HomeUncategorizedರೆಡ್ಡಿಯ ಗುಡ್ ಟೈಮ್ - ಮೋದಿಯ ಅಚ್ಚೆ ದಿನ್

ರೆಡ್ಡಿಯ ಗುಡ್ ಟೈಮ್ – ಮೋದಿಯ ಅಚ್ಚೆ ದಿನ್

- Advertisement -
- Advertisement -

‘ನೋಡಪಾ… ಕೆಟ್ಟ ಘಳಿಗೆಯಲ್ಲಿ ಏನೇನಾಗಿದೆಯೋ ಅದ್ನೆಲ್ಲಾ ಮರ್‍ತೊಗ್ಬಿಡು, ನನ್ನ ಟೈಮು ಈಗ ಚೆನ್ನಾಗಿ ಶುರುವಾಗಿದೆ.’
ರಾಯಚೂರು ರೂರಲ್ ಎಂಎಲ್‌ಎ ಬಸನಗೌಡರನ್ನು ಆಪರೇಷನ್ ಮಾಡಲು ಹೋಗಿದ್ದ ದಿ ಗ್ರೇಟ್ ಜೆನ್ನಿ ಅಲಿಯಾಸ್ ಜನಾರ್ಧನ ರೆಡ್ಡಿಯ ಡೀಲಿಂಗ್ ಡೈಲಾಗ್ ಇದು. ಇವಿಎಂ ಮಷೀನ್‌ಗಳ ಪಕಡ್ಬಂದಿಯೂ ಸೇರಿದಂತೆ ಮಾಡಬಾರದ ಮಸಲತ್ತುಗಳನ್ನೆಲ್ಲ ಮಾಡಿದ ಹೊರತಾಗಿಯೂ ಮ್ಯಾಜಿಕ್ ನಂಬರ್ ತಲುಪಲಾರದ ಅತಂತ್ರ ಸ್ಥಿತಿಯಲ್ಲಿ ಬಿಜೆಪಿಗೆ ಜನಾರ್ಧನ ರೆಡ್ಡಿಯ ಆಸರೆಯಲ್ಲದೆ ಮತ್ತೇನೂ ಬಾಕಿ ಉಳಿದಿರಲಿಲ್ಲ. ಸ್ವತಃ ಅಮಿತ್ ಶಾ, ಯಡ್ಯೂರಪ್ಪನವರ ಹೆಗಲಿಗೆ ಅಧಿಕಾರದ ಜೋಳಿಗೆ ನೇತುಹಾಕಿ ದಿಲ್ಲಿ ಸೇರಿಕೊಂಡು ರಿಮೋಟ್ ಹಿಡಿದು ಕೂತಮೇಲೆ ಪಾಪ, ರೆಡ್ಡಿಯಾದರು ಇನ್ನೇನು ಮಾಡಬೇಕಿತ್ತು. ಆದ್ರೆ ಇಲ್ಲಿ ನಾವೆಲ್ಲ ಗಮನಿಸಬೇಕಾದ ಮತ್ತೊಂದು ಅಂಶವಿದೆ. ಅದು ಜೆನ್ನಿ ರೆಡ್ಡಿಯ ಬಾಯಿಂದ ಹೊರಬಿದ್ದ ‘ನನ್ನ ಟೈಮು ಚೆನ್ನಾಗಿ ಶುರುವಾಗಿದೆ’ ಅನ್ನೋ ಸಂಗತಿ. ಇದು ಯಾಕಷ್ಟು imporatant ವಿಷಯವಾಗುತ್ತೆ ಅನ್ನೋದಕ್ಕೆ 2014ರ ಲೋಕಸಭಾ ಸಮರ ಕಣದಲ್ಲಿ ಮೋದಿ ಮಹಾತ್ಮರು ಉದುರಿಸಿದ್ದ ಡೈಲಾಗ್ ನೆನಪಿಸಿಕೊಳ್ಳಿ. ಅವತ್ತು ಹೋದಬಂದ ಕಡೆಯಲ್ಲೆಲ್ಲ ‘ಅಚ್ಚೇ ದಿನ್ ಆಯೇಗಾ, ಜರೂರ್ ಆಯೇಗಾ’ ಅಂತ ಮಹಾತ್ಮರು ಬಂಬಡಾ ಬಜಾಯಿಸಿದ್ದಕ್ಕೂ ಇವತ್ತು ರೆಡ್ಡಿಯಂತಹ ಮಾಫಿಯಾಗಳು ‘ನಮಗೆ ಗುಡ್ ಟೈಮ್ ಶುರುವಾಗಿದೆ’ ಅನ್ನೋದಕ್ಕೂ ಸಂಬಂಧ ಇರೋದು ಕಾಣಿಸುತ್ತೆ ಅಲ್ವಾ?

