Homeಕರ್ನಾಟಕ’ಬಂಗಾಳದಲ್ಲಿ ಮುಸ್ಲಿಮರ ಮೇಲೆ ಭೀಕರ ದಾಳಿ ನಡೆಯಲಿದೆ’- ಕೋಮುಗಲಭೆಗೆ ಪ್ರಚೋದನೆ ನೀಡಿದ ಪ್ರಕಾಶ್‌‌ ಬೆಳವಾಡಿ

’ಬಂಗಾಳದಲ್ಲಿ ಮುಸ್ಲಿಮರ ಮೇಲೆ ಭೀಕರ ದಾಳಿ ನಡೆಯಲಿದೆ’- ಕೋಮುಗಲಭೆಗೆ ಪ್ರಚೋದನೆ ನೀಡಿದ ಪ್ರಕಾಶ್‌‌ ಬೆಳವಾಡಿ

- Advertisement -
- Advertisement -

ಯಾವ ಆಯಾಮದಲ್ಲಿ ನೋಡಿದರೂ, ರಂಗಕರ್ಮಿ ಪ್ರಕಾಶ್ ಬೆಳವಾಡಿ ಮಾಡಿರುವ ಫೇಸ್‌ಬುಕ್ ಪೋಸ್ಟ್ ಉದ್ರೇಕಕಾರಿ ಭಾಷೆ ಹೊಂದಿದೆ, ಅದರಲ್ಲಿ ಮುಸ್ಲಿಮರು ಅನ್ಯರು ಎಂಬ ವಾಸನೆ ಇದೆ. 2002 ರ ಗುಜರಾತ್ ಹತ್ಯಾಕಾಂಡದ ಸಮರ್ಥನೆಯಿದೆ. ಗೋಧ್ರಾ ಘಟನೆ ನಂತರ ನಾನು ಊಹಿಸಿದಂತೆ ಅಲ್ಲಿ ದೊಡ್ಡ ಪ್ರತೀಕಾರ ನಡೆಯಿತು ಎಂಬ ’ಹೆಮ್ಮೆಯೂ’ ಇದೆ.

ಅವರ ಪೋಸ್ಟಿನಲ್ಲಿ ಅಲ್ಪಸಂಖ್ಯಾತರ ಮೇಲೆ ’ಸಂಘಪರಿವಾರ’ ನಡೆಸುವ ದಾಳಿಗೆ ಪರೋಕ್ಷ ಬೆಂಬಲವಿದೆ. ಮೊದಲಿನಿಂದಲೂ ಬಿಜೆಪಿ ಆರಾಧಕರೇ ಆಗಿರುವ ಅವರು, ಈ ಮಟ್ಟಿಗೆ ಭಜರಂಗದಳದ ಪುಂಡರ ಭಾಷೆ ಬಳಸುತ್ತಾರೆ, ದ್ವೇಷ ಕಕ್ಕುತ್ತಾರೆ ಎಂಬುದನ್ನು ಯಾರೂ ನಿರೀಕ್ಷೆ ಮಾಡಿರಲಿಲ್ಲ. ಈಗ ಅವರು ಗುಜರಾತ್ ಹತ್ಯಾಕಾಂಡ ಬಂಗಾಳದಲ್ಲಿ ನಡೆದೇ ನಡೆಯುತ್ತದೆ ಎಂದು ಭವಿಷ್ಯ ನುಡಿಯುತ್ತಿದ್ದಾರೆ. ಇಂಗ್ಲಿಷ್‌ನಲ್ಲಿ ಈ ಪೋಸ್ಟ್ ಇರುವ ಕಾರಣಕ್ಕೆ ಬಲಪಂಥೀಯರು ಹಾಗೂ ಬಿಜೆಪಿ ಬೆಂಬಲಿಗರು ಇದನ್ನು ಎಲ್ಲ ರಾಜ್ಯಗಳಿಗೂ ಹರಡತೊಡಗಿದ್ದಾರೆ.

