Homeಮುಖಪುಟನಾಟಕ ವಿಮರ್ಶೆ; ಪ್ರಭಾಸ: ಪ್ರಜ್ವಲಿಸಿದ ಪ್ರತಿಭೆ ಮೇರಿ ಕ್ಯೂರಿ

ನಾಟಕ ವಿಮರ್ಶೆ; ಪ್ರಭಾಸ: ಪ್ರಜ್ವಲಿಸಿದ ಪ್ರತಿಭೆ ಮೇರಿ ಕ್ಯೂರಿ

- Advertisement -
- Advertisement -

ಮಹಿಳೆಯರ ಪ್ರತಿಭೆ, ಚೈತನ್ಯಗಳ ಬಗ್ಗೆ ಅಜ್ಞಾನ, ಅನಾದರವಿದ್ದುದು ಭಾರತದಲ್ಲಿ ಮಾತ್ರವಲ್ಲ, ಇದೊಂದು ಜಾಗತಿಕ ವಿದ್ಯಮಾನವೇ ಆಗಿತ್ತು. ಈ ಅಜ್ಞಾನ, ಅನಾದರಗಳು ಇನ್ನೂ ಪೂರ್ಣ ಅಳಿದಿಲ್ಲ. ಹತ್ತೊಂಬತ್ತನೆಯ ಶತಮಾನದ ಮಧ್ಯಭಾಗದಲ್ಲಿ ಪೋಲೆಂಡಿನಲ್ಲಿ ಜನಿಸಿದ, ನಂತರ ಫ್ರಾನ್ಸಿನಲ್ಲಿ ನೆಲೆನಿಂತ ಮೇರಿ ಕ್ಯೂರಿ ಅವರೂ ಇಂತಹ ಮನೋಭಾವದ ಸಮಾಜದ ವಾತಾವರಣದಿಂದ ನಲುಗಿದವರು. ಈ ವಾತಾವರಣದಲ್ಲಿಯೂ, ಆಧುನಿಕ ಕಾಲಘಟ್ಟದಲ್ಲಿ ವ್ಯಾಪಕವಾಗಿ ಜನರನ್ನು ನರಳಿಸುತ್ತಿರುವ ಭೀಕರ ಕಾಯಿಲೆ ಕ್ಯಾನ್ಸರ್‌ನ ನಿವಾರಣೆಗೆ ಅತ್ಯುತ್ತಮ ಪರಿಹಾರವಾಗಿ ಒದಗಿರುವ ರೇಡಿಯೋ ವಿಕಿರಣ ಚಿಕಿತ್ಸೆಗೆ ಮೂಲಧಾತುವಾದ ರೇಡಿಯಂ ಧಾತುವನ್ನು ಸಂಶೋಧಿಸಿದ ವಿಜ್ಞಾನಿ ಇವರು. ಇವರ ಬದುಕು ಮತ್ತು ಸಾಧನೆಗಳನ್ನು ಆಧರಿಸಿದ ನಾಟಕ ’ಪ್ರಭಾಸ’. ಪ್ರಭಾಸ ಎಂದರೆ ಕಿರಣ ಎಂದು ಅರ್ಥ.

