Homeಚಳವಳಿಸರ್ಕಾರದ ಅಜೆಂಡಾ ಸ್ಪಷ್ಟವಾಗಿದೆ, ರೈತ ಚಳವಳಿಗೆ ಸ್ಪಷ್ಟ ಅಜೆಂಡಾ ಬೇಕಿದೆ: ಚುಕ್ಕಿ ನಂಜುಂಡಸ್ವಾಮಿ

ಸರ್ಕಾರದ ಅಜೆಂಡಾ ಸ್ಪಷ್ಟವಾಗಿದೆ, ರೈತ ಚಳವಳಿಗೆ ಸ್ಪಷ್ಟ ಅಜೆಂಡಾ ಬೇಕಿದೆ: ಚುಕ್ಕಿ ನಂಜುಂಡಸ್ವಾಮಿ

ಭಾರತದ ರೈತ ಚಳವಳಿಗಳು ಈಗಲಾದರೂ ಆಲೋಚಿಸಬೇಕಾದ್ದು ತಮ್ಮದೇ ಆದ ಉತ್ಪಾದನಾ ವ್ಯವಸ್ಥೆ, ಮೌಲ್ಯವರ್ಧನೆ ವ್ಯವಸ್ಥೆ ಮತ್ತು ಮಾರುಕಟ್ಟೆ ವ್ಯವಸ್ಥೆಯನ್ನು ಸ್ಥಾಪಿಸುವುದರ ಬಗ್ಗೆ.

- Advertisement -
- Advertisement -

ರೈತ ಕುಲವನ್ನು ಒಕ್ಕಲೆಬ್ಬಿಸಿ ಕೃಷಿ ಕ್ಷೇತ್ರವನ್ನು ಇಡಿಯಾಗಿ ಕಾರ್ಪೋರೆಟ್ ಕಂಪೆನಿಗಳಿಗೆ ಮಾರಲು ಸರ್ಕಾರಗಳು ತುದಿಗಾಲಲ್ಲಿ ನಿಂತಿವೆ. ಇದೇನೂ ಹೊಸ ಬೆಳವಣಿಗೆಯಲ್ಲ. 1995ರಲ್ಲಿ ಭಾರತ ಸರ್ಕಾರ ವಿಶ್ವ ವಾಣಿಜ್ಯ ಒಪ್ಪಂದಕ್ಕೆ ಸಹಿ ಹಾಕಿದ ದಿನದಿಂದಲೇ ಈ ದೇಶದ ರೈತರ ಲೂಟಿ ಶುರುವಾಯ್ತು. ಅದಾದ ನಂತರ ಭಾರತ ಕಂಡ ರೈತರ ಆತ್ಮಹತ್ಯೆಯ ಸಂಖ್ಯೆ ಬಹುಶಃ ಪ್ರಪಂಚದ ಬೇರೆ ಯಾವ ದೇಶಗಳೂ ಕಾಣಲಿಲಿಲ್ಲ. ಭಾರತದ ರೈತರ ಆತ್ಮಹತ್ಯೆಗೂ ಭಾರತ ಅಪ್ಪಿಕೊಂಡ ಉದಾರೀಕರಣದ ನೀತಿಗೂ ನೇರ ಸಂಬಂಧವಿದೆ ಎನ್ನುವುದರಲ್ಲಿ ಯಾವ ಅನುಮಾನವೂ ಇಲ್ಲ.

