Homeಮುಖಪುಟಶಾಲಾ ಮಕ್ಕಳಿಗೆ ಮೊಟ್ಟೆ ನೀಡುವುದಕ್ಕೆ ತೇಜಸ್ವಿನಿ ಅನಂತಕುಮಾರ್ ಅಪಸ್ವರ: ಪಾಠ ಮಾಡಿದ ನೆಟ್ಟಿಗರು

ಶಾಲಾ ಮಕ್ಕಳಿಗೆ ಮೊಟ್ಟೆ ನೀಡುವುದಕ್ಕೆ ತೇಜಸ್ವಿನಿ ಅನಂತಕುಮಾರ್ ಅಪಸ್ವರ: ಪಾಠ ಮಾಡಿದ ನೆಟ್ಟಿಗರು

- Advertisement -
- Advertisement -

ಅಪೌಷ್ಠಿಕತೆಯನ್ನು ಹೋಗಲಾಡಿಸುವ ಸಲುವಾಗಿ ಶಾಲಾ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟದ ಜೊತೆಗೆ ಮೊಟ್ಟೆ ನೀಡಬೇಕೆಂಬ ತಜ್ಞರ ಶಿಫಾರಸ್ಸನ್ನು ಕರ್ನಾಟಕ ಸರ್ಕಾರ ಒಪ್ಪಿಕೊಂಡಿದೆ. ಆದರೆ ಇದಕ್ಕೆ ಅಲ್ಲೊಂದು ಇಲ್ಲೊಂದು ಅಪಸ್ವರಗಳು ಕೇಳಿಬರುತ್ತಲೆ ಇವೆ. ಈ ಹಿಂದೆ ಕೆಲ ಮಠಾಧೀಶರು ಮೊಟ್ಟೆ ನೀಡಬಾರದು ಎಂದು ಹೇಳಿ ಟೀಕೆಗೆ ಗುರಿಯಾಗಿದ್ದರು. ಈಗ ಮಾಜಿ ಕೇಂದ್ರ ಸಚಿವ ದಿವಂಗತ ಅನಂತ್ ಕುಮಾರ್‌ರವರ ಪತ್ನಿ ತೇಜಸ್ವಿನಿ ಅನಂತಕುಮಾರ್ ಸಹ ಮೊಟ್ಟೆ ನೀಡುವ ನಿರ್ಧಾರಕ್ಕೆ ವಿರೋಧ ವ್ಯಕ್ತಪಡಿಸಿದ ಕಾರಣ ಮೊಟ್ಟ ಏಕೆ ಬೇಕೆಂದು ನೆಟ್ಟಿಗರು ಅವರಿಗೆ ಪಾಠ ಮಾಡಿದ್ದಾರೆ.

ಸಮಾನತೆಯ ಬಗ್ಗೆ ಮಾತನಾಡುತ್ತಲೇ ನೀವು ಏಕೆ ಸಸ್ಯಾಹಾರಿಗಳ ಪರ ವಹಿಸಿದ್ದೀರಿ? ಮಕ್ಕಳು ಅವರಿಷ್ಟ ಬಂದಿದ್ದನ್ನು ತಿನ್ನುತ್ತಾರೆ, ನಿಮ್ಮ ಹೇರಿಕೆ ಏಕೆ ಎಂದು ಹಲವು ಪ್ರಶ್ನಿಸಿದ್ದಾರೆ.

“ನಮ್ಮ ಕರ್ನಾಟಕ ಸರ್ಕಾರ ಮಧ್ಯಾಹ್ನದ ಊಟದಲ್ಲಿ ಮೊಟ್ಟೆ ನೀಡಲು ಏಕೆ ನಿರ್ಧರಿಸಿದೆ? ಅದೊಂದೆ ಪೋಷಣೆಯ ಏಕೈಕ ಮೂಲವಲ್ಲ. ಸಸ್ಯಾಹಾರಿಗಳಾಗಿರುವ ಅನೇಕ ವಿದ್ಯಾರ್ಥಿಗಳನ್ನು ಇದು ಹೊರಗಿಡುತ್ತದೆ.
ಪ್ರತಿಯೊಬ್ಬ ವಿದ್ಯಾರ್ಥಿಗೂ ಸಮಾನ ಅವಕಾಶ ಸಿಗುವಂತೆ ನಮ್ಮ ನೀತಿಗಳನ್ನು ರೂಪಿಸಬೇಕು” ಎಂದು ತೇಜಸ್ವಿನಿ ಅನಂತಕುಮಾರ್ ಟ್ವೀಟ್ ಮಾಡಿದ್ದರು.

