Homeಮುಖಪುಟಅಸಮಾನತೆ ಪೋಷಣೆಗೆ ಪೊಲೀಸರು

ಅಸಮಾನತೆ ಪೋಷಣೆಗೆ ಪೊಲೀಸರು

- Advertisement -
- Advertisement -

ಒಂದು ಊರಲ್ಲಿ ಅಣ್ಣ ಮತ್ತು ತಮ್ಮನ ಮಧ್ಯೆ ಎಂತಹದೋ ಗಲಾಟೆ. ಅಣ್ಣ ಹಣದಲ್ಲಿ ಮುಂದಿದ್ದ. ತಮ್ಮ ಕೂಲಿ ಕೆಲಸ. ತಮ್ಮನಿಗೆ ಬುದ್ಧಿ ಕಲಿಸಬೇಕು ಅಂತ ತನಗೆ ಗೊತ್ತಿರುವ ಪೊಲೀಸ್‌ಗೆ ಅಣ್ಣ ಒಂದಿಷ್ಟು ದುಡ್ಡು ಕೊಟ್ಟ. ಪೊಲೀಸರು ತಮ್ಮನನ್ನು ಜೀಪಲ್ಲಿ ಕರ್‍ಕೊಂಡು ಹೋದರು. ಏನು ಮಾಡಿದ್ರು ಗೊತ್ತಿಲ್ಲ. ಆದರೆ ಸ್ವಲ್ಪ ಹೊತ್ತಿನ ನಂತರ ತಮ್ಮನ ಹೆಂಡತಿಗೆ ಮಾಹಿತಿ ಬಂತು. ಅವರು ಪೊಲೀಸ್ ಸ್ಟೇಷನ್‌ಗೆ ಹೋಗಿ ನೋಡುವಷ್ಟರಲ್ಲಿ ಗಂಡ ರಕ್ತ ವಾಂತಿ ಮಾಡಿಕೊಂಡಿದ್ದರು. “ಏನೋ ತಿಂದು ಬಂದಿದಾನೆ. ಆಸ್ಪತ್ರೆಗೆ ಕರೆದುಕೊಂಡು ಹೋಗು” ಎಂದು ಪೊಲೀಸರು ತಾಕೀತು ಮಾಡಿದರು. ಆ ನಂತರ ಕೆಲವೇ ನಿಮಿಷಗಳಲ್ಲಿ ಆತನ ಪ್ರಾಣ ಹೋಯ್ತು.

ಇನ್ನೊಂದು ಊರಲ್ಲಿ ಒಂದು ಕೊಲೆ. ಆರೋಪಿಗಳ ಹುಡುಕಾಟದಲ್ಲಿ ಪೊಲೀಸರು. ಒಬ್ಬ ಅಧಿಕಾರಿಗೆ ಅಲ್ಲೊಬ್ಬನ ಮೇಲೆ ಅನುಮಾನ. ಕರೆದುಕೊಂಡು ಬಂದು ಸತತವಾಗಿ ಹದಿನೈದು ದಿನ ವಿಚಾರಣೆ ಮಾಡಿದರು. ಕೊಲೆಗೂ, ತನಗೂ ಏನೂ ಸಂಬಂಧ ಇಲ್ಲ ಅಂತ ಎಷ್ಟು ಬಡ್ಕೊಂಡರೂ ಪೊಲೀಸರು ಕೇಳಲಿಲ್ಲ. ಆಮೇಲೆ ಇನ್ನೊಬ್ಬ ಅಧಿಕಾರಿ ’ಇಲ್ಲಿದಾನೆ ನಿಜ ಆರೋಪಿ. ಅವನನ್ನು ಬಿಟ್ಟುಬಿಡಿ’ ಅಂದರು. ಆ ಹದಿನೈದು ದಿನ ಆ ಅಮಾಯಕ ಅನುಭವಿಸಿದ ಯಾತನೆ ಯಾವ ಪ್ರಾಣಿಗೂ ಬೇಡ.

