Homeಕರ್ನಾಟಕಚಾನೆಲ್ ಚಿತ್ರಾನ್ನ : ಮೌಢ್ಯ ತುಂಬುವ ಚಾನೆಲ್ಲುಗಳು ಮತ್ತು ವಾಸ್ತು ಪೀಡೆ ಚಂದ್ರಶೇಖರ್

ಚಾನೆಲ್ ಚಿತ್ರಾನ್ನ : ಮೌಢ್ಯ ತುಂಬುವ ಚಾನೆಲ್ಲುಗಳು ಮತ್ತು ವಾಸ್ತು ಪೀಡೆ ಚಂದ್ರಶೇಖರ್

ಬಾಗಲಕೋಟೆಯ ಬಸವೇಶ್ವರ ಇಂಜಿನಿಯರಿಂಗ್ ಕಾಲೇಜಿನಲ್ಲಿ ಸಿವಿಲ್ ಇಂಜಿನಿಯರಿಂಗ್ ಓದಿ ಕಂಟ್ರಾಕ್ಟರ್ ಆಗಿದ್ದ ಈ ಮನುಷ್ಯ, ಮನೆ ಕಟ್ಟಿಸುವಾಗ ಆ ಮೂಲೆ, ಈ ಮೂಲೆ ಎಂದು ಜನ ವಿಚಾರಿಸುವುದನ್ನು ನೋಡಿ, ಅದನ್ನೇ ಒಂದು ದಂಧೆ ಮಾಡಿಕೊಂಡಿದ್ದಾನೆ.

- Advertisement -
- Advertisement -

| ಪಿ.ಕೆ ಮಲ್ಲನಗೌಡರ್ |

ಹಳೆ ವಂಚನೆ, ಹೊಸ ವೇಷ!

‘ಸರಳ ವಾಸ್ತು’ವಿನ ಹೆಸರಲ್ಲಿ ಜನರನ್ನು ಮೌಢ್ಯಕ್ಕೆ ತಳ್ಳಿ, ಮನೆಗಳನ್ನೆಲ್ಲ ಮೂರಾಬಟ್ಟೆ ಮಾಡಿದ ವಾಸ್ತು ವಂಚಕ ಚಂದ್ರಶೇಖರ್ ‘ಗುರೂಜಿ’ ಈಗ ಹೊಸ ವೇಷ ತೊಟ್ಟು ಬಂದಿದ್ದಾನೆ. ಈಗಾತ ‘ಮಾನವಾಭಿವೃದ್ಧಿ ಗುರು’ ಅಂತೆ. ವೇಷವಷ್ಟೇ ಬದಲು, ಮತ್ತದೇ ವಂಚನೆ! ಈ ಸಲ ಸುವರ್ಣ ನ್ಯೂಸ್ ಎಂಬ ರಾಜೀವ್ ಚಂದ್ರಶೇಖರನ ಚಾನೆಲ್ಲು ಈ ವಂಚಕನ ಸಂಸ್ಥೆಯ ಪಾರ್ಟನರ್ ಎಂಬಂತೆ ಬೊಗಳೆ ಬಿಡುತ್ತ ಜನರನ್ನು ಬೋಳಿಸುತ್ತಲಿದೆ.

ಇವತ್ತು ರವಿವಾರ ಮುಂಜ್‍ಮುಂಜಾನೆ ಸುವರ್ಣ ನ್ಯೂಸ್ ಚಾನೆಲ್ಲಿನಲ್ಲಿ ಭೋಂಗು ಬಿಡುತ್ತಿದ್ದ ಸರಳ ವಾಸ್ತುವಿನ ಚಂದ್ರಶೇಖರ್ ಎಂಬ ಹೈಟೆಕ್ ವಂಚಕನನ್ನು ಕಂಡಾಗ ಆಶ್ಚರ್ಯವೇನೂ ಆಗಲಿಲ್ಲ. ಆದರೆ ಕೊಂಚ ಗಾಬರಿಯಾಗಿದ್ದು ಈತ ಹುಡುಕಿಕೊಂಡಿರುವ ಹೊಸ ವ್ಯಾಪಾರೀ ಮಾರ್ಗವನ್ನು ನೋಡಿದಾಗ….

