Homeಮುಖಪುಟನಾಟಕ ವಿಮರ್ಶೆ; ಪ್ರಭಾಸ: ಪ್ರಜ್ವಲಿಸಿದ ಪ್ರತಿಭೆ ಮೇರಿ ಕ್ಯೂರಿ

ನಾಟಕ ವಿಮರ್ಶೆ; ಪ್ರಭಾಸ: ಪ್ರಜ್ವಲಿಸಿದ ಪ್ರತಿಭೆ ಮೇರಿ ಕ್ಯೂರಿ

- Advertisement -
- Advertisement -

ಮಹಿಳೆಯರ ಪ್ರತಿಭೆ, ಚೈತನ್ಯಗಳ ಬಗ್ಗೆ ಅಜ್ಞಾನ, ಅನಾದರವಿದ್ದುದು ಭಾರತದಲ್ಲಿ ಮಾತ್ರವಲ್ಲ, ಇದೊಂದು ಜಾಗತಿಕ ವಿದ್ಯಮಾನವೇ ಆಗಿತ್ತು. ಈ ಅಜ್ಞಾನ, ಅನಾದರಗಳು ಇನ್ನೂ ಪೂರ್ಣ ಅಳಿದಿಲ್ಲ. ಹತ್ತೊಂಬತ್ತನೆಯ ಶತಮಾನದ ಮಧ್ಯಭಾಗದಲ್ಲಿ ಪೋಲೆಂಡಿನಲ್ಲಿ ಜನಿಸಿದ, ನಂತರ ಫ್ರಾನ್ಸಿನಲ್ಲಿ ನೆಲೆನಿಂತ ಮೇರಿ ಕ್ಯೂರಿ ಅವರೂ ಇಂತಹ ಮನೋಭಾವದ ಸಮಾಜದ ವಾತಾವರಣದಿಂದ ನಲುಗಿದವರು. ಈ ವಾತಾವರಣದಲ್ಲಿಯೂ, ಆಧುನಿಕ ಕಾಲಘಟ್ಟದಲ್ಲಿ ವ್ಯಾಪಕವಾಗಿ ಜನರನ್ನು ನರಳಿಸುತ್ತಿರುವ ಭೀಕರ ಕಾಯಿಲೆ ಕ್ಯಾನ್ಸರ್‌ನ ನಿವಾರಣೆಗೆ ಅತ್ಯುತ್ತಮ ಪರಿಹಾರವಾಗಿ ಒದಗಿರುವ ರೇಡಿಯೋ ವಿಕಿರಣ ಚಿಕಿತ್ಸೆಗೆ ಮೂಲಧಾತುವಾದ ರೇಡಿಯಂ ಧಾತುವನ್ನು ಸಂಶೋಧಿಸಿದ ವಿಜ್ಞಾನಿ ಇವರು. ಇವರ ಬದುಕು ಮತ್ತು ಸಾಧನೆಗಳನ್ನು ಆಧರಿಸಿದ ನಾಟಕ ’ಪ್ರಭಾಸ’. ಪ್ರಭಾಸ ಎಂದರೆ ಕಿರಣ ಎಂದು ಅರ್ಥ.

