Homeಮುಖಪುಟಅಸಮಾನತೆ ಪೋಷಣೆಗೆ ಪೊಲೀಸರು

ಅಸಮಾನತೆ ಪೋಷಣೆಗೆ ಪೊಲೀಸರು

- Advertisement -
- Advertisement -

ಒಂದು ಊರಲ್ಲಿ ಅಣ್ಣ ಮತ್ತು ತಮ್ಮನ ಮಧ್ಯೆ ಎಂತಹದೋ ಗಲಾಟೆ. ಅಣ್ಣ ಹಣದಲ್ಲಿ ಮುಂದಿದ್ದ. ತಮ್ಮ ಕೂಲಿ ಕೆಲಸ. ತಮ್ಮನಿಗೆ ಬುದ್ಧಿ ಕಲಿಸಬೇಕು ಅಂತ ತನಗೆ ಗೊತ್ತಿರುವ ಪೊಲೀಸ್‌ಗೆ ಅಣ್ಣ ಒಂದಿಷ್ಟು ದುಡ್ಡು ಕೊಟ್ಟ. ಪೊಲೀಸರು ತಮ್ಮನನ್ನು ಜೀಪಲ್ಲಿ ಕರ್‍ಕೊಂಡು ಹೋದರು. ಏನು ಮಾಡಿದ್ರು ಗೊತ್ತಿಲ್ಲ. ಆದರೆ ಸ್ವಲ್ಪ ಹೊತ್ತಿನ ನಂತರ ತಮ್ಮನ ಹೆಂಡತಿಗೆ ಮಾಹಿತಿ ಬಂತು. ಅವರು ಪೊಲೀಸ್ ಸ್ಟೇಷನ್‌ಗೆ ಹೋಗಿ ನೋಡುವಷ್ಟರಲ್ಲಿ ಗಂಡ ರಕ್ತ ವಾಂತಿ ಮಾಡಿಕೊಂಡಿದ್ದರು. “ಏನೋ ತಿಂದು ಬಂದಿದಾನೆ. ಆಸ್ಪತ್ರೆಗೆ ಕರೆದುಕೊಂಡು ಹೋಗು” ಎಂದು ಪೊಲೀಸರು ತಾಕೀತು ಮಾಡಿದರು. ಆ ನಂತರ ಕೆಲವೇ ನಿಮಿಷಗಳಲ್ಲಿ ಆತನ ಪ್ರಾಣ ಹೋಯ್ತು.

ಇನ್ನೊಂದು ಊರಲ್ಲಿ ಒಂದು ಕೊಲೆ. ಆರೋಪಿಗಳ ಹುಡುಕಾಟದಲ್ಲಿ ಪೊಲೀಸರು. ಒಬ್ಬ ಅಧಿಕಾರಿಗೆ ಅಲ್ಲೊಬ್ಬನ ಮೇಲೆ ಅನುಮಾನ. ಕರೆದುಕೊಂಡು ಬಂದು ಸತತವಾಗಿ ಹದಿನೈದು ದಿನ ವಿಚಾರಣೆ ಮಾಡಿದರು. ಕೊಲೆಗೂ, ತನಗೂ ಏನೂ ಸಂಬಂಧ ಇಲ್ಲ ಅಂತ ಎಷ್ಟು ಬಡ್ಕೊಂಡರೂ ಪೊಲೀಸರು ಕೇಳಲಿಲ್ಲ. ಆಮೇಲೆ ಇನ್ನೊಬ್ಬ ಅಧಿಕಾರಿ ’ಇಲ್ಲಿದಾನೆ ನಿಜ ಆರೋಪಿ. ಅವನನ್ನು ಬಿಟ್ಟುಬಿಡಿ’ ಅಂದರು. ಆ ಹದಿನೈದು ದಿನ ಆ ಅಮಾಯಕ ಅನುಭವಿಸಿದ ಯಾತನೆ ಯಾವ ಪ್ರಾಣಿಗೂ ಬೇಡ.

