HomeಎಕಾನಮಿExplainer: ಈ ಜಿಡಿಪಿ (GDP) ಅಂದರೆ ಏನಪಾ? - ಬೈ ಡೇಟಾಮ್ಯಾಟಿಕ್ಸ್

Explainer: ಈ ಜಿಡಿಪಿ (GDP) ಅಂದರೆ ಏನಪಾ? – ಬೈ ಡೇಟಾಮ್ಯಾಟಿಕ್ಸ್

ನಮ್ಮ ದೇಶ ಕೆಲವೇ ವರ್ಷಗಳಲ್ಲಿ ಐದು ಟ್ರಿಲಿಯನ್ ಡಾಲರ್ ಆರ್ಥಿಕತೆಯಾಗಲಿದೆ ಎಂಬ ಕನಸ ಮಾರುವ ಚಲುವರು ನಮ್ಮ ಸುತ್ತ ಮುತ್ತ ಇದ್ದಾರ. ನಮ್ಮ ಸ್ನೇಹಿತರ, ಕುಟುಂಬದ, ನಮ್ಮ ಸಹಪಾಠಿಗಳ, ಸಹ ಕೆಲಸಗಾರರ ಗುಂಪುಗಳಲ್ಲಿ ತುಂಬ್ಯಾರ.

- Advertisement -
- Advertisement -

ಜಿಡಿಪಿ ಅಥವಾ ನಿವ್ವಳ ಆಂತರಿಕ ಉತ್ನನ್ನ ಹಿಂಗಂದರ ಒಂದು ದೇಶದ ಜನಾ ತಮ್ಮ ಎಲ್ಲಾ ಚಟುವಟಿಕೆಗಳಿಂದ ಒಂದು ವರ್ಷದಾಗ ಸೃಷ್ಟಿಸಬಹುದಾದ ಒಟ್ಟು ಸಂಪತ್ತು. ಇದು ಸರಕು ಅಥವಾ ಸೇವೆಯ ರೂಪದಾಗ ಇರಬಹುದು.

ನೀವು ಏನರ ನೌಕರಿ ಮಾಡ್ತೀರಿ, ಅಥವಾ ವ್ಯಾಪಾರ ಮಾಡತೀರಿ ಅದರಿಂದ ನಿಮಗ ಎಷ್ಟು ದುಡ್ಡು ಅಥವಾ ಅದರ ಮೌಲ್ಯದ ಪರ್ಯಾಯ ವಸ್ತು ಅಥವಾ ಸೇವೆ ಸಿಗತದೋ ಅದು ನಿಮ್ಮ ಪಾಲಿನ ಜಿಡಿಪಿ. ಇಂಥದನ್ನೇ ಎಲ್ಲಾರೂ ಕೂಡಿ ಮಾಡಿದಾಗ ಸಿಗೋ ಲೆಕ್ಕಾ ಅಂದರ ಈ ದೇಶದ ಜಿಡಿಪಿ.


