Homeಮುಖಪುಟಕಳೆದ ವರ್ಷವೇ ‘ದೀದಿ’ ಉದ್ಘಾಟಿಸಿದ್ದ ಆಸ್ಪತ್ರೆಯನ್ನು ಮತ್ತೆ ಉದ್ಘಾಟಿಸಿದ ‘ಮೋದಿ’: ಆರೋಪ

ಕಳೆದ ವರ್ಷವೇ ‘ದೀದಿ’ ಉದ್ಘಾಟಿಸಿದ್ದ ಆಸ್ಪತ್ರೆಯನ್ನು ಮತ್ತೆ ಉದ್ಘಾಟಿಸಿದ ‘ಮೋದಿ’: ಆರೋಪ

- Advertisement -
- Advertisement -

“ಕಳೆದ ವರ್ಷವೇ ಚಿತ್ತರಂಜನ್ ರಾಷ್ಟ್ರೀಯ ಕ್ಯಾನ್ಸರ್ ಸಂಸ್ಥೆಯ (ಸಿಎನ್‌ಸಿಐ) ಎರಡನೇ ಕ್ಯಾಂಪಸ್ ಉದ್ಘಾಟಿಸಿದ್ದೆ. ಪ್ರಧಾನಿ ನರೇಂದ್ರ ಮೋದಿಯವರು ಅದನ್ನು ಮತ್ತೆ ಶುಕ್ರವಾರ ದೇಶಕ್ಕೆ ಸಮರ್ಪಿಸಿದ್ದಾರೆ” ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಆರೋಪಿಸಿದ್ದಾರೆ.

“ಪ್ರಧಾನಿಯವರು ಈ ಯೋಜನೆಯನ್ನು ವರ್ಚ್ಯೂವಲ್‌ ಕಾರ್ಯಕ್ರಮದ ಮೂಲಕ ಉದ್ಘಾಟಿಸಿದ್ದಾರೆ. ಸಾಂಕ್ರಾಮಿಕದ ಸಮಯದಲ್ಲಿ ಕೋವಿಡ್ ಕೇಂದ್ರದ ಅಗತ್ಯವಿದ್ದಾಗ ನಾವು ಅದನ್ನು ಈಗಾಗಲೇ ಉದ್ಘಾಟಿಸಿದ್ದೇವೆ ಎಂದು ನಾನು ಪ್ರಧಾನಿಗೆ ತಿಳಿಸಲು ಬಯಸುತ್ತೇನೆ. ಇದು ನಮಗೆ ಸಾಕಷ್ಟು ಸಹಾಯ ಮಾಡಿದೆ. ಈ ಸಂಸ್ಥೆಯು ರಾಜ್ಯ ಸರ್ಕಾರದೊಂದಿಗೆ ಸಂಬಂಧ ಹೊಂದಿದೆ” ಎಂದು ಅವರು ಹೇಳಿದ್ದಾರೆ.

ಪ್ರಧಾನ ಮಂತ್ರಿಯವರ ವರ್ಚ್ಯೂಯಲ್‌‌ ಕಾರ್ಯಕ್ರಮದಲ್ಲಿ ಭಾಗವಹಿಸಿದ ಅವರು, ರಾಜ್ಯವು 71 ಕೋಟಿ ರೂಪಾಯಿಗಳ ವೆಚ್ಚವನ್ನು ಭರಿಸುತ್ತದೆ. ಯೋಜನೆಗೆ ರಾಜ್ಯವು ಶೇ 25 ರಷ್ಟು ಹಣವನ್ನು ನೀಡುತ್ತಿದೆ ಎಂದು ತಿಳಿದಾಗ ಪ್ರಧಾನಿಯವರು ಸಂತೋಷಪಡುತ್ತಾರೆ. ಎರಡನೇ ಕ್ಯಾಂಪಸ್‌ಗಾಗಿ ನಾವು 11 ಎಕರೆ ಭೂಮಿಯನ್ನು ಸಿಎನ್‌ಸಿಐಗೆ ನೀಡಿದ್ದೇವೆ ಎಂದು ತಿಳಿಸಿದ್ದಾರೆ.

ಆದಾಗ್ಯೂ, ಕ್ಯಾಂಪಸ್ ಅನ್ನು ಉದ್ಘಾಟಿಸಿ ಅದನ್ನು ದೇಶದ ಜನರಿಗೆ ಅರ್ಪಿಸಿದ್ದಕ್ಕಾಗಿ ಪ್ರಧಾನಿ ಮೋದಿಯವರಿಗೆ ಮಮತಾ ಬ್ಯಾನರ್ಜಿಯವರು ಧನ್ಯವಾದ ಸಮರ್ಪಿಸಿದ್ದಾರೆ.

ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ಅವರು ಎರಡು ಬಾರಿ ಆಹ್ವಾನಿಸಿದ ಬಳಿಕ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾಗಿ ಮಮತಾ ಬ್ಯಾನರ್ಜಿ ತಿಳಿಸಿದರು.

ವಿವಿಧ ಇಲಾಖೆಗಳಲ್ಲಿ ಹಿರಿಯ ಸಲಹೆಗಾರರನ್ನು ತೊಡಗಿಸಿಕೊಳ್ಳುವ ತನ್ನ ಸರ್ಕಾರದ ನಿರ್ಧಾರವನ್ನು ಉಲ್ಲೇಖಿಸಿದ ಬ್ಯಾನರ್ಜಿ, ಈ ಕ್ರಮದ ಹಿಂದಿನ ಕಾರಣವನ್ನು ರಾಜ್ಯಪಾಲ ಜಗದೀಪ್ ಧಂಖರ್ ಪ್ರಶ್ನಿಸುತ್ತಿದ್ದಾರೆ ಎಂದು ಪ್ರಧಾನಿಯವರಲ್ಲಿ ದೂರಿದರು.