ಮೋದಿ ‘ಅಚ್ಚೇ ದಿನ್ ಅಂದಾಗ, ನಮ್ಮ ಬಡ ಬೋರೇಗೌಡಪ್ಪಗಳು ತಮ್ಮ ಮನೆಯ ದೀಪಕ್ಕೆ ಎಣ್ಣೆ ಬರುತ್ತೆ, ತಟ್ಟೆಗೆ ಅನ್ನ ಬಂದು ಬೀಳುತ್ತೆ, ಬೆಲೆಯೇರಿಕೆಯ ಗ್ರಾಫು ಕುಸಿಯುತ್ತೆ ಅಂತ ಕನಸು ಕಂಡಿದ್ದರು. ಆದರೆ ಮೋದಿಯ ಅಚ್ಚೇ ದಿನ್ ವಾಸ್ತವ ಅಂತಹ ಬೋರೇಗೌಡರಿಗಲ್ಲ, ಇಂಥಾ ಜನಾರ್ಧನ ರೆಡ್ಡಿಗಳಿಗೆ. ಇಲ್ಲದೇ ಹೋಗಿದ್ದರೆ, ಅನಾಮತ್ತು ಹದಿನಾರೂವರೆ ಸಾವಿರ ಕೋಟಿಯ ಅದಿರು ಲಫಡಾ ಕೇಸಿನಲ್ಲಿ
ನಂಬರ್1 ಆರೋಪಿಯಾಗಿ ಜೈಲು ಸೇರಿ, ಬೇಲ್‌ಡೀಲ್ ಕೇಸಲ್ಲಿ ಜಡ್ಜ್‌ಗೆ 10 ಕೋಟಿಯ ಬೇಲ್‌ಪೂರಿ ತಿನ್ನಿಸಲು ಹೋಗಿ ತಗಲಾಕ್ಕೊಂಡು ಜೈಲೂಟ ಭದ್ರ ಮಾಡಿಕೊಂಡಿದ್ದ ಜನಾರ್ಧನ ರೆಡ್ಡಿ ಬಿಜೆಪಿ ಅಧಿಕಾರಕ್ಕೆ ಬಂದು ಮೋದಿ ಪ್ರಧಾನಿಯಾಗುತ್ತಿದ್ದಂತೆಯೇ ಸುಲಭವಾಗಿ ಬೇಲ್ ಮೇಲೆ ಹೊರಬಂದು ನಿಟ್ಟುಸಿರು ಬಿಡುತ್ತಿರಲಿಲ್ಲ. ಸಿಬಿಐ ರೇಡುಗಳಿಂದ ಇನ್ನು ರೆಡ್ಡಿಯ ಕಥೆ ಮುಗಿದೇಹೋಯ್ತು, ಅವನ ಆಸ್ತಿಯೆಲ್ಲ ಜಪ್ತಿಯಾಗಿ ಬೀದಿಗೆ ಬಂದ ಅನ್ನುವವರ ಮುಂದೆ ಮುನ್ನೂರು ಕೋಟಿ ಖರ್ಚು ಮಾಡಿ ಮಗಳ ಮದುವೆ ಮಾಡಿ ಕುಟುಂಬ ಸಮೇತ ಹಾಡಿ ಕುಣಿಯುತ್ತಾನೆಂದರೆ ಅವನ ‘ಗುಡ್ ಟೈಂ’ ಹಿಂದೆ ಮೋದಿಯ ‘ಅಚ್ಚೇ ದಿನ್ ಕೆಲಸ ಮಾಡಿಲ್ಲ ಅನ್ನಲಿಕ್ಕಾಗುತ್ತಾ? ಅದೂ ಇಡೀ ದೇಶಕ್ಕೆ ದೇಶವೇ ಮೋದಿ ಮಾಡಿದ ‘ನೋಟ್‌ಬಂಧಿಯಿಂದ ದುಡ್ಡಿಗಾಗಿ ಪರದಾಡುತ್ತಿರುವ ಹೊತ್ತಲ್ಲಿ!