ಈ ಅಭಿಪ್ರಾಯವನ್ನು ಖಾತ್ರಿಪಡಿಸುವ ವರದಿಯೊಂದಿದೆ. Indian Council for Research on International Economic Relations (ICRIER) ಮತ್ತು OECD 2018ರಲ್ಲಿ ಹಮ್ಮಿಕೊಂಡಿದ್ದ ಎರಡು ವರ್ಷಗಳ ದೀರ್ಘ ಅಧ್ಯಯನದಲ್ಲಿ ಹೊರಬಂದ ಪ್ರಮುಖ ಅಂಶವೆಂದರೆ 2000-01 ರಿಂದ 2016-17 ನಡುವಿನ ವರ್ಷಗಳ ಲೆಕ್ಕ ತೆಗೆದುಕೊಂಡಾಗ ಭಾರತದ Producer Support Estimate(PSE) “ಉತ್ಪಾದಕ ಬೆಂಬಲ ಅಂದಾಜಿ”ನ ಮೊತ್ತ (ತೆರಿಗೆದಾರರು ಮತ್ತು ಗ್ರಾಹಕರು ರೈತರಿಗೆ ಹಣದ ರೂಪದಲ್ಲಿ ಕೊಡುವ ಬೆಂಬಲ. ಸಬ್ಸಿಡಿಗಳು ಇದರ ಅಡಿಯಲ್ಲಿ ಬರುತ್ತವೆ) ಮೊತ್ತ ಒಟ್ಟು ಕೃಷಿಕರಿಗೆ ಪಾವತಿಯಾದ ಸರಾಸರಿ ಮೊತ್ತಕ್ಕಿಂತ 14% ಕಡಿಮೆ ಇದೆ. ಇದರ ವಾರ್ಷಿಕ ಮೊತ್ತ 2.65 ಟ್ರಿಲಿಯನ್ ಅಂದರೆ ಹದಿನೇಳು ವರ್ಷಗಳಿಗೆ 45 ಟ್ರಿಲಿಯನ್ ರೂಪಾಯಿಗಳು. ಇದು ಭಾರತದ ರೈತರ ಮೇಲೆ ವಿಧಿಸಿದ ಪರೋಕ್ಷವಾದ ತೆರಿಗೆ ಎಂದು ಕೆಲವು ಅರ್ಥಶಾಸ್ತ್ರಜ್ಞರು ಕರೆಯುತ್ತಾರೆ. ಇದನ್ನು ನೇರವಾಗಿ ಹೇಳುವುದಾದರೆ ಇದು ಭಾರತದ ರೈತರ ಲೂಟಿ. ಈ ಲೂಟಿ ನಡೆದಿರುವುದು ಅನೇಕ ಹೆಸರುಗಳಲ್ಲಿ. ನಿರ್ಬಂಧಿತ ಮಾರುಕಟ್ಟೆ, ವಾಣಿಜ್ಯ ನೀತಿಗಳು ಅಥವಾ ಗ್ರಾಹಕರ ಪರ ವಾಲಿರುವ ಮಾರುಕಟ್ಟೆ. ಅದೇನೇ ಇರಲಿ. ಜಗತ್ತಿನ ಯಾವ ದೇಶವೂ ಅನ್ನದಾತರನ್ನು ಇಷ್ಟು ಅಮಾನವೀಯವಾಗಿ ಲೂಟಿ ಮಾಡಿಲ್ಲ. ವಾಸ್ತವ ಹೀಗಿರುವಾಗ ರೈತ ಆತ್ಮಹತ್ಯೆ ಮಾಡಿಕೊಳ್ಳದೇ ಬೇರೆ ದಾರಿ ಏನಿದೆ?

ಸ್ವಾತಂತ್ರ್ಯೋತ್ತರ ಭಾರತ ಆಹಾರದ ಕೊರತೆಯನ್ನು ಎದುರಿಸುತ್ತಿದ್ದ ಸಂದರ್ಭದಲ್ಲಿ ಈ ದೇಶದ ಗಡಿ ಕಾದು ದೇಶವನ್ನು ರಕ್ಷಿಸಿದ ಯೋಧರ ಹಾಗೇ ದೇಶದ ಆಹಾರದ ಬುಟ್ಟಿಯನ್ನು ತುಂಬಿಸಿದ್ದು ಈ ದೇಶದ ಮಣ್ಣಿನ ಮಕ್ಕಳು. ಗಡಿ ಕಾಯುತ್ತಿದ್ದ ಸೈನಿಕರು ತಮ್ಮ ಜೀವವನ್ನೇ ಒತ್ತೆ ಇಟ್ಟರೆ ಇಲ್ಲಿ ರೈತರು ತಮ್ಮ ಪೂರ್ವಜರು ಕಾಪಾಡಿಕೊಂಡು ಬಂದಿದ್ದ ಮಣ್ಣು, ಬೀಜ ಮತ್ತು ಕೃಷಿ ಜ್ಞಾನವನ್ನೇ ಒತ್ತೆ ಇಟ್ಟರು. ಹಸಿರು ಕ್ರಾಂತಿಯ ಹೆಸರಿನಲ್ಲಿ ನಡೆದದ್ದೂ ಕೂಡ ಮಣ್ಣಿನ ಲೂಟಿ, ಬೀಜದ ಲೂಟಿ ಮತ್ತು ಸಾಂಪ್ರದಾಯಿಕ ಜ್ಞಾನದ ಲೂಟಿ. ಹಸಿರು ಕ್ರಾಂತಿ ನಡೆದ ಅರವತ್ತು ವರ್ಷಗಳ ನಂತರ ಮಣ್ಣಿನಲ್ಲಿದ್ದ ಸಾವಯವ ಇಂಗಾಲ ಇಲ್ಲದಂತಾಗಿದೆ. ಸೂಕ್ಷ್ಮಾಣುಜೀವಿಗಳು ಸತ್ತುಹೋಗಿವೆ. ಮಣ್ಣು ಬರಡಾಗಿದೆ. ಸಹಜವಾಗಿಯೆ ಇಳುವರಿ ಕಡಿಮೆಯಾಗಿದೆ.


