ಬಿಹಾರ ಚುನಾವಣಾ ಪ್ರಚರದಲ್ಲಿರುವ ಎಲ್ಜೆಪಿ ನಾಯಕ ಚಿರಾಗ್ ಪಾಸ್ವಾನ್, ಬಿಹಾರದ ಸೀತಮಾರ್ಹಿಯಲ್ಲಿ ರಾಮಮಂದಿರಕ್ಕಿಂತ ದೊಡ್ಡ ಭವ್ಯ ಸೀತಾ ಮಂದಿರ ನಿರ್ಮಾಣ ಮಾಡಲಾಗುವುದು. ಸೀತಾ ದೇವಿಯಿಲ್ಲದೆ ಭಗವಾನ್ ರಾಮ ಅಪೂರ್ಣ ಎಂದಿದ್ದಾರೆ.
1990ರ ದಶಕದಲ್ಲಿ ಬಿಜೆಪಿ ಹಿರಿಯ ನಾಯಕ ಎಲ್.ಕೆ. ಅಡ್ವಾಣಿಯ ರಥಯಾತ್ರೆ, ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಬಿಜೆಪಿಯ ಯಶಸ್ವಿ ಅಭಿಯಾನವಾಗಿತ್ತು. ಈಗ ಅದನ್ನೇ ಚಿರಾಗ್ ಪಾಸ್ವಾನ್ ಮಾಡುತ್ತಿದ್ದಾರೆ ಎನ್ನಲಾಗಿದೆ. ಸೀತಾಮರ್ಹಿಯನ್ನು ಮಾತೆ ಸೀತಾ ದೇವಿಯ ಜನ್ಮಸ್ಥಳವೆಂದು ನಂಬಲಾಗಿದೆ.
“ದೇವಾಲಯವು ಎಲ್ಲಾ ಮೂಲಸೌಕರ್ಯಗಳ ಯೋಜನೆಯೊಂದಿಗೆ ನಿಮಾಣವಾಗಲಿದೆ. “ಸೀತಾ ದೇವಿಯಿಲ್ಲದೆ ಭಗವಾನ್ ರಾಮ ಅಪೂರ್ಣ. ಆದ್ದರಿಂದ, ಅಯೋಧ್ಯೆಯ ರಾಮ ದೇವಾಲಯ ಮತ್ತು ಸೀತಾಮರ್ಹಿಯನ್ನು ಸಂಪರ್ಕಿಸುವ ಕಾರಿಡಾರ್ ಯೋಜನೆ ಕೂಡ ಮಾಡಲಾಗುವುದು” ಎಂದು ಚಿರಾಗ್ ಪಾಸ್ವಾನ್ ಹೇಳಿದ್ದಾರೆ. ಈ ಭರವಸೆ ತನ್ನ ಚುನಾವಣಾ ಪ್ರಣಾಳಿಕೆಯ ಭಾಗವಾಗಿದೆ ಎಂದು ಹೇಳಿದರು.
ಇದನ್ನೂ ಓದಿ: ನಕಲಿ ಚೆಕ್ ಮೂಲಕ ಅಯೋಧ್ಯೆ ಮಂದಿರ ಟ್ರಸ್ಟ್ನಿಂದ 6 ಲಕ್ಷ ರೂ ಕಳ್ಳತನ!
‘ಮಹಿಳಾ ಸಬಲೀಕರಣದ ಬಗ್ಗೆ ನಾವು ತುಂಬಾ ಮಾತನಾಡುತ್ತೇವೆ. ಮಹಿಳಾ ಸಬಲೀಕರಣದ ಸಂಕೇತವಾದ ಸೀತಾ ದೇವಿಗಾಗಿ, ಅಯೋಧ್ಯೆಯ ರಾಮ್ ಮಂದಿರಕ್ಕಿಂತ ದೊಡ್ಡದಾದ ದೇವಾಲಯವನ್ನು ಬಿಹಾರದಲ್ಲಿ ನಿರ್ಮಿಸಬೇಕೆಂದು ನಾನು ಬಯಸುತ್ತೇನೆ’ ಎಂದು ಬಿಹಾರದ ಸೀತಮಾರ್ಹಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಹೇಳಿದ್ದಾರೆ.