ಅದಕ್ಕೆ ಪ್ರತಿಯಾಗಿ ನೂರಾರು ಜನರು ಮೊಟ್ಟೆ ಕುರಿತು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. “ನೀವು ಸಸ್ಯಹಾರಿಯಾಗಿದ್ದಾರೆ ಅದು ನಿಮ್ಮಿಷ್ಟ. ಆದರೆ ಅದನ್ನು ದಯವಿಟ್ಟು ಇತರರ ಮೇಲೆ ಹೇರಬೇಡಿ. ಶಾಲಾ ಮಕ್ಕಳಿಗೆ ಮೊಟ್ಟೆ ನೀಡುವುದರಿಂದ ತಪ್ಪೇನು? ನಿಮ್ಮ ಬ್ರಾಹ್ಮಣ್ಯವನ್ನು ಶಾಲೆಗಳಿಗೆ ತರಬೇಡಿ” ಎಂದು ಲಿಖಿತ್ ಕುಮಾರ್ ಎಂಬುವವರು ಪ್ರತಿಕ್ರಿಯಿಸಿದ್ದಾರೆ.

ಮೊಟ್ಟೆ/ಬಾಳೆಹಣ್ಣು/ಕಡ್ಲೆಮಿಠಾಯಿ ಈ ಮೂರು ಆಯ್ಕೆಗಳಿವೆ. ಮಕ್ಕಳು ತಮಗೆ ಬೇಕಾದುದ್ದನ್ನು ತಿನ್ನುತ್ತಾರೆ. ಇಂತದ್ದೆ ತಿನ್ನಿ ಎಂದು ಹೇಳಲು ನಾವ್ಯಾರು ಎಂದು ಗಣೇಶ್ ಭಟ್ ಎಂಬುವವರು ಟ್ವೀಟ್ ಮಾಡಿದ್ದಾರೆ.

ತೇಜಸ್ವಿನಿಯವರ ಪ್ರಕಾರ ಬಹುಸಂಖ್ಯಾತ ಮಾಂಸಾಹಾರಿಗಳು ಅಲ್ಪಸಂಖ್ಯಾತ ಸಸ್ಯಾಹಾರಿಗಳಿಗಾಗಿ ತಮ್ಮ ಆಹಾರದಲ್ಲಿ ಹೊಂದಾಣಿಕೆ ಮಾಡಿಕೊಳ್ಳಬೇಕು?!! ವಾಹ್, ಇದೇ ನೋಡಿ ಬ್ರಾಹ್ಮಣ್ಯ ಅಂದರೆ!. ಇದರ ಬದಲಿಗೆ ಯಾಕೆ ಸಸ್ಯಾಹಾರಿಗಳೂ ಮೊಟ್ಟೆ ತಿನ್ನಬಾರದು.? ಆರೋಗ್ಯಕ್ಕೆ ಒಳ್ಳೆಯದು. ಆಗ ಸಮಾನತೆ ಕೂಡಾ ಉಂಟಾಗುತ್ತದೆ ಅಲ್ವಾ?!! ಎಂದು ಶ್ರೀನಿವಾಸ ಕಾರ್ಕಳರವರು ತಿರುಗೇಟು ನೀಡಿದ್ದಾರೆ.

ದಯವಿಟ್ಟು ಮೊಟ್ಟೆಯಷ್ಟು ಅಗ್ಗದ, ಪೌಷ್ಟಿಕ ಮತ್ತು ರುಚಿಕರವಾದ ಪರ್ಯಾಯವನ್ನು ಸೂಚಿಸಿ. ಕೆಲವು ದುರ್ಬಲವಾದ ಬ್ರಾಹ್ಮಣ ಇಂದ್ರಿಯಗಳನ್ನು ರಕ್ಷಿಸಲು ನಮ್ಮ ನೀತಿಗಳನ್ನು ಹೇರಬಾರದು. ಮೊಟ್ಟೆ ತಿನ್ನದವರಿಗೆ ಚಿಕ್ಕಿ ಇದೆ. ಮೊಟ್ಟೆ ತಿನ್ನುವವರು ಮೊಟ್ಟೆ ತಿಂದರೆ ಏಕೆ ಸಮಸ್ಯೆ? ಎಂದು ಟ್ವಿಟರ್ ಬಳಕೆದಾರರೊಬ್ಬರು ಪ್ರತಿಕ್ರಿಯಿಸಿದ್ದಾರೆ.

