Homeಮುಖಪುಟಸುಪ್ರೀಂಕೋರ್ಟ್: ಬದಲಾವಣೆಯ ಗಾಳಿ ಜಸ್ಟಿಸ್ ಯು.ಯು ಲಲಿತ್

ಸುಪ್ರೀಂಕೋರ್ಟ್: ಬದಲಾವಣೆಯ ಗಾಳಿ ಜಸ್ಟಿಸ್ ಯು.ಯು ಲಲಿತ್

- Advertisement -
- Advertisement -

ನಮ್ಮ ದೇಶದ ಸಂವಿಧಾನದ 130ನೇ ಪರಿಚ್ಛೇದದ ಅಡಿಯಲ್ಲಿ ದೇಶದ ಸರ್ವೋಚ್ಚ ನ್ಯಾಯಾಲಯ/ಸುಪ್ರೀಂಕೋರ್ಟಿನ ಸ್ಥಾಪನೆ ಆಗಿದ್ದು, ಅದು ದೇಶದ ಸಂವಿಧಾನದ ಮತ್ತು ನಾಗರಿಕರ ಹಕ್ಕುಗಳ ರಕ್ಷಕ ಎಂದು ಶಾಸ್ತ್ರೀಯವಾದ ವಿದ್ಯಾಭ್ಯಾಸ ಮಾಡಿದ ಎಲ್ಲರಿಗೂ ಗೊತ್ತು. ಇನ್ನೂ ಸ್ವಲ್ಪ ಜಾಸ್ತಿ ಓದಿದವರಿಗೆ ಈಗ ಎಷ್ಟು ಜನ ನ್ಯಾಯಮೂರ್ತಿಗಳಾಗಿದ್ದಾರೆ, ಯಾರು ಮುಖ್ಯ ನ್ಯಾಯಮೂರ್ತಿ ಮತ್ತು ಕೆಲವೊಂದು ಐತಿಹಾಸಿಕ ತೀರ್ಪುಗಳ ಬಗ್ಗೆ ಗೊತ್ತಿರಬಹುದು. ಆದರೆ ಸುಪ್ರೀಂಕೋರ್ಟ್ ಎದುರಿಸುತ್ತಿರುವ ಅಡ್ಡಿ ಆತಂಕಗಳು, ಅದರ ಎದುರಿಗೆ ಇರುವ ಸವಾಲುಗಳು, ಅವುಗಳನ್ನು ಎದುರಿಸಲು ಸಾಧ್ಯವಾಗದೆ ಪೇಚಾಡಿದ ನ್ಯಾಯಮೂರ್ತಿಗಳು, ಯಶಸ್ವಿಯಾಗಿ ಎದುರಿಸಿದವರು ಈ ಎಲ್ಲ ವಿವರಣೆಗಳನ್ನು ಅರಿತಿರುವವರು ಬಹಳ ವಿರಳ. ದೇಶದ ಮೂಲೆಮೂಲೆಗಳ ಜನರಿಗೆ ಸುಪ್ರೀಂಕೋರ್ಟು ಎಷ್ಟು ದೂರವೋ, ಅದರ ಒಳಹೋಗುಗಳನ್ನು ತಿಳಿದುಕೊಳ್ಳುವುದು ಅದಕ್ಕಿಂತಲೂ ದೂರ.

ಐತಿಹಾಸಿಕ ತೀರ್ಪುಗಳನ್ನು ನೀಡುವ ಸುಪ್ರೀಂಕೋರ್ಟ್ ಕೆಲವೊಮ್ಮೆ ಐತಿಹಾಸಿಕ ಘಟನೆಗಳಿಗೂ ಸಾಕ್ಷಿಯಾಗಿದೆ. 2018ರಲ್ಲಿ ಮೊಟ್ಟಮೊದಲ ಬಾರಿಗೆ ಸುಪ್ರೀಂಕೋರ್ಟಿನ 5 ಜನ ನ್ಯಾಯಮೂರ್ತಿಗಳು ಪತ್ರಿಕಾಗೋಷ್ಠಿಯನ್ನು ಕರೆದು ಅಂದಿನ ಮುಖ್ಯನ್ಯಾಯಮೂರ್ತಿ ಜಸ್ಟಿಸ್ ದೀಪಕ್ ಮಿಶ್ರಾ ಅವರ ಕಾರ್ಯವೈಖರಿಯನ್ನು ಟೀಕಿಸಿದರು. ಇದು ಹಿಂದೆ ಎಂದೂ ನಡೆಯದ ಘಟನೆಯಾಗಿತ್ತು. ಆದರೆ, ಅದೇ ಐವರು ನ್ಯಾಯಮೂರ್ತಿಗಳಲ್ಲಿ ಒಬ್ಬರಾದ ಜಸ್ಟಿಸ್ ರಂಜನ್ ಗೊಗೋಯ್ ಮುಂದೆ ಮುಖ್ಯ ನ್ಯಾಯಮೂರ್ತಿಗಳಾಗಿ ನಿವೃತ್ತಿಯ ನಂತರ ರಾಜ್ಯಸಭೆಯ ಸದಸ್ಯರಾಗಿ ಆಯ್ಕೆಯಾದರು. ನ್ಯಾಯಮೂರ್ತಿಗಳ ಈ ನಡೆಗಳು ಅನೇಕ ಚರ್ಚೆಗೆ ಎಡೆಮಾಡಿಕೊಟ್ಟವು.

