Homeಕರ್ನಾಟಕಪಠ್ಯಪುಸ್ತಕ ಮತ್ತು ದಲಿತ ಚಿಂತನೆಗಳ ಹೊರಗಿಡುವಿಕೆ

ಪಠ್ಯಪುಸ್ತಕ ಮತ್ತು ದಲಿತ ಚಿಂತನೆಗಳ ಹೊರಗಿಡುವಿಕೆ

- Advertisement -
- Advertisement -

ಭಾರತದ ಬಹುಸಂಖ್ಯಾತ ಮತೀಯವಾದವು ತನ್ನ ರಾಜಕೀಯ ಸಾಮಾಜಿಕ ಧಾರ್ಮಿಕ ಐಡಿಯಾಲಜಿಯನ್ನು ಹೇರಲು ಹೇಗೆ ಪಠ್ಯಪುಸ್ತಕಗಳನ್ನು ಪ್ರಮುಖ ಮಾಧ್ಯಮವಾಗಿಸಿಕೊಳ್ಳುತ್ತದೆ ಎಂಬುದು, ಈಚಿನ ಪಠ್ಯಪರಿಷ್ಕರಣೆಯ ಪ್ರಕರಣದಲ್ಲಿ ಸಾರ್ವಜನಿಕಗೊಂಡಿದೆ. ಈ ವಿವಾದದಲ್ಲಿ ಬಹಿರಂಗಗೊಂಡಿರುವ ಇನ್ನೊಂದು ಮುಖವೆಂದರೆ, ಅದು ಏನೆಲ್ಲವನ್ನು ಆಚೆಗಿಡುತ್ತದೆ ಅಥವಾ ಒಳಗೊಳ್ಳಲು ಅಳುಕುತ್ತದೆ ಎನ್ನುವುದು. ಅದು ಒಳಗೊಳ್ಳಲು ನಿರಾಕರಿಸುವ ಸಂಗತಿಗಳಲ್ಲಿ ಮುಸ್ಲಿಮರ ಕೊಡುಗೆ, ಸ್ತ್ರೀಸಮಾನತೆ
ಅಥವಾ ಲಿಂಗತಾರತಮ್ಯ ವಿರೋಧ, ಜಾತಿವಾದ ನಿರಾಕರಣೆ, ಸಮಾಜವಾದಿ ಆಶಯ ಹಾಗೂ ದಲಿತ ಚಿಂತನೆಗೆ ಸಂಬಂಧಿಸಿದವಾಗಿವೆ. ಈ ಟಿಪ್ಪಣಿಯಲ್ಲಿ ಕೊನೆಯ ಅಂಶದ ಬಗ್ಗೆ ಮಾತ್ರ ವಿಶ್ಲೇಷಿಸಲು ಯತ್ನಿಸಿದೆ.