ಇದನ್ನೂ ಓದಿ: 1 ನೇ ಆರ್ಥಿಕ ತ್ರೈಮಾಸಿಕ ಜಿಡಿಪಿ 23.9% ಇಳಿಕೆ; ಐತಿಹಾಸಿಕ ಇಳಿಕೆ ಕಂಡ ಭಾರತ


ಇನ್ನ ಕೆಲವು ವಿಷಯ ಜಿಡಿಪಿಯೊಳಗ ಬರಂಗಿಲ್ಲಾ. ನಿಮ್ಮ ದಾಡಿ ನೀವ ಮಾಡಿಕೊಳ್ಳೋದು ಅನ್ರೀ, ನಿಮ್ಮ ತಾಯಿ, ಹೆಂಡತಿ, ಮಗಳು, ಅಕ್ಕಾ, ತಂಗಿ, ವೈನಿ, ಅಥವಾ ಮತ್ಯಾರರೆ ನಿಮ್ಮ ಅಡಿಗಿ ಮನಿಯೊಳಗ ನಿಮ್ಮ ಮತ್ತು ತಮ್ಮ ಊಟಕ್ಕ ಅಡಿಗೀ ಮಾಡತಾರಲ್ಲಾ, ಅದುನೂ ಬರೋದಿಲ್ಲ. ನಮ್ಮ ದೇಶದೊಳಗ ಕೋಟ್ಯಾಂತರ ಹೆಣ್ಣು ಮಕ್ಕಳು ಸಾಯೋ ತನಕಾ ತಮ್ಮ ತಮ್ಮ ಮನಿಯೊಳಗ, ಕೈ ಸುಟಗೋತ ದುಡದು ಹಾಕತಾರಲ್ಲಾ ಅದರ ಮೌಲ್ಯ ಸರಕಾರದ ಜಿಡಿಪಿ ಲೆಕ್ಕದೊಳಗ ಬರಂಗಿಲ್ಲಾ. ಗಂಡು ಮಕ್ಕಳ ಮನಸಿನ್ಯಾಗಂತೂ ಅದು ಬರೋದೇ ಇಲ್ಲಾ ಬಿಡ್ರಿ. ಅದು ಬ್ಯಾರೆ ಮಾತು.

ನಂ ಭಾರತದ ಈ ವರ್ಷದ ಜಿಡಿಪಿ ಸುಮಾರು 2.6 ಲಕ್ಷ ಕೋಟಿ ಡಾಲರ್ ಅಂದರ ಸುಮಾರು 182 ಲಕ್ಷ ಕೋಟಿ. ಇದು 2011-12 ವರ್ಷವನ್ನು ಅಳತೆಗೋಲಾಗಿ ತೆಗೆದುಕೊಂಡಾಗ ಸಿಗುವ ಲೆಕ್ಕ. ಮುಂಚೆ ಇದು 1981 ಇತ್ತು, 91 ಆತು, 2004 ನಾಲ್ಕು ಆತು. ಮೋಷಾ ಸರಕಾರ ಬಂದ ಮ್ಯಾಲೆ ಇದು 2011 ಆತು. ಲೆಕ್ಕದ ವರ್ಷ ಬದಲಾದಂಗೆಲ್ಲಾ ಜಿಡಿಪಿಯ ಮೌಲ್ಯ ಬದಲಾಗತದ, ಅದು ಮತ್ತ ಯೂನಿವರ್ಸಿಟಿ ಬೃಹಸ್ಪತಿಗಳ ತಲಿ ಕೆಡಿಸೋ ಲೆಕ್ಕ. ನಮ್ಮಂತಹ ಹುಲುಮಾನವರಿಗಲ್ಲ. ಅದನ್ನ ಬಿಡ್ರಿ.

ಹಂಗಾರ ಬ್ಯಾರೆ ದೇಶಗಳ ಜಿಡಿಪಿ ಎಷ್ಟದಪಾ? ಇದು ಯಾಕ ಬೇಕಂದ್ರ, ನಿಮ್ಮ ಹುಡುಗಾ ರನ್ನಿಂಗ್ ರೇಸ್ ನ್ಯಾಗ ಎಷ್ಟನೇ ಬಂದಾನ್ರೀ ಅಂದ್ರ ಸೆಕೆಂಡ್ ಬಂದಾನ ಅಂತ ನೀವು ಹೆಮ್ಮೆಯಿಂದ ಹೇಳಿದ್ರಿ ಅಂತ ತಿಳಕೋಳ್ರಿ. ಆ ರೇಸಿನ್ಯಾಗ ಎಷ್ಟು ಜನಾ ಇದ್ದರು ಅಂದರು ಅಂತ ತಿರಗಿ ಕೇಳಿದರ ಇಬ್ಬರ ರನ್ನರ್ಸ ಇದ್ದರು ಅಂತ ನಾಚಿಕೊಂಡು ಹೇಳೋ ಪರಿಸ್ಥಿತಿ ನಿಮಗ ಬರಬಾರದಲ್ಲಾ, ಅದಕ್ಕ.