ಯಾವುದೇ ತಯಾರಿ ಇಲ್ಲದೆ ದೇಶಾದ್ಯಂತ ಲಾಕ್‌ಡೌನ್ ಘೋಷಿಸಿದ ನಂತರ ದೆಹಲಿಯಿಂದ ಕಾರ್ಮಿಕರು ತಮ್ಮ ತವರು ಬಿಹಾರಕ್ಕೆ ಸೈಕಲ್ ತುಳಿಯುತ್ತಾ ಹೊರಟಿದ್ದರು. ಸಾಯೋದಾದ್ರೂ ನಾವು ಊರಿಗೆ ಹೋಗಿ ಅಪ್ಪ, ಅಮ್ಮಂದಿರ ಬಳಿಯೇ ಸಾಯೋಣ ಎಂಬ ನಿರ್ಧಾರ ಅವರದು. ಆದರೆ ಅಲ್ಲೊಂದು ಕಡೆ ಅವರನ್ನು ತಡೆದ ಪೊಲೀಸರು ಹಿಗ್ಗಾಮುಗ್ಗಾ ಬಾರಿಸಿದರು. ’ಲಾಕ್ ಡೌನ್ ಇದೆ. ಯಾಕೋ ಹೊರಗಡೆ ಬಂದ್ರಿ? ನಿಮ್ಮ ಅಮ್ಮಂದಿರಿಗೆ ಗಿರಾಕಿ ಹುಡುಕಿಕೊಂಡು ಹೊರಟಿರೇನೋ..?’ ಎನ್ನುತ್ತಾನೆ ಒಬ್ಬ ಪೊಲೀಸ್. ಇನ್ನೊಂದು ಕಡೆ ಜ್ವರದಿಂದ ಬಳಲುತ್ತಿದ್ದ ಮಗನನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿದ್ದ ಅಪ್ಪನನ್ನು ತಲೆ ಒಡೆದು ರಕ್ತ ಬರುವಂತೆ ಬಾರಿಸಿದರು. ಸಿಟ್ಟಿಗೆದ್ದು ಆತ ತಿರುಗಿಬಿದ್ದು ವಾದಿಸಿದಾಗ, ಪೊಲೀಸರಿಗೆ ಎದುರು ಮಾತನಾಡ್ತೀಯಾ ಎಂದು ಅವನನ್ನು ಬಲವಂತವಾಗಿ ಸ್ಟೇಷನ್‌ಗೆ ಕರೆದುಕೊಂಡು ಮತ್ತಷ್ಟು ಹಿಂಸೆ ನೀಡಿದರು. ಇವರನ್ನೆಲ್ಲಾ ಮನುಷ್ಯರೆನ್ನಬೇಕೆ?

ಹೀಗೆ ಹೇಳುತ್ತಾ ಹೋಗಲು ನೂರು ಘಟನೆಗಳಿವೆ. ಯಾವೂ ಸುಳ್ಳಲ್ಲ. ನಡೆದ ಘಟನೆಗಳಿವು. ನಿವೃತ್ತಿಯಾದ ಅಥವಾ ಆತ್ಮೀಯರಾದ ಕೆಲ ಪೊಲೀಸ್ ಅಧಿಕಾರಿಗಳ ಜೊತೆ ಮಾತನಾಡಿದರೆ ಪೊಲೀಸರ ಕ್ರೂರ ವರ್ತನೆ ಅನಾವರಣಗೊಳಿಸುವ ಮತ್ತಷ್ಟು ಕರಳು ಹಿಂಡುವ ಕತೆಗಳು ಗೊತ್ತಾಗಬಹುದು. ಇನ್ನೊಬ್ಬ ಅಧಿಕಾರಿ ಇದ್ದರು. ಪೊಲೀಸರ ಕೆಲಸಗಳಲ್ಲಿ ಒಂದು ಕಳ್ಳತನ ತಡೆಯುವುದು ತಾನೆ. ಆದರೆ ಆ ಮಹಾಶಯ ತಾನು ಕೆಲಸ ಮಾಡುತ್ತಿದ್ದ ಊರಿನ ಬಸ್ ಸ್ಟಾಂಡ್‌ನಲ್ಲಿ ಪಿಕ್‌ಪಾಕೆಟ್ ಮಾಡಲೆಂದು ನುರಿತ ಕಳ್ಳರಿಗೆ ಆಶ್ರಯ ನೀಡಿ ಸಾಕಿಕೊಂಡಿದ್ದರು. ಅವರು ದಿನವಿಡೀ ಪಿಕ್‌ಪಾಕೆಟ್ ಮಾಡಿ ತಂದಿದ್ದನ್ನು ಪೊಲೀಸ್ ಅಧಿಕಾರಿಗೆ ಕೊಟ್ಟು ತನ್ನ ಪಾಲನ್ನು ಪಡೆಯಬೇಕಿತ್ತು. ಇಂತಹ ಅಧಿಕಾರಿಗಳೂ ಇದ್ದಾರೆ ಎಂದರೆ ಅಚ್ಚರಿ ಪಡಬೇಕಿಲ್ಲ. ಅವರಲ್ಲಿ ಕೆಲವರು ಇನ್ನು ಕೆಲವೇ ವರ್ಷಗಳಲ್ಲಿ ಶಾಸಕರೋ, ಮಂತ್ರಿಗಳೋ ಆಗಿ ಆಯ್ಕೆಯಾಗಬಹುದು.

