Homeಕರ್ನಾಟಕಪಠ್ಯಪುಸ್ತಕ ಮತ್ತು ದಲಿತ ಚಿಂತನೆಗಳ ಹೊರಗಿಡುವಿಕೆ

ಪಠ್ಯಪುಸ್ತಕ ಮತ್ತು ದಲಿತ ಚಿಂತನೆಗಳ ಹೊರಗಿಡುವಿಕೆ

- Advertisement -
- Advertisement -

ಭಾರತದ ಬಹುಸಂಖ್ಯಾತ ಮತೀಯವಾದವು ತನ್ನ ರಾಜಕೀಯ ಸಾಮಾಜಿಕ ಧಾರ್ಮಿಕ ಐಡಿಯಾಲಜಿಯನ್ನು ಹೇರಲು ಹೇಗೆ ಪಠ್ಯಪುಸ್ತಕಗಳನ್ನು ಪ್ರಮುಖ ಮಾಧ್ಯಮವಾಗಿಸಿಕೊಳ್ಳುತ್ತದೆ ಎಂಬುದು, ಈಚಿನ ಪಠ್ಯಪರಿಷ್ಕರಣೆಯ ಪ್ರಕರಣದಲ್ಲಿ ಸಾರ್ವಜನಿಕಗೊಂಡಿದೆ. ಈ ವಿವಾದದಲ್ಲಿ ಬಹಿರಂಗಗೊಂಡಿರುವ ಇನ್ನೊಂದು ಮುಖವೆಂದರೆ, ಅದು ಏನೆಲ್ಲವನ್ನು ಆಚೆಗಿಡುತ್ತದೆ ಅಥವಾ ಒಳಗೊಳ್ಳಲು ಅಳುಕುತ್ತದೆ ಎನ್ನುವುದು. ಅದು ಒಳಗೊಳ್ಳಲು ನಿರಾಕರಿಸುವ ಸಂಗತಿಗಳಲ್ಲಿ ಮುಸ್ಲಿಮರ ಕೊಡುಗೆ, ಸ್ತ್ರೀಸಮಾನತೆ
ಅಥವಾ ಲಿಂಗತಾರತಮ್ಯ ವಿರೋಧ, ಜಾತಿವಾದ ನಿರಾಕರಣೆ, ಸಮಾಜವಾದಿ ಆಶಯ ಹಾಗೂ ದಲಿತ ಚಿಂತನೆಗೆ ಸಂಬಂಧಿಸಿದವಾಗಿವೆ. ಈ ಟಿಪ್ಪಣಿಯಲ್ಲಿ ಕೊನೆಯ ಅಂಶದ ಬಗ್ಗೆ ಮಾತ್ರ ವಿಶ್ಲೇಷಿಸಲು ಯತ್ನಿಸಿದೆ.