ಜಸ್ಟಿಸ್ ದೀಪಕ್ ಮಿಶ್ರಾ

ಸುಪ್ರೀಂಕೋರ್ಟಿನ ಮುಂದೆ ತೀರ್ಪಿಗಾಗಿ ಕಾದಿರುವ ಸಾವಿರಾರು ಅರ್ಜಿಗಳು, ಇತ್ಯರ್ಥವಾಗಲು ಬೇಕಾಗುವ ಕಾಲಾವಕಾಶ ಮುಂತಾದವು ಜನರಿಗೆ ಭರವಸೆ ನೀಡುವಲ್ಲಿ ವಿಫಲವಾಗುತ್ತವೆ ಎನಿಸುವ ಹತಾಶ ವಾತಾವರಣ ಉಂಟಾಗಿತ್ತು. ಆದರೆ ಇತ್ತೀಚೆಗೆ ಜಸ್ಟಿಸ್ ಯು.ಯು ಲಲಿತ್ ಅವರು ಮುಖ್ಯನ್ಯಾಯಮೂರ್ತಿಯಾಗಿ ಅಧಿಕಾರ ಸ್ವೀಕರಿಸಿದ ನಂತರ ತೆಗೆದುಕೊಂಡ ಕೆಲವು ನಿರ್ಧಾರಗಳು ಜನರಲ್ಲಿ ಭರವಸೆಯನ್ನು ಮತ್ತೆ ಹುಟ್ಟಿಸುವಂತೆ ಕಾಣುತ್ತಿದೆ.

ಜಸ್ಟಿಸ್ ಯು.ಯು ಲಲಿತ್ 1983ರಿಂದ 1985ರವರೆಗೆ ಬಾಂಬೆ ಕೈಕೋರ್ಟಿನಲ್ಲಿ ಪ್ರಾಕ್ಟಿಸ್ ಮಾಡಿ ನಂತರ ದೆಹಲಿಗೆ ಬಂದವರು. 2014ರಲ್ಲಿ ಸುಪ್ರೀಂಕೋರ್ಟಿನ ನ್ಯಾಯಮೂರ್ತಿಯಾಗಿ ನೇಮಕಗೊಂಡರು. ಅಲ್ಲಿಂದ ಇಲ್ಲಿಯವರೆಗೂ ಅನೇಕ ಮಹತ್ವದ ತೀರ್ಪುಗಳನ್ನು ನೀಡಿದ್ದಾರೆ. ಆಗಸ್ಟ್ 27, 2022ರಂದು ಮುಖ್ಯನ್ಯಾಯಮೂರ್ತಿಯಾಗಿ ನೇಮಕಗೊಂಡ ಕೂಡಲೇ ಜಸ್ಟಿಸ್ ಯು.ಯು ಲಲಿತ್ ಒಂದು ಪೂರ್ಣ ಪ್ರಮಾಣದ ಕೋರ್ಟಿನ ಸಭೆಯನ್ನು ನಡೆಸಿ ಎಲ್ಲಾ ನ್ಯಾಯಮೂರ್ತಿಗಳ ಅಭಿಪ್ರಾಯಗಳನ್ನೂ ಸಂಗ್ರಹಿಸಿದರು. ಸುಮಾರು ಮೂರುವರೆ ಗಂಟೆಗಳವರೆಗೆ ನಡೆದ ಈ ಸಭೆ ಅತ್ಯಂತ ಪರಿಣಾಮಕಾರಿಯಾಗಿತ್ತು. ಈ ಸಭೆಯ ನಂತರ ಜಸ್ಟಿಸ್ ಲಲಿತ್ ತೆಗೆದುಕೊಂಡೆ ಕೆಲವು ನಿರ್ಧಾರಗಳು ಬಹುಶಃ ಇಂದಿನ ಸಮಯದ ಅಗತ್ಯಗಳನ್ನು ಒತ್ತಿ ಹೇಳುತ್ತವೆ.

