Homeಕರ್ನಾಟಕಇದು ಖುಷಿಯ ವಿಚಾರ; ಆತಂಕದ್ದೂ ಕೂಡ.... ಹನುಮಂತನ ಕತೆಯ ಸಿನಿಮಾಗೆ ಆತನೇ ಹೀರೋ!

ಇದು ಖುಷಿಯ ವಿಚಾರ; ಆತಂಕದ್ದೂ ಕೂಡ…. ಹನುಮಂತನ ಕತೆಯ ಸಿನಿಮಾಗೆ ಆತನೇ ಹೀರೋ!

- Advertisement -
- Advertisement -

ಯಾವುದೇ ಕಲೆಯ ತರಬೇತಿ ಇಲ್ಲದ, ಅಂತಹ ಯಾವ ಹಿನ್ನಲೆ ಅಥವಾ ಪರಿಸರದಲ್ಲಿ ಬೆಳೆಯದೇ ಇರುವ, ಗಾಂಧಿನಗರದಿಂದ 500 ಕಿ.ಮೀ. ದೂರದ ಉತ್ತರ ಕರ್ನಾಟಕದ ಒಂದು ಪುಟ್ಟ ಗ್ರಾಮದ ಶ್ರಮಜೀವಿ ಯುವಕನೊಬ್ಬನಿಗೆ ಸಿನಿಮಾ ಹೀರೊ ಆಗುವ ಅವಕಾಶ ಸಿಕ್ಕಿದೆ. ಇದು ಖುಷಿಯ ವಿಷಯ. ಇಲ್ಲಿ ಆತಂಕಕ್ಕೆ ಕಾರಣವೆಂದರೆ ಹಿಂದಿನ ಇಂತಹ ಪ್ರಸಂಗಗಳನ್ನೆ ನೆನೆದರೆ ಇಂತಹ ಹುಡುಗರು ಸಿನಿಮಾ ಮಂದಿಯ ತೆವಲು ಮತ್ತು ಸ್ವಾರ್ಥಕ್ಕೆ ಬಲಿಯಾಗಿ ತಮ್ಮ ಬದುಕನ್ನೆ ನಾಶ ಮಾಡಿಕೊಂಡ ದುರಂತ ನಮ್ಮ ಮುಂದೆ ಇದೆ.

ಈಗ ಸ ರಿ ಗ ಮ ಪ ಖ್ಯಾತಿಯ ಹನುಮಂತನನ್ನು ಹೀರೋ ಮಾಡಲು ಹೊರಟ ಯುವಕ ಉಡುಪಿ ಜಿಲ್ಲೆಯ ಕುಂದಾಪುರದ ಸಂದೇಶ ಶೆಟ್ಟಿ ಅಜ್ರಿ. ಸಿನಿಮಾ ನುಡಿಕಟ್ಟು ಮತ್ತು ತಂತ್ರಜ್ಞಾನ ಕೌಶಲ್ಯಗಳ ಮೇಲೆ ಈಗ ತಾನೇ ಹಿಡಿತ ಸಾಧಿಸುತ್ತಿರುವ ಈ ಯುವಕ ಗಾಂಧಿನಗರದ ವ್ಯವಹಾರದ ದೃಷ್ಟಿಯಲ್ಲಿ ನೋಡುವುದಾದರೆ ಒಂದರ್ಥದಲ್ಲೇ ಮುಗ್ಧನೇ. ಗಾಂಧಿನಗರ, ಕನಿಷ್ಕಾ ಇತ್ಯಾದಿ ಸಂಕೀರ್ಣ ‘ಸಿನಿ ಸಂತೆ’ಯಿಂದ ದೂರ ಇರುವಾತನೇ.

