Homeಅಂಕಣಗಳುಅಂತೂ ಭಾರತದ ವರ್ಚಸ್ಸು ಬೆಳಗಿತು!

ಅಂತೂ ಭಾರತದ ವರ್ಚಸ್ಸು ಬೆಳಗಿತು!

- Advertisement -
- Advertisement -

ಪ್ರಪಂಚ ಆಗಾಗ್ಗೆ ಹಿಟ್ಲರ್‌ನನ್ನ ನೆನಸಿಕೊಂಡು ಬೆಚ್ಚುತ್ತಿತ್ತು. ಆತನ ಭಯಾನಕ ಯುಗವೊಂದು ಅಂತ್ಯವಾದುದಕ್ಕೆ ನಿಟ್ಟುಸಿರುಬಿಟ್ಟಿತ್ತು. ಆದರೇನು ಆತನ ಭೂತ ರಷ್ಯಾದಲ್ಲಿ ವಕ್ಕರಿಸಿದೆಯಂತಲ್ಲಾ. ರಷ್ಯಾದ ಅಧ್ಯಕ್ಷ ಪುಟಿನ್ ದೇಹವನ್ನ ಹೊಕ್ಕ ಹಿಟ್ಲರ್ ಭೂತ, ಜಗತ್ತಿನ ನಾಶದ ಬಗ್ಗೆ ಮಾತನಾಡುತ್ತಿದ್ದಾನಲ್ಲಾ. ಜಗತ್ತಿನ ಸರ್ವಾಧಿಕಾರಿಗಳ ಅಂತ್ಯವೆಲ್ಲಾ ಕೆಟ್ಟದಾಗಿ ಕೊನೆಯಾಗಿದೆ. ವಿನಾಶಕಾರಿ ಸಾಹಸಕ್ಕೆ ಕೈಹಾಕಿರುವ ಪುಟಿನ್, ತನ್ನ ಅಂತ್ಯದವರೆಗೂ ವಿರಮಿಸುವಂತೆ ಕಾಣುತ್ತಿಲ್ಲ. ಈ ನಡುವೆ, ಎಲ್ಲ ಹೊಡೆದಾಡಿ ಸತ್ತರೆ ನಮ್ಮ ಯಜಮಾನ ನೂಕಾಟದಲ್ಲೇ ಸತ್ತ ಎಂಬ ಗಾದೆಯಂತೆ ನಮ್ಮ ಮೋದಿ ಕತೆಯಾಗಿದೆಯಲ್ಲಾ. ಅಮೆರಿಕ ಅತ್ತ ರಷ್ಯ ಸಹವಾಸಕ್ಕೆ ಹೋದಿಯಾ ಜೋಕೆ ಎಂದರೆ, ಇತ್ತ ನಮ್ಮ ಪ್ರತಿಭಾ ಸಂಪನ್ನ ವಿದ್ಯಾರ್ಥಿಗಳು ಉಕ್ರೇನಿನಲ್ಲಿ ಸಿಕ್ಕಿಕೊಂಡು ಕರೆತರುವುದೇ ದೊಡ್ಡ ಸಮಸ್ಯೆಯಾಗಿದೆ. ಹೀಗಿರುವಾಗ, ಈಗಾಗಲೇ ತೀರಿಕೊಂಡ ಹಾವೇರಿಯ ನವೀನನ ಪಾರ್ಥಿವ ಶರೀರವನ್ನು ಮರಳಿ ತರುವ ವಿಷಯದಲ್ಲಿ ಅರವಿಂದ ಬೆಲ್ಲದ್ ಎಂಬ ಶಾಸಕ ನವೀನನ ಶವ ತರುವ ಜಾಗದಲ್ಲಿ 8 ಜನ ವಿದ್ಯಾರ್ಥಿಗಳನ್ನ ತರಬಹುದು ಎಂದುಬಿಟ್ಟಿದ್ದಾನಲ್ಲಾ. ಇದು ಇಡೀ ಬಿಜೆಪಿಯವರ ಮನಸ್ಥಿತಿಯಾದ್ದರಿಂದ ಯಾರೂ ಖಂಡಿಸಿಲ್ಲವಂತಲ್ಲಾ. ಥೂತ್ತೇರಿ.

