Homeಅಂಕಣಗಳುಬಿಜೆಪಿ ಯಂಗೆ ಚೊಕ್ಕ ಮಾಡಿವಿ ನೋಡಿ!

ಬಿಜೆಪಿ ಯಂಗೆ ಚೊಕ್ಕ ಮಾಡಿವಿ ನೋಡಿ!

- Advertisement -
- Advertisement -

ಅದೊಂದು ಕಾಲವಿತ್ತು; ಚುನಾವಣೆ ಬಂತೆಂದರೆ ಲೀಡರ್‌ಗಳು ತಮ್ಮ ನಾಲಗೆಯನ್ನು ಮಸೆದುಕೊಂಡು, ಪರಿಣಾಮಕಾರಿ ಸುಭಾಷಿತಗಳನ್ನು ಬಾಯಿಪಾಠ ಮಾಡಿಕೊಂಡು, ಉಪಕತೆಗಳನ್ನು ಹೊಸೆದುಕೊಂಡು ಬಹಿರಂಗ ಸಭೆಗಳಲ್ಲಿ ಭಾಷಣ ಬಿಗಿದು ಓಟು ಕೇಳುತ್ತಿದ್ದರು. ಶಾಂತವೇರಿ ಗೋಪಾಲಗೌಡರಂತೂ ಗಂಟೆಗಟ್ಟಲೆ ಮಾತನಾಡಿ ರಾಜ್ಯ, ದೇಶ ಮತ್ತು ಅಂತಾರಾಷ್ಟ್ರೀಯ ಮಟ್ಟದ ರಾಜಕಾರಣ ಮಾತನಾಡಿ ಓಟನ್ನೇ ಕೇಳುತ್ತಿರಲಿಲ್ಲ. “ಓಟು ಕೇಳಿ ಸಾರ್” ಎಂದರೆ “ಜನಗಳಿಗೆ ಗೊತ್ತಿಲ್ಲವೆ” ಎಂದುಬಿಡುತ್ತಿದ್ದರು. ಅಂದಿನ ಸಮಾಜವಾದಿಗಳೆಲ್ಲ ಭಯಂಕರ ಭಾಷಣಕಾರರಾಗಿದ್ದರು. ಭಾಷಣದಿಂದಲೇ ಮತ ಪಡೆಯುತ್ತಿದ್ದರು. ಈಗ ಹಠಾತ್ ಎಲ್ಲವೂ ಬದಲುಗೊಂಡಿದೆ. ಮತದಾರರ ಪಟ್ಟಿ ಹಿಡಿದು, ಹಂಚಬಹುದಾದ ಸಾಮಗ್ರಿಯ ದಾಸ್ತಾನಿನ ಮೇಲೆ ಮತಗಳ ಎಣಿಕೆ ನಡೆಯುತ್ತಿದೆ. ಜನರಿಗೆ ಮಾಂಸ, ಮದ್ಯ ಮತ್ತು ಕಾಸುಕೊಟ್ಟ ಮೇಲೆ ಅವರೊಡನೆ ಮಾತನಾಡುವ ಅಗತ್ಯವಿಲ್ಲ, ಭಾಷಣದ ಅಗತ್ಯವಿಲ್ಲ, ಭಾವನಿಕೆ ಮಾತಿಲ್ಲ; ಮೌನದಲ್ಲಿಯೇ ಮತದ ವ್ಯವಹಾರ ಮುಗಿದ ಮೇಲೆ ಪ್ರಜಾಪ್ರಭುತ್ವವೂ ಕೂಡ ಯಕ್ಕುಟ್ಟಿ ಹೋಗಿದೆಯಂತಲ್ಲಾ, ಥೂತ್ತೇರಿ.

