Homeಕರ್ನಾಟಕಚಾನೆಲ್ ಚಿತ್ರಾನ್ನ : ಮೌಢ್ಯ ತುಂಬುವ ಚಾನೆಲ್ಲುಗಳು ಮತ್ತು ವಾಸ್ತು ಪೀಡೆ ಚಂದ್ರಶೇಖರ್

ಚಾನೆಲ್ ಚಿತ್ರಾನ್ನ : ಮೌಢ್ಯ ತುಂಬುವ ಚಾನೆಲ್ಲುಗಳು ಮತ್ತು ವಾಸ್ತು ಪೀಡೆ ಚಂದ್ರಶೇಖರ್

ಬಾಗಲಕೋಟೆಯ ಬಸವೇಶ್ವರ ಇಂಜಿನಿಯರಿಂಗ್ ಕಾಲೇಜಿನಲ್ಲಿ ಸಿವಿಲ್ ಇಂಜಿನಿಯರಿಂಗ್ ಓದಿ ಕಂಟ್ರಾಕ್ಟರ್ ಆಗಿದ್ದ ಈ ಮನುಷ್ಯ, ಮನೆ ಕಟ್ಟಿಸುವಾಗ ಆ ಮೂಲೆ, ಈ ಮೂಲೆ ಎಂದು ಜನ ವಿಚಾರಿಸುವುದನ್ನು ನೋಡಿ, ಅದನ್ನೇ ಒಂದು ದಂಧೆ ಮಾಡಿಕೊಂಡಿದ್ದಾನೆ.

- Advertisement -
- Advertisement -

| ಪಿ.ಕೆ ಮಲ್ಲನಗೌಡರ್ |

ಹಳೆ ವಂಚನೆ, ಹೊಸ ವೇಷ!

‘ಸರಳ ವಾಸ್ತು’ವಿನ ಹೆಸರಲ್ಲಿ ಜನರನ್ನು ಮೌಢ್ಯಕ್ಕೆ ತಳ್ಳಿ, ಮನೆಗಳನ್ನೆಲ್ಲ ಮೂರಾಬಟ್ಟೆ ಮಾಡಿದ ವಾಸ್ತು ವಂಚಕ ಚಂದ್ರಶೇಖರ್ ‘ಗುರೂಜಿ’ ಈಗ ಹೊಸ ವೇಷ ತೊಟ್ಟು ಬಂದಿದ್ದಾನೆ. ಈಗಾತ ‘ಮಾನವಾಭಿವೃದ್ಧಿ ಗುರು’ ಅಂತೆ. ವೇಷವಷ್ಟೇ ಬದಲು, ಮತ್ತದೇ ವಂಚನೆ! ಈ ಸಲ ಸುವರ್ಣ ನ್ಯೂಸ್ ಎಂಬ ರಾಜೀವ್ ಚಂದ್ರಶೇಖರನ ಚಾನೆಲ್ಲು ಈ ವಂಚಕನ ಸಂಸ್ಥೆಯ ಪಾರ್ಟನರ್ ಎಂಬಂತೆ ಬೊಗಳೆ ಬಿಡುತ್ತ ಜನರನ್ನು ಬೋಳಿಸುತ್ತಲಿದೆ.

ಇವತ್ತು ರವಿವಾರ ಮುಂಜ್‍ಮುಂಜಾನೆ ಸುವರ್ಣ ನ್ಯೂಸ್ ಚಾನೆಲ್ಲಿನಲ್ಲಿ ಭೋಂಗು ಬಿಡುತ್ತಿದ್ದ ಸರಳ ವಾಸ್ತುವಿನ ಚಂದ್ರಶೇಖರ್ ಎಂಬ ಹೈಟೆಕ್ ವಂಚಕನನ್ನು ಕಂಡಾಗ ಆಶ್ಚರ್ಯವೇನೂ ಆಗಲಿಲ್ಲ. ಆದರೆ ಕೊಂಚ ಗಾಬರಿಯಾಗಿದ್ದು ಈತ ಹುಡುಕಿಕೊಂಡಿರುವ ಹೊಸ ವ್ಯಾಪಾರೀ ಮಾರ್ಗವನ್ನು ನೋಡಿದಾಗ….

