Homeದಲಿತ್ ಫೈಲ್ಸ್ತಮಿಳು ಸಿನಿಮಾಗಳು ಐತಿಹಾಸಿಕ ಪ್ರತಿರೋಧ ತೋರಿವೆ: ಕೋಟಗಾನಹಳ್ಳಿ ರಾಮಯ್ಯ

ತಮಿಳು ಸಿನಿಮಾಗಳು ಐತಿಹಾಸಿಕ ಪ್ರತಿರೋಧ ತೋರಿವೆ: ಕೋಟಗಾನಹಳ್ಳಿ ರಾಮಯ್ಯ

- Advertisement -
- Advertisement -

“ತಮಿಳು ಚಿತ್ರಗಳು ಸಮಕಾಲೀನ ಜಗತ್ತಿನಲ್ಲಿ ಐತಿಹಾಸಿಕ ಪ್ರತಿರೋಧ ತೋರಿವೆ” ಎಂದು ಚಿಂತಕ, ದಸಂಸ ಸಂಸ್ಥಾಪಕ ಸದಸ್ಯರಾದ ಕೋಟಗಾನಹಳ್ಳಿ ರಾಮಯ್ಯ ಹೇಳಿದ್ದಾರೆ.

ತಮಿಳಿನ ಖ್ಯಾತ ನಿರ್ದೇಶಕ ಪ.ರಂಜಿತ್‌ ಸಕ್ರಿಯರಾಗಿರುವ ನೀಲಂ ಸಂಘಟನೆ ವತಿಯಿಂದ ದಲಿತ್‌ ಇತಿಹಾಸ ತಿಂಗಳ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ವನಂ ಆರ್ಟ್ ಫೆಸ್ಟಿವಲ್‌ನಲ್ಲಿ ಪಾಲ್ಗೊಂಡು ಅವರು ಮಾತನಾಡಿದ್ದಾರೆ.

ನಿರ್ದೇಶಕರಾದ ಪ.ರಂಜಿತ್‌, ಮಾರಿ ಸೆಲ್ವರಾಜ್‌, ವೆಟ್ರಿಮಾರನ್‌ ಸೇರಿದಂತೆ ಹಲವು ನಿರ್ದೇಶಕರು ಅವಕಾಶಗಳನ್ನು ಸೃಷ್ಟಿಸಿದ್ದಾರೆ. ಯಶಸ್ಸು ಪಡೆದಿದ್ದಾರೆ. ನೀಲಂ ಸಂಸ್ಥೆ ಸಾಹಸ ಮೆರೆದಿದೆ. ಬದ್ಧತೆ ಇರುವ ಸಾಕಷ್ಟು ಯುವ ತಾರೆಗಳು ಮಿಂಚಿದ್ದಾರೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

ಮುಖ್ಯವಾಹಿನಿ ಚಿತ್ರಕಥೆ ಬರೆಹಗಾರ ಹಲವು ವಿಚಿತ್ರ ಎಡರು ತೊಡರುಗಳನ್ನು ಕಾಣುತ್ತಾನೆ. ಐದು ಸಾವಿರ ಸಂಚಿಕೆಯನ್ನು ಕಂಡ, ಉದಯ ಟಿ.ವಿ.ಯಲ್ಲಿ ಪ್ರಸಾರವಾಗುತ್ತಿದ್ದ ‘ಸಂಕ್ರಾಂತಿ’ ಮೆಗಾ ಧಾರಾವಾಹಿಗೆ ನಾನು ಬರೆಯುತ್ತಿದ್ದೆ. ಅದೊಂದು ಗ್ರಾಮೀಣ ಮಹಾಕಾವ್ಯ. ಹೆಚ್ಚಿನ ಟಿ.ಆರ್‌.ಪಿ.ಯೂ ಇತ್ತು. ದಲಿತ ಜೀವನ ಮತ್ತು ಬದುಕಿನ ದೃಷ್ಟಿಕೋನವನ್ನು ಅದು ಒಳಗೊಂಡಿತ್ತು. ಬೇರೊಂದು ಟಿವಿಯಿಂದ ನನಗೆ ಮತ್ತೊಂದು ಅವಕಾಶ ಬಂತು. ಅದಕ್ಕೂ ಬರೆದೆ. ಆದರೆ ಚಾನೆಲ್‌ನ ಕ್ರಿಯೆಟಿವ್ ಹೆಡ್‌ ನಿರ್ದೇಶಕನಲ್ಲಿ ಮಾತನಾಡುತ್ತಾ- ಯಾಕೆ ಅತಿಹೆಚ್ಚು ದಲಿತ ಪಾತ್ರಗಳು ಈ ಧಾರವಾಹಿಯಲ್ಲಿವೆ ಎಂದು ಕೇಳಿದ್ದರು. ಅವರ ಮುಖವನ್ನು ಯಾರು ನೋಡುತ್ತಾರೆ? ಆದರೆ ಈ ಐತಿಹಾಸಿಕ ಸಂಗತಿಯನ್ನು ಪ.ರಂಜಿತ್ ಸಹೋದರ ಬದಲಿಸಿದ್ದಾರೆ. ಎಲ್ಲರೂ ಈಗ ನೋಡುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ದಲಿತರು ಹೆಚ್ಚು ಯಾಕಿದ್ದಾರೆಂಬುದನ್ನು ಡೈರೆಕ್ಷರ್‌ ಸಮರ್ಥಿಸಿದ್ದರು. ಜಾಮೀನ್ದಾರರ ಕಥೆಯಲ್ಲಿ ದಲಿತ ಪಾತ್ರಗಳು ಅನಿವಾರ್ಯ ಎಂದು ತಿಳಿಸಿದ್ದರು. ಕ್ಯಾಮೆರಾವನ್ನು ಮನೆಯಿಂದ ಹೊರಗೆ ಬಳಸದಂತೆ ಕ್ರಿಯೆಟಿವ್‌ ಹೆಡ್‌ ಸೂಚಿಸಿದ್ದರು. ನಾನು ಅದನ್ನು ಪ್ರತಿಭಟಿಸಿ, ಆ ಪ್ರೊಜೆಕ್ಟ್‌ನಿಂದ ಹೊರಬಂದೆ. ಮಾಧ್ಯಮಗಳು, ತಂತ್ರಜ್ಞಾನ ತನ್ನಷ್ಟಕ್ಕೆ ತಾನೇ ಹೊರಗುಳಿದಿವೆ. ಸಮಕಾಲೀನ ಜಗತ್ತಿನಲ್ಲಿ ಪ್ರತಿರೋಧವನ್ನು ಒಡ್ಡಿದ ಕಾರಣಕ್ಕೆ ತಮಿಳು ಚಿತ್ರಗಳು ಮುಖ್ಯವಾಗಿವೆ ಎಂದು ತಿಳಿಸಿದ್ದಾರೆ.

