Homeಕರ್ನಾಟಕಹಿಂಗಿದ್ದ ನಮ್ಮ ರಾಮಣ್ಣ-11; ’ನಾಗೇಗೌಡ್ರ ದೊಡ್ಡಮನೆ ನೋಡಬೇಕು ಕಲ’ ಅಂದ-ಅವುನ ಕಲ್ಪನೆಯ ದೊಡ್ಡಮನೆ ಅಲ್ಲಿರಲಿಲ್ಲ

ಹಿಂಗಿದ್ದ ನಮ್ಮ ರಾಮಣ್ಣ-11; ’ನಾಗೇಗೌಡ್ರ ದೊಡ್ಡಮನೆ ನೋಡಬೇಕು ಕಲ’ ಅಂದ-ಅವುನ ಕಲ್ಪನೆಯ ದೊಡ್ಡಮನೆ ಅಲ್ಲಿರಲಿಲ್ಲ

- Advertisement -
- Advertisement -

ಅಂದಿನ ಆರೋಗ್ಯ ಮಂತ್ರಿ ಮಾರ್ಗದ ಮಲ್ಲಪ್ಪನಿಗೆ ಪೀಕಲಾಟ ಸುರುವಾಗಿತ್ತು. ರಾಮಣ್ಣನ ವರ್ಗಾವಣೆಗೆ ಕೊಟ್ಟ ಮುಖ್ಯಮಂತ್ರಿ ಅರ್ಡರ್‌ನು ಊರ್ಜಿತ ಮಾಡಕ್ಕಾಗ್ದೆ ವದ್ದಾಡತಿದ್ರು. ಆಗ ನಾವು ಹೋಗಿ ಹೆಲ್ತ್ ಮಿನಿಷ್ಟ್ರ ಎದುರಿಗೆ ನಿಂತಗಂಡೊ. ಜಿ.ಮಾದೇಗೌಡ್ರು ಬೆಳ್ಳೂರಿಂದ ತಮ್ಮ ಹುಡುಗನನ್ನ ತಗದು ರಾಮಣ್ಣನ್ನ ಹಾಕಿರದ್ಕೆ ಸಿಟ್ಟಾಗಿ ಬಾಯಿಗೆ ಬಂದಂಗೆ ಜೋರು ಮಾಡಿ ತಡೆಹಿಡಿಸಿದ್ರು. ಪಾಪ ಸಾಧು ಸ್ವಭಾವದ ಮಾರ್ಗದ ಮಲ್ಲಪ್ಪನ ಪರಿಸ್ಥಿತಿ ಗೊತ್ತಾಯ್ತು. ವಾಪಸ್ ಬಂದ ನಾವು ಬಿ. ಪುಟ್ಟಸ್ವಾಮಯ್ಯನ್ನ ಕರಕಂಡೋಗಿ ಮಾರ್ಗದ ಮಲ್ಲಪ್ಪನಿಗೆ ಸಿಫಾರಸ್ ಮಾಡಿಸಿದ್ವು. ಆದ್ರೂ ಮಾದೇಗೌಡ್ರು ಅಗಾಗ್ಗೆ ಪೋನ್ ಮಾಡಿ ಧಮಕಿ ಹಾಕದು ನಿಂತಿರಲಿಲ್ಲ. ಅಂಗಾಗಿ ಪುಟ್ಟಸ್ವಾಮಯ್ಯನ ಸಿಫಾರಸ್ಸು ಕ್ಯಲಸ ಮಾಡಲಿಲ್ಲ. ಯಲ್ಲ ಜನರಲ್ ಹಾಸ್ಟಲಿಗೆ ಬಂದೊ. ಜನರಲ್ ಹಾಸ್ಟಲಲ್ಲಿ ಎಚ್.