ಈ ಕಾರ್ಯಕ್ರಮದ ಹೆಸರೇ ‘ಮಾನವಾಭಿವೃದ್ಧಿ ಗುರು’! ವಾವ್, ಹುಮನ್ ಡೆವೆಲಪ್ ಮೆಂಟ್ ಗುರು! ಕಳ್ಳ ನನ್ಮಗ ಅಂತ ಪ್ರೊಗ್ರಾಂ ನೋಡಿದರೆ, ಚಾನೆಲ್ಲಿನ ನಿರೂಪಕಿ ಮತ್ತು ಈ ವಾಸ್ತು ವಿಷ ಚಂದ್ರಶೇಖರ್ ಇಬ್ಬರೂ ಸೇರಿ ಜನರನ್ನು ಬಣ್ಣದ ಮಾತುಗಳಿಂದ ಬುಟ್ಟಿಗೆ ಹಾಕಿಕೊಳ್ಳುತ್ತಿದ್ದರು.

3 ಸ್ಟೆಪ್ಪು, 180 ದಿನ, 22 ಸಾವಿರ ಮುಂಡಾಮೋಚಿಂಗ್!

19 ವರ್ಷಗಳ ಕಾಲ ವಾಸ್ತು, ಸರಳ ವಾಸ್ತು ಹೆಸರಲ್ಲಿ ಜನರ ಮನೆ, ಕಚೇರಿಗಳಿಗೆ ಗತಿ ಕಾಣಿಸಿರುವ, ಅವರ ದೌರ್ಬಲ್ಯಗಳನ್ನು ಬಳಸಿಕೊಂಡು ಅವರಿಂದ ವಸೂಲಿ ಮಾಡಿರುವ ಚಂದ್ರಶೇಖರ್ ಈಗ ಹೊಸ ದಾರಿ ಕಂಡುಹಿಡಿದಿದ್ದಾನೆ. ಅದರ ಹೆಸರು ಮಾನವಾಭಿವೃದ್ಧಿ! ಕೇವಲ ಮೂರೇ ಹಂತಗಳಲ್ಲಿ ಈತ ರೈತರ ಸಮಸ್ಯೆಗಳನ್ನು, ನೌಕರರ ಆರ್ಥಿಕ ಸಂಕಟಗಳನ್ನು ಅಷ್ಟೇ ಅಲ್ಲ ಕ್ಯಾನ್ಸರ್ ಸೇರಿದಂತೆ ಇತರೆಲ್ಲ ರೋಗಿಗಳ ಆರೋಗ್ಯದ ಸಮಸ್ಯೆಗಳನ್ನು ಬಗೆಹರಿಸುತ್ತಾನಂತೆ!
ಸ್ಟೆಪ್ 1: ಈ ‘ಗುರೂಜಿ’ಯನ್ನು ಸಂಪರ್ಕಿಸುವುದು.
ಸ್ಟೆಪ್ 2: ಈತ ಮತ್ತು ಈತನ ತಂಡ ಹೇಳಿದ ‘ಮಾರ್ಗ’ದಲ್ಲಿ ನಡೆಯುವುದು.
ಸ್ಟೆಪ್ 3: 7ರಿಂದ 180 ದಿನಗಳಲ್ಲಿ ಎಲ್ಲ ಸಮಸ್ಯೆ ಫಿನಿಷ್! ಅಲ್ಲಿಗೆ ಮಾನವಾಭಿವೃದ್ಧಿ ಸಕ್ಸಸ್!

