Homeಮುಖಪುಟಕಂಬಾಳು ಸಿದ್ದಗಂಗಯ್ಯನವರ ಎರಡು ಪ್ರಶ್ನೆಗಳು!

ಕಂಬಾಳು ಸಿದ್ದಗಂಗಯ್ಯನವರ ಎರಡು ಪ್ರಶ್ನೆಗಳು!

- Advertisement -
- Advertisement -

ನಮ್ಮ ನೆಲ ಮೂಲದ ಪ್ರತಿಭೆ ಸಿದ್ದಗಂಗಯ್ಯ ಕಂಬಾಳು ನಿರ್ಗಮಿಸಿದ್ದಾರೆ. ನಿಸರ್ಗಪ್ರಿಯ ಎಂಬ ಹೆಸರಿನಿಂದ ಬರೆಯುತ್ತಿದ್ದ ಕಂಬಾಳು ತಮ್ಮ ವಿಶಿಷ್ಟ ಪ್ರತಿಭೆಯಿಂದ ಸಾಹಿತ್ಯಾಸಕ್ತರ ಗಮನ ಸೆಳೆದಿದ್ದರು. ಅವರು ಸಾಹಿತ್ಯ ಪ್ರಕಾರದ ಎಲ್ಲಾ ಕ್ಷೇತ್ರಗಳಲ್ಲೂ ಕೃಷಿ ಮಾಡಿದ್ದರು. ಅವರ ಕೃಷಿಯ ಹೂರಣವೇ ನೆಲ ಮೂಲವಾಗಿದ್ದರಿಂದ ನಿಸರ್ಗಪ್ರಿಯ ಎಂಬ ಗೌಪ್ಯನಾಮಕ್ಕೆ ಗೌರವ ತಂದಿದ್ದರು. ಕ್ರಮೇಣ ಈ ನಿಸರ್ಗಪ್ರಿಯ ಯಾರು ಅಲ್ಲ ನಮ್ಮ ನಡುವೆ ಬಡಬೇಸಾಯಗಾರನಂತೆ ಕಾಣುವ ಸಿದ್ದಗಂಗಯ್ಯ ಕಂಬಾಳು ಎಂಬುದು ನಮ್ಮೆಲ್ಲರ ಅರಿವಿಗೆ ಬಂತು. ಅದೇ ಹೆಸರಿನಲ್ಲವರು ’ಮೈಥಲಿ’ ಎಂಬ ರಾಮಾಯಣ ಧಾರಾವಾಹಿಯನ್ನು ಸುಧಾ ವಾರಪತ್ರಿಕೆಯಲ್ಲಿ ಆರಂಭಿಸಿದರು. ಆಗ ಸೀತೆಯ ಬಗ್ಗೆ ಕನಿಕರಗೊಂಡಿದ್ದ ಮನಸ್ಸುಗಳೆಲ್ಲಾ ದಂಗುಬಡಿದು ಹೋದವು. ನಮ್ಮ ಮಹಿಳಾ ಹೋರಾಟಗಾರ್ತಿಯರಿಗೆ ಸೀತೆಯ ಅಂತರಾಳದ ನೋವುಗಳು ಅರಿವಿಗೆ ಬಂದು ಯಾರೀ ಸಿದ್ದಗಂಗಯ್ಯ ಎನ್ನುವಂತಾಯ್ತು. ಅದಾದ ಮೇಲೆ ಸಿದ್ದಗಂಗಯ್ಯನವರ ಮೇಲೆ ಪೇಜಾವರ ಶ್ರೀಗಳ ಕಣ್ಣು ಬಿತ್ತು.

