Homeಅಂಕಣಗಳುಅಂತೂ ಭಾರತದ ವರ್ಚಸ್ಸು ಬೆಳಗಿತು!

ಅಂತೂ ಭಾರತದ ವರ್ಚಸ್ಸು ಬೆಳಗಿತು!

- Advertisement -
- Advertisement -

ಪ್ರಪಂಚ ಆಗಾಗ್ಗೆ ಹಿಟ್ಲರ್‌ನನ್ನ ನೆನಸಿಕೊಂಡು ಬೆಚ್ಚುತ್ತಿತ್ತು. ಆತನ ಭಯಾನಕ ಯುಗವೊಂದು ಅಂತ್ಯವಾದುದಕ್ಕೆ ನಿಟ್ಟುಸಿರುಬಿಟ್ಟಿತ್ತು. ಆದರೇನು ಆತನ ಭೂತ ರಷ್ಯಾದಲ್ಲಿ ವಕ್ಕರಿಸಿದೆಯಂತಲ್ಲಾ. ರಷ್ಯಾದ ಅಧ್ಯಕ್ಷ ಪುಟಿನ್ ದೇಹವನ್ನ ಹೊಕ್ಕ ಹಿಟ್ಲರ್ ಭೂತ, ಜಗತ್ತಿನ ನಾಶದ ಬಗ್ಗೆ ಮಾತನಾಡುತ್ತಿದ್ದಾನಲ್ಲಾ. ಜಗತ್ತಿನ ಸರ್ವಾಧಿಕಾರಿಗಳ ಅಂತ್ಯವೆಲ್ಲಾ ಕೆಟ್ಟದಾಗಿ ಕೊನೆಯಾಗಿದೆ. ವಿನಾಶಕಾರಿ ಸಾಹಸಕ್ಕೆ ಕೈಹಾಕಿರುವ ಪುಟಿನ್, ತನ್ನ ಅಂತ್ಯದವರೆಗೂ ವಿರಮಿಸುವಂತೆ ಕಾಣುತ್ತಿಲ್ಲ. ಈ ನಡುವೆ, ಎಲ್ಲ ಹೊಡೆದಾಡಿ ಸತ್ತರೆ ನಮ್ಮ ಯಜಮಾನ ನೂಕಾಟದಲ್ಲೇ ಸತ್ತ ಎಂಬ ಗಾದೆಯಂತೆ ನಮ್ಮ ಮೋದಿ ಕತೆಯಾಗಿದೆಯಲ್ಲಾ. ಅಮೆರಿಕ ಅತ್ತ ರಷ್ಯ ಸಹವಾಸಕ್ಕೆ ಹೋದಿಯಾ ಜೋಕೆ ಎಂದರೆ, ಇತ್ತ ನಮ್ಮ ಪ್ರತಿಭಾ ಸಂಪನ್ನ ವಿದ್ಯಾರ್ಥಿಗಳು ಉಕ್ರೇನಿನಲ್ಲಿ ಸಿಕ್ಕಿಕೊಂಡು ಕರೆತರುವುದೇ ದೊಡ್ಡ ಸಮಸ್ಯೆಯಾಗಿದೆ. ಹೀಗಿರುವಾಗ, ಈಗಾಗಲೇ ತೀರಿಕೊಂಡ ಹಾವೇರಿಯ ನವೀನನ ಪಾರ್ಥಿವ ಶರೀರವನ್ನು ಮರಳಿ ತರುವ ವಿಷಯದಲ್ಲಿ ಅರವಿಂದ ಬೆಲ್ಲದ್ ಎಂಬ ಶಾಸಕ ನವೀನನ ಶವ ತರುವ ಜಾಗದಲ್ಲಿ 8 ಜನ ವಿದ್ಯಾರ್ಥಿಗಳನ್ನ ತರಬಹುದು ಎಂದುಬಿಟ್ಟಿದ್ದಾನಲ್ಲಾ. ಇದು ಇಡೀ ಬಿಜೆಪಿಯವರ ಮನಸ್ಥಿತಿಯಾದ್ದರಿಂದ ಯಾರೂ ಖಂಡಿಸಿಲ್ಲವಂತಲ್ಲಾ. ಥೂತ್ತೇರಿ.

