Homeಮುಖಪುಟಅಸಮಾನತೆ ಪೋಷಣೆಗೆ ಪೊಲೀಸರು

ಅಸಮಾನತೆ ಪೋಷಣೆಗೆ ಪೊಲೀಸರು

- Advertisement -
- Advertisement -

ಒಂದು ಊರಲ್ಲಿ ಅಣ್ಣ ಮತ್ತು ತಮ್ಮನ ಮಧ್ಯೆ ಎಂತಹದೋ ಗಲಾಟೆ. ಅಣ್ಣ ಹಣದಲ್ಲಿ ಮುಂದಿದ್ದ. ತಮ್ಮ ಕೂಲಿ ಕೆಲಸ. ತಮ್ಮನಿಗೆ ಬುದ್ಧಿ ಕಲಿಸಬೇಕು ಅಂತ ತನಗೆ ಗೊತ್ತಿರುವ ಪೊಲೀಸ್‌ಗೆ ಅಣ್ಣ ಒಂದಿಷ್ಟು ದುಡ್ಡು ಕೊಟ್ಟ. ಪೊಲೀಸರು ತಮ್ಮನನ್ನು ಜೀಪಲ್ಲಿ ಕರ್‍ಕೊಂಡು ಹೋದರು. ಏನು ಮಾಡಿದ್ರು ಗೊತ್ತಿಲ್ಲ. ಆದರೆ ಸ್ವಲ್ಪ ಹೊತ್ತಿನ ನಂತರ ತಮ್ಮನ ಹೆಂಡತಿಗೆ ಮಾಹಿತಿ ಬಂತು. ಅವರು ಪೊಲೀಸ್ ಸ್ಟೇಷನ್‌ಗೆ ಹೋಗಿ ನೋಡುವಷ್ಟರಲ್ಲಿ ಗಂಡ ರಕ್ತ ವಾಂತಿ ಮಾಡಿಕೊಂಡಿದ್ದರು. “ಏನೋ ತಿಂದು ಬಂದಿದಾನೆ. ಆಸ್ಪತ್ರೆಗೆ ಕರೆದುಕೊಂಡು ಹೋಗು” ಎಂದು ಪೊಲೀಸರು ತಾಕೀತು ಮಾಡಿದರು. ಆ ನಂತರ ಕೆಲವೇ ನಿಮಿಷಗಳಲ್ಲಿ ಆತನ ಪ್ರಾಣ ಹೋಯ್ತು.

ಇನ್ನೊಂದು ಊರಲ್ಲಿ ಒಂದು ಕೊಲೆ. ಆರೋಪಿಗಳ ಹುಡುಕಾಟದಲ್ಲಿ ಪೊಲೀಸರು. ಒಬ್ಬ ಅಧಿಕಾರಿಗೆ ಅಲ್ಲೊಬ್ಬನ ಮೇಲೆ ಅನುಮಾನ. ಕರೆದುಕೊಂಡು ಬಂದು ಸತತವಾಗಿ ಹದಿನೈದು ದಿನ ವಿಚಾರಣೆ ಮಾಡಿದರು. ಕೊಲೆಗೂ, ತನಗೂ ಏನೂ ಸಂಬಂಧ ಇಲ್ಲ ಅಂತ ಎಷ್ಟು ಬಡ್ಕೊಂಡರೂ ಪೊಲೀಸರು ಕೇಳಲಿಲ್ಲ. ಆಮೇಲೆ ಇನ್ನೊಬ್ಬ ಅಧಿಕಾರಿ ’ಇಲ್ಲಿದಾನೆ ನಿಜ ಆರೋಪಿ. ಅವನನ್ನು ಬಿಟ್ಟುಬಿಡಿ’ ಅಂದರು. ಆ ಹದಿನೈದು ದಿನ ಆ ಅಮಾಯಕ ಅನುಭವಿಸಿದ ಯಾತನೆ ಯಾವ ಪ್ರಾಣಿಗೂ ಬೇಡ.

