Homeಕರ್ನಾಟಕಇದು ಖುಷಿಯ ವಿಚಾರ; ಆತಂಕದ್ದೂ ಕೂಡ.... ಹನುಮಂತನ ಕತೆಯ ಸಿನಿಮಾಗೆ ಆತನೇ ಹೀರೋ!

ಇದು ಖುಷಿಯ ವಿಚಾರ; ಆತಂಕದ್ದೂ ಕೂಡ…. ಹನುಮಂತನ ಕತೆಯ ಸಿನಿಮಾಗೆ ಆತನೇ ಹೀರೋ!

- Advertisement -
- Advertisement -

ಯಾವುದೇ ಕಲೆಯ ತರಬೇತಿ ಇಲ್ಲದ, ಅಂತಹ ಯಾವ ಹಿನ್ನಲೆ ಅಥವಾ ಪರಿಸರದಲ್ಲಿ ಬೆಳೆಯದೇ ಇರುವ, ಗಾಂಧಿನಗರದಿಂದ 500 ಕಿ.ಮೀ. ದೂರದ ಉತ್ತರ ಕರ್ನಾಟಕದ ಒಂದು ಪುಟ್ಟ ಗ್ರಾಮದ ಶ್ರಮಜೀವಿ ಯುವಕನೊಬ್ಬನಿಗೆ ಸಿನಿಮಾ ಹೀರೊ ಆಗುವ ಅವಕಾಶ ಸಿಕ್ಕಿದೆ. ಇದು ಖುಷಿಯ ವಿಷಯ. ಇಲ್ಲಿ ಆತಂಕಕ್ಕೆ ಕಾರಣವೆಂದರೆ ಹಿಂದಿನ ಇಂತಹ ಪ್ರಸಂಗಗಳನ್ನೆ ನೆನೆದರೆ ಇಂತಹ ಹುಡುಗರು ಸಿನಿಮಾ ಮಂದಿಯ ತೆವಲು ಮತ್ತು ಸ್ವಾರ್ಥಕ್ಕೆ ಬಲಿಯಾಗಿ ತಮ್ಮ ಬದುಕನ್ನೆ ನಾಶ ಮಾಡಿಕೊಂಡ ದುರಂತ ನಮ್ಮ ಮುಂದೆ ಇದೆ.

ಈಗ ಸ ರಿ ಗ ಮ ಪ ಖ್ಯಾತಿಯ ಹನುಮಂತನನ್ನು ಹೀರೋ ಮಾಡಲು ಹೊರಟ ಯುವಕ ಉಡುಪಿ ಜಿಲ್ಲೆಯ ಕುಂದಾಪುರದ ಸಂದೇಶ ಶೆಟ್ಟಿ ಅಜ್ರಿ. ಸಿನಿಮಾ ನುಡಿಕಟ್ಟು ಮತ್ತು ತಂತ್ರಜ್ಞಾನ ಕೌಶಲ್ಯಗಳ ಮೇಲೆ ಈಗ ತಾನೇ ಹಿಡಿತ ಸಾಧಿಸುತ್ತಿರುವ ಈ ಯುವಕ ಗಾಂಧಿನಗರದ ವ್ಯವಹಾರದ ದೃಷ್ಟಿಯಲ್ಲಿ ನೋಡುವುದಾದರೆ ಒಂದರ್ಥದಲ್ಲೇ ಮುಗ್ಧನೇ. ಗಾಂಧಿನಗರ, ಕನಿಷ್ಕಾ ಇತ್ಯಾದಿ ಸಂಕೀರ್ಣ ‘ಸಿನಿ ಸಂತೆ’ಯಿಂದ ದೂರ ಇರುವಾತನೇ.