ವಾಸ್ತು ವಸೂಲಿಯ ದರಪಟ್ಟಿ, ಬಲು ತುಟ್ಟಿ!

ಮನೆಯ ಸಮಸ್ಯೆ ಇದ್ದರೆ 14 ಸಾವಿರ, ಸಣ್ಣಪುಟ್ಟ ವ್ಯಾಪಾರದ ಸಮಸ್ಯೆ ಇದ್ದರೆ 22 ಸಾವಿರ, ಮನೆಯ ನಕ್ಷೆಯನ್ನೇ ರೆಡಿ ಮಾಡಿ ಪರಿಹಾರ ಪಡೆಯಲು 22 ಸಾವಿರ ರೂಪಾಯಿ! ವೈಯಾರದಿಂದ ನಿರೂಪಕಿ ಹೇಳುತ್ತಾಳೆ: ಬಡವರಿಗಾಗಿ ಮಾನವಾಭಿವೃದ್ಧಿ ಅಂತೆ! ಅಂದರೆ, ಎರಡು ಕಂತುಗಳಲ್ಲಿ ಪೇ ಮಾಡಬಹುದು ಅಂತೆ! ದರಪಟ್ಟಿಯನ್ನೇ ಹಾಗೆ ವಿನ್ಯಾಸ ಮಾಡಿಯೂ ಬಿಟ್ಟಿದ್ದಾರೆ ಖದೀಮರು.

ಪ್ರೊಗ್ರಾಂ ನಡುನಡುವೆ ಸಮಸ್ಯೆಗಳಲ್ಲಿರುವ ಜನರ ಫೋನ್ ಕಾಲ್‍ಗಳು. ಅವರು ಸಮಸ್ಯೆ ಹೇಳುವ ಮೊದಲೇ, ಈಗ ನೀವು ನನನ್ನು ಸಂಪರ್ಕಿಸಿದಿರಲ್ಲ, ನನ್ನ ಎನರ್ಜಿ ನಿಮಗೆ ಪಾಸ್ ಆಗಿತು, ನಮ್ಮ ಕಚೇರಿಯವರು ನಿಮ್ಮನ್ನು ಸಂಪರ್ಕಿಸಿ ‘ಎಲ್ಲ’ ಮಾಡುತ್ತಾರೆ, ಡೋಂಟ್ ವರಿ ಎನ್ನುತ್ತಾನೆ ಚಂದ್ರ!

ಜನರಿಗೆ ಈ ಮಾರ್ಗ ಗೊತ್ತಿಲ್ಲದ್ದರಿಂದ ಅದನ್ನು ಕಲಿಸಲು ದೇವರೇ ಈ ಕಳ್ ನನ್ಮಗನಿಗೆ ಆದೇಶ ನೀಡಿದ್ದಾನಂತೆ! ಪಾಪ, ಸಣ್ಣಪುಟ್ಟ ವ್ಯಾಪಾರದಲ್ಲಿ ನಷ್ಟ ಅನುಭವಿಸಿದವರು, ಮದುವೆ ಸಮಸ್ಯೆ ಆಗಿರುವ ಹೆಣ್ಣು ಮಕ್ಕಳು, ಗಂಭೀರ ಕಾಯಿಲೆ ಇರುವವರ ಸಂಬಂಧಿಕರು ಫೋನ್ ಮಾಡಿ ಈ ಮುಠ್ಠಾಳರ ಬಲೆಗೆ ಬೀಳುತ್ತಿದ್ದರು.

