Homeಕರ್ನಾಟಕಚಾನೆಲ್ ಚಿತ್ರಾನ್ನ : ಮೌಢ್ಯ ತುಂಬುವ ಚಾನೆಲ್ಲುಗಳು ಮತ್ತು ವಾಸ್ತು ಪೀಡೆ ಚಂದ್ರಶೇಖರ್

ಚಾನೆಲ್ ಚಿತ್ರಾನ್ನ : ಮೌಢ್ಯ ತುಂಬುವ ಚಾನೆಲ್ಲುಗಳು ಮತ್ತು ವಾಸ್ತು ಪೀಡೆ ಚಂದ್ರಶೇಖರ್

ಬಾಗಲಕೋಟೆಯ ಬಸವೇಶ್ವರ ಇಂಜಿನಿಯರಿಂಗ್ ಕಾಲೇಜಿನಲ್ಲಿ ಸಿವಿಲ್ ಇಂಜಿನಿಯರಿಂಗ್ ಓದಿ ಕಂಟ್ರಾಕ್ಟರ್ ಆಗಿದ್ದ ಈ ಮನುಷ್ಯ, ಮನೆ ಕಟ್ಟಿಸುವಾಗ ಆ ಮೂಲೆ, ಈ ಮೂಲೆ ಎಂದು ಜನ ವಿಚಾರಿಸುವುದನ್ನು ನೋಡಿ, ಅದನ್ನೇ ಒಂದು ದಂಧೆ ಮಾಡಿಕೊಂಡಿದ್ದಾನೆ.

- Advertisement -
- Advertisement -

| ಪಿ.ಕೆ ಮಲ್ಲನಗೌಡರ್ |

ಹಳೆ ವಂಚನೆ, ಹೊಸ ವೇಷ!

‘ಸರಳ ವಾಸ್ತು’ವಿನ ಹೆಸರಲ್ಲಿ ಜನರನ್ನು ಮೌಢ್ಯಕ್ಕೆ ತಳ್ಳಿ, ಮನೆಗಳನ್ನೆಲ್ಲ ಮೂರಾಬಟ್ಟೆ ಮಾಡಿದ ವಾಸ್ತು ವಂಚಕ ಚಂದ್ರಶೇಖರ್ ‘ಗುರೂಜಿ’ ಈಗ ಹೊಸ ವೇಷ ತೊಟ್ಟು ಬಂದಿದ್ದಾನೆ. ಈಗಾತ ‘ಮಾನವಾಭಿವೃದ್ಧಿ ಗುರು’ ಅಂತೆ. ವೇಷವಷ್ಟೇ ಬದಲು, ಮತ್ತದೇ ವಂಚನೆ! ಈ ಸಲ ಸುವರ್ಣ ನ್ಯೂಸ್ ಎಂಬ ರಾಜೀವ್ ಚಂದ್ರಶೇಖರನ ಚಾನೆಲ್ಲು ಈ ವಂಚಕನ ಸಂಸ್ಥೆಯ ಪಾರ್ಟನರ್ ಎಂಬಂತೆ ಬೊಗಳೆ ಬಿಡುತ್ತ ಜನರನ್ನು ಬೋಳಿಸುತ್ತಲಿದೆ.

ಇವತ್ತು ರವಿವಾರ ಮುಂಜ್‍ಮುಂಜಾನೆ ಸುವರ್ಣ ನ್ಯೂಸ್ ಚಾನೆಲ್ಲಿನಲ್ಲಿ ಭೋಂಗು ಬಿಡುತ್ತಿದ್ದ ಸರಳ ವಾಸ್ತುವಿನ ಚಂದ್ರಶೇಖರ್ ಎಂಬ ಹೈಟೆಕ್ ವಂಚಕನನ್ನು ಕಂಡಾಗ ಆಶ್ಚರ್ಯವೇನೂ ಆಗಲಿಲ್ಲ. ಆದರೆ ಕೊಂಚ ಗಾಬರಿಯಾಗಿದ್ದು ಈತ ಹುಡುಕಿಕೊಂಡಿರುವ ಹೊಸ ವ್ಯಾಪಾರೀ ಮಾರ್ಗವನ್ನು ನೋಡಿದಾಗ….