ಇದನ್ನೂ ಓದಿ: ’ಮಿಸ್ಟರ್‌ ಯಡಿಯೂರಪ್ಪ ನೀವು ಪ್ರಜಾಪ್ರಭುತ್ವವಾದಿಯಲ್ಲ, ಸರ್ವಾಧಿಕಾರಿ’!: ಕೋಡಿಹಳ್ಳಿ ಚಂದ್ರಶೇಖರ್ ಸಂದರ್ಶನ


ಭಾರತದ ಬೆನ್ನೆಲುಬು ಎಂದು ಕರೆಯಲ್ಪಡುವ ಕೃಷಿ ಕ್ಷೇತ್ರದ ಪರಿಸ್ಥಿತಿ ಹೀಗಿರುವಾಗ ನಮ್ಮನ್ನಾಳುತ್ತಿರುವ ಸರ್ಕಾರಗಳಿಗೆ ಸ್ವಲ್ಪವಾದರೂ ಕಾಳಜಿ ಇದ್ದಿದ್ದರೆ ಬರೀ ಘೋಷಣೆಗೆ ಸೀಮಿತವಾಗಿರುವ ಎಂಎಸ್‍ಪಿ ಅಥವಾ ಕನಿಷ್ಠ ಬೆಂಬಲ ಬೆಲೆಯನ್ನು ಘೋಷಿಸುವ ಎಲ್ಲಾ ಇಪ್ಪತ್ಮೂರು ಬೆಳೆಗಳಿಗೂ ಅದು ಶಾಸನಬದ್ಧವಾಗಿ ಅನ್ವಯವಾಗುವಂತೆ ಸುಗ್ರೀವಾಜ್ಞೆ ಹೊರಡಿಸಬೇಕಿತ್ತು. ಘೋಷಿಸುವುದೇ ಅಲ್ಲ ಅದನ್ನು ಸರ್ಕಾರ ಖರೀದಿ ಮಾಡಲು ಎಪಿಎಂಸಿಯಲ್ಲಿ ಇದ್ದಂತಹ ಲೋಪದೋಷಗಳನ್ನು ಸರಿಪಡಿಸಿ ವ್ಯವಸ್ಥೆಯನ್ನು ರೂಪಿಸುವ ಸುಗ್ರೀವಾಜ್ಞೆ ತರಬೇಕಾಗಿತ್ತು. ಆದರೆ ಸೋರುತ್ತಿರುವ ಮಾಳಿಗೆಯ ರಂಧ್ರಗಳನ್ನು ಮುಚ್ಚದೆ ಮಾಳಿಗೆಯನ್ನೇ ತೆಗೆದು ಹಾಕಿ ರೈತರಿಗೆ ಯಾರಿಗೆ ಬೇಕಾದರೂ ಮಾರಾಟ ಮಾಡುವ ಸ್ವಾತಂತ್ರ್ಯವನ್ನು ಕೊಟ್ಟಿದ್ದೇವೆ ಎನ್ನುವುದು ರೈತರಿಗೆ ಕೊಟ್ಟಿರುವ ಸ್ವಾತಂತ್ರ್ಯವೋ ಅಥವಾ ರೈತರನ್ನು ಲೂಟಿ ಮಾಡಲು ಕಾರ್ಪೋರೆಟ್ ಕಂಪೆನಿಗಳಿಗೆ ಕೊಟ್ಟಿರುವ ಸ್ವಾತಂತ್ರ್ಯವೋ ಎನ್ನುವುದು ರೈತ ವಿರೋಧಿ ಸುಗ್ರೀವಾಜ್ಞೆಗಳನ್ನು ವಿರೋಧಿಸುತ್ತಿರುವ ರೈತರಿಗೆ ಈಗಾಗಲೇ ಸ್ಪಷ್ಟವಾಗಿ ಅರ್ಥವಾಗಿದೆ.