ಯಾವುದೇ ತಯಾರಿ ಇಲ್ಲದೆ ದೇಶಾದ್ಯಂತ ಲಾಕ್‌ಡೌನ್ ಘೋಷಿಸಿದ ನಂತರ ದೆಹಲಿಯಿಂದ ಕಾರ್ಮಿಕರು ತಮ್ಮ ತವರು ಬಿಹಾರಕ್ಕೆ ಸೈಕಲ್ ತುಳಿಯುತ್ತಾ ಹೊರಟಿದ್ದರು. ಸಾಯೋದಾದ್ರೂ ನಾವು ಊರಿಗೆ ಹೋಗಿ ಅಪ್ಪ, ಅಮ್ಮಂದಿರ ಬಳಿಯೇ ಸಾಯೋಣ ಎಂಬ ನಿರ್ಧಾರ ಅವರದು. ಆದರೆ ಅಲ್ಲೊಂದು ಕಡೆ ಅವರನ್ನು ತಡೆದ ಪೊಲೀಸರು ಹಿಗ್ಗಾಮುಗ್ಗಾ ಬಾರಿಸಿದರು. ’ಲಾಕ್ ಡೌನ್ ಇದೆ. ಯಾಕೋ ಹೊರಗಡೆ ಬಂದ್ರಿ? ನಿಮ್ಮ ಅಮ್ಮಂದಿರಿಗೆ ಗಿರಾಕಿ ಹುಡುಕಿಕೊಂಡು ಹೊರಟಿರೇನೋ..?’ ಎನ್ನುತ್ತಾನೆ ಒಬ್ಬ ಪೊಲೀಸ್. ಇನ್ನೊಂದು ಕಡೆ ಜ್ವರದಿಂದ ಬಳಲುತ್ತಿದ್ದ ಮಗನನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿದ್ದ ಅಪ್ಪನನ್ನು ತಲೆ ಒಡೆದು ರಕ್ತ ಬರುವಂತೆ ಬಾರಿಸಿದರು. ಸಿಟ್ಟಿಗೆದ್ದು ಆತ ತಿರುಗಿಬಿದ್ದು ವಾದಿಸಿದಾಗ, ಪೊಲೀಸರಿಗೆ ಎದುರು ಮಾತನಾಡ್ತೀಯಾ ಎಂದು ಅವನನ್ನು ಬಲವಂತವಾಗಿ ಸ್ಟೇಷನ್‌ಗೆ ಕರೆದುಕೊಂಡು ಮತ್ತಷ್ಟು ಹಿಂಸೆ ನೀಡಿದರು. ಇವರನ್ನೆಲ್ಲಾ ಮನುಷ್ಯರೆನ್ನಬೇಕೆ?