****

ಉನ್ನತ ವ್ಯಾಸಂಗಕ್ಕೆಂದು ಉಕ್ರೇನಿಗೆ ಹೋದ ನಮ್ಮ ಹುಡುಗರು ಯುದ್ಧದ ಹೊಗೆಯಲ್ಲಿ ಸಿಕ್ಕಿಕೊಂಡು ಏದುಸಿರು ಬಿಡುತ್ತಿರುವಾಗ ಅವರನ್ನ ಭಾರತಕ್ಕೆ ಕರೆತರುವ ಕಾರ್ಯಾಚರಣೆಗೆ ಯಾವ ಹೆಸರಿಡಬೇಕೆಂಬ ಸಂಚು ಬಿಜೆಪಿಗಳ ತಲೆಯಲ್ಲಿ ಶಾನೆ ದಿನ ಸುಳಿದಾಡಿತಂತಲ್ಲಾ. ಇತರ ದೇಶಗಳು ತಮ್ಮ ದೂತಾವಾಸದ ಸಿಬ್ಬಂದಿಗಳನ್ನು ಬಳಸಿಕೊಂಡು ತಮ್ಮವರನ್ನು ಕರೆದುಕೊಂಡು ಹೋಗುತ್ತಿರುವ ಸಮಯದಲ್ಲಿ ಉತ್ತರ ಭಾರತದ ಚುನಾವಣೆಯಲ್ಲಿ ಬ್ಯುಸಿಯಾಗಿದ್ದ ಬಿಜೆಪಿಗಳ ತಲೆಯಲ್ಲಿ ಮಿಂಚು ಹೊಳೆದಂತಾಗಿ ಆಪರೇಷನ್ ಗಂಗಾ ಹೊಳೆಯಿತಂತಲ್ಲಾ. ಆ ಕೂಡಲೇ ರೋಮಾಂಚನಗೊಂಡು ಆಪರೇಷನ್ ಗಂಗಾ ಮೂಲಕ ನಮ್ಮ ವಿದ್ಯಾರ್ಥಿಗಳನ್ನ ಕರೆತರುವಷ್ಟರಲ್ಲಿ ಹಾವೇರಿ ಮೂಲದ ವಿದ್ಯಾರ್ಥಿ ನವೀನ್ ರಷ್ಯಾ ಶೆಲ್ ದಾಳಿಗೆ ಹತ್ಯೆಯಾದರು. ಮಕ್ಕಳನ್ನು ಕರೆತರುವಲ್ಲಿ ಆದ ವಿಳಂಬ, ಭಾರತದ ದೂತವಾಸದವರ ಕಣ್ಮರೆ ಇವೆಲ್ಲವನ್ನು ಗ್ರಹಿಸಿದ ವಿದ್ಯಾರ್ಥಿಗಳು ತಮ್ಮ ಅಭಿಪ್ರಾಯವನ್ನು ಹೇಳಿದ್ದಕ್ಕೆ, ಜಾಲತಾಣದ ಕೀಟಗಳು ಅವರ ನೋವನ್ನೂ ಲೆಕ್ಕಿಸದೆ ಕುಟುಕಿದವಂತಲ್ಲಾ. ಆಪರೇಷನ್ ಗಂಗಾ ಕಾರ್ಯಾಚರಣೆಯಿನ್ನೂ ಪೂರ್ಣಗೊಂಡಿಲ್ಲ, ಆಗಲೇ ನಮ್ಮ ಪ್ರಧಾನಿಗಳು ನಮ್ಮ ಕಾರ್ಯಾಚರಣೆಯಿಂದ ಭಾರತದ ವರ್ಚಸ್ಸು ಉತ್ತುಂಗದಲ್ಲಿ ಬೆಳಗುತ್ತಿದೆ ಎಂದಿದ್ದಾರಲ್ಲಾ. ಅಂತೂ ಕಳೆಗುಂದಿದ್ದ ಭಾರತದ ವರ್ಚಸ್ಸು ಏರಬೇಕಾದರೆ ಯುದ್ದ ಸಂಭವಿಸಬೇಕಾಯ್ತಂತಲ್ಲಾ. ಥೂ ಥೂ ಥೂತ್ತೇರಿ.