ನಿರ್ದೇಶಕ ಸಂದೇಶ್

ಮುಂಬೈಯಲ್ಲಿ ಹವ್ಯಾಸಿಯಾಗಿ ಸಿನಿಮಾ ಕೌಶಲ್ಯ ಕಲಿತ ಸಂದೇಶ್ ಈಗಾಗಲೇ ‘ಕತ್ತಲ ಕೋಣೆ’ ಎಂಬ ಸಿನಿಮಾವನ್ನು ನಿರ್ದೇಶಿಸಿ ಕೈಸುಟ್ಟುಕೊಂಡಿದ್ದಾರೆ. ಆ ಕತೆಯಲ್ಲಿ ಕರಾವಳಿಯಲ್ಲಿನ ಗಾಂಜಾ ಮಾಫಿಯಾದ ಚಿತ್ರಣವನ್ನು, ಆ ಮಾಫಿಯಾದ ಸದಸ್ಯರು ನಿಗೂಢವಾಗಿದ್ದರೂ, ಅವರು ಸಾರ್ವಜನಿಕ ಜೀವಮದಲ್ಲಿ ಸಭ್ಯ ಗಣ್ಯರಂತೆ ನಟಿಸುವುದನ್ನು ತೋರಿಸುತ್ತಲೇ, ಯುವಶಕ್ತಿಯ ಚೈತನ್ಯವನ್ನು ಹಿಂಡಿ ಹಾಕುತ್ತಿರುವ ಗಾಂಜಾ ದಂಧೆಯ ಬಗ್ಗೆ ಪೊಲೀಸ್ ವ್ಯವಸ್ಥೆ ಜಾಣಕುರುಡನ್ನು ಪ್ರದರ್ಶಿಸುವುದನ್ನು ತೋರಿಸಲು ಯತ್ನಿಸಿದ್ದಾರಂತೆ. ಅಂದಂತೆ ಈ ಚಿತ್ರದಲ್ಲಿ ಗಾಂಜಾ ಮಾಫಿಯದ ಡಾನ್ ಪತ್ರಿಕೆಯೊಂದನ್ನು ನಡೆಸುತ್ತಿರುತ್ತಾನೆ, ಆತನ ಸಂಸ್ಥೆಯಲ್ಲಿರುವ ಪತ್ರಕರ್ತರಿಗೂ ಇದರ ಅರಿವಿರುವುದಿಲ್ಲವಂತೆ. ಕೊಡಗಿನಲ್ಲಿ ಪ್ರವಾಹ ಸಂಭವಿಸಿದ ಕಾರಣಕ್ಕೆ ಆ ಭಾಗದಲ್ಲಿ ಚಿತ್ರಕ್ಕೆ ಹಿನ್ನಡೆ ಆಯಿತು ಎಂಬುದು ಸಂದೇಶ ಅಂಬೋಣ. ಆದರೆ ಈ ಚಿತ್ರವನ್ನು ಮಾರ್ಕೆಟ್ ಮಾಡುವುದರಲ್ಲಿ ಅವರು ಸಂಪೂರ್ಣ ಸೋತಿದ್ದಾರೆ.

ಈಗ ಅದರಿಂದ ಪಾಠ ಕಲಿತಿರುವೆ ಅಂದಿರುವ ಅವರು, ಈಗಾಗಲೇ ಹಲವು ಹೊಸ ನಿರ್ಮಾಪಕರನ್ನು ಸಂಪರ್ಕಿಸಿದ್ದಾರಂತೆ. ಹಾಡುಹಕ್ಕಿ ಹನುಮಂತನ ಮನೆಗೂ ಹೋಗಿ ಅವರ ಕುಟುಂಬದವರಿಗೆ ಭರವಸೆ ನೀಡಿ ಹನುಮಂತನನ್ನು ಸಿನಿಮಾಕ್ಕೆ ಒಪ್ಪಿಸಿದ್ದಾರೆ.

‘ಹನುಮಂತನಲ್ಲಿ ಮುಗ್ಧತೆ ಇರುವುದು ನಿಜವಾದರೂ ಅದು ಪೂರ್ತಿ ಸತ್ಯವಲ್ಲ. ಬಣ್ಣದ ಜಗತ್ತಿನ ಯಾಮಾರಿಸುವ ಕಲೆಯನ್ನು ಅರ್ಥ ಮಾಡಿಕೊಳ್ಳಬಲ್ಲ ಆತ ಅದನ್ನು ನೇರವಾಗಿ ಹೇಳುವುದಿಲ್ಲ, ಅದನ್ನು ತನ್ನ ಆಡುಭಾಷೆಯಲ್ಲಿ ವಂಗ್ಯದೊಂದಿಗೆ ಅಭಿವ್ಯಕ್ತಿಸುತ್ತಾನೆ. ಇನ್ನೊಂದು ವಿಷಯವೆಂದರೆ ಹನುಮಂತನಿಗೆ ದಿಢೀರ್ ಖ್ಯಾತಿಯ ಯಾವ ಗೀಳೂ ಇಲ್ಲ. ಈಗ ಆತ ಬೇರೆ ಬೇರೆ ಊರುಗಳಲ್ಲಿ ಸ್ಟೇಜ್ ಶೋಗಳಲ್ಲಿ ಭಾಗವಹಿಸಿ ಅವರು ಕೊಟ್ಟ ಗೌರವಧನ ಪಡೆಯುತ್ತಿದ್ದಾನೆ. ಜನರಿಂದ ಸಿಗುವ ಪ್ರೀತಿಯೇ ಆತನಿಗೆ ಸಂಪತ್ತಾಗಿದೆ. ಆದರೆ ಲೌಕಿಕ ಬದುಕಿಗೆ ಅದೆಲ್ಲ ಸಾಕಾಗುವುದಿಲ್ಲವಲ್ಲ. ನಮ್ಮ ಸಿನಿಮಾದ ಮೂಲಕ ಆತನ ಗಾಯನ ಕಲೆ ಮತ್ತು ಆತನಲ್ಲಿರುವ ನಟನೆಯನ್ನು ಜನರು ಎದುರು ಇಡುವ ಪ್ರಾಮಾಣಿಕ ಯತ್ನವನ್ನು ಮಾಡುತ್ತೇವೆ’ ಎನ್ನುತ್ತಾರೆ ಸಂದೇಶ್.