ಇಲ್ಲಿ ದಲಿತ ಚಿಂತನೆಯೆಂದರೆ, ಜಾತಿಪದ್ಧತಿಯ ಕ್ರೌರ್ಯವನ್ನು ಕಾಣಿಸುವ, ದಲಿತರೇ ರೂಢಿಸಿಕೊಂಡಿರುವ ಭಾಷೆ, ಆಹಾರ, ಆಚರಣೆಗಳನ್ನು ಘನತೀಕರಿಸುವ; ಅಂಬೇಡ್ಕರ್ ಹಾಗೂ ಬೌದ್ಧಧಮ್ಮವನ್ನು ವಿಮೋಚನೆಯ ಹಾದಿಯೆಂದು ಕಾಣಿಸುವ ಆಶಯವುಳ್ಳ ಸಂಗತಿಗಳು. ತನ್ನ ಸಾಮಾಜಿಕ ರಾಜಕೀಯ ಬುನಾದಿಯ ವಿಸ್ತರಣೆಗಾಗಿ ದಲಿತರನ್ನು ಒಳಗೊಳ್ಳುವ, ಅವರಿಗೆ ಸ್ಥಾನಮಾನ ಕಲ್ಪಿಸುವ, ತನ್ನ ಸಿದ್ಧಾಂತದ ಪ್ರಚಾರಕ್ಕೆ ಬಳಸುವ ರಾಜಕಾರಣವನ್ನು ಮತೀಯವಾದವು ಸಮರ್ಥವಾಗಿ ಮಾಡಿಕೊಂಡು ಬಂದಿದೆ. ಅಂಬೇಡ್ಕರ್‌ವಾದದಲ್ಲಿ ರೂಪುಗೊಂಡ ದಲಿತ ನಾಯಕರನ್ನು ಕೂಡ ಒಳಗೊಂಡಿರುವುದು, ಅದರ ಸೈದ್ಧಾಂತಿಕ ತಂತ್ರಗಾರಿಕೆ ಮತ್ತು ರಾಜಕೀಯ ಯಶಸ್ಸಿನ ದೊಡ್ಡ ಸಾಧನೆಯಾಗಿದೆ. ಕಾಂಗ್ರೆಸ್ಸನ್ನು ಮತ್ತು ಮುಸ್ಲಿಮರನ್ನು ದುರುಳೀಕರಿಸಲು ಅಂಬೇಡ್ಕರ್ ಅವರು ನಿರ್ದಿಷ್ಟ ಚಾರಿತ್ರಿಕ ಸಂದರ್ಭದಲ್ಲಿ ಬರೆದ ಬರೆಹಗಳನ್ನು ತಂತ್ರಗಾರಿಕೆಯಿಂದ ಕೂಡ ವ್ಯಾಖ್ಯಾನಿಸುತ್ತಿದೆ. ಹಾಗಿದ್ದರೂ ಬಾಬಾಸಾಹೇಬರು ಪ್ರತಿಪಾದಿಸಿದ, ದಲಿತರ ವಿಮೋಚನೆಗೆ ಹಾದಿಹಾಸುವ ದಲಿತ ಚಿಂತನೆಯ ಮೇಲ್ಕಾಣಿಸಿದ ನಾಲ್ಕು ಅಂಶಗಳನ್ನು ಒಳಗೊಳ್ಳಲು ಅದು ಯಾಕೆ ಹಿಂಜರಿಯುತ್ತದೆ? ಯಾಕೆಂದರೆ, ಈ ನಾಲ್ಕು ಅಂಶಗಳು, ಹಿಂದುತ್ವದ ರಾಜಕಾರಣವನ್ನು, ಅರ್ಥಾತ್ ಅದರ ತಿರುಳಾದ ಬ್ರಾಹ್ಮಣವಾದವನ್ನು ಒಳಗಿನಿಂದಲೇ ಆಸ್ಫೋಟಿಸುತ್ತವೆ. ಹೀಗಾಗಿಯೇ ಅದು ಚೆನ್ನಣ್ಣ ವಾಲೀಕಾರರು ಬಾಬಾಸಾಹೇಬರ ಮೇಲೆ ಬರೆದ ಹಾಡನ್ನು ಕೈಬಿಟ್ಟಿದೆ. ಅರವಿಂದ ಮಾಲಗತ್ತಿಯವರ ಬುದ್ಧ ಮತ್ತು ಆತನ ಧಮ್ಮವನ್ನು ಕುರಿತ ಹಾಡನ್ನು ಹೊರಗಿಟ್ಟಿದೆ. ಬಸವಣ್ಣ ಅಂಬೇಡ್ಕರ್ ಬುದ್ಧ ಕುವೆಂಪು ಭಗತ್‌ಸಿಂಗ್ ಕುರಿತ ಅದರ ಆಳದಲ್ಲಿರುವ ಈ ಅಳುಕು ಮತ್ತು ಆತಂಕಗಳು, ಅದು ಮುಸ್ಲಿಮರ ಕ್ರೈಸ್ತರ ವಿರೋಧಿ ಎಂಬ ಜನಪ್ರಿಯ ಮಿಥ್ಯೆಯನ್ನು ಒಡೆದುಹಾಕಿವೆ. ಅದು ಕಟ್ಟಲಿರುವ ಸಮಾಜದಲ್ಲಿ ಮತ್ತು ದೇಶದಲ್ಲಿ ಯಾವೆಲ್ಲ ಸಂಗತಿಗಳು ಇರುತ್ತವೆ ಮತ್ತು ಇರುವುದಿಲ್ಲ ಎಂಬುದರ ಮುನ್ನೋಟವನ್ನು ಒದಗಿಸಿವೆ. ಆದ್ದರಿಂದ ಪರಿಷ್ಕೃತ ಪಠ್ಯಗಳು, ಮತೀಯವಾದಿ ಭಾರತದ ಪರಿಕಲ್ಪನೆಯಲ್ಲಿ (ಐಡಿಯಾ ಆಫ್ ಇಂಡಿಯಾ) ಯಾವೆಲ್ಲ ಮೌಲ್ಯಗಳ ಹೇರಿಕೆಯಾಗುತ್ತದೆ, ಯಾವನ್ನು ಬದಿಗೆ ಸರಿಸಲಾಗುತ್ತದೆ ಮತ್ತು ಯಾವನ್ನು ಮರೆಮಾಚಲಾಗುತ್ತದೆ ಎಂಬುದರ ಪ್ರಾತ್ಯಕ್ಷಿತೆಗಳಾಗಿವೆ. ಈ ಹಿನ್ನೆಲೆಯಲ್ಲಿ ಮತೀಯ ನಂಜಿನ ಪಠ್ಯಪುಸ್ತಕಗಳನ್ನು ಪ್ರತಿರೋಧಿಸುವ ಚಳವಳಿಯಲ್ಲಿ, ಬಸವ, ಕುವೆಂಪು, ಬುದ್ಧ ಮತ್ತು ಅಂಬೇಡ್ಕರ್ ನದಿಗಳು ಕೂಡಿರುವುದು ಆಕಸ್ಮಿಕವಾಗಿಲ್ಲ. ಈ ಪ್ರತಿರೋಧದ ಆಂದೋಲನವನ್ನು ದೇವನೂರರು ತಮ್ಮ ಪಠ್ಯ ಹಿಂತೆಗೆಯುವ ಮೂಲಕ ಆರಂಭಿಸಿರುವುದು ಕೂಡ ಆಕಸ್ಮಿಕವಾಗಿಲ್ಲ.