ಇದನ್ನೂ ಓದಿ: ಚಾಮರಾಜನಗರ ದುರಂತ: ಆಕ್ಸಿಜನ್ ಕೊರತೆಯಿಂದ ಆಗಿದ್ದರೆ ಸರ್ಕಾರವೆ ಹೊಣೆ – ಸಿಟಿ ರವಿ

ಅವರ ಪೋಸ್ಟ್ ಮೊದಲು ಓದಿ ಬಿಡಿ:

“27 ಫೆಬ್ರುವರಿ 2002 ರ ಬೆಳಿಗ್ಗೆ, ಗೋದ್ರಾ ಬಳಿ ರೈಲಿನಲ್ಲಿ 59 ಮಂದಿ ಕರಸೇವಕರನ್ನ ಸುಟ್ಟು ಕೊಂದಾಗ, ನನ್ನ ಒಬ್ಬ ಉದಾರವಾದಿ ನಿಲುವಿನ ಲಿಬರಲ್ ಗೆಳೆಯ – ಈಗ ಅವನ ಜೊತೆ ಗೆಳೆತನ ಇಲ್ಲ- ಅಹ್ಮದಾಬಾದಿನಿಂದ ಫೋನ್ ಮಾಡಿ, `ಇದು ಸಂಘಿಗಳಿಗೆ ಸರಿಯಾದ ಪಾಠ ಕಲಿಸುತ್ತದೆ’ ಅಂತ ಏನೋ ಹೇಳಿದ್ದ. ನಾನು ಹೇಳಿದ್ದೆ, ಇದಕ್ಕೆ ನೀಡಲಿರುವ ಪ್ರತೀಕಾರ ತ್ವರಿತವಾಗಿರುತ್ತದೆ ಮತ್ತು ಭೀಕರವಾಗಿರುತ್ತದೆ ಎಂದು. ಅದು ಹಾಗೇ ಆಯ್ತು.

ಹೌದು, ಗುಜರಾತಿನಲ್ಲಿ ಮುಸ್ಲಿಂ ಜನಸಂಖ್ಯೆ ಕೇವಲ 8% ಇರುವ ಕಾರಣ ಆ ಗಲಭೆ ಏಕಪಕ್ಷೀಯವಾಗಿತ್ತು. ಪಶ್ಚಿಮ ಬಂಗಾಳದಲ್ಲಿ ಬೇರೆ ಸನ್ನಿವೇಶವಿದೆ. ಮುಸ್ಲಿಮರು 30% ಇದ್ದಾರೆ. ಹೀಗಾಗಿ, ಪ್ರತೀಕಾರ ಅಷ್ಟೊಂದು ತ್ವರಿತವಾಗಿರುವುದಿಲ್ಲ. ಆದರೆ ತಪ್ಪು ತಿಳಿದುಕೊಳ್ಳಬೇಡಿ, ಅದು ಆಗಿಯೇ ಆಗುತ್ತದೆ. ಸಮಯ ಆದ ಹಾಗೆ ಹಿಂದು-ಮುಸ್ಲಿಂ ಗಲಭೆ ಏಳಲಿದೆ. ಅದು ಆದಾಗ, ಅದು ಬಹಳ ದುರಂತಮಯವಾಗಲಿದೆ, ಕ್ರೂರವಾಗಿರಲಿದೆ ಮತ್ತು ಸಂಘಟಿತವಾಗಿ ನಡೆಯಲಿದೆ.

ಈಗ ಬಹಳ ಶಾಂತ ರೀತಿಯಿಂದ ವರ್ತಿಸುವ ರಾಜ್ಯ ಸರ್ಕಾರ ಮತ್ತು ಲಿಬರಲ್‌ಗಳು, ’ಸಂಘಿಗಳಿಗೆ ಹಾಗೆ ಆಗಬೇಕು’ ಎಂತ ತಿಳಿದುಕೊಂಡಿದ್ದಾರೆ… ನಂತರ ಇವರೆಲ್ಲ ಲೆಕ್ಕಾಚಾರ ಮಾಡುವ ಪರಿಸ್ಥಿತಿ ನಿರ್ಮಾಣವಾಗುತದೆ. ಈಗಾಗಲೇ ಇದನ್ನ ತಡೆಯಲು ಬಹಳ ತಡವಾಗಿದೆ” ಎಂದು ಪ್ರಕಾಶ್‌ ಬೆಳವಾಡಿ ಹೇಳಿದ್ದಾರೆ.