ಜಸ್ಟಿಸ್ ಲಲಿತ್ ತೆಗೆದುಕೊಂಡ ನಿರ್ಧಾರಗಳಲ್ಲಿ ಮುಖ್ಯವಾದದ್ದು ಬಹಳ ದಿನಗಳಿಂದ ಲಿಸ್ಟ್ ಆಗದೆ ಉಳಿದಿದ್ದ ಕೇಸ್‌ಗಳು ಚಾಲ್ತಿಗೆ ಬರುವಂತೆ ವ್ಯವಸ್ಥೆ ಮಾಡಿದ್ದು. ಆದರೆ ಅತ್ಯಂತ ಮಹತ್ವದ ನಿರ್ಧಾರವೆಂದರೆ ’ಸಂವಿಧಾನ ಪೀಠ’ಗಳನ್ನು ರಚಿಸಿದ್ದು.

* 5 ಜನ ನ್ಯಾಯಮೂರ್ತಿಗಳನ್ನು ಒಳಗೊಂಡ ಸಂವಿಧಾನ ಪೀಠಗಳು ಆಗಸ್ಟ್ 29ರಿಂದ ಪ್ರಾರಂಭವಾಗಿ 25 ಅರ್ಜಿಗಳನ್ನು ಇತ್ಯರ್ಥಗೊಳಿಸುವ ನಿರ್ಧಾರ ಕೈಗೊಳ್ಳಲಾಗಿದೆ. ಈ ಸಂವಿಧಾನ ಪೀಠಗಳಲ್ಲಿ ಹಾಲಿ ಇರುವ ಎಲ್ಲಾ ನ್ಯಾಯಮೂರ್ತಿಗಳಿಗೂ ಅವಕಾಶ ಇರುವಂತೆ ವ್ಯವಸ್ಥೆ ಕಲ್ಪಿಸಲಾಗಿದೆ.

* ಈ ಪ್ರಸಕ್ತ ಪೀಠಗಳಲ್ಲದೆ ಒಂದು ಪೀಠ ವರ್ಷಪೂರ್ತಿ ಅಸ್ತಿತ್ವದಲ್ಲಿದ್ದು ನಿರಂತರವಾಗಿ ಕಾರ್ಯನಿರ್ವಹಿಸುವ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ. ಇದರಲ್ಲೇನು ವಿಶೇಷ ಎಂದೆನಿಸಬಹುದು; ಆದರೆ ಸಂವಿಧಾನ ಪೀಠಗಳ ಮಹತ್ವ ಏನೆಂದು ತಿಳಿದರೆ ಸ್ಪಷ್ಟವಾಗುತ್ತದೆ.

ಸಂವಿಧಾನದ 145(3)ನೇ ಪರಿಚ್ಛೇದದ ಅನ್ವಯ ಸಂವಿಧಾನದ ಅರ್ಥ ವಿವರಣೆಯಲ್ಲಿ ತೊಂದರೆಯಾದಾಗ, ಇಲ್ಲವೆ ತೊಡಕುಗಳು ಬಂದಾಗ 5,7 ಮತ್ತು 9 ಜನ ನ್ಯಾಯಮೂರ್ತಿಗಳನ್ನು ಒಳಗೊಂಡ ಪೀಠಗಳನ್ನು ರಚಿಸಬಹುದು. ಅಂದರೆ ನ್ಯಾಯಾಲಯಗಳ ಎದುರು ತೀರ್ಪಿಗಾಗಿ ಕಾಯುತ್ತಿರುವ ಸಾವಿರಾರು ಕೇಸುಗಳ ತೀರ್ಮಾನ ಶೀಘ್ರಗತಿಯಲ್ಲಿ ಆಗುವ ಭರವಸೆ ಈಗ ಮೂಡಿದೆ.

ಕಳೆದ ಎಷ್ಟೋ ವರ್ಷಗಳಿಂದ ಯಾವುದೇ ಪೀಠಗಳು ರಚನೆ ಆಗದೆ ದೇಶದಲ್ಲಿ ಅತ್ಯಂತ ಮಹತ್ವದ್ದು ಆದರೂ ತೀರ್ಪು ಕಾಣದೆ ನೆನೆಗುದಿಗೆ ಬಿದ್ದಿರುವ ಪ್ರಕರಣಗಳು ಬೇಗ ಬಗೆಹರಿಯಬಹುದು.