ಹಿಂದೂ ಧರ್ಮದ ಗರ್ಭಗುಡಿಯೊಳಗಿದ್ದ ಪೇಜಾವರಶ್ರೀಗಳು ತಾವು ಪೂಜಿಸುವ ಯಾವುದೇ ದೇವರ ಬಗ್ಗೆ ಸಣ್ಣ ಅಪಸ್ವರ ಟೀಕೆ ಬಂದರೂ ಅವರನ್ನು ವಿಚಾರಣೆಗೊಳಪಡಿಸುವ ಹಕ್ಕನ್ನು ತಮಗೆ ತಾವೇ ಆರೋಪಿಸಿಕೊಂಡಿದ್ದರು. ಆದ್ದರಿಂದ ಸಿದ್ದಗಂಗಯ್ಯನವರಿಗೆ ಪೇಜಾವರಶ್ರೀಗಳಿಂದ ಬುಲಾವ್ ಬಂತು. ಧರ್ಮನಿಂದನೆಯ ವಿಚಾರಣೆ ನಡೆಯುವ ಸ್ಥಳ ಯಾವುದೆಂದು ವಿಚಾರಿಸಿದರು. ಅದು ನಡೆಯುವುದು ವಿದ್ಯಾಪೀಠದಲ್ಲೆಂದು ತಿಳಿದು ಬಂತು. ಶ್ರೀನಿವಾಸನಗರದ ಬಸ್‌ಸ್ಟಾಪಿನಲ್ಲಿಳಿದು ಅಡ್ರೆಸ್ ಕೇಳಿಕೊಂಡು ವಿದ್ಯಾಪೀಠ ತಲುಪಿದರು. ಪೀಠದ ವರಾಂಡದಲ್ಲಿ ಅಡ್ಡಾಡುತ್ತಿದ್ದ ಮಾಣಿಗಳನ್ನು ವಿಚಾರಿಸಲಾಗಿ ಅವರು ಪೇಜಾವರ ಶ್ರೀ ಬಳಿ ಕರೆದುಕೊಂಡು ಹೋದರು. ಈಗಾಗಲೇ ಪುರುಷೋತ್ತಮರನ್ನ ಹೀಯಾಳಿಸಿದರು ಎಂಬ ಆರೋಪದ ಕಾರಣವಾಗಿ ಜೀವ ಬೆದರಿಕೆಗೆ ತುತ್ತಾಗಿರುವ ಭಗವಾನರ ಇನ್ನೊಂದು ಅವತಾರದಂತೆ ಕಾಣಬೇಕಿದ್ದ ಸಿದ್ದಗಂಗಯ್ಯ ತಪ್ಪಿಸಿಕೊಂಡ ಹಸು ಹುಡುಕುತ್ತ ಬಂದ ಬಡವನಂತೆ ಕಾಣುತ್ತಿದ್ದುದು ಮಠೋಪಜೀವಿಗಳಿಗೆ ಅಚ್ಚರಿಯುಂಟುಮಾಡಿತ್ತು. ಸಿದ್ದಗಂಗಯ್ಯನವರು ಪೇಜಾವರಶ್ರೀಗಳ ಪೀಠದೆದುರು ನಿಂತು ತಮ್ಮನ್ನು ಕರೆಸಿದ ಕಾರಣ ಕೇಳಿದರು.

“ನೋಡಿ ಸ್ವಾಮಿ ನಮ್ಮ ಆರಾಧ್ಯ ದೈವಗಳಾದ ರಾಮ ಕೃಷ್ಣರ ಬಗ್ಗೆ ಹಗುರವಾಗಿ ಮಾತನಾಡಿದ್ದೀರಿ, ಇದು ಕೂಡದು” ಎಂದರು.

“ನೋಡಿ ಸ್ವಾಮಿ ಕೃಷ್ಣ ನಮ್ಮವನು. ರಾಮ ಕ್ಷತ್ರಿಯ, ನೀವು ಬ್ರಾಹ್ಮಣರು, ನಿಮಗೂ ಅವರಿಗೂ ಏನು ಸಂಬಂಧ” ಎಂದರು. ಪೇಜಾವರಶ್ರೀ ಈ ಅನಿರೀಕ್ಷಿತ ಪ್ರಶ್ನೆಯಿಂದ ಗಲಿಬಿಲಿಯಾದರು.

“ಹಾಗಲ್ಲ ಅವರು ಸರ್ವಜನಾಂಗಕ್ಕೂ ಪೂಜನೀಯ ದೇವರುಗಳು. ಅವರ ಬಗ್ಗೆ ಹಗುರವಾಗಿ ಮಾತನಾಡುವುದು ಬರೆಯುವುದು ನಾವು ಸಹಿಸುವುದಿಲ್ಲ” ಎಂದರು.