****

ಉನ್ನತ ವ್ಯಾಸಂಗಕ್ಕೆಂದು ಉಕ್ರೇನಿಗೆ ಹೋದ ನಮ್ಮ ಹುಡುಗರು ಯುದ್ಧದ ಹೊಗೆಯಲ್ಲಿ ಸಿಕ್ಕಿಕೊಂಡು ಏದುಸಿರು ಬಿಡುತ್ತಿರುವಾಗ ಅವರನ್ನ ಭಾರತಕ್ಕೆ ಕರೆತರುವ ಕಾರ್ಯಾಚರಣೆಗೆ ಯಾವ ಹೆಸರಿಡಬೇಕೆಂಬ ಸಂಚು ಬಿಜೆಪಿಗಳ ತಲೆಯಲ್ಲಿ ಶಾನೆ ದಿನ ಸುಳಿದಾಡಿತಂತಲ್ಲಾ. ಇತರ ದೇಶಗಳು ತಮ್ಮ ದೂತಾವಾಸದ ಸಿಬ್ಬಂದಿಗಳನ್ನು ಬಳಸಿಕೊಂಡು ತಮ್ಮವರನ್ನು ಕರೆದುಕೊಂಡು ಹೋಗುತ್ತಿರುವ ಸಮಯದಲ್ಲಿ ಉತ್ತರ ಭಾರತದ ಚುನಾವಣೆಯಲ್ಲಿ ಬ್ಯುಸಿಯಾಗಿದ್ದ ಬಿಜೆಪಿಗಳ ತಲೆಯಲ್ಲಿ ಮಿಂಚು ಹೊಳೆದಂತಾಗಿ ಆಪರೇಷನ್ ಗಂಗಾ ಹೊಳೆಯಿತಂತಲ್ಲಾ. ಆ ಕೂಡಲೇ ರೋಮಾಂಚನಗೊಂಡು ಆಪರೇಷನ್ ಗಂಗಾ ಮೂಲಕ ನಮ್ಮ ವಿದ್ಯಾರ್ಥಿಗಳನ್ನ ಕರೆತರುವಷ್ಟರಲ್ಲಿ ಹಾವೇರಿ ಮೂಲದ ವಿದ್ಯಾರ್ಥಿ ನವೀನ್ ರಷ್ಯಾ ಶೆಲ್ ದಾಳಿಗೆ ಹತ್ಯೆಯಾದರು. ಮಕ್ಕಳನ್ನು ಕರೆತರುವಲ್ಲಿ ಆದ ವಿಳಂಬ, ಭಾರತದ ದೂತವಾಸದವರ ಕಣ್ಮರೆ ಇವೆಲ್ಲವನ್ನು ಗ್ರಹಿಸಿದ ವಿದ್ಯಾರ್ಥಿಗಳು ತಮ್ಮ ಅಭಿಪ್ರಾಯವನ್ನು ಹೇಳಿದ್ದಕ್ಕೆ, ಜಾಲತಾಣದ ಕೀಟಗಳು ಅವರ ನೋವನ್ನೂ ಲೆಕ್ಕಿಸದೆ ಕುಟುಕಿದವಂತಲ್ಲಾ. ಆಪರೇಷನ್ ಗಂಗಾ ಕಾರ್ಯಾಚರಣೆಯಿನ್ನೂ ಪೂರ್ಣಗೊಂಡಿಲ್ಲ, ಆಗಲೇ ನಮ್ಮ ಪ್ರಧಾನಿಗಳು ನಮ್ಮ ಕಾರ್ಯಾಚರಣೆಯಿಂದ ಭಾರತದ ವರ್ಚಸ್ಸು ಉತ್ತುಂಗದಲ್ಲಿ ಬೆಳಗುತ್ತಿದೆ ಎಂದಿದ್ದಾರಲ್ಲಾ. ಅಂತೂ ಕಳೆಗುಂದಿದ್ದ ಭಾರತದ ವರ್ಚಸ್ಸು ಏರಬೇಕಾದರೆ ಯುದ್ದ ಸಂಭವಿಸಬೇಕಾಯ್ತಂತಲ್ಲಾ. ಥೂ ಥೂ ಥೂತ್ತೇರಿ.

