HomeಎಕಾನಮಿExplainer: ಈ ಜಿಡಿಪಿ (GDP) ಅಂದರೆ ಏನಪಾ? - ಬೈ ಡೇಟಾಮ್ಯಾಟಿಕ್ಸ್

Explainer: ಈ ಜಿಡಿಪಿ (GDP) ಅಂದರೆ ಏನಪಾ? – ಬೈ ಡೇಟಾಮ್ಯಾಟಿಕ್ಸ್

ನಮ್ಮ ದೇಶ ಕೆಲವೇ ವರ್ಷಗಳಲ್ಲಿ ಐದು ಟ್ರಿಲಿಯನ್ ಡಾಲರ್ ಆರ್ಥಿಕತೆಯಾಗಲಿದೆ ಎಂಬ ಕನಸ ಮಾರುವ ಚಲುವರು ನಮ್ಮ ಸುತ್ತ ಮುತ್ತ ಇದ್ದಾರ. ನಮ್ಮ ಸ್ನೇಹಿತರ, ಕುಟುಂಬದ, ನಮ್ಮ ಸಹಪಾಠಿಗಳ, ಸಹ ಕೆಲಸಗಾರರ ಗುಂಪುಗಳಲ್ಲಿ ತುಂಬ್ಯಾರ.

- Advertisement -
- Advertisement -

ಜಿಡಿಪಿ ಅಥವಾ ನಿವ್ವಳ ಆಂತರಿಕ ಉತ್ನನ್ನ ಹಿಂಗಂದರ ಒಂದು ದೇಶದ ಜನಾ ತಮ್ಮ ಎಲ್ಲಾ ಚಟುವಟಿಕೆಗಳಿಂದ ಒಂದು ವರ್ಷದಾಗ ಸೃಷ್ಟಿಸಬಹುದಾದ ಒಟ್ಟು ಸಂಪತ್ತು. ಇದು ಸರಕು ಅಥವಾ ಸೇವೆಯ ರೂಪದಾಗ ಇರಬಹುದು.

ನೀವು ಏನರ ನೌಕರಿ ಮಾಡ್ತೀರಿ, ಅಥವಾ ವ್ಯಾಪಾರ ಮಾಡತೀರಿ ಅದರಿಂದ ನಿಮಗ ಎಷ್ಟು ದುಡ್ಡು ಅಥವಾ ಅದರ ಮೌಲ್ಯದ ಪರ್ಯಾಯ ವಸ್ತು ಅಥವಾ ಸೇವೆ ಸಿಗತದೋ ಅದು ನಿಮ್ಮ ಪಾಲಿನ ಜಿಡಿಪಿ. ಇಂಥದನ್ನೇ ಎಲ್ಲಾರೂ ಕೂಡಿ ಮಾಡಿದಾಗ ಸಿಗೋ ಲೆಕ್ಕಾ ಅಂದರ ಈ ದೇಶದ ಜಿಡಿಪಿ.