ನೋಡ್ರಿ, ಈ ಸಮಸ್ತ ಭೂಮಂಡಲದಾಗ ಸುಮಾರು 220 ದೇಶ ಅಥವಾ ಸ್ವಯಂ ಆಡಳಿತ ಪ್ರದೇಶಾ ಅದಾವು. ಅದರಾಗ ಸುಮಾರು 200 ದೇಶದ ಜಿಡಿಪಿ ಲೆಕ್ಕಾ ಸಿಕ್ಕದ.
ಅದರ ಪ್ರಕಾರ ಅತಿ ಹೆಚ್ಚಿನವು ಹಿಂಗವ.

ಅಮೇರಿಕಾ 1357 ಲಕ್ಷ ಕೋಟಿ
ಚೈನಾ 857 ಲಕ್ಷ ಕೋಟಿ
ಜಪಾನ್ 350 ಲಕ್ಷ ಕೋಟಿ
ಜರ್ಮನಿ 257 ಲಕ್ಷ ಕೋಟಿ
ಭಾರತ 182 ಲಕ್ಷ ಕೋಟಿ
ಇನ್ನು ನಮ್ಮ ನೆರೆ ಹೊರೆಯವರ ಲೆಕ್ಕ ಎಷ್ಟು? ಬೆಳಿಗ್ಗೆ ಎದ್ದಾಗಿಂದಲೂ ಮಲಗೋ ತನಕಾ ನಾವು ಎಲ್ಲದಕ್ಕೂ ಹೋಲಿಸಿಕೊಳ್ಳುವ ನಮ್ಮ ನೆರೆಯವರು ಈ ರೇಸಿನ್ಯಾಗ ಎಲ್ಲಿದ್ದಾರ ಅಂದರ-
ಬಾಂಗ್ಲಾ – 17 ಲಕ್ಷ ಕೋಟಿ
ಪಾಕಿಸ್ತಾನ 21 ಲಕ್ಷ ಕೋಟಿ
ಇನ್ನು ಲಭ್ಯ ಅಂಕಿ ಅಂಶಗಳ ಪ್ರಕಾರ ಅತ್ಯಂತ ಕಡಿಮೆ ಜಿಡಿಪಿ ಇರುವ ದೇಶಗಳು ಅಂದರ-
ಬುರುಂಡಿ 25,000 ಕೋಟಿ
ರುವಾಂಡಾ 63,000 ಕೋಟಿ

ನಮ್ಮ ದೇಶ ಕೆಲವೇ ವರ್ಷಗಳಲ್ಲಿ ಐದು ಟ್ರಿಲಿಯನ್ ಡಾಲರ್ ಆರ್ಥಿಕತೆಯಾಗಲಿದೆ ಎಂಬ ಕನಸ ಮಾರುವ ಚಲುವರು ನಮ್ಮ ಸುತ್ತ ಮುತ್ತ ಇದ್ದಾರ. ನಮ್ಮ ಸ್ನೇಹಿತರ, ಕುಟುಂಬದ, ನಮ್ಮ ಸಹಪಾಠಿಗಳ, ಸಹ ಕೆಲಸಗಾರರ ಗುಂಪುಗಳಲ್ಲಿ ತುಂಬ್ಯಾರ.

ಅವರೆಲ್ಲಾ ತಿಳಿದುಕೊಳ್ಳಬೇಕಾದ ವಿಷಯ ಏನಪಾ ಅಂದರ ನಾವು ಜಿಡಿಪಿ ಪಟ್ಟಿಯ ಮೇಲಿನ ದೇಶಗಳಿಗೆ ಹತ್ತಿರ ಇಲ್ಲ. ಕೆಳಗಿನವರಿಗೆ ಹತ್ತಿರ ಇದ್ದೇವೆ. ಅದಕ್ಕೇ ಭೂಗೋಳದ ದಕ್ಷಿಣದ ದೇಶಗಳ ಭ್ರಾತ್ವತ್ವದ ಮಾತು, ಬ್ರಿಕ್ಸ ದೇಶಗಳ ಹೊಂದಾಣಿಕೆಯ ಮಾತುಗಳು ಆಗಾಗ ಕೇಳಿ ಬರತಿರತಾವು.
ಇದನ್ನ ನಾವು ಮರೆಯಬಾರದು.