ಎನ್ ಕಲ್ಲಣ್ಣನವರಿದ್ರು. ಅವುರಾಗ ಎಮ್ಮೆಲ್ಸಿ. ತುಂಬ ಪ್ರಭಾವಿ ರಾಜಕಾರಣಿ. ಲೋಹಿಯಾವಾದಿಯಾಗಿದ್ರು. “ನಮ್ಮ ರಾಮಣ್ಣನೂ ಕೂಡ ಲೋಹಿಯಾವಾದಿ, ಅಂತವರ ವರ್ಗಾವಣೆ ಮಾಡಸಕ್ಕಾಯ್ತಾಯಿಲ್ಲ ಸಾರ್” ಅಂದೊ. ಯಾವಾಗ ಲೋಹಿಯಾ ವಿಷಯ ತಗದವೊ ಕಲ್ಲಣ್ಣನವುರು ರಾಂಗಾದ್ರು. ಆ ಕೂಡ್ಲೆ ಡೈರೆಕ್ಟರಿಗೆ ಫೋನ್‌ನಲ್ಲಿ ಜೋರು ಮಾಡಿ ಅವತ್ತೆ ವರ್ಗಾವಣೆ ಆರ್ಡರ್ ಇಶ್ಯೂ ಆಗಂಗೆ ಮಾಡಿದ್ರು. ನಮಿಗೆ ಕಲ್ಲಣ್ಣನವರ ಶಕ್ತಿ ಏನು ಅಂತ ಗೊತ್ತಾಯ್ತು. ಅಂತೂ ರಾಮಣ್ಣನಿಗೆ ಮುಖ್ಯಮಂತ್ರಿ, ಹೆಲ್ತ್ ಮಂತ್ರಿ ಮಾಡಿಸಕ್ಕಾಗದ ಕ್ಯಲಸನ ಲೋಹಿಯಾ ಹೆಸರು ಮಾಡಿಸಿದಂಗಾಯ್ತು. ಹಳೆಬೀಡು ಬುಟ್ಟು ಬೆಳ್ಳೂರು ಸೇರಿಕಂಡ.

“ರಾಮಣ್ಣ ಬೆಳ್ಳೂರಿಗೆ ಬಂದಿದ್ದು ನನಿಗೂ ಗೊತ್ತಾಯ್ತು ಕಣಣ್ಣ. ಚೋಳಸಂದ್ರದ ನಮ್ಮ ಚಿಗಪ್ಪನ ಮನಿಗೆ ಬೆಳ್ಳೂರಿಂದ ಗೌಸಣ್ಣ ಅಂತ ಬರೋರು ಅವುರು ಬೆಳ್ಳೂರ ಹೈಸ್ಕೂಲಲ್ಲಿ ಅಟೆಂಡ್ರಾಗಿದ್ರು. ಅವುರು ಬೆಳ್ಳೂರಾಸ್ಪತ್ರಿಗೆ ವಸ ಡಾಕ್ಟರು ಬಂದವುರೆ ಚಂದ್ರ. ಮಾತ್ರ ವಳ್ಳೆ ಡಾಕ್ಟರು. ಜನನ್ಯಲ್ಲ ಚನ್ನಾಗಿ ಮಾತಾಡುಸ್ತರಂತೆ ಅದೇನೊ ಕತೆ ಪತೆನೂ ಬರಿತರಂತೆ ಅಂದಿದ್ದ. ಆಗ ನಾನು ಗೌಸಣ್ಣನಿಗೆ ರಾಮಣ್ಣನ ವಿಷಯ ಹೇಳಿದ್ದೆ. ರಾಮಣ್ಣ ಬೆಳ್ಳೂರಲು ವಳ್ಳೆ ಹೆಸರು ತಗಂಡ್ರು”.

