Homeಅಂಕಣಗಳುಬಿಜೆಪಿ ಯಂಗೆ ಚೊಕ್ಕ ಮಾಡಿವಿ ನೋಡಿ!

ಬಿಜೆಪಿ ಯಂಗೆ ಚೊಕ್ಕ ಮಾಡಿವಿ ನೋಡಿ!

- Advertisement -
- Advertisement -

ಅದೊಂದು ಕಾಲವಿತ್ತು; ಚುನಾವಣೆ ಬಂತೆಂದರೆ ಲೀಡರ್‌ಗಳು ತಮ್ಮ ನಾಲಗೆಯನ್ನು ಮಸೆದುಕೊಂಡು, ಪರಿಣಾಮಕಾರಿ ಸುಭಾಷಿತಗಳನ್ನು ಬಾಯಿಪಾಠ ಮಾಡಿಕೊಂಡು, ಉಪಕತೆಗಳನ್ನು ಹೊಸೆದುಕೊಂಡು ಬಹಿರಂಗ ಸಭೆಗಳಲ್ಲಿ ಭಾಷಣ ಬಿಗಿದು ಓಟು ಕೇಳುತ್ತಿದ್ದರು. ಶಾಂತವೇರಿ ಗೋಪಾಲಗೌಡರಂತೂ ಗಂಟೆಗಟ್ಟಲೆ ಮಾತನಾಡಿ ರಾಜ್ಯ, ದೇಶ ಮತ್ತು ಅಂತಾರಾಷ್ಟ್ರೀಯ ಮಟ್ಟದ ರಾಜಕಾರಣ ಮಾತನಾಡಿ ಓಟನ್ನೇ ಕೇಳುತ್ತಿರಲಿಲ್ಲ. “ಓಟು ಕೇಳಿ ಸಾರ್” ಎಂದರೆ “ಜನಗಳಿಗೆ ಗೊತ್ತಿಲ್ಲವೆ” ಎಂದುಬಿಡುತ್ತಿದ್ದರು. ಅಂದಿನ ಸಮಾಜವಾದಿಗಳೆಲ್ಲ ಭಯಂಕರ ಭಾಷಣಕಾರರಾಗಿದ್ದರು. ಭಾಷಣದಿಂದಲೇ ಮತ ಪಡೆಯುತ್ತಿದ್ದರು. ಈಗ ಹಠಾತ್ ಎಲ್ಲವೂ ಬದಲುಗೊಂಡಿದೆ. ಮತದಾರರ ಪಟ್ಟಿ ಹಿಡಿದು, ಹಂಚಬಹುದಾದ ಸಾಮಗ್ರಿಯ ದಾಸ್ತಾನಿನ ಮೇಲೆ ಮತಗಳ ಎಣಿಕೆ ನಡೆಯುತ್ತಿದೆ. ಜನರಿಗೆ ಮಾಂಸ, ಮದ್ಯ ಮತ್ತು ಕಾಸುಕೊಟ್ಟ ಮೇಲೆ ಅವರೊಡನೆ ಮಾತನಾಡುವ ಅಗತ್ಯವಿಲ್ಲ, ಭಾಷಣದ ಅಗತ್ಯವಿಲ್ಲ, ಭಾವನಿಕೆ ಮಾತಿಲ್ಲ; ಮೌನದಲ್ಲಿಯೇ ಮತದ ವ್ಯವಹಾರ ಮುಗಿದ ಮೇಲೆ ಪ್ರಜಾಪ್ರಭುತ್ವವೂ ಕೂಡ ಯಕ್ಕುಟ್ಟಿ ಹೋಗಿದೆಯಂತಲ್ಲಾ, ಥೂತ್ತೇರಿ.