“ಸರ್ಕಾರಿ ಶಾಲೆಲಿ ಬ್ರಾಹ್ಮಣ, ಲಿಂಗಾಯತ ಹೀಗೆ ಸಸ್ಯಹಾರಿ ಸಮುದಾಯದ ಮಕ್ಕಳು ಹೆಚ್ಚು ಓದ್ತಾಯಿಲ್ಲ. OBC/SC/ST ಮಕ್ಕಳು ಅಧಿಕವಾಗಿದ್ದರೆ. ಮೊಟ್ಟೆನು ಕೊಡ್ತಾನೆ, ಮಾಂಸನು ಕೊಡ್ತಾರೆ. ದುಬಾರಿ ಪೀಸ್ ಕಟ್ಟುವ ಶಾಲೆಲಿ ಮಕ್ಳನ್ನ ಓದಿಸುತ್ತಾ ಇರುವ ನೀವುಗಳು ಸರ್ಕಾರಿ ಶಾಲೆಲಿ ನಿಮ್ಮ ಪದ್ಧತಿಯನ್ನ ಹೇರಿಕೆ ಮಾಡೋಕೆ ಬರಬೇಡಿ. ತಮಿಳುನಾಡಿನಲ್ಲಿ ವಾರಕ್ಕೆ 5 ದಿನ ಮೊಟ್ಟೆ. ತೆಲಂಗಾಣ, ಆಂಧ್ರದಲ್ಲಿ ಮೊಟ್ಟೆ ಕೊಡ್ತಾರೆ. ಬರೀ ಧಾನ್ಯಗಳಿಂದ ಸಂಪೂರ್ಣ ಪೌಷ್ಟಿಕಾಂಶ ಬರಲ್ಲ. ಮೀನು, ಮೊಟ್ಟೆ, ಮಾಂಸ, ಹಾಲು ಅಗತ್ಯ. ಕಲ್ಯಾಣ ಕರ್ನಾಟಕ ಭಾಗದ 14 ಲಕ್ಷಕ್ಕೂ ಹೆಚ್ಚು ಮಕ್ಕಳಿಗೆ ಮೊಟ್ಟೆ ಕೊಟ್ಟಿದ್ದರಿಂದ ಅವರು ನ್ಯೂನಪೋಷಣೆಯ ಕೊರತೆ ಇಳಿಮುಖವಾಗಿದೆ. ಮೊದಲು ನ್ಯೂನಪೋಷಣೆಯ ತೀವ್ರ ಕೊರತೆ ಇತ್ತು” ಎಂದು ಟ್ವಿಟರ್ ಬಳಕೆದಾರರೊಬ್ಬರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

79% ಕನ್ನಡಿಗರು ಮಾಂಸಾಹಾರ ಸೇವಿಸುತ್ತಾರೆ. ಮೊಟ್ಟೆ ತಿನ್ನುವ ಜನಸಂಖ್ಯೆಯು ಕನಿಷ್ಠ 90% ಆಗಿರುತ್ತದೆ ಎಂದು ನನಗೆ ಖಾತ್ರಿಯಿದೆ. ಹಾಗಾದರೆ 10% ಜನರಿಗೆ ಪರ್ಯಾಯವನ್ನು ಒದಗಿಸಿದಾಗ 90% ಜನರು ಏನು ತಿನ್ನುತ್ತಾರೆ ಎಂಬುದನ್ನು ಏಕೆ ನಿರ್ಧರಿಸಬೇಕು. ನಿಮ್ಮ ಸಮಸ್ಯೆ ಏನು ಮೇಡಂ, ನೀವು ವಿವರಿಸುವಿರಾ? ಎಂದು ಕೆಲವರು ಟ್ವೀಟ್ ಮಾಡಿದ್ದಾರೆ.