ರೆಡ್ಡಿ ಒಬ್ಬನೇ ಅಲ್ಲ, ಮೋದಿಯ ಅಚ್ಚೇ ದಿನ್‌ಗಳ ಫಾಯಿದೆ ಪಡೆದವರು ಬಹಳಷ್ಟು ಮಂದಿಯಿದ್ದಾರೆ. ಆದರೆ ಅವರೆಲ್ಲ ಈ ನೆಲದ ಸಿರಿವಂತರು, ಇಂಡಸ್ಟ್ರಿಯಲಿಸ್ಟುಗಳು, ಕಾರ್ಪೊರೇಟ್ ಕಂಪನಿಗಳು ಮಾತ್ರ! ಆಮ್ ಆದ್ಮಿಯ ಪಾಲಿಗೆ ಅಚ್ಚೇ ದಿನವೂ ಬರಲಿಲ್ಲ, ಹದಿನೈದು ಲಕ್ಷವೂ ಇಣುಕಿ ನೋಡಲಿಲ್ಲ. ಇದೇ ವರ್ಷ ಚೀನಾದ ಶಾಂಘೈ ಮೂಲದ ಹುರೂನ್ ಎಂಬ ಇಂಟರ್‌ನ್ಯಾಷನಲ್ ಅನಾಲಿಟಿಕಲ್ ಸಂಸ್ಥೆಯೊಂದು ಜಗತ್ತಿನ ಸಿರಿವಂತರ ಪಟ್ಟಿ ಬಿಡುಗಡೆ ಮಾಡಿತು. ಅದರ ಪ್ರಕಾರ ಕಳೆದ ಮೂರ್‍ನಾಲ್ಕು ವರ್ಷದಲ್ಲಿ ಇಂಡಿಯಾದ ಬಿಲಿಯನೇರುಗಳ ಆಸ್ತಿಗಳಿಕೆ ಶೇ.49ರಷ್ಟು ಹೆಚ್ಚಾಗಿದೆಯಂತೆ. ಅಂದಹಾಗೆ ಆ ಲಿಸ್ಟಿನಲ್ಲಿ ಸ್ಥಾನ ಪಡೆದ ಭಾರತದ ಬಿಲಿಯನೇರುಗಳ ಸಂಖ್ಯೆ 131. ಅಂದರೆ 130 ಕೋಟಿ ಜನಸಂಖ್ಯೆಯಿರುವ ಭಾರತದಲ್ಲಿ ಕೇವಲ 131 ಜನರ ಆಸ್ತಿ ಮಾತ್ರ ರಾಕೆಟ್ ವೇಗದಲ್ಲಿ ಹೆಚ್ಚಾಗಿದೆ. ಈ ರಿಪೋರ್ಟು ಹೇಳುವ ಪ್ರಕಾರ ಮೋದಿ ಮಹಾತ್ಮರ ಚೆಡ್ಡಿ ದೋಸ್ತು ಅದಾನಿಯ ಆಸ್ತಿ ಕಳೆದ ಒಂದು ವರ್ಷದಲ್ಲೇ 109% ಜಾಸ್ತಿಯಾಗಿದೆಯಂತೆ! ಇನ್ನು ಅಂಬಾನಿ ಬ್ರದರ್‍ಸ್‌ಗಳದ್ದು, ಜಿಂದಾಲ್ ಕುಡಿಗಳದ್ದು, ಮಿತ್ತಲ್ ಕುಟುಂಬಗಳದ್ದು ಕೇಳೋದೆ ಬೇಡ. ದುರಂತವೆಂದರೆ ಮೋದಿ ಹೇಳಿದ್ದ ಅಚ್ಚೇ ದಿನ್ ಇವರೆಲ್ಲ ಆಸ್ತಿಗಳನ್ನು ಇಷ್ಟೆಲ್ಲ ಹೆಚ್ಚು ಮಾಡಿದ್ದರೂ, ಸುಮಾರು 60 ಕೋಟಿ ಬಡ ಭಾರತೀಯರ ಆದಾಯ ಈ ಅವಧಿಯಲ್ಲಿ ಏನಾಗಿದೆ ಎಂಬುದನ್ನು ನಾವು ಮರೆಯುವಂತಿಲ್ಲ.