“ಅಲ್ಲಾ ಸ್ವಾಮಿ ನಾನಂದ ಮಾತ ಪುನಃ ಅನ್ನಬೇಕಾಗುತ್ತೆ. ಕೃಷ್ಣ ಗೊಲ್ಲರವನು, ಅಂದ್ರೆ ನಮ್ಮವನು. ರಾಮ ಕ್ಷತ್ರಿಯ. ರಾಜನ ತಪ್ಪನ್ನ ಪ್ರಶ್ನೆ ಮಾಡೋ ಅಂತ ಹಕ್ಕನ್ನ ರಾಮನೆ ಕೊಟ್ಟಿದ್ದ. ಇನ್ನ ರಾಮಾಂಜನೇಯರಿಗೆ ಯುದ್ಧ ಆದಾಗ ರಾಮ ಎಷ್ಟೇ ಆಗಲಿ ನೀವು ಕಪಿಗಳು ಅಂತ ಮೂದಲಿಸಿದ. ಆಗ ಆಂಜನೇಯ ಆ ಕಪಿಗಳೇ ಅಲ್ಲವ ಯುದ್ಧ ಮಾಡಿ ಸೀತೆಯನ್ನು ತಂದು ನಿಮಗೊಪ್ಪಿಸಿದ್ದು ಪ್ರಭು ಅಂದ. ರಾಮ ಸತ್ಯಸಂಗತಿಗಳ ಒಪ್ಪಿಗತಿದ್ದ. ಅದಕೆ ಅಲವ ಅವನು ಪುರುಷೋತ್ತಮನಾಗಿದ್ದು. ಇವ್ಲೆಲ್ಲ ನಿಮಗೆ ಗೊತ್ತಿರಬೇಕು” ಅಂದರು. ಪೇಜಾವರ ವಿಚಾರಣಾ ಸಭೆ ದಂಗುಬಡಿದುಹೋಯ್ತು. ಕೃಷ್ಣ ನಮ್ಮವನು ಎಂದ ಈತ ಗೊಲ್ಲರವನಿರಬೇಕೆಂದು ಜಗದ್ಗುರುಗಳು ಗಲಿಬಿಲಿಗೊಳಗಾದರು.

“ನೋಡಿ ಹೀಗೆಲ್ಲ ಮಾತನಾಡುವುದು ಬೇಡ. ನೀವು ನಮ್ಮ ದೈವಗಳ ಬಗ್ಗೆ ಹಗುರವಾಗಿ ವಾದಿಸುವುದು ಬೇಡ, ಈಗ ಹೋಗಿ” ಎಂದುಬಿಟ್ಟರು. ಪೇಜಾವರರು ಹಾಗನ್ನಬೇಕಾದರೆ, ಈ ಮನುಷ್ಯ ಮತ್ತೆ ಕೆದಕುವಂತೆ ಕೃಷ್ಣ ರಾಮರ ಮತ್ತು ತಮ್ಮ ಸಂಬಂಧದ ವಿಷಯ ಹೇಳುವಂತೆ ಸವಾಲಾಕಲು ತಯಾರಾಗುವಂತೆ ಕಂಡರು. ಆದ್ದರಿಂದ ಬೇಗ ಸಾಗಹಾಕಲು ಪೇಜಾವರರು ಹವಣಿಸಿದರು. ತಾವಾಡಿದ ಮಾತು ಪೇಜಾವರರಿಗೆ ತಾಕಿದೆ ಇಷ್ಟು ಸಾಕು ಎಂದು ಗ್ರಹಿಸಿದ ಕಂಬಾಳರು ಅಲ್ಲಿಂದ ನಿರ್ಗಮಿಸಿದರು.