ಇದನ್ನೂ ಓದಿ: ಒಳಗೊಳ್ಳದ ಮಾದರಿಯ ಸರ್ಕಾರಕ್ಕೆ ವಿದೇಶದಿಂದ ಬಂದೊದಗಿದ ಘಾಸಿ

ಇದನ್ನೂ ಓದಿ: ಪಠ್ಯ ಪರಿಶೀಲಿಸಿದ ಸಮಿತಿಯ ಸದಸ್ಯರ್‍ಯಾರೂ ಪ್ರತಿಕ್ರಿಯೆಗೆ ಸಿದ್ಧರಿಲ್ಲ!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ಸಾವರ್ಕರ್ ದೇವರನ್ನು, ಧಾರ್ಮಿಕ ನಂಬಿಕೆಗಳನ್ನು ಪ್ರಶ್ನಿಸಿದ್ದರು’: ಪುಣೆ ನ್ಯಾಯಾಲಯದಲ್ಲಿ ಮೊಮ್ಮಗ ಸತ್ಯಕಿ ಸಾವರ್ಕರ್ ಒಪ್ಪಿಗೆ

ಪುಣೆ: ಕಾಂಗ್ರೆಸ್ ನಾಯಕ ಹಾಗೂ ಸಂಸತ್ತಿನ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯ ವಿಚಾರಣೆಯು ಅತ್ಯಂತ ಕುತೂಹಲಕಾರಿ ಮತ್ತು ರಾಜಕೀಯ-ಸೈದ್ಧಾಂತಿಕ ತಿರುವನ್ನು ಪಡೆದುಕೊಂಡಿದೆ. ವಿನಾಯಕ ದಾಮೋದರ್...

ಮಾಜಿ ಸಚಿವ ಧರ್ಮೇಂದ್ರ ಪ್ರಧಾನ್ ಮಗಳ ಫೋನ್ ಬಿಲ್ ವಿವಾದ: ₹68 ಸಾವಿರ ಬಿಲ್-ಪೇ ಆಗಿದ್ದು ಸರ್ಕಾರಿ ಹಣದಲ್ಲಾ?

ಮಾಜಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ಪುತ್ರಿ ನೈಮಿಷಾ ಪ್ರಧಾನ್ ಅವರು ಮತ್ತೊಮ್ಮೆ ವಿವಾದದ ಕೇಂದ್ರಬಿಂದುವಾಗಿದ್ದಾರೆ. ವಾರಗಳ ಹಿಂದೆ ನೀಟ್ ಪರೀಕ್ಷೆಯ ಪತ್ರಿಕೆ ಸೋರಿಕೆ ಖಂಡಿಸಿ ಕಾಕ್ರೋಚ್ ಜನತಾ ಪಾರ್ಟಿ...