ಮೈಸೂರಿನ ಪರಿವರ್ತನ ರಂಗ ಸಮಾಜ, ಕಲಾಸುರುಚಿ, ಅರಿವು ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಸಂಸ್ಥೆಗಳು ಜಂಟಿಯಾಗಿ ಆಯೋಜಿಸಿದ ’ಕುತೂಹಲಿ’ ಮೈಸೂರು ವಿಜ್ಞಾನ ನಾಟಕೋತ್ಸವದಲ್ಲಿ ಪ್ರದರ್ಶಿತವಾದ ’ಪ್ರಭಾಸ’ ನಾಟಕವನ್ನು ಧಾರವಾಡದ ಅಭಿನಯ ಭಾರತಿ ರಂಗ ತಂಡದವರು ರಂಗಕ್ಕೆ ತಂದಿದ್ದಾರೆ. ಅಮೆರಿಕದ ರಂಗ ನಿರ್ದೇಶಕ ಅಲನ್ ಅಲ್ಡಾ ರಚಿಸಿದ ಮೂಲ ’ರೇಡಿಯಮ್’ ನಾಟಕವನ್ನು ಸುಮನಾ ಡಿ ಮತ್ತು ಶಶಿಧರ ಡೋಂಗ್ರೆ ಕನ್ನಡಕ್ಕೆ ತಂದಿದ್ದಾರೆ. ಮೈಸೂರಿನ ರಂಗಾಯಣದ ಕಿರುರಂಗಮಂದಿರದಲ್ಲಿ ಈ ನಾಟಕವು ಪ್ರದರ್ಶಿತಗೊಂಡಿತು.

ಮೇರಿ ಕ್ಯೂರಿ

ನಾಟಕ ಮೇರಿ ಕ್ಯೂರಿ ಅವರ ಕೌಟುಂಬಿಕ ಬದುಕು, ಅವರ ವೈಜ್ಞಾನಿಕ ಸಂಶೋಧನೆಯ ವಿವಿಧ ಹಂತದ ಏಳುಬೀಳುಗಳು, ಮಡದಿಯ ಸಾಧನೆಯಲ್ಲಿ ಸಂತೋಷ ಕಾಣುವ ಪತಿ ವಿಜ್ಞಾನಿ ಪಿಯರ್ ಕ್ಯೂರಿ ಕೌಟುಂಬಿಕ ಬದುಕು ಮತ್ತು ಸಂಶೋಧನೆಯಲ್ಲಿ ನೀಡುವ ಸಹಕಾರ, ಸಂಶೋಧನೆಯ ಪ್ರಯೋಗಕ್ಕೆ ತನ್ನನ್ನು ಒಡ್ಡಿಕೊಳ್ಳುವ ಪಿಯರ್ ಅದರಿಂದಲೇ ಅಸು ನೀಗುವುದು, ಇದು ಮೇರಿ ಕ್ಯೂರಿ ಬಾಳಿನಲ್ಲಿ ತುಂಬುವ ಶೂನ್ಯ, ಇಂತಹ ಸಂದರ್ಭದಲ್ಲಿ ಮೇರಿಯವರಿಗೆ ಬೆಂಬಲವಾಗಿ ನಿಲ್ಲುವ ಗೆಳೆಯ ಎಮೆಲ್ ಬೋರಿಲ್, ಸಂದರ್ಭದ ಸಹಜ ಬೆಳವಣಿಗೆಯಲ್ಲಿ ಪರಸ್ಪರ ಹತ್ತಿರವಾಗುವ ಎಮೆಲ್ ಮತ್ತು ಮೇರಿ ಕ್ಯೂರಿ, ಇದು ಎಮೆಲ್ ಕುಟುಂಬದಲ್ಲಿ ಎಬ್ಬಿಸುವ ಬಿರುಗಾಳಿ, ಇವುಗಳನ್ನೆಲ್ಲ ಮೀರಿ ಸಂಶೋಧನೆಯಲ್ಲಿ ತೊಡಗುವ ಮೇರಿ ಕ್ಯೂರಿ, ಯಶಸ್ವಿ ಸಂಶೋಧನೆಗೆ ದೊರಕುವ ಎರಡೆರಡು ನೊಬೆಲ್ ಪ್ರಶಸ್ತಿಗಳು, ಕೊನೆಗೆ ತನ್ನ ಸಂಶೋಧನೆಯ ರೇಡಿಯೋ ವಿಕಿರಣದಿಂದಲೇ ತನ್ನ 66ನೇ ವಯಸ್ಸಿನಲ್ಲಿ ಇಹಲೋಕ ತ್ಯಜಿಸುವ ಮೇರಿ ಕ್ಯೂರಿ.. ಇವೆಲ್ಲವುಗಳು ನಾಟಕದಲ್ಲಿ ಸಹಜವಾಗಿ ಮೂಡಿ ಬರುತ್ತವೆ. ಈ ನಡುವೆ ನಾಟಕ ಧರ್ಮ, ದೇವರು ಮತ್ತು ವಿಜ್ಞಾನದ ನಡುವಿನ ಸಂಘರ್ಷವನ್ನೂ ನಿರೂಪಿಸುತ್ತದೆ. ಹಾಗೆ ನೋಡಿದರೆ ಇದನ್ನೊಂದು ’ವಿಜ್ಞಾನ ನಾಟಕ’ ಎಂದು ಕರೆದುಬಿಟ್ಟರೆ ನಾಟಕಕ್ಕೆ ಅನ್ಯಾಯವಾಗುತ್ತದೆ. ಮನುಷ್ಯ ಸಹಜ ಪ್ರೀತಿ, ದಾಂಪತ್ಯದ ಏಳುಬೀಳುಗಳು, ದಾಂಪತ್ಯೇತರ ಸಂಬಂಧ, ಇಂತಹ ಸಂಬಂಧಗಳು ಉಂಟುಮಾಡುವ ಕೌಟುಂಬಿಕ ಸಮಸ್ಯೆಗಳು ಎಲ್ಲವನ್ನೂ ನಿರ್ದೇಶಕರು (ನಿ: ಸಾಲಿಯಾನ್ ಉಮೇಶ ನಾರಾಯಣ) ಹದವಾಗಿ ಬೆಸೆದಿದ್ದಾರೆ.

