Homeಮುಖಪುಟನಿಜವಾಗಿಯೂ ಇರುವುದು ಮೋದಿ ಅಲೆಯಾ? ಅಥವಾ MONEY ಅಲೆಯಾ?

ನಿಜವಾಗಿಯೂ ಇರುವುದು ಮೋದಿ ಅಲೆಯಾ? ಅಥವಾ MONEY ಅಲೆಯಾ?

- Advertisement -
- Advertisement -

ಮೊನ್ನೆಯಷ್ಟೇ 4ನೇ ಹಂತದ ಮತದಾನ ಮುಗಿದಿದೆ. ಮೋದಿ ಜನಪ್ರಿಯತೆ ಬಾಲಾಕೋಟ್ ವಾಯುದಾಳಿ ಕಾರಣದಿಂದಾಗಿ ಮತ್ತೆ ಮೊದಲಿನಷ್ಟು ಅಲ್ಲದಿದ್ದರೂ ಉತ್ತಮಗೊಂಡಿದೆ ಎಂದು ಸಮೀಕ್ಷಾ ವರದಿಯೊಂದು 3ನೇ ಹಂತದ ಮತದಾನಕ್ಕೂ ಮುಂಚೆ ಹೇಳಿತ್ತು. ಈ ಬಾಲಾಕೋಟ್ ವಾಯುದಾಳಿಯ ವಿಚಾರವೆಲ್ಲ ಹಳ್ಳಿಹಳ್ಳಿಗೆಲ್ಲ ಮುಟ್ಟಿತೆ? ಹಾಗಾಗಿದ್ದರೆ, ಈ ವಿಚಾರ ಪ್ರಸ್ತಾಪಿಸುತ್ತಲೇ ಇರುವ ಮೋದಿ ಸಹಿತ ಬಿಜೆಪಿ ನಾಯಕರ ಮಾತುಗಳನ್ನು ಪ್ರಚಾರ ಮಾಡಲು ಮಾತ್ರ ಒಂದು ದೊಡ್ಡ ಮಟ್ಟದ ವ್ಯವಸ್ಥಿತ ಯೋಜನೆ ನಡೆದಿದೆಯಲ್ಲವೇ? ಭಾರಿ ಮೊತ್ತವನ್ನು ವ್ಯಯಿಸದೇ ಅದು ಸಾಧ್ಯವೇ?

ಇಲ್ಲಿ ಮೋದಿ ವೇವ್ ಅಂದುಬಿಟ್ಟರೆ ಮುಗಿಯಲ್ಲ ಮಾಧ್ಯಮಗಳೇ, ಅದನ್ನು ಪುಶ್ ಮಾಡ್ತಾ ಇರೋದು ಮನಿ ವೇವ್… ಅಂದರೆ ಬಿಜೆಪಿ ನೀರಿನಂತೆ ಖರ್ಚು ಮಾಡುತ್ತಿರುವ ದುಡ್ಡು…ಈ ಸಲದ ಚುನಾವಣೆಯಲ್ಲಿ ಬಿಜೆಪಿಯ ವಿಪರೀತ ಪಾರ್ಟಿ ಫಂಡ್ ಬಗ್ಗೆ ಚರ್ಚೆಯೇ ಆಗಿಲ್ಲ… ಈ ಕುರಿತಾಗಿ ಒಂದು ನೋಟ ಇಲ್ಲಿದೆ….

ಇವತ್ತು ದೇಶದ ಎಲ್ಲ ಬಿಜೆಪಿಯೇತರ ಪಕ್ಷಗಳು ಚುನಾವಣೆಗಾಗಿ ವೆಚ್ಚ ಮಾಡುತ್ತಿರುವ ಒಟ್ಟು ಮೊತ್ತಕ್ಕಿಂತಲೂ ಹಲವು ಪಟ್ಟು ಮೊತ್ತವನ್ನು ಬಿಜೆಪಿ ಖರ್ಚು ಮಾಡುತ್ತಿದೆ. ಜೊತೆಗೆ ವಿವಿಧ ರೂಪದಲ್ಲಿ ‘ಅಗೋಚರ’ ಮೂಲಗಳು ಅದಕ್ಕೆ ಹಣಕಾಸಿನ ನೆರವು ಹರಿಸುತ್ತಲೇ ಇವೆ.
ಫಂಡ್ ರೈಸಿಂಗ್: ಬಿಜೆಪಿದು ಶೇ.75!

