Homeಎಕಾನಮಿಸಿಎಎ ಮತ್ತು ಎನ್‌ಆರ್‌ಸಿ ಜಾರಿಯಿಂದಾಗುವ ಆರ್ಥಿಕ ನಷ್ಟವೆಷ್ಟು?

ಸಿಎಎ ಮತ್ತು ಎನ್‌ಆರ್‌ಸಿ ಜಾರಿಯಿಂದಾಗುವ ಆರ್ಥಿಕ ನಷ್ಟವೆಷ್ಟು?

- Advertisement -
- Advertisement -

ಪೌರತ್ವ ಕಾಯ್ದೆ ಮತ್ತು ಎನ್‌ಆರ್‌ಸಿ ಈ ದೇಶದ ಸಂವಿಧಾನದ ಮೂಲ ಆಶಯಗಳಾದ ಸಹಭಾಗಿತ್ವ, ಸಹೋದರತ್ವ, ಧರ್ಮನಿರಪೇಕ್ಷತೆ, ಜಾತ್ಯತೀತತೆಗಳಿಗೆ ವಿರುದ್ಧವಾಗಿರುವುದು ಬಹುತೇಕರಿಗೆ ಅರ್ಥವಾಗಿದೆ. ಇದು ಸಮಾಜವನ್ನು ಧರ್ಮದ ಆಧಾರದ ಮೇಲೆ ಒಡೆದು ಒಂದಿಡೀ ಸಮುದಾಯವನ್ನು ಮುಖ್ಯವಾಹಿನಿಯಿಂದ ಹೊರಗಿಡುವಂಥ ಅಮಾನವೀಯ ಕೆಲಸವಾಗಿದೆ. ಈ ದೇಶ ಸರ್ವಜನಾಂಗದ ಶಾಂತಿಯ ತೋಟ ಎಂಬ ಹಿರಿಮೆಗೇ ಮಸಿಬಳಿಯುವಂತಹುದೂ ಆಗಿದೆ.

ಇದನ್ನ ಮನಗಂಡೇ ದೇಶದಾದ್ಯಂತ ಜಾತಿಧರ್ಮಗಳನ್ನು ಮೀರಿ ನಾಗರಿಕರು ಅದರಲ್ಲೂ ವಿದ್ಯಾರ್ಥಿಗಳು ಮತ್ತು ಮಹಿಳೆಯರು ಮುಂದೆ ನಿಂತು ಶಾಂತಿಯುತ ಪ್ರತಿಭಟನಾ ಹೋರಾಟಗಳನ್ನು ನಡೆಸುತ್ತಿದ್ದಾರೆ. ಇಂಥಾ ಒಕ್ಕೊರಲ ಪ್ರತಿಭಟನೆಯಿಂದಾಗಿ ಕೆಲವು ರಾಜ್ಯ ಸರ್ಕಾರಗಳು ಸಿಎಎ ಮತ್ತು ಎನ್‌ಆರ್‌ಸಿಯನ್ನು ತಮ್ಮ ರಾಜ್ಯಗಳಲ್ಲಿ ಮಾಡುವುದಿಲ್ಲ ಎಂದೂ ಹೇಳಿವೆ.

ಈ ಪೌರತ್ವ ಕಾಯ್ದೆಯು ಸಮಾಜವನ್ನು ಧರ್ಮದ ಆಧಾರದ ಮೇಲೆ ಒಡೆಯುವುದಷ್ಟೇ ಅಲ್ಲದೆ ದೇಶದ ಆರ್ಥಿಕತೆಯ ಮೇಲೆಯೂ ತಾಳಲಾರದಷ್ಟು ಆಘಾತ ಉಂಟುಮಾಡಲಿದೆ.

ಈ ಕಾಯ್ದೆಯ ಅನುಷ್ಟಾನದಿಂದ ದೇಶದ ಮೇಲೆ ಉಂಟಾಗುವ ಅರ್ಥಿಕ ಪರಿಣಾಮಗಳೇನು ಎಂದು ಸಂಕ್ಷಿಪ್ತವಾಗಿ ನೋಡುವ ಪ್ರಯತ್ನ ಮಾಡೋಣ.