ಆರಂಭದ ಸುಮಾರು ಅರ್ಧತಾಸು ನಾಟಕ ಕುತೂಹಲ ಕೆರಳಿಸದೆ ಮಂದಗತಿಯಲ್ಲಿ ಸಾಗಿದರೆ ನಂತರದ ದೃಶ್ಯಗಳು ಪ್ರೇಕ್ಷಕರನ್ನು ಹಿಡಿದಿಟ್ಟುಕೊಳ್ಳುವಂತೆ ಜೀವಪಡೆಯುತ್ತಾ ಸಾಗುತ್ತದೆ. ನಾಟಕದಲ್ಲಿ ಬಳಸಿದ ಪಾಶ್ಚಾತ್ಯ ವೀಡಿಯೋ ತುಣುಕುಗಳ ಹಿನ್ನೆಲೆ, ಪಾಶ್ಚಾತ್ಯ ಸಂಗೀತ ಕೊಂಚ ಅಬ್ಬರದೆನಿಸಿದರೂ ಆ ದೇಶದ ಆವರಣವನ್ನು ಮೂಡಿಸುವುದರಲ್ಲಿ ಸಹಾಯ ಮಾಡಿತು. ಆದರೆ ಒಟ್ಟು ಸಂಗೀತ ಇನ್ನಷ್ಟು ಸುಧಾರಿಸಬೇಕಿತ್ತು (ಸಂಗೀತ: ವಿಶ್ವಜಿತ್ ಹಂಪಿಹೊಳೆ). ನಾಟಕದ ಅಂತಿಮ ಹಂತದಲ್ಲಿ ಬರುವ ಮೇರಿಕ್ಯೂರಿ ನೊಬೆಲ್ ಸ್ವೀಕಾರ ಸಂದರ್ಭದ ಭಾಷಣದ ಸನ್ನಿವೇಶ ಪೇಲವವಾಗಿದ್ದು ಇದನ್ನು ಪರಿಣಾಮಕಾರಿಯಾಗಿ ತರಬಹುದಿತ್ತು.

