Homeನಿಜವೋ ಸುಳ್ಳೋಮೋದಿಯವರು ಮೋಡದ ಮೇಲೆ ಪಾಕಿಸ್ತಾನಕ್ಕೆ ಹೋಗಿ ಬಂದ ಅಪೂರ್ವ ಕಥಾನಕ

ಮೋದಿಯವರು ಮೋಡದ ಮೇಲೆ ಪಾಕಿಸ್ತಾನಕ್ಕೆ ಹೋಗಿ ಬಂದ ಅಪೂರ್ವ ಕಥಾನಕ

ಪಾಕಿಸ್ತಾನದ ಮೇಲೆ ನಡೆಸಿದ ‘ವಾಯುದಾಳಿ’ ಮೋದಿ ಹೇಳಿಕೆಗೆ ಸೃಜನಾತ್ಮಕ ಪ್ರತಿಕ್ರಿಯೆಗಳು

- Advertisement -
- Advertisement -

ನಿಮಗೆ ಗೊತ್ತಿರಬೇಕಾದ ಎಲ್ಲಾ ಮಾಹಿತಿಗಳು

ನ್ಯೂಸ್ ನೇಷನ್ ಎಂಬ ಟಿವಿ ಚಾನೆಲ್‍ಗೆ ಪ್ರಧಾನಿ ನರೇಂದ್ರ ಮೋದಿಯವರು ನಿನ್ನೆ ನೀಡಿದ ಸಂದರ್ಶನವನ್ನು ಇನ್ನಾವುದಾದರೂ ಸಂದರ್ಶನದ ಜೊತೆ ಹೋಲಿಸಬೇಕೆಂದರೆ, ಅದನ್ನು 2018ರ ಜನವರಿ 22ರಂದು ಜೀ ಟಿವಿಗೆ ನೀಡಿದ ಸಂದರ್ಶನಕ್ಕೆ ಮಾತ್ರ ಹೋಲಿಸಬಹುದು. ಏಕೆಂದರೆ, ಅದರಲ್ಲಿ ಅವರ ಪ್ರಸಿದ್ಧ ‘ಪಕೋಡಾ ಹೇಳಿಕೆ’ ಹೊರಬಂದಿತ್ತು. ಇದೀಗ ನ್ಯೂಸ್ ನೇಷನ್‍ನಲ್ಲಿ ಅವರು ಪಾಕಿಸ್ತಾನದ ಮೇಲೆ ನಡೆಸಿದ ‘ವಾಯುದಾಳಿ’ಯ ಕುರಿತು ಮಾತನಾಡಿದ್ದಾರೆ. ಈ ಸುದ್ದಿ ಪ್ರಸಾರವಾದ ನಂತರ ಇಲ್ಲಿಯವರೆಗೂ ದೇಶಾದ್ಯಂತ ಸಾಮಾಜಿಕ ಜಾಲತಾಣಗಳಲ್ಲಿ ನಡೆಯುತ್ತಿರುವ ಚರ್ಚೆಗೆ ಎಣೆಯೇ ಇಲ್ಲ. ದೇಶದ ಬೇರೆ ಬೇರೆ ಭಾಗಗಳ ಹಲವು ಜನರ ಸೃಜನಶೀಲತೆಯ ಅಭಿವ್ಯಕ್ತಿಯಾಗಿಯೂ ಅದನ್ನು ನೋಡಬಹುದಾಗಿದೆ. ಅದರ ಸಂಪೂರ್ಣ ವಿವರವನ್ನು ಇಲ್ಲಿ ಕೊಡಲಾಗಿದೆ.

ಮೊದಲಿಗೆ, ಮೋದಿಯವರು ಹೇಳಿದ್ದೇನು ನೋಡೋಣ.

ಇದೇ ಸಂದರ್ಭದಲ್ಲಿ ಮೋದಿಯವರ ಬಯೋಗ್ಯಾಸ್‍ಗೆ ಸಂಬಂಧಿಸಿದ ಇನ್ನೊಂದು ಹೇಳಿಕೆಯನ್ನೂ ಹಲವರು ನೆನಪಿಸಿಕೊಂಡಿದ್ದಾರೆ.