* 1960ರಲ್ಲಿ ಸುಮಾರು 1434 ಸಂವಿಧಾನ ಪೀಠಗಳು ರಚನೆಯಾಗಿದ್ದರೆ 2021ರಲ್ಲಿ ಕೇವಲ 2 ಪೀಠಗಳು ರಚನೆ ಆಗಿದ್ದವು. ಇದರಿಂದ ಕೋರ್ಟಿನ ಕಾರ್ಯವೈಖರಿಯನ್ನು ಅರ್ಥಮಾಡಿಕೊಳ್ಳಬಹುದು.

ರಂಜನ್ ಗೊಗೋಯ್

* ಇಂದಿಗೆ ಅಂದಾಜು 54 ಪ್ರಮುಖ ಪ್ರಕರಣಗಳು ಮತ್ತು 439ರಷ್ಟು ಅವುಗಳಿಗೆ ಸಂಬಂಧಿಸಿದ ಪ್ರಕರಣಗಳು ಸಂವಿಧಾನ ಪೀಠಗಳು ಮುಂದೆ ಇತ್ಯರ್ಥಗೊಳ್ಳಲು ಕಾಯುತ್ತಿವೆ.

* ಸುಪ್ರೀಂಕೋರ್ಟಿನ ಮುಂದೆ ಇರುವ ಒಟ್ಟು ಪ್ರಕರಣಗಳು 2017ರಲ್ಲಿ 55 ಸಾವಿರದಷ್ಟು ಇದ್ದರೆ ಈಗ ಸುಮಾರು 71 ಸಾವಿರಕ್ಕೆ ಏರಿವೆ. ಈ ಎಲ್ಲ ಪ್ರಕರಣಗಳೂ ಒಂದು ತಾರ್ಕಿಕ ಅಂತ್ಯ ಕಾಣಬೇಕೆಂದರೆ ಜಸ್ಟಿಸ್ ಲಲಿತ್ ಅವರು ತೆಗೆದುಕೊಂಡಂತಹ ನಿರ್ಧಾರಗಳನ್ನು ಮುಂದೆಬರುವ ಎಲ್ಲಾ ನ್ಯಾಯಮೂರ್ತಿಗಳು ತೆಗೆದುಕೊಳ್ಳಬೇಕು ಮತ್ತು ಪರ್ಯಾಯ ನ್ಯಾಯದಾನ ವ್ಯವಸ್ಥೆಯನ್ನು ಕಲ್ಪಿಸಬೇಕು.

ಜಸ್ಟಿಸ್ ಲಲಿತ್ ಅವರ ಅಧಿಕಾರ ಅವಧಿ ಕೇವಲ 3 ತಿಂಗಳಿಗಷ್ಟೆ ಇರುವುದು ಒಂದು ಬೇಸರದ ಸಂಗತಿ. ಕೆಲವೊಮ್ಮೆ ನ್ಯಾಯಮೂರ್ತಿಗಳ ಅಧಿಕಾರದ ಅವಧಿ ಅವರ ಕಾರ್ಯಕ್ಕೆ ಸಾಲುವುದಿಲ್ಲ ಎನಿಸಬಹುದು. ಆದರೆ ನಿಜವಾದ ಕೆಲಸ ಮಾಡುವ ಮನಸ್ಸಿದ್ದರೆ ಅವಧಿ ತೊಡಕಾಗುವುದಿಲ್ಲ ಎಂದು ಜಸ್ಟಿಸ್ ಲಲಿತ್ ತೋರಿಸಿಕೊಟ್ಟಿದ್ದಾರೆ.

ಜಸ್ಟಿಸ್ ಲಲಿತ್ ಅಧಿಕಾರ ಸ್ವೀಕರಿಸಿದ ದಿನದಿಂದಲೂ ಕೆಲವೊಂದು ಮೊದಲಗಳನ್ನು ಮಾಡಿದ್ದಾರೆ. ಬೆಳಿಗ್ಗೆ 9:30ಕ್ಕೆ ಕಾರ್ಯ ಪ್ರಾರಂಭಿಸಿ “ನಮ್ಮ ಮಕ್ಕಳು 7ಕ್ಕೆ ಶಾಲೆಗೆ ಹೋಗುವುದಾದರೆ ನಮಗೇಕೆ ಸಾಧ್ಯವಿಲ್ಲ” ಎಂದು ಕೇಳಿದ್ದರು.