ಹೀಗೆ ಇಡೀ ಜಗತ್ತಿನ ಮಾನವರ ಅಭಿವೃದ್ಧಿ ಮಾಡುವುದೇ ಚಂದ್ರನ ವಂಚಕ ಟೀಮಿನ ಗುರಿಯಂತೆ! ಬಾಗಲಕೋಟೆಯ ಬಸವೇಶ್ವರ ಇಂಜಿನಿಯರಿಂಗ್ ಕಾಲೇಜಿನಲ್ಲಿ ಸಿವಿಲ್ ಇಂಜಿನಿಯರಿಂಗ್ ಓದಿ ಕಂಟ್ರಾಕ್ಟರ್ ಆಗಿದ್ದ ಈ ಮನುಷ್ಯ, ಮನೆ ಕಟ್ಟಿಸುವಾಗ ಆ ಮೂಲೆ, ಈ ಮೂಲೆ ಎಂದು ಜನ ವಿಚಾರಿಸುವುದನ್ನು ನೋಡಿ, ಅದನ್ನೇ ಒಂದು ದಂಧೆ ಮಾಡಿಕೊಂಡಿದ್ದಾನೆ. ಇಷ್ಟು ದಿನ ಸರಳ ವಾಸ್ತು ಹೆಸರಲ್ಲಿ ಮೋಸ ಮಾಡಿದ್ದಾಯ್ತು, ಈಗ ಆ ಹಳೆ ಮೌಢ್ಯದ ಮದ್ಯವನ್ನು ‘ಮಾನವಾಭಿವೃದ್ಧಿ’ ಎಂಬ ಹೊಸ ಸೀಶೆಯಲ್ಲಿ ತುಂಬಿ ಮಾರ್ಕೆಟಿಂಗ್ ಮಾಡುತ್ತಿದ್ದಾನೆ!

ಈತ ಜನರಿಂದ ಯಾವ ಪರಿ ಕಿತ್ತಿದ್ದಾನೆಂದರೆ, ‘ಸರಳ ಜೀವನ’ ಎಂಬ ಚಾನೆಲ್ಲನ್ನೂ ಆರಂಭಿಸಿ, ಅದರ ಮೂಲಕವೂ ತನ್ನ ದಂಧೆಯನ್ನು ಪ್ರಮೋಟ್ ಮಾಡುತ್ತಾನೆ. ಜೊತೆಗೆ ರಾಜೀವ ಚಂದ್ರಶೇಖರನ ಸುವರ್ಣ ನ್ಯೂಸ್‍ನಂತಹ ಚಾನೆಲ್ಲುಗಳೂ ಈ ಜ್ಯೋತಿಷಿ, ವಾಸ್ತು ಪಂಡಿತರೊಂದಿಗೆ ಟೈಅಪ್ ಆಗಿವೆ!

ಇದನ್ನು ಓದಿ: ಮಾಧ್ಯಮ ಭಯೋತ್ಪಾನೆ

ಪಾಸಿಟಿವ್ ಎನರ್ಜಿ, ಕಾಸ್ಮೆಟಿಕ್ ಎನರ್ಜಿ ಅಂತೆಲ್ಲ ಮರುಳು ಮಾಡುವುದು ಇವರ ಟೆಕ್ನಿಕ್. ಇದಕ್ಕೆ ಮಾರು ಹೋಗುತ್ತಿರುವವರು ನಗರವಾಸಿ ವಿದ್ಯಾವಂತ ಜನರೇ ಎಂಬುದು ವಿಪರ್ಯಾಸ! ಮೋಡದ ಮರೆಯಲ್ಲಿ ರೇಡಾರ್‍ನಿಂದ ಬಚಾವ್ ಆಗಬಹುದು ಎನ್ನುವ ಪ್ರಧಾನಮಂತ್ರಿಯ ಮಾತನ್ನೂ ನಂಬುವ ಮೂಢ ಭಕ್ತರಲ್ಲಿ ಅದೇ ‘ಸುಶಿಕ್ಷಿತ’ರೇ ಜಾಸ್ತಿ ಇದ್ದಾರಲ್ಲ?