ಬೆಳ್ಳೂರಿಗೆ ರಾಮಣ್ಣ ಬಂದ ಮ್ಯಾಲೆ ತನ್ನ ಕಾಡಿಗೆ ಬಂದಂಗಾದ. ಸಂಸಾರನೂ ಕರಕಂಡು ಬಂದ. ಬೆಳ್ಳೂರು ನಮ್ಮ ತಾಲೂಕಿನಲ್ಲೇ ಕಮರ್ಷಿಯಲ್ ಪ್ಲೇಸು. ಪೇಟೆ ಅಂತರೆ ನೋಡು, ಆ ಪದ ಈ ಊರಿಗೆ ಲಗತ್ತಾಯ್ತದೆ. ಆ ಊರಲ್ಲಿ ಜೈನರು, ಸಾಬರದೇ ಕಾರುಬಾರು. ಒಕ್ಕಲಿಗರು ಕಡಮೆ. ಒಕ್ಕಲಿಗರು ರೈತಾಪಿ ಜನಾದ್ರಿಂದ ಹಳ್ಳಿಲಿರೋರು. ಸಿಟಿಲಿ ಕಡಮೆ. ಈಗ ಬತ್ತಾ ಅವುರೆ. ಈ ಜೈನರಿಗೂ ಮುಸ್ಲಿಮರಿಗೂ ಬಿಜಿನೆಸ್ ಪೈಪೋಟಿ. ಜೈನರು ಸುತ್ತಲಳ್ಳಿಗೆ ಸಾಲಕೊಟ್ಟು ವ್ಯವಹಾರ ಮಾಡಿದ್ರೆ. ಸಾಬ್ರು ಇಪ್ಪೆ ಅಳ್ಳೂ, ವಂಗೆ ಬೀಜ, ಬೇವಿನ ಬೀಜ, ಕೋಳಿ ಮೊಟ್ಟೆ, ಆಡು ಕುರಿ ಚರ್ಮ ತಗಳರು. ಊರೂರು ಸುತ್ತೋರು. ದನಕರಿಗೆ ಲಾಳ ಕಟ್ಟೊರು. ಹುಣುಸೆಹಣ್ಣು ಬಡಕಳರು. ರೈತರ ಬದುಕಲ್ಲಿ ಬ್ಯರತೋಗಿದ್ರು. ರಾಮಣ್ಣನ ಕತೆಗಳಿಗೆ ಸಾಮಗ್ರಿ ಒದಗಿಸೊ ಊರಿನಂಗಿತ್ತು ಬೆಳ್ಳೂರು. ಬಿ.ಎಂ ಶ್ರೀಕಂಠಯ್ಯನೋರ ಊರದು. ಅಲ್ಲೆ ಅತ್ರದಲ್ಲಿ ಜಿ.ಶಂ. ಪರಮಶಿವಯ್ಯನ ಊರು ಜೀರಳ್ಳಿ. ಇತ್ತಗೆ ಪಡುವುಲಾಗಿ ನಾಗೇಗೌಡ್ರ ಊರು. ಆ ಕಡಿಗೆ ಚುಂಚನಗಿರಿ ಇತ್ತು. ರಾಮಣ್ಣ ಒಂಥರ ಉಮೇದಿನಲ್ಲಿದ್ದ. ಅವುನು ಬಿಡುವು ಸಿಕ್ಕಿದ್ರೆ ನಮ್ಮೂರಿಗೂ ಬರನು. ನಮ್ಮೂರಾಗ ಭಾಳ ಚನ್ನಾಗಿತ್ತು. ಊರಿಂದ ಆ ಕಡಿಕೆ ಕ್ಯರಿತ್ತು. ಕ್ಯರೆ ಇದ್ದ ಊರು ಚನ್ನಾಗಿರತವೆ. ಕೋಡಿಬಿದ್ದ ಹಳ್ಳದ ಸಾಲು, ಕ್ಯರೆ ಅಂಚು ಇವ್ಯಲ್ಲ ನೋಡೋರ ಕಣ್ಣಿಗೆ ಚೆನ್ನಾಗಿ ಕಾಣತಿದ್ದೊ. ನಮ್ಮೂರ್‍ಯಂಗದೆ ಅಂತ ಗೊತ್ತಾಗಿದ್ದು ಎಚ್.