Homeಮುಖಪುಟಇದು ಅಸಲಿ ಮತ್ತು ನಕಲಿ ಚೌಕಿದಾರರ ನಡುವಿನ ಕದನ: ಸಂದರ್ಶನದಲ್ಲಿ ತೇಜ್ ಬಹದ್ದೂರ್ ಯಾದವ್

ಇದು ಅಸಲಿ ಮತ್ತು ನಕಲಿ ಚೌಕಿದಾರರ ನಡುವಿನ ಕದನ: ಸಂದರ್ಶನದಲ್ಲಿ ತೇಜ್ ಬಹದ್ದೂರ್ ಯಾದವ್

- Advertisement -
- Advertisement -

ಸೇನೆಯಲ್ಲಿದ್ದುಕೊಂಡು ಬಂಡಾಯದ ಕಹಳೆ ಊದಿದವರು ಸೀಮಾ ಸುರಕ್ಷ ಪಡೆಯ ತೇಜ್ ಬಹಾದ್ದೂರ್ ಯಾದವ್. ಒಂದು ವರ್ಷದ ಹಿಂದೆ ಬಿಎಸ್‍ಎಫ್ ನಲ್ಲಿ ಜವಾನರೊಂದಿಗೆ ಹೇಗೆ ವರ್ತಿಸಲಾಗುತ್ತಿದೆ, ಅವರಿಗೆ ಮೂಲಸೌಕರ್ಯಗಳ ಬಗ್ಗೆ, ಅವರಿಗೆ ನೀಡುವ ಊಟ ವಸತಿಯ ಬಗ್ಗೆ ಪ್ರಶ್ನೆಗಳನ್ನು ಎತ್ತಿದ್ದರು. ಪ್ರಶ್ನೆ ಎತ್ತಿದ ನಂತರ ಅವರನ್ನು ಸೇವೆಯಿಂದ ವಜಾಗೊಳಿಸಲಾಗಿತ್ತು. ಇಂದು ತೇಜ್ ಬಹಾದ್ದೂರ್ ವಾರಣಾಸಿಯ ಲೋಕಸಭೆ ಕ್ಷೇತ್ರದಿಂದ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ವಿರುದ್ದ ಲೋಕಸಭೆಗೆ ಸ್ಪರ್ಧಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಬಿಬಿಸಿ ಹಿಂದಿ ಮಾಡಿದ ಸಂದರ್ಶನದ ಕನ್ನಡ ಅನುವಾದವನ್ನು ಇಲ್ಲಿದೆ.