ಒಟ್ಟಿನಲ್ಲಿ ಮೋದಿ ಮಹಾತ್ಮರ ಅಚ್ಚೇ ದಿನ್ ಜನಸಾಮಾನ್ಯರಿಗೆ ದಕ್ಕಲಿಲ್ಲ, ರೆಡ್ಡಿಯಂಥಾ, ಅಂಬಾನಿ-ಅದಾನಿಗಳಂಥ ಕಾಳಧನಿಕರಿಗೆ ‘ಗುಡ್ ಟೈಂ’ ರೂಪದಲ್ಲಿ ವಕ್ಕರಿಸಿಕೊಂಡಿದೆ ಅನ್ನೋದು ರೆಡ್ಡಿ ಮಾತಿನಿಂದಲೇ ದೃಢವಾಗುತ್ತೆ.

– ಗಿರೀಶ್ ತಾಳಿಕಟ್ಟೆ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕೇಂದ್ರದ ವಿಬಿ-ಜಿ ರಾಮ್ ಜಿಗೆ ಟಕ್ಕರ್ : ಪ. ಬಂಗಾಳದ ‘ಕರ್ಮಶ್ರೀ’ ಯೋಜನೆಗೆ ಮಹಾತ್ಮ ಗಾಂಧಿ ಹೆಸರಿಡುವುದಾಗಿ ಘೋಷಿಸಿದ ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳ ಸರ್ಕಾರದ ಉದ್ಯೋಗ ಖಾತರಿ ಯೋಜನೆ 'ಕರ್ಮಶ್ರೀ'ಯನ್ನು ಮಹಾತ್ಮ ಗಾಂಧಿ ಹೆಸರಿನಲ್ಲಿ ಮರುನಾಮಕರಣ ಮಾಡುವುದಾಗಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗುರುವಾರ (ಡಿಸೆಂಬರ್ 18) ಘೋಷಿಸಿದ್ದಾರೆ. ನರೇಗಾ ಯೋಜನೆಯಿಂದ ಮಹಾತ್ಮಾ ಗಾಂಧಿಯವರ ಹೆಸರನ್ನು ಕೈಬಿಟ್ಟಿರುವುದಕ್ಕೆ...

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ: ಶಾಸಕ ಕುಣಿಗಲ್ ರಂಗನಾಥ್ ವಿರುದ್ಧ ಕೆ.ಎನ್. ರಾಜಣ್ಣ ವಾಗ್ದಾಳಿ

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ ಮಾಡುವುದನ್ನು ಮಾಜಿ ಸಹಕಾರಿ ಸಚಿವ ಕೆ.ಎನ್. ರಾಜಣ್ಣ ಗುರುವಾರ ಬಲವಾಗಿ ಸಮರ್ಥಿಸಿಕೊಂಡಿದ್ದಾರೆ. ಆಡಳಿತ ಪಕ್ಷದೊಳಗಿನ ಸಾರ್ವಜನಿಕ ಭಿನ್ನಾಭಿಪ್ರಾಯದ ನಡುವೆಯೂ, "ಸಂಘಗಳಿಗೆ ವಿತರಿಸಲಾದ ನಿಧಿ ಠೇವಣಿದಾರರ ಹಣ,...