ಮೈಸೂರಿನ ಪರಿವರ್ತನ ರಂಗ ಸಮಾಜ, ಕಲಾಸುರುಚಿ, ಅರಿವು ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಸಂಸ್ಥೆಗಳು ಜಂಟಿಯಾಗಿ ಆಯೋಜಿಸಿದ ’ಕುತೂಹಲಿ’ ಮೈಸೂರು ವಿಜ್ಞಾನ ನಾಟಕೋತ್ಸವದಲ್ಲಿ ಪ್ರದರ್ಶಿತವಾದ ’ಪ್ರಭಾಸ’ ನಾಟಕವನ್ನು ಧಾರವಾಡದ ಅಭಿನಯ ಭಾರತಿ ರಂಗ ತಂಡದವರು ರಂಗಕ್ಕೆ ತಂದಿದ್ದಾರೆ. ಅಮೆರಿಕದ ರಂಗ ನಿರ್ದೇಶಕ ಅಲನ್ ಅಲ್ಡಾ ರಚಿಸಿದ ಮೂಲ ’ರೇಡಿಯಮ್’ ನಾಟಕವನ್ನು ಸುಮನಾ ಡಿ ಮತ್ತು ಶಶಿಧರ ಡೋಂಗ್ರೆ ಕನ್ನಡಕ್ಕೆ ತಂದಿದ್ದಾರೆ. ಮೈಸೂರಿನ ರಂಗಾಯಣದ ಕಿರುರಂಗಮಂದಿರದಲ್ಲಿ ಈ ನಾಟಕವು ಪ್ರದರ್ಶಿತಗೊಂಡಿತು.

ಮೇರಿ ಕ್ಯೂರಿ

ನಾಟಕ ಮೇರಿ ಕ್ಯೂರಿ ಅವರ ಕೌಟುಂಬಿಕ ಬದುಕು, ಅವರ ವೈಜ್ಞಾನಿಕ ಸಂಶೋಧನೆಯ ವಿವಿಧ ಹಂತದ ಏಳುಬೀಳುಗಳು, ಮಡದಿಯ ಸಾಧನೆಯಲ್ಲಿ ಸಂತೋಷ ಕಾಣುವ ಪತಿ ವಿಜ್ಞಾನಿ ಪಿಯರ್ ಕ್ಯೂರಿ ಕೌಟುಂಬಿಕ ಬದುಕು ಮತ್ತು ಸಂಶೋಧನೆಯಲ್ಲಿ ನೀಡುವ ಸಹಕಾರ, ಸಂಶೋಧನೆಯ ಪ್ರಯೋಗಕ್ಕೆ ತನ್ನನ್ನು ಒಡ್ಡಿಕೊಳ್ಳುವ ಪಿಯರ್ ಅದರಿಂದಲೇ ಅಸು ನೀಗುವುದು, ಇದು ಮೇರಿ ಕ್ಯೂರಿ ಬಾಳಿನಲ್ಲಿ ತುಂಬುವ ಶೂನ್ಯ, ಇಂತಹ ಸಂದರ್ಭದಲ್ಲಿ ಮೇರಿಯವರಿಗೆ ಬೆಂಬಲವಾಗಿ ನಿಲ್ಲುವ ಗೆಳೆಯ ಎಮೆಲ್ ಬೋರಿಲ್, ಸಂದರ್ಭದ ಸಹಜ ಬೆಳವಣಿಗೆಯಲ್ಲಿ ಪರಸ್ಪರ ಹತ್ತಿರವಾಗುವ ಎಮೆಲ್ ಮತ್ತು ಮೇರಿ ಕ್ಯೂರಿ, ಇದು ಎಮೆಲ್ ಕುಟುಂಬದಲ್ಲಿ ಎಬ್ಬಿಸುವ ಬಿರುಗಾಳಿ, ಇವುಗಳನ್ನೆಲ್ಲ ಮೀರಿ ಸಂಶೋಧನೆಯಲ್ಲಿ ತೊಡಗುವ ಮೇರಿ ಕ್ಯೂರಿ, ಯಶಸ್ವಿ ಸಂಶೋಧನೆಗೆ ದೊರಕುವ ಎರಡೆರಡು ನೊಬೆಲ್ ಪ್ರಶಸ್ತಿಗಳು, ಕೊನೆಗೆ ತನ್ನ ಸಂಶೋಧನೆಯ ರೇಡಿಯೋ ವಿಕಿರಣದಿಂದಲೇ ತನ್ನ 66ನೇ ವಯಸ್ಸಿನಲ್ಲಿ ಇಹಲೋಕ ತ್ಯಜಿಸುವ ಮೇರಿ ಕ್ಯೂರಿ.. ಇವೆಲ್ಲವುಗಳು ನಾಟಕದಲ್ಲಿ ಸಹಜವಾಗಿ ಮೂಡಿ ಬರುತ್ತವೆ. ಈ ನಡುವೆ ನಾಟಕ ಧರ್ಮ, ದೇವರು ಮತ್ತು ವಿಜ್ಞಾನದ ನಡುವಿನ ಸಂಘರ್ಷವನ್ನೂ ನಿರೂಪಿಸುತ್ತದೆ. ಹಾಗೆ ನೋಡಿದರೆ ಇದನ್ನೊಂದು ’ವಿಜ್ಞಾನ ನಾಟಕ’ ಎಂದು ಕರೆದುಬಿಟ್ಟರೆ ನಾಟಕಕ್ಕೆ ಅನ್ಯಾಯವಾಗುತ್ತದೆ. ಮನುಷ್ಯ ಸಹಜ ಪ್ರೀತಿ, ದಾಂಪತ್ಯದ ಏಳುಬೀಳುಗಳು, ದಾಂಪತ್ಯೇತರ ಸಂಬಂಧ, ಇಂತಹ ಸಂಬಂಧಗಳು ಉಂಟುಮಾಡುವ ಕೌಟುಂಬಿಕ ಸಮಸ್ಯೆಗಳು ಎಲ್ಲವನ್ನೂ ನಿರ್ದೇಶಕರು (ನಿ: ಸಾಲಿಯಾನ್ ಉಮೇಶ ನಾರಾಯಣ) ಹದವಾಗಿ ಬೆಸೆದಿದ್ದಾರೆ.