****

ಅರವಿಂದ ಬೆಲ್ಲದ್

ಯಾವ ಸಂದರ್ಭದಲ್ಲಿ ಹೇಗೆ ಪ್ರತಿಕ್ರಿಯಿಸಬೇಕು ಮತ್ತು ಹೇಗೆ ನಡೆದುಕೊಳ್ಳಬೇಕೆಂಬುದೆ ಈ ಬಿಜೆಪಿಗಳಿಗೆ ಗೊತ್ತಿಲ್ಲವಲ್ಲ ಎಂಬುದು ಭಾರತದ ಸಾಮಾನ್ಯ ಪ್ರಜೆಯ ಅಳಲಾಗಿದೆಯಂತಲ್ಲಾ. ಯುದ್ಧ ಪೀಡಿತ ಪ್ರದೇಶದಿಂದ ವಿದ್ಯಾರ್ಥಿಗಳನ್ನು ಕರೆತಂದ ಮಾತ್ರಕ್ಕೆ ಈ ದೇಶದ ವರ್ಚಸ್ಸು ಜಗತ್ತಿನಲ್ಲಿ ಬೆಳಗಬೇಕಾದರೆ ಅದಿನ್ನೆಂತಹ ಜಗತ್ತು ಇದಿನ್ನೆಂತಹ ದೇಶ ಎನ್ನುವಂತಹ ಕಿಡಿಗೇಡಿ ಮಾತುಗಳು ಬಿತ್ತರವಾಗುತ್ತಿವೆಯಂತಲ್ಲಾ. ಈ ಸಮಯದಲ್ಲಿ ಹಿಂದಿರುಗಿ ನೋಡಿದರೆ ನಮ್ಮನ್ನಾಳುವವರ ಬೇಜವಾಬ್ದಾರಿತನಗಳು ಸಾಲುಗಟ್ಟಿವೆಯಲ್ಲಾ. ಮುಖ್ಯವಾಗಿ ಕೊರೊನಾ ಭಾರತಕ್ಕೆ ಕಾಲಿಟ್ಟಾಗ ಆ ಬಗ್ಗೆ ಎಚ್ಚರವಹಿಸದ ನಾಯಕರು ಅಮೆರಿಕದ ಅಧ್ಯಕ್ಷನ ಜೊತೆ ಸಾರ್ವಜನಿಕ ಸಭೆ ಮಾಡಿ, ಮೆರವಣಿಗೆ ಮಾಡಿ, ಆತನನ್ನು ತಬ್ಬಿಕೊಂಡು ಕಳಿಸಿಕೊಡುವಷ್ಟರಲ್ಲಿ ಕೊರೊನಾ ಮಾರಿ ಭಾರತಾಂಬೆಯ ಸೆರಗಿನಲ್ಲಿ ಆಶ್ರಯ ಪಡೆದಾಗಿತ್ತಲ್ಲಾ. ಕೊರೊನಾ ಅನಾಹುತವನ್ನ ತಬ್ಲಿಗಿ ಮುಸ್ಲಿಮರ ಮೇಲೆ ಎತ್ತಿಹಾಕಿದ ಮತಾಂಧರು ಏಕದಂ ಲಾಕ್‌ಡೌನ್ ಮಾಡಿದ ಪರಿಣಾಮ ಸಾವಿರಾರು ಭಾರತಮಾತೆಯ ಪುತ್ರರು ಅಸುನೀಗಿದರು. ಇತಿಹಾಸ ತೋರಿಸಿದ ಭೀಕರತೆಯ ಬಗ್ಗೆ ಎಚ್ಚರಿಕೆಯಿದ್ದಿದ್ದರೆ, ಉಕ್ರೇನಿನಲ್ಲಿ ಸಿಕ್ಕಿಕೊಂಡ ವಿದ್ಯಾರ್ಥಿಗಳನ್ನು ತಿಂಗಳ ಮೊದಲೇ ಕರಕೊಂಡು ಬಂದಿದ್ದರೆ, ಐದುನೂರು ಜನ ಹುತಾತ್ಮ ರೈತರಿಂದ ಮಂಕಾಗಿರುವ ಭಾರತದ ವರ್ಚಸ್ಸು ಸುಧಾರಿಸುತ್ತಿಲ್ಲ. ಥೂತ್ತೇರಿ.