ಈ ಕಾರ್ಯಕ್ರಮದ ಹೆಸರೇ ‘ಮಾನವಾಭಿವೃದ್ಧಿ ಗುರು’! ವಾವ್, ಹುಮನ್ ಡೆವೆಲಪ್ ಮೆಂಟ್ ಗುರು! ಕಳ್ಳ ನನ್ಮಗ ಅಂತ ಪ್ರೊಗ್ರಾಂ ನೋಡಿದರೆ, ಚಾನೆಲ್ಲಿನ ನಿರೂಪಕಿ ಮತ್ತು ಈ ವಾಸ್ತು ವಿಷ ಚಂದ್ರಶೇಖರ್ ಇಬ್ಬರೂ ಸೇರಿ ಜನರನ್ನು ಬಣ್ಣದ ಮಾತುಗಳಿಂದ ಬುಟ್ಟಿಗೆ ಹಾಕಿಕೊಳ್ಳುತ್ತಿದ್ದರು.

3 ಸ್ಟೆಪ್ಪು, 180 ದಿನ, 22 ಸಾವಿರ ಮುಂಡಾಮೋಚಿಂಗ್!

19 ವರ್ಷಗಳ ಕಾಲ ವಾಸ್ತು, ಸರಳ ವಾಸ್ತು ಹೆಸರಲ್ಲಿ ಜನರ ಮನೆ, ಕಚೇರಿಗಳಿಗೆ ಗತಿ ಕಾಣಿಸಿರುವ, ಅವರ ದೌರ್ಬಲ್ಯಗಳನ್ನು ಬಳಸಿಕೊಂಡು ಅವರಿಂದ ವಸೂಲಿ ಮಾಡಿರುವ ಚಂದ್ರಶೇಖರ್ ಈಗ ಹೊಸ ದಾರಿ ಕಂಡುಹಿಡಿದಿದ್ದಾನೆ. ಅದರ ಹೆಸರು ಮಾನವಾಭಿವೃದ್ಧಿ! ಕೇವಲ ಮೂರೇ ಹಂತಗಳಲ್ಲಿ ಈತ ರೈತರ ಸಮಸ್ಯೆಗಳನ್ನು, ನೌಕರರ ಆರ್ಥಿಕ ಸಂಕಟಗಳನ್ನು ಅಷ್ಟೇ ಅಲ್ಲ ಕ್ಯಾನ್ಸರ್ ಸೇರಿದಂತೆ ಇತರೆಲ್ಲ ರೋಗಿಗಳ ಆರೋಗ್ಯದ ಸಮಸ್ಯೆಗಳನ್ನು ಬಗೆಹರಿಸುತ್ತಾನಂತೆ!
ಸ್ಟೆಪ್ 1: ಈ ‘ಗುರೂಜಿ’ಯನ್ನು ಸಂಪರ್ಕಿಸುವುದು.
ಸ್ಟೆಪ್ 2: ಈತ ಮತ್ತು ಈತನ ತಂಡ ಹೇಳಿದ ‘ಮಾರ್ಗ’ದಲ್ಲಿ ನಡೆಯುವುದು.
ಸ್ಟೆಪ್ 3: 7ರಿಂದ 180 ದಿನಗಳಲ್ಲಿ ಎಲ್ಲ ಸಮಸ್ಯೆ ಫಿನಿಷ್! ಅಲ್ಲಿಗೆ ಮಾನವಾಭಿವೃದ್ಧಿ ಸಕ್ಸಸ್!

ವಾಸ್ತು ವಸೂಲಿಯ ದರಪಟ್ಟಿ, ಬಲು ತುಟ್ಟಿ!

