HomeUncategorizedದಲಿತ ಬಾಲಕರ ಬರಿಗೈಯಲ್ಲಿ ಮಲ ಎತ್ತಿಸಿದ ಮೇಲ್ಜಾತಿಯ ಗುಂಪು - ಬಂಧನ

ದಲಿತ ಬಾಲಕರ ಬರಿಗೈಯಲ್ಲಿ ಮಲ ಎತ್ತಿಸಿದ ಮೇಲ್ಜಾತಿಯ ಗುಂಪು – ಬಂಧನ

"ಮಲವನ್ನು ಗೋಣಿಚೀಲದಲ್ಲಿ ತುಂಬಿ, ತಲೆಯಮೇಲೆ ಹೊತ್ತುಕೊಂಡು 100 ಮೀಟರ್ ನಡೆಯಲು ಒತ್ತಾಯಿಸಿದರು. ನಂತರ ಅದನ್ನು  ಕಾಲುವೆಯ ಬಳಿ ಹಾಕಿಸಿದ್ದಾರೆ"

- Advertisement -
- Advertisement -

ಬರಿಯ ಕೈಗಳಿಂದ ಮಲ ತೆಗೆದುಹಾಕುವಂತೆ ಮೇಲ್ಜಾತಿ ಯುವಕರ ಗುಂಪೊಂದು ದಲಿತ ಸಮುದಾಯದ ಹುಡುಗರನ್ನು ಒತ್ತಾಯಿಸಿರುವ ಅಮಾನವೀಯ ಘಟನೆ ತಮಿಳುನಾಡಿನ ಪೆರಂಬಲೂರಿನ ಸಿರುಕೂಡಲ್‌ ಹಳ್ಳಿಯಲ್ಲಿ ನಡೆದಿದೆ.

11 ರಿಂದ 15 ವರ್ಷದೊಳಗಿನ ಐದು ದಲಿತ ಹುಡುಗರನ್ನು ಬಲವಂತವಾಗಿ ಬರಿಗೈಯಲ್ಲಿ ಮಲ ಎತ್ತಲು ಒತ್ತಾಯಿಸಿದ್ದಾರೆ ಎಂಬ ದೂರಿನ ಆಧಾರದ ಮೇಲೆ ಸಿರುಕೂಡಲ್ ಗ್ರಾಮದ ನಿವಾಸಿಗಳಾದ 20 ವರ್ಷದ ಅಬಿನೇಶ್, 25 ವರ್ಷದ ಸೆಲ್ವಕುಮಾರ್ ಮತ್ತು 24 ವರ್ಷದ ಸಿಲಂಬರಸನ್ ಎಂಬ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಇದನ್ನೂ ಓದಿ: ಮೇಲ್ಜಾತಿ ದೌರ್ಜನ್ಯವನ್ನು ರಾಷ್ಟ್ರ ಮಟ್ಟದಲ್ಲಿ ಚರ್ಚೆಗೆ ತಂದ ಕಾರಂಚೇಡು ದಲಿತರ ಹತ್ಯಾಕಾಂಡಕ್ಕೆ 35 ವರ್ಷ.

ಹುಡುಗರು ಈ ಘಟನೆಯ ಬಗ್ಗೆ ತಮ್ಮ ಪೋಷಕರಿಗೆ ತಿಳಿಸಿದ ನಂತರ ಈ ಪ್ರಕರಣ ಬೆಳಕಿಗೆ ಬಂದಿದೆ.

“ಐದು ಹುಡುಗರು ತಮ್ಮ ಹಳ್ಳಿಯಲ್ಲಿ ತೆರೆದ ಮೈದಾನದಲ್ಲಿ ಮಲವಿಸರ್ಜನೆ ಮಾಡುತ್ತಿದ್ದರು. ಮೂವರು ಯುವಕರ ಗುಂಪು ಆ ಹುಡುಗರನ್ನು ಸುತ್ತುವರೆದು ನಿಂದಿಸಿ ಮತ್ತು ಹೊಡೆಯಲು ಪ್ರಾರಂಭಿಸಿದರು. ನಂತರ ಬರಿ ಕೈಗಳಿಂದ ಮಲವನ್ನು ನೆಲದಿಂದ ತೆಗೆದುಹಾಕುವಂತೆ ಹುಡುಗರನ್ನು ಒತ್ತಾಯಿಸಿದರು” ಎಂದು ತನಿಖೆ ನಡೆಸುತ್ತಿರುವ ಪೊಲೀಸ್ ಅಧಿಕಾರಿಯೊಬ್ಬರು ಪ್ರಕರಣ.

ಇದನ್ನೂ ಓದಿ: ಒಂದೇ ಊರಲ್ಲಿ ಪದೇ ಪದೇ ನಡೆಯುತ್ತಿರುವ ದಲಿತರ ಮೇಲಿನ ಅತ್ಯಾಚಾರ ಮತ್ತು ಜಾತಿ ದೌರ್ಜನ್ಯಗಳು

ಮಲವನ್ನು ಗೋಣಿಚೀಲದಲ್ಲಿ ತುಂಬಿ, ತಲೆಯಮೇಲೆ ಹೊತ್ತುಕೊಂಡು 100 ಮೀಟರ್ ನಡೆಯಲು ಒತ್ತಾಯಿಸಿದರು. ನಂತರ ಅದನ್ನು  ಕಾಲುವೆಯ ಬಳಿ ಹಾಕಿಸಿದ್ದಾರೆ ಎಂದು ಹೇಳಿದರು.