ಅಧಿಕೃತ ಅಂಕಿಅಂಶಗಳ ಪ್ರಕಾರವೇ, ದೇಶದ ಎಲ್ಲ ಪಕ್ಷಗಳಿಗೆ ದೊರೆತ ಪಾರ್ಟಿ ಫಂಡಿಗಿಂತಲೂ ಹಲವು ಪಟ್ಟು ಬಿಜೆಪಿಗೆ ಲಭಿಸಿದೆ. ಆಶ್ಚರ್ಯವೇನು ಬಂತು ಅಲ್ಲವೇ… ಕಾರ್ಪೋರೇಟ್ ನೀತಿಗಳನ್ನೇ ತನ್ನ ಉಸಿರಾಗಿಸಿಕೊಂಡ ಬಿಜೆಪಿಗೆ, ಆ ನೀತಿಗಳ ಅಕ್ರಮ ಫಲಾನುಭವಿಗಳು ಸಿಕ್ಕಾಪಟ್ಟೆ ಫಂಡ್ ಮಾಡದೇ ಇರುತ್ತಾರಾ?

ಚುನಾವಣೆ, ರಾಜಕೀಯ ವ್ಯವಹಹಾರಗಳ ಕುರಿತು ಅಧ್ಯಯನ ಮಾಡುವ ಅಶೋಷಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾಮ್ರ್ಸ (ಎ.ಡಿ.ಆರ್) ಸಂಸ್ಥೆ ಪಡೆದ ಅಧಿಕೃತ ಖಚಿತ ದಾಖಲೆಗಳ ಪ್ರಕಾರ, 2017-18ರಲ್ಲಿ ಈ ದೇಶದ ಪ್ರಮುಖ 7 ಪಕ್ಷಗಳ ಆದಾಯ (ಫಂಡ್) 1,397.90 ಕೋಟಿ ರೂಪಾಯಿ. ಇದರಲ್ಲಿ ಬಿಜೆಪಿಯ ಆದಾಯ 1,027.34 ಕೋಟಿ ರೂಪಾಯಿ. ಅಂದರೆ ಶೇ 73.5ರಷ್ಟು ಪಾರ್ಟಿ ಫಂಡ್ ಬಿಜೆಪಿಗೇ ಬಂದಿದೆ! ಇದು ಅಧಿಕೃತ ಮಾತ್ರ. ಅನಧಿಕೃತವಾಗಿ ಬಿಜೆಪಿಗೆ ಈ ಐದು ವರ್ಷಗಳಲ್ಲಿ ಸಾಕಷ್ಟು ‘ಪೇಮೆಂಟ್’ ಆಗಿಯೇ ಆಗಿದೆ.

ಬಿಜೆಪಿಯ ಆದಾಯ 1,027.34 ಕೋಟಿಯಲ್ಲಿ ದೇಣಿಗೆ ಮೂಲಕವೇ ಜಾಸ್ತಿ ಬಂದಿದ್ದು ಅದು 989 ಕೋಟಿ ರೂಪಾಯಿ! ಇದು ಕೇವಲ 2017-18ರ ಅಂಕಿಅಂಶ… ಕಪ್ಪುಹಣ ನಿರ್ನಾಮ ಮಾಡಿದೆವು ಎನ್ನುವ ಪ್ರಧಾನಿಯ ಪಾರ್ಟಿಗೆ ಬಂದ ಈ ದೇಣಿಗೆಗಳ ಮೂಲ ಬಿಳಿ ಹಣದ ವಹಿವಾಟು ಖಂಡಿತ ಇರಲಾರದು. ಕಾಂಗ್ರೆಸ್ ಏನ್ ಕಡಿಮೆಯಾ? ಅದಕ್ಕೂ 143 ಕೋಟಿ ರೂಪಾಯಿ ಅದೇ ವರ್ಷದಲ್ಲಿ ದೇಣಿಗೆ ರೂಪದಲ್ಲಿ ಬಂದು ಬಿದ್ದಿದೆ!