ಮನೆಯ ಸಮಸ್ಯೆ ಇದ್ದರೆ 14 ಸಾವಿರ, ಸಣ್ಣಪುಟ್ಟ ವ್ಯಾಪಾರದ ಸಮಸ್ಯೆ ಇದ್ದರೆ 22 ಸಾವಿರ, ಮನೆಯ ನಕ್ಷೆಯನ್ನೇ ರೆಡಿ ಮಾಡಿ ಪರಿಹಾರ ಪಡೆಯಲು 22 ಸಾವಿರ ರೂಪಾಯಿ! ವೈಯಾರದಿಂದ ನಿರೂಪಕಿ ಹೇಳುತ್ತಾಳೆ: ಬಡವರಿಗಾಗಿ ಮಾನವಾಭಿವೃದ್ಧಿ ಅಂತೆ! ಅಂದರೆ, ಎರಡು ಕಂತುಗಳಲ್ಲಿ ಪೇ ಮಾಡಬಹುದು ಅಂತೆ! ದರಪಟ್ಟಿಯನ್ನೇ ಹಾಗೆ ವಿನ್ಯಾಸ ಮಾಡಿಯೂ ಬಿಟ್ಟಿದ್ದಾರೆ ಖದೀಮರು.

ಪ್ರೊಗ್ರಾಂ ನಡುನಡುವೆ ಸಮಸ್ಯೆಗಳಲ್ಲಿರುವ ಜನರ ಫೋನ್ ಕಾಲ್‍ಗಳು. ಅವರು ಸಮಸ್ಯೆ ಹೇಳುವ ಮೊದಲೇ, ಈಗ ನೀವು ನನನ್ನು ಸಂಪರ್ಕಿಸಿದಿರಲ್ಲ, ನನ್ನ ಎನರ್ಜಿ ನಿಮಗೆ ಪಾಸ್ ಆಗಿತು, ನಮ್ಮ ಕಚೇರಿಯವರು ನಿಮ್ಮನ್ನು ಸಂಪರ್ಕಿಸಿ ‘ಎಲ್ಲ’ ಮಾಡುತ್ತಾರೆ, ಡೋಂಟ್ ವರಿ ಎನ್ನುತ್ತಾನೆ ಚಂದ್ರ!

ಜನರಿಗೆ ಈ ಮಾರ್ಗ ಗೊತ್ತಿಲ್ಲದ್ದರಿಂದ ಅದನ್ನು ಕಲಿಸಲು ದೇವರೇ ಈ ಕಳ್ ನನ್ಮಗನಿಗೆ ಆದೇಶ ನೀಡಿದ್ದಾನಂತೆ! ಪಾಪ, ಸಣ್ಣಪುಟ್ಟ ವ್ಯಾಪಾರದಲ್ಲಿ ನಷ್ಟ ಅನುಭವಿಸಿದವರು, ಮದುವೆ ಸಮಸ್ಯೆ ಆಗಿರುವ ಹೆಣ್ಣು ಮಕ್ಕಳು, ಗಂಭೀರ ಕಾಯಿಲೆ ಇರುವವರ ಸಂಬಂಧಿಕರು ಫೋನ್ ಮಾಡಿ ಈ ಮುಠ್ಠಾಳರ ಬಲೆಗೆ ಬೀಳುತ್ತಿದ್ದರು.

ಹೀಗೆ ಇಡೀ ಜಗತ್ತಿನ ಮಾನವರ ಅಭಿವೃದ್ಧಿ ಮಾಡುವುದೇ ಚಂದ್ರನ ವಂಚಕ ಟೀಮಿನ ಗುರಿಯಂತೆ! ಬಾಗಲಕೋಟೆಯ ಬಸವೇಶ್ವರ ಇಂಜಿನಿಯರಿಂಗ್ ಕಾಲೇಜಿನಲ್ಲಿ ಸಿವಿಲ್ ಇಂಜಿನಿಯರಿಂಗ್ ಓದಿ ಕಂಟ್ರಾಕ್ಟರ್ ಆಗಿದ್ದ ಈ ಮನುಷ್ಯ, ಮನೆ ಕಟ್ಟಿಸುವಾಗ ಆ ಮೂಲೆ, ಈ ಮೂಲೆ ಎಂದು ಜನ ವಿಚಾರಿಸುವುದನ್ನು ನೋಡಿ, ಅದನ್ನೇ ಒಂದು ದಂಧೆ ಮಾಡಿಕೊಂಡಿದ್ದಾನೆ. ಇಷ್ಟು ದಿನ ಸರಳ ವಾಸ್ತು ಹೆಸರಲ್ಲಿ ಮೋಸ ಮಾಡಿದ್ದಾಯ್ತು, ಈಗ ಆ ಹಳೆ ಮೌಢ್ಯದ ಮದ್ಯವನ್ನು ‘ಮಾನವಾಭಿವೃದ್ಧಿ’ ಎಂಬ ಹೊಸ ಸೀಶೆಯಲ್ಲಿ ತುಂಬಿ ಮಾರ್ಕೆಟಿಂಗ್ ಮಾಡುತ್ತಿದ್ದಾನೆ!

