Homeಕರ್ನಾಟಕಪಠ್ಯಪುಸ್ತಕ ಮತ್ತು ದಲಿತ ಚಿಂತನೆಗಳ ಹೊರಗಿಡುವಿಕೆ

ಪಠ್ಯಪುಸ್ತಕ ಮತ್ತು ದಲಿತ ಚಿಂತನೆಗಳ ಹೊರಗಿಡುವಿಕೆ

- Advertisement -
- Advertisement -

ಭಾರತದ ಬಹುಸಂಖ್ಯಾತ ಮತೀಯವಾದವು ತನ್ನ ರಾಜಕೀಯ ಸಾಮಾಜಿಕ ಧಾರ್ಮಿಕ ಐಡಿಯಾಲಜಿಯನ್ನು ಹೇರಲು ಹೇಗೆ ಪಠ್ಯಪುಸ್ತಕಗಳನ್ನು ಪ್ರಮುಖ ಮಾಧ್ಯಮವಾಗಿಸಿಕೊಳ್ಳುತ್ತದೆ ಎಂಬುದು, ಈಚಿನ ಪಠ್ಯಪರಿಷ್ಕರಣೆಯ ಪ್ರಕರಣದಲ್ಲಿ ಸಾರ್ವಜನಿಕಗೊಂಡಿದೆ. ಈ ವಿವಾದದಲ್ಲಿ ಬಹಿರಂಗಗೊಂಡಿರುವ ಇನ್ನೊಂದು ಮುಖವೆಂದರೆ, ಅದು ಏನೆಲ್ಲವನ್ನು ಆಚೆಗಿಡುತ್ತದೆ ಅಥವಾ ಒಳಗೊಳ್ಳಲು ಅಳುಕುತ್ತದೆ ಎನ್ನುವುದು. ಅದು ಒಳಗೊಳ್ಳಲು ನಿರಾಕರಿಸುವ ಸಂಗತಿಗಳಲ್ಲಿ ಮುಸ್ಲಿಮರ ಕೊಡುಗೆ, ಸ್ತ್ರೀಸಮಾನತೆ
ಅಥವಾ ಲಿಂಗತಾರತಮ್ಯ ವಿರೋಧ, ಜಾತಿವಾದ ನಿರಾಕರಣೆ, ಸಮಾಜವಾದಿ ಆಶಯ ಹಾಗೂ ದಲಿತ ಚಿಂತನೆಗೆ ಸಂಬಂಧಿಸಿದವಾಗಿವೆ. ಈ ಟಿಪ್ಪಣಿಯಲ್ಲಿ ಕೊನೆಯ ಅಂಶದ ಬಗ್ಗೆ ಮಾತ್ರ ವಿಶ್ಲೇಷಿಸಲು ಯತ್ನಿಸಿದೆ.