ನಾವು ಏಣಿಯ ಎಷ್ಟನೇ ಮೆಟ್ಟಿಲ ಮೇಲೆ ಇದ್ದೇವಿ ಅನ್ನುವುದು ಗೊತ್ತಾಗದಿದ್ದರ ಎಷ್ಟು ಬೇಗ, ಎಷ್ಟು ಎತ್ತರಕ್ಕೆ ಏರಬೇಕು ಎನ್ನುವುದು ನಮಗೆ ಗೊತ್ತಾಗಲಿಕ್ಕೆ ಸಾಧ್ಯವಿಲ್ಲ. ನಾವು ನಿಂತಲ್ಲೇ ನಿಂತು ಮೇಲಿನವರನ್ನು ನೋಡಿ ಹೊಟ್ಟಿ ಕಿಚ್ಚು ಪಡಬಹುದು, ಅಥವಾ ಕೆಳಗಿನವರನ್ನು ನೋಡಿ ಅಪಹಾಸ್ಯ ಮಾಡಬಹುದು. ನಮ್ಮ ಮನಿಯೊಳಗ ಕನ್ನಡಿ ಇರದಿದ್ದರ, ಬೇರೆಯವರ ಮುಖದ ಮೇಲಿನ ಕಲೆಯ ಬಗ್ಗೆ ಮಾತಾಡಬಾರದು.

ಈ ಸಲಾ ಈ ವಿಷಯದ ಕಡೆ ನಮ್ಮ ಸಂಕೀರ್ತನೆ ಯಾಕ ಹೊರಳಿತಪಾ ಅಂದರ ಅದಕ್ಕೊಂದು ಛಂದನೆ ಕಾರಣ ಅದ.

ನಮ್ಮ ಮೋಹನ ಭಾಗವತ ಅವರು `ಜಿಡಿಪಿ’ ಭಾರತೀಯ ಮೂಲದ ಕಲ್ಪನೆ ಅಲ್ಲಾ ಅಂತ ಹೇಳ್ಯಾರ. ಅಷ್ಟ ಅಲ್ಲದ `ಲಿಂಚಿಂಗ್’ ಅನ್ನೋದು ಸಹ ನಮ್ಮ ಸಂಸ್ಕೃತಿಯ ಮೂಲದ್ದಲ್ಲಾ ಅಂತಂದಾರ.
ಅಮಿತ ಷಾ ಅವರು `ಮಾನವ ಹಕ್ಕುಗಳು` ಅನ್ನೋದು ನಮ್ಮ ಭಾರತೀಯ ಸಂಸ್ಕೃತಿಯ ಕಲ್ಪನೆ ಅಲ್ಲಾ ಅಂತ ಅಪ್ಪಣೆ ಕೊಟ್ಟಾರ.

ಅಂದರ ಈ ಮೂರು ವಿಷಯಗಳ ಬಗ್ಗೆ ತಿಳಕೊಳ್ಳೋದು, ಮಾತಾಡೋದು ನಿಷಿದ್ಧ ಅಂತ ಆತಲ್ಲಾ.
ಅದಕ್ಕಂತನ, ಈ ವಾರದ ಡೇಟಾ ಖೋಲಿಯೊಳಗ ನಮ್ಮ ಪ್ರವೇಶ. ಈ ನಿಷೇಧಿತ ವಸ್ತುವಿನ ಹುಡುಕಾಟಕ್ಕ.