ನಿರ್ದೇಶಕ ಸಂದೇಶ್

ಮುಂಬೈಯಲ್ಲಿ ಹವ್ಯಾಸಿಯಾಗಿ ಸಿನಿಮಾ ಕೌಶಲ್ಯ ಕಲಿತ ಸಂದೇಶ್ ಈಗಾಗಲೇ ‘ಕತ್ತಲ ಕೋಣೆ’ ಎಂಬ ಸಿನಿಮಾವನ್ನು ನಿರ್ದೇಶಿಸಿ ಕೈಸುಟ್ಟುಕೊಂಡಿದ್ದಾರೆ. ಆ ಕತೆಯಲ್ಲಿ ಕರಾವಳಿಯಲ್ಲಿನ ಗಾಂಜಾ ಮಾಫಿಯಾದ ಚಿತ್ರಣವನ್ನು, ಆ ಮಾಫಿಯಾದ ಸದಸ್ಯರು ನಿಗೂಢವಾಗಿದ್ದರೂ, ಅವರು ಸಾರ್ವಜನಿಕ ಜೀವಮದಲ್ಲಿ ಸಭ್ಯ ಗಣ್ಯರಂತೆ ನಟಿಸುವುದನ್ನು ತೋರಿಸುತ್ತಲೇ, ಯುವಶಕ್ತಿಯ ಚೈತನ್ಯವನ್ನು ಹಿಂಡಿ ಹಾಕುತ್ತಿರುವ ಗಾಂಜಾ ದಂಧೆಯ ಬಗ್ಗೆ ಪೊಲೀಸ್ ವ್ಯವಸ್ಥೆ ಜಾಣಕುರುಡನ್ನು ಪ್ರದರ್ಶಿಸುವುದನ್ನು ತೋರಿಸಲು ಯತ್ನಿಸಿದ್ದಾರಂತೆ. ಅಂದಂತೆ ಈ ಚಿತ್ರದಲ್ಲಿ ಗಾಂಜಾ ಮಾಫಿಯದ ಡಾನ್ ಪತ್ರಿಕೆಯೊಂದನ್ನು ನಡೆಸುತ್ತಿರುತ್ತಾನೆ, ಆತನ ಸಂಸ್ಥೆಯಲ್ಲಿರುವ ಪತ್ರಕರ್ತರಿಗೂ ಇದರ ಅರಿವಿರುವುದಿಲ್ಲವಂತೆ. ಕೊಡಗಿನಲ್ಲಿ ಪ್ರವಾಹ ಸಂಭವಿಸಿದ ಕಾರಣಕ್ಕೆ ಆ ಭಾಗದಲ್ಲಿ ಚಿತ್ರಕ್ಕೆ ಹಿನ್ನಡೆ ಆಯಿತು ಎಂಬುದು ಸಂದೇಶ ಅಂಬೋಣ. ಆದರೆ ಈ ಚಿತ್ರವನ್ನು ಮಾರ್ಕೆಟ್ ಮಾಡುವುದರಲ್ಲಿ ಅವರು ಸಂಪೂರ್ಣ ಸೋತಿದ್ದಾರೆ.

ಈಗ ಅದರಿಂದ ಪಾಠ ಕಲಿತಿರುವೆ ಅಂದಿರುವ ಅವರು, ಈಗಾಗಲೇ ಹಲವು ಹೊಸ ನಿರ್ಮಾಪಕರನ್ನು ಸಂಪರ್ಕಿಸಿದ್ದಾರಂತೆ. ಹಾಡುಹಕ್ಕಿ ಹನುಮಂತನ ಮನೆಗೂ ಹೋಗಿ ಅವರ ಕುಟುಂಬದವರಿಗೆ ಭರವಸೆ ನೀಡಿ ಹನುಮಂತನನ್ನು ಸಿನಿಮಾಕ್ಕೆ ಒಪ್ಪಿಸಿದ್ದಾರೆ.