******

ತೊಂಭತ್ತೆರಡು ವರ್ಷದ ದೇವೇಗೌಡರು ಸ್ವತಂತ್ರವಾಗಿ ನಡೆಯಲಾರರು, ವಯೋಸಹಜವಾಗಿ ಮಾತನಾಡುವುದು ತ್ರಾಸವಾದರೂ ಅವರನ್ನು ಕರೆಸಿ ಒಂದೆರಡು ತೊಟ್ಟು ಕಣ್ಣೀರು ಹಾಕಿಸಿಬಿಟ್ಟರೆ ನನ್ನ ಗೆಲುವು ಗ್ಯಾರಂಟಿ ಎಂದು ಭಾವಿಸಿದ ನಾಗಮಂಗಲ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ, ಗೌಡರ ಮನೆಗೆ ಹೋಗಿ ಕೈ ಮುಗಿದಾಗ, ಇಲ್ಲ ಗೌಡರನ್ನು ಕಳುಹಿಸಲು ವೈದ್ಯರ ಒಪ್ಪಿಗೆ ಕಡ್ಡಾಯ ಎಂದರಂತಲ್ಲಾ. ಆಗ ದಿಕ್ಕು ಕಾಣದಂತಾದ ಜೆಡಿಎಸ್ ಅಭ್ಯರ್ಥಿ ದೇವೇಗೌಡರ ಎದುರು ನಿಂತು “ಅಪ್ಪಾ ನಿಮ್ಮ ವೈರಿಯಾದ ಚಲುವರಾಯಸ್ವಾಮಿ ಗೆಲ್ಲುವಂತೆ ಕಾಣುತ್ತಿದ್ದಾನೆ, ನನಗೆ ದಿಕ್ಕೇತೋಚದಂತಾಗಿದೆ” ಎಂದ ಕೂಡಲೇ ಗೌಡರು ಮೈಮೇಲೆ ದೆವ್ವ ಬಂದಂತೆ ಎದ್ದು ನಿಂತು, ಅಲ್ಲೇ ಇದ್ದ ಅಪ್ಪಾಜಿ ಹೆಗಲ ಮೇಲೆ ಬಲಗೈ ಊರಿ ಎಡಗೈಯ್ಯನ್ನು ಸುರೇಶಗೌಡನ ಭುಜಕ್ಕೆ ಹಾಕಿಕೊಂಡು ನಾಗಮಂಗಲದ ಕಡೆ ನಡೆದೇಬಿಟ್ಟರಂತಲ್ಲಾ. ನಾಗಮಂಗಲದಲ್ಲಿ ಗೌಡರನ್ನು ನೋಡಿದ ಗತಕಾಲದ ಜನ “ಅಬ್ಬಾಬ್ಬಾ ಸೇಡು ಅಂದರೆ ಇದು, ತೊಂಭತ್ತೆರಡು ವರ್ಷವಾಗಿದ್ದರೂ ಐವತ್ತು ವರ್ಷದ ವೈರಿಯನ್ನು ಹೊಡೆದುರುಳಿಸಲು ಬಂದು ನಿಂತಿರುವ ಗೌಡರ ಛಲ ಸಾಮಾನ್ಯವೇ ಅಂದರಂತಲ್ಲಾ. ಮನುಷ್ಯನಿಗೆ ವಯಸ್ಸಾದಂತೆ ದ್ವೇಷ ಅಸೂಯೆಗಳು ಕಡಿಮೆಯಾಗುತ್ತದಂತೆ, ಆದರೆ ನಮ್ಮ ಗೌಡರನ್ನ ನೋಡಿದರೆ ಆ ಮಾತು ಸುಳ್ಳಾಗಿ ಕಾಣುತ್ತಿದೆಯಲ್ಲಾ ಎಂದು ಉದ್ಘಾರ ತೆಗೆದರಂತಲ್ಲಾ, ಥೂತ್ತೇರಿ.

ಇದನ್ನೂ ಓದಿ: ಎಲೆಕ್ಷನ್ ಬಂದಾಕ್ಷಣ ಪಾರ್ಟಿನೇ ತಾಯಿ ಅಂತಾರೆ; ದೇಶನೇ ಮರ್ತೋಗ್ತಾರಲ್ಲಾ!