ಈ ಕಾರ್ಯಕ್ರಮದ ಹೆಸರೇ ‘ಮಾನವಾಭಿವೃದ್ಧಿ ಗುರು’! ವಾವ್, ಹುಮನ್ ಡೆವೆಲಪ್ ಮೆಂಟ್ ಗುರು! ಕಳ್ಳ ನನ್ಮಗ ಅಂತ ಪ್ರೊಗ್ರಾಂ ನೋಡಿದರೆ, ಚಾನೆಲ್ಲಿನ ನಿರೂಪಕಿ ಮತ್ತು ಈ ವಾಸ್ತು ವಿಷ ಚಂದ್ರಶೇಖರ್ ಇಬ್ಬರೂ ಸೇರಿ ಜನರನ್ನು ಬಣ್ಣದ ಮಾತುಗಳಿಂದ ಬುಟ್ಟಿಗೆ ಹಾಕಿಕೊಳ್ಳುತ್ತಿದ್ದರು.

3 ಸ್ಟೆಪ್ಪು, 180 ದಿನ, 22 ಸಾವಿರ ಮುಂಡಾಮೋಚಿಂಗ್!

19 ವರ್ಷಗಳ ಕಾಲ ವಾಸ್ತು, ಸರಳ ವಾಸ್ತು ಹೆಸರಲ್ಲಿ ಜನರ ಮನೆ, ಕಚೇರಿಗಳಿಗೆ ಗತಿ ಕಾಣಿಸಿರುವ, ಅವರ ದೌರ್ಬಲ್ಯಗಳನ್ನು ಬಳಸಿಕೊಂಡು ಅವರಿಂದ ವಸೂಲಿ ಮಾಡಿರುವ ಚಂದ್ರಶೇಖರ್ ಈಗ ಹೊಸ ದಾರಿ ಕಂಡುಹಿಡಿದಿದ್ದಾನೆ. ಅದರ ಹೆಸರು ಮಾನವಾಭಿವೃದ್ಧಿ! ಕೇವಲ ಮೂರೇ ಹಂತಗಳಲ್ಲಿ ಈತ ರೈತರ ಸಮಸ್ಯೆಗಳನ್ನು, ನೌಕರರ ಆರ್ಥಿಕ ಸಂಕಟಗಳನ್ನು ಅಷ್ಟೇ ಅಲ್ಲ ಕ್ಯಾನ್ಸರ್ ಸೇರಿದಂತೆ ಇತರೆಲ್ಲ ರೋಗಿಗಳ ಆರೋಗ್ಯದ ಸಮಸ್ಯೆಗಳನ್ನು ಬಗೆಹರಿಸುತ್ತಾನಂತೆ!
ಸ್ಟೆಪ್ 1: ಈ ‘ಗುರೂಜಿ’ಯನ್ನು ಸಂಪರ್ಕಿಸುವುದು.
ಸ್ಟೆಪ್ 2: ಈತ ಮತ್ತು ಈತನ ತಂಡ ಹೇಳಿದ ‘ಮಾರ್ಗ’ದಲ್ಲಿ ನಡೆಯುವುದು.
ಸ್ಟೆಪ್ 3: 7ರಿಂದ 180 ದಿನಗಳಲ್ಲಿ ಎಲ್ಲ ಸಮಸ್ಯೆ ಫಿನಿಷ್! ಅಲ್ಲಿಗೆ ಮಾನವಾಭಿವೃದ್ಧಿ ಸಕ್ಸಸ್!

ವಾಸ್ತು ವಸೂಲಿಯ ದರಪಟ್ಟಿ, ಬಲು ತುಟ್ಟಿ!

ಮನೆಯ ಸಮಸ್ಯೆ ಇದ್ದರೆ 14 ಸಾವಿರ, ಸಣ್ಣಪುಟ್ಟ ವ್ಯಾಪಾರದ ಸಮಸ್ಯೆ ಇದ್ದರೆ 22 ಸಾವಿರ, ಮನೆಯ ನಕ್ಷೆಯನ್ನೇ ರೆಡಿ ಮಾಡಿ ಪರಿಹಾರ ಪಡೆಯಲು 22 ಸಾವಿರ ರೂಪಾಯಿ! ವೈಯಾರದಿಂದ ನಿರೂಪಕಿ ಹೇಳುತ್ತಾಳೆ: ಬಡವರಿಗಾಗಿ ಮಾನವಾಭಿವೃದ್ಧಿ ಅಂತೆ! ಅಂದರೆ, ಎರಡು ಕಂತುಗಳಲ್ಲಿ ಪೇ ಮಾಡಬಹುದು ಅಂತೆ! ದರಪಟ್ಟಿಯನ್ನೇ ಹಾಗೆ ವಿನ್ಯಾಸ ಮಾಡಿಯೂ ಬಿಟ್ಟಿದ್ದಾರೆ ಖದೀಮರು.