ಈ ಬೇನಾಮಿ ಹಣದ ಮೂಲ ಯಾವುದು?
2017ರಲ್ಲಿ ಬಿಜೆಪಿ ಸರ್ಕಾರದಿಂದ ಜಾರಿಗೆ ಬಂದ ಚುನಾವಣಾ ಬಾಂಡ್ ( ಈ ಕುರಿತಾಗಿ ಪರ-ವಿರೋಧ ವಾದ ಇದ್ದೇ ಇದೆ) ನಿಯಮ ಬಿಜೆಪಿಗೇ ಹೆಚ್ಚು ‘ಲಾಭ’ದಾಯಕವಾಗಿದೆ. ಬಾಂಡ್‍ಗಳ ಮೂಲಕ ಪಾರ್ಟಿ ಫಂಡ್ ನೀಡುವವರ ವಿವರವೇ ಗೊತ್ತಾಗುವುದಿಲ್ಲ. ಈ ‘ಅನಾಮಧೇಯ’ ಮೂಲಗಳು ಎಲ್ಲ ಪ್ರಮುಖ ಪಕ್ಷಗಳಿಗೂ ದೇಣಿಗೆ ನೀಡುತ್ತವೆ. ಆದರೆ, ದೇಶದ ಇತಿಹಾಸದಲ್ಲೇ ಈ ಸಲ ಭಾರಿ ಎನ್ನುವಂತಹ ಫಂಡ್ ಸಿಕ್ಕಿದ್ದು ಬಿಜೆಪಿಗೇ! ಒಂದು ಉದಾಹರಣೆ: 2017-18ರಲ್ಲಿ ಆರ್‍ಬಿಐ 215 ಕೋಟಿ ಮೊತ್ತದ ಚುನಾವಣಾ ಬಾಂಡ್‍ಗಳನ್ನು ಇಶ್ಯೂ ಮಾಡಿತು. ಅದರಲ್ಲಿ ಬಿಜೆಪಿ ಶೇರು 210 ಕೋಟಿ ರೂಪಾಯಿ, ಅಂದರೆ ಶೇ.98! ಈ ದೇಶದ ಉದ್ಯಮಪತಿಗಳಿಗೆ ತಲೆ ಕೆಟ್ಟಿದೆಯೇ? ಖಂಡಿತ ಇಲ್ಲ, ಮೋದಿ ಸರ್ಕಾರ ಅವರಿಗೆ ಬೇಕಾದುದನ್ನೆಲ್ಲ ನಮ್ಮ ತೆರಿಗೆ ಹಣದಲ್ಲಿ ಒದಗಿಸುತ್ತ ಬರುತ್ತಿದೆ. ಹೀಗಾಗಿ ಕೊಳ್ಳೆ ಹೊಡೆದ ನಮ್ಮ ತೆರಿಗೆ ಹಣದಲ್ಲಿ ಒಂದು ಪಾಲನ್ನು ಅವರು ಬಿಜೆಪಿಗೆ ನೀಡುತ್ತಿದ್ದಾರಷ್ಟೇ!

ಚುನಾವಣೆ ಹತ್ತಿರ ಬಂದಂತೆ ಈ ‘ಅನಾಮಧೇಯ’ರ ಫಂಡ್ ನೀಡುವಿಕೆ ಹೆಚ್ಚುತ್ತಲೇ ಹೋಗಿದೆ. ಮಾರ್ಚ್ ತಿಂಗಳ ಮೊದಲ ಎರಡು ವಾರಗಳಲ್ಲಿ 1,366 ಕೋಟಿ ಫಂಡ್ ಬಂದಿದೆ. ಇದೆಲ್ಲ ಆಲ್‍ಮೋಸ್ಟ್ ಬಿಜೆಪಿಯ ಬುಟ್ಟಿಗೆ ಬಿದ್ದಿದೆ!

ಇದಲ್ಲದೇ ಎಲ್ಲ ಪ್ರಮುಖ ಪಾರ್ಟಿಗಳಿಗೂ ಬಾಂಡ್ ಅಲ್ಲದೇ ಗುಪ್ತವಾಗಿ ನೂರಾರು ಕೋಟಿ ಬೇನಾಮಿ ದುಡ್ಡು ಹರಿದು ಬರುತ್ತಲೇ ಇದೆ. ಅದರಲ್ಲಿ ಬಿಜೆಪಿಗೆ ಶೇ. 90ಕ್ಕೂ ಹೆಚ್ಚು ಸಿಗುತ್ತಿದೆ! ಈ ಹಣದಲ್ಲೇ ಬಿಜೆಪಿಯ ಪ್ರಚಾರ ಇವತ್ತು ಜೋರಾಗಿದೆ. ಜಾಹಿರಾತು, ಪ್ರಾಯೋಜನೆ ಹೆಸರಲ್ಲಿ ಮತ್ತು ಗುಪ್ತವಾಗಿಯೂ ಅದು ದೇಶದ ಪ್ರಮುಖ ಮಾಧ್ಯಮಗಳಿಗೆ ಈ ಬೇನಾಮಿ ದುಡ್ಡಿನ ಒಂದು ಪಾಲನ್ನು ನೀಡುತ್ತಿದೆ.
ಸುಮ್ಮನೇ ಮೋದಿ ವೇವ್! ಅದನ್ನೆಲ್ಲ ಪುಶ್ ಮಾಡ್ತಾ ಇರೋದು ಕಳ್ಳ ಉದ್ಯಮಿಗಳ ಬೇನಾಮಿ ಹಣ! ಅದಕ್ಕೇ ಇದು ‘MONEY WAVE’ ಅಲ್ಲವೇ?