ತನ್ನದೇ ಶಾಸಕರ ಅನರ್ಹತೆ ಕೋರಿ ಬಿಆರ್‌ಎಸ್‌ ಅರ್ಜಿ : ತಿರಸ್ಕರಿಸಿದ ತೆಲಂಗಾಣ ಸ್ಪೀಕರ್

ಆಡಳಿತಾರೂಢ ಕಾಂಗ್ರೆಸ್‌ಗೆ ನಿಷ್ಠೆ ಬದಲಾಯಿಸಿದ್ದಾರೆಂದು ಹೇಳಲಾದ ಹತ್ತು ಬಿಆರ್‌ಎಸ್ ಶಾಸಕರನ್ನು ಅನರ್ಹಗೊಳಿಸುವಂತೆ ಕೋರಿದ್ದ ಅರ್ಜಿಗಳ ಪೈಕಿ ಐದು ಅರ್ಜಿಗಳನ್ನು ತೆಲಂಗಾಣ ವಿಧಾನಸಭೆಯ ಸ್ಪೀಕರ್ ಗದ್ದಂ ಪ್ರಸಾದ್ ಕುಮಾರ್ ಬುಧವಾರ (ಡಿಸೆಂಬರ್ 18) ತಿರಸ್ಕರಿಸಿದ್ದಾರೆ....

ಸಾಮಾಜಿಕ ಬಹಿಷ್ಕಾರ, ದ್ವೇಷ ಭಾಷಣ ತಡೆ ವಿಧೇಯಕಗಳು ವಿಧಾನಸಭೆಯಲ್ಲಿ ಅಂಗೀಕಾರ

ಕರ್ನಾಟಕ ಸಾಮಾಜಿಕ ಬಹಿಷ್ಕಾರ (ಪ್ರತಿಬಂಧ, ನಿಷೇಧ ಮತ್ತು ಪರಿಹಾರ) ವಿಧೇಯಕ-2025 ಗುರುವಾರ (ಡಿ.18) ವಿಧಾನಸಭೆಯಲ್ಲಿ ಸರ್ವಾನುಮತದ ಅಂಗೀಕಾರಗೊಂಡಿತು. ಬೆಳಗಾವಿ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ವಿಧಾನಮಂಡಲ ಅಧಿವೇಶನದ ವಿಧಾನಸಭೆ ಕಲಾಪದಲ್ಲಿ ಸಮಾಜ ಕಲ್ಯಾಣ ಇಲಾಖೆ...

ಆಕ್ರಮಿತ ಪೂರ್ವ ಜೆರುಸಲೆಮ್ ವಸಾಹತು ಪ್ರದೇಶದಲ್ಲಿ 9000 ವಸತಿ ಘಟಕಗಳ ಯೋಜನೆ ಮುಂದಿಟ್ಟ ಇಸ್ರೇಲ್ 

ಆಕ್ರಮಿತ ಪೂರ್ವ ಜೆರುಸಲೆಮ್‌ನಲ್ಲಿರುವ ಕೈಬಿಟ್ಟ ಖಲಾಂಡಿಯಾ ವಿಮಾನ ನಿಲ್ದಾಣದ ಸ್ಥಳ ಬಳಿ ಅಕ್ರಮ ವಸಾಹತು ಪ್ರದೇಶದಲ್ಲಿ ಸುಮಾರು 9,000 ಹೊಸ ವಸತಿ ಘಟಕಗಳನ್ನು ನಿರ್ಮಿಸಲು ಇಸ್ರೇಲಿ ಆಕ್ರಮಿತ ಅಧಿಕಾರಿಗಳು ಯೋಜನೆಗಳನ್ನು ರೂಪಿಸಲು ಸಜ್ಜಾಗಿದ್ದಾರೆ....

ವಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಲೋಕಸಭೆಯಲ್ಲಿ ‘ವಿಬಿ-ಜಿ ರಾಮ್ ಜಿ ಮಸೂದೆ’ ಅಂಗೀಕಾರ

ಪ್ರತಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಗುರುವಾರ (ಡಿ.18) ಲೋಕಸಭೆಯಲ್ಲಿ 'ವಿಕ್ಷಿತ್ ಭಾರತ್ ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕ ಮಿಷನ್ (ಗ್ರಾಮೀಣ್ ) (ವಿಬಿ-ಜಿ ರಾಮ್ ಜಿ) ಮಸೂದೆ ಅಂಗೀಕಾರಗೊಂಡಿತು. ಈ ಮಸೂದೆ 2005ರಲ್ಲಿ...