ಕಳ್ಳರನ್ನು, ಕೊಲೆಗಡುಕರನ್ನು ಹಿಡಿದು ನ್ಯಾಯಾಲಯಕ್ಕೆ ಒಪ್ಪಿಸಬೇಕಾದ ಇವರೇ ಕ್ರಿಮಿನಲ್‌ಗಳಾಗಿದ್ದಾರೆ. ಅಲ್ಲಲ್ಲಿ ಸಣ್ಣಪುಟ್ಟ ಕಳ್ಳತನ ಮಾಡುವವರನ್ನು ಹಿಡಿದು ಫೋಟೋ ತೆಗೆಸಿಕೊಳ್ಳುವ ಇವರು, ಮತ್ತಾರದೋ ಹಣ ಲಪಟಾಯಿಸಿ ಅದನ್ನೇ ರಾಜಕಾರಣಿಗಳಿಗೆ ಒಪ್ಪಿಸಿ ಆಯಕಟ್ಟಿನ ಜಾಗಕ್ಕೆ ಬರುತ್ತಾರೆ. ಕೆಲವು ತಿಂಗಳುಗಳ ಹಿಂದೆ ಒಂದು ಆಡಿಯೋ ವೈರಲ್ ಆಗಿತ್ತು. ಅದರಲ್ಲಿ ಉತ್ತಮ ಜಾಗಕ್ಕಾಗಿ ಕಾಯುತ್ತಿದ್ದ ಒಬ್ಬ ಅಧಿಕಾರಿ ಹೇಳಿದ್ದು, “ಈಗಿನ ಶಾಸಕರು ಈ ಹಿಂದೆ ಕೇವಲ ಕಾರ್ಯಕರ್ತರಾಗಿದ್ದಾಗ ಒಂದು ಪ್ರಕರಣದಲ್ಲಿ ನಾನು ಸಹಾಯ ಮಾಡಿದ್ದೆ. ಹಾಗಾಗಿ ನನಗೆ ಆ ಸ್ಟೇಷನ್ ಮಾಡಿಸಿಕೊಡ್ತೀನಿ ಎಂದು ಮಾತು ಕೊಟ್ಟಿದ್ದಾರೆ”. ಆ ಆಡಿಯೋ ಸರಕಾರದ ಗಮನಕ್ಕೆ ಬಂತು. ಆದರೆ ಏನಾಯ್ತು? ಕೆಲವೇ ದಿನಗಳಲ್ಲಿ ಆ ಅಧಿಕಾರಿ ತಾನು ನಿರೀಕ್ಷಿಸಿದ್ದ ಅದೇ ಠಾಣೆಗೆ ನೇಮಕಗೊಂಡರು.