ಝೀ ಟಿವಿಯಲ್ಲಿ ಈ ಹಿಂದೆ ಶಿರಹಟ್ಟಿ ಕಡೆಯ ಹನುಮಂತನ ಹೆಸರಿನ ಇನ್ನೊಬ್ಬ ತಳಸಮುದಾದಯದ ಯುವಕ ಪ್ರಶಸ್ತಿ ಪಡೆದ ನಂತರ ಸಿನಿಮಾದಲ್ಲಿ ಹಾಡಲು ಅವಕಾಶ ಎಂದೆಲ್ಲ ಪ್ರಚಾರವಾಯಿತಾದರೂ ಈಗ ಆತನ ಹೆಸರೇ ಇಲ್ಲ. ‘ಜಂಗ್ಲಿ ಜಾಕಿ’ ಹೆಸರಿನ ಸಿನಿಮಾ ಎಂಬ ಎಂಬ ವಂಚಕ ಜಾಲದಲ್ಲಿ ಸಿಕ್ಕ ಆದಿವಾಸಿ ಯುವಕ ರಾಜೇಶ್ ಮಾನಸಿಕ ಅಸ್ವಸ್ಥನಾಗಿ ಆತ್ಮಹತ್ಯೆಯನ್ನು ಮಾಡಿಕೊಂಡ ದುರಂತ ನಮ್ಮ ಮುಂದೆ ಇದೆ.

ಇದರ ಬಗ್ಗೆ ಸ್ಪಷ್ಟ ಅರಿವಿರುವ ಸಂದೇಶ್, ಈ ಸಿನಿಮಾ ಕತೆಯಲ್ಲಿ ಇಂತಹ ವಂಚನೆಯ ವಿಷಯವೂ ಮತ್ತು ಹಳ್ಳುಗಾಡಿನ ಪ್ರತಿಭೆಗಳಿಗೆ ಅವಕಾಶ ಕೊಡುತ್ತಲೇ ಅವರ ಸಹಜ ಸ್ವಭಾವವನ್ನು ಟಿಆರ್ಪಿಗೆಂದು ಬಳಸಿಕೊಳ್ಳುವ ಆತುರದಲ್ಲಿ ಅವರನ್ನ ಬಫುನ್‍ಗಳನ್ನಂತೆ ಮಾಡುವ ಕ್ರೌರ್ಯವನ್ನು ಸೂಕ್ಷ್ಮವಾಗಿ ತೋರಿಸುತ್ತಿದ್ದೇವೆ. ಹನುಮಂತನ ಬದುಕಿನ ಚಿತ್ರಣದ ವಿವರಗಳು ಮನೋಜ್ಞವಾಗಿ ಮೂಡಿ ಬರಲಿವೆ ಎಂದರು ಸಂದೇಶ್.