ಇಷ್ಟೆಲ್ಲಾ ಪ್ರತಿಭಟನೆಗಳು ನಡೆಯುತ್ತಿದ್ದರೂ ಸರ್ಕಾರ ಚಳವಳಿಗಳತ್ತ ತಿರುಗಿಯೂ ನೋಡುತ್ತಿಲ್ಲ. ಸರ್ಕಾರದ ಅಜೆಂಡಾ ಬಹಳ ಸ್ಪಷ್ಟವಾಗಿದೆ. ರೈತರ ಸರ್ವನಾಶಕ್ಕೆ ಪಣ ತೊಟ್ಟು ನಿಂತಿರುವ ಸರ್ಕಾರದ ವಿರುದ್ಧ ಕೇವಲ ಪ್ರತಿಭಟನೆಗಳನ್ನು ಹಮ್ಮಿಕೊಂಡರಷ್ಟೇ ಸಾಲದು ಎನಿಸುತ್ತದೆ.

ದೇಶದ ರೈತರ ಪಾಲಿಗೆ, ಕೃಷಿ ಕಾರ್ಮಿಕರ ಪಾಲಿಗೆ, ಮಹಿಳಾ ರೈತರ ಪಾಲಿಗೆ ಸರ್ಕಾರ ಸತ್ತು ಹೋಗಿದೆ ಎಂದು ಘೋಷಣೆ ಕೂಗಿದರಷ್ಟೇ ಸಾಲದು. ಅದು ವಾಸ್ತವ ಎಂಬ ಸತ್ಯವನ್ನು ಆಳವಾಗಿ ಅರ್ಥ ಮಾಡಿಕೊಳ್ಳಲೇಬೇಕಾದ ಸಂದರ್ಭದಲ್ಲಿ ನಾವಿದ್ದೇವೆ. ಭಾರತದ ರೈತ ಚಳವಳಿಗಳು ತಮ್ಮ ಅಜೆಂಡಾದ ಬಗ್ಗೆ ಪರಾಮರ್ಶೆ ಮಾಡಿಕೊಳ್ಳುವ ಅವಶ್ಯಕತೆ ಈಗ ಇದೆ. ಈ ಗ್ರಹಿಕೆ ನಮ್ಮಲ್ಲಿ ಆಳವಾಗಿ ಬೇರೂರಿದಾಗ ಮಾತ್ರ ನಮ್ಮ ಎದುರಿರುವ ಸವಾಲುಗಳಿಗೆ ಶಾಶ್ವತವಾದ ಉತ್ತರ ಹುಡುಕಲು ಸಾಧ್ಯ. ಆಗ ಸಂಘರ್ಷವಷ್ಟೇ ಸಾಲದು, ಅದರ ಜೊತೆಗೆ ನೇರ ಕಾರ್ಯಕ್ರಮಗಳ ಮೂಲಕ ಕ್ರಿಯಾತ್ಮಕ ನಿರ್ಮಾಣ ಕೆಲಸಕ್ಕೂ ಕೈಹಾಕಬೇಕು ಅನ್ನುವ ಅಭಿಪ್ರಾಯಕ್ಕೆ ಬರಬಹುದು.


ಇದನ್ನೂ ಓದಿ: ಸಂದರ್ಶನ – ರೈತ ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ


ಭಾರತದ ರೈತ ಚಳವಳಿಗಳು ಈಗಲಾದರೂ ಆಲೋಚಿಸಬೇಕಾದ್ದು ತಮ್ಮದೇ ಆದ ಉತ್ಪಾದನಾ ವ್ಯವಸ್ಥೆ, ಮೌಲ್ಯವರ್ಧನೆ ವ್ಯವಸ್ಥೆ ಮತ್ತು ಮಾರುಕಟ್ಟೆ ವ್ಯವಸ್ಥೆಯನ್ನು ಸ್ಥಾಪನೆ ಮಾಡುವುದರ ಬಗ್ಗೆ. ಈ ಬಗ್ಗೆ ಅಗತ್ಯವಾದ ತರಬೇತಿಗಳನ್ನು ರೈತಮಕ್ಕಳಿಗೆ ಕೊಡಿಸುವುದರ ಬಗ್ಗೆ ಸಮಗ್ರವಾಗಿ ಚಿಂತಿಸಿ ಮತ್ತು ಅನುಷ್ಠಾನಗೊಳಿಸಿ ಇದರ ಮೂಲಕ ದೇಶವನ್ನು ಕಾಡುತ್ತಿರುವ ಮತ್ತೊಂದು ಸಮಸ್ಯೆ ನಿರುದ್ಯೋಗಕ್ಕೂ ಉತ್ತರ ಕಂಡುಕೊಳ್ಳಬೇಕಾಗಿದೆ.