‘ಹನುಮಂತನಲ್ಲಿ ಮುಗ್ಧತೆ ಇರುವುದು ನಿಜವಾದರೂ ಅದು ಪೂರ್ತಿ ಸತ್ಯವಲ್ಲ. ಬಣ್ಣದ ಜಗತ್ತಿನ ಯಾಮಾರಿಸುವ ಕಲೆಯನ್ನು ಅರ್ಥ ಮಾಡಿಕೊಳ್ಳಬಲ್ಲ ಆತ ಅದನ್ನು ನೇರವಾಗಿ ಹೇಳುವುದಿಲ್ಲ, ಅದನ್ನು ತನ್ನ ಆಡುಭಾಷೆಯಲ್ಲಿ ವಂಗ್ಯದೊಂದಿಗೆ ಅಭಿವ್ಯಕ್ತಿಸುತ್ತಾನೆ. ಇನ್ನೊಂದು ವಿಷಯವೆಂದರೆ ಹನುಮಂತನಿಗೆ ದಿಢೀರ್ ಖ್ಯಾತಿಯ ಯಾವ ಗೀಳೂ ಇಲ್ಲ. ಈಗ ಆತ ಬೇರೆ ಬೇರೆ ಊರುಗಳಲ್ಲಿ ಸ್ಟೇಜ್ ಶೋಗಳಲ್ಲಿ ಭಾಗವಹಿಸಿ ಅವರು ಕೊಟ್ಟ ಗೌರವಧನ ಪಡೆಯುತ್ತಿದ್ದಾನೆ. ಜನರಿಂದ ಸಿಗುವ ಪ್ರೀತಿಯೇ ಆತನಿಗೆ ಸಂಪತ್ತಾಗಿದೆ. ಆದರೆ ಲೌಕಿಕ ಬದುಕಿಗೆ ಅದೆಲ್ಲ ಸಾಕಾಗುವುದಿಲ್ಲವಲ್ಲ. ನಮ್ಮ ಸಿನಿಮಾದ ಮೂಲಕ ಆತನ ಗಾಯನ ಕಲೆ ಮತ್ತು ಆತನಲ್ಲಿರುವ ನಟನೆಯನ್ನು ಜನರು ಎದುರು ಇಡುವ ಪ್ರಾಮಾಣಿಕ ಯತ್ನವನ್ನು ಮಾಡುತ್ತೇವೆ’ ಎನ್ನುತ್ತಾರೆ ಸಂದೇಶ್.

ಝೀ ಟಿವಿಯಲ್ಲಿ ಈ ಹಿಂದೆ ಶಿರಹಟ್ಟಿ ಕಡೆಯ ಹನುಮಂತನ ಹೆಸರಿನ ಇನ್ನೊಬ್ಬ ತಳಸಮುದಾದಯದ ಯುವಕ ಪ್ರಶಸ್ತಿ ಪಡೆದ ನಂತರ ಸಿನಿಮಾದಲ್ಲಿ ಹಾಡಲು ಅವಕಾಶ ಎಂದೆಲ್ಲ ಪ್ರಚಾರವಾಯಿತಾದರೂ ಈಗ ಆತನ ಹೆಸರೇ ಇಲ್ಲ. ‘ಜಂಗ್ಲಿ ಜಾಕಿ’ ಹೆಸರಿನ ಸಿನಿಮಾ ಎಂಬ ಎಂಬ ವಂಚಕ ಜಾಲದಲ್ಲಿ ಸಿಕ್ಕ ಆದಿವಾಸಿ ಯುವಕ ರಾಜೇಶ್ ಮಾನಸಿಕ ಅಸ್ವಸ್ಥನಾಗಿ ಆತ್ಮಹತ್ಯೆಯನ್ನು ಮಾಡಿಕೊಂಡ ದುರಂತ ನಮ್ಮ ಮುಂದೆ ಇದೆ.

ಇದರ ಬಗ್ಗೆ ಸ್ಪಷ್ಟ ಅರಿವಿರುವ ಸಂದೇಶ್, ಈ ಸಿನಿಮಾ ಕತೆಯಲ್ಲಿ ಇಂತಹ ವಂಚನೆಯ ವಿಷಯವೂ ಮತ್ತು ಹಳ್ಳುಗಾಡಿನ ಪ್ರತಿಭೆಗಳಿಗೆ ಅವಕಾಶ ಕೊಡುತ್ತಲೇ ಅವರ ಸಹಜ ಸ್ವಭಾವವನ್ನು ಟಿಆರ್ಪಿಗೆಂದು ಬಳಸಿಕೊಳ್ಳುವ ಆತುರದಲ್ಲಿ ಅವರನ್ನ ಬಫುನ್‍ಗಳನ್ನಂತೆ ಮಾಡುವ ಕ್ರೌರ್ಯವನ್ನು ಸೂಕ್ಷ್ಮವಾಗಿ ತೋರಿಸುತ್ತಿದ್ದೇವೆ. ಹನುಮಂತನ ಬದುಕಿನ ಚಿತ್ರಣದ ವಿವರಗಳು ಮನೋಜ್ಞವಾಗಿ ಮೂಡಿ ಬರಲಿವೆ ಎಂದರು ಸಂದೇಶ್.