ರಾಹುಲ್ ಗಾಂಧಿ ಆಪ್ತ ಸಹಾಯಕನ ಪತ್ನಿ ಪ್ರಜ್ಞಾ ಸತವ್ ಕಾಂಗ್ರೆಸ್ ಎಂಎಲ್‌ಸಿ ಸ್ಥಾನಕ್ಕೆ ರಾಜೀನಾಮೆ; ಬಿಜೆಪಿ ಸೇರುವ ನಿರೀಕ್ಷೆ

ಕಾಂಗ್ರೆಸ್ಸಿಗ ಮತ್ತು ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರ ಆಪ್ತರಾಗಿದ್ದ ದಿವಂಗತ ರಾಜೀವ್ ಸತವ್ ಅವರ ಪತ್ನಿ ಸತವ್ ಬಿಜೆಪಿಗೆ ಸೇರುವ ನಿರೀಕ್ಷೆಯಿದೆ. ಮಹಾರಾಷ್ಟ್ರದ ಕಾಂಗ್ರೆಸ್ ನಾಯಕಿ ಪ್ರಜ್ಞಾ ಸತವ್ ಅವರು ಗುರುವಾರ...

ಭೂ ಕಬಳಿಕೆ ಆರೋಪ : ಸದನದಲ್ಲಿ ಚರ್ಚೆಗೆ ಸಿದ್ದ ಎಂದ ಸಚಿವ ಕೃಷ್ಣ ಬೈರೇಗೌಡ

"ಸದನದ ಸದಸ್ಯನಾಗಿ ನನ್ನ ಹಕ್ಕನ್ನು ಬಿಟ್ಟುಕೊಡಲು ಸಿದ್ದನಿದ್ದೇನೆ. ನನ್ನ ಬಗ್ಗೆ ಎತ್ತಿರುವ ವೈಯಕ್ತಿಕ ಆರೋಪದ ಬಗ್ಗೆ ಚರ್ಚೆಗೆ ಸಿದ್ದ" ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದರು. ಗುರುವಾರ (ಡಿ.18) ವಿಧಾನಸಭೆಯ ಶೂನ್ಯ ವೇಳೆಯಲ್ಲಿ, ವಿಧಾನಪರಿಷತ್...

ಡಿಸೆಂಬರ್ 15 ರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕಾಗಿ ಜಾಮಿಯಾ ಮಿಲಿಯಾ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯದಿಂದ ಶೋಕಾಸ್ ನೋಟಿಸ್‌

2019 ರಲ್ಲಿ ವಿದ್ಯಾರ್ಥಿಗಳ ಮೇಲಿನ ಹಿಂಸಾಚಾರ ನಡೆದು ಆರು ವರ್ಷಗಳು ತುಂಬಿದ್ದು, ಅದರ ವಾರ್ಷಿಕ ನೆನಪಿನಲ್ಲಿ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿದ್ಯಾರ್ಥಿಗಳು ಡಿಸೆಂಬರ್ 15 ರಂದು ಕ್ಯಾಂಪಸ್ ಒಳಗೆ ದೊಡ್ಡ ಪ್ರತಿಭಟನೆ ನಡೆಸಿದ್ದರು....

ಅಮೆರಿಕದ ಸುಂಕಗಳು ತಮಿಳುನಾಡಿನ ರಫ್ತು ಕೈಗಾರಿಕೆಗಳನ್ನು ಅಂಚಿಗೆ ತಳ್ಳುತ್ತವೆ: ಪ್ರಧಾನಿ ಮೋದಿಗೆ ಸಿಎಂ ಸ್ಟಾಲಿನ್ ಎಚ್ಚರಿಕೆ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಭಾರತದ ರಫ್ತಿನ ಮೇಲೆ ಅಮೆರಿಕ ವಿಧಿಸಿರುವ ಭಾರೀ ಸುಂಕಗಳು ರಾಜ್ಯದ ಕೆಲವು ಉದ್ಯೋಗ- ಕೈಗಾರಿಕೆಗಳನ್ನು ತೀವ್ರ ಬಿಕ್ಕಟ್ಟಿನತ್ತ...