ಆರಂಭದ ಸುಮಾರು ಅರ್ಧತಾಸು ನಾಟಕ ಕುತೂಹಲ ಕೆರಳಿಸದೆ ಮಂದಗತಿಯಲ್ಲಿ ಸಾಗಿದರೆ ನಂತರದ ದೃಶ್ಯಗಳು ಪ್ರೇಕ್ಷಕರನ್ನು ಹಿಡಿದಿಟ್ಟುಕೊಳ್ಳುವಂತೆ ಜೀವಪಡೆಯುತ್ತಾ ಸಾಗುತ್ತದೆ. ನಾಟಕದಲ್ಲಿ ಬಳಸಿದ ಪಾಶ್ಚಾತ್ಯ ವೀಡಿಯೋ ತುಣುಕುಗಳ ಹಿನ್ನೆಲೆ, ಪಾಶ್ಚಾತ್ಯ ಸಂಗೀತ ಕೊಂಚ ಅಬ್ಬರದೆನಿಸಿದರೂ ಆ ದೇಶದ ಆವರಣವನ್ನು ಮೂಡಿಸುವುದರಲ್ಲಿ ಸಹಾಯ ಮಾಡಿತು. ಆದರೆ ಒಟ್ಟು ಸಂಗೀತ ಇನ್ನಷ್ಟು ಸುಧಾರಿಸಬೇಕಿತ್ತು (ಸಂಗೀತ: ವಿಶ್ವಜಿತ್ ಹಂಪಿಹೊಳೆ). ನಾಟಕದ ಅಂತಿಮ ಹಂತದಲ್ಲಿ ಬರುವ ಮೇರಿಕ್ಯೂರಿ ನೊಬೆಲ್ ಸ್ವೀಕಾರ ಸಂದರ್ಭದ ಭಾಷಣದ ಸನ್ನಿವೇಶ ಪೇಲವವಾಗಿದ್ದು ಇದನ್ನು ಪರಿಣಾಮಕಾರಿಯಾಗಿ ತರಬಹುದಿತ್ತು.