ಇಲ್ಲಿ ದಲಿತ ಚಿಂತನೆಯೆಂದರೆ, ಜಾತಿಪದ್ಧತಿಯ ಕ್ರೌರ್ಯವನ್ನು ಕಾಣಿಸುವ, ದಲಿತರೇ ರೂಢಿಸಿಕೊಂಡಿರುವ ಭಾಷೆ, ಆಹಾರ, ಆಚರಣೆಗಳನ್ನು ಘನತೀಕರಿಸುವ; ಅಂಬೇಡ್ಕರ್ ಹಾಗೂ ಬೌದ್ಧಧಮ್ಮವನ್ನು ವಿಮೋಚನೆಯ ಹಾದಿಯೆಂದು ಕಾಣಿಸುವ ಆಶಯವುಳ್ಳ ಸಂಗತಿಗಳು. ತನ್ನ ಸಾಮಾಜಿಕ ರಾಜಕೀಯ ಬುನಾದಿಯ ವಿಸ್ತರಣೆಗಾಗಿ ದಲಿತರನ್ನು ಒಳಗೊಳ್ಳುವ, ಅವರಿಗೆ ಸ್ಥಾನಮಾನ ಕಲ್ಪಿಸುವ, ತನ್ನ ಸಿದ್ಧಾಂತದ ಪ್ರಚಾರಕ್ಕೆ ಬಳಸುವ ರಾಜಕಾರಣವನ್ನು ಮತೀಯವಾದವು ಸಮರ್ಥವಾಗಿ ಮಾಡಿಕೊಂಡು ಬಂದಿದೆ. ಅಂಬೇಡ್ಕರ್‌ವಾದದಲ್ಲಿ ರೂಪುಗೊಂಡ ದಲಿತ ನಾಯಕರನ್ನು ಕೂಡ ಒಳಗೊಂಡಿರುವುದು, ಅದರ ಸೈದ್ಧಾಂತಿಕ ತಂತ್ರಗಾರಿಕೆ ಮತ್ತು ರಾಜಕೀಯ ಯಶಸ್ಸಿನ ದೊಡ್ಡ ಸಾಧನೆಯಾಗಿದೆ. ಕಾಂಗ್ರೆಸ್ಸನ್ನು ಮತ್ತು ಮುಸ್ಲಿಮರನ್ನು ದುರುಳೀಕರಿಸಲು ಅಂಬೇಡ್ಕರ್ ಅವರು ನಿರ್ದಿಷ್ಟ ಚಾರಿತ್ರಿಕ ಸಂದರ್ಭದಲ್ಲಿ ಬರೆದ ಬರೆಹಗಳನ್ನು ತಂತ್ರಗಾರಿಕೆಯಿಂದ ಕೂಡ ವ್ಯಾಖ್ಯಾನಿಸುತ್ತಿದೆ. ಹಾಗಿದ್ದರೂ ಬಾಬಾಸಾಹೇಬರು ಪ್ರತಿಪಾದಿಸಿದ, ದಲಿತರ ವಿಮೋಚನೆಗೆ ಹಾದಿಹಾಸುವ ದಲಿತ ಚಿಂತನೆಯ ಮೇಲ್ಕಾಣಿಸಿದ ನಾಲ್ಕು ಅಂಶಗಳನ್ನು ಒಳಗೊಳ್ಳಲು ಅದು ಯಾಕೆ ಹಿಂಜರಿಯುತ್ತದೆ? ಯಾಕೆಂದರೆ, ಈ ನಾಲ್ಕು ಅಂಶಗಳು, ಹಿಂದುತ್ವದ ರಾಜಕಾರಣವನ್ನು, ಅರ್ಥಾತ್ ಅದರ ತಿರುಳಾದ ಬ್ರಾಹ್ಮಣವಾದವನ್ನು ಒಳಗಿನಿಂದಲೇ ಆಸ್ಫೋಟಿಸುತ್ತವೆ. ಹೀಗಾಗಿಯೇ ಅದು ಚೆನ್ನಣ್ಣ ವಾಲೀಕಾರರು ಬಾಬಾಸಾಹೇಬರ ಮೇಲೆ ಬರೆದ ಹಾಡನ್ನು ಕೈಬಿಟ್ಟಿದೆ. ಅರವಿಂದ ಮಾಲಗತ್ತಿಯವರ ಬುದ್ಧ ಮತ್ತು ಆತನ ಧಮ್ಮವನ್ನು ಕುರಿತ ಹಾಡನ್ನು ಹೊರಗಿಟ್ಟಿದೆ. ಬಸವಣ್ಣ ಅಂಬೇಡ್ಕರ್ ಬುದ್ಧ ಕುವೆಂಪು ಭಗತ್‌ಸಿಂಗ್ ಕುರಿತ ಅದರ ಆಳದಲ್ಲಿರುವ ಈ ಅಳುಕು ಮತ್ತು ಆತಂಕಗಳು, ಅದು ಮುಸ್ಲಿಮರ ಕ್ರೈಸ್ತರ ವಿರೋಧಿ ಎಂಬ ಜನಪ್ರಿಯ ಮಿಥ್ಯೆಯನ್ನು ಒಡೆದುಹಾಕಿವೆ. ಅದು ಕಟ್ಟಲಿರುವ ಸಮಾಜದಲ್ಲಿ ಮತ್ತು ದೇಶದಲ್ಲಿ ಯಾವೆಲ್ಲ ಸಂಗತಿಗಳು ಇರುತ್ತವೆ ಮತ್ತು ಇರುವುದಿಲ್ಲ ಎಂಬುದರ ಮುನ್ನೋಟವನ್ನು ಒದಗಿಸಿವೆ. ಆದ್ದರಿಂದ ಪರಿಷ್ಕೃತ ಪಠ್ಯಗಳು, ಮತೀಯವಾದಿ ಭಾರತದ ಪರಿಕಲ್ಪನೆಯಲ್ಲಿ (ಐಡಿಯಾ ಆಫ್ ಇಂಡಿಯಾ) ಯಾವೆಲ್ಲ ಮೌಲ್ಯಗಳ ಹೇರಿಕೆಯಾಗುತ್ತದೆ, ಯಾವನ್ನು ಬದಿಗೆ ಸರಿಸಲಾಗುತ್ತದೆ ಮತ್ತು ಯಾವನ್ನು ಮರೆಮಾಚಲಾಗುತ್ತದೆ ಎಂಬುದರ ಪ್ರಾತ್ಯಕ್ಷಿತೆಗಳಾಗಿವೆ. ಈ ಹಿನ್ನೆಲೆಯಲ್ಲಿ ಮತೀಯ ನಂಜಿನ ಪಠ್ಯಪುಸ್ತಕಗಳನ್ನು ಪ್ರತಿರೋಧಿಸುವ ಚಳವಳಿಯಲ್ಲಿ, ಬಸವ, ಕುವೆಂಪು, ಬುದ್ಧ ಮತ್ತು ಅಂಬೇಡ್ಕರ್ ನದಿಗಳು ಕೂಡಿರುವುದು ಆಕಸ್ಮಿಕವಾಗಿಲ್ಲ. ಈ ಪ್ರತಿರೋಧದ ಆಂದೋಲನವನ್ನು ದೇವನೂರರು ತಮ್ಮ ಪಠ್ಯ ಹಿಂತೆಗೆಯುವ ಮೂಲಕ ಆರಂಭಿಸಿರುವುದು ಕೂಡ ಆಕಸ್ಮಿಕವಾಗಿಲ್ಲ.