ಕಡೆಯ ಆರು ವರ್ಷಗಳಲ್ಲಿ ಅಸ್ಸಾಮ್ ರಾಜ್ಯದಲ್ಲಿ ನಡೆದ ಎನ್‌ಆರ್‌ಸಿ ಪ್ರಕ್ರಿಯೆಗೆ ಖರ್ಚಾದ ಹಣ ಹತ್ತಿರತ್ತಿರ 1500 ಕೋಟಿ ರೂಪಾಯಿಗಳು. ಜೊತೆಗೆ ಈ ಕೆಲಸಕ್ಕೆ ಬಳಸಿಕೊಂಡ ಸರ್ಕಾರೀ ಉದ್ಯೋಗಿಗಳ ಸಂಖ್ಯೆ ಐವತ್ತೈದು ಸಾವಿರ. ಅಸ್ಸಾಮ್ ಜನಸಂಖ್ಯೆ ಮೂರೂವರೆ ಕೋಟಿ. ಆ ಲೆಕ್ಕದಲ್ಲಿ ಇಡೀ ದೇಶದಲ್ಲಿ ಎನ್‌ಆರ್‌ಸಿ ಮಾಡಲು ಖರ್ಚಾಗುವ ಹಣ ಕನಿಷ್ಟ ಅರವತ್ತುಸಾವಿರ ಕೋಟಿ ರೂಪಾಯಿಗಳು. ಜೊತೆಗೆ ಬೇರೆ ಕೆಲಸಗಳನ್ನು ಬಿಟ್ಟು ಸಾವಿರಾರು ಉದ್ಯೋಗಿಗಳು ಎನ್‌ಆರ್‌ಸಿ ಕೆಲಸಕ್ಕೆ ಬಳಕೆಯಾದರೆ ತಗಲುವ ಪರೋಕ್ಷ ಖರ್ಚು ಇನ್ನೂ ಹಲವು ಸಾವಿರ ಕೋಟಿಗಳು.

ದೇಶವನ್ನು ಆರ್ಥಿಕ ಹಿಂಜರಿಕೆಯಿಂದ ಮೇಲೆತ್ತುವ ಮುಖ್ಯ ಕ್ರಮವಾದ ಗ್ರಾಮೀಣ ಉದ್ಯೋಗ ಖಾತ್ರಿಗೆ ಹೆಚ್ಚುವರಿಯಾಗಿ ಹತ್ತು ಸಾವಿರ ಕೋಟಿ ಕೊಡಲು ಸರ್ಕಾರದ ಬಳಿ ಹಣವಿಲ್ಲ.

ಕರ್ನಾಟಕದ ಪ್ರವಾಹ ಪೀಡಿತರಿಗೆ ಕೊಡಬೇಕಾದಷ್ಟರಲ್ಲಿ ಕನಿಷ್ಟ ಶೇಕಡಾ ಹತ್ತರಷ್ಟು ಕೊಡಲೂ ಸರ್ಕಾರದ ಬಳಿ ದುಡ್ಡಿಲ್ಲ. ಅಂತಹುದರಲ್ಲಿ ಇಷ್ಟೊಂದು ದೊಡ್ಡ ಮೊತ್ತ (ಒಟ್ಟು ಕನಿಷ್ಟ ಒಂದು ಲಕ್ಷಕೋಟಿ ) ಸರ್ಕಾರದ ಹತ್ತಿರ ಎಲ್ಲಿದೆ?

ಸರ್ಕಾರ ಸಾಲ ಮಾಡಿಯೇ ಈ ಖರ್ಚನ್ನು ಹೊಂದಿಸಬೇಕಾಗುವುದರಿಂದ ನಮ್ಮೆಲ್ಲರ ತಲೆಯ ಮೇಲೆ ಮತ್ತಷ್ಟು ಸಾಲದ ಹೊರೆ ಬೀಳಲಿದೆ ಮತ್ತು ಅದರಿಂದ ದೇಶ ಇನ್ನಷ್ಟು ಆರ್ಥಿಕವಾಗಿ ಹಿಂದೆ ಬೀಳಲಿದೆ.