ಪ್ರೊಗ್ರಾಂ ನಡುನಡುವೆ ಸಮಸ್ಯೆಗಳಲ್ಲಿರುವ ಜನರ ಫೋನ್ ಕಾಲ್‍ಗಳು. ಅವರು ಸಮಸ್ಯೆ ಹೇಳುವ ಮೊದಲೇ, ಈಗ ನೀವು ನನನ್ನು ಸಂಪರ್ಕಿಸಿದಿರಲ್ಲ, ನನ್ನ ಎನರ್ಜಿ ನಿಮಗೆ ಪಾಸ್ ಆಗಿತು, ನಮ್ಮ ಕಚೇರಿಯವರು ನಿಮ್ಮನ್ನು ಸಂಪರ್ಕಿಸಿ ‘ಎಲ್ಲ’ ಮಾಡುತ್ತಾರೆ, ಡೋಂಟ್ ವರಿ ಎನ್ನುತ್ತಾನೆ ಚಂದ್ರ!

ಜನರಿಗೆ ಈ ಮಾರ್ಗ ಗೊತ್ತಿಲ್ಲದ್ದರಿಂದ ಅದನ್ನು ಕಲಿಸಲು ದೇವರೇ ಈ ಕಳ್ ನನ್ಮಗನಿಗೆ ಆದೇಶ ನೀಡಿದ್ದಾನಂತೆ! ಪಾಪ, ಸಣ್ಣಪುಟ್ಟ ವ್ಯಾಪಾರದಲ್ಲಿ ನಷ್ಟ ಅನುಭವಿಸಿದವರು, ಮದುವೆ ಸಮಸ್ಯೆ ಆಗಿರುವ ಹೆಣ್ಣು ಮಕ್ಕಳು, ಗಂಭೀರ ಕಾಯಿಲೆ ಇರುವವರ ಸಂಬಂಧಿಕರು ಫೋನ್ ಮಾಡಿ ಈ ಮುಠ್ಠಾಳರ ಬಲೆಗೆ ಬೀಳುತ್ತಿದ್ದರು.

ಹೀಗೆ ಇಡೀ ಜಗತ್ತಿನ ಮಾನವರ ಅಭಿವೃದ್ಧಿ ಮಾಡುವುದೇ ಚಂದ್ರನ ವಂಚಕ ಟೀಮಿನ ಗುರಿಯಂತೆ! ಬಾಗಲಕೋಟೆಯ ಬಸವೇಶ್ವರ ಇಂಜಿನಿಯರಿಂಗ್ ಕಾಲೇಜಿನಲ್ಲಿ ಸಿವಿಲ್ ಇಂಜಿನಿಯರಿಂಗ್ ಓದಿ ಕಂಟ್ರಾಕ್ಟರ್ ಆಗಿದ್ದ ಈ ಮನುಷ್ಯ, ಮನೆ ಕಟ್ಟಿಸುವಾಗ ಆ ಮೂಲೆ, ಈ ಮೂಲೆ ಎಂದು ಜನ ವಿಚಾರಿಸುವುದನ್ನು ನೋಡಿ, ಅದನ್ನೇ ಒಂದು ದಂಧೆ ಮಾಡಿಕೊಂಡಿದ್ದಾನೆ. ಇಷ್ಟು ದಿನ ಸರಳ ವಾಸ್ತು ಹೆಸರಲ್ಲಿ ಮೋಸ ಮಾಡಿದ್ದಾಯ್ತು, ಈಗ ಆ ಹಳೆ ಮೌಢ್ಯದ ಮದ್ಯವನ್ನು ‘ಮಾನವಾಭಿವೃದ್ಧಿ’ ಎಂಬ ಹೊಸ ಸೀಶೆಯಲ್ಲಿ ತುಂಬಿ ಮಾರ್ಕೆಟಿಂಗ್ ಮಾಡುತ್ತಿದ್ದಾನೆ!