ಇದನ್ನೂ ಓದಿ: ಜನರ ಗಮನ ಬೇರೆಡೆ ಸೆಳೆಯಲು ರೋಮ್‌ ಚಕ್ರವರ್ತಿಗಳು ಗ್ಲಾಡಿಯೇಟರ್‌‌ಗಳನ್ನು ಆಡಿಸುತ್ತಿದ್ದರು, ನಮಗೆ ಐಪಿಎಲ್ ಇದೆ!

ಸರ್ಕಾರದ ಒಂದು ಕೋಟಿ ರೂ. ಅನುದಾನದಲ್ಲಿ ಭೈರಪ್ಪನವರ ’ಪರ್ವ’ ಕೃತಿಯನ್ನು ನಾಟಕವಾಗಿ ರೂಪಾಂತರಿಸುವ ಕೆಲಸದಲ್ಲಿರುವ ಪ್ರಕಾಶ್ ಅವರಿಗೆ, ಬಂಗಾಳ ಚುನಾವಣೆಯಲ್ಲಿ ಬಿಜೆಪಿಗಾದ ಹೀನಾಯ ಸೋಲು ತೀವ್ರವಾಗಿ ತಾಕಿದಂತಿದೆ.

ಚುನಾವಣಾ ಫಲಿತಾಂಶದ ನಂತರ ನೆಡೆಯುವ ಗಲಾಟೆಗಳನ್ನು ದೊಡ್ಡದು ಮಾಡಿ, ಹಳೆಯ ವಿಡಿಯೋಗಳನ್ನು ಹಾಕಿ, ’ಪಶ್ಚಿಮ ಬಂಗಾಳದಲ್ಲಿ ರಾಷ್ಟ್ರಪತಿ ಆಡಳಿತ ಜಾರಿ ಮಾಡಿ’ ಎಂದು ಅಭಿಯಾನ ಮಾಡುತ್ತಿರುವ ಬಿಜೆಪಿಯ ಐಟಿ ಸೆಲ್ ಮತ್ತು ಅದರ ಬೆಂಬಲಿಗರ ಜಾಯಮಾನದಲ್ಲೇ ಪ್ರಕಾಶ ಬೆಳವಾಡಿಯವರ ಪೋಸ್ಟ್ ಕೂಡ ಇದೆ.

ಈ ಕುರಿತು ಫೇಸ್‌ಬುಕ್ ಮತ್ತು ಇತರ ಜಾಲತಾಣಗಳಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ. ಶರತ್‌ಚಂದ್ರ ಎನ್ನುವವರು, ’ಹಿಂದೆಯೂ ಎಫ್‌ಬಿಯಲ್ಲಿ ಅವರ ಪೋಸ್ಟ್ ಹೀಗೇ ಇದ್ದವಾದರೂ ನೇರವಾಗಿ ಸಂಘಪರಿವಾರದವರಂತೆ ಬರೆಯುತ್ತಿರಲಿಲ್ಲ. ಈಗ ತನ್ನ ನಿಜ ಮುಖದ ದರ್ಶನ ಮಾಡಿದ್ದಾರೆ ಈ ಬೆಳವಾಡಿ. ಈಗ ತನ್ನ ಪ್ರೊಫೈಲ್ ಅನ್ನೂ ಡಿ-ಆಕ್ಟಿವೇಟ್ ಮಾಡಿಕೊಂಡಿದ್ದಾರೆ’ ಎಂದು ಬರೆದಿದ್ದಾರೆ. ಈ ಪೋಸ್ಟ್‌ಗೆ ಬಂದ ಪ್ರತಿಕ್ರಿಯೆಗಳಲ್ಲಿ ಬೆಳವಾಡಿ ಅವರ ’ಸಂಘಪರಿವಾರ’ದ ಮನಸ್ಥಿತಿಯನ್ನು ಟೀಕಿಸಲಾಗಿದೆ.