ನಮ್ಮ ಸಮಸ್ಯೆಗಳನ್ನು ಯಾವ ವಾಸ್ತುವೂ ಪರಿಹಾರ ಮಾಡದು. ಅದಕ್ಕೆ ನಾವೇ ಮಾರ್ಗ ಹುಡುಕಿಕೊಳ್ಳಬೇಕು. ಸತತ ಪ್ರಯತ್ನ ಮತ್ತು ಕಠಿಣ ಪರಿಶ್ರಮ ಇದಕ್ಕೆ ಅಗತ್ಯ. ನಿಮಗೆ ಪರಿಹರಿಸಲು ಸಾಧ್ಯವಾಗದಿದ್ದಲ್ಲಿ ಅದಕ್ಕೆ ಸಂಬಂಧಿಸಿದ ಜ್ಞಾನ ಇರುವವರ ಬಳಿ ಸಲಹೆ ಪಡೆದೋ, ಚಿಕಿತ್ಸೆ ಪಡೆದೋ ಪರಿಹಾರ ಕಂಡುಕೊಳ್ಳಬೇಕು. ಹಾಗಾಗಿ ಈ ಮೂಢ ಮಾಧ್ಯಮಗಳು ಬಿತ್ತರಿಸುವ ಇಂತಹ ಅವೈಜ್ಞಾನಿಕ ಪ್ರೊಗ್ರಾಂಗಳನ್ನು ನಂಬಬೇಡಿ. ಇದರಿಂದ ನಿಮ್ಮ ಸಮಸ್ಯೆ ಕಡಿಮೆಯಾಗುವ ಬದಲು ಹೆಚ್ಚಾಗುವುದರಲ್ಲಿ ಸಂದೇಹವೆ ಇಲ್ಲ. ಚಂದ್ರಶೇಖರರಂತಹ ವಂಚಕರಿಂದ ದೂರವಿರಿ. ಇಲ್ಲದಿದ್ದಲ್ಲಿ ನಿಮ್ಮ ಆರ್ಥಿಕ ಸಮಸ್ಯೆ ಮತ್ತು ಮಾನಸಿಕ ಮೌಢ್ಯ ಹೆಚ್ಚಾಗುತ್ತವೆ ಅಷ್ಟೇ!

(ಮೇಲಿನ ಬರಹದಲ್ಲಿನ ಅಭಿಪ್ರಾಯಗಳು ಲೇಖಕರದ್ದಾಗಿರುತ್ತವೆ. ಅತಿಥಿ ಲೇಖಕರ ಅನಿಸಿಕೆಗಳು ನಾನುಗೌರಿ.ಕಾಂ ವೆಬ್‌ಪತ್ರಿಕೆಯ ಸಂಪಾದಕೀಯ ತಂಡದ ಅಭಿಪ್ರಾಯಗಳೇ ಆಗಿರಬೇಕೆಂದೇನಿಲ್ಲ.)

ಚಾನೆಲ್ ಚಿತ್ರಾನ್ನ ಕಾಶಿಯ ಕೊತ್ವಾಲ, ಪ್ರತ್ಯಕ್ಷರಾದ ಸಾಧುಗಳು, ಖಬರ್ ದಾರ್ ಮೆಸೇಜ್

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ಬೆದರಿಕೆ, ಚಿತ್ರಹಿಂಸೆ, ಅತ್ಯಾಚಾರ ‘: ಇಸ್ರೇಲ್‌ ಜೈಲಿನ ದೌರ್ಜನ್ಯ ಬಿಚ್ಚಿಟ್ಟ ಪ್ಯಾಲೆಸ್ತೀನ್ ಪತ್ರಕರ್ತರು