ಸಂವಿಧಾನ ಪೀಠಗಳ ಮಹತ್ವ

ಸಂವಿಧಾನವನ್ನು ಅರ್ಥೈಸುವ ಮತ್ತು ವಿವರಿಸುವ ಸಂದರ್ಭ ಬಂದಾಗ ಪೀಠಗಳು ಆ ಕಾರ್ಯವನ್ನು ನಿರ್ವಹಿಸುತ್ತವೆ.

ಕೆಲವೊಮ್ಮೆ ರಾಷ್ಟ್ರಪತಿಗಳು ಸುಪ್ರೀಂಕೋರ್ಟಿನ ಅಭಿಪ್ರಾಯ ಕೇಳಿದಾಗ ಸಂವಿಧಾನದ 143ನೇ ಪರಿಚ್ಛೇದದ ಕೆಳಗೆ ಪೀಠಗಳು ಸಲಹೆ ನೀಡುತ್ತವೆ.

ಇಬ್ಬರು ಅಥವಾ ಮೂವರು ನ್ಯಾಯಮೂರ್ತಿಗಳು ನೀಡಿರುವ ತೀರ್ಪುಗಳಿಗೆ ಭವಿಷ್ಯದಲ್ಲಿ ವಿರುದ್ಧ ಅಭಿಪ್ರಾಯಗಳು ಕೇಳಿ ಬಂದಾಗ ಅಲ್ಲಿನ ತೊಡಕು ನಿವಾರಿಸಲು ಮತ್ತು ನಂತರ ಬಂದಂತಹ ಪೀಠಗಳು ಮೊದಲಿನ ತೀರ್ಮಾನಗಳಿಗೆ ವ್ಯತಿರಿಕ್ತ ಅಭಿಪ್ರಾಯ ವ್ಯಕ್ತಪಡಿಸಿದಾಗ ಅಂತಹ ತೊಡಕುಗಳನ್ನು ನಿವಾರಿಸಲು ಸಂವಿಧಾನ ಪೀಠಗಳು ಅವಶ್ಯವಾಗಿರುತ್ತವೆ.

ಈ ಎಲ್ಲ ಹಿನ್ನೆಲೆಯಲ್ಲಿ ನೋಡಿದಾಗ ಜಸ್ಟಿಸ್ ಲಲಿತ್ ಕೈಗೊಂಡ ನಿರ್ಧಾರ ಬಹಳ ಮಹತ್ವದ್ದಾಗಿದೆ ಎಂಬುದು ಅರ್ಥವಾಗುತ್ತದೆ.

ಅಧಿಕಾರ ಸ್ವೀಕರಿಸಿದ ಕೂಡಲೇ ಸಂವಿಧಾನದ 103ನೇ ತಿದ್ದುಪಡಿಯಾದ ಆರ್ಥಿಕವಾಗಿ ಹಿಂದುಳಿದ ವರ್ಗಕ್ಕೆ ನೀಡಿದ ಮೀಸಲಾತಿಯನ್ನು ಪ್ರಶ್ನಿಸಿ ಸಲ್ಲಿಸಿದ್ದ ಪ್ರಕರಣವನ್ನು ಕೈಗೆತ್ತಿಕೊಂಡು ದಿನದಿಂದ ದಿನಕ್ಕೆ ವಿಚಾರಣೆ ನಡೆಸುತ್ತಿದ್ದಾರೆ.

ಬಾಂಬೆ ಹೈಕೋರ್ಟ್ ನೀಡಿದ್ದ ಅಪಾರವಾದ ಟೀಕೆಗೆ ಒಳಗಾಗಿದ್ದ ಚರ್ಮಕ್ಕೆ ಚರ್ಮ ತಾಗಿದ್ದರೆ ಮಾತ್ರ ಲೈಂಗಿಕ ಶೋಷಣೆ ಅಥವಾ ಅತ್ಯಾಚಾರ ಎಂದಿದ್ದ ತೀರ್ಪನ್ನು ತಿರಸ್ಕರಿಸಿ “ಮಗುವಿನ ದೇಹದ ಯಾವುದೇ ಅಂಗವನ್ನು ಲೈಂಗಿಕ ಶೋಷಣೆಯ ಉದ್ದೇಶದಿಂದ ಮುಟ್ಟಿದರೂ ಅದು POSCO ಕಾಯ್ದೆಯ ಅಡಿ ಅಪರಾಧ” ಎಂದು ಹೇಳಿ ಇಲ್ಲಿ “ಉದ್ದೇಶ ಮುಖ್ಯ ಕ್ರಿಯೆ ಅಲ್ಲ” ಎಂದು ಬಲವಾದ ತೀರ್ಪು ನೀಡಿದರು.