“ನೀವು (ಮೋದಿ) ನಮಗೆ ಹೊರಗಿನಿಂದ ಜನರನ್ನು ನೇಮಿಸಲು ಸಲಹೆಗಳನ್ನು ನೀಡಿದ್ದೀರಿ. ನಾವು ಅದನ್ನು ಅನುಸರಿಸಿದ್ದೇವೆ. ಆದರೆ ಈ ನಿರ್ಧಾರ ಏಕೆ ತೆಗೆದುಕೊಂಡಿದ್ದೀರಿ ಎಂದು ರಾಜ್ಯಪಾಲರು ನನ್ನನ್ನು ಪ್ರಶ್ನಿಸಿದ್ದಾರೆ. ನಾವು ಪ್ರಧಾನಿಯವರ ಸಲಹೆಯನ್ನು ಅನುಸರಿಸಿದ್ದೇವೆ ಎಂಬ ಸುಳಿವು ಇಲ್ಲ. ರಾಜಕೀಯ ದೃಷ್ಟಿಕೋನ ಏನೇ ಇರಲಿ, ಆದರೆ ನಾವು ಕೇಂದ್ರದ ಮಾರ್ಗಸೂಚಿಗಳನ್ನು ಅನುಸರಿಸುತ್ತೇವೆ. ನಾವು ಅದನ್ನು 99ರಷ್ಟು ಪ್ರತಿಶತ ಅನುಸರಿಸಲು ಪ್ರಯತ್ನಿಸುತ್ತೇವೆ” ಎಂದು ಸ್ಪಷ್ಟಪಡಿಸಿದ್ದಾರೆ.

ರಾಜ್ಯದಲ್ಲಿ ವೈದ್ಯಕೀಯ ಸೀಟುಗಳ ಕೋಟಾವನ್ನು ಹೆಚ್ಚಿಸುವಂತೆ ಬ್ಯಾನರ್ಜಿಯವರು ಪ್ರಧಾನಿಯವರಲ್ಲಿ ಮನವಿ ಮಾಡಿದರು. “ವೈದ್ಯರ ಕೊರತೆಯಿದೆ. ಜನಸಂಖ್ಯೆಗೆ ಅನುಗುಣವಾಗಿ ವೈದ್ಯಕೀಯ ಸೀಟುಗಳ ಕೋಟಾವನ್ನು ಹೆಚ್ಚಿಸಬೇಕು. 75 ವೈದ್ಯರು ಕೋವಿಡ್‌ನಿಂದ ಬಳಲುತ್ತಿರುವ ಒಂದು ಆಸ್ಪತ್ರೆಯಿದೆ. ರೋಗಿಗಳ ಚಿಕಿತ್ಸೆಯನ್ನು ಹೇಗೆ ಕೈಗೊಳ್ಳಲಾಗುತ್ತದೆ?” ಎಂದು ಅವರು ಪ್ರಶ್ನಿಸಿದ್ದಾರೆ.

ಕೋವಿಡ್ ನಿಯಂತ್ರಣಾ ಲಸಿಕೆಯನ್ನು ನೀಡುವಲ್ಲಿ ಪಶ್ಚಿಮ ಬಂಗಾಳವು ದೇಶದಲ್ಲಿ ನಂ. 1 ಸ್ಥಾನದಲ್ಲಿದೆ. ರಾಜ್ಯದಲ್ಲಿ ಯಾವುದೇ ರೀತಿಯಲ್ಲಿಯೂ ಲಸಿಕೆ ವ್ಯರ್ಥವಾಗುತ್ತಿಲ್ಲ ಎಂದು ಅವರು ತಿಳಿಸಿದ್ದಾಗಿ ನ್ಯಾಷನಲ್‌ ಹೆರಾಲ್ಡ್‌ ವರದಿ ಮಾಡಿದೆ.

ನಮ್ಮ ದೇಶಕ್ಕೆ ಕೆಟ್ಟ ಹೆಸರು ಬರದಂತೆ ನಾವು (ರಾಜ್ಯ ಸರ್ಕಾರ) ನಮ್ಮ ಕೆಲಸಗಳ ಮೂಲಕ ಖಚಿತಪಡಿಸಿಕೊಂಡಿದ್ದೇವೆ. ಸ್ವಾಸ್ಥ್ಯ ಸತಿ (ಆರೋಗ್ಯ ವಿಮಾ ಯೋಜನೆ) ಥರದ ಹಲವಾರು ಯೋಜನೆಗಳನ್ನು ಪ್ರಾರಂಭಿಸಿದ್ದೇವೆ. ಡಯಾಲಿಸಿಸ್ ಕೇಂದ್ರಗಳನ್ನು ಪ್ರಾರಂಭಿಸಿದ್ದೇವೆ. ಜನರು ಔಷಧಿಗಳ ಮೇಲೆ ಶೇಕಡಾ 40ರಷ್ಟು ರಿಯಾಯಿತಿಗಳನ್ನು ಪಡೆಯುತ್ತಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.


ಇದನ್ನೂ ಓದಿರಿ: ಎಲ್ಲೆಡೆ ಕೊರೊನಾ ನಿರ್ಬಂಧ ಹೇರಲು ಸಾಧ್ಯವಿಲ್ಲ: ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read