ಹಾಡು ಮತ್ತು ಗಾಯನ ಕಲೆ ಹಿಂದಿರುವ ಸಾಂಸ್ಕೃತಿಕ ರಾಜಕಾರಣ, ಆ ಕಾರಣಕ್ಕಾಗಿ ಸಮುದಾಯವೊಂದರ ಹಿಡಿತದಲ್ಲಿ ಈ ಕಲೆಗಳು ಬಂಧಿಯಾಗಿದ್ದ ಇತುಹಾಸವನ್ನೂ ಸಂದೇಶ್ ನಮ್ಮ ಮುಂದಿಡಲಿದ್ದಾರಂತೆ. ಹನುಮಂತ ಮತ್ತು ಸಂದೇಶ ಇಬ್ಬರಿಗೂ ಒಳ್ಳೆಯದಾಗಲಿ. ನಮ್ಮಲ್ಲಿರುವ ಆತಂಕವನ್ನು ಸಂದೇಶ್ ದೂರ ಮಾಡಲಿ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

  1. ಧನ್ಯವಾದ ಸರ್ ಕಲಾವಿದರು ನಿಮ್ಮಂತಹ ಪತ್ರಕರ್ತರ ಬರಹಗಳಿಂದ ಬದುಕು ಕಟ್ಟಿಕೊಳ್ಳಲು ಸಾಧ್ಯ,

LEAVE A REPLY

Please enter your comment!
Please enter your name here

- Advertisment -

ಮೊಬೈಲ್ ಪತ್ತೆ ಪ್ರಕರಣ: ಪ್ರಜ್ವಲ್ ರೇವಣ್ಣ 2 ದಿನ ಪೊಲೀಸ್ ಕಸ್ಟಡಿಗೆ

ಅತ್ಯಾಚಾರ ಪ್ರಕರಣದಲ್ಲಿ ಶಿಕ್ಷೆಗೆ ಗುರಿಯಾಗಿ ಸಜಾ ಕೈದಿಯಾಗಿ ಪರಪ್ಪನ ಅಗ್ರಹಾರ ಜೈಲು ಸೇರಿರುವ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅವರಿಗೆ ಮತ್ತೊಂದು ಕಾನೂನು ಸಂಕಷ್ಟ ಎದುರಾಗಿದೆ. ಜೈಲಿನ ಅವರ ಕೊಠಡಿಯಲ್ಲಿ ಅಕ್ರಮವಾಗಿ ಮೊಬೈಲ್...

ರಾಜ್ಯದಲ್ಲಿ ಅವಧಿ ಮೀರಿದ ಆಹಾರ ಪೂರೈಕೆಯ ಬೃಹತ್ ದಂಧೆ: ₹1.43 ಕೋಟಿಯ ಉತ್ಪನ್ನಗಳು ಜಪ್ತಿ

ಆನ್‌ಲೈನ್ ಮತ್ತು ಇ-ಕಾಮರ್ಸ್ ವೇದಿಕೆಗಳ ಮೂಲಕ ಸಾರ್ವಜನಿಕರಿಗೆ ಅವಧಿ ಮೀರಿದ ಹಾಗೂ ಕಳಪೆ ಗುಣಮಟ್ಟದ ಆಹಾರ ಉತ್ಪನ್ನಗಳನ್ನು ಸರಬರಾಜು ಮಾಡುತ್ತಿದ್ದ ಬೃಹತ್ ದಂಧೆಯನ್ನು ಕರ್ನಾಟಕ ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆ...

ಭಾರತೀಯ ಮಹಿಳೆಯನ್ನು ಬಾಂಗ್ಲಾ ಗಡಿಯಾಚೆಗೆ ತಳ್ಳಿದ ಪ್ರಕರಣ : 2 ಲಕ್ಷ ರೂ. ಪರಿಹಾರ ಪಾವತಿಸಲು ಅಸ್ಸಾಂ ಸರ್ಕಾರಕ್ಕೆ ಗುವಾಹಟಿ ಹೈಕೋರ್ಟ್ ಆದೇಶ

ಪಶ್ಚಿಮ ಬಂಗಾಳ ಮೂಲದ ಮುಸ್ಲಿಂ ಮಹಿಳೆಯೊಬ್ಬರಿಗೆ ವಿದೇಶಿಯರ ನ್ಯಾಯಾಧಿಕರಣದ (ಫಾರಿನರ್ಸ್ ಟ್ರಿಬ್ಯೂನಲ್) ಆದೇಶವನ್ನು ಪ್ರಶ್ನಿಸಲು ಯಾವುದೇ ಅವಕಾಶ ನೀಡದೆ, ಅವರನ್ನು ಬಾಂಗ್ಲಾ ಗಡಿಯಾಚೆಗೆ ತಳ್ಳಿದ್ದಕ್ಕಾಗಿ ಮಧ್ಯಂತರ ಪರಿಹಾರವಾಗಿ ಆಕೆಯ ಪತಿಗೆ 2 ಲಕ್ಷ...