ಪಿಯರ್ ಕ್ಯೂರಿ

ನಾಟಕದಲ್ಲಿ ಪ್ರತಿಯೊಬ್ಬ ನಟನಟಿಯರೂ ತಮ್ಮ ಪಾತ್ರಕ್ಕೆ ಜೀವ ತುಂಬುವ ಕೆಲಸವನ್ನು ಶ್ರದ್ಧೆಯಿಂದ ಮಾಡಿದರು. ಮೇರಿ ಕ್ಯೂರಿ (ಜ್ಯೋತಿ ಪುರಾಣಿಕ), ಮಾರ್ಗರಿತ ಬೋರೆಲ್ (ಜಯಶ್ರೀ ಜೋಶಿ), ಪಾಲ್ ಲಾಂಗೆವಿನ (ಸುನೀಲ ಗಿರಡ್ಡಿ), ಟಾರ್ನ್ ಬ್ಲಾಡ್ (ಅರವಿಂದ ಕುಲಕರ್ಣಿ) ಪಾತ್ರಗಳು ವಿಶೇಷ ಗಮನ ಸೆಳೆದವು. ತಾಂತ್ರಿಕ ನಿರ್ವಹಣೆ (ನಾಗರಾಜ ಪಾಟೀಲ), ಬೆಳಕು (ಯೋಗೀಶ ಬಿ) ಪ್ರಸಾಧನ (ಸಂತೋಷ ಮಹಾಲೆ), ರಂಗ ನಿರ್ವಹಣೆ (ವಿಜಯೇಂದ್ರ ಅರ್ಚಕ) ನಾಟಕಕ್ಕೆ ಪೂರಕವಾಗಿತ್ತು.

ಪಠ್ಯಗಳಿಂದ ವಿಜ್ಞಾನದ ಸಂಗತಿಗಳನ್ನು ತೆಗೆದು, ಆ ಜಾಗದಲ್ಲಿ ಜ್ಯೋತಿಷ್ಯ, ಮತ- ಸಂಪ್ರದಾಯಗಳನ್ನು ತುಂಬುವ ಕೆಲಸ ರಾಷ್ಟ್ರಮಟ್ಟದಲ್ಲಿ ನಡೆಯುತ್ತಿದೆ. ಇದು ನಮ್ಮನ್ನು ಗತಕಾಲಕ್ಕೆ ಕೊಂಡೊಯ್ಯುವ ಪ್ರಯತ್ನ ಎಂದು ದೇಶದ ವಿದ್ವಾಂಸರು ಮತ್ತು ಶಿಕ್ಷಣ ತಜ್ಞರು ಎಚ್ಚರಿಸುತ್ತಿದ್ದಾರೆ. ಇದೇ ಸಂದರ್ಭದಲ್ಲಿ ಕರ್ನಾಟಕ ಸರ್ಕಾರ ತನ್ನದೇ ಹೊಸ ಶಿಕ್ಷಣ ನೀತಿಯನ್ನು ತರಲು ಸಜ್ಜಾಗಿದೆ. ತನ್ನ ನೂತನ ರಾಜ್ಯ ಶಿಕ್ಷಣ ನೀತಿಯ ಭಾಗವಾಗಿ ವಿಜ್ಞಾನ ನಾಟಕಗಳನ್ನು ರಾಜ್ಯದ ಪ್ರತಿಯೊಂದು ಶಾಲಾ ಕಾಲೇಜುಗಳಲ್ಲಿ ಹಮ್ಮಿಕೊಳ್ಳುವ ಯೋಜನೆಯನ್ನು ಸರ್ಕಾರ ರೂಪಿಸಿ ಜಾರಿಗೆ ತಂದರೆ ಮಕ್ಕಳಲ್ಲಿ ವೈಜ್ಞಾನಿಕ ಮತ್ತು ವೈಚಾರಿಕ ಮನೋಭಾವವನ್ನು ಮೂಡಿಸುವ ಕಾರ್ಯ ಹೆಚ್ಚು ಸುಲಭವಾಗಿ ಸಾಧ್ಯವಾಗುತ್ತದೆ.