ಇದನ್ನೂ ಓದಿ: ಸಿದ್ದರಾಮಯ್ಯ 75: ಹಳೇ ರಾಜಕಾರಣದ ಕಡೇ ವರಸೆ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

  1. ಒಂದೋ ಮೊಟ್ಟೆ ತಿನ್ನುತ್ತಿರುವ ನಿಮಗೆ ಹೀಗೆ ಎಲ್ಲರೂ ಮೊಟ್ಟೆ ತಿಂದರೆ ಅದರ ಬೆಲೆ ಜಾಸ್ತಿ ಆಗಬಹುದೆಂಬ ಭಯ,ಅಥವಾ ನಿಮ್ಮ ವಕ್ರ ಬುದ್ದಿಯನ್ನು ಇದು ತೋರಿಸುತ್ತದೆ,ಇಲ್ಲವೇ ದೇವರ ಮೇಲೆ ಆಣೆ ಮಾಡಿ ಸತ್ಯ ಹೇಳಿ

LEAVE A REPLY

Please enter your comment!
Please enter your name here

- Advertisment -

SIR ನೋಟಿಸ್ ಮತ್ತು ವಿಚಾರಣೆಯಲ್ಲಿ ಅಕ್ರಮ : ಚು. ಆಯೋಗದ ವಿರುದ್ಧ ನಾಗರಿಕ ಸಂಘಟನೆಗಳಿಂದ 2ನೇ ಎಫ್‌ಐಆರ್

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಭಾಗವಾಗಿ, ಆಗಸ್ಟ್ 24ರಂದು ರಾಜ್ಯ ಚುನಾವಣಾ ಆಯೋಗ ಬಿಡುಗಡೆ ಮಾಡಿದ್ದ ಕರಡು ಮತದಾರರ ಪಟ್ಟಿಯನ್ನು ತಿರಸ್ಕರಿಸಿ ಕೇಂದ್ರ ಚುನಾವಣಾ ಆಯೋಗದ ವಿರುದ್ಧ ಎಫ್‌ಐಆರ್ ಬಿಡುಗಡೆ...

‘ಕೊಂಕಣಿ – ಮಾಲ್ವಣಿ ಸಮುದಾಯಗಳು ಹಿಂದುತ್ವದ ಬೆಂಬಲಿಗರು..’; ಮಹಾರಾಷ್ಟ್ರ ಬಿಜೆಪಿ ನಾಯಕ ಅಮೀತ್ ಸತಮ್

ಮುಂಬೈನಲ್ಲಿ ವಾಸಿಸುತ್ತಿರುವ ಕೊಂಕಣಿ ಮತ್ತು ಮಾಲ್ವಣಿ ಸಮುದಾಯಗಳು ಸೇರಿದಂತೆ ಕೊಂಕಣ ಪ್ರದೇಶದ ಜನರು ಹಿಂದುತ್ವವನ್ನು ಬೆಂಬಲಿಸುತ್ತಾರೆ ಎಂದು ಬಿಜೆಪಿ ನಾಯಕ ಅಮೀತ್ ಸತಮ್ ಹೇಳಿದ್ದಾರೆ. ಮಹಾರಾಷ್ಟ್ರದ ಕೊಂಕಣ ಪ್ರದೇಶದ ಸಾವಂತವಾಡಿಗೆ ಗಣಪತಿ ಭಕ್ತರಿಗಾಗಿ ಛತ್ರಪತಿ...

SIR! ಸಾಮಾನ್ಯರಿಗೆ ಸಂಕಷ್ಟ; ಗಣ್ಯರಿಗೆ ಮನೆ ಬಾಗಿಲಲ್ಲೇ ಸೇವೆ?

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆ ಕರ್ನಾಟಕದಲ್ಲಿ ಮುಂದುವರೆದಿರುವ ನಡುವೆಯೇ, ಅದರ ಜಾರಿಯಲ್ಲಿ ಸಾಮಾನ್ಯ ಮತದಾರರು ಮತ್ತು ಪ್ರಭಾವಿ ವ್ಯಕ್ತಿಗಳ ಅನುಭವದ ನಡುವಿನ ವ್ಯತ್ಯಾಸದ ಕುರಿತು ಪ್ರಶ್ನೆಗಳು ಎದ್ದಿವೆ. ಮತದಾರರ ಪಟ್ಟಿಯಲ್ಲಿನ...