ಎಲ್ ನಾಗೇಗೌಡ್ರು ನನ್ನೂರು ಅಂತ ಪ್ರಬಂಧ ಬರದಮ್ಯಾಲೆ. ಅದ ಓದಿಕಂಡಿದ್ದ ರಾಮಣ್ಣ ಊರು ನೋಡಕ್ಕೆ ಬತ್ತಿದ್ದ. ನಮ್ಮನಿಯೋರು ಯಾರೋ ಡಾಕ್ಟರು ಬಂದವುರೆ ಅಂತ ನಿಗಾವಯಿಸಂಗಿರಲಿಲ್ಲ. ನಮ್ಮಪ್ಪನ ಪರಿಚಯ ಆದ ಮ್ಯಾಲಂತೂ ಅವುನಿಗೆ ಅಪ್ಪನ ಪ್ರೀತಿ ಸಿಕ್ಕಿದಂಗಾಯ್ತು. ವತ್ತರೆಲೆ ಎದ್ದು ಕ್ಯರೆಕಡಿಕೋಗಿ ಬರನು. ಕ್ಯರೆ ಕೋಡಿ ಮ್ಯಾಲೆ ಬಾಳ ಹೊತ್ತು ನಿಂತಗಳನು. ಹಿನ್ನೀರಲ್ಲಿ ತೆಂಗಿನಸಾಲು ಕಾಣದು. ಅದು ಕ್ಯರೆವಳಗೂ ಕಾಣದು. ಕ್ಯರೆ ಅಕ್ಕಪಕ್ಕ ದೂರದಲ್ಲಿ ಯರಡು ಪಾಳುಬಿದ್ದ ಬಂಗ್ಲೆಗಳಿದ್ದೊ. ಅವು ಬ್ರಿಟಿಷ್ ಅಧಿಕಾರಿಗಳ ಬಂಗ್ಲೆಗಳು. ಅದರಲ್ಲಿ ತೊಂಡಳ್ಳಿ ಬಂಗ್ಲಿಲಿ ಮಾತ್ರ ನಮ್ಮವರದೆ ಒಂದು ಕುಟುಂಬ ಇತ್ತು. ಇಂಗ್ಲಿಷ್‌ನೋರು ಯಾವುದೇ ಕಟ್ಟಡ ಕಟ್ಟಿದರು ಎತ್ತರವಾದ ಜಾಗದಲ್ಲಿ ಕಟ್ಟೊರು. ರಸ್ತೆ ಅಗಲಾದ್ರು ಕಟ್ಟಡ ವಡಿಯಕ್ಕೆ ಸಿಗದಂಗೆ ಕಟ್ಟೊರು. ಅವುರು ನಮಿಗೆ ವಡದು ಚಚ್ಚಿದ್ರು ಒಂದು ಸಂಸ್ಕೃತಿ ವಿದ್ಯೆ ಕೊಟ್ಟೊದ್ರು. ಈ ನಮ್ಮ ರಾಜಕಾರಣಿಗಳ ನೋಡಿದ್ರೆ ಅವುರೆ ವಾಸಿ ಅನ್ನಂಗಾಗ್ಯದೆ. ಸ್ವಾತಂತ್ರ ಬಂದೇಟಿಗೆ ಈ ಬಂಗ್ಲೆ ಖಾಲಿ ಮಾಡಿಕಂಡೋದ್ರು. ಇಲ್ಯಲ್ಲ ತಿರುಗಾಡಿದ ರಾಮಣ್ಣ ಮನಿಗೆ ಬಂದು “ಲೇ ಕಮಲಾಕ್ಷ ನಮ್ಮೂರು ನೋಡಕ್ಕೆ ಚನ್ನಾಗ್ಯದೆ ಕಲ. ನಾನು ಏನೊ ಅನ್ನಕಂಡಿದ್ದೆ. ನಿಮ್ಮೂರಲ್ಲಿ ಸೂರ್ಯ ಮುಳಗದ ನೋಡಕ್ಕೆ ಚಂದ. ಕುಣಗಲ ಕ್ಯರೆ ತುದಿಲಿ ಚಂದ್ರ ಎದ್ದು ಬರದ ನೋಡಕ್ಕೆ ಚಂದ ಕಲ. ಅದ್ಕೆ ನಾಗೇಗೌಡ್ರು ನನ್ನೂರು ಅಂತ ಬರದಿರದು ಗೊತ್ತೇನ್ಲ” ಅಂದ. “ಚನ್ನಾಗ್ಯದೆ ಅದಕ್ಕೆ ಬರುದ್ರು ಕಣೊ” ಅಂದೆ.