ಪಿಯರ್ ಕ್ಯೂರಿ

ನಾಟಕದಲ್ಲಿ ಪ್ರತಿಯೊಬ್ಬ ನಟನಟಿಯರೂ ತಮ್ಮ ಪಾತ್ರಕ್ಕೆ ಜೀವ ತುಂಬುವ ಕೆಲಸವನ್ನು ಶ್ರದ್ಧೆಯಿಂದ ಮಾಡಿದರು. ಮೇರಿ ಕ್ಯೂರಿ (ಜ್ಯೋತಿ ಪುರಾಣಿಕ), ಮಾರ್ಗರಿತ ಬೋರೆಲ್ (ಜಯಶ್ರೀ ಜೋಶಿ), ಪಾಲ್ ಲಾಂಗೆವಿನ (ಸುನೀಲ ಗಿರಡ್ಡಿ), ಟಾರ್ನ್ ಬ್ಲಾಡ್ (ಅರವಿಂದ ಕುಲಕರ್ಣಿ) ಪಾತ್ರಗಳು ವಿಶೇಷ ಗಮನ ಸೆಳೆದವು. ತಾಂತ್ರಿಕ ನಿರ್ವಹಣೆ (ನಾಗರಾಜ ಪಾಟೀಲ), ಬೆಳಕು (ಯೋಗೀಶ ಬಿ) ಪ್ರಸಾಧನ (ಸಂತೋಷ ಮಹಾಲೆ), ರಂಗ ನಿರ್ವಹಣೆ (ವಿಜಯೇಂದ್ರ ಅರ್ಚಕ) ನಾಟಕಕ್ಕೆ ಪೂರಕವಾಗಿತ್ತು.

ಪಠ್ಯಗಳಿಂದ ವಿಜ್ಞಾನದ ಸಂಗತಿಗಳನ್ನು ತೆಗೆದು, ಆ ಜಾಗದಲ್ಲಿ ಜ್ಯೋತಿಷ್ಯ, ಮತ- ಸಂಪ್ರದಾಯಗಳನ್ನು ತುಂಬುವ ಕೆಲಸ ರಾಷ್ಟ್ರಮಟ್ಟದಲ್ಲಿ ನಡೆಯುತ್ತಿದೆ. ಇದು ನಮ್ಮನ್ನು ಗತಕಾಲಕ್ಕೆ ಕೊಂಡೊಯ್ಯುವ ಪ್ರಯತ್ನ ಎಂದು ದೇಶದ ವಿದ್ವಾಂಸರು ಮತ್ತು ಶಿಕ್ಷಣ ತಜ್ಞರು ಎಚ್ಚರಿಸುತ್ತಿದ್ದಾರೆ. ಇದೇ ಸಂದರ್ಭದಲ್ಲಿ ಕರ್ನಾಟಕ ಸರ್ಕಾರ ತನ್ನದೇ ಹೊಸ ಶಿಕ್ಷಣ ನೀತಿಯನ್ನು ತರಲು ಸಜ್ಜಾಗಿದೆ. ತನ್ನ ನೂತನ ರಾಜ್ಯ ಶಿಕ್ಷಣ ನೀತಿಯ ಭಾಗವಾಗಿ ವಿಜ್ಞಾನ ನಾಟಕಗಳನ್ನು ರಾಜ್ಯದ ಪ್ರತಿಯೊಂದು ಶಾಲಾ ಕಾಲೇಜುಗಳಲ್ಲಿ ಹಮ್ಮಿಕೊಳ್ಳುವ ಯೋಜನೆಯನ್ನು ಸರ್ಕಾರ ರೂಪಿಸಿ ಜಾರಿಗೆ ತಂದರೆ ಮಕ್ಕಳಲ್ಲಿ ವೈಜ್ಞಾನಿಕ ಮತ್ತು ವೈಚಾರಿಕ ಮನೋಭಾವವನ್ನು ಮೂಡಿಸುವ ಕಾರ್ಯ ಹೆಚ್ಚು ಸುಲಭವಾಗಿ ಸಾಧ್ಯವಾಗುತ್ತದೆ.