ಯಾವುದೇ ತಯಾರಿ ಇಲ್ಲದೆ ದೇಶಾದ್ಯಂತ ಲಾಕ್‌ಡೌನ್ ಘೋಷಿಸಿದ ನಂತರ ದೆಹಲಿಯಿಂದ ಕಾರ್ಮಿಕರು ತಮ್ಮ ತವರು ಬಿಹಾರಕ್ಕೆ ಸೈಕಲ್ ತುಳಿಯುತ್ತಾ ಹೊರಟಿದ್ದರು. ಸಾಯೋದಾದ್ರೂ ನಾವು ಊರಿಗೆ ಹೋಗಿ ಅಪ್ಪ, ಅಮ್ಮಂದಿರ ಬಳಿಯೇ ಸಾಯೋಣ ಎಂಬ ನಿರ್ಧಾರ ಅವರದು. ಆದರೆ ಅಲ್ಲೊಂದು ಕಡೆ ಅವರನ್ನು ತಡೆದ ಪೊಲೀಸರು ಹಿಗ್ಗಾಮುಗ್ಗಾ ಬಾರಿಸಿದರು. ’ಲಾಕ್ ಡೌನ್ ಇದೆ. ಯಾಕೋ ಹೊರಗಡೆ ಬಂದ್ರಿ? ನಿಮ್ಮ ಅಮ್ಮಂದಿರಿಗೆ ಗಿರಾಕಿ ಹುಡುಕಿಕೊಂಡು ಹೊರಟಿರೇನೋ..?’ ಎನ್ನುತ್ತಾನೆ ಒಬ್ಬ ಪೊಲೀಸ್. ಇನ್ನೊಂದು ಕಡೆ ಜ್ವರದಿಂದ ಬಳಲುತ್ತಿದ್ದ ಮಗನನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿದ್ದ ಅಪ್ಪನನ್ನು ತಲೆ ಒಡೆದು ರಕ್ತ ಬರುವಂತೆ ಬಾರಿಸಿದರು. ಸಿಟ್ಟಿಗೆದ್ದು ಆತ ತಿರುಗಿಬಿದ್ದು ವಾದಿಸಿದಾಗ, ಪೊಲೀಸರಿಗೆ ಎದುರು ಮಾತನಾಡ್ತೀಯಾ ಎಂದು ಅವನನ್ನು ಬಲವಂತವಾಗಿ ಸ್ಟೇಷನ್‌ಗೆ ಕರೆದುಕೊಂಡು ಮತ್ತಷ್ಟು ಹಿಂಸೆ ನೀಡಿದರು. ಇವರನ್ನೆಲ್ಲಾ ಮನುಷ್ಯರೆನ್ನಬೇಕೆ?

ಹೀಗೆ ಹೇಳುತ್ತಾ ಹೋಗಲು ನೂರು ಘಟನೆಗಳಿವೆ. ಯಾವೂ ಸುಳ್ಳಲ್ಲ. ನಡೆದ ಘಟನೆಗಳಿವು. ನಿವೃತ್ತಿಯಾದ ಅಥವಾ ಆತ್ಮೀಯರಾದ ಕೆಲ ಪೊಲೀಸ್ ಅಧಿಕಾರಿಗಳ ಜೊತೆ ಮಾತನಾಡಿದರೆ ಪೊಲೀಸರ ಕ್ರೂರ ವರ್ತನೆ ಅನಾವರಣಗೊಳಿಸುವ ಮತ್ತಷ್ಟು ಕರಳು ಹಿಂಡುವ ಕತೆಗಳು ಗೊತ್ತಾಗಬಹುದು. ಇನ್ನೊಬ್ಬ ಅಧಿಕಾರಿ ಇದ್ದರು. ಪೊಲೀಸರ ಕೆಲಸಗಳಲ್ಲಿ ಒಂದು ಕಳ್ಳತನ ತಡೆಯುವುದು ತಾನೆ. ಆದರೆ ಆ ಮಹಾಶಯ ತಾನು ಕೆಲಸ ಮಾಡುತ್ತಿದ್ದ ಊರಿನ ಬಸ್ ಸ್ಟಾಂಡ್‌ನಲ್ಲಿ ಪಿಕ್‌ಪಾಕೆಟ್ ಮಾಡಲೆಂದು ನುರಿತ ಕಳ್ಳರಿಗೆ ಆಶ್ರಯ ನೀಡಿ ಸಾಕಿಕೊಂಡಿದ್ದರು. ಅವರು ದಿನವಿಡೀ ಪಿಕ್‌ಪಾಕೆಟ್ ಮಾಡಿ ತಂದಿದ್ದನ್ನು ಪೊಲೀಸ್ ಅಧಿಕಾರಿಗೆ ಕೊಟ್ಟು ತನ್ನ ಪಾಲನ್ನು ಪಡೆಯಬೇಕಿತ್ತು. ಇಂತಹ ಅಧಿಕಾರಿಗಳೂ ಇದ್ದಾರೆ ಎಂದರೆ ಅಚ್ಚರಿ ಪಡಬೇಕಿಲ್ಲ. ಅವರಲ್ಲಿ ಕೆಲವರು ಇನ್ನು ಕೆಲವೇ ವರ್ಷಗಳಲ್ಲಿ ಶಾಸಕರೋ, ಮಂತ್ರಿಗಳೋ ಆಗಿ ಆಯ್ಕೆಯಾಗಬಹುದು.