“ನಿಮ್ಮೂರು ಕ್ಯರೆ ಬಂಗ್ಲೆಯಲ್ಲ ನನಿಗೂ ಚನ್ನಾಗಿ ಗೊತ್ತು ಕಣಣ್ಣ. ನಾನು ಕದಬಳ್ಳಿಲಿ ಓತ್ತಾಯಿದ್ದಾಗ ಬಂಗ್ಲಿ ಸುಬ್ಬೇಗೌಡ್ರು ಮಗನ ಜ್ವತಿಗೆ ಬತ್ತಿದ್ದೆ. ಒಂದು ಸತಿ ಕ್ಯರೆಲಿ ತೇಲತಾಯಿದ್ದ ಬಾತುಕೋಳಿ ನಮ್ಮನ್ನೋಡಿ ಹಾರ್‌ವೋದೊ. ಒಂದು ಬಾತುಕೋಳಿ ಮಾತ್ರ ಹಾರಲಿಲ್ಲ. ಅದ ಹಿಡಿಯಕ್ಕೋದೆ. ಸಿಕ್ಕದೆ ರಕ್ಕೆ ಬಡಕಂಡು ಇಡೀ ಕ್ಯರೆಲ್ಯಲ್ಲ ಓಡಾಡ್ತು. ಬಟ್ಟೆ ವಗಿತಿದ್ದ ಪಾತ್ರೆ ತ್ವಳಿತಿದ್ದ ಹೆಣ್ಣು ಮಕ್ಕಳ ಕೂಗು ಕೇಳಿ ಹುಮ್ಮಸ್ಸು ಬಂತು. ಕ್ಯರೆ ಆಳ ಗುಂಡಿ ಯಾವುದು ಗೊತ್ತಿಲ್ಲದೆಯಿದ್ರು ಓಡಾಡಿದೆ. ಕ್ಯರೆ ಹೂಳು ತುಂಬಿಕಂಡು ತಣಗೆಯಂಗಾಗಿತ್ತು. ಕಡಿಗೂ ಬಾತುಕೋಳಿ ಹಿಡಿದೆ. ಸುಬ್ಬೇಗೌಡ್ರ ತಮ್ಮನ ಮನೆಲಿ ಬಾತುಕೋಳಿ ಸಾರು ಮಾಡಿದ್ರು ಚನ್ನಾಗಿತ್ತು ಕಣಣ್ಣ”

ಓಹೊಹೋ ನೀನು ಬಲುಮನೆ ಉದಕದ ರುಚಿ ನೋಡಿದ್ದಿ ಬುಡು. ನಿನ್ನಂಥೊನಿಗೆ ಅಂತ ಅನುಭವ ವಳ್ಳೆದು. ಯಾಕಂದ್ರೆ ಅನುಭವುಕ್ಯಲ್ಲ, ಕಾರ ಮಸಾಲೆ ಹಾಕಿ ಬರಿಯೋ ಜನ ನೀವು. ರಾಮಣ್ಣನ್ನೆ ನೋಡು, ಬರೀ ಸ್ಟೆತಾಸ್ಕೊಪಿನ ಜೊತೆಲೆ ಇರಲಿಲ್ಲ. ಅವುನು ಸುತ್ತಮುತ್ತ ನೋಡಕ್ಕೆ ಹಾತೊರಿಯನು. ರಾಮಣ್ಣ ಬೆಳ್ಳೂರಿಗೆ ಬಂದು ಸೇರಿಕಂಡ ಮ್ಯಾಲೆ ನಾನು ಬೆಂಗಳೂರು ಸೇರಿಕಂಡೆ. ಅದಾಗ್ಲೆ ದೊಡ್ಡಮನೆ ನಾಗೇಗೌಡ್ರು ತಹಸೀಲ್ದಾರಾಗಿ, ಎಸಿಯಾಗಿ, ಡಿಸಿಯಾಗಿದ್ರು. ಅವುರ ವಿಷಯ ನಮಗಿಂತ ರಾಮಣ್ಣನಿಗೇ ಗೊತ್ತು. ಅವುರದೊಂದು ಪ್ರಸಂಗ ಹೇಳೋನು. ನಾಗೇಗೌಡ್ರು ಅಮಲ್ದಾರಾಗಿ ಹರಿಹರಕ್ಕೋದಾಗ ಅವುರಪ್ಪ ಲಿಂಗೇಗೌಡ್ರು ಅಮಲ್ದಾರಾಗಿದ್ರು. ನನ್ನ ಮಗ ನ್ಯಡಕಂಡು ಓಡಾಡದು ಬ್ಯಾಡ ಅಂತ ನಮ್ಮೂರಿಂದ ಒಂದು ವೆಯಿಕಲ್ ಕಳಿಸಿದರಂತೆ. ಏನು ಗೊತ್ತೆ, ವಳ್ಳೆದೊಂದು ಜ್ವತೆ ಎತ್ತುನೂ ಗಾಡಿನೂ ಕಳಿಸಿದರಂತೆ. ನಾಗೇಗೌಡ್ರು ಅಪ್ಪ ಪ್ರೀತಿಯಿಂದ ಕಳಿಸಿರೊ ವೆಯಿಕಲ್ಲಲ್ಲೆ ಯಲ್ಲಾ ಊರಿಗೂ ಹೋಯ್ತಿದ್ರಂತೆ. ಅವುರೆ ಗಾಡಿ ಕೊಳ್ಳೂಡ್ಕಂಡು ಎತ್ತಿಗ್ ಉಲ್ಲಾಕಿ ಅಲ್ಲಿ ಕ್ಯಲಸ ಮಾಡಿಕಳೋರಂತೆ. ಅಮ್ಯಾಲೆ ಅಲ್ಲೆ ಮೂರು ಕಲ್ಲೂಡಿ ಅಡಿಗೆನೂ ಮಾಡಿಕಳರಂತೆ. ರಾಮಣ್ಣ ಹೇಳಿದ ಈ ಕತೆ ನಿಜ ಅಂತ ಆಮ್ಯಾಲೆ ಗೊತ್ತಾಯ್ತು.