ಇದನ್ನೂ ಓದಿ: ಸಂಸ್ಕಾರಕ್ಕೆ ಬರುವವರಿಗೆ ಉಚಿತ ಟಿ,ಕಾಫಿ ನೀಡುತ್ತೇವೆಂದು ನಗುಮುಖದ ಫ್ಲೆಕ್ಸ್‌; ಕನಿಷ್ಠ ಸಂವೇದನೆ ಮರೆತ BJP

ಈ ಕುರಿತು ನಾನುಗೌರಿ.ಕಾಂ ಜೊತೆ ಮಾತನಾಡಿದ ನಟ ಅಹಿಂಸಾ ಚೇತನ್, `ನಾನು ಆ ಪೋಸ್ಟ್ ಓದಿಲ್ಲ. ಸಾರಾಂಶ ಕೇಳಿದ್ದೇನೆ. ಬೆಳವಾಡಿಯವರ ಪೋಸ್ಟ್‌ಗೆ ಪ್ರತಿಕ್ರಿಯೆ ನೀಡಲಾರೆ. ಅವರು ವೈಚಾರಿಕವಾಗಿ ಶೂನ್ಯರು, ಸಮಾಜ ನೋಡುವ ದೃಷ್ಟಿಕೋನವೆ ಅವರಲಿಲ್ಲ. ಈ ಕೋವಿಡ್ ಸಂದರ್ಭದಲ್ಲಿ ಇದೆಲ್ಲ ಬೇಕಿತ್ತ? ಲಕ್ಷಾಂತರ ಜನ ಹಾಸಿಗೆ, ಆಕ್ಸಿಜನ್ ಇಲ್ಲದೇ ಸಾಯುತ್ತಿರುವಾಗ ಕೋಮುಗಲಭೆ ಪ್ರಚೋದಿಸುವ ಪೋಸ್ಟ್‌ಗಳನ್ನು ನಿರ್ಲಕ್ಷ್ಯ ಮಾಡುವುದೇ ಒಳ್ಳೆಯದು. ಅವು ಮತ್ತೆ ಮುನ್ನೆಲೆಗೆ ಬರದಂತೆ ಮಾಡಬೇಕಾಗಿದೆ. ಈಗ ನಮ್ಮ ಕಾಳಜಿ ಕೋವಿಡ್ ಬಿಕ್ಕಟ್ಟನ್ನು ಪರಿಹರಿಸುವತ್ತ ಇರಬೇಕು…’ ಎಂದು ಹೇಳಿದರು.

ಕತೆಗಾರ, ನಾಟಕಕಾರ ಹನುಮಂತ ಹಾಲಿಗೇರಿ, ‘ಸಾಹಿತ್ಯ, ರಂಗಭೂಮಿ, ಕಲೆ ಇವು ಮನುಷ್ಯನ ಯೋಚನಾ ಲಹರಿಯನ್ನು ಹದ ಮಾಡಿ, ಮಾನವೀಯತೆ ಅಂಶ ಬೆಳೆಸುತ್ತವೆ. ಆದರೆ ರಂಗಭೂಮಿಯ ಹಿನ್ನೆಲೆಯ ಪ್ರಕಾಶ್ ಬೆಳವಾಡಿಯವರು ವಯಸ್ಸಾದಂತೆಲ್ಲ ಹೆಚ್ಚೆಚ್ಚು ಮಾನವೀಯರಾಗುವ ಬದಲು ಕ್ರೂರ ಮತ್ತು ಕೋಮುವಾದಿ ಸಂದೇಶಗಳನ್ನು ಹರಡುತ್ತಿರುವುದು ವಿಷಾದನೀಯ.

ಸರ್ಕಾರ ಅವರ ‘ಪರ್ವ’ ನಾಟಕ ಪ್ರದರ್ಶನಗಳಿಗೆ ಒಂದು ಕೋಟಿ ರೂ. ಅನುದಾನ ನೀಡಿದೆ. ಭೈರಪ್ಪನವರು ಆರಂಭದಲ್ಲಿ ಬರೆದ ಈ ಕಾದಂಬರಿಯಲ್ಲಿ ಕೋಮುವಾದಿ, ಜಾತಿವಾದಿ ಅಂಶಗಳಿಲ್ಲ. ಆದರೆ ಬೆಳವಾಡಿ ಅವರು ಈ ಕೃತಿ ಆಧರಿತ ನಾಟಕದಲ್ಲಿ ಕೋಮುವಿಷ ಬೆರೆಸುತ್ತಾರೇನೋ ಎಂಬ ಸಂಶಯ ಶುರುವಾಗಿದೆ’ ಎಂದು ನಾನುಗೌರಿ.ಕಾಂಗೆ ಹೇಳಿದರು.