ಪ್ರಶ್ನೆ – ಚುನಾವಣೆಗೆ ಏಕೆ ನಿಲ್ಲುತಿದ್ದೀರಿ? ನಿಮ್ಮ ಊರು ಹರಿಯಾಣದಲ್ಲಿದೆ, ವಾರಣಾಸಿಯಿಂದ ಏಕೆ ಸ್ಪರ್ಧಿಸುತ್ತಿದ್ದೀರಿ?
ಉತ್ತರ – ಮೊದಲನೇದಾಗಿ, ನಾನೊಬ್ಬ ಭಾರತೀಯ, ಯಾವ ಕ್ಷೇತ್ರದಿಂದಲೂ ಸ್ಪರ್ಧಿಸಬಹುದು. ಹಾಗೂ ವಾರಣಾಸಿ ಒಂದು ಪವಿತ್ರ ಕ್ಷೇತ್ರವಾಗಿದೆ. ಇದಕ್ಕೆ ಒಂದು ದೊಡ್ಡ ಇತಿಹಾಸವಿದೆ. ನಾನು ಕಾಶಿ ವಿಶ್ವನಾಥನ ಆಶಿರ್ವಾದದೊಂದಿಗೆ ಚೌಕಿದಾರ ಎಂದು ಹೇಳಿಕೊಳ್ಳುತ್ತಿರುವ ನಕಲಿ ಚೌಕಿದಾರನನ್ನು ಇಲ್ಲಿಂದ ಓಡಿಸಲು ಚುನಾವಣೆಗೆ ಸ್ಪರ್ಧಿಸುತ್ತಿದ್ದೇನೆ. ಈ ನಕಲಿ ಚೌಕಿದಾರರು ಸೇನೆಯನ್ನು ರಾಜಕೀಯಕ್ಕಾಗಿ ಬಳಸಿಕೊಳ್ಳುತ್ತಿದ್ದಾರೆ. ನಮ್ಮ ಸೇನೆಯ ಹೆಸರನ್ನು ಮಣ್ಣುಪಾಲು ಮಾಡಿದ್ದಾರೆ ಈ ನಕಲಿ ಚೌಕಿದಾರರು. ಇಂದು ವಿದೇಶಗಳಲ್ಲೂ ನಮ್ಮ ಸೇನೆಯ ಹೆಸರು ಕೆಡುತ್ತಿದೆ ಇವರಿಂದಾಗಿ. ಎಲ್ಲಾ ಸೈನಿಕರ ನೈತಿಕ ಶಕ್ತಿ ಕುಸಿದುಹೋಗಿದೆ. ದೇಶದ ಎಲ್ಲಾ ಸೈನಿಕರು ಸಿಟ್ಟಿಗೆದ್ದಿದ್ದಾರೆ ಏಕೆಂದರೆ, ಈ ಸರ್ಜಿಕಲ್ ಸ್ಟ್ರೈಕ್, ಏರ್ಸ್ಟ್ರೈಕ್, ಇದೇನು ಮೊದಲ ಬಾರಿ ಮಾಡಿಲ್ಲ. ಇವುಗಳನ್ನು ಸೈನ್ಯ ಮುಂಚೆಯಿಂದಲೂ ಮಾಡುತ್ತಲೇ ಬಂದಿದೆ. ಆದರೆ ಇವುಗಳ ಮೇಲೆ ರಾಜಕಾರಣ ಮಾಡುತ್ತಿರುವುದು ಮೊದಲಬಾರಿ. ಹಾಗಾಗಿ ನಾವು ನಿರ್ಧರಿಸಿದ್ದೇನೆಂದರೆ, ನಮ್ಮ ದೇಶವನ್ನು ಉಳಿಸಬೇಕೆಂದರೆ, ಇಲ್ಲಿಯವರೆಗೆ ಗಡಿಗಳಲ್ಲಿ ನಿಂತು ದೇಶದ ರಕ್ಷಣೆ ಮಾಡುತ್ತ ಬಂದಿದ್ದೇವೆ, ಈಗ ಸಂಸತ್ತಿಗೆ ಹೋಗಿ ನಮ್ಮ ಮಾತುಗಳನ್ನು ಮಂಡಿಸಬೇಕಿದೆ, ಹಾಗಾಗದಿದ್ದರೆ ದೇಶ ಉಳಿಯುವುದಿಲ್ಲ.

