Homeಕರ್ನಾಟಕಪಠ್ಯಪುಸ್ತಕ ಮತ್ತು ದಲಿತ ಚಿಂತನೆಗಳ ಹೊರಗಿಡುವಿಕೆ

ಪಠ್ಯಪುಸ್ತಕ ಮತ್ತು ದಲಿತ ಚಿಂತನೆಗಳ ಹೊರಗಿಡುವಿಕೆ

- Advertisement -
- Advertisement -

ಭಾರತದ ಬಹುಸಂಖ್ಯಾತ ಮತೀಯವಾದವು ತನ್ನ ರಾಜಕೀಯ ಸಾಮಾಜಿಕ ಧಾರ್ಮಿಕ ಐಡಿಯಾಲಜಿಯನ್ನು ಹೇರಲು ಹೇಗೆ ಪಠ್ಯಪುಸ್ತಕಗಳನ್ನು ಪ್ರಮುಖ ಮಾಧ್ಯಮವಾಗಿಸಿಕೊಳ್ಳುತ್ತದೆ ಎಂಬುದು, ಈಚಿನ ಪಠ್ಯಪರಿಷ್ಕರಣೆಯ ಪ್ರಕರಣದಲ್ಲಿ ಸಾರ್ವಜನಿಕಗೊಂಡಿದೆ. ಈ ವಿವಾದದಲ್ಲಿ ಬಹಿರಂಗಗೊಂಡಿರುವ ಇನ್ನೊಂದು ಮುಖವೆಂದರೆ, ಅದು ಏನೆಲ್ಲವನ್ನು ಆಚೆಗಿಡುತ್ತದೆ ಅಥವಾ ಒಳಗೊಳ್ಳಲು ಅಳುಕುತ್ತದೆ ಎನ್ನುವುದು. ಅದು ಒಳಗೊಳ್ಳಲು ನಿರಾಕರಿಸುವ ಸಂಗತಿಗಳಲ್ಲಿ ಮುಸ್ಲಿಮರ ಕೊಡುಗೆ, ಸ್ತ್ರೀಸಮಾನತೆ
ಅಥವಾ ಲಿಂಗತಾರತಮ್ಯ ವಿರೋಧ, ಜಾತಿವಾದ ನಿರಾಕರಣೆ, ಸಮಾಜವಾದಿ ಆಶಯ ಹಾಗೂ ದಲಿತ ಚಿಂತನೆಗೆ ಸಂಬಂಧಿಸಿದವಾಗಿವೆ. ಈ ಟಿಪ್ಪಣಿಯಲ್ಲಿ ಕೊನೆಯ ಅಂಶದ ಬಗ್ಗೆ ಮಾತ್ರ ವಿಶ್ಲೇಷಿಸಲು ಯತ್ನಿಸಿದೆ.