ಇನ್ನು, ಬೇರೆ ದೇಶದಿಂದ ಬಂದಿರುವ ಮುಸ್ಲಿಮರಿಗೆ ಸಿಎಎ ಅಡಿಯಲ್ಲಿ ಪೌರತ್ವ ನೀಡಲಾಗುವುದಿಲ್ಲ (ಸಿಎಎ ಪ್ರಕಾರ ಹಿಂದು,ಕ್ರೈಸ್ತ, ಜೈನ, ಪಾರ್ಸಿ ಮತ್ತು ಬೌದ್ಧರಿಗೆ ಮಾತ್ರ ಪೌರತ್ವ ನೀಡಲಾಗುತ್ತದೆ). ಪೌರತ್ವವಿಲ್ಲದ ಮುಸ್ಲಿಮರನ್ನು ಬೇರೆ ಯಾವುದೇ ದೇಶಕ್ಕೆ ಕಳಿಸಲಾಗುವುದೂ ಇಲ್ಲ. ಏಕೆಂದರೆ, ಆಗಿರುವವರ ಬಳಿ ಅವರು ಬೇರೆ ದೇಶದ ಪ್ರಜೆಗಳೆಂದು ಸಾಬೀತುಪಡಿಸುವ ದಾಖಲೆಗಳೂ ಇರುವುದಿಲ್ಲ. ಆಗ, ಅಂತವರನ್ನು ಸರ್ಕಾರದ ಪ್ರಕಾರ ಡಿಟೆನ್ಷನ್ ಸೆಂಟರುಗಳಲ್ಲಿ (Detention centre) ಇಡಲಾಗುತ್ತದೆ.

ಸುಮ್ಮನೆ ಒಂದು ಅಂದಾಜಿಗೆ ಆ ರೀತಿ ಪೌರತ್ವ ಇಲ್ಲದ ಇಪ್ಪತ್ತು ಲಕ್ಷ ಮುಸ್ಲಿಮರು ಸಿಗುತ್ತಾರೆಂದುಕೊಳ್ಳೋಣ (ಬಿಜೆಪಿ ಐಟಿ ಸೆಲ್ ಈ ಸಂಖ್ಯೆ ಎರಡು ಮೂರು ಕೋಟಿಯಷ್ಟಿದೆ ಎಂದು ಪ್ರಚಾರ ಮಾಡ್ತಿದೆ). ಈ ಇಪ್ಪತ್ತು ಲಕ್ಷ ಜನರನ್ನ ಡಿಟೆನ್ಷನ್ ಸೆಂಟರುಗಳಲ್ಲಿಟ್ಟು ನೋಡಿಕೊಳ್ಳುವುದಕ್ಕೆ ವರ್ಷಕ್ಕೆ ಕನಿಷ್ಟ ಹತ್ತು ಸಾವಿರ ಕೋಟಿಗಳಷ್ಟು ಖರ್ಚಾಗಲಿದೆ. ಒಂದು ಸೆಂಟರಿನಲ್ಲಿ ಅಂದಾಜು ಮೂರು ಸಾವಿರ ಜನ, ಊಟ, ಬಟ್ಟೆ, ಮಕ್ಕಳ ಸ್ಕೂಲು ಮತ್ತು ಉಸ್ತುವಾರಿ ಸಿಬ್ಬಂದಿಗಳ ವೆಚ್ಚ ಎಲ್ಲ ಸೇರಿದರೆ ವರ್ಷಕ್ಕೆ ಹತ್ತು ಸಾವಿರ ಕೋಟಿ ದಾಟಲಿದೆ. ಅಸ್ಸಾಮಿನಲ್ಲಿ ಪ್ರತಿ ಸೆಂಟರನ್ನು ಕಟ್ಟಲು ಐವತ್ತು ಕೋಟಿ ವ್ಯಯಿಸಲಾಗಿದೆ. ಆ ಲೆಕ್ಕದಲ್ಲಿ ಐನೂರು ಸೆಂಟರುಗಳನ್ನು ಕಟ್ಟಲು ಇಪ್ಪತ್ತೈದು ಸಾವಿರ ಕೋಟಿ ಒಟ್ಟಿಗೇ ಖರ್ಚಾಗಲಿದೆ.