******

ತೊಂಭತ್ತೆರಡು ವರ್ಷದ ದೇವೇಗೌಡರು ಸ್ವತಂತ್ರವಾಗಿ ನಡೆಯಲಾರರು, ವಯೋಸಹಜವಾಗಿ ಮಾತನಾಡುವುದು ತ್ರಾಸವಾದರೂ ಅವರನ್ನು ಕರೆಸಿ ಒಂದೆರಡು ತೊಟ್ಟು ಕಣ್ಣೀರು ಹಾಕಿಸಿಬಿಟ್ಟರೆ ನನ್ನ ಗೆಲುವು ಗ್ಯಾರಂಟಿ ಎಂದು ಭಾವಿಸಿದ ನಾಗಮಂಗಲ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ, ಗೌಡರ ಮನೆಗೆ ಹೋಗಿ ಕೈ ಮುಗಿದಾಗ, ಇಲ್ಲ ಗೌಡರನ್ನು ಕಳುಹಿಸಲು ವೈದ್ಯರ ಒಪ್ಪಿಗೆ ಕಡ್ಡಾಯ ಎಂದರಂತಲ್ಲಾ. ಆಗ ದಿಕ್ಕು ಕಾಣದಂತಾದ ಜೆಡಿಎಸ್ ಅಭ್ಯರ್ಥಿ ದೇವೇಗೌಡರ ಎದುರು ನಿಂತು “ಅಪ್ಪಾ ನಿಮ್ಮ ವೈರಿಯಾದ ಚಲುವರಾಯಸ್ವಾಮಿ ಗೆಲ್ಲುವಂತೆ ಕಾಣುತ್ತಿದ್ದಾನೆ, ನನಗೆ ದಿಕ್ಕೇತೋಚದಂತಾಗಿದೆ” ಎಂದ ಕೂಡಲೇ ಗೌಡರು ಮೈಮೇಲೆ ದೆವ್ವ ಬಂದಂತೆ ಎದ್ದು ನಿಂತು, ಅಲ್ಲೇ ಇದ್ದ ಅಪ್ಪಾಜಿ ಹೆಗಲ ಮೇಲೆ ಬಲಗೈ ಊರಿ ಎಡಗೈಯ್ಯನ್ನು ಸುರೇಶಗೌಡನ ಭುಜಕ್ಕೆ ಹಾಕಿಕೊಂಡು ನಾಗಮಂಗಲದ ಕಡೆ ನಡೆದೇಬಿಟ್ಟರಂತಲ್ಲಾ. ನಾಗಮಂಗಲದಲ್ಲಿ ಗೌಡರನ್ನು ನೋಡಿದ ಗತಕಾಲದ ಜನ “ಅಬ್ಬಾಬ್ಬಾ ಸೇಡು ಅಂದರೆ ಇದು, ತೊಂಭತ್ತೆರಡು ವರ್ಷವಾಗಿದ್ದರೂ ಐವತ್ತು ವರ್ಷದ ವೈರಿಯನ್ನು ಹೊಡೆದುರುಳಿಸಲು ಬಂದು ನಿಂತಿರುವ ಗೌಡರ ಛಲ ಸಾಮಾನ್ಯವೇ ಅಂದರಂತಲ್ಲಾ. ಮನುಷ್ಯನಿಗೆ ವಯಸ್ಸಾದಂತೆ ದ್ವೇಷ ಅಸೂಯೆಗಳು ಕಡಿಮೆಯಾಗುತ್ತದಂತೆ, ಆದರೆ ನಮ್ಮ ಗೌಡರನ್ನ ನೋಡಿದರೆ ಆ ಮಾತು ಸುಳ್ಳಾಗಿ ಕಾಣುತ್ತಿದೆಯಲ್ಲಾ ಎಂದು ಉದ್ಘಾರ ತೆಗೆದರಂತಲ್ಲಾ, ಥೂತ್ತೇರಿ.

ಇದನ್ನೂ ಓದಿ: ಎಲೆಕ್ಷನ್ ಬಂದಾಕ್ಷಣ ಪಾರ್ಟಿನೇ ತಾಯಿ ಅಂತಾರೆ; ದೇಶನೇ ಮರ್ತೋಗ್ತಾರಲ್ಲಾ!