ಹೀಗೆ ಹೇಳುತ್ತಾ ಹೋಗಲು ನೂರು ಘಟನೆಗಳಿವೆ. ಯಾವೂ ಸುಳ್ಳಲ್ಲ. ನಡೆದ ಘಟನೆಗಳಿವು. ನಿವೃತ್ತಿಯಾದ ಅಥವಾ ಆತ್ಮೀಯರಾದ ಕೆಲ ಪೊಲೀಸ್ ಅಧಿಕಾರಿಗಳ ಜೊತೆ ಮಾತನಾಡಿದರೆ ಪೊಲೀಸರ ಕ್ರೂರ ವರ್ತನೆ ಅನಾವರಣಗೊಳಿಸುವ ಮತ್ತಷ್ಟು ಕರಳು ಹಿಂಡುವ ಕತೆಗಳು ಗೊತ್ತಾಗಬಹುದು. ಇನ್ನೊಬ್ಬ ಅಧಿಕಾರಿ ಇದ್ದರು. ಪೊಲೀಸರ ಕೆಲಸಗಳಲ್ಲಿ ಒಂದು ಕಳ್ಳತನ ತಡೆಯುವುದು ತಾನೆ. ಆದರೆ ಆ ಮಹಾಶಯ ತಾನು ಕೆಲಸ ಮಾಡುತ್ತಿದ್ದ ಊರಿನ ಬಸ್ ಸ್ಟಾಂಡ್‌ನಲ್ಲಿ ಪಿಕ್‌ಪಾಕೆಟ್ ಮಾಡಲೆಂದು ನುರಿತ ಕಳ್ಳರಿಗೆ ಆಶ್ರಯ ನೀಡಿ ಸಾಕಿಕೊಂಡಿದ್ದರು. ಅವರು ದಿನವಿಡೀ ಪಿಕ್‌ಪಾಕೆಟ್ ಮಾಡಿ ತಂದಿದ್ದನ್ನು ಪೊಲೀಸ್ ಅಧಿಕಾರಿಗೆ ಕೊಟ್ಟು ತನ್ನ ಪಾಲನ್ನು ಪಡೆಯಬೇಕಿತ್ತು. ಇಂತಹ ಅಧಿಕಾರಿಗಳೂ ಇದ್ದಾರೆ ಎಂದರೆ ಅಚ್ಚರಿ ಪಡಬೇಕಿಲ್ಲ. ಅವರಲ್ಲಿ ಕೆಲವರು ಇನ್ನು ಕೆಲವೇ ವರ್ಷಗಳಲ್ಲಿ ಶಾಸಕರೋ, ಮಂತ್ರಿಗಳೋ ಆಗಿ ಆಯ್ಕೆಯಾಗಬಹುದು.

ಕಳ್ಳರನ್ನು, ಕೊಲೆಗಡುಕರನ್ನು ಹಿಡಿದು ನ್ಯಾಯಾಲಯಕ್ಕೆ ಒಪ್ಪಿಸಬೇಕಾದ ಇವರೇ ಕ್ರಿಮಿನಲ್‌ಗಳಾಗಿದ್ದಾರೆ. ಅಲ್ಲಲ್ಲಿ ಸಣ್ಣಪುಟ್ಟ ಕಳ್ಳತನ ಮಾಡುವವರನ್ನು ಹಿಡಿದು ಫೋಟೋ ತೆಗೆಸಿಕೊಳ್ಳುವ ಇವರು, ಮತ್ತಾರದೋ ಹಣ ಲಪಟಾಯಿಸಿ ಅದನ್ನೇ ರಾಜಕಾರಣಿಗಳಿಗೆ ಒಪ್ಪಿಸಿ ಆಯಕಟ್ಟಿನ ಜಾಗಕ್ಕೆ ಬರುತ್ತಾರೆ. ಕೆಲವು ತಿಂಗಳುಗಳ ಹಿಂದೆ ಒಂದು ಆಡಿಯೋ ವೈರಲ್ ಆಗಿತ್ತು. ಅದರಲ್ಲಿ ಉತ್ತಮ ಜಾಗಕ್ಕಾಗಿ ಕಾಯುತ್ತಿದ್ದ ಒಬ್ಬ ಅಧಿಕಾರಿ ಹೇಳಿದ್ದು, “ಈಗಿನ ಶಾಸಕರು ಈ ಹಿಂದೆ ಕೇವಲ ಕಾರ್ಯಕರ್ತರಾಗಿದ್ದಾಗ ಒಂದು ಪ್ರಕರಣದಲ್ಲಿ ನಾನು ಸಹಾಯ ಮಾಡಿದ್ದೆ. ಹಾಗಾಗಿ ನನಗೆ ಆ ಸ್ಟೇಷನ್ ಮಾಡಿಸಿಕೊಡ್ತೀನಿ ಎಂದು ಮಾತು ಕೊಟ್ಟಿದ್ದಾರೆ”. ಆ ಆಡಿಯೋ ಸರಕಾರದ ಗಮನಕ್ಕೆ ಬಂತು. ಆದರೆ ಏನಾಯ್ತು? ಕೆಲವೇ ದಿನಗಳಲ್ಲಿ ಆ ಅಧಿಕಾರಿ ತಾನು ನಿರೀಕ್ಷಿಸಿದ್ದ ಅದೇ ಠಾಣೆಗೆ ನೇಮಕಗೊಂಡರು.