ವರದಿಗಾರ- ಗಡಿ ರಕ್ಷಣಾ ಪಡೆಯ ತೇಜ್ ಬಹಾದ್ದೂರ್ ಯಾದವ್ ಅವರಿಗೆ ಇನ್ನಿತರ ಸೈನಿಕರ ಬೆಂಬಲ ದೊರಕಿದೆ. ಅವರೆಲ್ಲ ತೇಜ್ ಬಹಾದ್ದೂರ ಅವರ ಈ ಮಿಷನ್‍ನಲ್ಲಿ ಜೊತೆಯಾಗಿದ್ದಾರೆ; ಅವರ ಪ್ರಚಾರದಲ್ಲಿ ಸಹಕರಿಸುತ್ತಿದ್ದಾರೆ. ಈಗ ಬೆಜೆಪಿ ಮತ್ತು ಪ್ರಧಾನಮಂತ್ರಿ ಹೇಳುತ್ತಿರುವುದೇನೆಂದರೆ, ಇಂದು ಭಾರತದ ಪ್ರಧಾನಿ ಮೋದಿಯವರಿಂದಾಗಿ, ಇತರ ದೇಶಗಳು, ಶತ್ರುದೇಶಗಳು ಹೆದರುತ್ತಿವೆ, ಪ್ರಧಾನಿ ಮೋದಿಯವರಿಂದಾಗಿ ವೈರಿ ದೇಶಗಳ ಕಣ್ಣಲ್ಲಿ ಕಣ್ಣಿಟ್ಟು ನೋಡುವಂತಾಗಿದೆ. ಇದರ ಬಗ್ಗೆ ನೀವೇನು ಹೇಳುತ್ತೀರ?
ತೇಜ್ ಬಹಾದ್ದೂರ್ ಯಾದವ್- ಇಂತಹದ್ದೇನೂ ಆಗಿಲ್ಲ, ಅವರು ಹೇಳಿದ ಹಾಗಿದ್ದರೆ ಫುಲ್ವಾಮಾ ದಾಳಿ ಯಾಕೆ ಆಯಿತು? ಅವರು ಹೇಳಿದ್ದು ನಿಜವಿದ್ದರೆ ಆ ದಾಳಿ ಆಗಬಾರದಿತ್ತು. ಇಂತಹ ದೊಡ್ಡ ಹಲ್ಲೆ ಇದಕ್ಕೂ ಮುಂಚೆ ಆಗಿರಲಿಲ್ಲ. ಇವರದ್ದು ಅಷ್ಟೇ ಭಯ ಇತ್ತಾದರೆ ಫುಲ್ವಾಮಾ ದಾಳಿಯನ್ನೇಕೆ ತಡೆಯಲಿಲ್ಲ? ಒಂದು ವೇಳೆ ಇವರು ಹೇಳಿದ ಹಾಗೆಯೇ ಇದ್ದರೆ ಈ ದಾಳಿ ಒಂದು ಪಿತೂರಿ ಆಗಿರಬಹುದಲ್ಲವೇ? ಇದನ್ನೇನು ಇವರೇ ಮಾಡಿಸಿದ್ದಾ, ಹಾಗೇನಾದರೂ ಇದೆಯಾ?

ವರದಿಗಾರ- ಅಲ್ಲ, ಇಂತಹ ಆರೋಪಗಳು ಬಂದಿವೆ ಆದರೆ ಇವಕ್ಕೆ ಯಾವುದೇ ಸಾಕ್ಷಿಗಳು ಕಂಡಿಲ್ಲ.
ತೇಜ್ ಬಹಾದ್ದೂರ್ ಯಾದವ್ – ಹೌದು ಸಾಕ್ಷಾಧಾರಗಳು ಇಲ್ಲ, ಆದರೆ ಅದರ ತನಿಖೆ ಏಕೆ ಮಾಡಿಸುತ್ತಿಲ್ಲ ಇವರು? ಅಲ್ಲಿಯ ರಾಜ್ಯಪಾಲರೇ ಸ್ವತಃ ಹೇಳುತ್ತಿದ್ದಾರೆ ತಮ್ಮಿಂದ ಲೋಪವಾಗಿದೆ ಎಂದು, ಲೋಪವಾಗಿದ್ದಲ್ಲಿ ದಾಳಿಯ ಮಾಹಿತಿ ಮೊದಲೇ ಸಿಕ್ಕಿತ್ತು ಎಂದು ಹೇಳುತ್ತಾರೆ, ಮಾಹಿತಿ ಸಿಕ್ಕ ಮೇಲೂ ಏನು ಮಾಡಿದರು? ಇದಕ್ಕೆ ಜವಾಬ್ದಾರರಾದ, ಇವರಿಗೆ ತುಂಬಾ ಹತ್ತಿರದವರಾದ ಅಜಿತ್ ದೋವಾಲ್ ಅವರಗೆ ಏಕೆ
ಪ್ರಶ್ನೆ ಕೇಳುತ್ತಿಲ್ಲ? ಮಾಹಿತಿ ಸಿಕ್ಕ ಮೇಲೂ ಇಷ್ಟು ದೊಡ್ಡ ದಾಳಿ ಏಕಾಯಿತು?