ಕನಿಷ್ಟ ಲಜ್ಜೆ ಇಲ್ಲದ ಹಾಗೂ ಈ ನೆಲದ ಕಾನೂನಿಗೆ ಗೌರವ ಕೊಡದ ತುಂಬಾ ಮಂದಿ ಈ ಇಲಾಖೆಯಲ್ಲಿದ್ದಾರೆ. ಒಂದು ಬೈಕ್ ಕಳೆದುಕೊಂಡವರು ದೂರು ಕೊಡಲು ಹೋದಾಗ ಅನುಭವಿಸುವ ಯಾತನೆ ಯಾರಿಗೂ ಬೇಡ. ಆ ಬೈಕ್ ಮತ್ತೆ ಸಿಕ್ಕ ನಂತರ ಅದನ್ನು ಹಿಂಪಡೆಯುವುದು ಇನ್ನೊಂದು ದಾರುಣ ಕತೆ. ಬೈಕ್ ಕಳ್ಳನಿಂದ ಸುಸ್ಥಿತಿಯಲ್ಲಿ ಸಿಕ್ಕಿದ್ದರೂ ಪೊಲೀಸರು ಹಿಂತಿರುಗಿಸುವಾಗ ಯಾವ ಸ್ಪೇರ್ ಪಾರ್‍ಟ್ಸ್ ಇಲ್ಲದಂತೆ ನೋಡಿಕೊಂಡಿರುತ್ತಾರೆ.

ನಿವೃತ್ತರಾಗಿರುವ ಪೊಲೀಸ್ ಅಧಿಕಾರಿಗಳು ಆಗಾಗ ಟಿವಿ ಚರ್‍ಚೆಗಳಲ್ಲಿ ಭಾಗವಹಿಸಿ ಮಾತನಾಡುವುದನ್ನು ನೋಡಿ. ಅವರ ಮಾತುಗಳಲ್ಲಿ ವೃತ್ತಿ ಕಾಲದ ತಮ್ಮ ಯಾವ ನಡೆಯ ಬಗ್ಗೆಯೂ ಅವರು ವಿಷಾದ ತೋರುವುದಿಲ್ಲ. ಬದಲಿಗೆ ತಮ್ಮ ’ಶೌರ್ಯವನ್ನು’ ವೀರಾವೇಶದಿಂದ ಹೇಳಿಕೊಳ್ಳುತ್ತಾರೆ. ಪೊಲೀಸ್ ಆಡಳಿತ ಸುಧಾರಣೆ ಬಗ್ಗೆ ಮಾತನಾಡುವುದಿಲ್ಲ. ಅಲ್ಲೊಬ್ಬ, ಇಲ್ಲೊಬ್ಬ ನಿಷ್ಠಾವಂತ, ಪ್ರಾಮಾಣಿಕ ಅಧಿಕಾರಿಗಳಿದ್ದಾರೆ ಎಂಬ ಮಾತು ಕೇಳುತ್ತೇವೆ. ಆದರೆ ಅವರು ವ್ಯವಸ್ಥೆಯ ಸುಧಾರಣೆ ಕಡೆ ಯೋಚನೆ ಮಾಡಿದ್ದು ಕಡಿಮೆ. ಪ್ರತಿಷ್ಠಿತ ತರಬೇತಿ ಸಂಸ್ಥೆಗಳಲ್ಲಿ ಭಾರತೀಯ ಪ್ರಜಾಪ್ರಭುತ್ವ, ಬಹುತ್ವದ ಪಾಠ ಕೇಳಿಕೊಂಡು ಫೀಲ್ಡ್‌ಗೆ ಬಂದವರು ತೀರಾ ಅಲ್ಪರಂತೆ ವರ್ತಿಸುತ್ತಾರೆ. ಹಾಗಾಗಿ ತರಬೇತಿ ವ್ಯವಸ್ಥೆಯೇ ಅಮೂಲಾಗ್ರವಾಗಿ ಬದಲಾಗಬೇಕು ಎಂದು ಹೇಳುವವರು ಹಲವರಿದ್ದಾರೆ.