ಕಳ್ಳರನ್ನು, ಕೊಲೆಗಡುಕರನ್ನು ಹಿಡಿದು ನ್ಯಾಯಾಲಯಕ್ಕೆ ಒಪ್ಪಿಸಬೇಕಾದ ಇವರೇ ಕ್ರಿಮಿನಲ್‌ಗಳಾಗಿದ್ದಾರೆ. ಅಲ್ಲಲ್ಲಿ ಸಣ್ಣಪುಟ್ಟ ಕಳ್ಳತನ ಮಾಡುವವರನ್ನು ಹಿಡಿದು ಫೋಟೋ ತೆಗೆಸಿಕೊಳ್ಳುವ ಇವರು, ಮತ್ತಾರದೋ ಹಣ ಲಪಟಾಯಿಸಿ ಅದನ್ನೇ ರಾಜಕಾರಣಿಗಳಿಗೆ ಒಪ್ಪಿಸಿ ಆಯಕಟ್ಟಿನ ಜಾಗಕ್ಕೆ ಬರುತ್ತಾರೆ. ಕೆಲವು ತಿಂಗಳುಗಳ ಹಿಂದೆ ಒಂದು ಆಡಿಯೋ ವೈರಲ್ ಆಗಿತ್ತು. ಅದರಲ್ಲಿ ಉತ್ತಮ ಜಾಗಕ್ಕಾಗಿ ಕಾಯುತ್ತಿದ್ದ ಒಬ್ಬ ಅಧಿಕಾರಿ ಹೇಳಿದ್ದು, “ಈಗಿನ ಶಾಸಕರು ಈ ಹಿಂದೆ ಕೇವಲ ಕಾರ್ಯಕರ್ತರಾಗಿದ್ದಾಗ ಒಂದು ಪ್ರಕರಣದಲ್ಲಿ ನಾನು ಸಹಾಯ ಮಾಡಿದ್ದೆ. ಹಾಗಾಗಿ ನನಗೆ ಆ ಸ್ಟೇಷನ್ ಮಾಡಿಸಿಕೊಡ್ತೀನಿ ಎಂದು ಮಾತು ಕೊಟ್ಟಿದ್ದಾರೆ”. ಆ ಆಡಿಯೋ ಸರಕಾರದ ಗಮನಕ್ಕೆ ಬಂತು. ಆದರೆ ಏನಾಯ್ತು? ಕೆಲವೇ ದಿನಗಳಲ್ಲಿ ಆ ಅಧಿಕಾರಿ ತಾನು ನಿರೀಕ್ಷಿಸಿದ್ದ ಅದೇ ಠಾಣೆಗೆ ನೇಮಕಗೊಂಡರು.