ಇಲ್ಲಿ ದಲಿತ ಚಿಂತನೆಯೆಂದರೆ, ಜಾತಿಪದ್ಧತಿಯ ಕ್ರೌರ್ಯವನ್ನು ಕಾಣಿಸುವ, ದಲಿತರೇ ರೂಢಿಸಿಕೊಂಡಿರುವ ಭಾಷೆ, ಆಹಾರ, ಆಚರಣೆಗಳನ್ನು ಘನತೀಕರಿಸುವ; ಅಂಬೇಡ್ಕರ್ ಹಾಗೂ ಬೌದ್ಧಧಮ್ಮವನ್ನು ವಿಮೋಚನೆಯ ಹಾದಿಯೆಂದು ಕಾಣಿಸುವ ಆಶಯವುಳ್ಳ ಸಂಗತಿಗಳು. ತನ್ನ ಸಾಮಾಜಿಕ ರಾಜಕೀಯ ಬುನಾದಿಯ ವಿಸ್ತರಣೆಗಾಗಿ ದಲಿತರನ್ನು ಒಳಗೊಳ್ಳುವ, ಅವರಿಗೆ ಸ್ಥಾನಮಾನ ಕಲ್ಪಿಸುವ, ತನ್ನ ಸಿದ್ಧಾಂತದ ಪ್ರಚಾರಕ್ಕೆ ಬಳಸುವ ರಾಜಕಾರಣವನ್ನು ಮತೀಯವಾದವು ಸಮರ್ಥವಾಗಿ ಮಾಡಿಕೊಂಡು ಬಂದಿದೆ. ಅಂಬೇಡ್ಕರ್‌ವಾದದಲ್ಲಿ ರೂಪುಗೊಂಡ ದಲಿತ ನಾಯಕರನ್ನು ಕೂಡ ಒಳಗೊಂಡಿರುವುದು, ಅದರ ಸೈದ್ಧಾಂತಿಕ ತಂತ್ರಗಾರಿಕೆ ಮತ್ತು ರಾಜಕೀಯ ಯಶಸ್ಸಿನ ದೊಡ್ಡ ಸಾಧನೆಯಾಗಿದೆ. ಕಾಂಗ್ರೆಸ್ಸನ್ನು ಮತ್ತು ಮುಸ್ಲಿಮರನ್ನು ದುರುಳೀಕರಿಸಲು ಅಂಬೇಡ್ಕರ್ ಅವರು ನಿರ್ದಿಷ್ಟ ಚಾರಿತ್ರಿಕ ಸಂದರ್ಭದಲ್ಲಿ ಬರೆದ ಬರೆಹಗಳನ್ನು ತಂತ್ರಗಾರಿಕೆಯಿಂದ ಕೂಡ ವ್ಯಾಖ್ಯಾನಿಸುತ್ತಿದೆ. ಹಾಗಿದ್ದರೂ ಬಾಬಾಸಾಹೇಬರು ಪ್ರತಿಪಾದಿಸಿದ, ದಲಿತರ ವಿಮೋಚನೆಗೆ ಹಾದಿಹಾಸುವ ದಲಿತ ಚಿಂತನೆಯ ಮೇಲ್ಕಾಣಿಸಿದ ನಾಲ್ಕು ಅಂಶಗಳನ್ನು ಒಳಗೊಳ್ಳಲು ಅದು ಯಾಕೆ ಹಿಂಜರಿಯುತ್ತದೆ? ಯಾಕೆಂದರೆ, ಈ ನಾಲ್ಕು ಅಂಶಗಳು, ಹಿಂದುತ್ವದ ರಾಜಕಾರಣವನ್ನು, ಅರ್ಥಾತ್ ಅದರ ತಿರುಳಾದ ಬ್ರಾಹ್ಮಣವಾದವನ್ನು ಒಳಗಿನಿಂದಲೇ ಆಸ್ಫೋಟಿಸುತ್ತವೆ. ಹೀಗಾಗಿಯೇ ಅದು ಚೆನ್ನಣ್ಣ ವಾಲೀಕಾರರು ಬಾಬಾಸಾಹೇಬರ ಮೇಲೆ ಬರೆದ ಹಾಡನ್ನು ಕೈಬಿಟ್ಟಿದೆ. ಅರವಿಂದ ಮಾಲಗತ್ತಿಯವರ ಬುದ್ಧ ಮತ್ತು ಆತನ ಧಮ್ಮವನ್ನು ಕುರಿತ ಹಾಡನ್ನು ಹೊರಗಿಟ್ಟಿದೆ. ಬಸವಣ್ಣ ಅಂಬೇಡ್ಕರ್ ಬುದ್ಧ ಕುವೆಂಪು ಭಗತ್‌ಸಿಂಗ್ ಕುರಿತ ಅದರ ಆಳದಲ್ಲಿರುವ ಈ ಅಳುಕು ಮತ್ತು ಆತಂಕಗಳು, ಅದು ಮುಸ್ಲಿಮರ ಕ್ರೈಸ್ತರ ವಿರೋಧಿ ಎಂಬ ಜನಪ್ರಿಯ ಮಿಥ್ಯೆಯನ್ನು ಒಡೆದುಹಾಕಿವೆ. ಅದು ಕಟ್ಟಲಿರುವ ಸಮಾಜದಲ್ಲಿ ಮತ್ತು ದೇಶದಲ್ಲಿ ಯಾವೆಲ್ಲ ಸಂಗತಿಗಳು ಇರುತ್ತವೆ ಮತ್ತು ಇರುವುದಿಲ್ಲ ಎಂಬುದರ ಮುನ್ನೋಟವನ್ನು ಒದಗಿಸಿವೆ. ಆದ್ದರಿಂದ ಪರಿಷ್ಕೃತ ಪಠ್ಯಗಳು, ಮತೀಯವಾದಿ ಭಾರತದ ಪರಿಕಲ್ಪನೆಯಲ್ಲಿ (ಐಡಿಯಾ ಆಫ್ ಇಂಡಿಯಾ) ಯಾವೆಲ್ಲ ಮೌಲ್ಯಗಳ ಹೇರಿಕೆಯಾಗುತ್ತದೆ, ಯಾವನ್ನು ಬದಿಗೆ ಸರಿಸಲಾಗುತ್ತದೆ ಮತ್ತು ಯಾವನ್ನು ಮರೆಮಾಚಲಾಗುತ್ತದೆ ಎಂಬುದರ ಪ್ರಾತ್ಯಕ್ಷಿತೆಗಳಾಗಿವೆ. ಈ ಹಿನ್ನೆಲೆಯಲ್ಲಿ ಮತೀಯ ನಂಜಿನ ಪಠ್ಯಪುಸ್ತಕಗಳನ್ನು ಪ್ರತಿರೋಧಿಸುವ ಚಳವಳಿಯಲ್ಲಿ, ಬಸವ, ಕುವೆಂಪು, ಬುದ್ಧ ಮತ್ತು ಅಂಬೇಡ್ಕರ್ ನದಿಗಳು ಕೂಡಿರುವುದು ಆಕಸ್ಮಿಕವಾಗಿಲ್ಲ. ಈ ಪ್ರತಿರೋಧದ ಆಂದೋಲನವನ್ನು ದೇವನೂರರು ತಮ್ಮ ಪಠ್ಯ ಹಿಂತೆಗೆಯುವ ಮೂಲಕ ಆರಂಭಿಸಿರುವುದು ಕೂಡ ಆಕಸ್ಮಿಕವಾಗಿಲ್ಲ.