ಈತ ಜನರಿಂದ ಯಾವ ಪರಿ ಕಿತ್ತಿದ್ದಾನೆಂದರೆ, ‘ಸರಳ ಜೀವನ’ ಎಂಬ ಚಾನೆಲ್ಲನ್ನೂ ಆರಂಭಿಸಿ, ಅದರ ಮೂಲಕವೂ ತನ್ನ ದಂಧೆಯನ್ನು ಪ್ರಮೋಟ್ ಮಾಡುತ್ತಾನೆ. ಜೊತೆಗೆ ರಾಜೀವ ಚಂದ್ರಶೇಖರನ ಸುವರ್ಣ ನ್ಯೂಸ್‍ನಂತಹ ಚಾನೆಲ್ಲುಗಳೂ ಈ ಜ್ಯೋತಿಷಿ, ವಾಸ್ತು ಪಂಡಿತರೊಂದಿಗೆ ಟೈಅಪ್ ಆಗಿವೆ!

ಇದನ್ನು ಓದಿ: ಮಾಧ್ಯಮ ಭಯೋತ್ಪಾನೆ

ಪಾಸಿಟಿವ್ ಎನರ್ಜಿ, ಕಾಸ್ಮೆಟಿಕ್ ಎನರ್ಜಿ ಅಂತೆಲ್ಲ ಮರುಳು ಮಾಡುವುದು ಇವರ ಟೆಕ್ನಿಕ್. ಇದಕ್ಕೆ ಮಾರು ಹೋಗುತ್ತಿರುವವರು ನಗರವಾಸಿ ವಿದ್ಯಾವಂತ ಜನರೇ ಎಂಬುದು ವಿಪರ್ಯಾಸ! ಮೋಡದ ಮರೆಯಲ್ಲಿ ರೇಡಾರ್‍ನಿಂದ ಬಚಾವ್ ಆಗಬಹುದು ಎನ್ನುವ ಪ್ರಧಾನಮಂತ್ರಿಯ ಮಾತನ್ನೂ ನಂಬುವ ಮೂಢ ಭಕ್ತರಲ್ಲಿ ಅದೇ ‘ಸುಶಿಕ್ಷಿತ’ರೇ ಜಾಸ್ತಿ ಇದ್ದಾರಲ್ಲ?

ನಮ್ಮ ಸಮಸ್ಯೆಗಳನ್ನು ಯಾವ ವಾಸ್ತುವೂ ಪರಿಹಾರ ಮಾಡದು. ಅದಕ್ಕೆ ನಾವೇ ಮಾರ್ಗ ಹುಡುಕಿಕೊಳ್ಳಬೇಕು. ಸತತ ಪ್ರಯತ್ನ ಮತ್ತು ಕಠಿಣ ಪರಿಶ್ರಮ ಇದಕ್ಕೆ ಅಗತ್ಯ. ನಿಮಗೆ ಪರಿಹರಿಸಲು ಸಾಧ್ಯವಾಗದಿದ್ದಲ್ಲಿ ಅದಕ್ಕೆ ಸಂಬಂಧಿಸಿದ ಜ್ಞಾನ ಇರುವವರ ಬಳಿ ಸಲಹೆ ಪಡೆದೋ, ಚಿಕಿತ್ಸೆ ಪಡೆದೋ ಪರಿಹಾರ ಕಂಡುಕೊಳ್ಳಬೇಕು. ಹಾಗಾಗಿ ಈ ಮೂಢ ಮಾಧ್ಯಮಗಳು ಬಿತ್ತರಿಸುವ ಇಂತಹ ಅವೈಜ್ಞಾನಿಕ ಪ್ರೊಗ್ರಾಂಗಳನ್ನು ನಂಬಬೇಡಿ. ಇದರಿಂದ ನಿಮ್ಮ ಸಮಸ್ಯೆ ಕಡಿಮೆಯಾಗುವ ಬದಲು ಹೆಚ್ಚಾಗುವುದರಲ್ಲಿ ಸಂದೇಹವೆ ಇಲ್ಲ. ಚಂದ್ರಶೇಖರರಂತಹ ವಂಚಕರಿಂದ ದೂರವಿರಿ. ಇಲ್ಲದಿದ್ದಲ್ಲಿ ನಿಮ್ಮ ಆರ್ಥಿಕ ಸಮಸ್ಯೆ ಮತ್ತು ಮಾನಸಿಕ ಮೌಢ್ಯ ಹೆಚ್ಚಾಗುತ್ತವೆ ಅಷ್ಟೇ!