(ಆಧಾರ: thewire.in )

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕುಸಿಯುವುದರಲ್ಲಿ ರೂಪಾಯಿ ಮತ್ತು ಬಿಜೆಪಿ ವರ್ಚಸ್ಸಿನ ನಡುವೆ ತೀವ್ರ ಪೈಪೋಟಿಯಿದೆ : ಅಖಿಲೇಶ್ ಯಾದವ್ ವ್ಯಂಗ್ಯ

ಕುಸಿಯುವುದರಲ್ಲಿ ರೂಪಾಯಿ ಮತ್ತು ಬಿಜೆಪಿ ವರ್ಚಸ್ಸಿನ ನಡುವೆ ತೀವ್ರ ಪೈಪೋಟಿ ನಡೆಯುತ್ತಿದೆ ಎಂದು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ವ್ಯಂಗ್ಯವಾಡಿದ್ದಾರೆ. ಬಿಜೆಪಿ ನಾಯಕರು ಹಾಗೂ ಅವರ ಸಹವರ್ತಿಗಳ ಭ್ರಷ್ಟಾಚಾರ ಮತ್ತು ದುರ್ನಡತೆಯ ಪ್ರಕರಣಗಳು...

ಅಂತರ್ಧರ್ಮೀಯ ‘ಲಿವ್-ಇನ್’ ಸಂಬಂಧ ಅಪರಾಧವಲ್ಲ: ಅಲಹಾಬಾದ್ ಹೈಕೋರ್ಟ್

ಅಂತರ್ಧರ್ಮೀಯ ಲಿವ್-ಇನ್ ಸಂಬಂಧವನ್ನು ನಿಷೇಧಿಸಲಾಗಿಲ್ಲ ಅಥವಾ ಯಾವುದೇ ಕಾನೂನಿನ ಅಡಿಯಲ್ಲಿ ಅಪರಾಧವಲ್ಲಎಂದು ತೀರ್ಪು ನೀಡಿರುವ ಅಲಹಾಬಾದ್ ಹೈಕೋರ್ಟ್, ಮಹಿಳೆಯ ಕುಟುಂಬದಿಂದ ಬೆದರಿಕೆ ಎದುರಿಸುತ್ತಿರುವ ದಂಪತಿಗಳಿಗೆ ರಕ್ಷಣೆ ನೀಡಿದೆ. ಸೋನ್‌ಭದ್ರಾದ ಕಾಜಲ್ ಪ್ರಜಾಪತಿ ಮತ್ತು ಅವರ...

‘ವೇತನ ಸಹಿತ ಪಿತೃತ್ವ ರಜೆಯನ್ನು ಕಾನೂನುಬದ್ಧಗೊಳಿಸಬೇಕು’; ರಾಜ್ಯಸಭೆಯಲ್ಲಿ ಎಎಪಿ ಸಂಸದ ರಾಘವ್ ಚಡ್ಡಾ ಒತ್ತಾಯ

ಭಾರತದಲ್ಲಿ ವೇತನ ಸಹಿತ ಪಿತೃತ್ವ ರಜೆಯನ್ನು ಕಾನೂನುಬದ್ಧ ಹಕ್ಕನ್ನಾಗಿ ಮಾಡಲು, ಹಂಚಿಕೆಯ ಆರೈಕೆ ಜವಾಬ್ದಾರಿಗಳನ್ನು ಒತ್ತಿಹೇಳಲು ಕಾನೂನನ್ನು ಜಾರಿಗೆ ತರಬೇಕೆಂದು ಎಎಪಿ ಸಂಸದ ರಾಘವ್ ಚಡ್ಡಾ ಒತ್ತಾಯಿಸಿದ್ದಾರೆ. ರಾಜ್ಯಸಭೆಯಲ್ಲಿ ಮಾತನಾಡಿದ ಅವರು, ತಂದೆ ಉದ್ಯೋಗ...