ಇಲ್ಲಿ ಅಂದಾಜಿಸಿರುವ ಇಪ್ಪತ್ತು ಲಕ್ಷ ಜನ ಬದುಕಲು ಇವತ್ತು ಒಂದಲ್ಲ ಒಂದು ಕೆಲಸ ಮಾಡಿ (ಮೆಕ್ಯಾನಿಕ್, ಸೆಕ್ಯೂರಿಟಿ, ಸಣ್ಣ ಅಂಗಡಿ ಇತ್ಯಾದಿ) ಸಂಪಾದನೆ ಮಾಡುತ್ತಾ ದೇಶದ ಜಿಡಿಪಿಗೆ ತಮ್ಮ ಕಾಣಿಕೆಯನ್ನು ನೀಡುತ್ತಿದ್ದಾರೆ.

ದೇಶದ ತಲಾದಾಯ ಇವತ್ತು ತಿಂಗಳಿಗೆ ಹತ್ತು ಸಾವಿರದ ಐನೂರು ರೂಪಾಯಿಗಳು. ಈ ಲೆಕ್ಕದಲ್ಲಿ ಇಪ್ಪತ್ತು ಲಕ್ಷ ಜನರಿಂದ ಪ್ರತಿವರ್ಷ ಜಿಡಿಪಿಗೆ ಸಿಗುವ ಕೊಡುಗೆ ಹತ್ತಿರತ್ತಿರ ಇಪ್ಪತ್ತೈದು ಸಾವಿರ ಕೋಟಿ ರೂಪಾಯಿಗಳು.

ಅಂದರೆ, ಅಷ್ಟು ಜನರನ್ನು ನೋಡಿಕೊಳ್ಳುವ ಮತ್ತು ನಿಂತುಹೋಗುವ ಸಂಪಾದನೆ ಈ ಎರಡರಿಂದ ಭಾರತಕ್ಕೆ ವಾರ್ಷಿಕವಾಗಿ ಆಗುವ ಒಟ್ಟು ಆರ್ಥಿಕ ನಷ್ಟ ಕನಿಷ್ಟ ಮೂವತ್ತೈದರಿಂದ ನಲವತ್ತು ಸಾವಿರ ಕೋಟಿ ರೂಪಾಯಿಗಳು.

ಅದಲ್ಲದೆ, ಮೇಲೆ ಹೇಳಿದಂತೆ ಈಗ ತಕ್ಷಣಕ್ಕೆ ಆಗುವ ನಷ್ಟ ಕನಿಷ್ಟ ಒಂದು ಲಕ್ಷ ಕೋಟಿ ರೂಪಾಯಿಗಳು.

ಇಷ್ಟರ ಜೊತೆಗೆ, ದೇಶದೊಳಗೆ ಸಿಎಎ ಕಾರಣಕ್ಕಾಗಿ ಅಶಾಂತಿಯ ವಾತಾವರಣವಿರುವಾಗ ಯಾವುದೇ ದೇಶ ಭಾರತದಲ್ಲಿ ಬಂಡವಾಳ ಹೂಡಲು ಮುಂಬರುವುದಿಲ್ಲ.