ಈತ ಜನರಿಂದ ಯಾವ ಪರಿ ಕಿತ್ತಿದ್ದಾನೆಂದರೆ, ‘ಸರಳ ಜೀವನ’ ಎಂಬ ಚಾನೆಲ್ಲನ್ನೂ ಆರಂಭಿಸಿ, ಅದರ ಮೂಲಕವೂ ತನ್ನ ದಂಧೆಯನ್ನು ಪ್ರಮೋಟ್ ಮಾಡುತ್ತಾನೆ. ಜೊತೆಗೆ ರಾಜೀವ ಚಂದ್ರಶೇಖರನ ಸುವರ್ಣ ನ್ಯೂಸ್‍ನಂತಹ ಚಾನೆಲ್ಲುಗಳೂ ಈ ಜ್ಯೋತಿಷಿ, ವಾಸ್ತು ಪಂಡಿತರೊಂದಿಗೆ ಟೈಅಪ್ ಆಗಿವೆ!

ಇದನ್ನು ಓದಿ: ಮಾಧ್ಯಮ ಭಯೋತ್ಪಾನೆ

ಪಾಸಿಟಿವ್ ಎನರ್ಜಿ, ಕಾಸ್ಮೆಟಿಕ್ ಎನರ್ಜಿ ಅಂತೆಲ್ಲ ಮರುಳು ಮಾಡುವುದು ಇವರ ಟೆಕ್ನಿಕ್. ಇದಕ್ಕೆ ಮಾರು ಹೋಗುತ್ತಿರುವವರು ನಗರವಾಸಿ ವಿದ್ಯಾವಂತ ಜನರೇ ಎಂಬುದು ವಿಪರ್ಯಾಸ! ಮೋಡದ ಮರೆಯಲ್ಲಿ ರೇಡಾರ್‍ನಿಂದ ಬಚಾವ್ ಆಗಬಹುದು ಎನ್ನುವ ಪ್ರಧಾನಮಂತ್ರಿಯ ಮಾತನ್ನೂ ನಂಬುವ ಮೂಢ ಭಕ್ತರಲ್ಲಿ ಅದೇ ‘ಸುಶಿಕ್ಷಿತ’ರೇ ಜಾಸ್ತಿ ಇದ್ದಾರಲ್ಲ?

ನಮ್ಮ ಸಮಸ್ಯೆಗಳನ್ನು ಯಾವ ವಾಸ್ತುವೂ ಪರಿಹಾರ ಮಾಡದು. ಅದಕ್ಕೆ ನಾವೇ ಮಾರ್ಗ ಹುಡುಕಿಕೊಳ್ಳಬೇಕು. ಸತತ ಪ್ರಯತ್ನ ಮತ್ತು ಕಠಿಣ ಪರಿಶ್ರಮ ಇದಕ್ಕೆ ಅಗತ್ಯ. ನಿಮಗೆ ಪರಿಹರಿಸಲು ಸಾಧ್ಯವಾಗದಿದ್ದಲ್ಲಿ ಅದಕ್ಕೆ ಸಂಬಂಧಿಸಿದ ಜ್ಞಾನ ಇರುವವರ ಬಳಿ ಸಲಹೆ ಪಡೆದೋ, ಚಿಕಿತ್ಸೆ ಪಡೆದೋ ಪರಿಹಾರ ಕಂಡುಕೊಳ್ಳಬೇಕು. ಹಾಗಾಗಿ ಈ ಮೂಢ ಮಾಧ್ಯಮಗಳು ಬಿತ್ತರಿಸುವ ಇಂತಹ ಅವೈಜ್ಞಾನಿಕ ಪ್ರೊಗ್ರಾಂಗಳನ್ನು ನಂಬಬೇಡಿ. ಇದರಿಂದ ನಿಮ್ಮ ಸಮಸ್ಯೆ ಕಡಿಮೆಯಾಗುವ ಬದಲು ಹೆಚ್ಚಾಗುವುದರಲ್ಲಿ ಸಂದೇಹವೆ ಇಲ್ಲ. ಚಂದ್ರಶೇಖರರಂತಹ ವಂಚಕರಿಂದ ದೂರವಿರಿ. ಇಲ್ಲದಿದ್ದಲ್ಲಿ ನಿಮ್ಮ ಆರ್ಥಿಕ ಸಮಸ್ಯೆ ಮತ್ತು ಮಾನಸಿಕ ಮೌಢ್ಯ ಹೆಚ್ಚಾಗುತ್ತವೆ ಅಷ್ಟೇ!