ನ್ಯಾಯಾಲಯ ಮತ್ತು ನ್ಯಾಯಮೂರ್ತಿಗಳು ಒಂದು ದೇಶದ ನ್ಯಾಯವ್ಯವಸ್ಥೆಯಲ್ಲಿ ಸ್ವತಂತ್ರವಾಗಿ, ಸರ್ಕಾರ ಅಥವಾ ಒತ್ತಡ ಗುಂಪುಗಳ ಪ್ರಭಾವಕ್ಕೆ ಒಳಗಾಗದೆ ಕೆಲಸ ಮಾಡಿದರೆ ಮಾತ್ರ ನ್ಯಾಯದಾನ ವ್ಯವಸ್ಥೆಯ ಮೇಲೆ ಜನ ಇಟ್ಟಿರುವ ನಂಬಿಕೆಯನ್ನು ಉಳಿಸಿಕೊಳ್ಳಬಹುದು. ಮುಂದಿನ ದಿನಗಳಲ್ಲಿ ಬರುವ ನ್ಯಾಯಮೂರ್ತಿಗಳೂ ಇದನ್ನು ಅನುಸರಿಸಬಹುದು ಎಂಬ ಭರವಸೆ ಇಟ್ಟುಕೊಳ್ಳಬಹುದು.

ರಾಜಲಕ್ಷ್ಮಿ ಅಂಕಲಗಿ

ರಾಜಲಕ್ಷ್ಮಿ ಅಂಕಲಗಿ
ಹೈಕೋರ್ಟ್ ವಕೀಲರು, ಹಲವು ಜನಪರ ಹೋರಾಟಗಳಲ್ಲಿ ಸಕ್ರಿಯವಾಗಿ ಭಾಗಿಯಾಗಿದ್ದಾರೆ. ಕಾನೂನು ವಿಷಯಗಳ ಮೇಲೆ ಹಲವು ಲೇಖನಗಳನ್ನು ಪ್ರಕಟಿಸಿದ್ದಾರೆ.


ಇದನ್ನೂ ಓದಿ: ಆರ್‌ಎಸ್‌ಎಸ್ ಮುಖ್ಯಸ್ಥ ಭಾಗವತ್‌ ತೇಲಿಬಿಟ್ಟ ಜನಸಂಖ್ಯೆ ಹೆಚ್ಚಳ, ಮತಾಂತರ ಕತೆಯ ವಾಸ್ತವವೇನು?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ತೆಲಂಗಾಣ ಜಾತಿ ಸಮೀಕ್ಷೆ: ಜನರ ಆರ್ಥಿಕ ಭವಿಷ್ಯ ನಿರ್ಧರಿಸುತ್ತಿರುವ ಜಾತಿ ಹಿನ್ನೆಲೆ

ತೆಲಂಗಾಣದಲ್ಲಿರುವ ಎಲ್ಲಾ ಪರಿಶಿಷ್ಟ ಜಾತಿ ಕಾರ್ಮಿಕರಲ್ಲಿ ಸುಮಾರು ಅರ್ಧದಷ್ಟು ಜನರು ದಿನಗೂಲಿ ಕಾರ್ಮಿಕರು. ಆದರೆ, ಸಾಮಾನ್ಯ ಜಾತಿ ಕಾರ್ಮಿಕರಲ್ಲಿ 10 ರಲ್ಲಿ ಒಬ್ಬರು ಮಾತ್ರ ದಿನಗೂಲಿ ಮಾಡುತ್ತಾರೆ. ಬ್ರಾಹ್ಮಣರು ಎಸ್‌ಟಿ ಸಮುದಾಯದ ಕೋಲಂಗಿಂತ...

ಲೆಬನಾನ್‌ನಲ್ಲಿ ಯೇಸುವಿನ ಪ್ರತಿಮೆ ಧ್ವಂಸ ಮಾಡಿದ ಇಸ್ರೇಲಿ ಸೈನಿಕ; ಫೋಟೋ ವೈರಲ್

ಇಸ್ರೇಲಿ ಸೈನಿಕನೊಬ್ಬ ದಕ್ಷಿಣ ಲೆಬನಾನ್‌ನಲ್ಲಿ ಸ್ಲೆಡ್ಜ್ ಹ್ಯಾಮರ್‌ನಿಂದ ಯೇಸುಕ್ರಿಸ್ತನ ಪ್ರತಿಮೆಯನ್ನು ಧ್ವಂಸ ಮಾಡುತ್ತಿರುವುದನ್ನು ತೋರಿಸುವ ವೈರಲ್ ಚಿತ್ರದ ಸತ್ಯಾಸತ್ಯತೆಯನ್ನು ಇಸ್ರೇಲ್ ರಕ್ಷಣಾ ಪಡೆಗಳು (ಐಡಿಎಫ್‌) ದೃಢಪಡಿಸಿದ್ದು, ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಎಕ್ಸ್ ನಲ್ಲಿ 6.8...