ಈಗಾಗಲೇ ಈಶಾನ್ಯ ರಾಜ್ಯಗಳಲ್ಲಿ ಹನ್ನೆರಡು ಸಾವಿರ ಕೋಟಿ ಹೂಡಬೇಕಾಗಿದ್ದ ಜಪಾನ್ ತನ್ನ ನಿರ್ಧಾರವನ್ನು ತಾತ್ಕಾಲಿಕವಾಗಿ ಮುಂದೂಡಿದೆ. ಇದಲ್ಲದೆ, ದೇಶದ ಕೋಟ್ಯಂತರ ಮಂದಿ ತಮ್ಮ ಪೌರತ್ವ ಸಾಬೀತಿಗೆ ಅಲೆದಾಡುತ್ತ ಕಳೆಯುವುದರಿಂದ ಅವರ ಉತ್ಪಾದನಾ ಮಟ್ಟ ಕುಸಿದು ಅದೂ ಕೂಡ ಆರ್ಥಿಕತೆಗೆ ಮತ್ತೊಂದು ಭಾರೀ ಹೊಡೆತ ಕೊಡಲಿದೆ.

ತಾನೇ ಕೈಯಾರೆ ಮಾಡಿಕೊಂಡ (ನೋಟುಬಂದಿ ಮತ್ತು ಜಿಎಸ್ಟಿ) ತಪ್ಪುಗಳಿಂದಾಗಿ ಆರ್ಥಿಕ ದುಸ್ಥಿತಿಯಲ್ಲಿರುವ ಸರ್ಕಾರ ಸಿಎಎ ಮತ್ತು ಎನ್‌ಆರ್‌ಸಿಯಿಂದುಂಟಾಗುವ ಆರ್ಥಿಕ ಹೊರೆ ತಾಳಿಕೊಳ್ಳುವ ಸ್ಥಿತಿಯಲ್ಲಂತು ಇಲ್ಲವೇ ಇಲ್ಲ.

ಒಟ್ಟಿನಲ್ಲಿ, ಈ ಸಿಎಎ ಮತ್ತು ಎನ್‌ಆರ್‌ಸಿ ದೇಶವನ್ನು ಧರ್ಮಾಧಾರಿತವಾಗಿ ಒಡೆದು ಸಮಾಜದೊಳಗಿನ ಸಾಮರಸ್ಯವನ್ನು ಹಾಳುಮಾಡುವುದರ ಜೊತೆಗೆ ಆರ್ಥಿಕವಾಗಿಯೂ ಕೂಡ ದೇಶವನ್ನು ಕೆಳತಳ್ಳಲಿದೆ.

ಒಟ್ಟಾರೆ, ಇದು ದೇಶವನ್ನು ನೈತಿಕವಾಗಿ ಮತ್ತು ಆರ್ಥಿಕವಾಗಿ ಪ್ರಪಾತಕ್ಕೆ ಬೀಳಿಸಲಿದೆ. ( ಜನಶಕ್ತಿಯಿಂದ ತಡೆಯದೇ ಹೋದರೆ)

ಹಾಗಾದರೆ, ಈ ಸರ್ಕಾರ ಯಾವ ಕಾರಣಕ್ಕಾಗಿ ಈ ಸಿಎಎ ಮತ್ತು ಎನ್‌ಆರ್‌ಸಿ ಮಾಡುತ್ತಿದೆ?

ಒಂದು, ಇದರ ಎಲ್ಲ ಪರಿಣಾಮಗಳ ಅಂದಾಜಿಲ್ಲದೆ ತಮ್ಮ ಹಿಂದುತ್ವ ಕಾರ್ಯಸೂಚಿಯ ಭಾಗವಾಗಿ ಇದನ್ನು ಮಾಡುತ್ತಿರಬಹುದು.

ಎರಡು, ಪರಿಣಾಮಗಳ ಅರಿವಿದ್ದು ಅದರಲ್ಲೂ ಆರ್ಥಿಕ ದುಷ್ಪರಿಣಾಮದ ಅರಿವಿದ್ದು ಕೇವಲ ರಾಜಕೀಯ ಲಾಭದ ಕಾರಣಕ್ಕೆ ಇದನ್ನು ಮಾಡುವಂತೆ ತೋರಿಸಿಕೊಳ್ಳುವ ಪ್ರಯತ್ನ ಮಾಡುತ್ತಿರಬಹುದು. ಅಂದರೆ, ಚುನಾವಣೆ ಹತ್ತಿರ ಬಂದಂತೆ ಐದಾರು ಸಾವಿರ ಜನರನ್ನು ಮಾತ್ರ ಡಿಟೆನ್ಷನ್ ಸೆಂಟರುಗಳಲ್ಲಿಟ್ಟು ಅದನ್ನೇ ಕೋಟಿ ಜನ ಎಂಬಂತೆ ಸೋಷಿಯಲ್ ಮೀಡಿಯ ಮೂಲಕ ನಂಬಿಸಿ ಹಿಂದೂಗಳ ಓಟು ಪಡೆಯುವ ಹುನ್ನಾರವೂ ಇರಬಹುದು.