ಮಂಡಿಯ ಐಐಟಿ ಕ್ಯಾಂಪಸ್‌ನಲ್ಲಿ ‘ಶೂದ್ರರು ಮೇಲ್ವರ್ಗಗಳ ಸೇವಕರು’ ಎಂಬ ವರ್ಣ ಶ್ರೇಣೀಕರಣ ಚಿತ್ರಣ: ಜಾತಿ ವಿವಾದದ ನಂತರ ತನಿಖೆಗೆ ಆದೇಶ

ಮಂಡಿ: ಶೂದ್ರರನ್ನು ‘ಉನ್ನತ ವರ್ಗಗಳಿಗೆ ಸೇವೆ ಸಲ್ಲಿಸಲು ಉದ್ದೇಶಿಸಿರುವವರು’ ಎಂದು ಬಿಂಬಿಸುವ ಪೋಸ್ಟರ್‌ವೊಂದು ಹಿಮಾಚಲ ಪ್ರದೇಶದ ಐಐಟಿ ಮಂಡಿಯಲ್ಲಿ ಜಾತಿ ವಿವಾದಕ್ಕೆ ಕಾರಣವಾಗಿದ್ದು, ಪ್ರಕರಣದ ಕುರಿತು ಸಂಸ್ಥೆ ತನಿಖೆಗೆ ಆದೇಶಿಸಿದೆ. ಸೆಪ್ಟೆಂಬರ್ 4ರಂದು...

ಎಸ್ಐಆರ್ ಬಳಿಕ ಮಣಿಪುರ, ಸಿಕ್ಕಿಂ, ಮಿಜೋರಾಂನಲ್ಲಿ 2.24 ಲಕ್ಷ ಮತದಾರರ ಹೆಸರು ಕಡಿತ: ಸಿಕ್ಕಿಂನಲ್ಲಿ ಶೇ.11.15ರಷ್ಟು ಇಳಿಕೆ 

ನವದೆಹಲಿ: ವಿಶೇಷ ತೀವ್ರ ಮತದಾರರ ಪಟ್ಟಿ ಪರಿಷ್ಕರಣೆ (SIR) ಬಳಿಕ ಈಶಾನ್ಯ ಭಾರತದ ಮಣಿಪುರ, ಸಿಕ್ಕಿಂ ಮತ್ತು ಮಿಜೋರಾಂ ರಾಜ್ಯಗಳ ಮತದಾರರ ಪಟ್ಟಿಯಲ್ಲಿ ದೊಡ್ಡ ಪ್ರಮಾಣದ ಬದಲಾವಣೆ ಕಂಡುಬಂದಿದೆ. ಈ ಮೂರು ರಾಜ್ಯಗಳಲ್ಲಿ...

ಜೆಎನ್‌ಯು ಪ್ರೊಫೆಸರ್ ವಿರುದ್ಧ ಲೈಂಗಿಕ ಕಿರುಕುಳ ಆರೋಪ : 10ಕ್ಕೂ ಹೆಚ್ಚು ವಿದ್ಯಾರ್ಥಿನಿಯರಿಂದ ದೂರು

ದೆಹಲಿಯ ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದ (ಜೆಎನ್‌ಯು) ಆಂತರಿಕ ದೂರುಗಳ ಸಮಿತಿಯು (ಐಸಿಸಿ), ಸುಮಾರು ಹನ್ನೊಂದು ವಿದ್ಯಾರ್ಥಿನಿಯರು ಪ್ರೊಫೆಸರ್ ಒಬ್ಬರ ವಿರುದ್ಧ ಮಾಡಿರುವ ಲೈಂಗಿಕ ಕಿರುಕುಳದ ಆರೋಪಗಳ ಕುರಿತು ಪ್ರಸ್ತುತ ತನಿಖೆ ನಡೆಸುತ್ತಿದೆ ಎಂದು...