(ಮೇಲಿನ ಬರಹದಲ್ಲಿನ ಅಭಿಪ್ರಾಯಗಳು ಲೇಖಕರದ್ದಾಗಿರುತ್ತವೆ. ಅತಿಥಿ ಲೇಖಕರ ಅನಿಸಿಕೆಗಳು ನಾನುಗೌರಿ.ಕಾಂ ವೆಬ್‌ಪತ್ರಿಕೆಯ ಸಂಪಾದಕೀಯ ತಂಡದ ಅಭಿಪ್ರಾಯಗಳೇ ಆಗಿರಬೇಕೆಂದೇನಿಲ್ಲ.)

ಚಾನೆಲ್ ಚಿತ್ರಾನ್ನ ಕಾಶಿಯ ಕೊತ್ವಾಲ, ಪ್ರತ್ಯಕ್ಷರಾದ ಸಾಧುಗಳು, ಖಬರ್ ದಾರ್ ಮೆಸೇಜ್

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಜಾರ್ಖಂಡ್‌ನಲ್ಲಿ ಮತ್ತೊಂದು ಗುಂಪುಹತ್ಯೆ: ದನ ಕಳ್ಳತನದ ಶಂಕೆಯಲ್ಲಿ ಮುಸ್ಲಿಂ ವ್ಯಕ್ತಿಯನ್ನು ಥಳಿಸಿ ಕೊಂದ ಗುಂಪು

ಜಾರ್ಖಂಡ್‌ನ ಗೊಡ್ಡಾ ಜಿಲ್ಲೆಯಲ್ಲಿ ಬುಧವಾರ ದನಗಳನ್ನು ಕದ್ದಿದ್ದಾನೆ ಎಂಬ ಶಂಕೆಯಲ್ಲಿ 45 ವರ್ಷದ ಮುಸ್ಲಿಂ ವ್ಯಕ್ತಿಯನ್ನು ಅಪರಿಚಿತ ಜನರ ಗುಂಪೊಂದು ಹೊಡೆದು ಕೊಂದಿದೆ ಎಂದು ಪಿಟಿಐ ವರದಿ ಮಾಡಿದೆ. ಪೊಲೀಸ್ ಅಧಿಕಾರಿಗಳನ್ನು ಉಲ್ಲೇಖಿಸಿ ವರದಿ...

ನ್ಯಾಷನಲ್ ಹೆರಾಲ್ಡ್ ಜಾಹೀರಾತು ವಿವಾದ: ಹಣಕಾಸಿನ ದಾಖಲೆ ಕೇಳಿ ಡಿಕೆ ಸಹೋದರರಿಗೆ ನೋಟಿಸ್  

ಕಾಂಗ್ರೆಸ್ ನೇತೃತ್ವದ ಕರ್ನಾಟಕ ಸರ್ಕಾರದಿಂದ ನ್ಯಾಷನಲ್ ಹೆರಾಲ್ಡ್ ಪತ್ರಿಕೆಗೆ ಬೇರೆ ಯಾವುದೇ ರಾಷ್ಟ್ರೀಯ ದಿನಪತ್ರಿಕೆಗಿಂತ ಹೆಚ್ಚಿನ ಜಾಹೀರಾತು ನಿಧಿ ದೊರೆತಿದೆ ಎಂದು ವರದಿಯಾಗಿದೆ, ಇದು ಸಾರ್ವಜನಿಕ ಹಣದ ಬಳಕೆಯ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ....