ಇಸ್ರೇಲ್ ಜೈಲುಗಳಲ್ಲಿ ಬಂಧಿತರಾಗಿರುವ ಪ್ಯಾಲೆಸ್ತೀನ್ ಪತ್ರಕರ್ತರು ತೀವ್ರವಾದ ದೌರ್ಜನ್ಯಗಳನ್ನು ಎದುರಿಸುತ್ತಿದ್ದಾರೆ ಎಂದು ಅಂತಾರಾಷ್ಟ್ರೀಯ ಪತ್ರಕರ್ತರ ರಕ್ಷಣಾ ಸಮಿತಿ (ಸಿಪಿಜೆ) ಹೇಳಿದೆ. ಬಂಧನದಿಂದ ಬಿಡುಗಡೆಯಾಗಿರುವ ಪತ್ರಕರ್ತರನ್ನು ಸಂದರ್ಶಿಸಿರುವ ಸಿಪಿಜೆ, ಜೈಲಿನಲ್ಲಿರುವ ಪತ್ರಕರ್ತರು ನಿರಂತರವಾಗಿ ದೈಹಿಕ...

ಪಾಕಿಸ್ತಾನದ ಕರಾಚಿಯಲ್ಲಿ ಶಂಕಿತ ಅನಿಲ ಸೋರಿಕೆ: ಮಕ್ಕಳು ಸೇರಿದಂತೆ 16 ಮಂದಿ ಸಾವು

ಕರಾಚಿ: ಪಾಕಿಸ್ತಾನದ ಕರಾಚಿಯಲ್ಲಿ ಗುರುವಾರ ಬೆಳಿಗ್ಗೆ ವಸತಿ ಕಟ್ಟಡವೊಂದರಲ್ಲಿ ಶಂಕಿತ ಅನಿಲ ಸೋರಿಕೆಯಿಂದಾಗಿ ಸ್ಫೋಟ ಸಂಭವಿಸಿ, ಮಕ್ಕಳು ಸೇರಿದಂತೆ ಕನಿಷ್ಠ 16 ಜನರು ಸಾವನ್ನಪ್ಪಿದ್ದು, 14 ಜನರು ಗಾಯಗೊಂಡಿದ್ದಾರೆ. "ಓಲ್ಡ್ ಸೋಲ್ಜರ್ ಬಜಾರ್...

ಮಹಾರಾಷ್ಟ್ರ| 10 ದಿನಗಳ ಮಗುವಿನೊಂದಿಗೆ 12 ನೇ ತರಗತಿ ಪರೀಕ್ಷೆ ಬರೆದ ಮಹಿಳೆ

ಮಹಾರಾಷ್ಟ್ರದ ನಾಂದೇಡ್ ನಗರದಲ್ಲಿ 12 ನೇ ತರಗತಿಯ ಮಹಾರಾಷ್ಟ್ರ ಬೋರ್ಡ್ ಪರೀಕ್ಷೆಗೆ ಹಾಜರಾದ ಮಹಿಳೆಯೊಬ್ಬರು ತನ್ನ 10 ದಿನಗಳ ಮಗುವನ್ನು ಪರೀಕ್ಷಾ ಕೇಂದ್ರಕ್ಕೆ ಕರೆತಂದಿದ್ದಾರೆ. ಮಹಿಳೆ ಪರೀಕ್ಷೆ ಬರೆಯುವ ಕಾರಣಕ್ಕೆ ಕೇಂದ್ರದ ವಿಶೇಷ...

ಒಡಿಶಾ| ದಲಿತರು ವಾಸಿಸುವ ಪ್ರದೇಶಕ್ಕೆ ಕುಡಿಯುವ ನೀರು-ವಿದ್ಯುತ್ ಸಂಪರ್ಕ ಕಡಿತ

ಒಡಿಶಾದ ಬಲಂಗೀರ್ ಜಿಲ್ಲೆಯಲ್ಲಿ ಜಾತಿ ಆಧಾರಿತ ತಾರತಮ್ಯವಿದೆ ಎಂದು ಸ್ಥಳೀಯ ನಿವಾಸಿಗಳು ಆರೋಪಿಸಿದ್ದಾರೆ. ಆದರೆ, ಗ್ರಾಮದ ಅಧಿಕಾರಿಯೊಬ್ಬರು ಈ ಅಡಚಣೆಗೆ ಸ್ಥಳೀಯ ಕಲಹ ಕಾರಣ ಎಂದು ಆರೋಪಿಸಿದ್ದಾರೆ. ಜಿಲ್ಲೆಯ ತುರೆಕೆಲಾ ಬ್ಲಾಕ್‌ನ ಡುಮೆರ್ಚುವಾನ್ ಗ್ರಾಮದಲ್ಲಿ...