ಡಾ. ಸರ್ಜಾಶಂಕರ ಹರಳಿಮಠ

ಡಾ. ಸರ್ಜಾಶಂಕರ ಹರಳಿಮಠ
ಲೇಖಕ, ಕವಿ ಸರ್ಜಾಶಂಕರ್ ಅವರು ಮೂಲತಃ ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲ್ಲೂಕು ಹರಳಿಮಠ ಗ್ರಾಮದವರು. ’ಅಂತರಾಳ’, ’ಬೆಚ್ಚಿ ಬೀಳಿಸಿದ ಬೆಂಗಳೂರು’, ’ಬಾರಯ್ಯ ಬೆಳದಿಂಗಳೇ’, ’ಸುಡುಹಗಲ ಸೊಲ್ಲು’ ಅವರ ಕೆಲವು ಪ್ರಕಟಿತ ಪುಸ್ತಕಗಳು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ಆರ್‌ಎಸ್‌ಎಸ್‌ ನೋಂದಣಿಯಾದರೆ ಒಳ್ಳೆಯದು’: ರಾಮಮಂದಿರ ಹಗರಣ ವಿಚಾರದಲ್ಲಿ ‘ಸತ್ಯ ಹೊರಬರಬೇಕು’: ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ

‘ರಾಷ್ಟ್ರೀಯ ಸ್ವಯಂಸೇವಕ ಸಂಘವನ್ನು (ಆರ್‌ಎಸ್‌ಎಸ್‌) ನೋಂದಣಿ ಮಾಡಿಸಿದರೆ ಯಾರಿಗೂ ಆರೋಪ ಮಾಡಲು ಅವಕಾಶ ಇರುವುದಿಲ್ಲ’ ಎಂದು ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಶುಕ್ರವಾರ ಹೇಳಿದ್ದಾರೆ. ಆರ್‌ಎಸ್‌ಎಸ್ ನೋಂದಣಿ ಕುರಿತು ಕರ್ನಾಟಕದ ಗೃಹ ಸಚಿವ...

ತುಮಕೂರಿನಲ್ಲಿ ಮಲಹೊರುವ ಪದ್ದತಿ ಜೀವಂತ; ದಲಿತ ಕಾರ್ಮಿಕರನ್ನು ಶೌಚಗುಂಡಿ ಸ್ವಚ್ಛತೆಗೆ ನಿಯೋಜಿಸಿದ ಕೆಇಬಿ ಇಂಜಿನಿಯರ್ಸ್ ಸಂಘ

ದಶಕಗಳ ಹಿಂದೆಯೇ ತಲೆ ಮೇಲೆ ಮಲಹೊರುವ ಅನಿಷ್ಠ ಪದ್ಧತಿಯನ್ನು ದೇಶದಲ್ಲಿ ನಿಷೇಧಿಸಲಾಗಿದೆ. ಕಾನೂನಿನ ಪ್ರಕಾರ ಈ ಅಮಾನವೀಯ ಪದ್ಧತಿ ನಿಷೇದಗೊಂಡಿದ್ದರು ರಾಜ್ಯದಲ್ಲಿ ಮಾತ್ರ ಇನ್ನೂ ಜೀವಂತವಾಗಿರುವುದು ತುಮಕೂರಿನಲ್ಲಿ ಮತ್ತೊಮ್ಮೆ ಬಹಿರಂಗವಾಗಿದೆ. ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್...

ವರ್ಷ ಪೂರೈಸಿದ ಎಸ್‌ಐಆರ್‌ ಪ್ರಕ್ರಿಯೆ; ಸುಮಾರು 6 ಕೋಟಿ ಹೆಸರುಗಳು ಡಿಲೀಟ್

ಸುಮಾರು ಆರು ಕೋಟಿ ಮತದಾರರನ್ನು ಅಳಿಸಲು ಕಾರಣವಾದ, ವಿರೋಧ ಪಕ್ಷಗಳು ಮತ್ತು ಚುನಾವಣಾ ಆಯೋಗದ ನಡುವೆ ಘರ್ಷಣೆಗೆ ಕಾರಣವಾದ ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆಯು 19 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ...