ಇದನ್ನೂ ಓದಿ: ಒಳಗೊಳ್ಳದ ಮಾದರಿಯ ಸರ್ಕಾರಕ್ಕೆ ವಿದೇಶದಿಂದ ಬಂದೊದಗಿದ ಘಾಸಿ

ಇದನ್ನೂ ಓದಿ: ಪಠ್ಯ ಪರಿಶೀಲಿಸಿದ ಸಮಿತಿಯ ಸದಸ್ಯರ್‍ಯಾರೂ ಪ್ರತಿಕ್ರಿಯೆಗೆ ಸಿದ್ಧರಿಲ್ಲ!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಜಾಮಿಯಾ ಮಿಲ್ಲಿಯಾ |’ಮುಸ್ಲಿಂ ಅಲ್ಪಸಂಖ್ಯಾತರ ಮೇಲಿನ ದೌರ್ಜನ್ಯ’ದ ಬಗ್ಗೆ ಪ್ರಶ್ನೆ ಕೇಳಿದ ಪ್ರಾಧ್ಯಾಪಕ ಅಮಾನತು

ಪದವಿ ಪರೀಕ್ಷೆಯ ಪ್ರಶ್ನೆ ಪತ್ರಿಕೆಯಲ್ಲಿದ್ದ "ಭಾರತದಲ್ಲಿ ಮುಸ್ಲಿಂ ಅಲ್ಪಸಂಖ್ಯಾತರ ಮೇಲಿನ ದೌರ್ಜನ್ಯದ ಬಗ್ಗೆ ವಿವರಿಸಿ" ಎಂಬ ಪ್ರಶ್ನೆಯ ಬಗ್ಗೆ ದೂರುಗಳು ಬಂದ ನಂತರ ದೆಹಲಿಯ ಜಾಮಿಯಾ ಮಿಲ್ಲಿಯಾ ಇಸ್ಲಾಮಿಯಾ ವಿಶ್ವವಿದ್ಯಾಲಯವು ಸಮಾಜ ಕಾರ್ಯ...

ಹುಬ್ಬಳ್ಳಿ ಮರ್ಯಾದೆಗೇಡು ಹತ್ಯೆ ಖಂಡಿಸಿ ಮಳವಳ್ಳಿಯಲ್ಲಿ ಪ್ರತಿಭಟನೆ

ಹುಬ್ಬಳ್ಳಿಯಲ್ಲಿ ನಡೆದ ಗರ್ಭಿಣಿ ಯುವತಿಯ ಮರ್ಯಾದೆಗೇಡು ಹತ್ಯೆ ಖಂಡಿಸಿ ಮಂಡ್ಯದ ಮಳವಳ್ಳಿ ಪಟ್ಟಣದ ಅನಂತ್ ರಾವ್ ವೃತ್ತದಲ್ಲಿ ಜನವಾದಿ ಮಹಿಳಾ ಸಂಘಟನೆ, ಡಿವೈಎಫ್‌ಐ, ಎಸ್‌ಎಫ್‌ಐ ಸಂಘಟನೆಗಳ ನೇತೃತ್ವದಲ್ಲಿ ಬುಧವಾರ (ಡಿ.24) ಪ್ರತಿಭಟನೆ ನಡೆಯಿತು....