ಹಾಡು ಮತ್ತು ಗಾಯನ ಕಲೆ ಹಿಂದಿರುವ ಸಾಂಸ್ಕೃತಿಕ ರಾಜಕಾರಣ, ಆ ಕಾರಣಕ್ಕಾಗಿ ಸಮುದಾಯವೊಂದರ ಹಿಡಿತದಲ್ಲಿ ಈ ಕಲೆಗಳು ಬಂಧಿಯಾಗಿದ್ದ ಇತುಹಾಸವನ್ನೂ ಸಂದೇಶ್ ನಮ್ಮ ಮುಂದಿಡಲಿದ್ದಾರಂತೆ. ಹನುಮಂತ ಮತ್ತು ಸಂದೇಶ ಇಬ್ಬರಿಗೂ ಒಳ್ಳೆಯದಾಗಲಿ. ನಮ್ಮಲ್ಲಿರುವ ಆತಂಕವನ್ನು ಸಂದೇಶ್ ದೂರ ಮಾಡಲಿ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

  1. ಧನ್ಯವಾದ ಸರ್ ಕಲಾವಿದರು ನಿಮ್ಮಂತಹ ಪತ್ರಕರ್ತರ ಬರಹಗಳಿಂದ ಬದುಕು ಕಟ್ಟಿಕೊಳ್ಳಲು ಸಾಧ್ಯ,

LEAVE A REPLY

Please enter your comment!
Please enter your name here

- Advertisment -

ಕಚ್ಚಿದ ಸೇಬನ್ನು ಅಭಿಮಾನಿಗಳತ್ತ ಎಸೆದ ಸಿಎಂ ಡಿ.ಕೆ. ಶಿವಕುಮಾರ್: ವಿಡಿಯೋ ವೈರಲ್

ರಾಜಕೀಯ ನಾಯಕರು ತಮಗೆ ಸಿಕ್ಕ ಹಾರ, ತುರಾಯಿ ಅಥವಾ ಹಣ್ಣುಗಳನ್ನು ಅಭಿಮಾನಿಗಳಿಗೆ ಹಂಚುವುದು ಹೊಸದೇನಲ್ಲ. ಆದರೆ, ತಾನು ಕಚ್ಚಿದ ಹಣ್ಣನ್ನು ಸಾರ್ವಜನಿಕವಾಗಿ ಜನರತ್ತ ಎಸೆಯುವುದು ಯಾವ ರೀತಿಯ ಸಂಸ್ಕೃತಿ ಎಂಬ ಪ್ರಶ್ನೆ ಮೂಡುತ್ತದೆ....

ವೈಜಾಗ್ ಸ್ಟೀಲ್ ಅಪಘಾತಕ್ಕೆ 8 ಮಂದಿ ಬಲಿ: ಸಿಬ್ಬಂದಿ ಕೊರತೆಯ ಬಗ್ಗೆ ಕಾರ್ಮಿಕ ಸಂಘಗಳ ಆರೋಪ: ಸಾವಿನ ಅಂಚಿನಲ್ಲೂ ಕುಟುಂಬಕ್ಕಾಗಿ ಮಿಡಿದ ಕಾರ್ಮಿಕ

ಆಂಧ್ರಪ್ರದೇಶದ ವಿಶಾಖಪಟ್ಟಣದಲ್ಲಿರುವ ಪ್ರಸಿದ್ಧ ರಾಷ್ಟ್ರೀಯ ಇಸ್ಪತ್ ನಿಗಮ್ ಲಿಮಿಟೆಡ್ (RINL) ಉಕ್ಕು ಸ್ಥಾವರದಲ್ಲಿ ಸೋಮವಾರ (ಜೂನ್ 8, 2026) ಸಂಜೆ ಭೀಕರ ಕೈಗಾರಿಕಾ ದುರಂತವೊಂದು ಸಂಭವಿಸಿದೆ. ಸ್ಥಾವರದ ಸ್ಟೀಲ್ ಮೆಲ್ಟ್ ಶಾಪ್-1 (SMS-1)...

ಅಂದು ಪಿಣರಾಯಿ ಮನೆ ಮೇಲೆ ದಾಳಿ; ಈಗ ವೀಣಾ ವಿಜಯನ್‌ಗೆ ಸಮನ್ಸ್‌: ಹಿರಿಯ ಕಮ್ಯುನಿಸ್ಟ್‌ ನಾಯಕನ ಕುಟುಂಬದ ಮೇಲೆ ಇಡಿ ಕಣ್ಣು

ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಕೇರಳದ ಮಾಜಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ಮನೆ ಮೇಲೆ ಕಳೆದ ತಿಂಗಳು ಜಾರಿ ನಿರ್ದೇಶನಾಲಯ ದಾಳಿ ಮಾಡಿತ್ತು. ಕೊನೆಗೆ ಅಲ್ಲಿ ಏನೂ ಸಿಗದೆ ಬರಿಗೈನಲ್ಲಿ ಅಧಿಕಾರಿಗಳು...