(ಮೇಲಿನ ಬರಹದಲ್ಲಿನ ಅಭಿಪ್ರಾಯಗಳು ಲೇಖಕರದ್ದಾಗಿರುತ್ತವೆ. ಅತಿಥಿ ಲೇಖಕರ ಅನಿಸಿಕೆಗಳು ನಾನುಗೌರಿ.ಕಾಂ ವೆಬ್‌ಪತ್ರಿಕೆಯ ಸಂಪಾದಕೀಯ ತಂಡದ ಅಭಿಪ್ರಾಯಗಳೇ ಆಗಿರಬೇಕೆಂದೇನಿಲ್ಲ.)

ಚಾನೆಲ್ ಚಿತ್ರಾನ್ನ ಕಾಶಿಯ ಕೊತ್ವಾಲ, ಪ್ರತ್ಯಕ್ಷರಾದ ಸಾಧುಗಳು, ಖಬರ್ ದಾರ್ ಮೆಸೇಜ್

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ಸಾವರ್ಕರ್ ದೇವರನ್ನು, ಧಾರ್ಮಿಕ ನಂಬಿಕೆಗಳನ್ನು ಪ್ರಶ್ನಿಸಿದ್ದರು’: ಪುಣೆ ನ್ಯಾಯಾಲಯದಲ್ಲಿ ಮೊಮ್ಮಗ ಸತ್ಯಕಿ ಸಾವರ್ಕರ್ ಒಪ್ಪಿಗೆ

ಪುಣೆ: ಕಾಂಗ್ರೆಸ್ ನಾಯಕ ಹಾಗೂ ಸಂಸತ್ತಿನ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯ ವಿಚಾರಣೆಯು ಅತ್ಯಂತ ಕುತೂಹಲಕಾರಿ ಮತ್ತು ರಾಜಕೀಯ-ಸೈದ್ಧಾಂತಿಕ ತಿರುವನ್ನು ಪಡೆದುಕೊಂಡಿದೆ. ವಿನಾಯಕ ದಾಮೋದರ್...

ಮಾಜಿ ಸಚಿವ ಧರ್ಮೇಂದ್ರ ಪ್ರಧಾನ್ ಮಗಳ ಫೋನ್ ಬಿಲ್ ವಿವಾದ: ₹68 ಸಾವಿರ ಬಿಲ್-ಪೇ ಆಗಿದ್ದು ಸರ್ಕಾರಿ ಹಣದಲ್ಲಾ?

ಮಾಜಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ಪುತ್ರಿ ನೈಮಿಷಾ ಪ್ರಧಾನ್ ಅವರು ಮತ್ತೊಮ್ಮೆ ವಿವಾದದ ಕೇಂದ್ರಬಿಂದುವಾಗಿದ್ದಾರೆ. ವಾರಗಳ ಹಿಂದೆ ನೀಟ್ ಪರೀಕ್ಷೆಯ ಪತ್ರಿಕೆ ಸೋರಿಕೆ ಖಂಡಿಸಿ ಕಾಕ್ರೋಚ್ ಜನತಾ ಪಾರ್ಟಿ...