ಉದಾಹರಣೆಗೆ ವಿಜಯ ಕರ್ನಾಟಕದ ಅಂಕಣಕಾರರಾಗಿದ್ದ ಚಿಂತಕ ಕೆ.ಪಿ.ಸುರೇಶ್‍ರವರು ಹಳೆಯ ವಿಡಿಯೋವನ್ನು ಹಂಚಿಕೊಂಡಿದ್ದಾರೆ.

https://m.facebook.com/story.php?story_fbid=1474653089338603&id=100003817783883

ಇದಕ್ಕೆ ಸಂಬಂಧಿಸಿದ ಹಳೆಯ ಕಾರ್ಟೂನ್ ಸಹಾ ಇಲ್ಲಿದೆ ನೋಡಿ

ಉದ್ಯಮಿ ರಾಜಾರಾಂ ತಲ್ಲೂರು ಅವರು ಮೋದಿಯವರ ಎಂಟೈಲ್ ಪೊಲಿಟಿಕಲ್ ಸೈನ್ಸ್ ಡಿಗ್ರಿಯನ್ನು ತಾವು ಪಡೆದುಕೊಂಡಿರದೇ ಇರುವುದಕ್ಕೆ ‘ಬೇಸರ ವ್ಯಕ್ತಪಡಿಸಿ’ ಈ ಪೋಸ್ಟ್ ಹಾಕಿದ್ದಾರೆ.

ಕಾಶ್ಮೀರದ ನ್ಯಾಷನಲ್ ಕಾನ್ಫರೆನ್ಸ್‍ನ ಮುಖಂಡ ಓಮರ್ ಅಬ್ದುಲ್ಲಾರು ಟ್ವೀಟಿಸಿದ್ದು ಹೀಗೆ.

ವಾಯುಪಡೆಯಲ್ಲಿದ್ದ ಅಧಿಕಾರಿ (ಈಗ ಮೋದಿಯವರ ಟೀಕಾಕಾರ) ರಾಜೀವ್ ತ್ಯಾಗಿಯವರಿಗೆ ತುಂಬಾ ಸಿಟ್ಟು ಬಂದಿದ್ದರೂ, ವೈಜ್ಞಾನಿಕವಾಗಿ ಮೋಡಗಳಿಗೂ ವಾಯುದಾಳಿಗೂ ಇರುವ ಸಂಬಂಧದ ಬಗ್ಗೆ ವಿವರಿಸಿದ್ದಾರೆ. ಅವರ ಪ್ರಕಾರ ಬೇರೆ ಬೇರೆ ಬಗೆಯ ಮೋಡಗಳಿರುತ್ತವೆ ಮತ್ತು ಆ ಮೋಡಗಳಿದ್ದಾಗ ಒಂದೋ ಅವು ಏನೂ ಸಮಸ್ಯೆ ಮಾಡುವುದಿಲ್ಲ, ಇಲ್ಲವೇ ಶತ್ರುಪಡೆಯ ರಾಡಾರ್‍ನ ಅಗತ್ಯವೇ ಇಲ್ಲದೇ ಅವೇ ಧ್ವಂಸಗೊಳ್ಳುತ್ತವೆ. ಇವೆಲ್ಲಾ ವಾಯುಪಡೆಗಳಿಗೆ ಗೊತ್ತಿರುವ ಸಂಗತಿ. ಆದರೆ, ಇದಕ್ಕೆ ವಿರುದ್ಧವಾದ ಸಂಗತಿಯನ್ನು ಒಬ್ಬ ಅನಕ್ಷರಸ್ಥನಿಂದ ಕೇಳಬೇಕಾದ ದುರ್ಗತಿ ವಾಯುಪಡೆಗೆ ಬಂದಿತಲ್ಲಾ ಎಂದು ಕಿಡಿಕಾರಿದ್ದಾರೆ.

https://m.facebook.com/story.php?story_fbid=10161734759650176&id=817450175

ವೈದ್ಯರಾದ ಡಾ.ಅಶೋಕ್ ಕೆ.ಆರ್ ಅವರು ಮೊದಲು ಇದು ಯಾರೋ ಸುಳ್ಳೇ ಸೃಷ್ಟಿ ಮಾಡಿರುವುದು ಎಂದುಕೊಂಡರಂತೆ. ನಂತರ ನಿಜ ಎಂದು ಗೊತ್ತಾಯಿತು ಎಂದಿದ್ದಾರೆ. ಅವರಿಗೆ ಪ್ರತಿಕ್ರಿಯಿಸಿರುವ ಡಾ.ಸುಶಿ ಕಾಡನಕುಪ್ಪೆ ಸಹಾ ಅದೇ ಅಭಿಪ್ರಾಯವನ್ನು ಕಮೆಂಟಿಸಿದ್ದಾರೆ.

ಹಾಗೆಯೇ ಇನ್ನೊಬ್ಬ ನೆಟ್ಟಿಗರು ಹೀಗೆ ಹೇಳುತ್ತಾರೆ.

‘ಇದರಲ್ಲಿ ತಮಾಶೆ ಏನೂ ಇಲ್ಲ. ನಮ್ಮ ಮೋದಿಜಿಗೆ ಮತ್ತೆ ಅಧಿಕಾರ ಸಿಕ್ಕರೆ ಸೂರ್ಯನಿಗೂ ಮನುಷ್ಯರನ್ನು ಕಳಿಸುತ್ತಾರೆ. ಮೊದಲ ಬಾರಿ ಸೂರ್ಯಯಾನಕ್ಕೆ ತನ್ನ ಶಿಷ್ಯಂದಿರಾದ ಸಂಬಿತ್ ಪಾತ್ರ ಮತ್ತು ತೇಜಸ್ವಿ ಸೂರ್ಯಗಳನ್ನು ಕಳಿಸಬಹುದು. ಪಬ್ಲಿಸಿಟಿ ಜಾಸ್ತಿ ಸಿಗೋದರಿಂದ ತಾನೇ ಹೋದರೂ ಹೋಗಬಹುದು.’

