HomeUncategorizedರೆಡ್ಡಿಯ ಗುಡ್ ಟೈಮ್ - ಮೋದಿಯ ಅಚ್ಚೆ ದಿನ್

ರೆಡ್ಡಿಯ ಗುಡ್ ಟೈಮ್ – ಮೋದಿಯ ಅಚ್ಚೆ ದಿನ್

- Advertisement -
- Advertisement -

‘ನೋಡಪಾ… ಕೆಟ್ಟ ಘಳಿಗೆಯಲ್ಲಿ ಏನೇನಾಗಿದೆಯೋ ಅದ್ನೆಲ್ಲಾ ಮರ್‍ತೊಗ್ಬಿಡು, ನನ್ನ ಟೈಮು ಈಗ ಚೆನ್ನಾಗಿ ಶುರುವಾಗಿದೆ.’
ರಾಯಚೂರು ರೂರಲ್ ಎಂಎಲ್‌ಎ ಬಸನಗೌಡರನ್ನು ಆಪರೇಷನ್ ಮಾಡಲು ಹೋಗಿದ್ದ ದಿ ಗ್ರೇಟ್ ಜೆನ್ನಿ ಅಲಿಯಾಸ್ ಜನಾರ್ಧನ ರೆಡ್ಡಿಯ ಡೀಲಿಂಗ್ ಡೈಲಾಗ್ ಇದು. ಇವಿಎಂ ಮಷೀನ್‌ಗಳ ಪಕಡ್ಬಂದಿಯೂ ಸೇರಿದಂತೆ ಮಾಡಬಾರದ ಮಸಲತ್ತುಗಳನ್ನೆಲ್ಲ ಮಾಡಿದ ಹೊರತಾಗಿಯೂ ಮ್ಯಾಜಿಕ್ ನಂಬರ್ ತಲುಪಲಾರದ ಅತಂತ್ರ ಸ್ಥಿತಿಯಲ್ಲಿ ಬಿಜೆಪಿಗೆ ಜನಾರ್ಧನ ರೆಡ್ಡಿಯ ಆಸರೆಯಲ್ಲದೆ ಮತ್ತೇನೂ ಬಾಕಿ ಉಳಿದಿರಲಿಲ್ಲ. ಸ್ವತಃ ಅಮಿತ್ ಶಾ, ಯಡ್ಯೂರಪ್ಪನವರ ಹೆಗಲಿಗೆ ಅಧಿಕಾರದ ಜೋಳಿಗೆ ನೇತುಹಾಕಿ ದಿಲ್ಲಿ ಸೇರಿಕೊಂಡು ರಿಮೋಟ್ ಹಿಡಿದು ಕೂತಮೇಲೆ ಪಾಪ, ರೆಡ್ಡಿಯಾದರು ಇನ್ನೇನು ಮಾಡಬೇಕಿತ್ತು. ಆದ್ರೆ ಇಲ್ಲಿ ನಾವೆಲ್ಲ ಗಮನಿಸಬೇಕಾದ ಮತ್ತೊಂದು ಅಂಶವಿದೆ. ಅದು ಜೆನ್ನಿ ರೆಡ್ಡಿಯ ಬಾಯಿಂದ ಹೊರಬಿದ್ದ ‘ನನ್ನ ಟೈಮು ಚೆನ್ನಾಗಿ ಶುರುವಾಗಿದೆ’ ಅನ್ನೋ ಸಂಗತಿ. ಇದು ಯಾಕಷ್ಟು imporatant ವಿಷಯವಾಗುತ್ತೆ ಅನ್ನೋದಕ್ಕೆ 2014ರ ಲೋಕಸಭಾ ಸಮರ ಕಣದಲ್ಲಿ ಮೋದಿ ಮಹಾತ್ಮರು ಉದುರಿಸಿದ್ದ ಡೈಲಾಗ್ ನೆನಪಿಸಿಕೊಳ್ಳಿ. ಅವತ್ತು ಹೋದಬಂದ ಕಡೆಯಲ್ಲೆಲ್ಲ ‘ಅಚ್ಚೇ ದಿನ್ ಆಯೇಗಾ, ಜರೂರ್ ಆಯೇಗಾ’ ಅಂತ ಮಹಾತ್ಮರು ಬಂಬಡಾ ಬಜಾಯಿಸಿದ್ದಕ್ಕೂ ಇವತ್ತು ರೆಡ್ಡಿಯಂತಹ ಮಾಫಿಯಾಗಳು ‘ನಮಗೆ ಗುಡ್ ಟೈಮ್ ಶುರುವಾಗಿದೆ’ ಅನ್ನೋದಕ್ಕೂ ಸಂಬಂಧ ಇರೋದು ಕಾಣಿಸುತ್ತೆ ಅಲ್ವಾ?

