೆ..

ಇದನ್ನೂ ಓದಿ: ಟ್ರಾಫಿಕ್‌ ಅಧಿಕಾರಿಯಿಂದ ವಿಕಲಾಂಗ ಮಹಿಳೆಗೆ ಥಳಿತ: ಬೆಂಗಳೂರಿನಲ್ಲಿ ಸದ್ಯಕ್ಕಿಲ್ಲ ಟೋಯಿಂಗ್

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕುಸಿಯುವುದರಲ್ಲಿ ರೂಪಾಯಿ ಮತ್ತು ಬಿಜೆಪಿ ವರ್ಚಸ್ಸಿನ ನಡುವೆ ತೀವ್ರ ಪೈಪೋಟಿಯಿದೆ : ಅಖಿಲೇಶ್ ಯಾದವ್ ವ್ಯಂಗ್ಯ

ಕುಸಿಯುವುದರಲ್ಲಿ ರೂಪಾಯಿ ಮತ್ತು ಬಿಜೆಪಿ ವರ್ಚಸ್ಸಿನ ನಡುವೆ ತೀವ್ರ ಪೈಪೋಟಿ ನಡೆಯುತ್ತಿದೆ ಎಂದು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ವ್ಯಂಗ್ಯವಾಡಿದ್ದಾರೆ. ಬಿಜೆಪಿ ನಾಯಕರು ಹಾಗೂ ಅವರ ಸಹವರ್ತಿಗಳ ಭ್ರಷ್ಟಾಚಾರ ಮತ್ತು ದುರ್ನಡತೆಯ ಪ್ರಕರಣಗಳು...

ಅಂತರ್ಧರ್ಮೀಯ ‘ಲಿವ್-ಇನ್’ ಸಂಬಂಧ ಅಪರಾಧವಲ್ಲ: ಅಲಹಾಬಾದ್ ಹೈಕೋರ್ಟ್

ಅಂತರ್ಧರ್ಮೀಯ ಲಿವ್-ಇನ್ ಸಂಬಂಧವನ್ನು ನಿಷೇಧಿಸಲಾಗಿಲ್ಲ ಅಥವಾ ಯಾವುದೇ ಕಾನೂನಿನ ಅಡಿಯಲ್ಲಿ ಅಪರಾಧವಲ್ಲಎಂದು ತೀರ್ಪು ನೀಡಿರುವ ಅಲಹಾಬಾದ್ ಹೈಕೋರ್ಟ್, ಮಹಿಳೆಯ ಕುಟುಂಬದಿಂದ ಬೆದರಿಕೆ ಎದುರಿಸುತ್ತಿರುವ ದಂಪತಿಗಳಿಗೆ ರಕ್ಷಣೆ ನೀಡಿದೆ. ಸೋನ್‌ಭದ್ರಾದ ಕಾಜಲ್ ಪ್ರಜಾಪತಿ ಮತ್ತು ಅವರ...

‘ವೇತನ ಸಹಿತ ಪಿತೃತ್ವ ರಜೆಯನ್ನು ಕಾನೂನುಬದ್ಧಗೊಳಿಸಬೇಕು’; ರಾಜ್ಯಸಭೆಯಲ್ಲಿ ಎಎಪಿ ಸಂಸದ ರಾಘವ್ ಚಡ್ಡಾ ಒತ್ತಾಯ

ಭಾರತದಲ್ಲಿ ವೇತನ ಸಹಿತ ಪಿತೃತ್ವ ರಜೆಯನ್ನು ಕಾನೂನುಬದ್ಧ ಹಕ್ಕನ್ನಾಗಿ ಮಾಡಲು, ಹಂಚಿಕೆಯ ಆರೈಕೆ ಜವಾಬ್ದಾರಿಗಳನ್ನು ಒತ್ತಿಹೇಳಲು ಕಾನೂನನ್ನು ಜಾರಿಗೆ ತರಬೇಕೆಂದು ಎಎಪಿ ಸಂಸದ ರಾಘವ್ ಚಡ್ಡಾ ಒತ್ತಾಯಿಸಿದ್ದಾರೆ. ರಾಜ್ಯಸಭೆಯಲ್ಲಿ ಮಾತನಾಡಿದ ಅವರು, ತಂದೆ ಉದ್ಯೋಗ...