****

ಅರವಿಂದ ಬೆಲ್ಲದ್

ಯಾವ ಸಂದರ್ಭದಲ್ಲಿ ಹೇಗೆ ಪ್ರತಿಕ್ರಿಯಿಸಬೇಕು ಮತ್ತು ಹೇಗೆ ನಡೆದುಕೊಳ್ಳಬೇಕೆಂಬುದೆ ಈ ಬಿಜೆಪಿಗಳಿಗೆ ಗೊತ್ತಿಲ್ಲವಲ್ಲ ಎಂಬುದು ಭಾರತದ ಸಾಮಾನ್ಯ ಪ್ರಜೆಯ ಅಳಲಾಗಿದೆಯಂತಲ್ಲಾ. ಯುದ್ಧ ಪೀಡಿತ ಪ್ರದೇಶದಿಂದ ವಿದ್ಯಾರ್ಥಿಗಳನ್ನು ಕರೆತಂದ ಮಾತ್ರಕ್ಕೆ ಈ ದೇಶದ ವರ್ಚಸ್ಸು ಜಗತ್ತಿನಲ್ಲಿ ಬೆಳಗಬೇಕಾದರೆ ಅದಿನ್ನೆಂತಹ ಜಗತ್ತು ಇದಿನ್ನೆಂತಹ ದೇಶ ಎನ್ನುವಂತಹ ಕಿಡಿಗೇಡಿ ಮಾತುಗಳು ಬಿತ್ತರವಾಗುತ್ತಿವೆಯಂತಲ್ಲಾ. ಈ ಸಮಯದಲ್ಲಿ ಹಿಂದಿರುಗಿ ನೋಡಿದರೆ ನಮ್ಮನ್ನಾಳುವವರ ಬೇಜವಾಬ್ದಾರಿತನಗಳು ಸಾಲುಗಟ್ಟಿವೆಯಲ್ಲಾ. ಮುಖ್ಯವಾಗಿ ಕೊರೊನಾ ಭಾರತಕ್ಕೆ ಕಾಲಿಟ್ಟಾಗ ಆ ಬಗ್ಗೆ ಎಚ್ಚರವಹಿಸದ ನಾಯಕರು ಅಮೆರಿಕದ ಅಧ್ಯಕ್ಷನ ಜೊತೆ ಸಾರ್ವಜನಿಕ ಸಭೆ ಮಾಡಿ, ಮೆರವಣಿಗೆ ಮಾಡಿ, ಆತನನ್ನು ತಬ್ಬಿಕೊಂಡು ಕಳಿಸಿಕೊಡುವಷ್ಟರಲ್ಲಿ ಕೊರೊನಾ ಮಾರಿ ಭಾರತಾಂಬೆಯ ಸೆರಗಿನಲ್ಲಿ ಆಶ್ರಯ ಪಡೆದಾಗಿತ್ತಲ್ಲಾ. ಕೊರೊನಾ ಅನಾಹುತವನ್ನ ತಬ್ಲಿಗಿ ಮುಸ್ಲಿಮರ ಮೇಲೆ ಎತ್ತಿಹಾಕಿದ ಮತಾಂಧರು ಏಕದಂ ಲಾಕ್‌ಡೌನ್ ಮಾಡಿದ ಪರಿಣಾಮ ಸಾವಿರಾರು ಭಾರತಮಾತೆಯ ಪುತ್ರರು ಅಸುನೀಗಿದರು. ಇತಿಹಾಸ ತೋರಿಸಿದ ಭೀಕರತೆಯ ಬಗ್ಗೆ ಎಚ್ಚರಿಕೆಯಿದ್ದಿದ್ದರೆ, ಉಕ್ರೇನಿನಲ್ಲಿ ಸಿಕ್ಕಿಕೊಂಡ ವಿದ್ಯಾರ್ಥಿಗಳನ್ನು ತಿಂಗಳ ಮೊದಲೇ ಕರಕೊಂಡು ಬಂದಿದ್ದರೆ, ಐದುನೂರು ಜನ ಹುತಾತ್ಮ ರೈತರಿಂದ ಮಂಕಾಗಿರುವ ಭಾರತದ ವರ್ಚಸ್ಸು ಸುಧಾರಿಸುತ್ತಿಲ್ಲ. ಥೂತ್ತೇರಿ.