ಕನಿಷ್ಟ ಲಜ್ಜೆ ಇಲ್ಲದ ಹಾಗೂ ಈ ನೆಲದ ಕಾನೂನಿಗೆ ಗೌರವ ಕೊಡದ ತುಂಬಾ ಮಂದಿ ಈ ಇಲಾಖೆಯಲ್ಲಿದ್ದಾರೆ. ಒಂದು ಬೈಕ್ ಕಳೆದುಕೊಂಡವರು ದೂರು ಕೊಡಲು ಹೋದಾಗ ಅನುಭವಿಸುವ ಯಾತನೆ ಯಾರಿಗೂ ಬೇಡ. ಆ ಬೈಕ್ ಮತ್ತೆ ಸಿಕ್ಕ ನಂತರ ಅದನ್ನು ಹಿಂಪಡೆಯುವುದು ಇನ್ನೊಂದು ದಾರುಣ ಕತೆ. ಬೈಕ್ ಕಳ್ಳನಿಂದ ಸುಸ್ಥಿತಿಯಲ್ಲಿ ಸಿಕ್ಕಿದ್ದರೂ ಪೊಲೀಸರು ಹಿಂತಿರುಗಿಸುವಾಗ ಯಾವ ಸ್ಪೇರ್ ಪಾರ್‍ಟ್ಸ್ ಇಲ್ಲದಂತೆ ನೋಡಿಕೊಂಡಿರುತ್ತಾರೆ.

ನಿವೃತ್ತರಾಗಿರುವ ಪೊಲೀಸ್ ಅಧಿಕಾರಿಗಳು ಆಗಾಗ ಟಿವಿ ಚರ್‍ಚೆಗಳಲ್ಲಿ ಭಾಗವಹಿಸಿ ಮಾತನಾಡುವುದನ್ನು ನೋಡಿ. ಅವರ ಮಾತುಗಳಲ್ಲಿ ವೃತ್ತಿ ಕಾಲದ ತಮ್ಮ ಯಾವ ನಡೆಯ ಬಗ್ಗೆಯೂ ಅವರು ವಿಷಾದ ತೋರುವುದಿಲ್ಲ. ಬದಲಿಗೆ ತಮ್ಮ ’ಶೌರ್ಯವನ್ನು’ ವೀರಾವೇಶದಿಂದ ಹೇಳಿಕೊಳ್ಳುತ್ತಾರೆ. ಪೊಲೀಸ್ ಆಡಳಿತ ಸುಧಾರಣೆ ಬಗ್ಗೆ ಮಾತನಾಡುವುದಿಲ್ಲ. ಅಲ್ಲೊಬ್ಬ, ಇಲ್ಲೊಬ್ಬ ನಿಷ್ಠಾವಂತ, ಪ್ರಾಮಾಣಿಕ ಅಧಿಕಾರಿಗಳಿದ್ದಾರೆ ಎಂಬ ಮಾತು ಕೇಳುತ್ತೇವೆ. ಆದರೆ ಅವರು ವ್ಯವಸ್ಥೆಯ ಸುಧಾರಣೆ ಕಡೆ ಯೋಚನೆ ಮಾಡಿದ್ದು ಕಡಿಮೆ. ಪ್ರತಿಷ್ಠಿತ ತರಬೇತಿ ಸಂಸ್ಥೆಗಳಲ್ಲಿ ಭಾರತೀಯ ಪ್ರಜಾಪ್ರಭುತ್ವ, ಬಹುತ್ವದ ಪಾಠ ಕೇಳಿಕೊಂಡು ಫೀಲ್ಡ್‌ಗೆ ಬಂದವರು ತೀರಾ ಅಲ್ಪರಂತೆ ವರ್ತಿಸುತ್ತಾರೆ. ಹಾಗಾಗಿ ತರಬೇತಿ ವ್ಯವಸ್ಥೆಯೇ ಅಮೂಲಾಗ್ರವಾಗಿ ಬದಲಾಗಬೇಕು ಎಂದು ಹೇಳುವವರು ಹಲವರಿದ್ದಾರೆ.