ದಲಿತ ಬಾಲಕಿ ನಿಶು ಆಜಾದ್ ಕುಟುಂಬಕ್ಕೆ ನಿಲ್ಲದ ಕಿರುಕುಳ; ಅಸಭ್ಯ ಭಾಷೆ – ಬೆದರಿಕೆ ಸಂದೇಶ ರವಾನೆ

ಸಿಜೆಪಿ ಪ್ರತಿಭಟನೆಯಲ್ಲಿ ಗಮನ ಸೆಳೆದಿದ್ದ ಹದಿನಾಲ್ಕು ವರ್ಷ ವಯಸ್ಸಿನ ದಲಿತ ಸಮುದಾಯದ ಕಂಟೆಂಟ್ ಕ್ರಿಯೇಟರ್ ನಿಶು ಆಜಾದ್ ಮತ್ತು ಅವರ ಕುಟುಂಬಕ್ಕೆ ಮೊಬೈಲ್‌ ಫೋನ್‌ ಮೂಲಕ ನಿರಂತರ ಕಿರುಕುಳ ಸಂದೇಶ ಬರುತ್ತಿವೆ ಎಂದು...

ಉತ್ತರ ಪ್ರದೇಶ| 8ನೇ ತರಗತಿಯ ದಲಿತ ವಿದ್ಯಾರ್ಥಿಗೆ ಶಿಕ್ಷಕಿಯಿಂದ ಜಾತಿ ತಾರತಮ್ಯ

ಉತ್ತರ ಪ್ರದೇಶದ ಲಖಿಂಪುರ ಖೇರಿ ಜಿಲ್ಲೆಯ ಸರ್ಕಾರಿ ಉನ್ನತ ಪ್ರಾಥಮಿಕ ಶಾಲೆಯ 8ನೇ ತರಗತಿಯ ವಿದ್ಯಾರ್ಥಿಯೊಬ್ಬರು ಶಿಕ್ಷಕಿಯಿಂದ ಜಾತಿ ಆಧಾರಿತ ತಾರತಮ್ಯ ಎಸಗಲಾಗಿದೆ ಎಂದು ಆರೋಪಿಸಿದ್ದಾನೆ. ಕೃಷ್ಣ ಎಂದು ಗುರುತಿಸಲ್ಪಟ್ಟ ಈ ವಿದ್ಯಾರ್ಥಿ ಪರಿಶಿಷ್ಟ...

ಯೆಮನ್ | ಸಂಪೂರ್ಣ ರೆಡ್ ಸೀ ಕರಾವಳಿಯನ್ನು ನಿಯಂತ್ರಣಕ್ಕೆ ತೆಗೆದುಕೊಂಡ ಹೌತಿ ಪಡೆ : ಮಂದೇಬ್ ಜಲಸಂಧಿ ಮೇಲೆಯೂ ಹಿಡಿತ ಸಾಧಿಸಿರುವುದಾಗಿ ವರದಿ

ಮಹತ್ವದ ಬೆಳವಣಿಗೆಯಲ್ಲಿ, ಹೌತಿ ಬಂಡುಕೋರರು ಯೆಮನ್‌ನ ಇಡೀ ಕೆಂಪು ಸಮುದ್ರದ (ರೆಡ್ ಸೀ) ಕರಾವಳಿಯನ್ನು ತಮ್ಮ ನಿಯಂತ್ರಣಕ್ಕೆ ತೆಗೆದುಕೊಂಡಿದ್ದಾರೆ ಎಂದು ವರದಿಯಾಗಿದೆ. ಇರಾನ್ ಬೆಂಬಲಿತ ಹೌತಿ ಸಶಸ್ತ್ರ ಪಡೆಗಳು ಯೆಮನ್ ಸರ್ಕಾರದ ನಿಯಂತ್ರಣದಲ್ಲಿದ್ದ...

ಭಾರತದ ಚುನಾವಣಾ ಪ್ರಕ್ರಿಯೆಯು ಅತ್ಯಂತ ಪಾರದರ್ಶಕವಾಗಿದೆ: ಸಿಇಸಿ ಜ್ಞಾನೇಶ್ ಕುಮಾರ್

ಭಾರತದ ಚುನಾವಣಾ ಪ್ರಕ್ರಿಯೆಯು ವಿಶ್ವದಲ್ಲೇ ಅತ್ಯಂತ ಪಾರದರ್ಶಕವಾದದ್ದು ಎಂದು ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ಜ್ಞಾನೇಶ್ ಕುಮಾರ್ (ಸೆ.11) ಹೇಳಿದ್ದಾರೆ. ಗುಜರಾತ್ ವಿಶ್ವವಿದ್ಯಾಲಯದ ಅಟಲ್ ಕಲಾಂ ಸಭಾಂಗಣದಲ್ಲಿ ನಡೆದ 'ಮತಗಟ್ಟೆ ಮಟ್ಟದ ಅಧಿಕಾರಿಗಳೊಂದಿಗೆ...