ನಾಗಮಂಗಲದಲ್ಲಿ ಕಾಣಿಸಿಕೊಂಡ ಗೌಡರು, “ಬರಗಾಲವೆಂಬ ಭೀಕರತೆಗೆ ಸಿಕ್ಕಿ ಗುಳೆ ಹೋಗುತ್ತಿದ್ದ ನಾಗಮಂಗಲದ ಜನ ನೋಡಲಾಗದೆ ನಾನು ಈ ತಾಲೂಕಿಗೆ ಹೇಮಾವತಿ ಹರಿಸಿದೆ; ಅಂದಿನಿಂದ ಜನ ಅನ್ನ ಉಣ್ಣುತ್ತಿದ್ದಾರೆ” ಎಂದು ಹಸಿಸುಳ್ಳು ಹೇಳಿ ಜನರನ್ನು ದಂಗು ಬಡಿಸಿದರಲ್ಲಾ. ನಾಗಮಂಗಲದ ಜನರ ಅಭಿಪ್ರಾಯದಂತೆ ಅಂದು ಸಂಸ್ಥಾ ಕಾಂಗ್ರೆಸ್ಸಿನ ಶಾಸಕರಾಗಿದ್ದ ಎಚ್.ಟಿ.ಕೃಷ್ಣಪ್ಪನವರನ್ನ ಮುಖ್ಯಮಂತ್ರಿಯಾಗಿದ್ದ ದೇವರಾಜ ಅರಸು ಪಾರ್ಟಿಗೆ ಕರೆದಾಗ, ಅವರು “ನನ್ನ ನಾಗಮಂಗಲ ತಾಲೂಕಿಗೆ ಹೇಮಾವತಿ ನೀರು ಕೊಡುವುದಾದರೆ ನಿಮ್ಮ ಪಾರ್ಟಿಗೆ ಬರುತ್ತೇನೆ” ಎಂದರು. ಕೂಡಲೇ ಇಂಜಿನಿಯರ್ ಕರೆದ ಅರಸು ನಾಗಮಂಗಲಕ್ಕೆ ಸಾಧ್ಯವಾದಷ್ಟು ಹೇಮಾವತಿ ನೀರು ಹರಿಸಿ ಎಂದು ಹೇಳಿ ಕೃಷ್ಣಪ್ಪನವರನ್ನು ತಮ್ಮ ಪಾರ್ಟಿಗೆ ಸೇರಿಸಿಕೊಂಡರು. ಇದು ಇತಿಹಾಸದಲ್ಲಿ ದಾಖಲಾಗಿರುವ ಸತ್ಯ. ಆದರೆ ದೇವೇಗೌಡರು ತುಮಕೂರಿಗಾಗಲಿ, ನಾಗಮಂಗಲಕ್ಕಾಗಲಿ ಹೇಮಾವತಿ ಹರಿಸಲಿಲ್ಲ. ಅವರು ಮುಖ್ಯಮಂತ್ರಿಯಾಗಿದದ್ದು ಕೇವಲ ಹದಿನೆಂಟು ತಿಂಗಳು. ಸೇಡಿಗಾಗಿ ಸುಳ್ಳು ಹೇಳಬಾರದು. ಸತ್ಯ ಸಂಗತಿಯ ಅರಿವಿರುವ ಜನರು ನಗಾಡಬಹುದೆಂಬ ಎಚ್ಚರ ಗೌಡರಲ್ಲಿ ಕಾಣಲಿಲ್ಲವಂತಲ್ಲಾ, ಥೂತ್ತೇರಿ.