ಇಲ್ಲಿ ದಲಿತ ಚಿಂತನೆಯೆಂದರೆ, ಜಾತಿಪದ್ಧತಿಯ ಕ್ರೌರ್ಯವನ್ನು ಕಾಣಿಸುವ, ದಲಿತರೇ ರೂಢಿಸಿಕೊಂಡಿರುವ ಭಾಷೆ, ಆಹಾರ, ಆಚರಣೆಗಳನ್ನು ಘನತೀಕರಿಸುವ; ಅಂಬೇಡ್ಕರ್ ಹಾಗೂ ಬೌದ್ಧಧಮ್ಮವನ್ನು ವಿಮೋಚನೆಯ ಹಾದಿಯೆಂದು ಕಾಣಿಸುವ ಆಶಯವುಳ್ಳ ಸಂಗತಿಗಳು. ತನ್ನ ಸಾಮಾಜಿಕ ರಾಜಕೀಯ ಬುನಾದಿಯ ವಿಸ್ತರಣೆಗಾಗಿ ದಲಿತರನ್ನು ಒಳಗೊಳ್ಳುವ, ಅವರಿಗೆ ಸ್ಥಾನಮಾನ ಕಲ್ಪಿಸುವ, ತನ್ನ ಸಿದ್ಧಾಂತದ ಪ್ರಚಾರಕ್ಕೆ ಬಳಸುವ ರಾಜಕಾರಣವನ್ನು ಮತೀಯವಾದವು ಸಮರ್ಥವಾಗಿ ಮಾಡಿಕೊಂಡು ಬಂದಿದೆ. ಅಂಬೇಡ್ಕರ್‌ವಾದದಲ್ಲಿ ರೂಪುಗೊಂಡ ದಲಿತ ನಾಯಕರನ್ನು ಕೂಡ ಒಳಗೊಂಡಿರುವುದು, ಅದರ ಸೈದ್ಧಾಂತಿಕ ತಂತ್ರಗಾರಿಕೆ ಮತ್ತು ರಾಜಕೀಯ ಯಶಸ್ಸಿನ ದೊಡ್ಡ ಸಾಧನೆಯಾಗಿದೆ. ಕಾಂಗ್ರೆಸ್ಸನ್ನು ಮತ್ತು ಮುಸ್ಲಿಮರನ್ನು ದುರುಳೀಕರಿಸಲು ಅಂಬೇಡ್ಕರ್ ಅವರು ನಿರ್ದಿಷ್ಟ ಚಾರಿತ್ರಿಕ ಸಂದರ್ಭದಲ್ಲಿ ಬರೆದ ಬರೆಹಗಳನ್ನು ತಂತ್ರಗಾರಿಕೆಯಿಂದ ಕೂಡ ವ್ಯಾಖ್ಯಾನಿಸುತ್ತಿದೆ. ಹಾಗಿದ್ದರೂ ಬಾಬಾಸಾಹೇಬರು ಪ್ರತಿಪಾದಿಸಿದ, ದಲಿತರ ವಿಮೋಚನೆಗೆ ಹಾದಿಹಾಸುವ ದಲಿತ ಚಿಂತನೆಯ ಮೇಲ್ಕಾಣಿಸಿದ ನಾಲ್ಕು ಅಂಶಗಳನ್ನು ಒಳಗೊಳ್ಳಲು ಅದು ಯಾಕೆ ಹಿಂಜರಿಯುತ್ತದೆ? ಯಾಕೆಂದರೆ, ಈ ನಾಲ್ಕು ಅಂಶಗಳು, ಹಿಂದುತ್ವದ ರಾಜಕಾರಣವನ್ನು, ಅರ್ಥಾತ್ ಅದರ ತಿರುಳಾದ ಬ್ರಾಹ್ಮಣವಾದವನ್ನು ಒಳಗಿನಿಂದಲೇ ಆಸ್ಫೋಟಿಸುತ್ತವೆ. ಹೀಗಾಗಿಯೇ ಅದು ಚೆನ್ನಣ್ಣ ವಾಲೀಕಾರರು ಬಾಬಾಸಾಹೇಬರ ಮೇಲೆ ಬರೆದ ಹಾಡನ್ನು ಕೈಬಿಟ್ಟಿದೆ. ಅರವಿಂದ ಮಾಲಗತ್ತಿಯವರ ಬುದ್ಧ ಮತ್ತು ಆತನ ಧಮ್ಮವನ್ನು ಕುರಿತ ಹಾಡನ್ನು ಹೊರಗಿಟ್ಟಿದೆ. ಬಸವಣ್ಣ ಅಂಬೇಡ್ಕರ್ ಬುದ್ಧ ಕುವೆಂಪು ಭಗತ್‌ಸಿಂಗ್ ಕುರಿತ ಅದರ ಆಳದಲ್ಲಿರುವ ಈ ಅಳುಕು ಮತ್ತು ಆತಂಕಗಳು, ಅದು ಮುಸ್ಲಿಮರ ಕ್ರೈಸ್ತರ ವಿರೋಧಿ ಎಂಬ ಜನಪ್ರಿಯ ಮಿಥ್ಯೆಯನ್ನು ಒಡೆದುಹಾಕಿವೆ. ಅದು ಕಟ್ಟಲಿರುವ ಸಮಾಜದಲ್ಲಿ ಮತ್ತು ದೇಶದಲ್ಲಿ ಯಾವೆಲ್ಲ ಸಂಗತಿಗಳು ಇರುತ್ತವೆ ಮತ್ತು ಇರುವುದಿಲ್ಲ ಎಂಬುದರ ಮುನ್ನೋಟವನ್ನು ಒದಗಿಸಿವೆ. ಆದ್ದರಿಂದ ಪರಿಷ್ಕೃತ ಪಠ್ಯಗಳು, ಮತೀಯವಾದಿ ಭಾರತದ ಪರಿಕಲ್ಪನೆಯಲ್ಲಿ (ಐಡಿಯಾ ಆಫ್ ಇಂಡಿಯಾ) ಯಾವೆಲ್ಲ ಮೌಲ್ಯಗಳ ಹೇರಿಕೆಯಾಗುತ್ತದೆ, ಯಾವನ್ನು ಬದಿಗೆ ಸರಿಸಲಾಗುತ್ತದೆ ಮತ್ತು ಯಾವನ್ನು ಮರೆಮಾಚಲಾಗುತ್ತದೆ ಎಂಬುದರ ಪ್ರಾತ್ಯಕ್ಷಿತೆಗಳಾಗಿವೆ. ಈ ಹಿನ್ನೆಲೆಯಲ್ಲಿ ಮತೀಯ ನಂಜಿನ ಪಠ್ಯಪುಸ್ತಕಗಳನ್ನು ಪ್ರತಿರೋಧಿಸುವ ಚಳವಳಿಯಲ್ಲಿ, ಬಸವ, ಕುವೆಂಪು, ಬುದ್ಧ ಮತ್ತು ಅಂಬೇಡ್ಕರ್ ನದಿಗಳು ಕೂಡಿರುವುದು ಆಕಸ್ಮಿಕವಾಗಿಲ್ಲ. ಈ ಪ್ರತಿರೋಧದ ಆಂದೋಲನವನ್ನು ದೇವನೂರರು ತಮ್ಮ ಪಠ್ಯ ಹಿಂತೆಗೆಯುವ ಮೂಲಕ ಆರಂಭಿಸಿರುವುದು ಕೂಡ ಆಕಸ್ಮಿಕವಾಗಿಲ್ಲ.


ಇದನ್ನೂ ಓದಿ: ಒಳಗೊಳ್ಳದ ಮಾದರಿಯ ಸರ್ಕಾರಕ್ಕೆ ವಿದೇಶದಿಂದ ಬಂದೊದಗಿದ ಘಾಸಿ

ಇದನ್ನೂ ಓದಿ: ಪಠ್ಯ ಪರಿಶೀಲಿಸಿದ ಸಮಿತಿಯ ಸದಸ್ಯರ್‍ಯಾರೂ ಪ್ರತಿಕ್ರಿಯೆಗೆ ಸಿದ್ಧರಿಲ್ಲ!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...