ಇದನ್ನೂ ಓದಿ: 1 ನೇ ಆರ್ಥಿಕ ತ್ರೈಮಾಸಿಕ ಜಿಡಿಪಿ 23.9% ಇಳಿಕೆ; ಐತಿಹಾಸಿಕ ಇಳಿಕೆ ಕಂಡ ಭಾರತ


ಇನ್ನ ಕೆಲವು ವಿಷಯ ಜಿಡಿಪಿಯೊಳಗ ಬರಂಗಿಲ್ಲಾ. ನಿಮ್ಮ ದಾಡಿ ನೀವ ಮಾಡಿಕೊಳ್ಳೋದು ಅನ್ರೀ, ನಿಮ್ಮ ತಾಯಿ, ಹೆಂಡತಿ, ಮಗಳು, ಅಕ್ಕಾ, ತಂಗಿ, ವೈನಿ, ಅಥವಾ ಮತ್ಯಾರರೆ ನಿಮ್ಮ ಅಡಿಗಿ ಮನಿಯೊಳಗ ನಿಮ್ಮ ಮತ್ತು ತಮ್ಮ ಊಟಕ್ಕ ಅಡಿಗೀ ಮಾಡತಾರಲ್ಲಾ, ಅದುನೂ ಬರೋದಿಲ್ಲ. ನಮ್ಮ ದೇಶದೊಳಗ ಕೋಟ್ಯಾಂತರ ಹೆಣ್ಣು ಮಕ್ಕಳು ಸಾಯೋ ತನಕಾ ತಮ್ಮ ತಮ್ಮ ಮನಿಯೊಳಗ, ಕೈ ಸುಟಗೋತ ದುಡದು ಹಾಕತಾರಲ್ಲಾ ಅದರ ಮೌಲ್ಯ ಸರಕಾರದ ಜಿಡಿಪಿ ಲೆಕ್ಕದೊಳಗ ಬರಂಗಿಲ್ಲಾ. ಗಂಡು ಮಕ್ಕಳ ಮನಸಿನ್ಯಾಗಂತೂ ಅದು ಬರೋದೇ ಇಲ್ಲಾ ಬಿಡ್ರಿ. ಅದು ಬ್ಯಾರೆ ಮಾತು.

ನಂ ಭಾರತದ ಈ ವರ್ಷದ ಜಿಡಿಪಿ ಸುಮಾರು 2.6 ಲಕ್ಷ ಕೋಟಿ ಡಾಲರ್ ಅಂದರ ಸುಮಾರು 182 ಲಕ್ಷ ಕೋಟಿ. ಇದು 2011-12 ವರ್ಷವನ್ನು ಅಳತೆಗೋಲಾಗಿ ತೆಗೆದುಕೊಂಡಾಗ ಸಿಗುವ ಲೆಕ್ಕ. ಮುಂಚೆ ಇದು 1981 ಇತ್ತು, 91 ಆತು, 2004 ನಾಲ್ಕು ಆತು. ಮೋಷಾ ಸರಕಾರ ಬಂದ ಮ್ಯಾಲೆ ಇದು 2011 ಆತು. ಲೆಕ್ಕದ ವರ್ಷ ಬದಲಾದಂಗೆಲ್ಲಾ ಜಿಡಿಪಿಯ ಮೌಲ್ಯ ಬದಲಾಗತದ, ಅದು ಮತ್ತ ಯೂನಿವರ್ಸಿಟಿ ಬೃಹಸ್ಪತಿಗಳ ತಲಿ ಕೆಡಿಸೋ ಲೆಕ್ಕ. ನಮ್ಮಂತಹ ಹುಲುಮಾನವರಿಗಲ್ಲ. ಅದನ್ನ ಬಿಡ್ರಿ.

ಹಂಗಾರ ಬ್ಯಾರೆ ದೇಶಗಳ ಜಿಡಿಪಿ ಎಷ್ಟದಪಾ? ಇದು ಯಾಕ ಬೇಕಂದ್ರ, ನಿಮ್ಮ ಹುಡುಗಾ ರನ್ನಿಂಗ್ ರೇಸ್ ನ್ಯಾಗ ಎಷ್ಟನೇ ಬಂದಾನ್ರೀ ಅಂದ್ರ ಸೆಕೆಂಡ್ ಬಂದಾನ ಅಂತ ನೀವು ಹೆಮ್ಮೆಯಿಂದ ಹೇಳಿದ್ರಿ ಅಂತ ತಿಳಕೋಳ್ರಿ. ಆ ರೇಸಿನ್ಯಾಗ ಎಷ್ಟು ಜನಾ ಇದ್ದರು ಅಂದರು ಅಂತ ತಿರಗಿ ಕೇಳಿದರ ಇಬ್ಬರ ರನ್ನರ್ಸ ಇದ್ದರು ಅಂತ ನಾಚಿಕೊಂಡು ಹೇಳೋ ಪರಿಸ್ಥಿತಿ ನಿಮಗ ಬರಬಾರದಲ್ಲಾ, ಅದಕ್ಕ.