****

ಶಿವಮೊಗ್ಗದ ಮುಸ್ಲಿಮರು ಮತ್ತೊಮ್ಮೆ ಈಶ್ವರಪ್ಪನನ್ನು ಗೆಲ್ಲಿಸಿ ಕಳುಹಿಸುವ ಪಣತೊಟ್ಟಿದ್ದಾರಂತಲ್ಲಾ. ಹಾಗೆ ನೋಡಿದರೆ ಈಶ್ವರಪ್ಪ ಶಾಸಕನಾಗಿದ್ದೇ ಹತ್ಯೆಗೊಂಡವರ ಶವಯಾತ್ರೆಗಳನ್ನು ಮಾಡುವ ಮುಖಾಂತರ. ಪ್ರತಿವರ್ಷ ಗಣಪತಿ ಮೆರವಣಿಗೆ ಸಮಯದಲ್ಲಿ ಅಶ್ಲೀಲ ಘೋಷಣೆಗಳನ್ನು ಕೂಗುವುದು; ಇದು ಕೋಮುಘರ್ಷಣೆಗಳಿಗೆ ಕಾರಣವಾಗಿ ಹತ್ಯೆಗಳು ನಡೆಯುವುದು; ಕೂಡಲೇ ಈಶ್ವರಪ್ಪ ಓಡಿಬಂದು ಹತ್ಯೆಗೊಂಡವನ ಮೆರವಣಿಗೆ ಮಾಡಿ, ಚಿತಾಗಾರ ತಲುಪಿಸಿ ಬಂದು, ಭೀಕರ ಭಾಷಣ ಮಾಡಿ ಚಿತಾಗಾರದ ಕಾವು ಆರದಂತೆ ನೋಡಿಕೊಂಡು ಚುನಾವಣೆಗೆ ಹೋಗುವುದು; ಹೀಗೆ ಸುಮಾರು ಹತ್ಯೆ ನಡೆದ ನಂತರ ಈಶ್ವರಪ್ಪ ಶಾಸಕ ಮಂತ್ರಿ ಎಲ್ಲವೂ ಆದರು. ಈಗ ಮನೆಗೆ ಹೋಗಲಿದ್ದ ಈಶ್ವರಪ್ಪನನ್ನ ಮತ್ತಷ್ಟು ಬಲಿಷ್ಠಗೊಳಿಸುವ ತೀರ್ಮಾನ ತೆಗೆದುಕೊಂಡಿರುವಂತೆ ಕಾಣುತ್ತಿದೆಯಲ್ಲ; ಈಗ ನಡೆದಿರುವ ಕೊಲೆಯ ಹಿನ್ನೆಲೆಯಲ್ಲಿ ಎರಡೂ ಕಡೆಯ ಧರ್ಮಾಂಧರು ನಡೆದುಕೊಳ್ಳುತ್ತಿರುವ ರೀತಿ ನೋಡಿದರೆ ಈಶ್ವರಪ್ಪ ಮತ್ತೊಂದು ಚಾನ್ಸ್ ಹೊಡಿತಾರೆ ಅಂತಾ ಇದಾರಲ್ಲ. ಥೂತ್ತೇರಿ.