ಮೋದಿ ‘ಅಚ್ಚೇ ದಿನ್ ಅಂದಾಗ, ನಮ್ಮ ಬಡ ಬೋರೇಗೌಡಪ್ಪಗಳು ತಮ್ಮ ಮನೆಯ ದೀಪಕ್ಕೆ ಎಣ್ಣೆ ಬರುತ್ತೆ, ತಟ್ಟೆಗೆ ಅನ್ನ ಬಂದು ಬೀಳುತ್ತೆ, ಬೆಲೆಯೇರಿಕೆಯ ಗ್ರಾಫು ಕುಸಿಯುತ್ತೆ ಅಂತ ಕನಸು ಕಂಡಿದ್ದರು. ಆದರೆ ಮೋದಿಯ ಅಚ್ಚೇ ದಿನ್ ವಾಸ್ತವ ಅಂತಹ ಬೋರೇಗೌಡರಿಗಲ್ಲ, ಇಂಥಾ ಜನಾರ್ಧನ ರೆಡ್ಡಿಗಳಿಗೆ. ಇಲ್ಲದೇ ಹೋಗಿದ್ದರೆ, ಅನಾಮತ್ತು ಹದಿನಾರೂವರೆ ಸಾವಿರ ಕೋಟಿಯ ಅದಿರು ಲಫಡಾ ಕೇಸಿನಲ್ಲಿ
ನಂಬರ್1 ಆರೋಪಿಯಾಗಿ ಜೈಲು ಸೇರಿ, ಬೇಲ್‌ಡೀಲ್ ಕೇಸಲ್ಲಿ ಜಡ್ಜ್‌ಗೆ 10 ಕೋಟಿಯ ಬೇಲ್‌ಪೂರಿ ತಿನ್ನಿಸಲು ಹೋಗಿ ತಗಲಾಕ್ಕೊಂಡು ಜೈಲೂಟ ಭದ್ರ ಮಾಡಿಕೊಂಡಿದ್ದ ಜನಾರ್ಧನ ರೆಡ್ಡಿ ಬಿಜೆಪಿ ಅಧಿಕಾರಕ್ಕೆ ಬಂದು ಮೋದಿ ಪ್ರಧಾನಿಯಾಗುತ್ತಿದ್ದಂತೆಯೇ ಸುಲಭವಾಗಿ ಬೇಲ್ ಮೇಲೆ ಹೊರಬಂದು ನಿಟ್ಟುಸಿರು ಬಿಡುತ್ತಿರಲಿಲ್ಲ. ಸಿಬಿಐ ರೇಡುಗಳಿಂದ ಇನ್ನು ರೆಡ್ಡಿಯ ಕಥೆ ಮುಗಿದೇಹೋಯ್ತು, ಅವನ ಆಸ್ತಿಯೆಲ್ಲ ಜಪ್ತಿಯಾಗಿ ಬೀದಿಗೆ ಬಂದ ಅನ್ನುವವರ ಮುಂದೆ ಮುನ್ನೂರು ಕೋಟಿ ಖರ್ಚು ಮಾಡಿ ಮಗಳ ಮದುವೆ ಮಾಡಿ ಕುಟುಂಬ ಸಮೇತ ಹಾಡಿ ಕುಣಿಯುತ್ತಾನೆಂದರೆ ಅವನ ‘ಗುಡ್ ಟೈಂ’ ಹಿಂದೆ ಮೋದಿಯ ‘ಅಚ್ಚೇ ದಿನ್ ಕೆಲಸ ಮಾಡಿಲ್ಲ ಅನ್ನಲಿಕ್ಕಾಗುತ್ತಾ? ಅದೂ ಇಡೀ ದೇಶಕ್ಕೆ ದೇಶವೇ ಮೋದಿ ಮಾಡಿದ ‘ನೋಟ್‌ಬಂಧಿಯಿಂದ ದುಡ್ಡಿಗಾಗಿ ಪರದಾಡುತ್ತಿರುವ ಹೊತ್ತಲ್ಲಿ!