#WATCH I want a temple bigger than #RamMandir in Ayodhya to be built for Goddess Sita in Sitamarhi. Lord Ram is incomplete without Goddess Sita, & vice versa. So, a corridor connecting Ayodhya's Ram Temple & Sitamarhi should be constructed: LJP chief Chirag Paswan https://t.co/tyAL5cLrMg pic.twitter.com/cZR8Cc8LqF
— ANI (@ANI) October 25, 2020
ಈ ಹಿಂದೆ ಏಪ್ರಿಲ್ನಲ್ಲಿ ಬಿಹಾರದ ಪುರಾಣ ಧಾಮ್ನಲ್ಲಿರುವ ಹಳೆಯ ಸೀತಾ ದೇವಾಲಯದ ಸುತ್ತ ವಾಯುವಿಹಾರವನ್ನು ನಿರ್ಮಿಸುವುದಾಗಿ ಮುಖ್ಯಮಂತ್ರಿ ನಿತೀಶ್ ಕುಮಾರ್ ಘೋಷಿಸಿದರು. ಈಗ ಅದಕ್ಕಿಂತ ಮುಂದೆ ಹೋಗಿರುವ ಚಿರಾಗ್ ಪಾಸ್ವಾನ್ ರಾಮಮಂದಿರಕ್ಕಿಂತ ಭವ್ಯ ಮಂದಿರವನ್ನು ಸೀತಾಮಾತೆಗಾಗಿ ಕಟ್ಟಲಾಗುವುದು ಎಂದು ಘೋಷಿಸಿದ್ದಾರೆ.
ಇದನ್ನೂ ಓದಿ: ಓದುಗರ ಪತ್ರ: ಅಯೋಧ್ಯೆಯಲ್ಲಿ ಶ್ರೀರಾಮನಿದ್ದ ಎಂಬುದಕ್ಕೆ ಕೆಲವು ಪ್ರಶ್ನೆಗಳು
ಡಿಸೆಂಬರ್ 6, 1992 ರಂದು, ಅಯೋಧ್ಯೆಯಲ್ಲಿ ರಾಮನ ಜನ್ಮಸ್ಥಳದ ಮೇಲೆ ಮಸೀದಿ ಕಟ್ಟಲಾಗಿದೆ ಎಂದು, ಕರ ಸೇವಕರು 16 ನೇ ಶತಮಾನದಲ್ಲಿ ಮೊಘಲ್ ಚಕ್ರವರ್ತಿ ಬಾಬರ್ ನಿರ್ಮಿಸಿದನೆಂದು ನಂಬಲಾಗಿದ್ದ ಬಾಬರಿ ಮಸೀದಿಯನ್ನು ಧ್ವಂಸ ಮಾಡಿದರು. ಆ ನಂತರದ ಹಿಂಸಾಚಾರದಲ್ಲಿ 2,000ಕ್ಕೂ ಹೆಚ್ಚು ಜನರು ಸಾವನ್ನಪ್ಪಿದರು. ಸುಪ್ರೀಂಕೋರ್ಟ್ ತೀರ್ಪು ರಾಮ ಮಂದಿರ ನಿರ್ಮಾಣಕ್ಕೆ ಅವಕಾಶ ನಿಡಿದ ಹಿನ್ನೆಲೆ, ಈಗ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಕಾರ್ಯ ನಡೆಯುತ್ತಿದೆ.
ಚಿರಾಗ್ ಪಾಸ್ವಾನ್, ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರನ್ನು ಬೆಂಬಲಿಸದ ಬಿಜೆಪಿ ಮತದಾರರಿಂದಲೂ ಮತಗಳನ್ನು ಕೋರಿ ಇಂದು ತಮ್ಮ ಅಭಿಯಾನವನ್ನು ನಡೆಸಿದ್ದಾರೆ.
ಬಿಹಾರ ಚುನಾವಣೆಯಲ್ಲಿ ಚಿರಾಗ್ ನೇತೃತ್ವದ ಎಲ್ಜೆಪಿ, 243 ಸದಸ್ಯರ ವಿಧಾನಸಭೆಗೆ 143 ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದು, ಅಕ್ಟೋಬರ್ 21ರಿಂದ ಚಿರಾಗ್ ಪ್ರಚಾರ ಆರಂಭಿಸಿದ್ದಾರೆ. ಅಕ್ಟೋಬರ್ 28, ನವೆಂಬರ್ 3 ಮತ್ತು 7 ರಂದು ಮತದಾನ ನಡೆಯಲಿದ್ದು, ನವೆಂಬರ್ 10 ರಂದು ಫಲಿತಾಂಶ ಹೊರಬೀಳಲಿದೆ.
ಮಹಿಳೆರಿಗೆ ಸಮಾನ ಅವಕಾಶವನ್ನು ಕಲ್ಪಿಸಿಕೊಟ್ಟ೧೨ನೆ ಶತಮಾನದ ಬಸವಾದಿ ಶರಣರು ಜಗತಿನ ಮೊಟ್ಟ ಮೊದಲನೆಯ ಸಂಸತ್ತಿನಲ್ಲಿ ಅದು ಬಸವಣ್ಣವರು ನಿರ್ಮಿಸಿದ ಅನುಅಭವ ಮಂಟಪ
ವಿಶ್ವಕ್ಕೆ ಮಾದರಿ ಯಾದ ಅನುಭವ ಮಂಟಪ ನಿರ್ಮಾಣ ಮಾಡಿ .
ಜಗತ್ತಿಗೆ ಬೆಳಕು ನೀಡಿದ ವಚನ ಸಾಹಿತ್ಯದ ಚಿಂತನೆ ಆಗ್ಬೇಕು ಮೊದಲು