ಇದನ್ನೂ ಓದಿ: ಇವರೆಲ್ಲಾ ಸಂತೆಗೆ ಬಂದ ಹಗಲುಗಳ್ಳರು

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಇರಾನ್, ಇಸ್ರೇಲ್-ಅಮೆರಿಕ ಯುದ್ಧ : ವಿನಾಶದ ನಡುವೆಯೂ ಲಾಭ ಪಡೆದವರು ಯಾರು?

ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್‌) 2026ರ ಜಾಗತಿಕ ಬೆಳವಣಿಗೆಯ ಅಂದಾಜನ್ನು ಶೇಕಡ 3.3 ರಿಂದ 3.1ಕ್ಕೆ ಇಳಿಸಿದೆ. ಇರಾನ್ ವಿರುದ್ಧದ ಅಮೆರಿಕ-ಇಸ್ರೇಲ್ ಯುದ್ಧದ ಪರಿಣಾಮ ಮತ್ತು ಹಾರ್ಮುಝ್ ಜಲಸಂಧಿಯನ್ನು ಮುಚ್ಚಿರುವುದು ವಿಶ್ವ ಆರ್ಥಿಕತೆಯ...

ಕ್ಷೇತ್ರ ಮರುವಿಂಗಡಣೆ ವಿರುದ್ಧ ದಕ್ಷಿಣದ ರಾಜ್ಯಗಳ ಪಟ್ಟು: ಭವಿಷ್ಯದ ಮರುಚಿಂತನೆಗೆ ಇದುವೇ ಸೂಕ್ತ ಕಾಲ

ಲೋಕಸಭೆಯಲ್ಲಿ 131 ನೇ ಸಾಂವಿಧಾನಿಕ ತಿದ್ದುಪಡಿ ಮಸೂದೆಯನ್ನು ತಿರಸ್ಕರಿಸಿರುವುದು ಭಾರತದ ಪ್ರಜಾಪ್ರಭುತ್ವ ಪಥದಲ್ಲಿ ಮಹತ್ವದ ಕ್ಷಣವಾಗಿದೆ. ಇದು ಕೇವಲ ಶಾಸಕಾಂಗದ ಹಿನ್ನಡೆಯನ್ನು ಮಾತ್ರವಲ್ಲ, ಒಕ್ಕೂಟ ವ್ಯವಸ್ಥೆಯ ಸೂಕ್ಷ್ಮ ಸಮತೋಲನವನ್ನು ಹಾಳುಮಾಡುವ ಅಪಾಯವನ್ನುಂಟುಮಾಡುವ ಪ್ರಸ್ತಾಪಗಳ...

ಮೋದಿ ಸರ್ಕಾರದ ಯೂಟರ್ನ್ : ಜನಸಂಖ್ಯಾ ಸ್ಫೋಟದ ಕಳವಳದಿಂದ ಹೆಚ್ಚು ಜನಸಂಖ್ಯೆಯ ರಾಜ್ಯಗಳಿಗೆ ಗಿಫ್ಟ್ ಕೊಡುವವರೆಗೆ

ಭಾರತದ ಜನಸಂಖ್ಯೆಯ ಬಗ್ಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಅವರ ಸರ್ಕಾರ ನಿಜವಾಗಿಯೂ ಬಹಳ ಕಳವಳ ವ್ಯಕ್ತಪಡಿಸುತ್ತಿದೆ– ಅಥವಾ ಅವರು ನಮಗೆ ಆ ರೀತಿ ನಂಬುವಂತೆ ಮಾಡಿದ್ದಾರೆ. ಏಕೆಂದರೆ... 2019ರ ಸ್ವಾತಂತ್ರ್ಯ ದಿನಾಚರಣೆಯಂದು ಮೋದಿಯವರು,...