ಇದನ್ನೂ ಓದಿ: ಒಳಗೊಳ್ಳದ ಮಾದರಿಯ ಸರ್ಕಾರಕ್ಕೆ ವಿದೇಶದಿಂದ ಬಂದೊದಗಿದ ಘಾಸಿ

ಇದನ್ನೂ ಓದಿ: ಪಠ್ಯ ಪರಿಶೀಲಿಸಿದ ಸಮಿತಿಯ ಸದಸ್ಯರ್‍ಯಾರೂ ಪ್ರತಿಕ್ರಿಯೆಗೆ ಸಿದ್ಧರಿಲ್ಲ!

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಕಾಂಗ್ರೆಸ್ ಪ್ರಣಾಳಿಕೆ ಬಗ್ಗೆ ವಿವರಿಸಲು ಸಮಯಾವಕಾಶ ಕೋರಿ ಪ್ರಧಾನಿಗೆ ಖರ್ಗೆ ಪತ್ರ

0
ಲೋಕಸಭೆ ಚುನಾವಣೆಯ ಕಾಂಗ್ರೆಸ್ ಪ್ರಣಾಳಿಕೆ 'ನ್ಯಾಯಪತ್ರ'ದ ಕುರಿತು ಪ್ರಧಾನಿ ಮೋದಿ ಸರಣಿ ಹೇಳಿಕೆಗಳನ್ನು ಕೊಡುತ್ತಿದ್ದು, ಈ ಹಿನ್ನೆಲೆ ಪ್ರಣಾಳಿಕೆಯ ಕುರಿತು ವಿವರಿಸಲು ಸಮಯ ಕೋರಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪತ್ರ ಬರೆದಿದ್ದಾರೆ. ಖರ್ಗೆ...