ಇರಾನ್ ವಸತಿ ಕಟ್ಟಡದ ಮೇಲೆ ಅಮೆರಿಕಾ ದಾಳಿ: ಎರಡು ವರ್ಷದ ಮಗು ಸೇರಿ ಒಂದೇ ಕುಟುಂಬದ ಮೂವರ ಸಾವು

ಮಧ್ಯಪ್ರಾಚ್ಯದಲ್ಲಿ ಅಮೆರಿಕ ತನ್ನ ಸಾಮ್ರಾಜ್ಯಶಾಹಿ ಆಧಿಪತ್ಯ ಸ್ಥಾಪನೆಗಾಗಿ ನಡೆಸುತ್ತಿರುವ ಯುದ್ಧಕೋರ ನೀತಿ ಮತ್ತೊಮ್ಮೆ ನಿರಪರಾಧಿ ಸಾರ್ವಜನಿಕರ ರಕ್ತ ಹರಿಸಿದೆ. ಇರಾನ್ ಮೇಲಿನ ಅಮೆರಿಕ ಪಡೆಗಳ ಸರಣಿ ಮತ್ತು ಭೀಕರ ಬಾಂಬ್ ದಾಳಿಗಳು ಕೇವಲ...

SIR: ASDDO ಪಟ್ಟಿಯಲ್ಲಿ ಬೆಂಗಳೂರಿಗೆ ಪ್ರಥಮ ಸ್ಥಾನ, ರಾಜ್ಯದಲ್ಲಿ 2 ಕೋಟಿ ಮತದಾರರ ಹೆಸರು ರದ್ದಾಗುವ ಬೀತಿ

ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ರಾಜಧಾನಿ ಬೆಂಗಳೂರು ಅತ್ಯಂತ ಪ್ರಮುಖ ಹಾಗೂ ಕಳವಳಕಾರಿ ಕೇಂದ್ರವಾಗಿ ಹೊರಹೊಮ್ಮಿದೆ. ರಾಜ್ಯದಲ್ಲಿರುವ ಒಟ್ಟು 5.54 ಕೋಟಿ ನೋಂದಾಯಿತ ಮತದಾರರ ಪೈಕಿ...

ಉಮರ್ ಖಾಲಿದ್ ಜಾಮೀನು ಅರ್ಜಿ; ಪೊಲೀಸರ ನಿಲುವು ಕೇಳಿದ ದೆಹಲಿ ಹೈಕೋರ್ಟ್

ಫೆಬ್ರವರಿ 2020 ರಲ್ಲಿ ಈಶಾನ್ಯ ದೆಹಲಿಯಲ್ಲಿ ನಡೆದ ಗಲಭೆಯ ಹಿಂದಿನ "ದೊಡ್ಡ ಪಿತೂರಿ"ಗೆ ಸಂಬಂಧಿಸಿದಂತೆ ಭಯೋತ್ಪಾದನಾ ವಿರೋಧಿ ಕಾನೂನು ಯುಎಪಿಎ ಅಡಿಯಲ್ಲಿ ಪ್ರಕರಣದಲ್ಲಿ ಜಾಮೀನು ಕೋರಿ ಉಮರ್ ಖಾಲಿದ್ ಸಲ್ಲಿಸಿದ ಅರ್ಜಿಯ ಕುರಿತು...

ಮುಂಬೈ: ‘ಶಾಲಾ ಜಿಹಾದ್’ ಎಂಬ ಬಿಜೆಪಿ ನಾಯಕನ ಕೋಮುದ್ವೇಷಕ್ಕೆ ಶಾಲೆಗೆ ನುಗ್ಗಿದ ಬುಲ್ಡೋಜರ್: ಬಿಎಂಸಿಗೆ ಚಾಟಿ ಬೀಸಿದ ಬಾಂಬೆ ಹೈಕೋರ್ಟ್

ಬಿಜೆಪಿ ನಾಯಕ ಕಿರೀಟ್ ಸೋಮಯ್ಯ ಅವರ “ಶಾಲಾ ಜಿಹಾದ್” ಎಂಬ ವಿಷಕಾರಿ ಹೇಳಿಕೆಯ ನಂತರ ಮುಂಬೈನ ಗೋವಂಡಿಯಲ್ಲಿ ಬಡ ಮುಸ್ಲಿಂ ಮಕ್ಕಳ ಶಿಕ್ಷಣದ ಆಶಾಕಿರಣವಾಗಿದ್ದ ತೆಹ್ಜೀಬ್ ಇಸ್ಲಾಮಿಕ್ ಇಂಗ್ಲಿಷ್ ಶಾಲೆಯನ್ನು ಬೃಹನ್ಮುಂಬೈ ಮುನ್ಸಿಪಲ್...