ನೋಡ್ರಿ, ಈ ಸಮಸ್ತ ಭೂಮಂಡಲದಾಗ ಸುಮಾರು 220 ದೇಶ ಅಥವಾ ಸ್ವಯಂ ಆಡಳಿತ ಪ್ರದೇಶಾ ಅದಾವು. ಅದರಾಗ ಸುಮಾರು 200 ದೇಶದ ಜಿಡಿಪಿ ಲೆಕ್ಕಾ ಸಿಕ್ಕದ.
ಅದರ ಪ್ರಕಾರ ಅತಿ ಹೆಚ್ಚಿನವು ಹಿಂಗವ.

ಅಮೇರಿಕಾ 1357 ಲಕ್ಷ ಕೋಟಿ
ಚೈನಾ 857 ಲಕ್ಷ ಕೋಟಿ
ಜಪಾನ್ 350 ಲಕ್ಷ ಕೋಟಿ
ಜರ್ಮನಿ 257 ಲಕ್ಷ ಕೋಟಿ
ಭಾರತ 182 ಲಕ್ಷ ಕೋಟಿ
ಇನ್ನು ನಮ್ಮ ನೆರೆ ಹೊರೆಯವರ ಲೆಕ್ಕ ಎಷ್ಟು? ಬೆಳಿಗ್ಗೆ ಎದ್ದಾಗಿಂದಲೂ ಮಲಗೋ ತನಕಾ ನಾವು ಎಲ್ಲದಕ್ಕೂ ಹೋಲಿಸಿಕೊಳ್ಳುವ ನಮ್ಮ ನೆರೆಯವರು ಈ ರೇಸಿನ್ಯಾಗ ಎಲ್ಲಿದ್ದಾರ ಅಂದರ-
ಬಾಂಗ್ಲಾ – 17 ಲಕ್ಷ ಕೋಟಿ
ಪಾಕಿಸ್ತಾನ 21 ಲಕ್ಷ ಕೋಟಿ
ಇನ್ನು ಲಭ್ಯ ಅಂಕಿ ಅಂಶಗಳ ಪ್ರಕಾರ ಅತ್ಯಂತ ಕಡಿಮೆ ಜಿಡಿಪಿ ಇರುವ ದೇಶಗಳು ಅಂದರ-
ಬುರುಂಡಿ 25,000 ಕೋಟಿ
ರುವಾಂಡಾ 63,000 ಕೋಟಿ

ನಮ್ಮ ದೇಶ ಕೆಲವೇ ವರ್ಷಗಳಲ್ಲಿ ಐದು ಟ್ರಿಲಿಯನ್ ಡಾಲರ್ ಆರ್ಥಿಕತೆಯಾಗಲಿದೆ ಎಂಬ ಕನಸ ಮಾರುವ ಚಲುವರು ನಮ್ಮ ಸುತ್ತ ಮುತ್ತ ಇದ್ದಾರ. ನಮ್ಮ ಸ್ನೇಹಿತರ, ಕುಟುಂಬದ, ನಮ್ಮ ಸಹಪಾಠಿಗಳ, ಸಹ ಕೆಲಸಗಾರರ ಗುಂಪುಗಳಲ್ಲಿ ತುಂಬ್ಯಾರ.

ಅವರೆಲ್ಲಾ ತಿಳಿದುಕೊಳ್ಳಬೇಕಾದ ವಿಷಯ ಏನಪಾ ಅಂದರ ನಾವು ಜಿಡಿಪಿ ಪಟ್ಟಿಯ ಮೇಲಿನ ದೇಶಗಳಿಗೆ ಹತ್ತಿರ ಇಲ್ಲ. ಕೆಳಗಿನವರಿಗೆ ಹತ್ತಿರ ಇದ್ದೇವೆ. ಅದಕ್ಕೇ ಭೂಗೋಳದ ದಕ್ಷಿಣದ ದೇಶಗಳ ಭ್ರಾತ್ವತ್ವದ ಮಾತು, ಬ್ರಿಕ್ಸ ದೇಶಗಳ ಹೊಂದಾಣಿಕೆಯ ಮಾತುಗಳು ಆಗಾಗ ಕೇಳಿ ಬರತಿರತಾವು.
ಇದನ್ನ ನಾವು ಮರೆಯಬಾರದು.