ಕೇಂದ್ರದ ಜಿ ರಾಮ್‌ ಜಿ ಕಾಯ್ದೆ ವಿರುದ್ದ ತಮಿಳುನಾಡಿನಾದ್ಯಂತ ಬೃಹತ್ ಪ್ರತಿಭಟನೆ

ಕೇಂದ್ರದ ವಿಕಸಿತ್ ಭಾರತ್ ಗ್ಯಾರಂಟಿ ಫಾರ್ ರೋಝ್‌ಗಾರ್ ಅಂಡ್ ಅಜೀವಿಕ ಮಿಷನ್ (ಗ್ರಾಮೀಣ್) ಕಾಯ್ದೆ, 2025 (ವಿಬಿ-ಜಿ ರಾಮ್‌ ಜಿ) ವಿರುದ್ದ ತಮಿಳುನಾಡಿನ ಆಡಳಿತರೂಢ ಡಿಎಂಕೆ ಮೈತ್ರಿಕೂಟವು ಬುಧವಾರ (ಡಿ.24) ರಾಜ್ಯದಾದ್ಯಂತ ಬೃಹತ್...

ಮುಸ್ಲಿಮರನ್ನು ತುಚ್ಛವಾಗಿ ನಿಂದಿಸುತ್ತಿರುವ ಬಿಜೆಪಿ ನಾಯಕಿ ನಾಝಿಯಾ ಇಲಾಹಿ : ಕ್ರಮ ಕೈಗೊಳ್ಳದ ಪೊಲೀಸರು

ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ನಾಯಕಿ ಎನ್ನಲಾದ ನಾಝಿಯಾ ಇಲಾಹಿ (ನಾಝಿಯಾ ಇಲಾಹಿ ಖಾನ್) ಪದೇ ಪದೇ ಮುಸ್ಲಿಮರನ್ನು ತುಚ್ಛವಾಗಿ ನಿಂದಿಸಿ, ಅದರ ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ರಾಜಾರೋಷವಾಗಿ ಹಂಚಿಕೊಳ್ಳುತ್ತಿದ್ದು, ಪೊಲೀಸರು ಯಾವುದೇ ಕ್ರಮ...

ತೆಲಂಗಾಣ: ಸರಪಂಚ್ ಚುನಾವಣೆಯಲ್ಲಿ ಬೆಂಬಲಿಸದ ದಲಿತ ಕುಟುಂಬದ ಮನೆ ಕೆಡವಿದ ಕಾಂಗ್ರೆಸ್ ಸದಸ್ಯರು

ಕಾಂಗ್ರೆಸ್ ಬೆಂಬಲಿತ ಸರಪಂಚ್ ಆಗಿ ಪ್ರಮಾಣವಚನ ಸ್ವೀಕರಿಸಿದ ಕೆಲವೇ ಗಂಟೆಗಳಲ್ಲಿ, ಪದ್ಮಾವತಿ ಮತ್ತು ಅವರ ಮಗ ಪ್ರಸಾದ್ ರೆಡ್ಡಿ ಎಂಬುವವರು ಸೋಮವಾರ ಕೊಹಿರ್ ಮಂಡಲದ ಸಜ್ಜಾಪುರದಲ್ಲಿ ನಿರ್ಮಾಣ ಹಂತದಲ್ಲಿದ್ದ ದಲಿತ ಕುಟುಂಬದ ಮನೆಯನ್ನು...

“ಆತ್ಮಹತ್ಯೆಗೆ ಮುಂದಾದೆ, ಕುಟುಂಬ ನೆನೆದು ಸುಮ್ಮನಾದೆ”: ನೋವು ತೋಡಿಕೊಂಡ ಉನ್ನಾವೋ ಅತ್ಯಾಚಾರ ಸಂತ್ರಸ್ತೆ

"ನಾನು ಆತ್ಮಹತ್ಯೆ ಮಾಡಿಕೊಳ್ಳಬೇಕೆಂದಿದ್ದೆ. ಆದರೆ, ನನ್ನ ಕುಟುಂಬವನ್ನು ನೆನೆದು ಸುಮ್ಮನಾದೆ" ಇದು ಉನ್ನಾವೋ ಅತ್ಯಾಚಾರ ಪ್ರಕರಣದ ಸಂತ್ರಸ್ತೆ ಮಂಗಳವಾರ (2025 ಡಿಸೆಂಬರ್ 24) ಸಂಜೆ ದೆಹಲಿಯ ಇಂಡಿಯಾ ಗೇಟ್ ಎದುರಿನ ಹುಲ್ಲುಹಾಸಿನ ಮೇಲೆ...