ಹಾಕಿ ತಂಡಕ್ಕೆ ಕೇಸರಿ ಜರ್ಸಿ: ‘ನಮ್ಮ ಗುರುತೇ ನೀಲಿ, ಕೇಸರಿ ಬಣ್ಣದ ತರ್ಕವೇನು?’: ಮಾಜಿ ಹಾಕಿ ಪಟು ಆಕ್ರೋಶ: ಬಿಜೆಪಿ ನಡೆಗೆ ವಿಪಕ್ಷಗಳ ಟೀಕೆ

ಭಾರತೀಯ ಕ್ರೀಡಾರಂಗದ ಹೆಮ್ಮೆಯ ಸಾಂಪ್ರದಾಯಿಕ 'ನೀಲಿ' (ಬ್ಲೂ) ಬಣ್ಣವನ್ನು ಕಳಚಿ, ಹಾಕಿ ತಂಡಕ್ಕೆ ಬಲವಂತವಾಗಿ ಕೇಸರಿ ಬಣ್ಣದ ಜೆರ್ಸಿ ತೊಡಿಸಲು ಹೊರಟಿರುವುದು ಇದೀಗ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಮುಂಬರುವ ಎಫ್‌ಐಎಚ್ (FIH) ವಿಶ್ವಕಪ್‌ಗಾಗಿ...

ತಮಿಳುನಾಡು: ಶಾಲಾ ಮಕ್ಕಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡಲು ಚಿಂತನೆ

ತಮಿಳುನಾಡಿನ ಸರ್ಕಾರಿ ಶಾಲೆಗಳ ಮಧ್ಯಾಹ್ನದ ಬಿಸಿಊಟದ ಯೋಜನೆಯಡಿಯಲ್ಲಿ ವಿದ್ಯಾರ್ಥಿಗಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡುವ ಪ್ರಸ್ತಾವನೆಯನ್ನು ತಮಿಳುನಾಡು ಸರ್ಕಾರ ಪರಿಶೀಲಿಸುತ್ತಿದ್ದು, ಶಾಲಾ ಶಿಕ್ಷಣ ಸಚಿವ ರಾಜ್‌ಮೋಹನ್ ಅವರು ಈ ಕುರಿತು ಮುಖ್ಯಮಂತ್ರಿ ಸಿ....

ಪ್ರಶ್ನೆಪತ್ರಿಕೆ ಸೋರಿಕೆ ವಿರೋಧಿ ಮಸೂದೆಯಲ್ಲಿ ಸುಧಾರಣೆಗಳಿಲ್ಲ, ರಾಜಕೀಯ ಮಾತ್ರ: ಕೇಂದ್ರದ ವಿರುದ್ಧ ಖರ್ಗೆ ವಾಗ್ದಾಳಿ

ಪಬ್ಲಿಕ್ ಪರೀಕ್ಷೆಗಳ (ಅನ್ಯಾಯಯುತ ವಿಧಾನಗಳ ತಡೆಗಟ್ಟುವಿಕೆ) ತಿದ್ದುಪಡಿ ಮಸೂದೆ 2026 ರ ಚರ್ಚೆಯ ಸಂದರ್ಭದಲ್ಲಿ ಮಾತನಾಡಿದ ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಕೇಂದ್ರ ಸರ್ಕಾರದ ಮೇಲೆ ತೀವ್ರ ವಾಗ್ದಾಳಿ ನಡೆಸಿದರು....

ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಕೆ ಆರೋಪ; ಗೃಹ ಸಚಿವ ಅಮಿತ್‌ ಶಾ ಮೌನ ಪ್ರಶ್ನಿಸಿದ ಕಪಿಲ್ ಸಿಬಲ್

ಜುಲೈ 20 ರಂದು ದೆಹಲಿಯಲ್ಲಿ ನಡೆದ ಸಂಶತ್ ಚಲೋ ಪ್ರತಿಭಟನಾ ಮೆರವಣಿಗೆಯಲ್ಲಿ ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಸಲಾಗಿದೆ ಎಂಬ ಆರೋಪದ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಮೌನವನ್ನು...