ನಮ್ಮದೇ ಆದ ಪರ್ಯಾಯ ವ್ಯವಸ್ಥೆಗಳನ್ನು ಕಟ್ಟಿಕೊಳ್ಳುವುದರ ಮೂಲಕ ಸರ್ಕಾರಿ ವ್ಯವಸ್ಥಗಳಿಗೆ ಬದಲಿಯಾದ ಮತ್ತು ರೈತಸ್ನೇಹಿಯಾದ ವ್ಯವಸ್ಥೆಯ ಧ್ವಜಾರೋಹಣ ಮಾಡಬೇಕಾಗಿದೆ. ಇಡೀ ಭಾರತದ ರೈತ ಚಳವಳಿಯ ಒಂದು ಭಾಗ ಈ ಕೆಲಸವನ್ನು ಗಂಭೀರವಾಗಿ ಮಾಡಲೇಬೇಕಿದೆ. ಇಲ್ಲದಿದ್ದಲ್ಲಿ ಮುಂದಿನ ದಿನಗಳಲ್ಲಿ ನಮ್ಮ ಮಕ್ಕಳು ಕಾರ್ಪೋರೇಟ್ ಕಂಪೆನಿಗಳ ಕೂಲಿಗಳಾಗುವುದರಲ್ಲಿ ಸಂಶಯವೇ ಇಲ್ಲ.

ಇದನ್ನು ರೈತ ಸಂಘಟನೆಗಳು ಕೈಗೆತ್ತಿಕೊಂಡು ಕರೆಕೊಟ್ಟರೆ ಸಾಕು, ಇದರ ಜೊತೆಗೆ ಕೆಲಸ ಮಾಡಲು ಮನಸ್ಸಿರುವ ಅನೇಕ ನಗರವಾಸಿ ತಂತ್ರಜ್ಞರು ಕೈಜೋಡಿಸುವ ಸಾಧ್ಯತೆ ಇದೆ. ಇದೇನೂ ಬಹಳ ಕಷ್ಟದ ಕೆಲಸವಲ್ಲ.


ಇದನ್ನೂ ಓದಿ: ರೈತರಿಂದ ನೇರ ಗ್ರಾಹಕರಿಗೆ ವಿಷಮುಕ್ತ ಆಹಾರೋತ್ಪನ್ನ ಮಾರಲು ಪಣ: ‘ನಮ್ದು ಬ್ರ್ಯಾಂಡ್’ ಆರಂಭ


ಇದರ ಪ್ರಯೋಗವಾಗಿಯೆ ನಮ್ದು ಎಂಬ ಬ್ರ್ಯಾಂಡ್‍ಅನ್ನು ಪ್ರಾರಂಭ ಮಾಡುವುದರ ಮೂಲಕ ಕ್ರಿಯಾತ್ಮಕ ಪ್ರತಿರೋಧವನ್ನು ಒಡ್ಡುವ ಕೆಲಸವನ್ನು ಈಗಾಗಲೇ ನಾವು ಪ್ರಾರಂಭ ಮಾಡಿದ್ದೇವೆ. ಇದು ರೈತರ ಹಿಡಿತದಲ್ಲಿರುವ ಮಾರುಕಟ್ಟೆ ವ್ಯವಸ್ಥೆ. ಇಲ್ಲಿ ನೈಸರ್ಗಿಕವಾಗಿ ಬೆಳೆದ ಉತ್ಪನ್ನಗಳಿಗೆ ರೈತರೇ ಬೆಲೆ ನಿಗದಿ ಮಾಡುತ್ತಾರೆ. ಉಪ ಉತ್ಪನ್ನಗಳನ್ನು ಮತ್ತು ಮೌಲ್ಯವರ್ಧನೆಗೊಳಿಸಿದ ವಸ್ತುಗಳನ್ನು ನೇರವಾಗಿ ರೈತರೇ ಮಾರಾಟ ಮಾಡುತ್ತಾರೆ.