ನಾನು ಗಮನಿಸಿದಂತೆ ಕಂಬಾಳರು ಈ ಪ್ರಸಂಗವನ್ನು ಎಲ್ಲೂ ಹೇಳಿಕೊಳ್ಳಲಿಲ್ಲ. ಆ ರೂಪದ ಪ್ರಚಾರವೂ ಅವರಿಗೆ ಬೇಕಿರಲಿಲ್ಲ. ಆ ದಿನ ನಾಗತಿಹಳ್ಳಿ ಚಂದ್ರಶೇಖರನ ಆಫೀಸಿನಲ್ಲಿ ಕುಳಿತು ಅವಿದ್ಯಾವಂತರ ಅವಿವೇಕವನ್ನು ಹೇಳಿದಂತೆ ಸಹಜವಾಗಿ ಹೇಳಿದ್ದರು. ಅವತ್ತು ನಾಗತಿಹಳ್ಳಿ ಚಂದ್ರಶೇಖರನ ಕೋರಿಕೆಯಂತೆ ಕರಿಭಂಟ ಎನ್ನುವ ಜನಪದ ನಾಟಕ ಬರೆದುಕೊಟ್ಟರು. ಅದೊಂದು ಅದ್ಭುತ ನಾಟಕ; ನಾಗರಿಕ ಜಗತ್ತಿನ ನರರನ್ನು ಕಂಡರಾಗದ ಕಾಡಿನ ಜನರು ಅವರ ವಾಸನೆಗೂ ಕೆರಳುವಂತೆ ವ್ಯಗ್ರಗೊಳ್ಳುವ ಕಥಾವಸ್ತು. ಇವತ್ತಿಗೂ ನಮ್ಮ ಕಾಡೊಳಗಿನ ಅದಿವಾಸಿಗಳು ಹೆದರುವುದು ಕಾಡುಪ್ರಾಣಿಗಳಿಗಲ್ಲ ಬದಲಿಗೆ ಕಾಡಿನ ಇಲಾಖೆಯ ಜನರಿಗೆ. ಇಂತಹ ವಸ್ತುವಿದ್ದ ನಾಟಕವನ್ನು ನಾಗತಿಹಳ್ಳಿ ಹೆಣ್ಣುಮಕ್ಕಳು ಮನಮುಟ್ಟುವಂತೆ ಅಭಿನಯಿಸಿ ದೆಹಲಿಯವರೆಗೂ ಹೋಗಿಬಂದರು. ಮನೆಯ ಹೊಸಲಿಂದ ಈಚೆ ಬರದಂತಿದ್ದ ಹೆಣ್ಣುಮಕ್ಕಳೆಲ್ಲಾ ಮನಬಿಚ್ಚಿ ಅಭಿನಯಿಸಿದ್ದು ಒಂದು ದಾಖಲೆಯಾಗಿತ್ತು. ತಾನು ಬರೆದದ್ದನ್ನು ಈ ಲೋಕಕ್ಕೆ ಅರ್ಪಿಸಿದ ನಂತರ ಸಿದ್ದಗಂಗಯ್ಯ ಅತ್ತ ಸುಳಿಯುತ್ತಿರಲಿಲ್ಲ. ಅದೇನಿದ್ದರೂ ಈಗ ಆ ಲೋಕಕ್ಕೆ ಸೇರಿದ್ದು ಎನ್ನುವಂತಿದ್ದರು. ಈಗ ನಮ್ಮೆಲ್ಲಾ ಪ್ರತಿಭಾವಂತರನ್ನು, ದೇವರುಗಳನ್ನು ಮತ್ತು ಐತಿಹಾಸಿಕ ವ್ಯಕ್ತಿಗಳನ್ನ ಅಪಹರಿಸಿ ತಮ್ಮವರನ್ನಾಗಿಸಿಕೊಳ್ಳುತ್ತಿರುವವರ ವಿರುದ್ಧ ಕಂಬಾಳರಂತೆ ಪ್ರಶ್ನೆಮಾಡಿ ದಕ್ಕಿಸಿಕೊಳ್ಳಬೇಕಿದೆ. ಅದು ನಾವು ಸಿದ್ದಗಂಗಯ್ಯನವರಿಗೆ ಸಲ್ಲಿಸುವ ಗೌರವ.


ಇದನ್ನೂ ಓದಿ: ಮುರುಘಾ ಶರಣರ ಮರುಳು ಮಾತು ನಿಜವೆ?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...