ವರದಿಗಾರ- ನಿಮ್ಮ ಪ್ರಚಾರದ ಕರಪತ್ರಗಳಲ್ಲಿ ಚೌಕಿದಾರರ ಬಗ್ಗೆ ಬರೆಯಲಾಗಿದೆ; ಅಸಲಿ ಚೌಕಿದಾರ ಯಾರು, ನಕಲಿ ಚೌಕಿದಾರ್ ಯಾರು ಎನ್ನುವ ಪ್ರಶ್ನೆ ಇದೆ. ಹಾಗಾದರೆ ಅಸಲಿ ಚೌಕಿದಾರ ಯಾರು ಮತ್ತು ನಕಲಿ ಯಾರು?
ತೇಜ್ ಬಹಾದ್ದೂರ್ ಯಾದವ್ – ನೋಡಿ ಇಷ್ಟು ವರ್ಷಗಳ ತನಕ ಗಡಿಗಳ ರಕ್ಷಣೆ ಮಾಡುತ್ತ ಬಂದಿದ್ದೇವೆ, ನಾವು ನಿಜವಾದ ಚೌಕಿದಾರರು. ಅವರು ತಮ್ಮನ್ನು ತಾವು ಚೌಕಿದಾರ ಎಂದು ಕರೆದುಕೊಳ್ಳುತ್ತಿದ್ದಾರೆ ಆದರೆ, ರಾಫೇಲ್‍ನ ಕಡತಗಳ ಕಳ್ಳತನ ಆಯಿತು, ನೀರವ್ ಮೋದಿ ಓಡಿಹೋದರು, ಮತ್ತು ಅನೇಕ ಜನ ಓಡಿ ಹೋದರು. ಇವರೆಂಥ ಚೌಕಿದಾರರು, ಯಾರ ಚೌಕಿದಾರಿಕೆ ಮಾಡುತ್ತಿದ್ದಾರೆ?

ವರದಿಗಾರ- ಆದರೆ ನೀವು ಚುನಾವಣೆಯ ದಾರಿಯನ್ನೇ ಏಕೆ ಆಯ್ಕೆ ಮಾಡಿದಿರಿ?
ತೇಜ್ ಬಹಾದ್ದೂರ್ ಯಾದವ್ – ಬೇರೆ ಯಾವುದೇ ದಾರಿ ಇದ್ದೇ ಇಲ್ಲ

ವರದಿಗಾರ – ನ್ಯಾಯಾಲಯದ ದಾರಿ ಏಕೆ ಆಯ್ಕೆ ಮಾಡಲಿಲ್ಲ
ತೇಜ್ ಬಹಾದ್ದೂರ್ ಯಾದವ್ – ನ್ಯಾಯಾಂಗದ ದಾರಿಯಲ್ಲಿ ನಮಗೆ ನ್ಯಾಯ ಸಿಗಲೇ ಇಲ್ಲ. ನ್ಯಾಯಾಂಗದ ದುರ್ಭಾಗ್ಯ ನೋಡಿ, ಸುಪ್ರೀಮ್ ಕೋರ್ಟಿನ ನಾಲ್ಕು ನ್ಯಾಯಾಧೀಶರು ಪತ್ರಿಕಾಗೋಷ್ಠಿ ನಡೆಸುತ್ತಾರೆ. ಮುಂಚೆ ಯಾವಾಗಾದರೂ ಆಗಿತ್ತಾ ಹೀಗೆ? ಇವರು(ಪ್ರಧಾನಿ) ಯಾರ ಮಾತನ್ನು ಕೇಳುತ್ತಾರೆ? ಇದು ಹಿಟ್ಲರ್‍ಶಾಹಿ ಆಳ್ವಿಕೆ ಆಗಿದೆ. ಈಗ ನೋಡಿ ರಾಫೇಲ್ ವಿಷಯ ಕೋರ್ಟಿಗೆ ಬಂದೋಡನೇ ಉಚ್ಚ ನ್ಯಾಯಾಧೀಶರನ್ನು ಯಾವುದೋ ಹಗರಣದಲ್ಲಿ ಸಿಲುಕಿಸುತ್ತಿದ್ದಾರೆ.