ಬಿಜೆಪಿ ಇತರ ರಾಜ್ಯಗಳ ಅಕ್ರಮ ಮತದಾರರನ್ನು ಸೇರಿಸುತ್ತಿದೆ : ಮಮತಾ ಬ್ಯಾನರ್ಜಿ ಆರೋಪ

ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮಂಗಳವಾರ (ಮಾ.31) ಬಿಜೆಪಿ ಬಿಹಾರ, ರಾಜಸ್ಥಾನ, ಹರಿಯಾಣ ಮತ್ತು ಉತ್ತರ ಪ್ರದೇಶದ ಅಕ್ರಮ ಮತದಾರರನ್ನು ರಾಜ್ಯದ ಮತದಾರರ ಪಟ್ಟಿಯಲ್ಲಿ ಸೇರಿಸಲು ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದರು. ಪಶ್ಚಿಮ...

ಬಿಹಾರ: ವಿವಾಹಿತ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರಕ್ಕೆ ಯತ್ನ; ಹಲ್ಲೆ ಮಾಡಿ ವಿಡಿಯೋ ಹರಿಬಿಟ್ಟ ದುಷ್ಟರು: ಇಬ್ಬರ ಬಂಧನ 

ಬಿಹಾರದ ನಳಂದ ಜಿಲ್ಲೆಯಲ್ಲಿ ನಾಚಿಕೆಗೇಡಿನ ಮತ್ತು ಆತಂಕಕಾರಿ ಘಟನೆಯೊಂದು ಬೆಳಕಿಗೆ ಬಂದಿದೆ. ನೂರ್ಸರಾಯ್ ಪೊಲೀಸ್ ಠಾಣೆ ವ್ಯಾಪ್ತಿಯ ಹಳ್ಳಿಯೊಂದರಲ್ಲಿ ಮೂವರು ಪುರುಷರು ವಿವಾಹಿತ ಮಹಿಳೆಯ ಮೇಲೆ ಸಾರ್ವಜನಿಕವಾಗಿ ಸಾಮೂಹಿಕ ಅತ್ಯಾಚಾರಕ್ಕೆ ಯತ್ನಿಸಿದ್ದಾರೆ. ದೌರ್ಜನ್ಯ ವಿರೋಧಿಸಿ...

‘ಹಿಂದುತ್ವ ಉಗ್ರವಾದವನ್ನು ಏಕೆ ನಿರ್ಲಕ್ಷಿಸಬೇಕು..?’; ಸಂಸತ್ತಿನಲ್ಲಿ ಪ್ರಶ್ನಿಸಿದ ರುಹುಲ್ಲಾ ಮೆಹದಿ

"ದೇಶದಲ್ಲಿ ಹೆಚ್ಚುತ್ತಿರುವ ಬಲಪಂಥೀಯ ಉಗ್ರವಾದವನ್ನು ನಿರ್ಲಕ್ಷಿಸಿ ಎಡಪಂಥೀಯ ಬೆದರಿಕೆಗಳ ಮೇಲೆ ಮಾತ್ರ ಗಮನಹರಿಸಲಾಗುತ್ತಿದೆ" ಎಂದು ಲೋಕಸಭೆಯಲ್ಲಿ ಜಮ್ಮು-ಕಾಶ್ಮೀರದ ಶ್ರೀನಗರ ಸಂಸದ ಆಗಾ ಸೈಯದ್ ರುಹುಲ್ಲಾ ಮೆಹದಿ ನರೇಂದ್ರ ಮೋದಿ ನೇತೃತ್ವದ ಸರ್ಕಾರದ ಮೇಲೆ...