******

ಇತ್ತ ಬಿಜೆಪಿ ಅಜೆಂಡಾಗಳು ಒಂದೊಂದೇ ಅನಾವರಣಗೊಂಡು ಜನತೆ ಬೆಚ್ಚಿ ಬೀಳುವಂತಾಗಿದೆಯಲ್ಲಾ. ಎರಡು ದಶಕದ ಹಿಂದೆ ತಯಾರಾದ ಬಿಜೆಪಿ ಅಜೆಂಡಾದ ಮುಖ್ಯಾಂಶಗಳ ಸಂಖ್ಯೆ 25. ಅವುಗಳಲ್ಲಿ ಈಗಾಗಲೇ ಕೆಲವು ಜಾರಿಯಾಗಿವೆ. ಒಂದೆರಡನ್ನು ಮಾತ್ರ ಉಲ್ಲೇಖಿಸುವುದಾದರೆ, ಮಸೀದಿ ಕೆಡವಿ ಈ ದೇಶದಲ್ಲಿ ಕೋಮು ಸಾಮರಸ್ಯ ಕದಡಲಾಗಿದೆ. ರಾಮಮಂದಿರ ಕಟ್ಟಲಾಗಿದೆ. ಹಾಗೆಯೇ ರಾಮಮಂದಿರಗಳನ್ನ ದೇಶದ ಎಲ್ಲಾ ರಾಜ್ಯಗಳಲ್ಲಿ ನಿರ್ಮಿಸಲಾಗುತ್ತದೆ. ನಂತರ ಜಿಲ್ಲೆಗಳಲ್ಲಿ ನಿರ್ಮಾಣ ಮಾಡಲಾಗುತ್ತದೆ. ಇದರ ಸೂಚನೆ ಅಶ್ವತ್ಥನಾರಾಯಣ ಎಂಬುವವರ ಬಾಯಿಂದ ಬಂದಿದೆ. ಆ ಪ್ರಕಾರ ರಾಮನಗರಕ್ಕೂ ರಾಮಮಂದಿರ ಬರಲಿದೆ. ಹೀಗೆ ವ್ಯಾಪಕವಾಗಿ ಹರಡುವ ರಾಮಮಂದಿರಗಳ ಮುಖಾಂತರ ಆಡಳಿತ ನಡೆಯಲಿದೆ. ಪೂಜಾರಿಗಳು ಎರಡೆರೆಡು ಶಿಫ್ಟ್‌ನಂತೆ ಕೆಲಸ ನಿರ್ವಹಿಸಲಿದ್ದಾರೆ. ಪ್ರಧಾನ ಅರ್ಚಕರ ಕೆಳಗೆ ಸರಕಾರದ ಕರ್ಮಚಾರಿಗಳು ಬರುತ್ತಾರೆ, ಸರಕಾರಿ ಯಂತ್ರದಲ್ಲಿ ಯಾವ ಶೂದ್ರನು ಇರುವುದಿಲ್ಲ. ಬ್ರಾಹ್ಮಣರೇ ತುಂಬಿಕೊಂಡ ರಾಮಮಂದಿರದ ಆಡಳಿತದ ದೆಸೆಯಿಂದ ರಾಮರಾಜ್ಯ ಸ್ಥಾಪನೆಯಾಗಲಿದೆಯಂತಲ್ಲಾ, ಥೂತ್ತೇರಿ.

******

ಬಿಜೆಪಿಗಳ ಅಧಿಕೃತ ಘೋಷಣೆಯಂತಲೇ, “ನೀವು ಬಂದರೆ ಜೊತೆಯಾಗಿ, ಬಾರದಿದ್ದರೆ ನಿಮ್ಮನ್ನ ಬಿಟ್ಟು, ಅಡ್ಡಿಪಡಿಸಿದರೆ ಹತ್ತಿಕ್ಕಿ ನಾವು ರಾಮರಾಜ್ಯ ಸ್ಥಾಪನೆ ಮಾಡಿಯೇ ಮಾಡುತ್ತೇವೆ” ಎಂಬುದು ಈಗಾಗಲೇ ಜಾರಿಯಾಗಿದೆಯಂತಲ್ಲಾ. “ನೀವು ಬಾರದಿದ್ದರೆ, ನಿಮ್ಮನ್ನ ಬಿಟ್ಟೇ ನಾವು ರಾಮರಾಜ್ಯ ಕಟ್ಟುತ್ತೇವೆ” ಎಂಬುದು ಎಡೂರಪ್ಪ, ಈಶ್ವರಪ್ಪ, ಜಗದೀಶ್ ಶೆಟ್ಟರ್ ವಿಷಯದಲ್ಲಿ ನಿಜವಾಗಿದೆಯಲ್ಲಾ. ಈ ಬಗ್ಗೆ ಬಿಜೆಪಿ ಬುದ್ದಿಜೀವಿ ಮಂಜನನ್ನ ಕೇಳಿದರೆ ನೋಡಿ ಅದ್ವಾನಿಗಿಂತ ಇವರಾರೂ ದೊಡ್ಡವರಲ್ಲಾ, ಅದ್ವಾನಿ ಬಾಬ್ರಿ ಮಸೀದಿ ಕೆಡವಿಸಿದ ಲೀಡ್ರು, ಅದಕ್ಕೂ ಮೊದಲು ರಾಮನನ್ನ ರಸ್ತೆಗೆ ತಂದು ಮೆರವಣಿಗೆ ಮಾಡಿದರು. ನಂತರ ಇಟ್ಟಿಗೆ ಮೆರವಣಿಗೆ ಮಾಡಿದರು, ರಾಮ ಪಾದುಕ ಮೆರವಣಿಗೆ ಮಾಡಿದರು, ಜ್ಯೋತಿ ಮೆರವಣಿಗೆ ಮಾಡಿದರು, ಈ ದೇಶದಲ್ಲಿ ಬಿಜೆಪಿ ಆವರಿಸಿಕೊಳ್ಳುವಂತೆ ಮಾಡಿದರು. ಆದರೆ ಜಿನ್ನಾ ಸೆಕ್ಯುಲರಾಗಿದ್ದ ಅನ್ನ ಮಾತಿಗೆ ಅದ್ವಾನಿಯನ್ನೇ ಆಚೆಗೆ ಎಸೆದ ಬಿಜೆಪಿಗೆ ಈಶ್ವರ, ಎಡೂರಪ್ಪ, ಶೆಟ್ಟರ್ ಯಾವ ಲೆಕ್ಕಾರಿ. ಅಂಗೇ ನೋಡ್ತಾಯಿರಿ “ಬಿಜೆಪಿನ ಇನ್ನೂ ಹ್ಯಂಗೆ ಚೊಕ್ಕ ಮಾಡ್ತಿವಿ” ಅಂತ ಜಾರುತ್ತಿದ್ದ ಖಾಕಿ ಚೆಡ್ಡಿಯನ್ನ ಮೇಲೆಳೆದುಕೊಂಡು ಹೋದನಲ್ಲಾ, ಥೂತ್ತೇರಿ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...