ಇದನ್ನೂ ಓದಿ: ಮೋದಿ ವಿರುದ್ಧ ಸ್ಪರ್ಧಿಸಲು ಮಾಜಿ ಯೋಧ ತೇಜ್ ಬಹದ್ದೂರ್ ಯಾದವ್‍ಗೆ ಟಿಕೆಟ್ ನೀಡಿದ ಸಮಾಜವಾದಿ ಪಕ್ಷ.

ವರದಿಗಾರ – ಹೌದು ಈ ಆರೋಪ ಇದೆ, ಅದರ ತನಿಖೆ ಆಗುತ್ತಿದೆ, ಈಗ ಅದರ ಬಗ್ಗೆ ಹೇಳಲಾಗುವುದಿಲ್ಲ. ಆದರೆ, ಒಂದು ಪ್ರಶ್ನೆ. ಲೋಕಸಭೆಗೆ ಸ್ಪರ್ಧಿಸುವುದೆಂದರೆ, ಅಲ್ಲಿ ಸ್ಥಳೀಯ ವಿಷಯಗಳೂ ಇರುತ್ತವೆ. ನೀವು ಎತ್ತುತ್ತಿರುವ ಇಷ್ಯೂಗಳು ಯಾವು? ಬನಾರಸ್‍ನ ಜನರು ನಿಮಗೆ ಏಕೆ ಮತ ನೀಡಬೇಕು?
ತೇಜ್ ಬಹಾದ್ದೂರ್ ಯಾದವ್- ನೋಡಿ ಒಬ್ಬ ಎಮ್‍ಪಿಯ ಕರ್ತವ್ಯಗಳಲ್ಲಿ ತನ್ನ ಕ್ಷೇತ್ರಗಳಲ್ಲಿ ಮೂಲಭೂತ ಸೌಕರ್ಯಗಳಿವೆಯೇ ಇಲ್ಲವೇ ಎನ್ನುವುದನ್ನು ನೋಡಿಕೊಳ್ಳುವುದು. ಆದರೆ ಇಂದಿನ ದಿನಗಳಲ್ಲಿ ಹಾಗಾಗುತ್ತಿಲ್ಲ. ಆಶ್ವಾಸನೆಗಳನ್ನು ನೀಡುತ್ತಾರೆ ಆದರೆ ನಂತರ ಮರೆತುಬಿಡುತ್ತಾರೆ. ಆದರೆ ನಾನು ಒಬ್ಬ ಎಮ್‍ಪಿ ಆಗಿ ಈ ಕ್ಷೇತ್ರದ ಸಮಸ್ಯೆಗಳೇನು ಎನ್ನುವುದರ ಬಗ್ಗೆ ಸರ್ವೇ ಮಾಡಿಸುವೆ. ನೀರು, ಶಿಕ್ಷಣ, ನಿರುದ್ಯೋಗ, ರಸ್ತೆಗಳು, ಆರೋಗ್ಯ, ಈ ಎಲ್ಲ ವಿಷಯಗಳ ಬಗ್ಗೆ ಕೆಲಸ ಮಾಡುವೆ.