ದೇಶವನ್ನುದ್ದೇಶಿಸಿ ಮೋದಿ ಭಾಷಣ : ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆ

ಕ್ಷೇತ್ರ ಮರುವಿಂಗಡನೆಗೆ ಉದ್ದೇಶಿಸಿದ್ದ ಸಂವಿಧಾನದ 131ನೇ ತಿದ್ದುಪಡಿ ಮಸೂದೆಗೆ ಲೋಕಸಭೆಯಲ್ಲಿ ಸೋಲಾದ ಬೆನ್ನಲ್ಲೇ ಶನಿವಾರ (ಏ.18) ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಪ್ರತಿಪಕ್ಷಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ಸಂಸತ್ತಿನಲ್ಲಿ ವಿರೋಧ...

ಫ್ಯಾಕ್ಟ್‌ಚೆಕ್ : ಅತ್ಯಾಚಾರ ಅಪರಾಧಿ ಪರ ವಕೀಲೆಗೆ ಟಿಎಂಸಿಯಿಂದ ರಾಜ್ಯಸಭೆ ಸೀಟ್; ಬಿಜೆಪಿ ಆರೋಪದ ಸತ್ಯಾಸತ್ಯತೆ ಏನು?

ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಗೆ ಪಾಣಿಹತಿ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿರುವ ಆರ್‌ಜಿ ಕರ್‌ ಸಂತ್ರಸ್ತೆಯ ತಾಯಿ ಮತ್ತು ವಕೀಲೆ ಹಾಗೂ ತೃಣಮೂಲ ಕಾಂಗ್ರೆಸ್ (ಟಿಎಂಸಿ) ರಾಜ್ಯಸಭಾ ಸದಸ್ಯೆ ಮೇನಕಾ ಗುರುಸ್ವಾಮಿ ಅವರ ಎಐ-ರಚಿತ...

ತಾರತಮ್ಯ ಮುಕ್ತ ಕ್ಯಾಂಪಸ್ ನಿರ್ಮಾಣದತ್ತ ಮಹತ್ವದ ಹೆಜ್ಜೆ; ‘ರೋಹಿತ್ ವೇಮುಲ ಮಸೂದೆ’ಗೆ ಸಚಿವ ಸಂಪುಟ ಅನುಮೋದನೆ

ಕರ್ನಾಟಕ ಸರ್ಕಾರದ ಸಚಿವ ಸಂಪುಟ ಗುರುವಾರ (ಏ.16) ದಂದು ಕರ್ನಾಟಕ ರೋಹಿತ್ ವೇಮುಲ (ಹೊರಗಿಡುವಿಕೆ ಅಥವಾ ಅನ್ಯಾಯ ತಡೆಗಟ್ಟುವಿಕೆ) (ಶಿಕ್ಷಣ ಮತ್ತು ಘನತೆಯ ಹಕ್ಕು) ಮಸೂದೆ’ಗೆ ಅನುಮೋದನೆ ನೀಡಿದೆ. ಹೈದರಾಬಾದ್‌ನ ಕೆಂದ್ರೀಯ ವಿಶ್ವವಿದ್ಯಾಲಯದಲ್ಲಿ...

ಕ್ಷೇತ್ರ ಮರುವಿಂಗಡನೆ : ಗೃಹ ಸಚಿವ ಅಮಿತ್ ಶಾ ಹೇಳಿದ್ದೆಲ್ಲವು ನಿಜವೇ?..ಇಲ್ಲಿದೆ ವಾಸ್ತವಾಂಶ

ದೇಶದ ಗೃಹ ಸಚಿವರು ಸಂಸತ್ತಿನಲ್ಲಿ ಪ್ರಮುಖ ಕಾನೂನಿನ ಬಗ್ಗೆ ವಿವರಿಸುವಾಗ ವಿಷಯ ಸ್ಪಷ್ಟವಾಗಿರಬೇಕು. ಆದರೆ, ಕ್ಷೇತ್ರ ಮರುವಿಂಗಡನೆ ಕುರಿತು ಗೃಹ ಸಚಿವ ಅಮಿತ್ ಶಾ ಮಾತನಾಡಿರುವುದು ಹಾಗಿರಲಿಲ್ಲ. ದಕ್ಷಿಣ ಭಾರತದ ರಾಜ್ಯಗಳು ತಮ್ಮ...