ಮೋದಿ ಸರ್ಕಾರಕ್ಕೆ 12 ವರ್ಷ : 12 ರಿಂದ 4ಕ್ಕೆ ಇಳಿದ ಉಜ್ವಲ ಯೋಜನೆ ಸಿಲಿಂಡರ್

ಪ್ರಧಾನ ಮಂತ್ರಿ ನರೇಂದ್ರ ಮೋದಿ ನೇತೃತ್ವದ ಕೇಂದ್ರದ ಎನ್‌ಡಿಎ ಸರ್ಕಾರ 12 ವರ್ಷಗಳ ಆಡಳಿತಾವಧಿಯನ್ನು ಪೂರ್ಣಗೊಳಿಸಿದೆ ಅಥವಾ ಮೋದಿ ಅವರು ಮೂರನೇ ಅವಧಿಗೆ ಪ್ರಧಾನಿಯಾಗಿ 2026ರ ಜೂನ್ 9ಕ್ಕೆ ಎರಡು ವರ್ಷಗಳು ಪೂರ್ಣಗೊಂಡಿವೆ....

ಬಿರ್ಸಾ ಮುಂಡಾ 150ನೇ ಜಯಂತಿ ಹೆಸರಿನಲ್ಲಿ ಆದಿವಾಸಿ ಹಕ್ಕುಗಳ ಮೇಲೆ ಸಂಘ ಪರಿವಾರದ ಕಣ್ಣು?

ಮೇ 24 ರಂದು ನವದೆಹಲಿಯ ಕೆಂಪುಕೋಟೆಯಲ್ಲಿ (Red Fort) ಭಾರತದಾದ್ಯಂತದ ಲಕ್ಷಾಂತರ ಪರಿಶಿಷ್ಟ ಪಂಗಡದ (ST) ಸಮುದಾಯಗಳ ಜನರು ಒಟ್ಟಿಗೆ ಸೇರಿದ್ದರು. ‘ಜಂಜಾತಿ ಸುರಕ್ಷಾ ಮಂಚ್’ (ಬುಡಕಟ್ಟು ರಕ್ಷಣಾ ವೇದಿಕೆ) ಆಯೋಜಿಸಿದ್ದ ಈ...

ಆಪರೇಷನ್ ಕಮಲ ಭೀತಿ: ರಾಜ್ಯಸಭಾ ಚುನಾವಣೆಗೂ ಮುನ್ನ ಮಧ್ಯಪ್ರದೇಶದ ಕಾಂಗ್ರೆಸ್ ಶಾಸಕರು ಕರ್ನಾಟಕಕ್ಕೆ ಶಿಫ್ಟ್‌?

ಜೂನ್ 18 ರ ರಾಜ್ಯಸಭಾ ಚುನಾವಣೆಗೆ ಮುನ್ನ ಬಿಜೆಪಿಯಿಂದ ಅಕ್ರಮವಾಗಿ ಹಣ ವರ್ಗಾವಣೆ ಪ್ರಯತ್ನಗಳು ನಡೆಯುತ್ತಿವೆ ಎಂದು ಮಧ್ಯಪ್ರದೇಶ ಕಾಂಗ್ರೆಸ್ ನಾಯಕರು ಆರೋಪಿಸಿದ್ದಾರೆ. ಅಡ್ಡ ಮತದಾನ ತಡೆಗಟ್ಟುವ ಜೊತೆಗೆ ತನ್ನ ಶಿಬಿರದ ಒಗ್ಗಟ್ಟು...

