ಅಕ್ಟೋಬರ್ 7 ರಂದು ನಡೆಯುವ ಜರ್ಮನ್-ಭಾರತೀಯ ಸ್ಟಾರ್ಟಪ್ ಸಮಾವೇಶದಲ್ಲಿ ಸಂಸದ ತೇಜಸ್ವಿ ಸೂರ್ಯ ಅತಿಥಿ ಭಾಷಣಕಾರರಾಗಿದ್ದು, ಇದನ್ನು ವಿರೋಧಿಸಿ ಜರ್ಮನಿಯಲ್ಲಿರುವ ಭಾರತೀಯರು ಹ್ಯಾಂಬರ್ಗ್ನಲ್ಲಿರುವ ಭಾರತದ ರಾಯಭಾರಿಗೆ ಪತ್ರಬರೆದಿದ್ದಾರೆ.
ಸ್ಟಾರ್ಟಪ್ಗಳನ್ನು ಉತ್ತೇಜಿಸಲು ಮತ್ತು ಹ್ಯಾಂಬರ್ಗ್-ಭಾರತದ ನಡುವೆ ಆರ್ಥಿಕ ಸಂಬಂಧಗಳನ್ನು ಬೆಂಬಲಿಸುವ ಸಲುವಾಗಿ, ಅಕ್ಟೋಬರ್ 7 ರಂದು ಗ್ಲೋಮನ್ ಕನ್ಸಲ್ಟಿಂಗ್ GmbH ಸಹಭಾಗಿತ್ವದಲ್ಲಿ ಭಾರತದ ರಾಯಭಾರ ಕಛೇರಿ, “ಇಂಡಿಯಾ ಸ್ಟಾರ್ಟಪ್ ಕಾನ್ಫರೆನ್ಸ್- 2020” ಕಾರ್ಯಕ್ರಮವನ್ನು ನಡೆಸುತ್ತಿದೆ. ಈ ಕಾರ್ಯಕ್ರಮದ ಸಂಘಟಕರಿಗೆ ಪತ್ರ ಬರೆದಿರುವ ಜರ್ಮನ್ ಭಾರತೀಯರು, ಭಾಷಣಕಾರರ ಪಟ್ಟಿಯಲ್ಲಿರುವ ಹೆಸರಿನ ಪೈಕಿ, ಆರ್ಎಸ್ಎಸ್ನಿಂದ ಪ್ರೇರೇಪಿತವಾಗಿ ಪ್ರಚೋದನಕಾರಿ ಮತ್ತು ಕೋಮುವಾದಿ ಭಾಷಣಗಳನ್ನು ಮಾಡುವ ಬೆಂಗಳೂರಿನ ಸಂಸದ ತೇಜಸ್ವಿ ಸೂರ್ಯ ಅವರನ್ನು ಉಲ್ಲೇಖಿಸಿ ಆಕ್ಷೇಪಿಸಿದ್ದಾರೆ ಎಂದು “ಟು ಸರ್ಕಲ್ಸ್.ನೆಟ್” ವರದಿ ಮಾಡಿದೆ.
ಇದನ್ನೂ ಓದಿ: ಬಹುಜನ ಭಾರತ: ಕೋಮುವಾದದ ಇರುಳ ಸೀಳುವ ಬೆಳಕು ಭಗತ್
ಪತ್ರದಲ್ಲಿ ತಮ್ಮ ಜಾತ್ಯಾತೀತತೆಯ ಅಭಿಪ್ರಾಯಗಳನ್ನು ಉಲ್ಲೇಖಿಸಿ, “ಇದು ನಾವು ರಚಿಸುತ್ತಿರುವ ಭಾರತ. ಇಲ್ಲಿಯವರೆಗೆ ನೀವು ಬಿಂಬಿಸಿರುವ ಟೊಳ್ಳು ಜಾತ್ಯಾತೀತತೆ ಇನ್ನುಮುಂದೆ ಕೆಲಸ ಮಾಡುವುದಿಲ್ಲ” ಎಂದು ತೇಜಸ್ವಿ ಸೂರ್ಯ ಅವರನ್ನು ಉಲ್ಲೇಖಿಸಿ ತೀವ್ರವಾಗಿ ಪ್ರತಿಕ್ರಿಯಿಸಿದ್ದಾರೆ.
ಇದನ್ನೂ ಓದಿ: ತಿರುಪತಿ ವರ್ಸಸ್ ತಬ್ಲಿಘಿ: ಸಾಂಕ್ರಾಮಿಕದ ಕೋಮುವಾದೀಕರಣಕ್ಕೆ ಸ್ಪಷ್ಟ ಉದಾಹರಣೆ
ವಾಸ್ತವಿಕವಾಗಿ ಉಭಯ ದೇಶಗಳ ವ್ಯಾಪಾರ ಮತ್ತು ಹೂಡಿಕೆಗಳಲ್ಲಿ ಅಂತರಾಷ್ಟ್ರೀಯ ಸಹಕಾರವನ್ನು ಹೆಚ್ಚಿಸಲು ಸೃಷ್ಟಿಸಿರುವ ಈ ವೇದಿಕೆಯು ಪ್ಯಾನಲಿಸ್ಟ್ಗಳ ಅಧಿಕೃತ ರಿಜಿಸ್ಟರ್ ಸಂಸದರ ಹೆಸರನ್ನು ಹೊಂದಿದೆ. ಹಾಗಾಗಿ ಈ ಪತ್ರದಲ್ಲಿ ಭಾರತದ ರಾಯಭಾರಿಯ ನಿರ್ಧಾರವನ್ನು ಪ್ರಶ್ನಿಸಿರುವ ಜರ್ಮನ್ ಭಾರತೀಯರು, “ಭಾರತಿಯ ರಾಜಕಾರಣದ ಅತ್ಯಂತ ದೃವೀಕರಣ ಮನಸ್ಥತಿಯ ವ್ಯಕ್ತಿ, ಸರ್ವಧರ್ಮ ಸಮನ್ವಯ ಅಂತರ್ಗತವಾಗಿರುವ ಭಾರತದಿಂದ ಅತಿಥಿಯಾಗಲು ಸಾಧ್ಯವಿಲ್ಲ” ಎಂದು ಬರೆದಿದ್ದಾರೆ.