ಡಾ. ಸರ್ಜಾಶಂಕರ ಹರಳಿಮಠ

ಡಾ. ಸರ್ಜಾಶಂಕರ ಹರಳಿಮಠ
ಲೇಖಕ, ಕವಿ ಸರ್ಜಾಶಂಕರ್ ಅವರು ಮೂಲತಃ ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲ್ಲೂಕು ಹರಳಿಮಠ ಗ್ರಾಮದವರು. ’ಅಂತರಾಳ’, ’ಬೆಚ್ಚಿ ಬೀಳಿಸಿದ ಬೆಂಗಳೂರು’, ’ಬಾರಯ್ಯ ಬೆಳದಿಂಗಳೇ’, ’ಸುಡುಹಗಲ ಸೊಲ್ಲು’ ಅವರ ಕೆಲವು ಪ್ರಕಟಿತ ಪುಸ್ತಕಗಳು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕೇಂದ್ರದ ವಿಬಿ-ಜಿ ರಾಮ್ ಜಿಗೆ ಟಕ್ಕರ್ : ಪ. ಬಂಗಾಳದ ‘ಕರ್ಮಶ್ರೀ’ ಯೋಜನೆಗೆ ಮಹಾತ್ಮ ಗಾಂಧಿ ಹೆಸರಿಡುವುದಾಗಿ ಘೋಷಿಸಿದ ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳ ಸರ್ಕಾರದ ಉದ್ಯೋಗ ಖಾತರಿ ಯೋಜನೆ 'ಕರ್ಮಶ್ರೀ'ಯನ್ನು ಮಹಾತ್ಮ ಗಾಂಧಿ ಹೆಸರಿನಲ್ಲಿ ಮರುನಾಮಕರಣ ಮಾಡುವುದಾಗಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗುರುವಾರ (ಡಿಸೆಂಬರ್ 18) ಘೋಷಿಸಿದ್ದಾರೆ. ನರೇಗಾ ಯೋಜನೆಯಿಂದ ಮಹಾತ್ಮಾ ಗಾಂಧಿಯವರ ಹೆಸರನ್ನು ಕೈಬಿಟ್ಟಿರುವುದಕ್ಕೆ...

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ: ಶಾಸಕ ಕುಣಿಗಲ್ ರಂಗನಾಥ್ ವಿರುದ್ಧ ಕೆ.ಎನ್. ರಾಜಣ್ಣ ವಾಗ್ದಾಳಿ

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ ಮಾಡುವುದನ್ನು ಮಾಜಿ ಸಹಕಾರಿ ಸಚಿವ ಕೆ.ಎನ್. ರಾಜಣ್ಣ ಗುರುವಾರ ಬಲವಾಗಿ ಸಮರ್ಥಿಸಿಕೊಂಡಿದ್ದಾರೆ. ಆಡಳಿತ ಪಕ್ಷದೊಳಗಿನ ಸಾರ್ವಜನಿಕ ಭಿನ್ನಾಭಿಪ್ರಾಯದ ನಡುವೆಯೂ, "ಸಂಘಗಳಿಗೆ ವಿತರಿಸಲಾದ ನಿಧಿ ಠೇವಣಿದಾರರ ಹಣ,...

ತನ್ನದೇ ಶಾಸಕರ ಅನರ್ಹತೆ ಕೋರಿ ಬಿಆರ್‌ಎಸ್‌ ಅರ್ಜಿ : ತಿರಸ್ಕರಿಸಿದ ತೆಲಂಗಾಣ ಸ್ಪೀಕರ್

ಆಡಳಿತಾರೂಢ ಕಾಂಗ್ರೆಸ್‌ಗೆ ನಿಷ್ಠೆ ಬದಲಾಯಿಸಿದ್ದಾರೆಂದು ಹೇಳಲಾದ ಹತ್ತು ಬಿಆರ್‌ಎಸ್ ಶಾಸಕರನ್ನು ಅನರ್ಹಗೊಳಿಸುವಂತೆ ಕೋರಿದ್ದ ಅರ್ಜಿಗಳ ಪೈಕಿ ಐದು ಅರ್ಜಿಗಳನ್ನು ತೆಲಂಗಾಣ ವಿಧಾನಸಭೆಯ ಸ್ಪೀಕರ್ ಗದ್ದಂ ಪ್ರಸಾದ್ ಕುಮಾರ್ ಬುಧವಾರ (ಡಿಸೆಂಬರ್ 18) ತಿರಸ್ಕರಿಸಿದ್ದಾರೆ....