ಇಡೀ ದೇಶದಾದ್ಯಂತ ಭುಗಿಲೆದ್ದಿರುವ ರೈತರ ಪ್ರತಿರೋಧ, ಕೇವಲ ಈ ಕಾನೂನುಗಳನ್ನು ವಿರೋಧಿಸುವುದಕ್ಕೆ ಸೀಮಿತವಾಗದೆ ಮುಂಬರಬಹುದಾದ ಎಲ್ಲಾ ರೀತಿಯ ಸವಾಲುಗಳನ್ನು ಎದುರಿಸಲು ಬೇಕಾದ ಎಲ್ಲ ರೀತಿಯ ವೈಚಾರಿಕ, ಸೈದ್ಧಾಂತಿಕ ಮತ್ತು ಕ್ರಿಯಾತ್ಮಕ ಪ್ರತಿರೋಧಗಳಿಗೆ ಅವಕಾಶವಾಗಬೇಕು.
ರೈತ ಚಳವಳಿಗೆ ಜಯವಾಗಲಿ!


(ಚಿಕ್ಕಂದಿನಿಂದಲೂ ರೈತ ಚಳವಳಿಯ ಜೊತೆಗೇ ಬೆಳೆದ ಚುಕ್ಕಿ, ಈಗ ರೈತ ಚಳವಳಿಯ ರಾಜ್ಯ ನಾಯಕಿಯರಲ್ಲೊಬ್ಬರು ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ರಾಜ್ಯದ ಹಾಗೂ ತೃತೀಯ ದೇಶಗಳ ರೈತರನ್ನು ಪ್ರತಿನಿಧಿಸುವವರು. ಪ್ರಸ್ತುತ ಚಾಮರಾಜನಗರದ ಅಮೃತಭೂಮಿಯ ವಿಶಿಷ್ಟ ರೈತ ಪ್ರಯೋಗ ಶಾಲೆಯ ಮುಖ್ಯಸ್ಥರು.)


ಇದನ್ನೂ ಓದಿ: ರೈತ ಮಹಿಳಾ ದಿನ: ‘ರೈತ ಮಹಿಳೆ’ಯ ಅಸ್ತಿತ್ವ, ಅಸ್ಮಿತೆಗಾಗಿ ಹೋರಾಟ ನಡೆಸುತ್ತಿರುವ ‘ಮಕಾಮ್’
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ಶೀಘ್ರದಲ್ಲೇ ಹೊರಡುತ್ತೇನೆ’: ‘2-3 ವಾರಗಳಲ್ಲಿ’ ಇರಾನ್ ಮೇಲಿನ ಯುದ್ಧ ಕೊನೆಗೊಳಿಸುವ ಬಗ್ಗೆ ಸುಳಿವು ನೀಡಿದ ಅಮೆರಿಕ ಅಧ್ಯಕ್ಷ ಟ್ರಂಪ್ 

ವಾಷಿಂಗ್ಟನ್ ಡಿಸಿ: ಜಾಗತಿಕ ಇಂಧನ ಮಾರುಕಟ್ಟೆಗಳನ್ನು ಅಸ್ತವ್ಯಸ್ತಗೊಳಿಸಿರುವ ಒಂದು ತಿಂಗಳ ಕಾಲ ನಡೆದ ಯುದ್ಧದ ಸಂಭಾವ್ಯ ಅಂತ್ಯದ ಬಗ್ಗೆ ಸುಳಿವು ನೀಡುವ ಮೂಲಕ, ಮುಂದಿನ ಎರಡು ಮೂರು ವಾರಗಳ ಮೊದಲೇ ಇರಾನ್ ವಿರುದ್ಧದ...

ದೊಡ್ಡಬಳ್ಳಾಪುರದಲ್ಲಿ ಭೂ ಸ್ವಾಧೀನ ವಿರೋಧಿ ಹೋರಾಟ : ಕೆಐಎಡಿಬಿ ವಿರುದ್ಧ ಬೀದಿಗಿಳಿದ ಜನ

ದೇವನಹಳ್ಳಿ ಬಳಿಕ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನಲ್ಲಿ ಭೂ ಸ್ವಾಧೀನ ವಿರೋಧಿ ಹೋರಾಟ ಪ್ರಾರಂಭಗೊಂಡಿದೆ. ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ದಿ ಮಂಡಳಿ (ಕೆಐಎಡಿಬಿ) ವಿರುದ್ಧ ಜನರು ಬೀದಿಗಿಳಿದಿದ್ದಾರೆ. ದೊಡ್ಡಬಳ್ಳಾಪುರ ತಾಲೂಕಿನ ದೊಡ್ಡಬೆಳವಂಗಲ...