ಇದನ್ನೂ ಓದಿ: ಕೋಮುವಾದಿ ಪುಂಡರ ರಕ್ಷಿಸಲು ದ.ಕ.ಜಿಲ್ಲಾಧಿಕಾರಿಗಳ ವರ್ಗಾವಣೆ: ಸಿದ್ದರಾಮಯ್ಯ
ಮುಂದುವರಿದು, ” ಸಿಎಎ ವಿರುದ್ಧದ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಅಲ್ಪಸಂಖ್ಯಾತರನ್ನು ಅನಕ್ಷರಸ್ಥರು, ಪಂಕ್ಚರ್ ಹಾಕುವವರು ಎಂದು ಹೀಯಾಳಿಸಿ ಮಾತನಾಡಿದ್ದರು. ಈ ಬಿಜೆಪಿ ನಾಯಕ ಅಸಹ್ಯಕರ ಮತ್ತು ಅಮಾನವೀಯ ದೃಷ್ಟಿಕೋನಗಳನ್ನು ಹೊಂದಿದ್ದು, ಇಂತಹ ವಿವಾದಾತ್ಮಕ ವ್ಯಕ್ತಿಗೆ ಅಧಿಕೃತವಾಗಿ ವೇದಿಕೆಯೊಂದನ್ನು ನೀಡುತ್ತಿರುವುದು ಸರಿಯಲ್ಲ. ಇವರಿಗೆ ಅವಕಾಶ ನಿಡುವುದರಿಂದ ಜರ್ಮನ್ ನೆಲೆದಲ್ಲಿ ಮತ್ತಷ್ಟು ವಿಭಜನೆಯಾಗಿ ಬಲಪಂಥೀಯವಾದ ಹೆಚ್ಚಾಗುತ್ತದೆ” ಎಂದು ಉಲ್ಲೇಖಿಸಿದ್ದಾರೆ.
ಹಾಗಾಗಿ ಇದನ್ನು ವಿರೋಧಿಸಿ ಆನ್ಲೈನ್ ಅಭಿಯಾನವನ್ನು ಕೈಗೊಂಡಿರುವ ಇವರು ಸಮಾನಮನಸ್ಕರ ಬೆಂಬಲವನ್ನು ಕೊರಿದ್ದಾರೆ. ತೇಜಸ್ವಿ ಸೂರ್ಯ ಅವರ ಉಪಸ್ಥತಿಯನ್ನು ವಿರೋಧಿಸುವವರು ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ ನೋಂದಾತಯಿಸಿಕೊಳ್ಳಬಹುದು.
ಇದನ್ನೂ ಓದಿ: ಸಂಘರ್ಷವಿರುವುದು 99% ಭಾರತೀಯರು v/s 1% ಕೋಮುವಾದಿ ಗ್ಯಾಂಗ್ ನಡುವೆ – ದೇವನೂರ ಮಹಾದೇವ
https://bit.ly/36v6nFz
“ಯುರೋಪಿನಲ್ಲಿ ಸುರಕ್ಷಿತ ವಾತಾವರಣವನ್ನು ಕಾಪಾಡುವ ಸಲುವಾಗಿ ಇಂತಹ ಧೃವೀಕರಣದ ಘಟನೆಗಳನ್ನು ಅನುಮತಿಸಲು ಸಾಧ್ಯವಿಲ್ಲ. ಈ ಸಂದರ್ಭದಲ್ಲಿ ಸಂಸದರನ್ನು ಅತಿಥಿ ಭಾಷಣಕಾರರಾಗಿ ಆಯ್ಕೆ ಮಾಡಿದ್ದಕ್ಕಾಗಿ ಭಾರತೀಯ ಸಂಜಾತ ಯುರೋಪಿಯನ್ ವಲಸೆಗಾರರು ಭಾರತದ ರಾಯಭಾರ ಕಛೇರಿಯೊಂದಿಗೆ ಅಕ್ಷೇಪಣೆ ವ್ಯಕ್ತಪಡಿಸುವ ಮೂಲಕ ಪ್ರತಿಕ್ರಿಯಿಸಬೇಕೆಂದು ನಾವು ಕೋರುತ್ತೇವೆ. ನಾವು ಈ ಪತ್ರವನ್ನು ಹ್ಯಾಂಬರ್ಗ್ನ ಭಾರತೀಯ ರಾಯಭಾರ ಕಛೇರಿ ಮತ್ತು ಮಾನವ ಹಕ್ಕುಗಳ ಗುಂಪುಗಳಿಗೆ ಕಳುಹಿಸುತ್ತೇವೆ” ಎಂದು ಹೇಳಿದ್ದಾರೆ.
ಇದನ್ನೂ ಓದಿ: ಕೇಸೇ ಹಾಕಲು ಬರದ ವಕೀಲ ತೇಜಸ್ವಿ ಸೂರ್ಯ