ನಾವು ಏಣಿಯ ಎಷ್ಟನೇ ಮೆಟ್ಟಿಲ ಮೇಲೆ ಇದ್ದೇವಿ ಅನ್ನುವುದು ಗೊತ್ತಾಗದಿದ್ದರ ಎಷ್ಟು ಬೇಗ, ಎಷ್ಟು ಎತ್ತರಕ್ಕೆ ಏರಬೇಕು ಎನ್ನುವುದು ನಮಗೆ ಗೊತ್ತಾಗಲಿಕ್ಕೆ ಸಾಧ್ಯವಿಲ್ಲ. ನಾವು ನಿಂತಲ್ಲೇ ನಿಂತು ಮೇಲಿನವರನ್ನು ನೋಡಿ ಹೊಟ್ಟಿ ಕಿಚ್ಚು ಪಡಬಹುದು, ಅಥವಾ ಕೆಳಗಿನವರನ್ನು ನೋಡಿ ಅಪಹಾಸ್ಯ ಮಾಡಬಹುದು. ನಮ್ಮ ಮನಿಯೊಳಗ ಕನ್ನಡಿ ಇರದಿದ್ದರ, ಬೇರೆಯವರ ಮುಖದ ಮೇಲಿನ ಕಲೆಯ ಬಗ್ಗೆ ಮಾತಾಡಬಾರದು.

ಈ ಸಲಾ ಈ ವಿಷಯದ ಕಡೆ ನಮ್ಮ ಸಂಕೀರ್ತನೆ ಯಾಕ ಹೊರಳಿತಪಾ ಅಂದರ ಅದಕ್ಕೊಂದು ಛಂದನೆ ಕಾರಣ ಅದ.

ನಮ್ಮ ಮೋಹನ ಭಾಗವತ ಅವರು `ಜಿಡಿಪಿ’ ಭಾರತೀಯ ಮೂಲದ ಕಲ್ಪನೆ ಅಲ್ಲಾ ಅಂತ ಹೇಳ್ಯಾರ. ಅಷ್ಟ ಅಲ್ಲದ `ಲಿಂಚಿಂಗ್’ ಅನ್ನೋದು ಸಹ ನಮ್ಮ ಸಂಸ್ಕೃತಿಯ ಮೂಲದ್ದಲ್ಲಾ ಅಂತಂದಾರ.
ಅಮಿತ ಷಾ ಅವರು `ಮಾನವ ಹಕ್ಕುಗಳು` ಅನ್ನೋದು ನಮ್ಮ ಭಾರತೀಯ ಸಂಸ್ಕೃತಿಯ ಕಲ್ಪನೆ ಅಲ್ಲಾ ಅಂತ ಅಪ್ಪಣೆ ಕೊಟ್ಟಾರ.

ಅಂದರ ಈ ಮೂರು ವಿಷಯಗಳ ಬಗ್ಗೆ ತಿಳಕೊಳ್ಳೋದು, ಮಾತಾಡೋದು ನಿಷಿದ್ಧ ಅಂತ ಆತಲ್ಲಾ.
ಅದಕ್ಕಂತನ, ಈ ವಾರದ ಡೇಟಾ ಖೋಲಿಯೊಳಗ ನಮ್ಮ ಪ್ರವೇಶ. ಈ ನಿಷೇಧಿತ ವಸ್ತುವಿನ ಹುಡುಕಾಟಕ್ಕ.


ಇದನ್ನೂ ಓದಿ: ಅಸಂಘಟಿತ ವಲಯದ ಆರ್ಥಿಕತೆ ನಾಶ; ಜಿಡಿಪಿ ಶೇ.-23.9ಕ್ಕೆ ಕುಸಿತ: ಕೇಂದ್ರ ಸರ್ಕಾರದ ಮೇಲೆ ರಾಹುಲ್ ವಾಗ್ದಾಳಿ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...