ಇರಾನ್ ವಸತಿ ಕಟ್ಟಡದ ಮೇಲೆ ಅಮೆರಿಕಾ ದಾಳಿ: ಎರಡು ವರ್ಷದ ಮಗು ಸೇರಿ ಒಂದೇ ಕುಟುಂಬದ ಮೂವರ ಸಾವು

ಮಧ್ಯಪ್ರಾಚ್ಯದಲ್ಲಿ ಅಮೆರಿಕ ತನ್ನ ಸಾಮ್ರಾಜ್ಯಶಾಹಿ ಆಧಿಪತ್ಯ ಸ್ಥಾಪನೆಗಾಗಿ ನಡೆಸುತ್ತಿರುವ ಯುದ್ಧಕೋರ ನೀತಿ ಮತ್ತೊಮ್ಮೆ ನಿರಪರಾಧಿ ಸಾರ್ವಜನಿಕರ ರಕ್ತ ಹರಿಸಿದೆ. ಇರಾನ್ ಮೇಲಿನ ಅಮೆರಿಕ ಪಡೆಗಳ ಸರಣಿ ಮತ್ತು ಭೀಕರ ಬಾಂಬ್ ದಾಳಿಗಳು ಕೇವಲ...

SIR: ASDDO ಪಟ್ಟಿಯಲ್ಲಿ ಬೆಂಗಳೂರಿಗೆ ಪ್ರಥಮ ಸ್ಥಾನ, ರಾಜ್ಯದಲ್ಲಿ 2 ಕೋಟಿ ಮತದಾರರ ಹೆಸರು ರದ್ದಾಗುವ ಬೀತಿ

ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ರಾಜಧಾನಿ ಬೆಂಗಳೂರು ಅತ್ಯಂತ ಪ್ರಮುಖ ಹಾಗೂ ಕಳವಳಕಾರಿ ಕೇಂದ್ರವಾಗಿ ಹೊರಹೊಮ್ಮಿದೆ. ರಾಜ್ಯದಲ್ಲಿರುವ ಒಟ್ಟು 5.54 ಕೋಟಿ ನೋಂದಾಯಿತ ಮತದಾರರ ಪೈಕಿ...

ಉಮರ್ ಖಾಲಿದ್ ಜಾಮೀನು ಅರ್ಜಿ; ಪೊಲೀಸರ ನಿಲುವು ಕೇಳಿದ ದೆಹಲಿ ಹೈಕೋರ್ಟ್

ಫೆಬ್ರವರಿ 2020 ರಲ್ಲಿ ಈಶಾನ್ಯ ದೆಹಲಿಯಲ್ಲಿ ನಡೆದ ಗಲಭೆಯ ಹಿಂದಿನ "ದೊಡ್ಡ ಪಿತೂರಿ"ಗೆ ಸಂಬಂಧಿಸಿದಂತೆ ಭಯೋತ್ಪಾದನಾ ವಿರೋಧಿ ಕಾನೂನು ಯುಎಪಿಎ ಅಡಿಯಲ್ಲಿ ಪ್ರಕರಣದಲ್ಲಿ ಜಾಮೀನು ಕೋರಿ ಉಮರ್ ಖಾಲಿದ್ ಸಲ್ಲಿಸಿದ ಅರ್ಜಿಯ ಕುರಿತು...

ಮುಂಬೈ: ‘ಶಾಲಾ ಜಿಹಾದ್’ ಎಂಬ ಬಿಜೆಪಿ ನಾಯಕನ ಕೋಮುದ್ವೇಷಕ್ಕೆ ಶಾಲೆಗೆ ನುಗ್ಗಿದ ಬುಲ್ಡೋಜರ್: ಬಿಎಂಸಿಗೆ ಚಾಟಿ ಬೀಸಿದ ಬಾಂಬೆ ಹೈಕೋರ್ಟ್

ಬಿಜೆಪಿ ನಾಯಕ ಕಿರೀಟ್ ಸೋಮಯ್ಯ ಅವರ “ಶಾಲಾ ಜಿಹಾದ್” ಎಂಬ ವಿಷಕಾರಿ ಹೇಳಿಕೆಯ ನಂತರ ಮುಂಬೈನ ಗೋವಂಡಿಯಲ್ಲಿ ಬಡ ಮುಸ್ಲಿಂ ಮಕ್ಕಳ ಶಿಕ್ಷಣದ ಆಶಾಕಿರಣವಾಗಿದ್ದ ತೆಹ್ಜೀಬ್ ಇಸ್ಲಾಮಿಕ್ ಇಂಗ್ಲಿಷ್ ಶಾಲೆಯನ್ನು ಬೃಹನ್ಮುಂಬೈ ಮುನ್ಸಿಪಲ್...