ಕನಿಷ್ಟ ಲಜ್ಜೆ ಇಲ್ಲದ ಹಾಗೂ ಈ ನೆಲದ ಕಾನೂನಿಗೆ ಗೌರವ ಕೊಡದ ತುಂಬಾ ಮಂದಿ ಈ ಇಲಾಖೆಯಲ್ಲಿದ್ದಾರೆ. ಒಂದು ಬೈಕ್ ಕಳೆದುಕೊಂಡವರು ದೂರು ಕೊಡಲು ಹೋದಾಗ ಅನುಭವಿಸುವ ಯಾತನೆ ಯಾರಿಗೂ ಬೇಡ. ಆ ಬೈಕ್ ಮತ್ತೆ ಸಿಕ್ಕ ನಂತರ ಅದನ್ನು ಹಿಂಪಡೆಯುವುದು ಇನ್ನೊಂದು ದಾರುಣ ಕತೆ. ಬೈಕ್ ಕಳ್ಳನಿಂದ ಸುಸ್ಥಿತಿಯಲ್ಲಿ ಸಿಕ್ಕಿದ್ದರೂ ಪೊಲೀಸರು ಹಿಂತಿರುಗಿಸುವಾಗ ಯಾವ ಸ್ಪೇರ್ ಪಾರ್‍ಟ್ಸ್ ಇಲ್ಲದಂತೆ ನೋಡಿಕೊಂಡಿರುತ್ತಾರೆ.

ನಿವೃತ್ತರಾಗಿರುವ ಪೊಲೀಸ್ ಅಧಿಕಾರಿಗಳು ಆಗಾಗ ಟಿವಿ ಚರ್‍ಚೆಗಳಲ್ಲಿ ಭಾಗವಹಿಸಿ ಮಾತನಾಡುವುದನ್ನು ನೋಡಿ. ಅವರ ಮಾತುಗಳಲ್ಲಿ ವೃತ್ತಿ ಕಾಲದ ತಮ್ಮ ಯಾವ ನಡೆಯ ಬಗ್ಗೆಯೂ ಅವರು ವಿಷಾದ ತೋರುವುದಿಲ್ಲ. ಬದಲಿಗೆ ತಮ್ಮ ’ಶೌರ್ಯವನ್ನು’ ವೀರಾವೇಶದಿಂದ ಹೇಳಿಕೊಳ್ಳುತ್ತಾರೆ. ಪೊಲೀಸ್ ಆಡಳಿತ ಸುಧಾರಣೆ ಬಗ್ಗೆ ಮಾತನಾಡುವುದಿಲ್ಲ. ಅಲ್ಲೊಬ್ಬ, ಇಲ್ಲೊಬ್ಬ ನಿಷ್ಠಾವಂತ, ಪ್ರಾಮಾಣಿಕ ಅಧಿಕಾರಿಗಳಿದ್ದಾರೆ ಎಂಬ ಮಾತು ಕೇಳುತ್ತೇವೆ. ಆದರೆ ಅವರು ವ್ಯವಸ್ಥೆಯ ಸುಧಾರಣೆ ಕಡೆ ಯೋಚನೆ ಮಾಡಿದ್ದು ಕಡಿಮೆ. ಪ್ರತಿಷ್ಠಿತ ತರಬೇತಿ ಸಂಸ್ಥೆಗಳಲ್ಲಿ ಭಾರತೀಯ ಪ್ರಜಾಪ್ರಭುತ್ವ, ಬಹುತ್ವದ ಪಾಠ ಕೇಳಿಕೊಂಡು ಫೀಲ್ಡ್‌ಗೆ ಬಂದವರು ತೀರಾ ಅಲ್ಪರಂತೆ ವರ್ತಿಸುತ್ತಾರೆ. ಹಾಗಾಗಿ ತರಬೇತಿ ವ್ಯವಸ್ಥೆಯೇ ಅಮೂಲಾಗ್ರವಾಗಿ ಬದಲಾಗಬೇಕು ಎಂದು ಹೇಳುವವರು ಹಲವರಿದ್ದಾರೆ.