ವರದಿಗಾರ- ನೀವು ಜನರಿಂದ ಹಣವನ್ನೂ ಕೇಳುತ್ತಿದ್ದೀರಿ, ನಿಮ್ಮ ಚುನಾವಣೆಯ ಪ್ರಚಾರದಲ್ಲಿ ಸಹಾಯ ಮಾಡಿ ಎಂದು ಕೇಳಿಕೊಳ್ಳುತ್ತಿದ್ದೀರಿ. ಇದಕ್ಕೆ ಜನರ ಪ್ರತಿಕ್ರಿಯೆ ಹೇಗಿದೆ?
ತೇಜ್ ಬಹಾದ್ದೂರ್ ಯಾದವ್ – ನೋಡಿ, ನಿನ್ನೆ ನಾವೆಲ್ಲಾ ಹೋದಾಗ, ಎಲ್ಲಾ ಕಾರ್ಮಿಕಜನರು, ಬಡವರು ನಮ್ಮನ್ನು ನೋಡಿ ಸಂತೋಷಪಟ್ಟು, ಅಪ್ಪಿಕೊಂಡರು, ನಮಗೆ ಅಲ್ಲಲ್ಲಿ ಚಹಾತಿಂಡಿ ಮಾಡಿಸಿದರು, ಕೊನೆಗೂ ನಿಜವಾದ ಚೌಕಿದಾರರು ಬಂದರು ಎಂದು ಸಂತಸಪಟ್ಟರು. ಆದರೆ ದುಃಖದ ಸಂಗತಿಯೆಂದರೆ, ಏರ್‍ಕಂಡಿಷನ್ ಗಾಡಿಗಳಲ್ಲಿ ಇದ್ದವರೆಲ್ಲ ಹೇಳಿದ್ದು, ‘ಇಲ್ಲ, ನಾವು ನಿಮ್ಮ ಜೊತೆಗಿಲ್ಲ’ ಎಂದು. ದೇಶದ ಎಲ್ಲಾ ಕಾರ್ಪೋರೇಟ್ ಕುಟುಂಬಗಳು ಬಿಜೆಪಿ ಜೊತೆಗೆ ನಿಂತುಕೊಂಡಿವೆ. ಆದರೆ ದೇಶದ ರೈತರು, ಕಾರ್ಮಿಕರು ಮತ್ತು ಬಡವರೆಲ್ಲಾ ನಮ್ಮ ಜೊತೆಗಿದ್ದಾರೆ.

ವರದಿಗಾರ- ಆದರೆ ನಿಮ್ಮ ಹೋರಾಟ ಕೇವಲ ಬಿಜೆಪಿ ಜೊತೆಗಷ್ಟೇ ಇಲ್ಲ, ಒಂದು ಕಡೆ ಬಿಜೆಪಿ ಇದ್ದರೆ ಮತ್ತೊಂದು ಕಡೆ ಕಾಂಗ್ರೆಸ್ ಇದೆ, ಇನ್ನೊಂದು ಕಡೆ ಮಹಾಘಬಂಧನ್ ಇದೆ, ಅನೇಕ ಪಕ್ಷೇತರರು ಇದ್ದಾರೆ.
ತೇಜ್ ಬಹಾದ್ದೂರ್ ಯಾದವ್ – ನೋಡಿ, ಮಂಗಲ್ ಪಾಂಡೆ ಎನ್ನುವರ ಹೆಸರನ್ನು ನೀವು ಕೇಳಿರಬಹುದು. ಆಗ ಆ ಒಬ್ಬ ಸೈನಿಕ ಪ್ರಾರಂಭಿಸಿದ್ದರಿಂದ ಏನೇನಾಯಿತು ನೋಡಿ. ಅದೇ ಸ್ವಾತಂತ್ರ ಸಂಗ್ರಾಮದಿಂದ ನಮಗೆ ಸ್ವತಂತ್ರ ಸಿಕ್ಕಿತು. ಈಗ ಇಲ್ಲಿಯೂ ಒಬ್ಬ ಸೈನಿಕ ನಿಂತಿದ್ದಾನೆ, ಅದೂ ಪ್ರಧಾನಮಂತ್ರಿಯ ವಿರುದ್ದ, ಈಗ ಹತ್ತಿದ ಈ ಒಂದು ಕಿಡಿ ಹೇಗೆ ಬಿರುಗಾಳಿ ಬೀಸಲು ಕಾರಣವಾಗುವುದೆಂದು ನೀವು
ನೋಡುವಿರ. ಎಷ್ಟೇ ಜನ ವಿರುದ್ಧ ಇರಲಿ, ಆದರೆ ಮುಂದೆ ಬರುವ ಸಮಯಕ್ಕೆ ಒಂದು ರಾಜಕೀಯ ಭವಿಷ್ಯವನ್ನು ರಚಿಸುತ್ತಿದ್ದೇವೆ.