ಯಾವ ಕಾರಣಕ್ಕೇ ಮಾಡುತ್ತಿದ್ದರೂ ಇದನ್ನು ಇಡೀ ದೇಶ ಈಗ ಮಾಡುತ್ತಿರುವಂತೆ ಒಗ್ಗಟ್ಟಿನಿಂದ ಶಾಂತಿಯುತವಾಗಿ ಎದುರಿಸಿ ದೇಶವನ್ನು ನೈತಿಕ ಮತ್ತು ಆರ್ಥಿಕ ಅಧಃಪತನದಿಂದ ಉಳಿಸಬೇಕಾಗಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ಸಾವರ್ಕರ್ ದೇವರನ್ನು, ಧಾರ್ಮಿಕ ನಂಬಿಕೆಗಳನ್ನು ಪ್ರಶ್ನಿಸಿದ್ದರು’: ಪುಣೆ ನ್ಯಾಯಾಲಯದಲ್ಲಿ ಮೊಮ್ಮಗ ಸತ್ಯಕಿ ಸಾವರ್ಕರ್ ಒಪ್ಪಿಗೆ

ಪುಣೆ: ಕಾಂಗ್ರೆಸ್ ನಾಯಕ ಹಾಗೂ ಸಂಸತ್ತಿನ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯ ವಿಚಾರಣೆಯು ಅತ್ಯಂತ ಕುತೂಹಲಕಾರಿ ಮತ್ತು ರಾಜಕೀಯ-ಸೈದ್ಧಾಂತಿಕ ತಿರುವನ್ನು ಪಡೆದುಕೊಂಡಿದೆ. ವಿನಾಯಕ ದಾಮೋದರ್...

ಮಾಜಿ ಸಚಿವ ಧರ್ಮೇಂದ್ರ ಪ್ರಧಾನ್ ಮಗಳ ಫೋನ್ ಬಿಲ್ ವಿವಾದ: ₹68 ಸಾವಿರ ಬಿಲ್-ಪೇ ಆಗಿದ್ದು ಸರ್ಕಾರಿ ಹಣದಲ್ಲಾ?

ಮಾಜಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ಪುತ್ರಿ ನೈಮಿಷಾ ಪ್ರಧಾನ್ ಅವರು ಮತ್ತೊಮ್ಮೆ ವಿವಾದದ ಕೇಂದ್ರಬಿಂದುವಾಗಿದ್ದಾರೆ. ವಾರಗಳ ಹಿಂದೆ ನೀಟ್ ಪರೀಕ್ಷೆಯ ಪತ್ರಿಕೆ ಸೋರಿಕೆ ಖಂಡಿಸಿ ಕಾಕ್ರೋಚ್ ಜನತಾ ಪಾರ್ಟಿ...

ಇರಾನ್ ವಸತಿ ಕಟ್ಟಡದ ಮೇಲೆ ಅಮೆರಿಕಾ ದಾಳಿ: ಎರಡು ವರ್ಷದ ಮಗು ಸೇರಿ ಒಂದೇ ಕುಟುಂಬದ ಮೂವರ ಸಾವು

ಮಧ್ಯಪ್ರಾಚ್ಯದಲ್ಲಿ ಅಮೆರಿಕ ತನ್ನ ಸಾಮ್ರಾಜ್ಯಶಾಹಿ ಆಧಿಪತ್ಯ ಸ್ಥಾಪನೆಗಾಗಿ ನಡೆಸುತ್ತಿರುವ ಯುದ್ಧಕೋರ ನೀತಿ ಮತ್ತೊಮ್ಮೆ ನಿರಪರಾಧಿ ಸಾರ್ವಜನಿಕರ ರಕ್ತ ಹರಿಸಿದೆ. ಇರಾನ್ ಮೇಲಿನ ಅಮೆರಿಕ ಪಡೆಗಳ ಸರಣಿ ಮತ್ತು ಭೀಕರ ಬಾಂಬ್ ದಾಳಿಗಳು ಕೇವಲ...