ಬಿಹಾರ: ಸರ್ಕಾರಿ ಶಾಲಾ ಶಿಕ್ಷಕರಿಗೆ ಬೀದಿ ನಾಯಿಗಳನ್ನು ಎಣಿಸುವ ಹೆಚ್ಚುವರಿ ಕರ್ತವ್ಯ ವಹಿಸಿದ ಪುರಸಭೆ  

ಪಾಟ್ನಾ: ಸುಪ್ರೀಂ ಕೋರ್ಟ್ ಬೀದಿ ನಾಯಿಗಳ ವಿಚಾರದಲ್ಲಿ ಮಹತ್ವದ ಆದೇಶ ನೀಡಿದೆ. ಸಾರ್ವಜನಿಕ ರಸ್ತೆಗಳು, ಬೀದಿಗಳು ಬೀದಿನಾಯಿ ಮುಕ್ತವಾಗಿರಬೇಕು ಎಂದು ಹೇಳಿದೆ. ಆದರೆ ಈ ಆದೇಶ ಸರ್ಕಾರಿ ಶಾಲಾ ಶಿಕ್ಷಕರ ಪಾಲಿಗೆ ದೊಡ್ಡ...

ಮಮತಾ ಬ್ಯಾನರ್ಜಿಯ ರಾಜಕೀಯ ಸಲಹಾ ಸಂಸ್ಥೆ ಐ-ಪ್ಯಾಕ್, ಅದರ ಮುಖ್ಯಸ್ಥ ಪ್ರತೀಕ್ ಜೈನ್ ಮನೆ ಮೇಲೆ ಇಡಿ ದಾಳಿ

ಗುರುವಾರ (ಜ.8) ಬೆಳಿಗ್ಗೆ ಕೋಲ್ಕತ್ತಾದ ಸಾಲ್ಟ್ ಲೇಕ್‌ನಲ್ಲಿರುವ ರಾಜಕೀಯ ಸಲಹಾ ಸಂಸ್ಥೆ ಐ-ಪಿಎಸಿ (ಐ-ಪ್ಯಾಕ್) ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ಮನೆ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ದಾಳಿ...

ಉತ್ತರಪ್ರದೇಶ: ಕಬ್ಬಿನ ಗದ್ದೆಯಲ್ಲಿ ಸುಟ್ಟ, ಅರೆನಗ್ನ ಮಹಿಳೆಯ ಮೃತದೇಹ ಪತ್ತೆ: ಅತ್ಯಾಚಾರ ಮಾಡಿ ಬೆಂಕಿ ಹಚ್ಚಿರುವ ಶಂಕೆ

ಹಾಪುರ್: ಉತ್ತರ ಪ್ರದೇಶದ ಹಾಪುರ್ ಜಿಲ್ಲೆಯಲ್ಲಿ ಆಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದ್ದು, ಬಹದ್ದೂರ್‌ಗಢ ಪೊಲೀಸ್ ಠಾಣೆ ವ್ಯಾಪ್ತಿಯ ಲಹಾದ್ರಾ ಗ್ರಾಮದ ಇಟ್ಟಿಗೆ ಗೂಡುಗಳ ಹಿಂದಿನ ಕಬ್ಬಿನ ಗದ್ದೆಯಲ್ಲಿ ಸುಮಾರು 30 ವರ್ಷ ವಯಸ್ಸಿನ...

ಗೋಮಾಂಸ ಸೇವನೆ ಶಂಕೆಯಲ್ಲಿ ಮಾನಸಿಕ ಅಸ್ವಸ್ಥ ವ್ಯಕ್ತಿಯ ಮೇಲೆ ಕ್ರೂರ ಹಲ್ಲೆ : ಮೂವರು ದುಷ್ಕರ್ಮಿಗಳ ಬಂಧನ

ಸಾರ್ವಜನಿಕವಾಗಿ ಹಸುವನ್ನು ಕೊಂದು, ಅದರ ಮಾಂಸವನ್ನು ತಿಂದಿದ್ದಾರೆ ಎಂದು ಆರೋಪಿಸಿ ಮಾನಸಿಕ ಅಸ್ವಸ್ಥ ವ್ಯಕ್ತಿ ಮೇಲೆ ಸ್ವಘೋಷಿತ ಗೋರಕ್ಷಕರು ಕ್ರೂರವಾಗಿ ಹಲ್ಲೆ ನಡೆಸಿದ ಘಟನೆ ರಾಜಸ್ಥಾನದ ಝಾಲಾವರ್ ಜಿಲ್ಲೆಯ ಅಕ್ಲೇರಾ ತಾಲೂಕಿನ ಕಿಶನ್‌ಪುರ...