ಬಾಲಿವುಡ್‌ನತ್ತ ನೋಡಿದರೆ ಅಲ್ಲಿ ಕಪ್ಪು ಪ್ರಾತಿನಿಧ್ಯ ತುಂಬಾ ಕಡಿಮೆ. ಐದು ದಶಕಗಳ ಪ್ರಯತ್ನದ ಬಳಿಕ ಡೊಮಿನೇಟ್‌ ಮಾಡುತ್ತಿದ್ದೇವೆ. ಸಿನಿಮಾ ಅಷ್ಟೇ ಅಲ್ಲ ಸಂಗೀತ, ಸಾಹಿತ್ಯ, ರಂಗಭೂಮಿ, ಕ್ರೀಡೆ ಯಾವುದರಿಂದಲೂ ದೂರ ಇಡಲು ಸಾಧ್ಯವಿಲ್ಲ. ಗುರುತಿಸಿಕೊಳ್ಳುವಿಕೆಯ ರಾಜಕಾರಣ ಬ್ರಹ್ಮಾಂಡ ಪ್ರವೇಶಕ್ಕೆ ತೆರೆದ ಬಾಗಿಲು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಇದನ್ನೂ ಓದಿರಿ: ನಟಿ ಮಂಜು ವಾರಿಯರ್‌ ಜೀವಕ್ಕೆ ಅಪಾಯವಿದೆ: ನಿರ್ದೇಶಕ ಸನಲ್‌ಕುಮಾರ್‌ ಆರೋಪ

ಫ್ಯಾಸಿಸಂ ಕೇವಲ ಗಾಳಿಯಲ್ಲಿ ಇಲ್ಲ. ಅದು ಬೇರುಗಳಲ್ಲಿದೆ. ಪ್ರಜಾಪ್ರಭುತ್ವಕ್ಕೆ ವಿರುದ್ಧವಾಗಿರುವ ನಾರ್ಸಿಸ್ಟ್‌‌ ಐಡಿಯಾಲಜಿಯಂತೆಯೇ ಹಿಂದುತ್ವ ರಾಜಕೀಯ ಸಿದ್ಧಾಂತ ಎಂದು 1940ರಲ್ಲೇ ಬಾಬಾ ಸಾಹೇಬರು ಬಹಳ ಸ್ಪಷ್ಟವಾಗಿ ಹೇಳಿದ್ದಾರೆಂದು ಎಚ್ಚರಿಸಿದರು.

ನೀಲಂ ಸಂಸ್ಥೆಯ ಕುರಿತು ಮೆಚ್ಚುಗೆ ಮಾತನಾಡಿದ ಅವರು, “ನೀಲಂ ಎಂಬುದು ಕೇವಲ ಬಣ್ಣವಲ್ಲ- ಅದು ಹೆಮ್ಮ ಮತ್ತು ಮರುಹುಟ್ಟು” ಎಂದು ಬಣ್ಣಿಸಿದರು. ‘ನನ್ನಜ್ಜ’ ಮತ್ತು ‘ಪ್ರಿಯ ಅಂಬೇಡ್ಕರ್’ ಕವನವನ್ನು ವಾಚಿಸುವ ಮೂಲಕ ದಲಿತ ಅಸ್ಮಿತೆಯನ್ನು ಧ್ವನಿಸಿದರು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...