ರೆಡ್ಡಿ ಒಬ್ಬನೇ ಅಲ್ಲ, ಮೋದಿಯ ಅಚ್ಚೇ ದಿನ್‌ಗಳ ಫಾಯಿದೆ ಪಡೆದವರು ಬಹಳಷ್ಟು ಮಂದಿಯಿದ್ದಾರೆ. ಆದರೆ ಅವರೆಲ್ಲ ಈ ನೆಲದ ಸಿರಿವಂತರು, ಇಂಡಸ್ಟ್ರಿಯಲಿಸ್ಟುಗಳು, ಕಾರ್ಪೊರೇಟ್ ಕಂಪನಿಗಳು ಮಾತ್ರ! ಆಮ್ ಆದ್ಮಿಯ ಪಾಲಿಗೆ ಅಚ್ಚೇ ದಿನವೂ ಬರಲಿಲ್ಲ, ಹದಿನೈದು ಲಕ್ಷವೂ ಇಣುಕಿ ನೋಡಲಿಲ್ಲ. ಇದೇ ವರ್ಷ ಚೀನಾದ ಶಾಂಘೈ ಮೂಲದ ಹುರೂನ್ ಎಂಬ ಇಂಟರ್‌ನ್ಯಾಷನಲ್ ಅನಾಲಿಟಿಕಲ್ ಸಂಸ್ಥೆಯೊಂದು ಜಗತ್ತಿನ ಸಿರಿವಂತರ ಪಟ್ಟಿ ಬಿಡುಗಡೆ ಮಾಡಿತು. ಅದರ ಪ್ರಕಾರ ಕಳೆದ ಮೂರ್‍ನಾಲ್ಕು ವರ್ಷದಲ್ಲಿ ಇಂಡಿಯಾದ ಬಿಲಿಯನೇರುಗಳ ಆಸ್ತಿಗಳಿಕೆ ಶೇ.49ರಷ್ಟು ಹೆಚ್ಚಾಗಿದೆಯಂತೆ. ಅಂದಹಾಗೆ ಆ ಲಿಸ್ಟಿನಲ್ಲಿ ಸ್ಥಾನ ಪಡೆದ ಭಾರತದ ಬಿಲಿಯನೇರುಗಳ ಸಂಖ್ಯೆ 131. ಅಂದರೆ 130 ಕೋಟಿ ಜನಸಂಖ್ಯೆಯಿರುವ ಭಾರತದಲ್ಲಿ ಕೇವಲ 131 ಜನರ ಆಸ್ತಿ ಮಾತ್ರ ರಾಕೆಟ್ ವೇಗದಲ್ಲಿ ಹೆಚ್ಚಾಗಿದೆ. ಈ ರಿಪೋರ್ಟು ಹೇಳುವ ಪ್ರಕಾರ ಮೋದಿ ಮಹಾತ್ಮರ ಚೆಡ್ಡಿ ದೋಸ್ತು ಅದಾನಿಯ ಆಸ್ತಿ ಕಳೆದ ಒಂದು ವರ್ಷದಲ್ಲೇ 109% ಜಾಸ್ತಿಯಾಗಿದೆಯಂತೆ! ಇನ್ನು ಅಂಬಾನಿ ಬ್ರದರ್‍ಸ್‌ಗಳದ್ದು, ಜಿಂದಾಲ್ ಕುಡಿಗಳದ್ದು, ಮಿತ್ತಲ್ ಕುಟುಂಬಗಳದ್ದು ಕೇಳೋದೆ ಬೇಡ. ದುರಂತವೆಂದರೆ ಮೋದಿ ಹೇಳಿದ್ದ ಅಚ್ಚೇ ದಿನ್ ಇವರೆಲ್ಲ ಆಸ್ತಿಗಳನ್ನು ಇಷ್ಟೆಲ್ಲ ಹೆಚ್ಚು ಮಾಡಿದ್ದರೂ, ಸುಮಾರು 60 ಕೋಟಿ ಬಡ ಭಾರತೀಯರ ಆದಾಯ ಈ ಅವಧಿಯಲ್ಲಿ ಏನಾಗಿದೆ ಎಂಬುದನ್ನು ನಾವು ಮರೆಯುವಂತಿಲ್ಲ.