ಎಲ್ಲಕ್ಕಿಂತ ಸತೀಶ್ ಆಚಾರ್ಯ ಅವರ ಕಾರ್ಟೂನು ಮೋದಿಯವರನ್ನು ವ್ಯಂಗ್ಯ ಮಾಡುವುದರಲ್ಲಿ ಸಾಕಷ್ಟು ಮುಂದೆ ಹೋಗಿದೆ. ಇಸ್ರೋದ ವಿಜ್ಞಾನಿಗಳಿಗೆ ಸೂರ್ಯಯಾನಕ್ಕೆ ತಯಾರಿ ಮಾಡಲು ಸೂಚಿಸುವ ಮೋದಿ, ನಾವು ಸೂರ್ಯನಲ್ಲಿಗೆ ರಾತ್ರಿ ಹೋದರಾಯಿತು ಎನ್ನುತ್ತಿದ್ದಾರೆ.

ಇನ್ನು ಚಂದ್ರಯಾನವನ್ನೂ ನೆಟ್ಟಿಗರು ಬಿಟ್ಟಿಲ್ಲ. ಚಂದ್ರನ ಮೇಲೆ ಲ್ಯಾಂಡ್ ಆಗಲು ಕಡಿಮೆ ಜಾಗವಿದೆ ಎಂದು ಹೇಳುವ ವಿಜ್ಞಾನಿಗಳಿಗೆ, ‘ಹುಣ್ಣಿಮೆಯ ದಿನ ಹೋದರೆ ಚಂದ್ರ ದೊಡ್ಡದಾಗಿರುತ್ತಾನೆ’ ಎಂಬ ಸಲಹೆ ನೀಡುತ್ತಾರಂತೆ.

ಇದಲ್ಲದೇ ಮತ್ತೊಂದು ಪೋಸ್ಟ್ ಹೀಗೆ ಹೇಳುತ್ತದೆ.

‘ಮೋದಿಯವರು ವಿಮಾನಗಳಿಗೆ ರಿವರ್ಸ್ ಗೇರ್‍ನಲ್ಲಿ ಹೋಗಲು ಸೂಚಿಸಿದ್ದರಂತೆ. ಅದರಿಂದ ಪಾಕಿಸ್ತಾನಕ್ಕೆ ವಿಮಾನಗಳು ಬರುತ್ತಿವೆಯಾ, ಹೋಗುತ್ತಿವೆಯಾ ಎಂದು ಗೊತ್ತಾಗಲಿಲ್ಲ’

ಇನ್ನು ಮೋಡವೆಂದರೆ, ರಾಡಾರ್ ಎಂದರೆ ಮೋದಿಯವರು ಏನು ತಿಳಿದುಕೊಂಡಿರಬಹುದು ಎಂಬ ಕುರಿತೂ ಹಲವು ಕಾರ್ಟೂನ್‍ಗಳು ಬಂದಿವೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

2ಜಿ ತರಂಗಾಂತರ ತೀರ್ಪಿನ ಸ್ಪಷ್ಟನೆ ಕೋರಿದ್ದ ಕೇಂದ್ರದ ಅರ್ಜಿ ತಿರಸ್ಕರಿಸಿದ ಸುಪ್ರೀಂ ಕೋರ್ಟ್ ರಿಜಿಸ್ಟ್ರಿ

0
2ಜಿ ತರಂಗಾಂತರ ಹಂಚಿಕೆ ಪ್ರಕರಣಕ್ಕೆ ಸಂಬಂಧಪಟ್ಟಂತೆ 2012ರಲ್ಲಿ ನೀಡಿರುವ ತೀರ್ಪಿನ ಸ್ಪಷ್ಟನೆ ಕೋರಿ ಕೇಂದ್ರ ಸರ್ಕಾರ ಸಲ್ಲಿಸಿದ್ದ ಅರ್ಜಿಯನ್ನು ಸ್ವೀಕರಿಸಲು ಸುಪ್ರೀಂ ಕೋರ್ಟ್‌ನ ರಿಜಿಸ್ಟ್ರಾರ್ ನಿರಾಕರಿಸಿದ್ದಾರೆ. ಕೆಲ ಸಂದರ್ಭಗಳಲ್ಲಿ ಸಾರ್ವಜನಿಕ ಹರಾಜು ಹೊರತುಪಡಿಸಿ...