ಆದರೆ ಇದೆಲ್ಲಕ್ಕಿಂತ ಪರಿಣಾಮಕಾರಿಯಾಗಿ ಈ ಪೊಲೀಸಿಂಗ್ ಕೊನೆಯಾಗಬೇಕೆಂದು ಗಟ್ಟಿಯಾಗಿ ಪ್ರತಿಪಾದಿಸಿದವರು ಅಮೆರಿಕಾದ ಅಲೆಕ್ಸ್ ವಿಠಾಲೆ. ಅವರ ಪುಸ್ತಕ ’ದಿ ಎಂಡ್ ಆಫ್ ಪೊಲೀಸಿಂಗ್’ ಪ್ರತಿಪಾದಿಸುವುದು ಪೊಲೀಸ್ ಆಡಳಿತ ಸುಧಾರಣೆಯನ್ನಲ್ಲ, ಬದಲಿಗೆ ಪೊಲೀಸ್ ವ್ಯವಸ್ಥೆಯ ಸಂಪೂರ್ಣ ಅಂತ್ಯ.

ನಾವು ಈಗ ನೋಡುತ್ತಿರುವ ಆಧುನಿಕ ಪೊಲೀಸ್ ವ್ಯವಸ್ಥೆ ಆರಂಭವಾಗಿದ್ದು ಇಂಗ್ಲೆಂಡ್‌ನಲ್ಲಿ 1820ರ ದಶಕದಲ್ಲಿ. ಆಗಿನಿಂದಲೂ ವ್ಯವಸ್ಥೆ ರೂಪುಗೊಂಡಿದ್ದು ಶ್ರೀಮಂತರನ್ನು ಬಡವರಿಂದ ರಕ್ಷಿಸಲು ಹಾಗೂ ಗುಲಾಮಗಿರಿಯನ್ನು ಪೋಷಿಸಲು. ಅಂದಿನಿಂದ ಪೊಲೀಸ್ ವ್ಯವಸ್ಥೆ ಸಮಾಜದಲ್ಲಿ ಅಸಮಾನತೆಯನ್ನು ಕಾಪಾಡಿಕೊಂಡು ಬಂದಿದೆ. ಇಂದಿಗೂ ಪೊಲೀಸರು ಮಾಡುತ್ತಿರುವ ಕೆಲಸ ಅದೇ.

ಹಾಗಾಗಿ ಅವರು ಶಿಫಾರಸ್ಸು ಮಾಡುವುದು ನಮ್ಮ ಪೊಲೀಸ್ ವ್ಯವಸ್ಥೆಯ ಅಂತ್ಯ. ಕಳ್ಳತನ, ಕೊಲೆ ಇನ್ನಿತರೆ ಅಪರಾಧಗಳನ್ನು ಹತ್ತಿಕ್ಕಲು ಆಡಳಿತ ವ್ಯವಸ್ಥೆ ರಾಜಕೀಯ ಪರಿಹಾರಗಳನ್ನು ಕಂಡುಕೊಳ್ಳಬೇಕಿದೆ. ಎಲ್ಲರಿಗೂ ಸೂರು, ದುಡಿಯುವ ಕೈಗಳಿಗೆ ಸೂಕ್ತ ಉದ್ಯೋಗ, ಉದ್ಯೋಗ ಭದ್ರತೆ.. ಇಂತಹ ಪರಿಹಾರಗಳಿಂದ ಸಾಮಾಜಿಕ ವ್ಯವಸ್ಥೆ ಸಾಕಷ್ಟು ಸುಧಾರಣೆ ಆಗುತ್ತದೆ. ಈ ನಿಟ್ಟಿನಲ್ಲಿ ಪ್ರಗತಿಪರ ಸಮಾಜ ಆಲೋಚಿಸಬೇಕಿದೆ.