ಘಟನೆ ತಿಳಿದ ನಂತರ ಹುಡುಗರ ಪೋಷಕರು ಈ ವಿಷಯವನ್ನು ಪೊಲೀಸರಿಗೆ ತಿಳಿಸಿದರು. ನಂತರ ವಿಸಿಕೆ ಕಾರ್ಯಕರ್ತ ವೀರಾ ಸೆಂಗೋಳನ್ ಮತ್ತು ನೂರಾರು ಪಕ್ಷದ ಕಾರ್ಯಕರ್ತರು ಸ್ಥಳಕ್ಕೆ ಆಗಮಿಸಿ ರಸ್ತೆ ತಡೆ ನಡೆಸಿದರು.

ಇದನ್ನೂ ಓದಿ: ಕಳೆದ 5 ವರ್ಷಗಳಲ್ಲಿ ಪರಿಶಿಷ್ಟ ಜಾತಿಗಳ ಮೇಲಿನ ದೌರ್ಜನ್ಯಗಳಲ್ಲಿ 19% ಹೆಚ್ಚಳ!

ಪ್ರತಿಭಟನೆಯ ಮಾಹಿತಿ ಹರಡುತ್ತಿದ್ದಂತೆ, ಪೆರಂಬಲೂರ್ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಎ.ಸಿ.ಕಾರ್ತಿಕೇಯನ್ ಮತ್ತು ಮರುವತ್ತೂರ್ ಪೊಲೀಸರು ಗ್ರಾಮಕ್ಕೆ ಆಗಮಿಸಿ ಗ್ರಾಮಸ್ಥರನ್ನು ವಿಚಾರಣೆ ನಡೆಸಿದರು ಎಂದು ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್‌ ವರದಿ ಮಾಡಿದೆ.

ಬಾಲಕರ ಮೇಲೆ ದೌರ್ಜನ್ಯ ಎಸಗಿದ್ದಕ್ಕಾಗಿ ಎಸ್‌ಸಿ/ಎಸ್‌ಟಿ ದೌರ್ಜನ್ಯ ಕಾಯ್ದೆ ಸೇರಿದಂತೆ ವಿವಿಧ ವಿಭಾಗಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಎ.ಸಿ.ಕಾರ್ತಿಕೇಯನ್ ಹೇಳಿದರು.

ಇದನ್ನೂ ಓದಿ: ನ್ಯಾಯಾಲಯಕ್ಕೆ ಜಾತಿವಾದಿಗಳ ‘ಅತಿರೇಕದ ದೌರ್ಜನ್ಯ’ ಕಾಣಲಿಲ್ಲವೇಕೆ?

ಆರೋಪಿಗಳನ್ನು ನ್ಯಾಯಾಂಗ ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸಿ ಪೆರಂಬಲೂರ್ ಉಪ ಜೈಲಿಗೆ ಕಳುಹಿಸಲಾಗಿದೆ.

ಈ ಘಟನೆಯ ನಂತರ, ಸ್ವಚ್ಚ್ ಭಾರತ್ ಯೋಜನೆಯ ಹೊರತಾಗಿಯೂ ಗ್ರಾಮದಲ್ಲಿ ಶೌಚಾಲಯಗಳ ಕೊರತೆ ಬೆಳಕಿಗೆ ಬಂದಿದೆ. ಕೆಲವು ಶ್ರೀಮಂತ ಕುಟುಂಬಗಳು ಶೌಚಾಲಯಗಳನ್ನು ಹೊಂದಿದ್ದರೆ. ಗ್ರಾಮದ ಹೆಚ್ಚಿನವರು ಬಯಲು ಮಲವಿಸರ್ಜನೆಯನ್ನು ಆಶ್ರಯಿಸಬೇಕಾಗಿದೆ ಎಂದು ಗ್ರಾಮಸ್ಥರು ಹೇಳಿದರು.


ಇದನ್ನೂ ಓದಿ: ಮೇಲ್ಜಾತಿ ಗೆಳೆಯರ ಊಟದ ತಟ್ಟೆ ಮುಟ್ಟಿದ್ದಕ್ಕೆ ದಲಿತ ಯುವಕನ ಹತ್ಯೆ!

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಕಾಂಗ್ರೆಸ್ ಪ್ರಣಾಳಿಕೆ ಬಗ್ಗೆ ವಿವರಿಸಲು ಸಮಯಾವಕಾಶ ಕೋರಿ ಪ್ರಧಾನಿಗೆ ಖರ್ಗೆ ಪತ್ರ

0
ಲೋಕಸಭೆ ಚುನಾವಣೆಯ ಕಾಂಗ್ರೆಸ್ ಪ್ರಣಾಳಿಕೆ 'ನ್ಯಾಯಪತ್ರ'ದ ಕುರಿತು ಪ್ರಧಾನಿ ಮೋದಿ ಸರಣಿ ಹೇಳಿಕೆಗಳನ್ನು ಕೊಡುತ್ತಿದ್ದು, ಈ ಹಿನ್ನೆಲೆ ಪ್ರಣಾಳಿಕೆಯ ಕುರಿತು ವಿವರಿಸಲು ಸಮಯ ಕೋರಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪತ್ರ ಬರೆದಿದ್ದಾರೆ. ಖರ್ಗೆ...