ಹಿಂದೂ ಧಾರ್ಮಿಕ ಸಂಘಟನೆ ನಿಯೋಗದ ಭೇಟಿ ವೇಳೆ ಮಹಿಳಾ ಸಿಬ್ಬಂದಿಯನ್ನು ದೂರವಿಟ್ಟ ಆರೋಪ; ಈಫೆಲ್ ಟವರ್‌ನಲ್ಲಿ ನೌಕರರ ಮುಷ್ಕರ

ಹಿಂದೂ ಧಾರ್ಮಿಕ ಸಂಘಟನೆ ಬಿಎಪಿಎಸ್ (BAPS) ನಿಯೋಗದ ಭೇಟಿಯ ವೇಳೆ ಮಹಿಳಾ ಸಿಬ್ಬಂದಿಯನ್ನು ಕೆಲಸದ ಸ್ಥಳಗಳಿಂದ ದೂರವಿಡಲಾಗಿತ್ತು ಎಂಬ ಆರೋಪ ಫ್ರಾನ್ಸ್‌ನಲ್ಲಿ ವಿವಾದಕ್ಕೆ ಕಾರಣವಾಗಿದೆ. ಘಟನೆಯನ್ನು ಖಂಡಿಸಿ ಈಫೆಲ್ ಟವರ್‌ನ ಸಿಬ್ಬಂದಿ ಸೋಮವಾರ...

KPSC ಪಶುವೈದ್ಯಾಧಿಕಾರಿ ನೇಮಕಾತಿ ಅಕ್ರಮ: CID ತನಿಖೆಯಲ್ಲಿ ರೂ. 12 ಕೋಟಿಗೂ ಅಧಿಕ ಡೀಲ್ ಬಯಲು!

ಕರ್ನಾಟಕ ಲೋಕಸೇವಾ ಆಯೋಗ (KPSC) ನಡೆಸಿದ ಪಶುವೈದ್ಯಾಧಿಕಾರಿ ಹುದ್ದೆಗಳ ನೇಮಕಾತಿ ಪರೀಕ್ಷೆಯ ಅಕ್ರಮ ಪ್ರಕರಣದ ತನಿಖೆ ತೀವ್ರಗೊಂಡಿದ್ದು, ಸಿಐಡಿ (CID) ತನಿಖೆಯಲ್ಲಿ ಸಾಲು ಸಾಲು ಆಘಾತಕಾರಿ ಸಂಗತಿಗಳು ಹೊರಬಿದ್ದಿವೆ. ಒಟ್ಟು 24 ಅಭ್ಯರ್ಥಿಗಳು ಹಣ...

ದೆಹಲಿಯಲ್ಲಿ ಮಣಿಪುರದ ಸಂಗೀತಗಾರನ ಗುಂಪು ಹತ್ಯೆ : ಎಂಟು ಜನರ ಬಂಧನ

ದೆಹಲಿಯ ಆಶ್ರಮ್ ಪ್ರದೇಶದಲ್ಲಿ ವಾಸಿಸುತ್ತಿದ್ದ ಮಣಿಪುರದ ಸಂಗೀತಗಾರ ಚೊಂಗ್ಥಾಮ್ ವಿಕ್ರಮ್ ಸಿಂಗ್ ಅವರು ಭಾನುವಾರ (ಸೆ.6) ರಾತ್ರಿ ಗುಂಪೊಂದರಿಂದ ಕಲ್ಲು ತೂರಾಟ ಅಥವಾ ಹಲ್ಲೆಗೆ ಒಳಗಾಗಿ, ಅದರಿಂದ ಉಂಟಾದ ಗಂಭೀರ ಗಾಯಗಳಿಂದಾಗಿ ಸೋಮವಾರ...

SIR: ಚಿಂತಕ ಪರಕಾಲ ಪ್ರಭಾಕರ್‌ಗೆ ಚುನಾವಣಾ ಆಯೋಗದಿಂದ ನೋಟಿಸ್

ಅರ್ಥಶಾಸ್ತ್ರಜ್ಞ, ರಾಜಕೀಯ ವಿಶ್ಲೇಷಕ ಡಾ. ಪರಕಾಲ ಪ್ರಭಾಕರ್ ಅವರಿಗೂ ಈಗ ‘ವಿಶೇಷ ತೀವ್ರ ಪರಿಷ್ಕರಣೆ’ (SIR) ಪ್ರಕ್ರಿಯೆಯಡಿ ಚುನಾವಣಾ ಆಯೋಗದ ನೋಟಿಸ್ ಜಾರಿಯಾಗಿದೆ. ವೋಟರ್ ಐಡಿ ಪರಿಶೀಲನೆಯಲ್ಲಿ ‘Logical Discrepancy’ (ತಾರ್ಕಿಕ ಅಸಂಗತತೆ)...