ತಮಿಳುನಾಡು ವಿಧಾನಸಭಾ ಚುನಾವಣೆ: ಡಿಎಂಕೆ ನೇತೃತ್ವದ ಮೈತ್ರಿಕೂಟಕ್ಕೆ ಡಿಎಂಡಿಕೆ ಸೇರ್ಪಡೆ

ಚೆನ್ನೈ: ದಿವಂಗತ ನಟ ವಿಜಯಕಾಂತ್ ಅವರ ದೇಶೀಯ ಮುರ್ಪೋಕ್ಕು ದ್ರಾವಿಡ ಕಳಗಂ (ಡಿಎಂಡಿಕೆ) ಗುರುವಾರ ದ್ರಾವಿಡ ಮುನ್ನೇತ್ರ ಕಳಗಂ ನೇತೃತ್ವದ ಜಾತ್ಯತೀತ ಪ್ರಗತಿಪರ ಒಕ್ಕೂಟ (ಎಸ್‌ಪಿಎ)ವನ್ನು 21ವರ್ಷಗಳ ಅಸ್ತಿತ್ವದ ನಂತರ ಮೊದಲ ಬಾರಿಗೆ...

ಟ್ರಕ್ ಚಾಲಕ ರಸ್ತೆಯಲ್ಲಿ ನಮಾಝ್ ಮಾಡಿದ್ದರಿಂದ ಟ್ರಾಫಿಕ್ ಜಾಮ್ ಎಂದು ಸುಳ್ಳು ಸುದ್ದಿ ಪ್ರಸಾರ : ಝೀ ನ್ಯೂಸ್‌ಗೆ 1 ಲಕ್ಷ ರೂ. ದಂಡ

ಮುಸ್ಲಿಂ ವ್ಯಕ್ತಿಯೊಬ್ಬರು ನಮಾಝ್ ಮಾಡಲು ಹೆದ್ದಾರಿ ಮಧ್ಯೆ ಟ್ರಕ್‌ ನಿಲ್ಲಿಸಿದ್ದರಿಂದ ಟ್ರಾಫಿಕ್ ಜಾಮ್‌ ಉಂಟಾಗಿದೆ ಎಂದು ಸುಳ್ಳು ಸುದ್ದಿ ಹಬ್ಬಿದ ಝೀ ನ್ಯೂಸ್‌ ಚಾನೆಲ್‌ಗೆ ಸುದ್ದಿ ಪ್ರಸಾರಕರು ಮತ್ತು ಡಿಜಿಟಲ್ ಮಾನದಂಡಗಳ ಪ್ರಾಧಿಕಾರ(ಎನ್‌ಬಿಡಿಎಸ್‌ಎ)...

ಗುಜರಾತ್‌| ಜಾತಿ ಆಧಾರಿತ ಜಗಳದಲ್ಲಿ ದಲಿತ ಯುವಕನ ಮೇಲೆ ಚಾಕುವಿನಿಂದ ದಾಳಿ

ಶನಿವಾರ ತಡರಾತ್ರಿ ರಾಣಿಪ್‌ನಲ್ಲಿ ನಡೆದ ಸಣ್ಣ ಭಿನ್ನಾಭಿಪ್ರಾಯವೊಂದು ಹಿಂಸಾಚಾರಕ್ಕೆ ತಿರುಗಿದ್ದು, 25 ವರ್ಷದ ದಲಿತ ಯುವಕ ಸಾಹಿಲ್ ವಘೇಲಾ ಮೇಲೆ ಚಾಕುವಿನಿಂದ ಹಲ್ಲೆ ನಡೆಸಲಾಗಿದೆ. ಯುವಕ ಗಂಭೀರವಾಗಿ ಗಾಯಗೊಂಡಿದ್ದು, ಘಟನೆಯು ಈ ಪ್ರದೇಶದಲ್ಲಿ...