TCS ನಾಸಿಕ್ ಪ್ರಕರಣ : ಮಾಧ್ಯಮಗಳ ಸುಳ್ಳು ಮತ್ತು ಕಂಪನಿ ಹೇಳಿದ ಸತ್ಯ

ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್‌) ಕಂಪನಿಯ ಬಿಪಿಒ ಘಟಕದಲ್ಲಿ ನಡೆದಿದೆ ಎನ್ನಲಾದ ಪ್ರಕರಣವೊಂದು ಪ್ರಸ್ತುತ ಇಡೀ ದೇಶದಾದ್ಯಂತ ಭಾರೀ ಚರ್ಚೆಯ ವಿಷಯವಾಗಿದೆ. ಈ ಪ್ರಕರಣದಲ್ಲಿ ಮುಖ್ಯವಾಗಿ ಲೈಂಗಿಕ ಕಿರುಕುಳ ಮತ್ತು...

‘ಅಮೆರಿಕದೊಂದಿಗೆ ಮಾತುಕತೆ ಇಲ್ಲ..’; ಇಸ್ಲಾಮಾಬಾದ್‌ ಸಭೆಯಲ್ಲಿ ಇರಾನ್ ಭಾಗವಹಿಸುವುದು ಅನುಮಾನ

ಯುನೈಟೆಡ್ ಸ್ಟೇಟ್ಸ್ (ಅಮೆರಿಕ) ಜೊತೆ ಹೊಸ ಸುತ್ತಿನ ಮಾತುಕತೆಗಾಗಿ ಇಸ್ಲಾಮಾಬಾದ್‌ಗೆ ಸಂಧಾನಕಾರರನ್ನು ಕಳುಹಿಸುವ ಯಾವುದೇ ಯೋಜನೆ ಇಲ್ಲ ಎಂದು ಇರಾನ್ ಸೂಚಿಸಿದೆ. ಕದನ ವಿರಾಮ ಮುಕ್ತಾಯಗೊಳ್ಳಲು 48 ಗಂಟೆಗಳ ಮೊದಲು ಯುದ್ಧ ನಿರತ...

ಇರಾನ್, ಇಸ್ರೇಲ್-ಅಮೆರಿಕ ಯುದ್ಧ : ವಿನಾಶದ ನಡುವೆಯೂ ಲಾಭ ಪಡೆದವರು ಯಾರು?

ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್‌) 2026ರ ಜಾಗತಿಕ ಬೆಳವಣಿಗೆಯ ಅಂದಾಜನ್ನು ಶೇಕಡ 3.3 ರಿಂದ 3.1ಕ್ಕೆ ಇಳಿಸಿದೆ. ಇರಾನ್ ವಿರುದ್ಧದ ಅಮೆರಿಕ-ಇಸ್ರೇಲ್ ಯುದ್ಧದ ಪರಿಣಾಮ ಮತ್ತು ಹಾರ್ಮುಝ್ ಜಲಸಂಧಿಯನ್ನು ಮುಚ್ಚಿರುವುದು ವಿಶ್ವ ಆರ್ಥಿಕತೆಯ...

ಕ್ಷೇತ್ರ ಮರುವಿಂಗಡಣೆ ವಿರುದ್ಧ ದಕ್ಷಿಣದ ರಾಜ್ಯಗಳ ಪಟ್ಟು: ಭವಿಷ್ಯದ ಮರುಚಿಂತನೆಗೆ ಇದುವೇ ಸೂಕ್ತ ಕಾಲ

ಲೋಕಸಭೆಯಲ್ಲಿ 131 ನೇ ಸಾಂವಿಧಾನಿಕ ತಿದ್ದುಪಡಿ ಮಸೂದೆಯನ್ನು ತಿರಸ್ಕರಿಸಿರುವುದು ಭಾರತದ ಪ್ರಜಾಪ್ರಭುತ್ವ ಪಥದಲ್ಲಿ ಮಹತ್ವದ ಕ್ಷಣವಾಗಿದೆ. ಇದು ಕೇವಲ ಶಾಸಕಾಂಗದ ಹಿನ್ನಡೆಯನ್ನು ಮಾತ್ರವಲ್ಲ, ಒಕ್ಕೂಟ ವ್ಯವಸ್ಥೆಯ ಸೂಕ್ಷ್ಮ ಸಮತೋಲನವನ್ನು ಹಾಳುಮಾಡುವ ಅಪಾಯವನ್ನುಂಟುಮಾಡುವ ಪ್ರಸ್ತಾಪಗಳ...