ಆದರೆ ಇದೆಲ್ಲಕ್ಕಿಂತ ಪರಿಣಾಮಕಾರಿಯಾಗಿ ಈ ಪೊಲೀಸಿಂಗ್ ಕೊನೆಯಾಗಬೇಕೆಂದು ಗಟ್ಟಿಯಾಗಿ ಪ್ರತಿಪಾದಿಸಿದವರು ಅಮೆರಿಕಾದ ಅಲೆಕ್ಸ್ ವಿಠಾಲೆ. ಅವರ ಪುಸ್ತಕ ’ದಿ ಎಂಡ್ ಆಫ್ ಪೊಲೀಸಿಂಗ್’ ಪ್ರತಿಪಾದಿಸುವುದು ಪೊಲೀಸ್ ಆಡಳಿತ ಸುಧಾರಣೆಯನ್ನಲ್ಲ, ಬದಲಿಗೆ ಪೊಲೀಸ್ ವ್ಯವಸ್ಥೆಯ ಸಂಪೂರ್ಣ ಅಂತ್ಯ.

ನಾವು ಈಗ ನೋಡುತ್ತಿರುವ ಆಧುನಿಕ ಪೊಲೀಸ್ ವ್ಯವಸ್ಥೆ ಆರಂಭವಾಗಿದ್ದು ಇಂಗ್ಲೆಂಡ್‌ನಲ್ಲಿ 1820ರ ದಶಕದಲ್ಲಿ. ಆಗಿನಿಂದಲೂ ವ್ಯವಸ್ಥೆ ರೂಪುಗೊಂಡಿದ್ದು ಶ್ರೀಮಂತರನ್ನು ಬಡವರಿಂದ ರಕ್ಷಿಸಲು ಹಾಗೂ ಗುಲಾಮಗಿರಿಯನ್ನು ಪೋಷಿಸಲು. ಅಂದಿನಿಂದ ಪೊಲೀಸ್ ವ್ಯವಸ್ಥೆ ಸಮಾಜದಲ್ಲಿ ಅಸಮಾನತೆಯನ್ನು ಕಾಪಾಡಿಕೊಂಡು ಬಂದಿದೆ. ಇಂದಿಗೂ ಪೊಲೀಸರು ಮಾಡುತ್ತಿರುವ ಕೆಲಸ ಅದೇ.

ಹಾಗಾಗಿ ಅವರು ಶಿಫಾರಸ್ಸು ಮಾಡುವುದು ನಮ್ಮ ಪೊಲೀಸ್ ವ್ಯವಸ್ಥೆಯ ಅಂತ್ಯ. ಕಳ್ಳತನ, ಕೊಲೆ ಇನ್ನಿತರೆ ಅಪರಾಧಗಳನ್ನು ಹತ್ತಿಕ್ಕಲು ಆಡಳಿತ ವ್ಯವಸ್ಥೆ ರಾಜಕೀಯ ಪರಿಹಾರಗಳನ್ನು ಕಂಡುಕೊಳ್ಳಬೇಕಿದೆ. ಎಲ್ಲರಿಗೂ ಸೂರು, ದುಡಿಯುವ ಕೈಗಳಿಗೆ ಸೂಕ್ತ ಉದ್ಯೋಗ, ಉದ್ಯೋಗ ಭದ್ರತೆ.. ಇಂತಹ ಪರಿಹಾರಗಳಿಂದ ಸಾಮಾಜಿಕ ವ್ಯವಸ್ಥೆ ಸಾಕಷ್ಟು ಸುಧಾರಣೆ ಆಗುತ್ತದೆ. ಈ ನಿಟ್ಟಿನಲ್ಲಿ ಪ್ರಗತಿಪರ ಸಮಾಜ ಆಲೋಚಿಸಬೇಕಿದೆ.


ಇದನ್ನೂ ಓದಿ: ಮರೀಚಿಕೆಯಾಗಿರುವ ಪೊಲೀಸ್ ಸುಧಾರಣೆ; ನಾಗರಿಕ ಸಮಾಜದ ಒಕ್ಕೊರಲಿನ ದನಿ ಬೇಕಿದೆ..