ಇದನ್ನೂ ಓದಿ: ಟಿಎಂಸಿಯಿಂದ ಹಾರಿದ 148 ಜನರಿಗೆ BJP ಟಿಕೆಟ್, ಗೆದ್ದವರು 6 ಜನ!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

2 COMMENTS

  1. ಪ್ರಕಾಶ್ ಬೆಳವಾಡಿಯ ಹೇಳಿಕೆ ಕಂಡನಾರ್ಹ ಹಾಗೂ ಈ ಕಲಾವಿದ “ಮಾರಿಕೊಂಡವರು” ಗುಂಪನ್ನು ಸೇರಿದ್ದು ನೋವಿನ ಸಂಗತಿ.

  2. ಕೂಡಲೇ ಈತನ ಮೇಲೆ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿಕೊಂಡು ಇವನ ಮೇಲೆ ದೇಶದ್ರೋಹದ ಪ್ರಕರಣ ಹಾಕಿ ನೇಣುಗಂಬಕ್ಕೆ ಏರಿಸಿ. ಮುಂದಾಗುವ ಮತಿಯ ಘರ್ಷಣೆ ತಡೆಯಲು ಇವನ ಬಂಧನ ಹಾಗೂ ಮರಣದಂಡನೆ ಒಂದೇ ಮಾರ್ಗ.

LEAVE A REPLY

Please enter your comment!
Please enter your name here

- Advertisment -

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...

ವಿಧಾನಸಭೆಯಲ್ಲಿ ‘ಗೃಹಲಕ್ಷ್ಮಿ’ ಗದ್ದಲ : ಬಿಜೆಪಿ ಸದಸ್ಯರಿಂದ ಸಭಾತ್ಯಾಗ, ಕ್ಷಮೆ ಕೋರಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಗೃಹಲಕ್ಷಿ ಯೋಜನೆಯ ಹಣ ಬಿಡುಗಡೆ ಸಂಬಂಧ ಸಚಿವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ವಿಚಾರ ಇಂದು (ಡಿ.17 ಬುಧವಾರ) ವಿಧಾನಸಭೆಯಲ್ಲಿ ದೊಡ್ಡ ಮಟ್ಟದ ವಾಗ್ವಾದ, ಆರೋಪ-ಪ್ರತ್ಯಾರೋಪ, ಗದ್ದಲ, ಪ್ರತಿಭಟನೆ, ಸಭಾತ್ಯಾಗ ಮತ್ತು...

ತಂಪು ಪಾನೀಯದಲ್ಲಿ ಮತ್ತು ಬರುವ ಔಷಧ ಬೆರೆಸಿ ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ: ಆರೋಪಿ ಬಂಧನ

ಮುಂಬೈ ನಗರವನ್ನೇ ಬೆಚ್ಚಿಬೀಳಿಸಿದ ಆಘಾತಕಾರಿ ಘಟನೆಯಲ್ಲಿ, ವಕ್ತಿಯೋರ್ವ ಮತ್ತು ಬರುವ ತಂಪು ಪಾನೀಯ ನೀಡಿ ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಅಪರಾಧದ ಅಶ್ಲೀಲ ವೀಡಿಯೊಗಳನ್ನು ರೆಕಾರ್ಡ್ ಮಾಡಿ, ನಂತರ ವೀಡಿಯೊಗಳನ್ನು...

ಮನರೇಗಾ ಬದಲು ವಿಬಿ-ಜಿ ರಾಮ್ ಜಿ : ಲೋಕಸಭೆಯಲ್ಲಿ ಮಸೂದೆ ಅಂಗೀಕಾರದ ವೇಳೆ ಸಭಾತ್ಯಾಗಕ್ಕೆ ನಿರ್ಧರಿಸಿದ ವಿಪಕ್ಷಗಳು

ನರೇಗಾ ಬದಲು ತಂದಿರುವ ವಿಕಸಿತ್ ಭಾರತ್-ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕಾ ಮಿಷನ್ (ಗ್ರಾಮೀಣ್) ಮಸೂದೆ, 2025 (ವಿಬಿ–ಜಿ ರಾಮ್ ಜಿ ಮಸೂದೆ) ಲೋಕಸಭೆಯಲ್ಲಿ ಅಂಗೀಕಾರದ ವೇಳೆ ಸಹಕರಿಸದಿರಲು ವಿರೋಧ ಪಕ್ಷಗಳ ಸಂಸದರು...

ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಆರೋಪ: ಮ್ಯೂಸಿಕ್ ಮೈಲಾರಿ ಮೇಲೆ ಪೋಕ್ಸೋ ಪ್ರಕರಣ ದಾಖಲು 

ಬೆಂಗಳೂರು: ಉತ್ತರ ಕರ್ನಾಟಕದ ಜನಪದ ಗಾಯಕ ಹಾಗೂ ಯೂಟ್ಯೂಬ್ ಸ್ಟಾರ್ ಎಂದೇ ಖ್ಯಾತಿ ಪಡೆದಿದ್ದ ‘ಮ್ಯೂಸಿಕ್ ಮೈಲಾರಿ’ಎಂಬಾತನನ್ನು ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಮಹಾಲಿಂಗಪುರ ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಲಾರಿ...

ಇಂಧನ ಖರೀದಿಗೆ ‘ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ’ ಕಡ್ಡಾಯಗೊಳಿಸಿದ ದೆಹಲಿ ಸರ್ಕಾರ

ರಾಷ್ಟ್ರ ರಾಜಧಾನಿ ದೆಹಲಿಯ ವಾಹನ ಮಾಲೀಕರು ಕಟ್ಟುನಿಟ್ಟಾದ ಆದೇಶ ಎದುರಿಸುತ್ತಾರೆ. ಡಿಸೆಂಬರ್ 18 ರಿಂದ ನಗರದಾದ್ಯಂತದ ಪೆಟ್ರೋಲ್ ಬಂಕ್‌ಗಳಲ್ಲಿ ಇಂಧನ ಖರೀದಿಗೆ ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ (ಪಿಯುಸಿ) ಕಡ್ಡಾಯಗೊಳಿಸಲಾಗಿದೆ. ದೆಹಲಿ ಪರಿಸರ ಸಚಿವ ಮಂಜಿಂದರ್...

ವೈದ್ಯೆಯ ಹಿಜಾಬ್ ಎಳೆದ ಬಿಹಾರ ಸಿಎಂ, ಅವಹೇಳನ ಮಾಡಿದ ಯುಪಿ ಸಚಿವನ ವಿರುದ್ದ ದೂರು ದಾಖಲು

ವೈದ್ಯೆಯ ಹಿಜಾಬ್ ಎಳೆದ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಈ ಘಟನೆಯ ಕುರಿತು ಮಾತನಾಡುವಾಗ ಮಹಿಳೆಯನ್ನು ಅವಮಾನಿಸಿದ ಉತ್ತರ ಪ್ರದೇಶದ ಸಂಪುಟ ಸಚಿವ ಸಂಜಯ್ ನಿಶಾದ್ ವಿರುದ್ದ ಲಕ್ನೋದ ಕೈಸರ್‌ಬಾಗ್ ಪೊಲೀಸ್...

1 ಲಕ್ಷ ರೂಪಾಯಿ ಸಾಲ 74 ಲಕ್ಷ ರೂಪಾಯಿಗೆ ಏರಿಕೆ, ಸಾಲ ತೀರಿಸಲು ಕಿಡ್ನಿ ಮಾರಿದ ರೈತ 

ಅಕ್ರಮವಾಗಿ ಸಾಲ ನೀಡುವವರಿಂದ 1 ಲಕ್ಷ ಸಾಲ ಪಡೆದಿದ್ದು, ಅದಕ್ಕೆ ಹೆಚ್ಚಿನ ದಿನದ ಬಡ್ಡಿ ಸೇರಿ 75 ಲಕ್ಷ ಸಾಲ ಏರಿಕೆಯಾದ ಕಾರಣ ವ್ಯಕ್ತಿಯೊಬ್ಬ ತನ್ನ ಕಿಡ್ನಿಯನ್ನೇ ಮಾರಾಟ ಮಾಡಿರುವ ಘಟನೆ ಮಹಾರಾಷ್ಟ್ರದಲ್ಲಿ...