ಇದನ್ನೂ ಓದಿ: ಮರೀಚಿಕೆಯಾಗಿರುವ ಪೊಲೀಸ್ ಸುಧಾರಣೆ; ನಾಗರಿಕ ಸಮಾಜದ ಒಕ್ಕೊರಲಿನ ದನಿ ಬೇಕಿದೆ..

ಇದನ್ನೂ ಓದಿ: ಟ್ರಾಫಿಕ್‌ ಅಧಿಕಾರಿಯಿಂದ ವಿಕಲಾಂಗ ಮಹಿಳೆಗೆ ಥಳಿತ: ಬೆಂಗಳೂರಿನಲ್ಲಿ ಸದ್ಯಕ್ಕಿಲ್ಲ ಟೋಯಿಂಗ್

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ತೆಲಂಗಾಣ ಜಾತಿ ಸಮೀಕ್ಷೆ: ಜನರ ಆರ್ಥಿಕ ಭವಿಷ್ಯ ನಿರ್ಧರಿಸುತ್ತಿರುವ ಜಾತಿ ಹಿನ್ನೆಲೆ

ತೆಲಂಗಾಣದಲ್ಲಿರುವ ಎಲ್ಲಾ ಪರಿಶಿಷ್ಟ ಜಾತಿ ಕಾರ್ಮಿಕರಲ್ಲಿ ಸುಮಾರು ಅರ್ಧದಷ್ಟು ಜನರು ದಿನಗೂಲಿ ಕಾರ್ಮಿಕರು. ಆದರೆ, ಸಾಮಾನ್ಯ ಜಾತಿ ಕಾರ್ಮಿಕರಲ್ಲಿ 10 ರಲ್ಲಿ ಒಬ್ಬರು ಮಾತ್ರ ದಿನಗೂಲಿ ಮಾಡುತ್ತಾರೆ. ಬ್ರಾಹ್ಮಣರು ಎಸ್‌ಟಿ ಸಮುದಾಯದ ಕೋಲಂಗಿಂತ...

ಲೆಬನಾನ್‌ನಲ್ಲಿ ಯೇಸುವಿನ ಪ್ರತಿಮೆ ಧ್ವಂಸ ಮಾಡಿದ ಇಸ್ರೇಲಿ ಸೈನಿಕ; ಫೋಟೋ ವೈರಲ್

ಇಸ್ರೇಲಿ ಸೈನಿಕನೊಬ್ಬ ದಕ್ಷಿಣ ಲೆಬನಾನ್‌ನಲ್ಲಿ ಸ್ಲೆಡ್ಜ್ ಹ್ಯಾಮರ್‌ನಿಂದ ಯೇಸುಕ್ರಿಸ್ತನ ಪ್ರತಿಮೆಯನ್ನು ಧ್ವಂಸ ಮಾಡುತ್ತಿರುವುದನ್ನು ತೋರಿಸುವ ವೈರಲ್ ಚಿತ್ರದ ಸತ್ಯಾಸತ್ಯತೆಯನ್ನು ಇಸ್ರೇಲ್ ರಕ್ಷಣಾ ಪಡೆಗಳು (ಐಡಿಎಫ್‌) ದೃಢಪಡಿಸಿದ್ದು, ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಎಕ್ಸ್ ನಲ್ಲಿ 6.8...

TCS ನಾಸಿಕ್ ಪ್ರಕರಣ : ಮಾಧ್ಯಮಗಳ ಸುಳ್ಳು ಮತ್ತು ಕಂಪನಿ ಹೇಳಿದ ಸತ್ಯ

ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್‌) ಕಂಪನಿಯ ಬಿಪಿಒ ಘಟಕದಲ್ಲಿ ನಡೆದಿದೆ ಎನ್ನಲಾದ ಪ್ರಕರಣವೊಂದು ಪ್ರಸ್ತುತ ಇಡೀ ದೇಶದಾದ್ಯಂತ ಭಾರೀ ಚರ್ಚೆಯ ವಿಷಯವಾಗಿದೆ. ಈ ಪ್ರಕರಣದಲ್ಲಿ ಮುಖ್ಯವಾಗಿ ಲೈಂಗಿಕ ಕಿರುಕುಳ ಮತ್ತು...