ಇದನ್ನೂ ಓದಿ: ಟ್ರಾಫಿಕ್‌ ಅಧಿಕಾರಿಯಿಂದ ವಿಕಲಾಂಗ ಮಹಿಳೆಗೆ ಥಳಿತ: ಬೆಂಗಳೂರಿನಲ್ಲಿ ಸದ್ಯಕ್ಕಿಲ್ಲ ಟೋಯಿಂಗ್

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಯಾದಗಿರಿ| ಸಿದ್ಧಲಿಂಗೇಶ್ವರ ದೇವಸ್ಥಾನಕ್ಕೆ ತೆರಳಿದ್ದ ದಲಿತರ ಮೇಲೆ ಮಾರಣಾಂತಿಕ ಹಲ್ಲೆ

ಸಿದ್ಧಲಿಂಗೇಶ್ವರ ದೇವಸ್ಥಾನಕ್ಕೆ ತೆರಳಿದ್ದ ದಲಿತ ಸಮುದಾಯದ ಭಕ್ತರ ಮೇಲೆ ಸವರ್ಣೀಯರು ಮಾರಣಾಂತಿಕ ಹಲ್ಲೆ ನಡೆದಿರುವ ಆರೋಪ ಯಾದಗಿರಿ ಜಿಲ್ಲೆಯ ವಡಗೇರಾ ತಾಲೂಕಿನ ಗುರುಸುಣಿಗಿ ಗುಡ್ಡದಲ್ಲಿ ಕೇಳಿಬಂದಿದೆ. ಚಾಮನಾಳ ಗ್ರಾಮದ ದಲಿತ ಭಕ್ತರನ್ನು ಗುರಿಯಾಗಿಸಿಕೊಂಡು ಗುರುಸುಣಿಗಿ...

ರಾಜಸ್ಥಾನ ಸ್ಥಳೀಯ ಸಂಸ್ಥೆ ಚುನಾವಣೆ: ಬಿಕಾನೇರ್‌ನ ನೋಖಾದಲ್ಲಿ ಸಿಪಿಐ(ಎಂ) ಐತಿಹಾಸಿಕ ಜಯಭೇರಿ

ರಾಜಸ್ಥಾನ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಎಡಪಕ್ಷವಾದ ಸಿಪಿಐ(ಎಂ) (CPI-M) ಐತಿಹಾಸಿಕ ಸಾಧನೆ ಮಾಡಿದ್ದು, ಬಿಕಾನೇರ್ ಜಿಲ್ಲೆಯ ನೋಖಾ ನಗರ ಪಾಲಿಕೆಯ ಆಡಳಿತದ ಚುಕ್ಕಾಣಿಯನ್ನು ತನ್ನದಾಗಿಸಿಕೊಂಡಿದೆ. ಹಲವು ವರ್ಷಗಳಿಂದ ಬಿಜೆಪಿ ಹಾಗೂ ಎನ್‌ಸಿಪಿ (NCP)...

ಏಕರೂಪ ನಾಗರಿಕ ಸಂಹಿತೆಯನ್ನು ಸಂಸತ್ತಿನ ಬದಲು ರಾಜ್ಯಗಳ ಮೂಲಕವೇ ಜಾರಿಗೆ ಅಮಿತ್ ಶಾ ಮುಂದಾಗಿದ್ದೇಕೆ?

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸೆಪ್ಟೆಂಬರ್ 13ರಂದು ಮುಂಬೈನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ, 2029ರ ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿ ಮತ್ತು ಎನ್‌ಡಿಎ ಆಡಳಿತವಿರುವ ಎಲ್ಲಾ 21 ರಾಜ್ಯಗಳಲ್ಲಿ ಏಕರೂಪ ನಾಗರಿಕ...