ಸಾಮಾಜಿಕ ಬಹಿಷ್ಕಾರ, ದ್ವೇಷ ಭಾಷಣ ತಡೆ ವಿಧೇಯಕಗಳು ವಿಧಾನಸಭೆಯಲ್ಲಿ ಅಂಗೀಕಾರ

ಕರ್ನಾಟಕ ಸಾಮಾಜಿಕ ಬಹಿಷ್ಕಾರ (ಪ್ರತಿಬಂಧ, ನಿಷೇಧ ಮತ್ತು ಪರಿಹಾರ) ವಿಧೇಯಕ-2025 ಗುರುವಾರ (ಡಿ.18) ವಿಧಾನಸಭೆಯಲ್ಲಿ ಸರ್ವಾನುಮತದ ಅಂಗೀಕಾರಗೊಂಡಿತು. ಬೆಳಗಾವಿ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ವಿಧಾನಮಂಡಲ ಅಧಿವೇಶನದ ವಿಧಾನಸಭೆ ಕಲಾಪದಲ್ಲಿ ಸಮಾಜ ಕಲ್ಯಾಣ ಇಲಾಖೆ...

ಆಕ್ರಮಿತ ಪೂರ್ವ ಜೆರುಸಲೆಮ್ ವಸಾಹತು ಪ್ರದೇಶದಲ್ಲಿ 9000 ವಸತಿ ಘಟಕಗಳ ಯೋಜನೆ ಮುಂದಿಟ್ಟ ಇಸ್ರೇಲ್ 

ಆಕ್ರಮಿತ ಪೂರ್ವ ಜೆರುಸಲೆಮ್‌ನಲ್ಲಿರುವ ಕೈಬಿಟ್ಟ ಖಲಾಂಡಿಯಾ ವಿಮಾನ ನಿಲ್ದಾಣದ ಸ್ಥಳ ಬಳಿ ಅಕ್ರಮ ವಸಾಹತು ಪ್ರದೇಶದಲ್ಲಿ ಸುಮಾರು 9,000 ಹೊಸ ವಸತಿ ಘಟಕಗಳನ್ನು ನಿರ್ಮಿಸಲು ಇಸ್ರೇಲಿ ಆಕ್ರಮಿತ ಅಧಿಕಾರಿಗಳು ಯೋಜನೆಗಳನ್ನು ರೂಪಿಸಲು ಸಜ್ಜಾಗಿದ್ದಾರೆ....

ವಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಲೋಕಸಭೆಯಲ್ಲಿ ‘ವಿಬಿ-ಜಿ ರಾಮ್ ಜಿ ಮಸೂದೆ’ ಅಂಗೀಕಾರ

ಪ್ರತಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಗುರುವಾರ (ಡಿ.18) ಲೋಕಸಭೆಯಲ್ಲಿ 'ವಿಕ್ಷಿತ್ ಭಾರತ್ ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕ ಮಿಷನ್ (ಗ್ರಾಮೀಣ್ ) (ವಿಬಿ-ಜಿ ರಾಮ್ ಜಿ) ಮಸೂದೆ ಅಂಗೀಕಾರಗೊಂಡಿತು. ಈ ಮಸೂದೆ 2005ರಲ್ಲಿ...