ಮಹಿಳಾ ಮೀಸಲು ಮಸೂದೆ 2023ರಲ್ಲೇ ಗೆದ್ದಿದೆ, ಈಗ ಸೋತಿರುವುದು ಮೋದಿ ಸರ್ಕಾರ

ಮೋದಿ ಸರ್ಕಾರ ಮಂಡಿಸಿದ್ದ ಮಹಿಳಾ ಮೀಸಲಾತಿ ಮಸೂದೆಗೆ ಲೋಕಸಭೆಯಲ್ಲಿ ಸೋಲಾಗಿದೆ ಎಂಬುವುದು ದೇಶದಲ್ಲಿ ಪ್ರಸ್ತುತ ದೊಡ್ಡ ಚರ್ಚೆಯ ವಿಷಯವಾಗಿದೆ. ಕಾಂಗ್ರೆಸ್‌ ನೇತೃತ್ವದಲ್ಲಿ ವಿಪಕ್ಷಗಳು ಮಸೂದೆಯನ್ನು ಸೋಲಿಸುವ ಮೂಲಕ ದೇಶದ ಮಹಿಳೆಯರ ಸಬಲೀಕರಣಕ್ಕೆ...

ಕ್ಯಾಂಪಸ್ ಜಾತಿ ತಾರತಮ್ಯ ವಿರುದ್ಧದ ‘ರೋಹಿತ್ ವೇಮುಲ ಮಸೂದೆ’ಗೆ ಸಚಿವ ಸಂಪುಟ ಅನುಮೋದನೆ

ರಾಜ್ಯ ಸಚಿವ ಸಂಪುಟ ಗುರುವಾರ (ಏ.16) ರಂದು ಕರ್ನಾಟಕ ರೋಹಿತ್ ವೇಮುಲ (ಹೊರಗಿಡುವಿಕೆ ಅಥವಾ ಅನ್ಯಾಯ ತಡೆಗಟ್ಟುವಿಕೆ) (ಶಿಕ್ಷಣ ಮತ್ತು ಘನತೆಯ ಹಕ್ಕು) ಮಸೂದೆ'ಗೆ ಅನುಮೋದನೆ ನೀಡಿತು. ಜೊತೆಗೆ, ಪ್ರಮುಖ ಮೂಲಸೌಕರ್ಯ ಮತ್ತು...

ಮಧ್ಯಪ್ರದೇಶ| ವಂದೇ ಮಾತರಂ ಹಾಡಲು ನಿರಾಕರಣೆ; ಇಬ್ಬರು ಕಾಂಗ್ರೆಸ್ ಕೌನ್ಸಿಲರ್‌ಗಳ ವಿರುದ್ಧ ಎಫ್‌ಐಆರ್

ಏಪ್ರಿಲ್ 8 ರಂದು ಇಂದೋರ್ ಮುನ್ಸಿಪಲ್ ಕಾರ್ಪೊರೇಷನ್‌ನ ಬಜೆಟ್ ಅಧಿವೇಶನದಲ್ಲಿ ಧಾರ್ಮಿಕ ಮತ್ತು ಸಾಂವಿಧಾನಿಕ ಕಾರಣಗಳನ್ನು ಉಲ್ಲೇಖಿಸಿ ವಂದೇ ಮಾತರಂ ಹಾಡಲು ನಿರಾಕರಿಸಿದ್ದಕ್ಕಾಗಿ ಮಧ್ಯಪ್ರದೇಶ ಪೊಲೀಸರು ಇಬ್ಬರು ಕಾಂಗ್ರೆಸ್ ಕೌನ್ಸಿಲರ್‌ಗಳ ವಿರುದ್ಧ ಎಫ್‌ಐಆರ್...