ಮೋದಿ ಸರ್ಕಾರದ ಯೂಟರ್ನ್ : ಜನಸಂಖ್ಯಾ ಸ್ಫೋಟದ ಕಳವಳದಿಂದ ಹೆಚ್ಚು ಜನಸಂಖ್ಯೆಯ ರಾಜ್ಯಗಳಿಗೆ ಗಿಫ್ಟ್ ಕೊಡುವವರೆಗೆ

ಭಾರತದ ಜನಸಂಖ್ಯೆಯ ಬಗ್ಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಅವರ ಸರ್ಕಾರ ನಿಜವಾಗಿಯೂ ಬಹಳ ಕಳವಳ ವ್ಯಕ್ತಪಡಿಸುತ್ತಿದೆ– ಅಥವಾ ಅವರು ನಮಗೆ ಆ ರೀತಿ ನಂಬುವಂತೆ ಮಾಡಿದ್ದಾರೆ. ಏಕೆಂದರೆ... 2019ರ ಸ್ವಾತಂತ್ರ್ಯ ದಿನಾಚರಣೆಯಂದು ಮೋದಿಯವರು,...

ದೇಶವನ್ನುದ್ದೇಶಿಸಿ ಮೋದಿ ಭಾಷಣ : ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆ

ಕ್ಷೇತ್ರ ಮರುವಿಂಗಡನೆಗೆ ಉದ್ದೇಶಿಸಿದ್ದ ಸಂವಿಧಾನದ 131ನೇ ತಿದ್ದುಪಡಿ ಮಸೂದೆಗೆ ಲೋಕಸಭೆಯಲ್ಲಿ ಸೋಲಾದ ಬೆನ್ನಲ್ಲೇ ಶನಿವಾರ (ಏ.18) ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಪ್ರತಿಪಕ್ಷಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ಸಂಸತ್ತಿನಲ್ಲಿ ವಿರೋಧ...

ಫ್ಯಾಕ್ಟ್‌ಚೆಕ್ : ಅತ್ಯಾಚಾರ ಅಪರಾಧಿ ಪರ ವಕೀಲೆಗೆ ಟಿಎಂಸಿಯಿಂದ ರಾಜ್ಯಸಭೆ ಸೀಟ್; ಬಿಜೆಪಿ ಆರೋಪದ ಸತ್ಯಾಸತ್ಯತೆ ಏನು?

ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಗೆ ಪಾಣಿಹತಿ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿರುವ ಆರ್‌ಜಿ ಕರ್‌ ಸಂತ್ರಸ್ತೆಯ ತಾಯಿ ಮತ್ತು ವಕೀಲೆ ಹಾಗೂ ತೃಣಮೂಲ ಕಾಂಗ್ರೆಸ್ (ಟಿಎಂಸಿ) ರಾಜ್ಯಸಭಾ ಸದಸ್ಯೆ ಮೇನಕಾ ಗುರುಸ್ವಾಮಿ ಅವರ ಎಐ-ರಚಿತ...

ತಾರತಮ್ಯ ಮುಕ್ತ ಕ್ಯಾಂಪಸ್ ನಿರ್ಮಾಣದತ್ತ ಮಹತ್ವದ ಹೆಜ್ಜೆ; ‘ರೋಹಿತ್ ವೇಮುಲ ಮಸೂದೆ’ಗೆ ಸಚಿವ ಸಂಪುಟ ಅನುಮೋದನೆ

ಕರ್ನಾಟಕ ಸರ್ಕಾರದ ಸಚಿವ ಸಂಪುಟ ಗುರುವಾರ (ಏ.16) ದಂದು ಕರ್ನಾಟಕ ರೋಹಿತ್ ವೇಮುಲ (ಹೊರಗಿಡುವಿಕೆ ಅಥವಾ ಅನ್ಯಾಯ ತಡೆಗಟ್ಟುವಿಕೆ) (ಶಿಕ್ಷಣ ಮತ್ತು ಘನತೆಯ ಹಕ್ಕು) ಮಸೂದೆ’ಗೆ ಅನುಮೋದನೆ ನೀಡಿದೆ. ಹೈದರಾಬಾದ್‌ನ ಕೆಂದ್ರೀಯ ವಿಶ್ವವಿದ್ಯಾಲಯದಲ್ಲಿ...