ರಾಹುಲ್ ಗಾಂಧಿ ಆಪ್ತ ಸಹಾಯಕನ ಪತ್ನಿ ಪ್ರಜ್ಞಾ ಸತವ್ ಕಾಂಗ್ರೆಸ್ ಎಂಎಲ್‌ಸಿ ಸ್ಥಾನಕ್ಕೆ ರಾಜೀನಾಮೆ; ಬಿಜೆಪಿ ಸೇರುವ ನಿರೀಕ್ಷೆ

ಕಾಂಗ್ರೆಸ್ಸಿಗ ಮತ್ತು ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರ ಆಪ್ತರಾಗಿದ್ದ ದಿವಂಗತ ರಾಜೀವ್ ಸತವ್ ಅವರ ಪತ್ನಿ ಸತವ್ ಬಿಜೆಪಿಗೆ ಸೇರುವ ನಿರೀಕ್ಷೆಯಿದೆ. ಮಹಾರಾಷ್ಟ್ರದ ಕಾಂಗ್ರೆಸ್ ನಾಯಕಿ ಪ್ರಜ್ಞಾ ಸತವ್ ಅವರು ಗುರುವಾರ...

ಭೂ ಕಬಳಿಕೆ ಆರೋಪ : ಸದನದಲ್ಲಿ ಚರ್ಚೆಗೆ ಸಿದ್ದ ಎಂದ ಸಚಿವ ಕೃಷ್ಣ ಬೈರೇಗೌಡ

"ಸದನದ ಸದಸ್ಯನಾಗಿ ನನ್ನ ಹಕ್ಕನ್ನು ಬಿಟ್ಟುಕೊಡಲು ಸಿದ್ದನಿದ್ದೇನೆ. ನನ್ನ ಬಗ್ಗೆ ಎತ್ತಿರುವ ವೈಯಕ್ತಿಕ ಆರೋಪದ ಬಗ್ಗೆ ಚರ್ಚೆಗೆ ಸಿದ್ದ" ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದರು. ಗುರುವಾರ (ಡಿ.18) ವಿಧಾನಸಭೆಯ ಶೂನ್ಯ ವೇಳೆಯಲ್ಲಿ, ವಿಧಾನಪರಿಷತ್...

ಡಿಸೆಂಬರ್ 15 ರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕಾಗಿ ಜಾಮಿಯಾ ಮಿಲಿಯಾ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯದಿಂದ ಶೋಕಾಸ್ ನೋಟಿಸ್‌

2019 ರಲ್ಲಿ ವಿದ್ಯಾರ್ಥಿಗಳ ಮೇಲಿನ ಹಿಂಸಾಚಾರ ನಡೆದು ಆರು ವರ್ಷಗಳು ತುಂಬಿದ್ದು, ಅದರ ವಾರ್ಷಿಕ ನೆನಪಿನಲ್ಲಿ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿದ್ಯಾರ್ಥಿಗಳು ಡಿಸೆಂಬರ್ 15 ರಂದು ಕ್ಯಾಂಪಸ್ ಒಳಗೆ ದೊಡ್ಡ ಪ್ರತಿಭಟನೆ ನಡೆಸಿದ್ದರು....

ಅಮೆರಿಕದ ಸುಂಕಗಳು ತಮಿಳುನಾಡಿನ ರಫ್ತು ಕೈಗಾರಿಕೆಗಳನ್ನು ಅಂಚಿಗೆ ತಳ್ಳುತ್ತವೆ: ಪ್ರಧಾನಿ ಮೋದಿಗೆ ಸಿಎಂ ಸ್ಟಾಲಿನ್ ಎಚ್ಚರಿಕೆ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಭಾರತದ ರಫ್ತಿನ ಮೇಲೆ ಅಮೆರಿಕ ವಿಧಿಸಿರುವ ಭಾರೀ ಸುಂಕಗಳು ರಾಜ್ಯದ ಕೆಲವು ಉದ್ಯೋಗ- ಕೈಗಾರಿಕೆಗಳನ್ನು ತೀವ್ರ ಬಿಕ್ಕಟ್ಟಿನತ್ತ...