ಆದರೆ ಇದೆಲ್ಲಕ್ಕಿಂತ ಪರಿಣಾಮಕಾರಿಯಾಗಿ ಈ ಪೊಲೀಸಿಂಗ್ ಕೊನೆಯಾಗಬೇಕೆಂದು ಗಟ್ಟಿಯಾಗಿ ಪ್ರತಿಪಾದಿಸಿದವರು ಅಮೆರಿಕಾದ ಅಲೆಕ್ಸ್ ವಿಠಾಲೆ. ಅವರ ಪುಸ್ತಕ ’ದಿ ಎಂಡ್ ಆಫ್ ಪೊಲೀಸಿಂಗ್’ ಪ್ರತಿಪಾದಿಸುವುದು ಪೊಲೀಸ್ ಆಡಳಿತ ಸುಧಾರಣೆಯನ್ನಲ್ಲ, ಬದಲಿಗೆ ಪೊಲೀಸ್ ವ್ಯವಸ್ಥೆಯ ಸಂಪೂರ್ಣ ಅಂತ್ಯ.

ನಾವು ಈಗ ನೋಡುತ್ತಿರುವ ಆಧುನಿಕ ಪೊಲೀಸ್ ವ್ಯವಸ್ಥೆ ಆರಂಭವಾಗಿದ್ದು ಇಂಗ್ಲೆಂಡ್‌ನಲ್ಲಿ 1820ರ ದಶಕದಲ್ಲಿ. ಆಗಿನಿಂದಲೂ ವ್ಯವಸ್ಥೆ ರೂಪುಗೊಂಡಿದ್ದು ಶ್ರೀಮಂತರನ್ನು ಬಡವರಿಂದ ರಕ್ಷಿಸಲು ಹಾಗೂ ಗುಲಾಮಗಿರಿಯನ್ನು ಪೋಷಿಸಲು. ಅಂದಿನಿಂದ ಪೊಲೀಸ್ ವ್ಯವಸ್ಥೆ ಸಮಾಜದಲ್ಲಿ ಅಸಮಾನತೆಯನ್ನು ಕಾಪಾಡಿಕೊಂಡು ಬಂದಿದೆ. ಇಂದಿಗೂ ಪೊಲೀಸರು ಮಾಡುತ್ತಿರುವ ಕೆಲಸ ಅದೇ.

ಹಾಗಾಗಿ ಅವರು ಶಿಫಾರಸ್ಸು ಮಾಡುವುದು ನಮ್ಮ ಪೊಲೀಸ್ ವ್ಯವಸ್ಥೆಯ ಅಂತ್ಯ. ಕಳ್ಳತನ, ಕೊಲೆ ಇನ್ನಿತರೆ ಅಪರಾಧಗಳನ್ನು ಹತ್ತಿಕ್ಕಲು ಆಡಳಿತ ವ್ಯವಸ್ಥೆ ರಾಜಕೀಯ ಪರಿಹಾರಗಳನ್ನು ಕಂಡುಕೊಳ್ಳಬೇಕಿದೆ. ಎಲ್ಲರಿಗೂ ಸೂರು, ದುಡಿಯುವ ಕೈಗಳಿಗೆ ಸೂಕ್ತ ಉದ್ಯೋಗ, ಉದ್ಯೋಗ ಭದ್ರತೆ.. ಇಂತಹ ಪರಿಹಾರಗಳಿಂದ ಸಾಮಾಜಿಕ ವ್ಯವಸ್ಥೆ ಸಾಕಷ್ಟು ಸುಧಾರಣೆ ಆಗುತ್ತದೆ. ಈ ನಿಟ್ಟಿನಲ್ಲಿ ಪ್ರಗತಿಪರ ಸಮಾಜ ಆಲೋಚಿಸಬೇಕಿದೆ.


ಇದನ್ನೂ ಓದಿ: ಮರೀಚಿಕೆಯಾಗಿರುವ ಪೊಲೀಸ್ ಸುಧಾರಣೆ; ನಾಗರಿಕ ಸಮಾಜದ ಒಕ್ಕೊರಲಿನ ದನಿ ಬೇಕಿದೆ..