ಜಿಬಿಎ ಅಧಿಕಾರಿಗಳಿಂದ ಮನೆಗಳ ನೆಲಸಮ : ತೀವ್ರ ಖಂಡನೆ ವ್ಯಕ್ತಪಡಿಸಿದ ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿ

ಬೆಂಗಳೂರು ಉತ್ತರ ನಗರ ಪಾಲಿಕೆ ವ್ಯಾಪ್ತಿಯ ಕೋಗಿಲು ಗ್ರಾಮದಲ್ಲಿ ಬಡ ಜನರ ಸುಮಾರು 150 ಮನೆಗಳನ್ನು ಏಕಾಏಕಿ ನೆಲಸಮಗೊಳಿಸಿರುವ ಗ್ರೇಟರ್ ಬೆಂಗಳೂರು ಪ್ರಾಧಿಕಾರದ (ಜಿಬಿಎ) ಕ್ರಮವನ್ನು ಭೂಮಿ ಮತ್ತು ವಸತಿ ಹಕ್ಕು ವಂಚಿತರ...

17ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ : ರಾಯಭಾರಿಯಾಗಿ ನಟ ಪ್ರಕಾಶ್ ರಾಜ್ ಆಯ್ಕೆ

17ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ 2026ರ ಜನವರಿ 29ರಿಂದ ಫೆಬ್ರವರಿ 6ರವರೆಗೆ ನಡೆಯಲಿದ್ದು, ರಾಯಭಾರಿಯಾಗಿ ಹಿರಿಯ ನಟ, ನಿರ್ದೇಶಕ ಹಾಗೂ ನಿರ್ಮಾಪಕರು ಪ್ರಕಾಶ್ ರಾಜ್ ಅವರನ್ನು ಆಯ್ಕೆ ಮಾಡಲಾಗಿದೆ. ಚಲನಚಿತ್ರೋತ್ಸವದ ಪೂರ್ವಭಾವಿಯಾಗಿ ಸಂಘಟನಾ...

ಗುಂಪು ಹತ್ಯೆ ಪ್ರಕರಣ ಹಿಂಪಡೆಯಲು ಮುಂದಾದ ಯುಪಿ ಸರ್ಕಾರ : ಹೈಕೋರ್ಟ್ ಮೆಟ್ಟಿಲೇರಿದ ಅಖ್ಲಾಕ್ ಪತ್ನಿ

ದಾದ್ರಿ ಗುಂಪು ಹತ್ಯೆ ಪ್ರಕರಣದ ಬಲಿಪಶು ಮೊಹಮ್ಮದ್ ಅಖ್ಲಾಕ್ ಅವರ ಪತ್ನಿ, ಆರೋಪಿಗಳ ವಿರುದ್ಧದ ಪ್ರಕರಣವನ್ನು ಹಿಂಪಡೆಯುವ ಉತ್ತರ ಪ್ರದೇಶ ಸರ್ಕಾರದ ನಿರ್ಧಾರ ಮತ್ತು ಗೌತಮ್ ಬುದ್ಧ ನಗರದ ನ್ಯಾಯಾಲಯದಲ್ಲಿ ಪ್ರಾಸಿಕ್ಯೂಟರ್ ಸಲ್ಲಿಸಿರುವ...

ಉನ್ನಾವೋ ಅತ್ಯಾಚಾರ ಪ್ರಕರಣ: ಅಪರಾಧಿ ಕುಲದೀಪ್ ಸಿಂಗ್ ಸೆಂಗಾರ್‌ ಜೀವಾವಧಿ ಶಿಕ್ಷೆ ಅಮಾನತು

ಉನ್ನಾವೋ ಅತ್ಯಾಚಾರ ಪ್ರಕರಣದ (2017ರ ಪ್ರಕರಣ) ಅಪರಾಧಿ, ಬಿಜೆಪಿ ಮಾಜಿ ಶಾಸಕ ಕುಲದೀಪ್ ಸಿಂಗ್ ಸೆಂಗಾರ್‌ಗೆ ದೆಹಲಿ ಹೈಕೋರ್ಟ್ ಮಂಗಳವಾರ (ಡಿ.23) ಜಾಮೀನು ಮಂಜೂರು ಮಾಡಿದೆ. ನ್ಯಾಯಾಧೀಶರಾದ ಸುಬ್ರಹ್ಮಣ್ಯಂ ಪ್ರಸಾದ್ ಮತ್ತು ಹರೀಶ್ ವೈದ್ಯನಾಥನ್...