ಇದನ್ನೂ ಓದಿ: ಅಸಂಘಟಿತ ವಲಯದ ಆರ್ಥಿಕತೆ ನಾಶ; ಜಿಡಿಪಿ ಶೇ.-23.9ಕ್ಕೆ ಕುಸಿತ: ಕೇಂದ್ರ ಸರ್ಕಾರದ ಮೇಲೆ ರಾಹುಲ್ ವಾಗ್ದಾಳಿ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕೋಗಿಲು ಬಡಾವಣೆ ಮನೆಗಳ ನೆಲಸಮ: ಹದಿನೈದು ದಿನಗಳೊಳಗೆ ಪುನರ್ವಸತಿ ಕಲ್ಪಿಸದಿದ್ದರೆ ತೀವ್ರ ಹೋರಾಟದ ಎಚ್ಚರಿಕೆ

ಬೆಂಗಳೂರು ಉತ್ತರ ತಾಲ್ಲೂಕಿನ ಯಲಹಂಕ ಪ್ರದೇಶದ ಕೋಗಿಲು ಲೇಔಟ್‌ನ ಫಕೀರ್ ಕಾಲೋನಿ ಮತ್ತು ಮಹಾನಾಯಕ ಅಂಬೇಡ್ಕರ್ ನಗರ (ವಾಸಿಂ ಲೇಔಟ್‌) ಪ್ರದೇಶದ ಬಡ ನಿವಾಸಿಗಳ ಮನೆಗಳನ್ನು 2025 ಡಿಸೆಂಬರ್ 20ರಂದು ಬೆಳಿಗ್ಗೆ ಸುಮಾರು...

ಡಾಲರ್ ಎದುರು ಸಾರ್ವಕಾಲಿಕ ಕನಿಷ್ಠ ಮಟ್ಟ 95.20 ರೂ.ಗೆ ಕುಸಿತ ಕಂಡ ಭಾರತೀಯ ರೂಪಾಯಿ ಮೌಲ್ಯ 

ನವದೆಹಲಿ: ಏಪ್ರಿಲ್ 30ರಂದು ಆರಂಭಿಕ ವಹಿವಾಟಿನಲ್ಲಿ ಭಾರತೀಯ ರೂಪಾಯಿ ಮೌಲ್ಯವು ಅಮೆರಿಕನ್ ಡಾಲರ್ ಎದುರು ಸಾರ್ವಕಾಲಿಕ ಕನಿಷ್ಠ ಮಟ್ಟವಾದ 95.07 ಕ್ಕೆ ಕುಸಿದಿದೆ. ಕರೆನ್ಸಿ 0.4% ಕುಸಿತದೊಂದಿಗೆ 95.2325 ಕ್ಕೆ ಇಳಿದಿದೆ. ಇದು ಮಾರ್ಚ್...

ತಮಿಳುನಾಡು| ದಲಿತ ಯುವಕನ ಶವ ಪತ್ತೆ; ‘ಜಾತಿ ಕಾರಣಕ್ಕೆ ಹತ್ಯೆಯಾಗಿದೆ’ ಎಂದು ಕುಟುಂಬದ ಆರೋಪ

ತಮಿಳುನಾಡಿನ ಪುದುಕ್ಕೊಟ್ಟೈ ಜಿಲ್ಲೆಯ ಕ್ವಾರಿ ಕೆರೆಯ ಬಳಿ 20 ವರ್ಷದ ದಲಿತ ಯುವಕನ ಶವ ಪತ್ತೆಯಾಗಿದ್ದು, ಹಿಂದುಳಿದ ವರ್ಗದ ಯುವತಿಯೊಂದಿಗಿನ ಸಂಬಂಧದಿಂದಾಗಿ ಆತನನ್ನು ಕೊಲ್ಲಲಾಗಿದೆ ಎಂದು ಆತನ ಕುಟುಂಬ ಆರೋಪಿಸಿದೆ. ಆದರೆ, ಈ...

‘ಬಾಲ ಕಾರ್ಮಿಕ’ ಶಂಕೆಯ ಮೇಲೆ 155 ಮುಸ್ಲಿಂ ವಿದ್ಯಾರ್ಥಿಗಳ ಬಂಧನ: ಧಾರ್ಮಿಕ ಗುರುತಿನ ಕಾರಣಕ್ಕೆ ಬಂಧಿಸಿರುವುದಾಗಿ ಪೋಷಕರ ಆರೋಪ