SIR: ASDDO ಪಟ್ಟಿಯಲ್ಲಿ ಬೆಂಗಳೂರಿಗೆ ಪ್ರಥಮ ಸ್ಥಾನ, ರಾಜ್ಯದಲ್ಲಿ 2 ಕೋಟಿ ಮತದಾರರ ಹೆಸರು ರದ್ದಾಗುವ ಬೀತಿ

ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ರಾಜಧಾನಿ ಬೆಂಗಳೂರು ಅತ್ಯಂತ ಪ್ರಮುಖ ಹಾಗೂ ಕಳವಳಕಾರಿ ಕೇಂದ್ರವಾಗಿ ಹೊರಹೊಮ್ಮಿದೆ. ರಾಜ್ಯದಲ್ಲಿರುವ ಒಟ್ಟು 5.54 ಕೋಟಿ ನೋಂದಾಯಿತ ಮತದಾರರ ಪೈಕಿ...

ಉಮರ್ ಖಾಲಿದ್ ಜಾಮೀನು ಅರ್ಜಿ; ಪೊಲೀಸರ ನಿಲುವು ಕೇಳಿದ ದೆಹಲಿ ಹೈಕೋರ್ಟ್

ಫೆಬ್ರವರಿ 2020 ರಲ್ಲಿ ಈಶಾನ್ಯ ದೆಹಲಿಯಲ್ಲಿ ನಡೆದ ಗಲಭೆಯ ಹಿಂದಿನ "ದೊಡ್ಡ ಪಿತೂರಿ"ಗೆ ಸಂಬಂಧಿಸಿದಂತೆ ಭಯೋತ್ಪಾದನಾ ವಿರೋಧಿ ಕಾನೂನು ಯುಎಪಿಎ ಅಡಿಯಲ್ಲಿ ಪ್ರಕರಣದಲ್ಲಿ ಜಾಮೀನು ಕೋರಿ ಉಮರ್ ಖಾಲಿದ್ ಸಲ್ಲಿಸಿದ ಅರ್ಜಿಯ ಕುರಿತು...

ಮುಂಬೈ: ‘ಶಾಲಾ ಜಿಹಾದ್’ ಎಂಬ ಬಿಜೆಪಿ ನಾಯಕನ ಕೋಮುದ್ವೇಷಕ್ಕೆ ಶಾಲೆಗೆ ನುಗ್ಗಿದ ಬುಲ್ಡೋಜರ್: ಬಿಎಂಸಿಗೆ ಚಾಟಿ ಬೀಸಿದ ಬಾಂಬೆ ಹೈಕೋರ್ಟ್

ಬಿಜೆಪಿ ನಾಯಕ ಕಿರೀಟ್ ಸೋಮಯ್ಯ ಅವರ “ಶಾಲಾ ಜಿಹಾದ್” ಎಂಬ ವಿಷಕಾರಿ ಹೇಳಿಕೆಯ ನಂತರ ಮುಂಬೈನ ಗೋವಂಡಿಯಲ್ಲಿ ಬಡ ಮುಸ್ಲಿಂ ಮಕ್ಕಳ ಶಿಕ್ಷಣದ ಆಶಾಕಿರಣವಾಗಿದ್ದ ತೆಹ್ಜೀಬ್ ಇಸ್ಲಾಮಿಕ್ ಇಂಗ್ಲಿಷ್ ಶಾಲೆಯನ್ನು ಬೃಹನ್ಮುಂಬೈ ಮುನ್ಸಿಪಲ್...