ಇದನ್ನೂ ಓದಿ: ಟ್ರಾಫಿಕ್‌ ಅಧಿಕಾರಿಯಿಂದ ವಿಕಲಾಂಗ ಮಹಿಳೆಗೆ ಥಳಿತ: ಬೆಂಗಳೂರಿನಲ್ಲಿ ಸದ್ಯಕ್ಕಿಲ್ಲ ಟೋಯಿಂಗ್

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಸ್ವಕ್ಷೇತ್ರ ತಿರುವನಂತಪುರದಲ್ಲಿ ಬಿಜೆಪಿ ಭರ್ಜರಿ ಗೆಲುವು : ‘ಪ್ರಜಾಪ್ರಭುತ್ವದ ಸೌಂದರ್ಯ’ ಎಂದ ಕಾಂಗ್ರೆಸ್ ಸಂಸದ ಶಶಿ ತರೂರ್

ಕೇರಳದ ಸ್ಥಳೀಯ ಸಂಸ್ಥೆ ಚುನಾವಣೆಯ ಫಲಿತಾಂಶ ಇಂದು (ಡಿ.13) ಪ್ರಕಟಗೊಂಡಿದ್ದು, ತಿರುವನಂತಪುರಂ ಮಹಾನಗರ ಪಾಲಿಕೆಯಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಭರ್ಜರಿ ಗೆಲುವು ದಾಖಲಿಸಿದೆ. ಈ ಮೂಲಕ 45 ವರ್ಷಗಳ ಸಿಪಿಐ(ಎಂ) ನೇತೃತ್ವದ ಎಲ್‌ಡಿಎಫ್‌...

ಕೇರಳ ಸ್ಥಳೀಯ ಸಂಸ್ಥೆ ಚುನಾವಣೆ : ಯುಡಿಎಫ್‌ ಸ್ಪಷ್ಟ ಮೇಲುಗೈ

ಇಂದು (2025 ಡಿಸೆಂಬರ್ 13, ಶನಿವಾರ) ಪ್ರಕಟಗೊಂಡ ಕೇರಳದ ಸ್ಥಳೀಯ ಸಂಸ್ಥೆಗಳ ಚುನಾವಣಾ ಫಲಿತಾಂಶದಲ್ಲಿ ವಿರೋಧ ಪಕ್ಷಗಳ ಒಕ್ಕೂಟವಾದ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (ಯುಡಿಎಫ್) ಸ್ಪಷ್ಟ ಮೇಲುಗೈ ಸಾಧಿಸಿದೆ. ಈ ಮೂಲಕ ರಾಜ್ಯ...

ಕೋಲ್ಕತ್ತಾ ಮೆಸ್ಸಿ ಕಾರ್ಯಕ್ರಮದಲ್ಲಿ ಗಲಾಟೆ | ಕ್ಷಮೆ ಯಾಚಿಸಿದ ಸಿಎಂ ಮಮತಾ ಬ್ಯಾನರ್ಜಿ, ತನಿಖೆಗೆ ಸಮಿತಿ ರಚನೆ; ಆಯೋಜಕನ ಬಂಧನ

ಫುಟ್ಬಾಲ್ ತಾರೆ ಲಿಯೋನೆಲ್ ಮೆಸ್ಸಿ ಭೇಟಿಯ ವೇಳೆ ಶನಿವಾರ (ಡಿಸೆಂಬರ್ 13) ಕೋಲ್ಕತ್ತಾದ ಸಾಲ್ಟ್ ಲೇಕ್ ಕ್ರೀಡಾಂಗಣದಲ್ಲಿ ಉಂಟಾದ ಗಲಾಟೆಗೆ ಸಂಬಂಧಿಸಿದಂತೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಕ್ಷಮೆಯಾಚಿಸಿದ್ದು, ನಿವೃತ್ತ ನ್ಯಾಯಮೂರ್ತಿ...