ವಿರೋಧದ ನಡುವೆಯೂ ಟ್ರಾನ್ಸ್‌ಜೆಂಡರ್ ತಿದ್ದುಪಡಿ ಮಸೂದೆಗೆ ರಾಷ್ಟ್ರಪತಿ ಅಂಕಿತ

ತೀವ್ರ ವಿರೋಧಗಳ ನಡುವೆಯೂ ಟ್ರಾನ್ಸ್‌ಜೆಂಡರ್‌ ವ್ಯಕ್ತಿಗಳ (ಹಕ್ಕುಗಳ ರಕ್ಷಣೆ) ತಿದ್ದುಪಡಿ ಮಸೂದೆಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಅಂಕಿತ ಹಾಕಿದ್ದಾರೆ ಎಂದು ಕೇಂದ್ರ ಕಾನೂನು ಸಚಿವಾಲಯ ಸೋಮವಾರ (ಮಾ. 30) ಗೆಜೆಟ್ ಅಧಿಸೂಚನೆಯಲ್ಲಿ...

ಮಶಾದ್ ವಿಮಾನ ನಿಲ್ದಾಣದ ಮೇಲೆ ಅಮೆರಿಕ ದಾಳಿ: ದೆಹಲಿಗೆ ತೆರಳುತ್ತಿದ್ದ ನೆರವು ವಿಮಾನಕ್ಕೆ ಡಿಕ್ಕಿ: ಇದು ‘ಯುದ್ಧ ಅಪರಾಧ’ ಎಂದ ಇರಾನ್ 

ಇರಾನ್‌ನ ಮಶಾದ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅಮೆರಿಕದ ವಾಯುದಾಳಿಯ ಸಂದರ್ಭದಲ್ಲಿ ನವದೆಹಲಿಗೆ ಹಾರಲು ನಿಗದಿಯಾಗಿದ್ದ ಮಹಾನ್ ಏರ್ ವಿಮಾನವು ಡಿಕ್ಕಿ ಹೊಡೆದಿದೆ ಎಂದು ವರದಿಯಾಗಿದೆ.  ಈ ವಿಮಾನವು ಔಷಧಿಗಳು ಸೇರಿದಂತೆ ಮಾನವೀಯ ನೆರವು ಸಾಗಣೆಗೆ...

ಪ್ಯಾಲೆಸ್ತೀನಿಯರಿಗೆ ಮರಣದಂಡನೆ ವಿಧಿಸುವ ಕಾನೂನು ಅಂಗೀಕಾರ : ಇಸ್ರೇಲ್ ಕ್ರಮಕ್ಕೆ ಜಾಗತಿಕ ಖಂಡನೆ

ಮಾರಣಾಂತಿಕ ದಾಳಿಗಳ ಅಪರಾಧ ಸಾಬೀತಾದ ಪ್ಯಾಲೆಸ್ತೀನಿಯರಿಗೆ ಮರಣದಂಡನೆಯನ್ನು ಕಡ್ಡಾಯ ಶಿಕ್ಷೆಯನ್ನಾಗಿ ನಿಗದಿಪಡಿಸಿದ ಇಸ್ರೇಲ್‌ನ ಹೊಸ ಕಾನೂನನ್ನು ಮಾನವ ಹಕ್ಕುಗಳ ಸಂಘಟನೆಗಳು, ವಿವಿಧ ರಾಷ್ಟ್ರಗಳ ನಾಯಕರು ಸೇರಿದಂತೆ ಜಾಗತಿಕ ಸಮುಯದಾಯ ತೀವ್ರವಾಗಿ ವಿರೋಧಿಸಿದೆ. ಈ...

ಬರೇಲಿ: ಮುಸ್ಲಿಂ ಯುವಕರ ಮೇಲೆ ಹಲ್ಲೆ, ಹಿಂದುತ್ವ ಘೋಷಣೆಗಳನ್ನು ಪಠಿಸುವಂತೆ ಬಲವಂತ; ಪ್ರಮುಖ ಆರೋಪಿ ಬಂಧನ

ಉತ್ತರ ಪ್ರದೇಶದ ಬರೇಲಿಯಲ್ಲಿ ಮುಸ್ಲಿಂ ಯುವಕನ ಮೇಲೆ ಹಲ್ಲೆ, ಅವಮಾನ ಮತ್ತು ಹಿಂದುತ್ವ ಘೋಷಣೆಗಳನ್ನು ಪಠಿಸುವಂತೆ ಒತ್ತಾಯಿಸಲಾಗಿದೆ ಎಂದು ಆರೋಪಿಸಲಾಗಿದೆ. ಪ್ರಮುಖ ಆರೋಪಿ ರಿಷಭ್ ಠಾಕೂರ್ ನನ್ನು ಪೊಲೀಸರು ಬಂಧಿಸಿದ್ದು, ಮತ್ತಷ್ಟು ಬಂಧನಗಳು ನಡೆಯುವ...