ರಾಮ ಮಂದಿರ ಹಗರಣ | ಶಿವಸೇನೆ ಕೊಟ್ಟ 1 ಕೋಟಿ ರೂ.ಗೆ ರಸೀದಿ ಸಿಕ್ಕಿಲ್ಲ : ಸಂಜಯ್ ರಾವತ್

ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರಕ್ಕೆ ನೀಡಿದ 1 ಕೋಟಿ ರೂಪಾಯಿ ದೇಣಿಗೆಗೆ ತಮ್ಮ ಪಕ್ಷ ಶಿವಸೇನೆ (ಯುಬಿಟಿ) ರಸೀದಿಯನ್ನು ಸ್ವೀಕರಿಸಿಲ್ಲ ಎಂದು ಸಂಜಯ್ ರಾವತ್ ಶುಕ್ರವಾರ (ಜೂ.26) ಹೇಳಿದ್ದಾರೆ. ರಾಮ ಮಂದಿರದ ದೇಣಿಗೆ...

ರಾಮ ಮಂದಿರ ಹಗರಣ: ಶ್ರೀರಾಮ ಜನ್ಮಭೂಮಿ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಮತ್ತು ಟ್ರಸ್ಟಿ ಅನಿಲ್ ಮಿಶ್ರಾ ರಾಜೀನಾಮೆ

ಶ್ರೀ ರಾಮ ಜನ್ಮಭೂಮಿ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್, ರಾಮ ಮಂದಿರ ದೇಣಿಗೆ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ನೈತಿಕ ಹೊಣೆ ಹೊತ್ತು, ಸದಸ್ಯ ಟ್ರಸ್ಟಿ ಅನಿಲ್ ಮಿಶ್ರಾ ಅವರೊಂದಿಗೆ ಶುಕ್ರವಾರ ರಾಜೀನಾಮೆ...

‘ಕೂಡಿ ಹಾಕಿ ಥಳಿಸುತ್ತಿದ್ದರು, ತಪ್ಪಿಸಿಕೊಳ್ಳದಂತೆ ನಾಯಿ ಬಿಟ್ಟಿದ್ದರು’: ಭೀಕರ ಶೋಷಣೆಯಿಂದ 12 ಜೀತ ಕಾರ್ಮಿಕರ ರಕ್ಷಣೆ

ಮೂರು ತಿಂಗಳ ಕಾಲ 68 ವರ್ಷದ ಮೆಹರ್ಬಾನ್ ಶಾ ಅನಿಶ್ಚಿತತೆಯಲ್ಲಿ ಜೀವನ ನಡೆಸುತ್ತಿದ್ದರು. ದುಡಿಯಲು ಹೋಗಿದ್ದ ಅವರ ಕಿರಿಯ ಮಗ ದಿಲ್ಶಾದ್ ಮೊಹಮ್ಮದ್ ಜೀವಂತವಾಗಿದ್ದಾನಾ?, ಇಲ್ಲಾ ಮರಣ ಹೊಂದಿದ್ದಾನಾ? ಎಂಬುವುದು ಅವರಿಗೆ ಗೊತ್ತಿರಲಿಲ್ಲ. 24...

ಅಯ್ಯೋಧ್ಯೆ ರಾಮ ಮಂದಿರ ಹಗರಣ: ಎಂಟು ಜನರ ವಿರುದ್ಧ ಎಫ್‌ಐಆರ್; ಪ್ರಭಾವಿ ವ್ಯಕ್ತಿಗಳನ್ನು ರಕ್ಷಿಸಲಾಗಿದೆ ಎಂದು ಪ್ರತಿಪಕ್ಷಗಳ ಆರೋಪ 