****

ಶಿವಮೊಗ್ಗದ ಮುಸ್ಲಿಮರು ಮತ್ತೊಮ್ಮೆ ಈಶ್ವರಪ್ಪನನ್ನು ಗೆಲ್ಲಿಸಿ ಕಳುಹಿಸುವ ಪಣತೊಟ್ಟಿದ್ದಾರಂತಲ್ಲಾ. ಹಾಗೆ ನೋಡಿದರೆ ಈಶ್ವರಪ್ಪ ಶಾಸಕನಾಗಿದ್ದೇ ಹತ್ಯೆಗೊಂಡವರ ಶವಯಾತ್ರೆಗಳನ್ನು ಮಾಡುವ ಮುಖಾಂತರ. ಪ್ರತಿವರ್ಷ ಗಣಪತಿ ಮೆರವಣಿಗೆ ಸಮಯದಲ್ಲಿ ಅಶ್ಲೀಲ ಘೋಷಣೆಗಳನ್ನು ಕೂಗುವುದು; ಇದು ಕೋಮುಘರ್ಷಣೆಗಳಿಗೆ ಕಾರಣವಾಗಿ ಹತ್ಯೆಗಳು ನಡೆಯುವುದು; ಕೂಡಲೇ ಈಶ್ವರಪ್ಪ ಓಡಿಬಂದು ಹತ್ಯೆಗೊಂಡವನ ಮೆರವಣಿಗೆ ಮಾಡಿ, ಚಿತಾಗಾರ ತಲುಪಿಸಿ ಬಂದು, ಭೀಕರ ಭಾಷಣ ಮಾಡಿ ಚಿತಾಗಾರದ ಕಾವು ಆರದಂತೆ ನೋಡಿಕೊಂಡು ಚುನಾವಣೆಗೆ ಹೋಗುವುದು; ಹೀಗೆ ಸುಮಾರು ಹತ್ಯೆ ನಡೆದ ನಂತರ ಈಶ್ವರಪ್ಪ ಶಾಸಕ ಮಂತ್ರಿ ಎಲ್ಲವೂ ಆದರು. ಈಗ ಮನೆಗೆ ಹೋಗಲಿದ್ದ ಈಶ್ವರಪ್ಪನನ್ನ ಮತ್ತಷ್ಟು ಬಲಿಷ್ಠಗೊಳಿಸುವ ತೀರ್ಮಾನ ತೆಗೆದುಕೊಂಡಿರುವಂತೆ ಕಾಣುತ್ತಿದೆಯಲ್ಲ; ಈಗ ನಡೆದಿರುವ ಕೊಲೆಯ ಹಿನ್ನೆಲೆಯಲ್ಲಿ ಎರಡೂ ಕಡೆಯ ಧರ್ಮಾಂಧರು ನಡೆದುಕೊಳ್ಳುತ್ತಿರುವ ರೀತಿ ನೋಡಿದರೆ ಈಶ್ವರಪ್ಪ ಮತ್ತೊಂದು ಚಾನ್ಸ್ ಹೊಡಿತಾರೆ ಅಂತಾ ಇದಾರಲ್ಲ. ಥೂತ್ತೇರಿ.


ಇದನ್ನೂ ಓದಿ: ಇವರೆಲ್ಲಾ ಸಂತೆಗೆ ಬಂದ ಹಗಲುಗಳ್ಳರು

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...