ವೀರಪ್ಪನ್ ಹೇಳಿದ ಕಥೆಗೆ 30 ವರ್ಷಗಳ ಬಳಿಕ ಕ್ಲೈಮ್ಯಾಕ್ಸ್ : ಸನ್ ಟಿವಿ ವಿರುದ್ಧ ಕಾನೂನು ಸಮರದಲ್ಲಿ ಗೆದ್ದ ನಟಿ ಸುಕನ್ಯಾ​

ತೊಂಬತ್ತರ ದಶಕದಲ್ಲಿ ತಮಿಳು ಮತ್ತು ಮಲಯಾಳಂ ಚಿತ್ರರಂಗದಲ್ಲಿ ಪ್ರಮುಖ ನಟರೊಂದಿಗೆ ನಟಿಸಿ, ಅಪಾರ ಜನಪ್ರಿಯತೆ ಗಳಿಸಿದ್ದ ನಟಿ ಸುಕನ್ಯಾ ರಮೇಶ್, ಪ್ರಸ್ತುತ ಕೆಲವು ಅಪರೂಪದ ಪಾತ್ರಗಳನ್ನು ಹೊರತುಪಡಿಸಿದರೆ ಚಿತ್ರರಂಗದಲ್ಲಿ ಅಷ್ಟಾಗಿ ಸಕ್ರಿಯರಾಗಿಲ್ಲ. ಈ ನಡುವೆ 2024ರಲ್ಲಿ...

“ರಾಜೀನಾಮೆ ನೀಡಿ, ಬಿಜೆಪಿ ಟಿಕೆಟ್‌ನಲ್ಲಿ ಸ್ಪರ್ಧಿಸಿ”: ಟಿಎಂಸಿ ಬಂಡುಕೋರರಿಗೆ ಮಹುವಾ ಮೊಯಿತ್ರಾ ನೇರ ಸವಾಲು

ಪಶ್ಚಿಮ ಬಂಗಾಳದ ತೃಣಮೂಲ ಕಾಂಗ್ರೆಸ್ (TMC) ಪಕ್ಷದೊಳಗೆ ತೀವ್ರ ಭಿನ್ನಾಭಿಪ್ರಾಯ ಸ್ಫೋಟಗೊಂಡಿದೆ. ಕೇಂದ್ರದ ಬಿಜೆಪಿ ನೇತೃತ್ವದ ಎನ್‌ಡಿಎ (NDA) ಮೈತ್ರಿಕೂಟಕ್ಕೆ ಬೆಂಬಲ ನೀಡಲು ಮುಂದಾಗಿರುವ ಸ್ವಪಕ್ಷದ ಬಂಡಾಯ ಸಂಸದರ ವಿರುದ್ಧ ಟಿಎಂಸಿ ಸಂಸದೆ...

ಪಶ್ಚಿಮ ಬಂಗಾಳದ ಸೋಲಿನ ಬಳಿಕ ‘ಇಂಡಿಯಾದ ಆಸರೆ’ ಬಯಸಿದ ಮಮತಾ

2026ರ ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯ ಸೋಲಿನ ನಂತರ ಮಮತಾ ಬ್ಯಾನರ್ಜಿ ಅವರು ಇದ್ದಕ್ಕಿದ್ದಂತೆ ‘ಇಂಡಿಯಾ’ (INDIA) ಒಕ್ಕೂಟ ಮತ್ತು ರಾಷ್ಟ್ರೀಯ ಮಟ್ಟದ ವಿರೋಧ ಪಕ್ಷಗಳ ಒಗ್ಗಟ್ಟಿಗೆ ಇಷ್ಟೊಂದು ಪ್ರಾಮುಖ್ಯತೆ ನೀಡುತ್ತಿರುವುದು ಏಕೆ? ದೀರ್ಘಕಾಲದವರೆಗೆ...

ಪಶ್ಚಿಮ ಬಂಗಾಳ| ಮತದಾರರ ಪಟ್ಟಿಯಿಂದ ಡಿಲೀಟ್‌ ಆದವರಿಗೆ ಪಡಿತರ ಪ್ರಯೋಜನಗಳಿಲ್ಲ

ಚುನಾವಣಾ ಆಯೋಗದ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಯಿಂದಾಗಿ ಪಶ್ಚಿಮ ಬಂಗಾಳದ ಚುನಾವಣಾ ಪ್ರಕ್ರಿಯೆಯಿಂದ ಹೊರಗುಳಿದವರಿಗೆ ಈಗ ಎರಡು ಹೊಡೆತ ಎದುರಾಗಿದೆ. ರಾಜ್ಯ ಸರ್ಕಾರವು ಈಗ ಅವರ ಪಡಿತರ ಚೀಟಿಗಳನ್ನು ಸಹ ನಿಷ್ಕ್ರಿಯಗೊಳಿಸಲು...