‘ನಿಮ್ಮನ್ನು ನಂಬಿ ಬಂದ ನಕ್ಸಲ್ ಕಾರ್ಯಕರ್ತರಿಗೆ ಕೊಟ್ಟ ಮಾತು ಉಳಿಸಿಕೊಳ್ಳಿ’: ಸಿದ್ದರಾಮಯ್ಯ ಅವರಿಗೆ ಮನವಿ ಮಾಡಿದ ಶಾಂತಿಗಾಗಿ ನಾಗರೀಕ ವೇದಿಕೆ

ಬೆಂಗಳೂರು: ‘ಮುಖ್ಯವಾಹಿನಿಗೆ ಬಂದ ಏಳೂ ಜನ ನಕ್ಸಲೀಯರು ಜೈಲಿನಲ್ಲೇ ಇದ್ದಾರೆ. ಬಹಳ ಸೊರಗಿದ್ದಾರೆ. ತೀವ್ರ ದೈಹಿಕ ಹಾಗೂ ಮಾನಸಿಕ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಅವರನ್ನು ಹೋಗಿ ಕಾಣುವುದೇ ನಮ್ಮ ಪಾಲಿಗೆ ದೊಡ್ಡ ಹಿಂಸೆಯಾಗಿದೆ ಎಂದು...

ಕೋಗಿಲು ಮನೆಗಳ ನೆಲಸಮ : ಪ್ರತಿಭಟಿಸಿದ ಹೋರಾಟಗಾರರ ಮೇಲೆ ಎಫ್‌ಐಆರ್

ಕೋಗಿಲು ಬಡಾವಣೆಯಲ್ಲಿ ಬಡವರ ಮನೆಗಳ ನೆಲಸಮ ವೇಳೆ ಬಿಗುವಿನ ವಾತಾವರಣ ಸೃಷ್ಟಿಸಿದ್ದಾರೆ ಎಂಬ ಆರೋಪದ ಮೇಲೆ ಹೋರಾಟಗಾರರ ವಿರುದ್ದ ಯಲಹಂಕ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಜನಪರ ವೇದಿಕೆಯ ಮುಖಂಡರಾದ ಗೌರಮ್ಮ ಮತ್ತು ಮನೋಹರ್,...

17 ವರ್ಷದ ಮಹಿಳಾ ಅಥ್ಲೀಟ್ ಮೇಲೆ ಲೈಂಗಿಕ ದೌರ್ಜನ್ಯ ಆರೋಪ: ರಾಷ್ಟ್ರೀಯ ಶೂಟಿಂಗ್ ತರಬೇತುದಾರ ಅಮಾನತು

ಫರಿದಾಬಾದ್‌ನ ಹೋಟೆಲ್‌ನಲ್ಲಿ 17 ವರ್ಷದ ರಾಷ್ಟ್ರಮಟ್ಟದ ಮಹಿಳಾ ಶೂಟರ್ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ ಹರಿಯಾಣ ಪೊಲೀಸರು ಪ್ರಕರಣ ದಾಖಲಿಸಿದ ನಂತರ ರಾಷ್ಟ್ರೀಯ ಶೂಟಿಂಗ್ ತರಬೇತುದಾರ ಅಂಕುಶ್ ಭಾರದ್ವಾಜ್ ಅವರನ್ನು...

ಸುಪ್ರೀಂ ಕೋರ್ಟ್‌ನಿಂದ ಜಾಮೀನು : ಗುಲ್ಫಿಶಾ ಫಾತಿಮಾ ಸೇರಿದಂತೆ ನಾಲ್ವರು ಜೈಲಿನಿಂದ ಬಿಡುಗಡೆ

ಈಶಾನ್ಯ ದೆಹಲಿಯ 2020ರ ಗಲಭೆ ಪಿತೂರಿ ಆರೋಪದಲ್ಲಿ ಬಂಧಿತರಾಗಿದ್ದ ನಾಲ್ವರು ವಿದ್ಯಾರ್ಥಿ ಹೋರಾಟಗಾರರು ಬುಧವಾರ (ಜ.7) ಜೈಲಿನಿಂದ ಹೊರ ಬಂದಿದ್ದಾರೆ. ಗುಲ್ಫಿಶಾ ಫಾತಿಮಾ, ಮೀರಾನ್ ಹೈದರ್, ಶಿಫಾ ಉರ್ ರೆಹಮಾನ್ ಮತ್ತು ಮೊಹಮ್ಮದ್ ಸಲೀಮ್...