ಮೆಸ್ಸಿ ನೋಡಲು 25 ಸಾವಿರ ರೂ. ಪಾವತಿಸಿದವರಿಗೆ ನಿರಾಶೆ; ಕೋಪಗೊಂಡ ಅಭಿಮಾನಿಗಳಿಂದ ಕ್ರೀಡಾಂಗಣದಲ್ಲಿ ದಾಂಧಲೆ

ಶನಿವಾರ ನಡೆದ ಲಿಯೋನೆಲ್ ಮೆಸ್ಸಿ ಅವರ ಬಹು ನಿರೀಕ್ಷಿತ "ಗೋಟ್ ಇಂಡಿಯಾ ಟೂರ್" ಕೋಲ್ಕತ್ತಾದಲ್ಲಿ ಅಸ್ತವ್ಯಸ್ತವಾಯಿತು. ಯುವ ಭಾರತಿ ಕ್ರಿರಂಗನ್‌ನಲ್ಲಿ ರೊಚ್ಚಿಗೆದ್ದ ಅಭಿಮಾನಿಗಳ ದಾಂಧಲೆಯಿಂದ ಕ್ರೀಡಾಂಗಣ ಅವ್ಯವಸ್ಥೆಗೆ ಒಳಗಾಯಿತು. ಸಾವಿರಾರು ಅಭಿಮಾನಿಗಳು ಅರ್ಜೆಂಟೀನಾದ...

ಡ್ರಗ್‌ ಪೆಡ್ಲರ್‌ಗಳ ಮನೆ ಒಡೆದು ಹಾಕುವ ಹೇಳಿಕೆ : ಪರಮೇಶ್ವರ್ ಮಾತಿಗೆ ಆತಂಕ ವ್ಯಕ್ತಪಡಿಸಿದ ಕಾಂಗ್ರೆಸ್ ಹಿರಿಯ ನಾಯಕ ಚಿದಂಬರಂ

"ಡ್ರಗ್‌ ಪೆಡ್ಲರ್‌ಗಳ ಬಾಡಿಗೆ ಮನೆಗಳನ್ನು ಒಡೆದು ಹಾಕುವ ಹಂತಕ್ಕೆ ಹೋಗಿದ್ದೇವೆ" ಎಂಬ ಗೃಹ ಸಚಿವ ಜಿ.ಪರಮೇಶ್ವರ್ ಹೇಳಿಕೆಗೆ ಕಾಂಗ್ರೆಸ್ ಹಿರಿಯ ನಾಯಕ, ಮಾಜಿ ಕೇಂದ್ರ ಸಚಿವ ಪಿ. ಚಿದಂಬರಂ ಆತಂಕ ವ್ಯಕ್ತಪಡಿಸಿದ್ದಾರೆ. ಸಾಮಾಜಿಕ...

ಕೇರಳ ಸ್ಥಳೀಯ ಸಂಸ್ಥೆಗಳ ಚುನಾವಣೆ: ಶಶಿ ತರೂರ್ ಕ್ಷೇತ್ರ ತಿರುವನಂತಪುರಂನಲ್ಲಿ ಬಿಜೆಪಿ ಮುನ್ನಡೆ

ಕೇರಳ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ, ವಿಶೇಷವಾಗಿ ತಿರುವನಂತಪುರಂನಲ್ಲಿ ಭಾರತೀಯ ಜನತಾ ಪಕ್ಷದ ಸಾಧನೆಯನ್ನು ಹಿರಿಯ ಕಾಂಗ್ರೆಸ್ ನಾಯಕ ಶಶಿ ತರೂರ್ ಶನಿವಾರ ಅಭಿನಂದಿಸಿದ್ದಾರೆ. ಜನರ ತೀರ್ಪನ್ನು ಗೌರವಿಸಬೇಕು ಎಂದು ಹೇಳಿದ್ದಾರೆ. ಎಕ್ಸ್‌ನಲ್ಲಿ ದೀರ್ಘ...

ಆಳಂದ ಮತಗಳ್ಳತನ | ಬಿಜೆಪಿ ಮಾಜಿ ಶಾಸಕ ಸುಭಾಷ್ ಗುತ್ತೇದಾರ್ ಸೇರಿ 7 ಮಂದಿ ವಿರುದ್ಧ ಎಸ್‌ಐಟಿ ಚಾರ್ಜ್‌ಶೀಟ್‌

ಕಲಬುರಗಿಯ ಆಳಂದ ವಿಧಾನಸಭಾ ಕ್ಷೇತ್ರದಲ್ಲಿ ನಡೆದ ಮತಗಳ್ಳತನ (ಚುನಾವಣಾ ಆಕ್ರಮ) ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ (ಎಸ್‌ಐಟಿ) ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸಿದ್ದು, ಆಳಂದದ ಬಿಜೆಪಿ ಮಾಜಿ ಶಾಸಕ ಸುಭಾಷ್ ಗುತ್ತೇದಾರ್...