‘ಅಮೆರಿಕದೊಂದಿಗೆ ಮಾತುಕತೆ ಇಲ್ಲ..’; ಇಸ್ಲಾಮಾಬಾದ್‌ ಸಭೆಯಲ್ಲಿ ಇರಾನ್ ಭಾಗವಹಿಸುವುದು ಅನುಮಾನ

ಯುನೈಟೆಡ್ ಸ್ಟೇಟ್ಸ್ (ಅಮೆರಿಕ) ಜೊತೆ ಹೊಸ ಸುತ್ತಿನ ಮಾತುಕತೆಗಾಗಿ ಇಸ್ಲಾಮಾಬಾದ್‌ಗೆ ಸಂಧಾನಕಾರರನ್ನು ಕಳುಹಿಸುವ ಯಾವುದೇ ಯೋಜನೆ ಇಲ್ಲ ಎಂದು ಇರಾನ್ ಸೂಚಿಸಿದೆ. ಕದನ ವಿರಾಮ ಮುಕ್ತಾಯಗೊಳ್ಳಲು 48 ಗಂಟೆಗಳ ಮೊದಲು ಯುದ್ಧ ನಿರತ...

ಇರಾನ್, ಇಸ್ರೇಲ್-ಅಮೆರಿಕ ಯುದ್ಧ : ವಿನಾಶದ ನಡುವೆಯೂ ಲಾಭ ಪಡೆದವರು ಯಾರು?

ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್‌) 2026ರ ಜಾಗತಿಕ ಬೆಳವಣಿಗೆಯ ಅಂದಾಜನ್ನು ಶೇಕಡ 3.3 ರಿಂದ 3.1ಕ್ಕೆ ಇಳಿಸಿದೆ. ಇರಾನ್ ವಿರುದ್ಧದ ಅಮೆರಿಕ-ಇಸ್ರೇಲ್ ಯುದ್ಧದ ಪರಿಣಾಮ ಮತ್ತು ಹಾರ್ಮುಝ್ ಜಲಸಂಧಿಯನ್ನು ಮುಚ್ಚಿರುವುದು ವಿಶ್ವ ಆರ್ಥಿಕತೆಯ...

ಕ್ಷೇತ್ರ ಮರುವಿಂಗಡಣೆ ವಿರುದ್ಧ ದಕ್ಷಿಣದ ರಾಜ್ಯಗಳ ಪಟ್ಟು: ಭವಿಷ್ಯದ ಮರುಚಿಂತನೆಗೆ ಇದುವೇ ಸೂಕ್ತ ಕಾಲ

ಲೋಕಸಭೆಯಲ್ಲಿ 131 ನೇ ಸಾಂವಿಧಾನಿಕ ತಿದ್ದುಪಡಿ ಮಸೂದೆಯನ್ನು ತಿರಸ್ಕರಿಸಿರುವುದು ಭಾರತದ ಪ್ರಜಾಪ್ರಭುತ್ವ ಪಥದಲ್ಲಿ ಮಹತ್ವದ ಕ್ಷಣವಾಗಿದೆ. ಇದು ಕೇವಲ ಶಾಸಕಾಂಗದ ಹಿನ್ನಡೆಯನ್ನು ಮಾತ್ರವಲ್ಲ, ಒಕ್ಕೂಟ ವ್ಯವಸ್ಥೆಯ ಸೂಕ್ಷ್ಮ ಸಮತೋಲನವನ್ನು ಹಾಳುಮಾಡುವ ಅಪಾಯವನ್ನುಂಟುಮಾಡುವ ಪ್ರಸ್ತಾಪಗಳ...