ಬಿಜೆಪಿ ಇತರ ರಾಜ್ಯಗಳ ಅಕ್ರಮ ಮತದಾರರನ್ನು ಸೇರಿಸುತ್ತಿದೆ : ಮಮತಾ ಬ್ಯಾನರ್ಜಿ ಆರೋಪ

ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮಂಗಳವಾರ (ಮಾ.31) ಬಿಜೆಪಿ ಬಿಹಾರ, ರಾಜಸ್ಥಾನ, ಹರಿಯಾಣ ಮತ್ತು ಉತ್ತರ ಪ್ರದೇಶದ ಅಕ್ರಮ ಮತದಾರರನ್ನು ರಾಜ್ಯದ ಮತದಾರರ ಪಟ್ಟಿಯಲ್ಲಿ ಸೇರಿಸಲು ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದರು. ಪಶ್ಚಿಮ...

ಬಿಹಾರ: ವಿವಾಹಿತ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರಕ್ಕೆ ಯತ್ನ; ಹಲ್ಲೆ ಮಾಡಿ ವಿಡಿಯೋ ಹರಿಬಿಟ್ಟ ದುಷ್ಟರು: ಇಬ್ಬರ ಬಂಧನ 

ಬಿಹಾರದ ನಳಂದ ಜಿಲ್ಲೆಯಲ್ಲಿ ನಾಚಿಕೆಗೇಡಿನ ಮತ್ತು ಆತಂಕಕಾರಿ ಘಟನೆಯೊಂದು ಬೆಳಕಿಗೆ ಬಂದಿದೆ. ನೂರ್ಸರಾಯ್ ಪೊಲೀಸ್ ಠಾಣೆ ವ್ಯಾಪ್ತಿಯ ಹಳ್ಳಿಯೊಂದರಲ್ಲಿ ಮೂವರು ಪುರುಷರು ವಿವಾಹಿತ ಮಹಿಳೆಯ ಮೇಲೆ ಸಾರ್ವಜನಿಕವಾಗಿ ಸಾಮೂಹಿಕ ಅತ್ಯಾಚಾರಕ್ಕೆ ಯತ್ನಿಸಿದ್ದಾರೆ. ದೌರ್ಜನ್ಯ ವಿರೋಧಿಸಿ...

‘ಹಿಂದುತ್ವ ಉಗ್ರವಾದವನ್ನು ಏಕೆ ನಿರ್ಲಕ್ಷಿಸಬೇಕು..?’; ಸಂಸತ್ತಿನಲ್ಲಿ ಪ್ರಶ್ನಿಸಿದ ರುಹುಲ್ಲಾ ಮೆಹದಿ

"ದೇಶದಲ್ಲಿ ಹೆಚ್ಚುತ್ತಿರುವ ಬಲಪಂಥೀಯ ಉಗ್ರವಾದವನ್ನು ನಿರ್ಲಕ್ಷಿಸಿ ಎಡಪಂಥೀಯ ಬೆದರಿಕೆಗಳ ಮೇಲೆ ಮಾತ್ರ ಗಮನಹರಿಸಲಾಗುತ್ತಿದೆ" ಎಂದು ಲೋಕಸಭೆಯಲ್ಲಿ ಜಮ್ಮು-ಕಾಶ್ಮೀರದ ಶ್ರೀನಗರ ಸಂಸದ ಆಗಾ ಸೈಯದ್ ರುಹುಲ್ಲಾ ಮೆಹದಿ ನರೇಂದ್ರ ಮೋದಿ ನೇತೃತ್ವದ ಸರ್ಕಾರದ ಮೇಲೆ...

ವಿರೋಧದ ನಡುವೆಯೂ ಟ್ರಾನ್ಸ್‌ಜೆಂಡರ್ ತಿದ್ದುಪಡಿ ಮಸೂದೆಗೆ ರಾಷ್ಟ್ರಪತಿ ಅಂಕಿತ

ತೀವ್ರ ವಿರೋಧಗಳ ನಡುವೆಯೂ ಟ್ರಾನ್ಸ್‌ಜೆಂಡರ್‌ ವ್ಯಕ್ತಿಗಳ (ಹಕ್ಕುಗಳ ರಕ್ಷಣೆ) ತಿದ್ದುಪಡಿ ಮಸೂದೆಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಅಂಕಿತ ಹಾಕಿದ್ದಾರೆ ಎಂದು ಕೇಂದ್ರ ಕಾನೂನು ಸಚಿವಾಲಯ ಸೋಮವಾರ (ಮಾ. 30) ಗೆಜೆಟ್ ಅಧಿಸೂಚನೆಯಲ್ಲಿ...