ಬಿಹಾರ: ಪತಿಯನ್ನು ಹತ್ಯೆ ಮಾಡಿದ ಗುಂಪಿನಿಂದ ಬೆದರಿಕೆ; ಇಬ್ಬರು ಮಕ್ಕಳೊಂದಿಗೆ ವಿಷ ಸೇವಿಸಿದ ಮುಸ್ಲಿಂ ಮಹಿಳೆ ಸಾವು, ಮಕ್ಕಳ ಸ್ಥಿತಿ ಗಂಭೀರ

ಬಿಹಾರದ ರೋಹ್ತಾಸ್ ಜಿಲ್ಲೆಯ ಮುಸ್ಲಿಂ ಮಹಿಳೆಯೊಬ್ಬರು ಮಂಗಳವಾರ ತನ್ನ ಇಬ್ಬರು ಅಪ್ರಾಪ್ತ ಮಕ್ಕಳೊಂದಿಗೆ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ವರದಿಯಾಗಿದೆ.  ಪತಿಯನ್ನು ಅಮಾನುಷವಾಗಿ ಹಲ್ಲೆ ನಡೆಸಿ ಹತ್ಯೆ ಮಾಡಿದ್ದ ಆರೋಪಿಗಳಿಂದ ಬೆದರಿಕೆಗಳನ್ನು ತಾಳಲಾರದೆ...

ಅತ್ಯಾಚಾರ ಆರೋಪ: ಅಶೋಕ್ ಖರತ್ ಅವರ ಪುತ್ರನನ್ನು ವಿಚಾರಣೆಗಾಗಿ ವಶಕ್ಕೆ ಪಡೆದ ಎಸ್ಐಟಿ; ಪತ್ನಿಗಾಗಿ ಹುಡುಕಾಟ 

ನಾಸಿಕ್: ಅತ್ಯಾಚಾರ ಆರೋಪಿ ಸ್ವಯಂ ಘೋಷಿತ ದೇವಮಾನವ ಅಶೋಕ್ ಖರತ್ ವಿರುದ್ಧ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ (ಎಸ್‌ಐಟಿ), ನಾಸಿಕ್ ನಗರದಲ್ಲಿ ಆತನ ಮಗನನ್ನು ವಿಚಾರಣೆಗಾಗಿ ವಶಕ್ಕೆ ಪಡೆದಿದ್ದು, ಆತನ ಪತ್ನಿಗಾಗಿಯೂ...

ಇರಾಕ್‌ : ಬಗ್ದಾದ್‌ನಲ್ಲಿ ಯುಎಸ್‌ ಪತ್ರಕರ್ತೆ ಶೆಲ್ಲಿ ಕಿಟಲ್‌ಸನ್ ಅಪಹರಣ

ಇರಾಕ್‌ ರಾಜಧಾನಿ ಬಗ್ದಾದ್‌ ನಗರದ ಅಲ್-ಸಾದೂನ್ ಬೀದಿಯಲ್ಲಿರುವ ಬಗ್ದಾದ್ ಹೋಟೆಲ್ ಬಳಿ ಅಮೆರಿಕದ ಪ್ರಶಸ್ತಿ ವಿಜೇತ ಸ್ವತಂತ್ರ ಪತ್ರಕರ್ತೆ ಶೆಲ್ಲಿ ಕಿಟಲ್‌ಸನ್ ಅವರನ್ನು ಮಂಗಳವಾರ (ಮಾ.31, 2026) ಅಪಹರಿಸಲಾಗಿದೆ ಎಂದು ವರದಿಯಾಗಿದೆ. ಸಿಸಿಟಿವಿ ದೃಶ್ಯಾವಳಿಗಳ ಪ್ರಕಾರ,...

ವಾಣಿಜ್ಯ ಎಲ್‌ಪಿಜಿ ದರ 195.50 ರೂ. ಏರಿಕೆ : ಜನ ಸಾಮಾನ್ಯರಿಗೆ ಗಾಯದ ಮೇಲೆ ಬರೆ

ಪಶ್ಚಿಮ ಏಷ್ಯಾ ಸಂಘರ್ಷದಿಂದಾಗಿ ಜಾಗತಿಕ ತೈಲ ಬೆಲೆಗಳು ಏರುತ್ತಿರುವ ನಡುವೆ, ವಾಣಿಜ್ಯ ಎಲ್‌ಪಿಜಿ ದರವನ್ನು ಬುಧವಾರ (ಏ.1) 195.50 ರೂ. ಹೆಚ್ಚಿಸಲಾಗಿದೆ. ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳ ಪ್ರಕಾರ, ಬೆಲೆ ಏರಿಕೆ ಬಳಿಕ...