ಮೋದಿ ಸರ್ಕಾರದ ಯೂಟರ್ನ್ : ಜನಸಂಖ್ಯಾ ಸ್ಫೋಟದ ಕಳವಳದಿಂದ ಹೆಚ್ಚು ಜನಸಂಖ್ಯೆಯ ರಾಜ್ಯಗಳಿಗೆ ಗಿಫ್ಟ್ ಕೊಡುವವರೆಗೆ

ಭಾರತದ ಜನಸಂಖ್ಯೆಯ ಬಗ್ಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಅವರ ಸರ್ಕಾರ ನಿಜವಾಗಿಯೂ ಬಹಳ ಕಳವಳ ವ್ಯಕ್ತಪಡಿಸುತ್ತಿದೆ– ಅಥವಾ ಅವರು ನಮಗೆ ಆ ರೀತಿ ನಂಬುವಂತೆ ಮಾಡಿದ್ದಾರೆ. ಏಕೆಂದರೆ... 2019ರ ಸ್ವಾತಂತ್ರ್ಯ ದಿನಾಚರಣೆಯಂದು ಮೋದಿಯವರು,...

ದೇಶವನ್ನುದ್ದೇಶಿಸಿ ಮೋದಿ ಭಾಷಣ : ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆ

ಕ್ಷೇತ್ರ ಮರುವಿಂಗಡನೆಗೆ ಉದ್ದೇಶಿಸಿದ್ದ ಸಂವಿಧಾನದ 131ನೇ ತಿದ್ದುಪಡಿ ಮಸೂದೆಗೆ ಲೋಕಸಭೆಯಲ್ಲಿ ಸೋಲಾದ ಬೆನ್ನಲ್ಲೇ ಶನಿವಾರ (ಏ.18) ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಪ್ರತಿಪಕ್ಷಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ಸಂಸತ್ತಿನಲ್ಲಿ ವಿರೋಧ...

ಫ್ಯಾಕ್ಟ್‌ಚೆಕ್ : ಅತ್ಯಾಚಾರ ಅಪರಾಧಿ ಪರ ವಕೀಲೆಗೆ ಟಿಎಂಸಿಯಿಂದ ರಾಜ್ಯಸಭೆ ಸೀಟ್; ಬಿಜೆಪಿ ಆರೋಪದ ಸತ್ಯಾಸತ್ಯತೆ ಏನು?

ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಗೆ ಪಾಣಿಹತಿ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿರುವ ಆರ್‌ಜಿ ಕರ್‌ ಸಂತ್ರಸ್ತೆಯ ತಾಯಿ ಮತ್ತು ವಕೀಲೆ ಹಾಗೂ ತೃಣಮೂಲ ಕಾಂಗ್ರೆಸ್ (ಟಿಎಂಸಿ) ರಾಜ್ಯಸಭಾ ಸದಸ್ಯೆ ಮೇನಕಾ ಗುರುಸ್ವಾಮಿ ಅವರ ಎಐ-ರಚಿತ...

ತಾರತಮ್ಯ ಮುಕ್ತ ಕ್ಯಾಂಪಸ್ ನಿರ್ಮಾಣದತ್ತ ಮಹತ್ವದ ಹೆಜ್ಜೆ; ‘ರೋಹಿತ್ ವೇಮುಲ ಮಸೂದೆ’ಗೆ ಸಚಿವ ಸಂಪುಟ ಅನುಮೋದನೆ

ಕರ್ನಾಟಕ ಸರ್ಕಾರದ ಸಚಿವ ಸಂಪುಟ ಗುರುವಾರ (ಏ.16) ದಂದು ಕರ್ನಾಟಕ ರೋಹಿತ್ ವೇಮುಲ (ಹೊರಗಿಡುವಿಕೆ ಅಥವಾ ಅನ್ಯಾಯ ತಡೆಗಟ್ಟುವಿಕೆ) (ಶಿಕ್ಷಣ ಮತ್ತು ಘನತೆಯ ಹಕ್ಕು) ಮಸೂದೆ’ಗೆ ಅನುಮೋದನೆ ನೀಡಿದೆ. ಹೈದರಾಬಾದ್‌ನ ಕೆಂದ್ರೀಯ ವಿಶ್ವವಿದ್ಯಾಲಯದಲ್ಲಿ...