ಮಶಾದ್ ವಿಮಾನ ನಿಲ್ದಾಣದ ಮೇಲೆ ಅಮೆರಿಕ ದಾಳಿ: ದೆಹಲಿಗೆ ತೆರಳುತ್ತಿದ್ದ ನೆರವು ವಿಮಾನಕ್ಕೆ ಡಿಕ್ಕಿ: ಇದು ‘ಯುದ್ಧ ಅಪರಾಧ’ ಎಂದ ಇರಾನ್ 

ಇರಾನ್‌ನ ಮಶಾದ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅಮೆರಿಕದ ವಾಯುದಾಳಿಯ ಸಂದರ್ಭದಲ್ಲಿ ನವದೆಹಲಿಗೆ ಹಾರಲು ನಿಗದಿಯಾಗಿದ್ದ ಮಹಾನ್ ಏರ್ ವಿಮಾನವು ಡಿಕ್ಕಿ ಹೊಡೆದಿದೆ ಎಂದು ವರದಿಯಾಗಿದೆ.  ಈ ವಿಮಾನವು ಔಷಧಿಗಳು ಸೇರಿದಂತೆ ಮಾನವೀಯ ನೆರವು ಸಾಗಣೆಗೆ...

ಪ್ಯಾಲೆಸ್ತೀನಿಯರಿಗೆ ಮರಣದಂಡನೆ ವಿಧಿಸುವ ಕಾನೂನು ಅಂಗೀಕಾರ : ಇಸ್ರೇಲ್ ಕ್ರಮಕ್ಕೆ ಜಾಗತಿಕ ಖಂಡನೆ

ಮಾರಣಾಂತಿಕ ದಾಳಿಗಳ ಅಪರಾಧ ಸಾಬೀತಾದ ಪ್ಯಾಲೆಸ್ತೀನಿಯರಿಗೆ ಮರಣದಂಡನೆಯನ್ನು ಕಡ್ಡಾಯ ಶಿಕ್ಷೆಯನ್ನಾಗಿ ನಿಗದಿಪಡಿಸಿದ ಇಸ್ರೇಲ್‌ನ ಹೊಸ ಕಾನೂನನ್ನು ಮಾನವ ಹಕ್ಕುಗಳ ಸಂಘಟನೆಗಳು, ವಿವಿಧ ರಾಷ್ಟ್ರಗಳ ನಾಯಕರು ಸೇರಿದಂತೆ ಜಾಗತಿಕ ಸಮುಯದಾಯ ತೀವ್ರವಾಗಿ ವಿರೋಧಿಸಿದೆ. ಈ...

ಬರೇಲಿ: ಮುಸ್ಲಿಂ ಯುವಕರ ಮೇಲೆ ಹಲ್ಲೆ, ಹಿಂದುತ್ವ ಘೋಷಣೆಗಳನ್ನು ಪಠಿಸುವಂತೆ ಬಲವಂತ; ಪ್ರಮುಖ ಆರೋಪಿ ಬಂಧನ

ಉತ್ತರ ಪ್ರದೇಶದ ಬರೇಲಿಯಲ್ಲಿ ಮುಸ್ಲಿಂ ಯುವಕನ ಮೇಲೆ ಹಲ್ಲೆ, ಅವಮಾನ ಮತ್ತು ಹಿಂದುತ್ವ ಘೋಷಣೆಗಳನ್ನು ಪಠಿಸುವಂತೆ ಒತ್ತಾಯಿಸಲಾಗಿದೆ ಎಂದು ಆರೋಪಿಸಲಾಗಿದೆ. ಪ್ರಮುಖ ಆರೋಪಿ ರಿಷಭ್ ಠಾಕೂರ್ ನನ್ನು ಪೊಲೀಸರು ಬಂಧಿಸಿದ್ದು, ಮತ್ತಷ್ಟು ಬಂಧನಗಳು ನಡೆಯುವ...