ದಿಶಾ ಸಾಲಿಯಾನ್ ಸಾವಿನ ಪ್ರಕರಣ : ಸಿಬಿಐ ಎಫ್ಐಆರ್‌ನಲ್ಲಿ ಆದಿತ್ಯ ಠಾಕ್ರೆ, ರಿಯಾ ಚಕ್ರವರ್ತಿ ಸೇರಿದಂತೆ ಹಲವರ ಹೆಸರು

ಬಾಂಬೆ ಹೈಕೋರ್ಟ್ ಆದೇಶದ ಮೇರೆಗೆ, ಕೇಂದ್ರೀಯ ತನಿಖಾ ದಳವು (ಸಿಬಿಐ) ನಟ ಸುಶಾಂತ್ ಸಿಂಗ್ ರಜಪೂತ್ ಅವರ ಮಾಜಿ ಮ್ಯಾನೇಜರ್ ದಿಶಾ ಸಾಲಿಯಾನ್ ಅವರ ನಿಗೂಢ ಸಾವಿಗೆ ಸಂಬಂಧಿಸಿದಂತೆ ಸೋಮವಾರ(ಸೆ.14) ಎಫ್‌ಐಆರ್ ದಾಖಲಿಸಿದೆ. ಶಿವಸೇನೆ...

ಟಿ. ನರಸೀಪುರ ಇನ್ಸ್‌ಪೆಕ್ಟರ್‌ ಧನಂಜಯ್‌ ಹೇಳಿದ್ದರಲ್ಲಿ ತಪ್ಪೇನಿದೆ? ಸಾರ್ವಜನಿಕರಿಂದ ಬೆಂಬಲ

ಮಸೀದಿಗಳ ಮುಂಭಾಗ ಯಾವುದೇ ಪ್ರಚೋದನಕಾರಿ ಕೃತ್ಯಗಳಿಗೆ ಆಸ್ಪದ ನೀಡದೆ, ರಾತ್ರಿ 10:30ರ ಒಳಗಾಗಿ ಡಿಜೆ ಸದ್ದಿಲ್ಲದೆ ನಿಯಮಾನುಸಾರ ಮೆರವಣಿಗೆ ಮುಗಿಸಲು ಕಟ್ಟುನಿಟ್ಟಿನ ಕ್ರಮ ಕೈಗೊಂಡ ಇನ್ಸ್‌ಪೆಕ್ಟರ್ ಧನಂಜಯ್ ಅವರ ಪರವಾಗಿ ಈಗ ಸಾಮಾಜಿಕ...

ಅತ್ಯಾಚಾರ ಪ್ರಕರಣದಲ್ಲಿ 10 ವರ್ಷ ಜೈಲು ಶಿಕ್ಷೆ: ‘ತೆಹಲ್ಕಾ’ ಸಂಸ್ಥಾಪಕ ತರುಣ್ ತೇಜ್‌ಪಾಲ್ ನ್ಯಾಯಾಲಯಕ್ಕೆ ಶರಣು, ಜೈಲಿಗೆ ರವಾನೆ 

ಪಣಜಿ: 2013ರ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಬಾಂಬೆ ಹೈಕೋರ್ಟ್‌ನ ಗೋವಾ ಪೀಠದಿಂದ ದೋಷಿ ಎಂದು ತೀರ್ಪುಗೊಂಡು 10 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆಗೆ ಗುರಿಯಾಗಿರುವ ‘ತೆಹಲ್ಕಾ’ ಸಂಸ್ಥಾಪಕ ಹಾಗೂ ಮಾಜಿ ಪ್ರಧಾನ ಸಂಪಾದಕ...

ಹೈದರಾಬಾದ್‌ನಲ್ಲಿ ಗಣೇಶ ವಿಗ್ರಹ ಖರೀದಿ ವಿಚಾರಕ್ಕೆ ಘರ್ಷಣೆ: 34 ವರ್ಷದ ವ್ಯಕ್ತಿ ಸಾವು: ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹ

ಹೈದರಾಬಾದ್: ಗಣೇಶ ಚತುರ್ಥಿ ಆಚರಣೆಗೆ ಮುನ್ನ ಗಣೇಶ ವಿಗ್ರಹ ಖರೀದಿಸುವ ವಿಚಾರಕ್ಕೆ ಸಂಬಂಧಿಸಿದಂತೆ ನಡೆದ ವಾಗ್ವಾದವು ಹಿಂಸಾತ್ಮಕ ಘರ್ಷಣೆಗೆ ತಿರುಗಿ 34 ವರ್ಷದ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ಹೈದರಾಬಾದ್‌ನ ಜೋಡಿಮೆಟ್ಲಾ ಪ್ರದೇಶದಲ್ಲಿ ನಡೆದಿದೆ....