ಗೌಡ್ರು ನಮ್ಮೂರಿಗೆ ಬಂದ್ರೆ ನ್ಯಾಯ ಪಂಚಾಯ್ತಿಕೆ ಮಾಡೋರು. ವತ್ತರಲೆ ಎದ್ದು ಆರೂಡ್ಕಂಡೋಗಿ ತಾವೂ ಉಳೊರು. ಅಥೆ ವಡಿಯೋರು. ಕುಂಟೆ ವಡಿಯೋರು. ಡಿಸಿಯಾದ್ರು ಅದರ ಮುಂದೆ ರೈತಾಪಿ ಕ್ಯಲಸನೆ ಶ್ರೇಷ್ಠ ಅನ್ನರು. ಅವುರು ನಮ್ಮೂರೋರೆ ಆದ್ರೂ ರಾಮಣ್ಣ ಅವುರ ವಿಷಯ ನಮಿಗೇಳನು. ಅವುರ ಓದಿಕೊಂಡಿದ್ದೊನಲವೆ. ಒಂದು ಸತಿ “ನಾಗೇಗೌಡ್ರ ದೊಡ್ಡಮನೆ ನೋಡಬೇಕು ಕಲ” ಅಂದ. ಅವುನ ಕಲ್ಪನೆಯ ದೊಡ್ಡಮನೆ ಅಲ್ಲಿರಲಿಲ್ಲ. ಅವುರ ಕಾದಂಬರಿ ಓದಿ ಭರ್ಜರಿ ಮನೆ ಕಲ್ಪಿಸಿಕೊಂಡು ಬಂದಿದ್ದ. ಅದು ಹೆಗ್ಗಾಳವಂತೆಕೆಲಿ ಮೆರೆದ ಮನಿಯಾಗಿತ್ತೆ ಹೊರತು ಕುಪ್ಪಳಿಲಿರೊ ಕುವೆಂಪು ಮನೆ ತರ ಇರಲಿಲ್ಲ. ಕುವೆಂಪು ಬರದದ್ಯಲ್ಲ ಅಲ್ಲಿತ್ತು. ಆದ್ರೆ ನಾಗೇಗೌಡ್ರು ಬರದಿದ್ದು ಇಲ್ಲಿರದೆ, ಬರಿ ಜನಿದ್ರು. ಅದೂ ಯಲ್ಲ ಪಾಲ್ತಗಂಡು ಮನೆನೂ ಹಂಚಗಂಡು ಸಣ್ಣಸಣ್ಣ ಮನೆಲಿದ್ರು.

ರಾಮಣ್ಣ ನಮ್ಮ ಕಡಿಕೆ ಬಂದ್ರೆ ಜನಗಳಿಗೆ ತಿಳಿವಳಿಕೆ ಹೇಳೋನು. ಆರೋಗ್ಯ ಯಂಗೆ ಕಾಪಾಡಿಕಬೇಕು ಅಂತ ಹೇಳದರ ಜೊತೆಗೆ ಕುಟುಂಬದ ಸಮಸ್ಯೆಗಳನೂ ಬಗೆಹರಸೋನು. ಖಾಸಗಿ ಬದುಕಿನಲ್ಲಿ ಎಷ್ಟೇ ತಮಾಸಿ ಮಾಡಿದ್ರೂ ರೋಗಿಗಳೆದ್ರಿಗೆ ಕಾಯಿಲೆನ ಬೇರುಸಹಿತ ಕಿತ್ತಾಕೊನಂಗೆ ಗಂಭೀರವಾಗಿರೋನು. ಹಳ್ಳಿ ಜನಗಳ ಕಾಯಿಲೆ ಜಗಳದಿಂದ್ಲೆ ಬತ್ತವೆ. ಜಗಳ ನಿಲ್ಲಿಸಿದ್ರೆ ಯಲ್ಲ ಸರಿಹೋಯ್ತದೆ ಅಂತಿದ್ದ.