ವರದಿಗಾರ- ತೇಜ್ ಬಹಾದ್ದೂರ್ ಅವರು ಮಂಗಲ್ ಪಾಂಡೆಯನ್ನು ಆದರ್ಶವಾಗಿಟ್ಟುಕೊಂಡು ಹೋರಾಟ ಮಾಡುತ್ತಿದ್ದಾರೆ. ಯುದ್ಧಭೂಮಿಯಾಗಿರಲಿ ಚುನಾವಣಾ ಕಣವಾಗಿರಲಿ ಗೆಲವು ಸಾಧಿಸುವ ವಿಶ್ವಾಸ ಅವರಿಗಿದೆ.

ಕೃಪೆ: ಬಿಬಿಸಿ ಹಿಂದಿ

ಕನ್ನಡಕ್ಕೆ: ರಾಜಶೇಖರ್ ಅಕ್ಕಿ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...

ವಿಧಾನಸಭೆಯಲ್ಲಿ ‘ಗೃಹಲಕ್ಷ್ಮಿ’ ಗದ್ದಲ : ಬಿಜೆಪಿ ಸದಸ್ಯರಿಂದ ಸಭಾತ್ಯಾಗ, ಕ್ಷಮೆ ಕೋರಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಗೃಹಲಕ್ಷಿ ಯೋಜನೆಯ ಹಣ ಬಿಡುಗಡೆ ಸಂಬಂಧ ಸಚಿವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ವಿಚಾರ ಇಂದು (ಡಿ.17 ಬುಧವಾರ) ವಿಧಾನಸಭೆಯಲ್ಲಿ ದೊಡ್ಡ ಮಟ್ಟದ ವಾಗ್ವಾದ, ಆರೋಪ-ಪ್ರತ್ಯಾರೋಪ, ಗದ್ದಲ, ಪ್ರತಿಭಟನೆ, ಸಭಾತ್ಯಾಗ ಮತ್ತು...

ತಂಪು ಪಾನೀಯದಲ್ಲಿ ಮತ್ತು ಬರುವ ಔಷಧ ಬೆರೆಸಿ ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ: ಆರೋಪಿ ಬಂಧನ

ಮುಂಬೈ ನಗರವನ್ನೇ ಬೆಚ್ಚಿಬೀಳಿಸಿದ ಆಘಾತಕಾರಿ ಘಟನೆಯಲ್ಲಿ, ವಕ್ತಿಯೋರ್ವ ಮತ್ತು ಬರುವ ತಂಪು ಪಾನೀಯ ನೀಡಿ ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಅಪರಾಧದ ಅಶ್ಲೀಲ ವೀಡಿಯೊಗಳನ್ನು ರೆಕಾರ್ಡ್ ಮಾಡಿ, ನಂತರ ವೀಡಿಯೊಗಳನ್ನು...

ಮನರೇಗಾ ಬದಲು ವಿಬಿ-ಜಿ ರಾಮ್ ಜಿ : ಲೋಕಸಭೆಯಲ್ಲಿ ಮಸೂದೆ ಅಂಗೀಕಾರದ ವೇಳೆ ಸಭಾತ್ಯಾಗಕ್ಕೆ ನಿರ್ಧರಿಸಿದ ವಿಪಕ್ಷಗಳು

ನರೇಗಾ ಬದಲು ತಂದಿರುವ ವಿಕಸಿತ್ ಭಾರತ್-ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕಾ ಮಿಷನ್ (ಗ್ರಾಮೀಣ್) ಮಸೂದೆ, 2025 (ವಿಬಿ–ಜಿ ರಾಮ್ ಜಿ ಮಸೂದೆ) ಲೋಕಸಭೆಯಲ್ಲಿ ಅಂಗೀಕಾರದ ವೇಳೆ ಸಹಕರಿಸದಿರಲು ವಿರೋಧ ಪಕ್ಷಗಳ ಸಂಸದರು...

ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಆರೋಪ: ಮ್ಯೂಸಿಕ್ ಮೈಲಾರಿ ಮೇಲೆ ಪೋಕ್ಸೋ ಪ್ರಕರಣ ದಾಖಲು 

ಬೆಂಗಳೂರು: ಉತ್ತರ ಕರ್ನಾಟಕದ ಜನಪದ ಗಾಯಕ ಹಾಗೂ ಯೂಟ್ಯೂಬ್ ಸ್ಟಾರ್ ಎಂದೇ ಖ್ಯಾತಿ ಪಡೆದಿದ್ದ ‘ಮ್ಯೂಸಿಕ್ ಮೈಲಾರಿ’ಎಂಬಾತನನ್ನು ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಮಹಾಲಿಂಗಪುರ ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಲಾರಿ...

ಇಂಧನ ಖರೀದಿಗೆ ‘ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ’ ಕಡ್ಡಾಯಗೊಳಿಸಿದ ದೆಹಲಿ ಸರ್ಕಾರ

ರಾಷ್ಟ್ರ ರಾಜಧಾನಿ ದೆಹಲಿಯ ವಾಹನ ಮಾಲೀಕರು ಕಟ್ಟುನಿಟ್ಟಾದ ಆದೇಶ ಎದುರಿಸುತ್ತಾರೆ. ಡಿಸೆಂಬರ್ 18 ರಿಂದ ನಗರದಾದ್ಯಂತದ ಪೆಟ್ರೋಲ್ ಬಂಕ್‌ಗಳಲ್ಲಿ ಇಂಧನ ಖರೀದಿಗೆ ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ (ಪಿಯುಸಿ) ಕಡ್ಡಾಯಗೊಳಿಸಲಾಗಿದೆ. ದೆಹಲಿ ಪರಿಸರ ಸಚಿವ ಮಂಜಿಂದರ್...

ವೈದ್ಯೆಯ ಹಿಜಾಬ್ ಎಳೆದ ಬಿಹಾರ ಸಿಎಂ, ಅವಹೇಳನ ಮಾಡಿದ ಯುಪಿ ಸಚಿವನ ವಿರುದ್ದ ದೂರು ದಾಖಲು

ವೈದ್ಯೆಯ ಹಿಜಾಬ್ ಎಳೆದ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಈ ಘಟನೆಯ ಕುರಿತು ಮಾತನಾಡುವಾಗ ಮಹಿಳೆಯನ್ನು ಅವಮಾನಿಸಿದ ಉತ್ತರ ಪ್ರದೇಶದ ಸಂಪುಟ ಸಚಿವ ಸಂಜಯ್ ನಿಶಾದ್ ವಿರುದ್ದ ಲಕ್ನೋದ ಕೈಸರ್‌ಬಾಗ್ ಪೊಲೀಸ್...

1 ಲಕ್ಷ ರೂಪಾಯಿ ಸಾಲ 74 ಲಕ್ಷ ರೂಪಾಯಿಗೆ ಏರಿಕೆ, ಸಾಲ ತೀರಿಸಲು ಕಿಡ್ನಿ ಮಾರಿದ ರೈತ 

ಅಕ್ರಮವಾಗಿ ಸಾಲ ನೀಡುವವರಿಂದ 1 ಲಕ್ಷ ಸಾಲ ಪಡೆದಿದ್ದು, ಅದಕ್ಕೆ ಹೆಚ್ಚಿನ ದಿನದ ಬಡ್ಡಿ ಸೇರಿ 75 ಲಕ್ಷ ಸಾಲ ಏರಿಕೆಯಾದ ಕಾರಣ ವ್ಯಕ್ತಿಯೊಬ್ಬ ತನ್ನ ಕಿಡ್ನಿಯನ್ನೇ ಮಾರಾಟ ಮಾಡಿರುವ ಘಟನೆ ಮಹಾರಾಷ್ಟ್ರದಲ್ಲಿ...