ಮಧ್ಯಪ್ರದೇಶದ ಕಟ್ನಿಯಲ್ಲಿ ಸರ್ಕಾರಿ ರೈಲ್ವೆ ಪೊಲೀಸರು (GRP) 155 ಮುಸ್ಲಿಂ ವಿದ್ಯಾರ್ಥಿಗಳು ಮತ್ತು ಎಂಟು ಶಿಕ್ಷಕರನ್ನು "ಬಾಲ ಕಾರ್ಮಿಕ" ಶಂಕೆಯ ಮೇಲೆ ಬಂಧಿಸಿದ ನಂತರ, ಪೋಷಕರು ಮುಸ್ಲಿಂ ವಿರೋಧಿ ಪಕ್ಷಪಾತವನ್ನು ಹೊಂದಿದ್ದಾರೆಂದು ಆರೋಪಿಸಿದ್ದಾರೆ....

ಜನಿವಾರದ ಹಿಂದೆ ಬಿದ್ದಿರುವ ವಿರೋಧ ಪಕ್ಷ ಮತ್ತು ಮಾಧ್ಯಮಗಳು

ಏಪ್ರಿಲ್ 23, 2026 ರಂದು ನಡೆದ ಕರ್ನಾಟಕ ಸಾಮಾನ್ಯ ಪ್ರವೇಶ ಪರೀಕ್ಷೆ (KCET) ವೇಳೆ ಬೆಂಗಳೂರಿನ ಕೋರಮಂಗಲದಲ್ಲಿರುವ ಕೃಪಾನಿಧಿ ಪಿಯು ಕಾಲೇಜಿನಲ್ಲಿ ಐವರು ಬ್ರಾಹ್ಮಣ ವಿದ್ಯಾರ್ಥಿಗಳ ಜನಿವಾರವನ್ನು ಬಲವಂತವಾಗಿ ತೆಗೆಸಿದ ಘಟನೆ ರಾಜಕೀಯ...

ಒಡಿಶಾ| ಸಾವಿನ ದಾಖಲೆ ಕೇಳಿದ ಬ್ಯಾಂಕ್‌ ಸಿಬ್ಬಂದಿ; ಸಮಾದಿ ಅಗೆದು ಸಹೋದರಿಯ ಅಸ್ಥಿಪಂಜರ ತಂದ ಬುಡಕಟ್ಟು ವ್ಯಕ್ತಿ

ಒಡಿಶಾದ ಕಿಯೋಂಜಾರ್ ಜಿಲ್ಲೆಯಲ್ಲಿ, ಬುಡಕಟ್ಟು ವ್ಯಕ್ತಿಯೊಬ್ಬ ತನ್ನ ಮೃತ ಸಹೋದರಿಯ ಅಸ್ಥಿಪಂಜರವನ್ನು ಅಗೆದು ಗ್ರಾಮೀಣ ಬ್ಯಾಂಕ್‌ಗೆ ತೆಗೆದುಕೊಂಡು ಹೋಗಿದ್ದಾನೆ. ಆಕೆಯ ಸಾವನ್ನು ಸಾಬೀತುಪಡಿಸುವ ಮೂಲಕ ಆಕೆಯ ಖಾತೆಯಲ್ಲಿ ಜಮಾ ಮಾಡಿದ ಹಣವನ್ನು ಪಡೆಯಲು...

ಜಾತಿ ಕಿರುಕುಳಕ್ಕೆ ದಲಿತ ವಿದ್ಯಾರ್ಥಿ ಸಾವು ಪ್ರಕರಣ: ಇಂದು ಸಂಜೆ 6 ರವರೆಗೆ ಕೇರಳ ಬಂದ್

ಜಾತಿ ಆಧಾರಿತ ಕಿರುಕುಳದಿಂದ ಮನನೊಂದಿದ್ದ ಕೇರಳದ ಅಂಚರಕಂಡಿಯ ಕಣ್ಣೂರು ದಂತ ಕಾಲೇಜಿನಲ್ಲಿ ಪ್ರಥಮ ವರ್ಷದ ಬಿಡಿಎಸ್ ವಿದ್ಯಾರ್ಥಿ ಆರ್.ಎಲ್. ನಿತಿನ್ ರಾಜ್ ಆತ್ಮಹತ್ಯೆಗೆ ರಾಜ್ಯದಾದ್ಯಂತ ಆಕ್ರೋಶ ವ್ಯಕ್ತವಾಗಿದೆ. ಕಾಲೇಜು ಕಟ್ಟಡದಿಂದ ಹಾರಿ ಆತ್ಮಹತ್ಯೆ...