ಕುಸಿಯುವುದರಲ್ಲಿ ರೂಪಾಯಿ ಮತ್ತು ಬಿಜೆಪಿ ವರ್ಚಸ್ಸಿನ ನಡುವೆ ತೀವ್ರ ಪೈಪೋಟಿಯಿದೆ : ಅಖಿಲೇಶ್ ಯಾದವ್ ವ್ಯಂಗ್ಯ

ಕುಸಿಯುವುದರಲ್ಲಿ ರೂಪಾಯಿ ಮತ್ತು ಬಿಜೆಪಿ ವರ್ಚಸ್ಸಿನ ನಡುವೆ ತೀವ್ರ ಪೈಪೋಟಿ ನಡೆಯುತ್ತಿದೆ ಎಂದು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ವ್ಯಂಗ್ಯವಾಡಿದ್ದಾರೆ. ಬಿಜೆಪಿ ನಾಯಕರು ಹಾಗೂ ಅವರ ಸಹವರ್ತಿಗಳ ಭ್ರಷ್ಟಾಚಾರ ಮತ್ತು ದುರ್ನಡತೆಯ ಪ್ರಕರಣಗಳು...

ಅಂತರ್ಧರ್ಮೀಯ ‘ಲಿವ್-ಇನ್’ ಸಂಬಂಧ ಅಪರಾಧವಲ್ಲ: ಅಲಹಾಬಾದ್ ಹೈಕೋರ್ಟ್

ಅಂತರ್ಧರ್ಮೀಯ ಲಿವ್-ಇನ್ ಸಂಬಂಧವನ್ನು ನಿಷೇಧಿಸಲಾಗಿಲ್ಲ ಅಥವಾ ಯಾವುದೇ ಕಾನೂನಿನ ಅಡಿಯಲ್ಲಿ ಅಪರಾಧವಲ್ಲಎಂದು ತೀರ್ಪು ನೀಡಿರುವ ಅಲಹಾಬಾದ್ ಹೈಕೋರ್ಟ್, ಮಹಿಳೆಯ ಕುಟುಂಬದಿಂದ ಬೆದರಿಕೆ ಎದುರಿಸುತ್ತಿರುವ ದಂಪತಿಗಳಿಗೆ ರಕ್ಷಣೆ ನೀಡಿದೆ. ಸೋನ್‌ಭದ್ರಾದ ಕಾಜಲ್ ಪ್ರಜಾಪತಿ ಮತ್ತು ಅವರ...

‘ವೇತನ ಸಹಿತ ಪಿತೃತ್ವ ರಜೆಯನ್ನು ಕಾನೂನುಬದ್ಧಗೊಳಿಸಬೇಕು’; ರಾಜ್ಯಸಭೆಯಲ್ಲಿ ಎಎಪಿ ಸಂಸದ ರಾಘವ್ ಚಡ್ಡಾ ಒತ್ತಾಯ

ಭಾರತದಲ್ಲಿ ವೇತನ ಸಹಿತ ಪಿತೃತ್ವ ರಜೆಯನ್ನು ಕಾನೂನುಬದ್ಧ ಹಕ್ಕನ್ನಾಗಿ ಮಾಡಲು, ಹಂಚಿಕೆಯ ಆರೈಕೆ ಜವಾಬ್ದಾರಿಗಳನ್ನು ಒತ್ತಿಹೇಳಲು ಕಾನೂನನ್ನು ಜಾರಿಗೆ ತರಬೇಕೆಂದು ಎಎಪಿ ಸಂಸದ ರಾಘವ್ ಚಡ್ಡಾ ಒತ್ತಾಯಿಸಿದ್ದಾರೆ. ರಾಜ್ಯಸಭೆಯಲ್ಲಿ ಮಾತನಾಡಿದ ಅವರು, ತಂದೆ ಉದ್ಯೋಗ...

ಬಿಜೆಪಿ ಇತರ ರಾಜ್ಯಗಳ ಅಕ್ರಮ ಮತದಾರರನ್ನು ಸೇರಿಸುತ್ತಿದೆ : ಮಮತಾ ಬ್ಯಾನರ್ಜಿ ಆರೋಪ

ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮಂಗಳವಾರ (ಮಾ.31) ಬಿಜೆಪಿ ಬಿಹಾರ, ರಾಜಸ್ಥಾನ, ಹರಿಯಾಣ ಮತ್ತು ಉತ್ತರ ಪ್ರದೇಶದ ಅಕ್ರಮ ಮತದಾರರನ್ನು ರಾಜ್ಯದ ಮತದಾರರ ಪಟ್ಟಿಯಲ್ಲಿ ಸೇರಿಸಲು ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದರು. ಪಶ್ಚಿಮ...