SIR: 43ಲಕ್ಷದಲ್ಲಿ ನೋಟಿಸ್ ತಲುಪಿರುವುದು 25ಲಕ್ಷ ಜನರಿಗೆ ಮಾತ್ರ, ಬಾಕಿ 18ಲಕ್ಷ ಜನರಿಗೆ ಇನ್ನು ನೋಟಿಸ್ಸೇ ತಲುಪಿಲ್ಲ

ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯು ಆಡಳಿತಾತ್ಮಕ ಗೊಂದಲ ಹಾಗೂ ಯಾಂತ್ರಿಕ ಲೋಪಗಳ ಜಾಲದಲ್ಲಿ ಸಿಲುಕಿಬಿದ್ದಿದೆ. ಮುಖ್ಯ ಚುನಾವಣಾಧಿಕಾರಿಗಳ ಕಚೇರಿ ಬಿಡುಗಡೆ ಮಾಡಿರುವ ಇತ್ತೀಚಿನ ದತ್ತಾಂಶವೇ ಆಯೋಗದ...

ಕಾಳಿಘಾಟ್‌ನಲ್ಲಿ ‘ಮೀನಿನ ಪ್ರಸಾದ’ ಸ್ವೀಕರಿಸಿದ ಸುವೇಂದು ಅಧಿಕಾರಿ; ಬಾಗೇಶ್ವರ್ ಬಾಬಾ ‘ಮಾಂಸಾಹಾರ’ ವಿವಾದಕ್ಕೆ ಹೊಸ ತಿರುವು!

ದುರ್ಗಾ ಪೂಜೆ ಸಂದರ್ಭದಲ್ಲಿ ಮೀನು–ಮಾಂಸ ಸೇವನೆ ಕುರಿತು ಬಾಗೇಶ್ವರ್ ಧಾಮದ ಧೀರೇಂದ್ರ ಕೃಷ್ಣ ಶಾಸ್ತ್ರಿ ನೀಡಿರುವ ಹೇಳಿಕೆ ಪಶ್ಚಿಮ ಬಂಗಾಳದಲ್ಲಿ ವಿವಾದಕ್ಕೆ ಕಾರಣವಾಗಿರುವ ನಡುವೆಯೇ, ಮುಖ್ಯಮಂತ್ರಿ ಸುವೇಂದು ಅಧಿಕಾರಿ ಕಾಳಿಘಾಟ್ʼನ ಕಾಳಿ ದೇವಸ್ಥಾನದಲ್ಲಿ...

ಎಸ್‌ಐಆರ್‌: ಹೈದರಾಬಾದ್, ಸಿಕಂದರಾಬಾದ್‌ನಲ್ಲಿ ಲಕ್ಷಾಂತರ ಮತದಾರರ ಹೆಸರು ಅಳಿಸುವಿಕೆ; 2029ರ ಚುನಾವಣೆಗೂ ಮುನ್ನ ಗಂಭೀರ ಆತಂಕ

ಹೈದರಾಬಾದ್: ತೆಲಂಗಾಣದಲ್ಲಿ ನಡೆಯುತ್ತಿರುವ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯಡಿ ಮತದಾರರ ಪಟ್ಟಿಯಿಂದ ಭಾರೀ ಪ್ರಮಾಣದಲ್ಲಿ ಹೆಸರುಗಳನ್ನು ತೆಗೆದುಹಾಕಲಾಗಿರುವುದು ಮುಂದಿನ ಚುನಾವಣೆಯ ರಾಜಕೀಯ ಲೆಕ್ಕಾಚಾರಗಳ ಮೇಲೆ ಗಂಭೀರ ಪರಿಣಾಮ ಬೀರುವ ಸಾಧ್ಯತೆಯನ್ನು ಹುಟ್ಟುಹಾಕಿದೆ....