ನಾಗಮಂಗಲದಲ್ಲಿ ಕಾಣಿಸಿಕೊಂಡ ಗೌಡರು, “ಬರಗಾಲವೆಂಬ ಭೀಕರತೆಗೆ ಸಿಕ್ಕಿ ಗುಳೆ ಹೋಗುತ್ತಿದ್ದ ನಾಗಮಂಗಲದ ಜನ ನೋಡಲಾಗದೆ ನಾನು ಈ ತಾಲೂಕಿಗೆ ಹೇಮಾವತಿ ಹರಿಸಿದೆ; ಅಂದಿನಿಂದ ಜನ ಅನ್ನ ಉಣ್ಣುತ್ತಿದ್ದಾರೆ” ಎಂದು ಹಸಿಸುಳ್ಳು ಹೇಳಿ ಜನರನ್ನು ದಂಗು ಬಡಿಸಿದರಲ್ಲಾ. ನಾಗಮಂಗಲದ ಜನರ ಅಭಿಪ್ರಾಯದಂತೆ ಅಂದು ಸಂಸ್ಥಾ ಕಾಂಗ್ರೆಸ್ಸಿನ ಶಾಸಕರಾಗಿದ್ದ ಎಚ್.ಟಿ.ಕೃಷ್ಣಪ್ಪನವರನ್ನ ಮುಖ್ಯಮಂತ್ರಿಯಾಗಿದ್ದ ದೇವರಾಜ ಅರಸು ಪಾರ್ಟಿಗೆ ಕರೆದಾಗ, ಅವರು “ನನ್ನ ನಾಗಮಂಗಲ ತಾಲೂಕಿಗೆ ಹೇಮಾವತಿ ನೀರು ಕೊಡುವುದಾದರೆ ನಿಮ್ಮ ಪಾರ್ಟಿಗೆ ಬರುತ್ತೇನೆ” ಎಂದರು. ಕೂಡಲೇ ಇಂಜಿನಿಯರ್ ಕರೆದ ಅರಸು ನಾಗಮಂಗಲಕ್ಕೆ ಸಾಧ್ಯವಾದಷ್ಟು ಹೇಮಾವತಿ ನೀರು ಹರಿಸಿ ಎಂದು ಹೇಳಿ ಕೃಷ್ಣಪ್ಪನವರನ್ನು ತಮ್ಮ ಪಾರ್ಟಿಗೆ ಸೇರಿಸಿಕೊಂಡರು. ಇದು ಇತಿಹಾಸದಲ್ಲಿ ದಾಖಲಾಗಿರುವ ಸತ್ಯ. ಆದರೆ ದೇವೇಗೌಡರು ತುಮಕೂರಿಗಾಗಲಿ, ನಾಗಮಂಗಲಕ್ಕಾಗಲಿ ಹೇಮಾವತಿ ಹರಿಸಲಿಲ್ಲ. ಅವರು ಮುಖ್ಯಮಂತ್ರಿಯಾಗಿದದ್ದು ಕೇವಲ ಹದಿನೆಂಟು ತಿಂಗಳು. ಸೇಡಿಗಾಗಿ ಸುಳ್ಳು ಹೇಳಬಾರದು. ಸತ್ಯ ಸಂಗತಿಯ ಅರಿವಿರುವ ಜನರು ನಗಾಡಬಹುದೆಂಬ ಎಚ್ಚರ ಗೌಡರಲ್ಲಿ ಕಾಣಲಿಲ್ಲವಂತಲ್ಲಾ, ಥೂತ್ತೇರಿ.

******

ಇತ್ತ ಬಿಜೆಪಿ ಅಜೆಂಡಾಗಳು ಒಂದೊಂದೇ ಅನಾವರಣಗೊಂಡು ಜನತೆ ಬೆಚ್ಚಿ ಬೀಳುವಂತಾಗಿದೆಯಲ್ಲಾ. ಎರಡು ದಶಕದ ಹಿಂದೆ ತಯಾರಾದ ಬಿಜೆಪಿ ಅಜೆಂಡಾದ ಮುಖ್ಯಾಂಶಗಳ ಸಂಖ್ಯೆ 25. ಅವುಗಳಲ್ಲಿ ಈಗಾಗಲೇ ಕೆಲವು ಜಾರಿಯಾಗಿವೆ. ಒಂದೆರಡನ್ನು ಮಾತ್ರ ಉಲ್ಲೇಖಿಸುವುದಾದರೆ, ಮಸೀದಿ ಕೆಡವಿ ಈ ದೇಶದಲ್ಲಿ ಕೋಮು ಸಾಮರಸ್ಯ ಕದಡಲಾಗಿದೆ. ರಾಮಮಂದಿರ ಕಟ್ಟಲಾಗಿದೆ. ಹಾಗೆಯೇ ರಾಮಮಂದಿರಗಳನ್ನ ದೇಶದ ಎಲ್ಲಾ ರಾಜ್ಯಗಳಲ್ಲಿ ನಿರ್ಮಿಸಲಾಗುತ್ತದೆ. ನಂತರ ಜಿಲ್ಲೆಗಳಲ್ಲಿ ನಿರ್ಮಾಣ ಮಾಡಲಾಗುತ್ತದೆ. ಇದರ ಸೂಚನೆ ಅಶ್ವತ್ಥನಾರಾಯಣ ಎಂಬುವವರ ಬಾಯಿಂದ ಬಂದಿದೆ. ಆ ಪ್ರಕಾರ ರಾಮನಗರಕ್ಕೂ ರಾಮಮಂದಿರ ಬರಲಿದೆ. ಹೀಗೆ ವ್ಯಾಪಕವಾಗಿ ಹರಡುವ ರಾಮಮಂದಿರಗಳ ಮುಖಾಂತರ ಆಡಳಿತ ನಡೆಯಲಿದೆ. ಪೂಜಾರಿಗಳು ಎರಡೆರೆಡು ಶಿಫ್ಟ್‌ನಂತೆ ಕೆಲಸ ನಿರ್ವಹಿಸಲಿದ್ದಾರೆ. ಪ್ರಧಾನ ಅರ್ಚಕರ ಕೆಳಗೆ ಸರಕಾರದ ಕರ್ಮಚಾರಿಗಳು ಬರುತ್ತಾರೆ, ಸರಕಾರಿ ಯಂತ್ರದಲ್ಲಿ ಯಾವ ಶೂದ್ರನು ಇರುವುದಿಲ್ಲ. ಬ್ರಾಹ್ಮಣರೇ ತುಂಬಿಕೊಂಡ ರಾಮಮಂದಿರದ ಆಡಳಿತದ ದೆಸೆಯಿಂದ ರಾಮರಾಜ್ಯ ಸ್ಥಾಪನೆಯಾಗಲಿದೆಯಂತಲ್ಲಾ, ಥೂತ್ತೇರಿ.