ಒಟ್ಟಿನಲ್ಲಿ ಮೋದಿ ಮಹಾತ್ಮರ ಅಚ್ಚೇ ದಿನ್ ಜನಸಾಮಾನ್ಯರಿಗೆ ದಕ್ಕಲಿಲ್ಲ, ರೆಡ್ಡಿಯಂಥಾ, ಅಂಬಾನಿ-ಅದಾನಿಗಳಂಥ ಕಾಳಧನಿಕರಿಗೆ ‘ಗುಡ್ ಟೈಂ’ ರೂಪದಲ್ಲಿ ವಕ್ಕರಿಸಿಕೊಂಡಿದೆ ಅನ್ನೋದು ರೆಡ್ಡಿ ಮಾತಿನಿಂದಲೇ ದೃಢವಾಗುತ್ತೆ.

– ಗಿರೀಶ್ ತಾಳಿಕಟ್ಟೆ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಗಾಝಾದಲ್ಲಿ ರಕ್ತಸಿಕ್ತ ಈದ್: ಇಸ್ರೇಲ್ ಭೀಕರ ದಾಳಿಗೆ 26 ಪ್ಯಾಲೆಸ್ಟೀನಿಯನ್ನರು ಬಲಿ, ವಿಶ್ವಸಂಸ್ಥೆ ತೀವ್ರ ಆತಂಕ

ಗಾಝಾ: ಇಸ್ಲಾಂ ಧರ್ಮದ ಅತ್ಯಂತ ಪವಿತ್ರ ದಿನಗಳಲ್ಲಿ ಒಂದಾದ ‘ಈದ್ ಅಲ್-ಅಧಾ’ ಹಬ್ಬದ ಸಂದರ್ಭದಲ್ಲೂ ಗಾಝಾ ಪಟ್ಟಿಯಲ್ಲಿ ರಕ್ತಪಾತ ಮುಂದುವರಿದಿದ್ದು, ಹಬ್ಬದ ಮುನ್ನಾದಿನದಿಂದ ಆರಂಭಿಸಿ ಇಸ್ರೇಲ್ ಪಡೆಗಳು ನಡೆಸಿದ ಸರಣಿ ದಾಳಿಗಳಲ್ಲಿ ಕನಿಷ್ಠ...

ಜನರಿಗೆ ಇಂಧನ ಉಳಿಸುವ ಪಾಠ, ಪ್ರಧಾನಿಗೆ ರೋಡ್‌ಶೋಗಳ ಆಟ

ಮೇ 10 ರಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಸಾರ್ವಜನಿಕರಲ್ಲಿ ಮಿತವ್ಯಯದ ಅಪೀಲು ಮಾಡಿದ್ದು, ಇಂಧನ ಬಳಕೆಯನ್ನು ಕನಿಷ್ಠ ಮಟ್ಟಕ್ಕೆ ಇಳಿಸುವಂತೆ ಕೋರಿದ್ದರು. ಜನರು ಖಾಸಗಿ ವಾಹನಗಳ ಬಳಕೆಯನ್ನು ಬಿಟ್ಟು ಸಾರ್ವಜನಿಕ ಸಾರಿಗೆಯನ್ನು...

ಏಷ್ಯನ್ ಗೇಮ್ಸ್‌ ಟ್ರಯಲ್ಸ್‌ನಲ್ಲಿ ಸ್ಪರ್ಧಿಸಲು ವಿನೇಶ್ ಫೋಗಟ್‌ಗೆ ಅನುಮತಿಸಿದ ಭಾರತೀಯ ಕುಸ್ತಿ ಒಕ್ಕೂಟ

ಮಾಜಿ ವಿಶ್ವ ಚಾಂಪಿಯನ್‌ಶಿಪ್ ಪದಕ ವಿಜೇತೆ ವಿನೇಶ್ ಫೋಗಟ್ ಅವರು (ಮೇ 30) ಏಷ್ಯನ್ ಗೇಮ್ಸ್ ಆಯ್ಕೆ ಟ್ರಯಲ್ಸ್‌ನಲ್ಲಿ ಮಹಿಳೆಯರ 53 ಕೆಜಿ ವಿಭಾಗದಲ್ಲಿ ಸ್ಪರ್ಧಿಸಲು ಅವಕಾಶ ಪಡೆದಿದ್ದಾರೆ. ಭಾರತೀಯ ಕುಸ್ತಿ ಒಕ್ಕೂಟ...