ಮುಂಬೈ| ಬುರ್ಖಾ ಧರಿಸಿ ಲೋಕಲ್‌ ಟ್ರೈನ್‌ನ ಮಹಿಳಾ ಬೋಗಿಯಲ್ಲಿ ಪ್ರಯಾಣಿಸಿದ ವ್ಯಕ್ತಿ ಬಂಧನ

ಮುಂಬೈನ ಉಪನಗರ ರೈಲಿನ ಮಹಿಳಾ ಬೋಗಿಯಲ್ಲಿ ಬುರ್ಖಾ ಧರಿಸಿ ಪ್ರಯಾಣಿಸುತ್ತಿದ್ದ ಆರೋಪದ ಮೇಲೆ ನಾಸಿಕ್‌ನ 57 ವರ್ಷದ ವ್ಯಕ್ತಿಯನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ಬುಧವಾರ ತಿಳಿಸಿದ್ದಾರೆ. ಈ ಘಟನೆ ಫೆಬ್ರವರಿ 6 ರಂದು ಘಾಟ್ಕೋಪರ್...

ಎಪ್‌ಸ್ಟೀನ್‌ ಫೈಲ್ಸ್ ಜನಾಕ್ರೋಶ : ಎಐ ಶೃಂಗಸಭೆಯಿಂದ ದೂರ ಉಳಿದ ಬಿಲ್‌ ಗೇಟ್ಸ್‌

ಎಪ್‌ಸ್ಟೀನ್‌ ಫೈಲ್ಸ್‌ ಮುಂದಿಟ್ಟುಕೊಂಡು ಜನರು ತೀವ್ರ ವಿರೋಧ ವ್ಯಕ್ತಪಡಿಸಿದ ಬೆನ್ನಲ್ಲೇ, 'ಇಂಡಿಯಾ ಎಐ ಇಂಪ್ಯಾಕ್ಟ್ ಶೃಂಗಸಭೆ'ಯಿಂದ ಮೈಕ್ರೋಸಾಫ್ಟ್‌ ಸಹ-ಸಂಸ್ಥಾಪಕ ಬಿಲ್ ಗೇಟ್ಸ್ ದೂರ ಉಳಿದಿದ್ದಾರೆ. ಈ ಕುರಿತು ಗೇಟ್ಸ್ ಫೌಂಡೇಶನ್ ಇಂಡಿಯಾ ಗುರುವಾರ...

ಬೆಂಗಳೂರಿನಲ್ಲಿ ರಂಜಾನ್ ಆಹಾರ ಮೇಳ ನಡೆಸದಂತೆ ಹೋಟೆಲ್‌ಗಳಿಗೆ ಎಚ್ಚರಿಕೆ

ಬೆಂಗಳೂರು: ಫ್ರೇಸರ್ ಟೌನ್ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿನ ಎಂಎಂ ರಸ್ತೆಯಲ್ಲಿ ರಂಜಾನ್ ಆಹಾರ ಮೇಳ ನಡೆಸದಂತೆ ಹೋಟೆಲ್ ಮಾಲೀಕರಿಗೆ ಸ್ಥಳೀಯ ನಿವಾಸಿಗಳು ಎಚ್ಚರಿಕೆ ನೀಡಿದ್ದಾರೆ. ರಂಜಾನ್ ಆಹಾರ ಮೇಳದಿಂದ ಸಂಚಾರ ದಟ್ಟಣೆ. ಅವ್ಯವಸ್ಥೆಯ ಜೊತೆಗೆ...