******

ಬಿಜೆಪಿಗಳ ಅಧಿಕೃತ ಘೋಷಣೆಯಂತಲೇ, “ನೀವು ಬಂದರೆ ಜೊತೆಯಾಗಿ, ಬಾರದಿದ್ದರೆ ನಿಮ್ಮನ್ನ ಬಿಟ್ಟು, ಅಡ್ಡಿಪಡಿಸಿದರೆ ಹತ್ತಿಕ್ಕಿ ನಾವು ರಾಮರಾಜ್ಯ ಸ್ಥಾಪನೆ ಮಾಡಿಯೇ ಮಾಡುತ್ತೇವೆ” ಎಂಬುದು ಈಗಾಗಲೇ ಜಾರಿಯಾಗಿದೆಯಂತಲ್ಲಾ. “ನೀವು ಬಾರದಿದ್ದರೆ, ನಿಮ್ಮನ್ನ ಬಿಟ್ಟೇ ನಾವು ರಾಮರಾಜ್ಯ ಕಟ್ಟುತ್ತೇವೆ” ಎಂಬುದು ಎಡೂರಪ್ಪ, ಈಶ್ವರಪ್ಪ, ಜಗದೀಶ್ ಶೆಟ್ಟರ್ ವಿಷಯದಲ್ಲಿ ನಿಜವಾಗಿದೆಯಲ್ಲಾ. ಈ ಬಗ್ಗೆ ಬಿಜೆಪಿ ಬುದ್ದಿಜೀವಿ ಮಂಜನನ್ನ ಕೇಳಿದರೆ ನೋಡಿ ಅದ್ವಾನಿಗಿಂತ ಇವರಾರೂ ದೊಡ್ಡವರಲ್ಲಾ, ಅದ್ವಾನಿ ಬಾಬ್ರಿ ಮಸೀದಿ ಕೆಡವಿಸಿದ ಲೀಡ್ರು, ಅದಕ್ಕೂ ಮೊದಲು ರಾಮನನ್ನ ರಸ್ತೆಗೆ ತಂದು ಮೆರವಣಿಗೆ ಮಾಡಿದರು. ನಂತರ ಇಟ್ಟಿಗೆ ಮೆರವಣಿಗೆ ಮಾಡಿದರು, ರಾಮ ಪಾದುಕ ಮೆರವಣಿಗೆ ಮಾಡಿದರು, ಜ್ಯೋತಿ ಮೆರವಣಿಗೆ ಮಾಡಿದರು, ಈ ದೇಶದಲ್ಲಿ ಬಿಜೆಪಿ ಆವರಿಸಿಕೊಳ್ಳುವಂತೆ ಮಾಡಿದರು. ಆದರೆ ಜಿನ್ನಾ ಸೆಕ್ಯುಲರಾಗಿದ್ದ ಅನ್ನ ಮಾತಿಗೆ ಅದ್ವಾನಿಯನ್ನೇ ಆಚೆಗೆ ಎಸೆದ ಬಿಜೆಪಿಗೆ ಈಶ್ವರ, ಎಡೂರಪ್ಪ, ಶೆಟ್ಟರ್ ಯಾವ ಲೆಕ್ಕಾರಿ. ಅಂಗೇ ನೋಡ್ತಾಯಿರಿ “ಬಿಜೆಪಿನ ಇನ್ನೂ ಹ್ಯಂಗೆ ಚೊಕ್ಕ ಮಾಡ್ತಿವಿ” ಅಂತ ಜಾರುತ್ತಿದ್ದ ಖಾಕಿ ಚೆಡ್ಡಿಯನ್ನ ಮೇಲೆಳೆದುಕೊಂಡು ಹೋದನಲ್ಲಾ, ಥೂತ್ತೇರಿ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...