ಚುಂಚನಗಿರಿ ಹತ್ರದಲ್ಲೇ ಇದ್ರು ಅಲ್ಯಲ್ಲ ಹೋದನಲ್ಲ. ಆದ್ರೆ ಒಂದು ಸತಿ ಯಾವೊ ಬೆಟ್ಟಕ್ಕೆ ಬಂದವು ಜೇನುಗುಡಿಗೆ ಕಲ್ಲುಬೀರಿ ಬುಟ್ಟವೆ. ತಗೊ ಜೇನುಳಗಳ್ಯಲ್ಲ ಭಕ್ತಾದಿಗಳ ಮ್ಯಾಲೆ ದಾಳಿ ಮಾಡಿಬುಟ್ಟವೆ. ಪಾಪ ಬೈರವುನೂ ಏನೂ ಮಾಡಕ್ಕಾಗಲಿಲ್ಲ. ರಾಮಣ್ಣ ಜೇನುಗಳದ ದಾಳಿಗೆ ತುತ್ತಾದೋರಿಗ್ಯಲ್ಲ ಫಸ್ಟ್‌ಏಡ್ ಮಾಡಿದ್ದ. ಆಗ ಚುಂಚನಗಿರಿ ಸ್ವಾಮಿಗಳು ಭಕ್ತಾದಿಗಳ ಬಗ್ಗೆ ವಹಿಸಿದ ಕಾಳಜಿ ನೋಡಿದ್ದ. ಒಬ್ಬ ಧರ್ಮಗುರು ವೈದ್ಯನ ಜೊತೆ ಕೈ ಜೋಡಿಸಿ ಭಕ್ತಾದಿಗಳ ಉಷಾರು ಮಾಡಿದ್ರು. ಅದನ್ನ ಆತ ಮೆಚ್ಚಿಗಂಡು ಮಾತಾಡಿದ್ದ. ಬರದೂ ಇದ್ದ. ಅದನ್ನ ಓದಿದ ಕೆಲ ಬುದ್ಧಿಜೀವಿಗಳು ರಾಮಣ್ಣ ವೈದ್ಯನಾಗಿದ್ದು ಜನಾಂಗದ ಸ್ವಾಮಿಗಳ ಪರ ಅವುನೆ ಅಂತ ಬರುದ್ರು. ಮಾತಾಡಿಕಂಡ್ರು. ರಾಮಣ್ಣ ಯಾವತ್ತು ಮಠದತ್ರ ಹೋದೊನಲ್ಲ. ಅವುನು ಕುವೆಂಪು ವಿಚಾರಧಾರೆಗೊಳಪಟ್ಟೊನು. ಆದ್ರು ವೈದ್ಯನಾಗಿ ತನ್ನ ಕರ್ತವ್ಯ ಮಾಡಿದ್ನೂ ಆಡಿಕಂಡೋರ ಬಗ್ಗೆ ಅವುನಿಗೆ ಸಿಟ್ಟು ಬಂದಿತ್ತು. ತಾನು ಸರಿಯಿದ್ದದ್ದರಿಂದ ಹೆಚ್ಚು ತಲೆ ಕೆಡಿಸ್ಕಳಕ್ಕೋಗಲಿಲ್ಲ. ಸ್ವಾಮಿಗಳೂ ಕೂಡ ಟೀಕಾಕಾರರಿಗೆ “ಇಲ್ಲಿ ಬಂದು ಅನಾಥ ಮಕ್ಕಳಿಗೆ ವಿದ್ಯೆಬುದ್ಧಿ ಕೊಡದನ್ನ ನೋಡಿ ಮಾತಾಡಿ” ಅಂದಿದ್ರು. ಅದನ್ಯಲ್ಲ ನೋಡೆ ರಾಮಣ್ಣ ಸ್ವಾಮಿಜಿನ ಸಮರ್ಥಿಸಿಕೊಂಡು ಮಾತಾಡಿದ್ದ.

ಹೇಳ್ದವ್ರು: ಡಾ. ಕಮಲಾಕ್ಷಣ್ಣ
ಬರ್ಕಂಡವ್ರು: ಬಿ ಚಂದ್ರೇಗೌಡ


ಇದನ್ನೂ ಓದಿ: ಹಿಂಗಿದ್ದ ನಮ್ಮ ರಾಮಣ್ಣ-9; “ಉರುಬಾಡು ಮಾಡಿಕಂಡು ತಿಂತಿವಿಕಲ, ಬೇಕಿದ್ರೆ ಬಾ”

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...