ಉತ್ತರ ಪ್ರದೇಶ| ಗಸ್ತು ವಾಹನ ಹಳ್ಳಕ್ಕೆ ಉರುಳಿಸಿದ ಪಾನಮತ್ತ ಪೊಲೀಸರು; ಕ್ರೇನ್ ಚಾಲಕನ ಮೇಲೆ ಹಲ್ಲೆ

ಶುಕ್ರವಾರ (ಡಿಸೆಂಬರ್ 12) ರಾತ್ರಿ ಪೊಲೀಸರೊಬ್ಬರು ಕಾರಿನ ನಿಯಂತ್ರಣ ಕಳೆದುಕೊಂಡ ಬಳಿಕ '112' ಪೊಲೀಸ್ ಪ್ರತಿಕ್ರಿಯೆ ವಾಹನ (ಪಿಆರ್‌ವಿ) ಹಳ್ಳಕ್ಕೆ ಉರುಳಿದೆ. ವರದಿಗಳ ಪ್ರಕಾರ, ಘಟನೆಯ ಸಮಯದಲ್ಲಿ ಪೊಲೀಸರು ಪಾನಮತ್ತರಾಗಿದ್ದರು. ಕಾರ್ ಕಂದಕಕ್ಕೆ...

ಲಿಯೋನೆಲ್ ಮೆಸ್ಸಿ ಇಂಡಿಯಾ ಪ್ರವಾಸ; ಅಭೂತಪೂರ್ವ ಸ್ವಾಗತ ಕೋರಿದ ಕೋಲ್ಕತ್ತಾ ಅಭಿಮಾನಿಗಳು

ಇಂಡಿಯಾ ಪ್ರವಾಸ ಪ್ರಾರಂಭಿಸಿರುವ ಅರ್ಜೆಂಟೀನಾದ ಪುಟ್‌ಬಾಲ್‌ ತಾರೆ ಲಿಯೋನೆಲ್ ಮೆಸ್ಸಿ ಕೋಲ್ಕತ್ತಾಗೆ ಬಂದಿಳಿದಿದ್ದಾರೆ. ಶನಿವಾರ ಬೆಳಗಿನ ಜಾವ ವಿಮಾನ ನಿಲ್ದಾಣದಲ್ಲಿ ನೆರೆದಿದ್ದ ಸಾವಿರಾರು ಅಭಿಮಾನಿಗಳಿಂದ ಅವರಿಗೆ ಅಭೂತಪೂರ್ವ ಸ್ವಾಗತ ಕೋರಿದರು. ಅರ್ಜೆಂಟೀನಾದ ಸೂಪರ್‌ಸ್ಟಾರ್ ದುಬೈ...

ನಟಿಯ ಅಪಹರಣ, ಅತ್ಯಾಚಾರ ಪ್ರಕರಣ : ಆರು ಅಪರಾಧಿಗಳಿಗೆ 20 ವರ್ಷ ಕಠಿಣ ಜೈಲು ಶಿಕ್ಷೆ

ಮಲಯಾಳಂ ಮೂಲದ ಬಹುಭಾಷಾ ನಟಿಯ ಅಪಹರಣ ಮತ್ತು ಅತ್ಯಾಚಾರ ಪ್ರಕರಣದ (2017ರ ಪ್ರಕರಣ) ಆರು ಅಪರಾಧಿಗಳಿಗೆ ಇಪ್ಪತ್ತು ವರ್ಷಗಳ ಕಠಿಣ ಜೈಲು ಶಿಕ್ಷೆ ವಿಧಿಸಿ ಶುಕ್ರವಾರ (ಡಿಸೆಂಬರ್ 12) ಕೇರಳ ನ್ಯಾಯಾಲಯ ಆದೇಶಿಸಿದೆ. ಡಿಸೆಂಬರ್...