Uttarakhand | ಬಜರಂಗದಳದ ಕಾರ್ಯಕರ್ತರು ಈಗ ದ್ವೇಷ ಬಿತ್ತುವ ವೃತ್ತಿಪರ ಇನ್‌ಫ್ಲ್ಯುಯೆನ್ಸರ್ಸ್!

ಈ ವರ್ಷದ ಆರಂಭದಲ್ಲಿ ಉತ್ತರಾಖಂಡದ ಕೋಟದ್ವಾರದಲ್ಲಿ ಹಿಂದುತ್ವ ಗುಂಪೊಂದು ವೃದ್ಧ ಮುಸ್ಲಿಂ ವ್ಯಕ್ತಿಯೊಬ್ಬರ ಅಂಗಡಿಗೆ ನುಗ್ಗಿ, ಅಂಗಡಿಯ ಹೆಸರಾದ ‘ಬಾಬಾ’ ಎಂಬುವುದನ್ನು ಬದಲಾಯಿಸುವಂತೆ ಒತ್ತಾಯಿಸಿತ್ತು. ‘ಬಾಬಾ’ ಎಂಬುವುದು ‘ಹಿಂದೂ’ ಹೆಸರಾಗಿದೆ ಎಂದು ಆ...

​ನಿಗಿ ನಿಗಿ ಕೆಂಡದಂತಾಗಿರುವ ಬಿಡದಿ, ಡಿಕೆಶಿಗೆ ಬಿಸಿ ತುಪ್ಪದಂತಾದ ರೈತರು

​ಬದಲಾದ ರಾಜಕೀಯ ಸಂದರ್ಭದಲ್ಲಿ ಕರ್ನಾಟಕದ ಮುಂದಿನ ಮುಖ್ಯಮಂತ್ರಿ ಎಂದೇ ಬಿಂಬಿತವಾಗಿರುವ ಡಿ.ಕೆ. ಶಿವಕುಮಾರ್ ಪ್ರತಿಷ್ಠೆಯಾಗಿ ತೆಗೆದುಕೊಂಡಿರುವ ಬಿಡದಿಯ ಟೌನ್‌ಶಿಪ್ ಯೋಜನೆಯ ವಿರುದ್ಧ ನಡೆಯುತ್ತಿರುವ ರೈತರ ಹೋರಾಟ ದಿನದಿಂದ ದಿನಕ್ಕೆ ಉಗ್ರ ರೂಪ ಪಡೆಯುತ್ತಿದೆ. ​ಭೂಸ್ವಾಧೀನದ...

ಪ್ರಜಾಪ್ರಭುತ್ವವನ್ನು ಹತ್ತಿಕ್ಕಲು ‘SIR’ ಅನ್ನೇ ಅಸ್ತ್ರವನ್ನಾಗಿಸಿಕೊಂಡ ನರೇಂದ್ರ ಮೋದಿ!

ಪಶ್ಚಿಮ ಬಂಗಾಳದ ವಿಧಾನಸಭಾ ಚುನಾವಣೆಯ ಫಲಿತಾಂಶ ಪ್ರಕಟವಾದ ತಕ್ಷಣ (ಮೇ 4 ರಂದು), ಕಾಳೀಘಾಟ್‌ನಲ್ಲಿರುವ ತಮ್ಮ ನಿವಾಸದಲ್ಲಿ ಸುದ್ದಿಗೋಷ್ಠಿ ನಡೆಸಿದ ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅತ್ಯಂತ ಆಕ್ರೋಶದಿಂದ ಮಾತನಾಡಿದ್ದರು. ಅಷ್ಟೇ ಅಲ್ಲದೆ,...