‘ಹೊತ್ತಿ ಉರಿಯುತ್ತಿರುವ ಮಣಿಪುರ’: ಶತಮಾನದ ಬೆಂಕಿಗೆ ತುಪ್ಪ ಸುರಿದ ಬಿಜೆಪಿಯ ಕೋಮುರಾಜಕಾರಣ

ಭಾರತದ ಈಶಾನ್ಯ ರಾಜ್ಯ ಮಣಿಪುರ ಅಕ್ಷರಶಃ ಹೊತ್ತಿ ಉರಿಯುತ್ತಿದೆ. ಶತಮಾನಗಳಿಂದ ಹೊಗೆಯಾಡುತ್ತಿದ್ದ ಹಗೆತನಕ್ಕೆ ಕೋಮುರಾಜಕಾರಣದ ಬಣ್ಣ ಬಳಿದ ಬಿಜೆಪಿ ಮತ್ತು ಕೇಂದ್ರ ಸರ್ಕಾರ ಮಣಿಪುರದ ಜನರತ್ತ ತಿರುಗಿಯೂ ನೋಡುತ್ತಿಲ್ಲ. 2023ರಲ್ಲಿ ಭುಗಿಲೆದ್ದ ಉದ್ವಿಗ್ನತೆ...

ಮಧ್ಯಪ್ರದೇಶ| ದಲಿತ ದಂಪತಿಗೆ ಹನುಮಾನ್ ದೇಗುಲ ಪ್ರವೇಶ ನಿರಾಕರಣೆ; ಸಾಮಾಜಿಕ ಬಹಿಷ್ಕಾರ

ಮಧ್ಯಪ್ರದೇಶದ ಖಾರ್ಗೋನ್ ಜಿಲ್ಲೆಯ ಹನುಮಾನ್ ದೇವಸ್ಥಾನಕ್ಕೆ ನವವಿವಾಹಿತ ದಲಿತ ದಂಪತಿಗೆ ಪ್ರವೇಶ ನಿರಾಕರಿಸಲಾಗಿದೆ ಎಂಬ ಆರೋಪ ಕೇಳಿಬಂದಿದ್ದು, ಇದು ಗ್ರಾಮದಲ್ಲಿ ಉದ್ವಿಗ್ನತೆಯನ್ನು ಉಂಟುಮಾಡಿದೆ. ಈ ಘಟನೆಯು ಜಾತಿ ಆಧಾರಿತ ತಾರತಮ್ಯದ ಕುರಿತು ಕಳವಳ...

ಬಂಗಾಳ SIR : ನ್ಯಾಯಮಂಡಳಿಗಳಿಂದ ಪರಿಹಾರ ಪಡೆದವರು ಕೇವಲ 0.01% ಜನ

ಪಶ್ಚಿಮ ಬಂಗಾಳದಲ್ಲಿ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಪ್ರಕ್ರಿಯೆಯ ನಂತರ ಮತದಾರರ ಪಟ್ಟಿಯಲ್ಲಿ ಉಂಟಾದ ವಿವಾದಗಳನ್ನು ಬಗೆಹರಿಸಲು ಮೇಲ್ಮನವಿ ನ್ಯಾಯಮಂಡಳಿಗಳನ್ನು ಸ್ಥಾಪಿಸಲಾಗಿದೆ. ಎಸ್‌ಐಆರ್ ಪ್ರಕ್ರಿಯೆಯ ನಂತರ ಮತದಾರರ ಪಟ್ಟಿಯಿಂದ ಹೆಸರುಗಳನ್ನು ಕೈಬಿಟ್ಟಿರುವುದರ ಅಥವಾ...