ಹಾಕಿ ತಂಡಕ್ಕೆ ಕೇಸರಿ ಜರ್ಸಿ: ‘ನಮ್ಮ ಗುರುತೇ ನೀಲಿ, ಕೇಸರಿ ಬಣ್ಣದ ತರ್ಕವೇನು?’: ಮಾಜಿ ಹಾಕಿ ಪಟು ಆಕ್ರೋಶ: ಬಿಜೆಪಿ ನಡೆಗೆ ವಿಪಕ್ಷಗಳ ಟೀಕೆ

ಭಾರತೀಯ ಕ್ರೀಡಾರಂಗದ ಹೆಮ್ಮೆಯ ಸಾಂಪ್ರದಾಯಿಕ 'ನೀಲಿ' (ಬ್ಲೂ) ಬಣ್ಣವನ್ನು ಕಳಚಿ, ಹಾಕಿ ತಂಡಕ್ಕೆ ಬಲವಂತವಾಗಿ ಕೇಸರಿ ಬಣ್ಣದ ಜೆರ್ಸಿ ತೊಡಿಸಲು ಹೊರಟಿರುವುದು ಇದೀಗ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಮುಂಬರುವ ಎಫ್‌ಐಎಚ್ (FIH) ವಿಶ್ವಕಪ್‌ಗಾಗಿ...

ತಮಿಳುನಾಡು: ಶಾಲಾ ಮಕ್ಕಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡಲು ಚಿಂತನೆ

ತಮಿಳುನಾಡಿನ ಸರ್ಕಾರಿ ಶಾಲೆಗಳ ಮಧ್ಯಾಹ್ನದ ಬಿಸಿಊಟದ ಯೋಜನೆಯಡಿಯಲ್ಲಿ ವಿದ್ಯಾರ್ಥಿಗಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡುವ ಪ್ರಸ್ತಾವನೆಯನ್ನು ತಮಿಳುನಾಡು ಸರ್ಕಾರ ಪರಿಶೀಲಿಸುತ್ತಿದ್ದು, ಶಾಲಾ ಶಿಕ್ಷಣ ಸಚಿವ ರಾಜ್‌ಮೋಹನ್ ಅವರು ಈ ಕುರಿತು ಮುಖ್ಯಮಂತ್ರಿ ಸಿ....

ಪ್ರಶ್ನೆಪತ್ರಿಕೆ ಸೋರಿಕೆ ವಿರೋಧಿ ಮಸೂದೆಯಲ್ಲಿ ಸುಧಾರಣೆಗಳಿಲ್ಲ, ರಾಜಕೀಯ ಮಾತ್ರ: ಕೇಂದ್ರದ ವಿರುದ್ಧ ಖರ್ಗೆ ವಾಗ್ದಾಳಿ

ಪಬ್ಲಿಕ್ ಪರೀಕ್ಷೆಗಳ (ಅನ್ಯಾಯಯುತ ವಿಧಾನಗಳ ತಡೆಗಟ್ಟುವಿಕೆ) ತಿದ್ದುಪಡಿ ಮಸೂದೆ 2026 ರ ಚರ್ಚೆಯ ಸಂದರ್ಭದಲ್ಲಿ ಮಾತನಾಡಿದ ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಕೇಂದ್ರ ಸರ್ಕಾರದ ಮೇಲೆ ತೀವ್ರ ವಾಗ್ದಾಳಿ ನಡೆಸಿದರು....

ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಕೆ ಆರೋಪ; ಗೃಹ ಸಚಿವ ಅಮಿತ್‌ ಶಾ ಮೌನ ಪ್ರಶ್ನಿಸಿದ ಕಪಿಲ್ ಸಿಬಲ್

ಜುಲೈ 20 ರಂದು ದೆಹಲಿಯಲ್ಲಿ ನಡೆದ ಸಂಶತ್ ಚಲೋ ಪ್ರತಿಭಟನಾ ಮೆರವಣಿಗೆಯಲ್ಲಿ ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಸಲಾಗಿದೆ ಎಂಬ ಆರೋಪದ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಮೌನವನ್ನು...