ಕೇರಳದಲ್ಲಿ ಶಾಲಾ ಬಾಲಕಿಯರಿಗೆ ಮೂರು ದಿನ ಮುಟ್ಟಿನ ರಜೆ, ಅಸಂಘಟಿತ ವಲಯದ ಮಹಿಳೆಯರಿಗೆ ಆರು ತಿಂಗಳ ಹೆರಿಗೆ ರಜೆ ಘೋಷಣೆ 

ತಿರುವನಂತಪುರಂ: ಕೇರಳದ ವಿ.ಡಿ. ಸತೀಶನ್ ನೇತೃತ್ವದ ಕಾಂಗ್ರೆಸ್ ಸರ್ಕಾರವು ಮಹಿಳೆಯರಿಗೆ ಹಲವಾರು ಕಲ್ಯಾಣ ಕ್ರಮಗಳನ್ನು ಘೋಷಿಸಿದೆ, ಇದರಲ್ಲಿ ಶಾಲಾ ವಿದ್ಯಾರ್ಥಿಗಳಿಗೆ ಮೂರು ದಿನಗಳ ಮಾಸಿಕ ಮುಟ್ಟಿನ ರಜೆ, ಕೆಲಸದ ಸ್ಥಳಗಳಲ್ಲಿ ಮಹಿಳೆಯರಿಗೆ ಸಮಾನ...

ಜಿರಳೆ ಜನತಾ ಪಕ್ಷದ ಖಾತೆಗೆ ನಿರ್ಬಂಧ; ದೆಹಲಿ ಹೈಕೋರ್ಟ್‌ನಿಂದ ಕೇಂದ್ರ-ಎಕ್ಸ್‌ಗೆ ನೋಟಿಸ್

ಜಿರಳೆ ಜನತಾ ಪಕ್ಷದ (ಸಿಜೆಪಿ) ಸಂಸ್ಥಾಪಕ ಅಭಿಜೀತ್ ದಿಪ್ಕೆ ಅವರು ತಮ್ಮ ಸಾಮಾಜಿಕ ಮಾಧ್ಯಮ ಖಾತೆಗಳನ್ನು ನಿರ್ಬಂಧಿಸಿದ್ದನ್ನು ಪ್ರಶ್ನಿಸಿ ಅರ್ಜಿ ಸಲ್ಲಿಸಿದ್ದು, ದೆಹಲಿ ಹೈಕೋರ್ಟ್ (ಮೇ 29) ಕೇಂದ್ರ ಸರ್ಕಾರ ಮತ್ತು ಸಾಮಾಜಿಕ...

“ದಲಿತ ಮುಖ್ಯಮಂತ್ರಿ” ಅರ್ಹರು ಯಾರಿಲ್ಲಿ?

ಸದ್ಯ ಕರ್ನಾಟಕದಲ್ಲಿ ಮುಖ್ಯಮಂತ್ರಿಗಳ ಬದಲಾವಣೆಗೆ ವೇದಿಕೆ ಸಜ್ಜುಗೊಂಡಿದೆ. ಸುಧೀರ್ಘಾವಧಿ ಮುಖ್ಯಮಂತ್ರಿಯಾಗಿ ಅಧಿಕಾರ ನಡೆಸಿದ ಅಹಿಂದ ರಾಜಕಾರಣದ ಕುರಿತು ಮಾತಾಡುತ್ತಿದ್ದ, ಸಮಾಜವಾದಿ ಹಿನ್ನೆಲೆಯ ಸಿದ್ದರಾಮಯ್ಯ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಡಿ.ಕೆ. ಶಿವಕುಮಾರ್‌ ಮುಖ್ಯಮಂತ್ರಿಯಾಗಿ...

‘ನಾನು ಪ್ರೀತಿ-ವಿಶ್ವಾಸಗಳಿಗೆ ತಲೆಬಾಗುವವನೇ ಹೊರತು ಒತ್ತಡ-ಪ್ರಭಾವಗಳಿಗೆ ಒಳಗಾಗುವವನಲ್ಲ’: ವಿದಾಯ ಭಾಷಣದಲ್ಲಿ ಸಿದ್ದರಾಮಯ್ಯ

ಹೈಕಮಾಂಡ್ ಯಾವಾಗ ಸೂಚಿಸುತ್ತದೆಯೋ ಆಗ ರಾಜೀನಾಮೆ ಕೊಡುತ್ತೇನೆ ಎಂದು ಹೇಳಿದ್ದ ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ 2026 ಮೇ 28 ರಂದು ಹೈಕಮಾಂಡ್ ಸೂಚನೆ ಮೇರೆಗೆ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಈ ಮೂಲಕ...