ಅಯೋಧ್ಯೆ: ವಿಶ್ವದಾದ್ಯಂತ ಕೋಟ್ಯಂತರ ಭಕ್ತರ ಆರಾಧ್ಯ ದೈವವಾಗಿರುವ ಅಯೋಧ್ಯೆಯ ಶ್ರೀ ರಾಮ ಮಂದಿರದಲ್ಲಿ ಭಕ್ತರು ಸಮರ್ಪಿಸಿದ ನಗದು, ಚಿನ್ನಾಭರಣ ಸೇರಿದಂತೆ ಇತರೆ ಬೆಲೆಬಾಳುವ ಕಾಣಿಕೆಗಳ ಕಳ್ಳತನ ಮತ್ತು ಹಣ ದುರುಪಯೋಗದ ಗಂಭೀರ ಹಗರಣವೊಂದು...

ಪೋಕ್ಸೋ ಕೇಸ್ : ವಚನಾನಂದ ಸ್ವಾಮಿಯ ನಿರೀಕ್ಷಣಾ ಜಾಮೀನು ರದ್ದು

ಪೋಕ್ಸೋ ಪ್ರಕರಣದಲ್ಲಿ ವಚನಾನಂದ ಸ್ವಾಮಿಗೆ ಸೆಷನ್ಸ್ ಕೋರ್ಟ್ ನೀಡಿದ್ದ ನಿರೀಕ್ಷಣಾ ಜಾಮೀನನ್ನು ಹೈಕೋರ್ಟ್ ಗುರುವಾರ (ಜೂನ್ 25) ರದ್ದುಗೊಳಿಸಿದೆ. ಅಲ್ಲದೆ, ಸೆಷನ್ಸ್ ಕೋರ್ಟ್ ಜಾಮೀನು ನೀಡಿದ ರೀತಿಯ ಬಗ್ಗೆ ತೀವ್ರ ಕಳವಳ ಮತ್ತು...

ಎಸ್‌ಐಆರ್‌ಗೂ ಸರ್ಕಾರಿ ಸೌಲಭ್ಯಕ್ಕೂ ಲಿಂಕ್; ಅರ್ಜಿ ವಿಚಾರಣೆಗೆ ಸುಪ್ರೀಂ ನಕಾರ : ನಿಜವಾದ ಆತಂಕ

ಬಿಜೆಪಿ ನೇತೃತ್ವದ ಪಶ್ಚಿಮ ಬಂಗಾಳದ ಹೊಸ ಸರ್ಕಾರ ನೀಡಿರುವ ಆದೇಶಗಳ ವಿರುದ್ಧ ಸಲ್ಲಿಕೆಯಾಗಿದ್ದ ಅರ್ಜಿಯೊಂದರ ತುರ್ತು ವಿಚಾರಣೆಗೆ ಸುಪ್ರೀಂ ಕೋರ್ಟ್ 23 ಜೂನ್ 2026ರಂದು ನಿರಾಕರಿಸಿದೆ. ವಿಧಾನಸಭೆ ಚುನಾವಣೆಗೆ ಮುನ್ನ ನಡೆದ ವಿಶೇಷ...

ಒಂಬತ್ತನೇ ತರಗತಿ ಪಠ್ಯಪುಸ್ತಕದಲ್ಲಿ ತುರ್ತು ಪರಿಸ್ಥಿತಿ ಅಧ್ಯಾಯ ಸೇರಿಸಿದ ಎನ್‌ಸಿಇಆರ್‌ಟಿ

ಭಾರತದಲ್ಲಿ ತುರ್ತು ಪರಿಸ್ಥಿತಿ ಘೋಷಿಸಲ್ಪಟ್ಟ ಸುಮಾರು ಐದು ದಶಕಗಳ ನಂತರ, ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಮಂಡಳಿ (ಎನ್‌ಸಿಇಆರ್‌ಟಿ) ಈ ವಿಷಯವನ್ನು 9 ನೇ ತರಗತಿಯ ಸಮಾಜ ವಿಜ್ಞಾನ ಪಠ್ಯಪುಸ್ತಕದಲ್ಲಿ ಮೊದಲ...