ವಿಧಾನಸಭೆಯಲ್ಲಿ ‘ಗೃಹಲಕ್ಷ್ಮಿ’ ಗದ್ದಲ : ಬಿಜೆಪಿ ಸದಸ್ಯರಿಂದ ಸಭಾತ್ಯಾಗ, ಕ್ಷಮೆ ಕೋರಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಗೃಹಲಕ್ಷಿ ಯೋಜನೆಯ ಹಣ ಬಿಡುಗಡೆ ಸಂಬಂಧ ಸಚಿವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ವಿಚಾರ ಇಂದು (ಡಿ.17 ಬುಧವಾರ) ವಿಧಾನಸಭೆಯಲ್ಲಿ ದೊಡ್ಡ ಮಟ್ಟದ ವಾಗ್ವಾದ, ಆರೋಪ-ಪ್ರತ್ಯಾರೋಪ, ಗದ್ದಲ, ಪ್ರತಿಭಟನೆ, ಸಭಾತ್ಯಾಗ ಮತ್ತು...

ತಂಪು ಪಾನೀಯದಲ್ಲಿ ಮತ್ತು ಬರುವ ಔಷಧ ಬೆರೆಸಿ ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ: ಆರೋಪಿ ಬಂಧನ

ಮುಂಬೈ ನಗರವನ್ನೇ ಬೆಚ್ಚಿಬೀಳಿಸಿದ ಆಘಾತಕಾರಿ ಘಟನೆಯಲ್ಲಿ, ವಕ್ತಿಯೋರ್ವ ಮತ್ತು ಬರುವ ತಂಪು ಪಾನೀಯ ನೀಡಿ ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಅಪರಾಧದ ಅಶ್ಲೀಲ ವೀಡಿಯೊಗಳನ್ನು ರೆಕಾರ್ಡ್ ಮಾಡಿ, ನಂತರ ವೀಡಿಯೊಗಳನ್ನು...

ಮನರೇಗಾ ಬದಲು ವಿಬಿ-ಜಿ ರಾಮ್ ಜಿ : ಲೋಕಸಭೆಯಲ್ಲಿ ಮಸೂದೆ ಅಂಗೀಕಾರದ ವೇಳೆ ಸಭಾತ್ಯಾಗಕ್ಕೆ ನಿರ್ಧರಿಸಿದ ವಿಪಕ್ಷಗಳು

ನರೇಗಾ ಬದಲು ತಂದಿರುವ ವಿಕಸಿತ್ ಭಾರತ್-ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕಾ ಮಿಷನ್ (ಗ್ರಾಮೀಣ್) ಮಸೂದೆ, 2025 (ವಿಬಿ–ಜಿ ರಾಮ್ ಜಿ ಮಸೂದೆ) ಲೋಕಸಭೆಯಲ್ಲಿ ಅಂಗೀಕಾರದ ವೇಳೆ ಸಹಕರಿಸದಿರಲು ವಿರೋಧ ಪಕ್ಷಗಳ ಸಂಸದರು...

ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಆರೋಪ: ಮ್ಯೂಸಿಕ್ ಮೈಲಾರಿ ಮೇಲೆ ಪೋಕ್ಸೋ ಪ್ರಕರಣ ದಾಖಲು 

ಬೆಂಗಳೂರು: ಉತ್ತರ ಕರ್ನಾಟಕದ ಜನಪದ ಗಾಯಕ ಹಾಗೂ ಯೂಟ್ಯೂಬ್ ಸ್ಟಾರ್ ಎಂದೇ ಖ್ಯಾತಿ ಪಡೆದಿದ್ದ ‘ಮ್ಯೂಸಿಕ್ ಮೈಲಾರಿ’ಎಂಬಾತನನ್ನು ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಮಹಾಲಿಂಗಪುರ ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಲಾರಿ...

ಇಂಧನ ಖರೀದಿಗೆ ‘ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ’ ಕಡ್ಡಾಯಗೊಳಿಸಿದ ದೆಹಲಿ ಸರ್ಕಾರ

ರಾಷ್ಟ್ರ ರಾಜಧಾನಿ ದೆಹಲಿಯ ವಾಹನ ಮಾಲೀಕರು ಕಟ್ಟುನಿಟ್ಟಾದ ಆದೇಶ ಎದುರಿಸುತ್ತಾರೆ. ಡಿಸೆಂಬರ್ 18 ರಿಂದ ನಗರದಾದ್ಯಂತದ ಪೆಟ್ರೋಲ್ ಬಂಕ್‌ಗಳಲ್ಲಿ ಇಂಧನ ಖರೀದಿಗೆ ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ (ಪಿಯುಸಿ) ಕಡ್ಡಾಯಗೊಳಿಸಲಾಗಿದೆ. ದೆಹಲಿ ಪರಿಸರ ಸಚಿವ ಮಂಜಿಂದರ್...

ವೈದ್ಯೆಯ ಹಿಜಾಬ್ ಎಳೆದ ಬಿಹಾರ ಸಿಎಂ, ಅವಹೇಳನ ಮಾಡಿದ ಯುಪಿ ಸಚಿವನ ವಿರುದ್ದ ದೂರು ದಾಖಲು

ವೈದ್ಯೆಯ ಹಿಜಾಬ್ ಎಳೆದ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಈ ಘಟನೆಯ ಕುರಿತು ಮಾತನಾಡುವಾಗ ಮಹಿಳೆಯನ್ನು ಅವಮಾನಿಸಿದ ಉತ್ತರ ಪ್ರದೇಶದ ಸಂಪುಟ ಸಚಿವ ಸಂಜಯ್ ನಿಶಾದ್ ವಿರುದ್ದ ಲಕ್ನೋದ ಕೈಸರ್‌ಬಾಗ್ ಪೊಲೀಸ್...

1 ಲಕ್ಷ ರೂಪಾಯಿ ಸಾಲ 74 ಲಕ್ಷ ರೂಪಾಯಿಗೆ ಏರಿಕೆ, ಸಾಲ ತೀರಿಸಲು ಕಿಡ್ನಿ ಮಾರಿದ ರೈತ 

ಅಕ್ರಮವಾಗಿ ಸಾಲ ನೀಡುವವರಿಂದ 1 ಲಕ್ಷ ಸಾಲ ಪಡೆದಿದ್ದು, ಅದಕ್ಕೆ ಹೆಚ್ಚಿನ ದಿನದ ಬಡ್ಡಿ ಸೇರಿ 75 ಲಕ್ಷ ಸಾಲ ಏರಿಕೆಯಾದ ಕಾರಣ ವ್ಯಕ್ತಿಯೊಬ್ಬ ತನ್ನ ಕಿಡ್ನಿಯನ್ನೇ ಮಾರಾಟ ಮಾಡಿರುವ ಘಟನೆ ಮಹಾರಾಷ್ಟ್ರದಲ್ಲಿ...