ಹಾಕಿ ತಂಡಕ್ಕೆ ಕೇಸರಿ ಜರ್ಸಿ: ‘ನಮ್ಮ ಗುರುತೇ ನೀಲಿ, ಕೇಸರಿ ಬಣ್ಣದ ತರ್ಕವೇನು?’: ಮಾಜಿ ಹಾಕಿ ಪಟು ಆಕ್ರೋಶ: ಬಿಜೆಪಿ ನಡೆಗೆ ವಿಪಕ್ಷಗಳ ಟೀಕೆ

ಭಾರತೀಯ ಕ್ರೀಡಾರಂಗದ ಹೆಮ್ಮೆಯ ಸಾಂಪ್ರದಾಯಿಕ 'ನೀಲಿ' (ಬ್ಲೂ) ಬಣ್ಣವನ್ನು ಕಳಚಿ, ಹಾಕಿ ತಂಡಕ್ಕೆ ಬಲವಂತವಾಗಿ ಕೇಸರಿ ಬಣ್ಣದ ಜೆರ್ಸಿ ತೊಡಿಸಲು ಹೊರಟಿರುವುದು ಇದೀಗ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಮುಂಬರುವ ಎಫ್‌ಐಎಚ್ (FIH) ವಿಶ್ವಕಪ್‌ಗಾಗಿ...

ತಮಿಳುನಾಡು: ಶಾಲಾ ಮಕ್ಕಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡಲು ಚಿಂತನೆ

ತಮಿಳುನಾಡಿನ ಸರ್ಕಾರಿ ಶಾಲೆಗಳ ಮಧ್ಯಾಹ್ನದ ಬಿಸಿಊಟದ ಯೋಜನೆಯಡಿಯಲ್ಲಿ ವಿದ್ಯಾರ್ಥಿಗಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡುವ ಪ್ರಸ್ತಾವನೆಯನ್ನು ತಮಿಳುನಾಡು ಸರ್ಕಾರ ಪರಿಶೀಲಿಸುತ್ತಿದ್ದು, ಶಾಲಾ ಶಿಕ್ಷಣ ಸಚಿವ ರಾಜ್‌ಮೋಹನ್ ಅವರು ಈ ಕುರಿತು ಮುಖ್ಯಮಂತ್ರಿ ಸಿ....

ಪ್ರಶ್ನೆಪತ್ರಿಕೆ ಸೋರಿಕೆ ವಿರೋಧಿ ಮಸೂದೆಯಲ್ಲಿ ಸುಧಾರಣೆಗಳಿಲ್ಲ, ರಾಜಕೀಯ ಮಾತ್ರ: ಕೇಂದ್ರದ ವಿರುದ್ಧ ಖರ್ಗೆ ವಾಗ್ದಾಳಿ

ಪಬ್ಲಿಕ್ ಪರೀಕ್ಷೆಗಳ (ಅನ್ಯಾಯಯುತ ವಿಧಾನಗಳ ತಡೆಗಟ್ಟುವಿಕೆ) ತಿದ್ದುಪಡಿ ಮಸೂದೆ 2026 ರ ಚರ್ಚೆಯ ಸಂದರ್ಭದಲ್ಲಿ ಮಾತನಾಡಿದ ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಕೇಂದ್ರ ಸರ್ಕಾರದ ಮೇಲೆ ತೀವ್ರ ವಾಗ್ದಾಳಿ ನಡೆಸಿದರು....

ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಕೆ ಆರೋಪ; ಗೃಹ ಸಚಿವ ಅಮಿತ್‌ ಶಾ ಮೌನ ಪ್ರಶ್ನಿಸಿದ ಕಪಿಲ್ ಸಿಬಲ್

ಜುಲೈ 20 ರಂದು ದೆಹಲಿಯಲ್ಲಿ ನಡೆದ ಸಂಶತ್ ಚಲೋ ಪ್ರತಿಭಟನಾ ಮೆರವಣಿಗೆಯಲ್ಲಿ ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಸಲಾಗಿದೆ ಎಂಬ ಆರೋಪದ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಮೌನವನ್ನು...