ಮಹಿಳಾ ಬೈಕರ್‌ಗೆ ಬೇಕಂತಲೇ ಢಿಕ್ಕಿ ಹೊಡೆದು ಪರಾರಿಯಾದ ಕಾರು ಸವಾರ! ಬೆಚ್ಚಿಬೀಳಿಸುವ ವಿಡಿಯೋ ವೈರಲ್

ಹರ್ಯಾಣದ ಗುರುಗ್ರಾಮದ ಗಾಲ್ಫ್ ಕೋರ್ಸ್ ರಸ್ತೆಯಲ್ಲಿ ಅತಿವೇಗವಾಗಿ ಬಂದ ಕಾರೊಂದು ಮಹಿಳಾ ಬೈಕ್ ಸವಾರಿಗೆ ಉದ್ದೇಶಪೂರ್ವಕವಾಗಿ ಢಿಕ್ಕಿ ಹೊಡೆದು ಪರಾರಿಯಾಗಿರುವ ಭೀಕರ ಘಟನೆ ನಡೆದಿದೆ. ಹಿಟ್ ಆ್ಯಂಡ್ ರನ್ ಶಂಕೆ ವ್ಯಕ್ತವಾಗಿರುವ ಈ...

ಪ. ಬಂಗಾಳ | 252 ಮದ್ರಸಾಗಳನ್ನು ಮುಚ್ಚಲು ಆದೇಶಿಸಿದ ಬಿಜೆಪಿ ಸರ್ಕಾರ; 100 ಸಂಸ್ಥೆಗಳಿಗೆ ಕಾರಣ ಕೇಳಿ ನೋಟಿಸ್

ರಾಜ್ಯದಾದ್ಯಂತ ಮದ್ರಸಾಗಳ ಸಮೀಕ್ಷೆಯನ್ನು ಪ್ರಾರಂಭಿಸಿದ ಮೂರು ತಿಂಗಳ ನಂತರ, ಬಿಜೆಪಿ ನೇತೃತ್ವದ ಪಶ್ಚಿಮ ಬಂಗಾಳ ಸರ್ಕಾರವು ಅನುಮೋದನೆಯ ಕೊರತೆ ಅಥವಾ ಇತರ ಅಕ್ರಮಗಳನ್ನು ಉಲ್ಲೇಖಿಸಿ 252 ಸಂಸ್ಥೆಗಳನ್ನು ಮುಚ್ಚಲು ಆದೇಶಿಸಿದೆ ಮತ್ತು ಇತರ...

ಟಿ. ನರಸೀಪುರ ಪ್ರತಿಭಟನೆ ವೇಳೆ ವಾಕ್ಸಮರ: ಪ್ರತಾಪ್ ಸಿಂಹ ಹಾಗೂ ಎಲ್. ನಾಗೇಂದ್ರ ನಡುವೆ ಬಹಿರಂಗ ನೂಕಾಟ-ತಳ್ಳಾಟ!

ಟಿ. ನರಸೀಪುರದಲ್ಲಿ ಗಣೇಶೋತ್ಸವ ಮೆರವಣಿಗೆಗೆ ಸಂಬಂಧಿಸಿದ ವಿವಾದದ ಹಿನ್ನೆಲೆಯಲ್ಲಿ ಬಿಜೆಪಿ ಹಮ್ಮಿಕೊಂಡಿದ್ದ ಪ್ರತಿಭಟನೆ ವೇಳೆ ಮೈಸೂರು ಬಿಜೆಪಿಯಲ್ಲಿನ ಆಂತರಿಕ ಭಿನ್ನಮತ ಬಹಿರಂಗಗೊಂಡಿದೆ. ಪೊಲೀಸ್ ಇನ್ಸ್‌ಪೆಕ್ಟರ್ ಧನಂಜಯ್ ವಿರುದ್ಧ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ಮಾಜಿ...