ಆಂಧ್ರಪ್ರದೇಶದ ತಿರುಮಲದಲ್ಲಿರುವ ವೆಂಕಟೇಶ್ವರ ದೇವಸ್ಥಾನದ ಲೆಕ್ಕಪರಿಶೋಧನೆಯನ್ನು ಇನ್ನು ಮುಂದೆ ಸಿಎಜಿ ಮಾಡಲಿದ್ದಾರೆ ಎಂದು ತಿರುಮಲ ತಿರುಪತಿ ದೇವಸ್ಥಾನಂ (ಟಿಟಿಡಿ) ಮಂಡಳಿ ತಿಳಿಸಿದೆ. ಇಷ್ಟು ದಿನ ಆಂಧ್ರಪ್ರದೇಶ ರಾಜ್ಯ ಲೆಕ್ಕಪರಿಶೋಧನಾ ವಿಭಾಗವು ಲೆಕ್ಕಪರಿಶೋಧನಾ ವರದಿಗಳನ್ನು ನೋಡಿಕೊಳ್ಳುತ್ತಿತ್ತು.
ದೇಶದ ಅತ್ಯಂತ ಶ್ರೀಮಂತ ದೇವಾಲಯಗಳಲ್ಲಿ ಒಂದಾದ ತಿರುಮಲ ದೇವಸ್ಥಾನದ ಲೆಕ್ಕಪರಿಶೋಧನಾ ವರದಿಗಳನ್ನು ಈಗ ಭಾರತದ ಕಂಟ್ರೋಲರ್ ಮತ್ತು ಲೆಕ್ಕಪರಿಶೋಧಕ ಜನರಲ್ (ಸಿಎಜಿ) ಮಾಡಲಿದ್ದಾರೆ ಎಂದು ಟಿಟಿಡಿ ಮಂಡಳಿ ಬುಧವಾರ ತಿಳಿಸಿದೆ.
ಬಿಜೆಪಿ ರಾಜ್ಯಸಭಾ ಸಂಸದ ಸುಬ್ರಮಣಿಯನ್ ಸ್ವಾಮಿ, ದೇವಾಲಯಗಳನ್ನು ಸರ್ಕಾರದ ನಿಯಂತ್ರಣದಿಂದ ಮುಕ್ತಗೊಳಿಸಲು ಮತ್ತು ಕಳೆದ ಐದು ವರ್ಷಗಳಿಂದ ಟಿಟಿಡಿ ಖಾತೆಗಳ ಲೆಕ್ಕಪರಿಶೋಧನಾ ವರದಿಯನ್ನು ನೀಡುವಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿ ಎಂದು ಆಂಧ್ರಪ್ರದೇಶದ ಹೈಕೋರ್ಟ್ನಲ್ಲಿ ಸಲ್ಲಿಸಿರುವ ಅರ್ಜಿಯು ಇನ್ನು ಬಾಕಿ ಇರುವ ಸಮಯದಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.
ಇದನ್ನೂ ಓದಿ: ಪ್ರಧಾನಿ ಮೋದಿಯವರ ವೆಬ್ ಸೈಟ್ ನ ಅಧಿಕೃತ ಟ್ವಿಟರ್ ಖಾತೆ ಹ್ಯಾಕ್!; ತನಿಖೆ ನಡೆಸುತ್ತಿದ್ದೇವೆ.
ಟಿಟಿಡಿ ನಿರ್ಧಾರ ಬಗ್ಗೆ ಪ್ರತಿಕ್ರಿಯಿಸಿರುವ ಸುಬ್ರಮಣಿಯನ್ ಸ್ವಾಮಿ, ನಾನು ಮತ್ತು ನನ್ನ ಸಹವರ್ತಿ ಸತ್ಯಪಾಲ್ ಸಭರ್ವಾಲ್ ಕಳೆದ 5 ವರ್ಷಗಳಿಂದ ತಿರುಪತಿ ದೇವಾಲಯದ ನಿಧಿಯ ಸಿಎಜಿ ಲೆಕ್ಕಪರಿಶೋಧನೆಗೆ ಕೋರಿ ಆಂಧ್ರ ಹೈಕೋರ್ಟ್ನಲ್ಲಿ ಪಿಐಎಲ್ ಸಲ್ಲಿಸಿದ್ದೆವು. ಆಂಧ್ರ ಪ್ರದೇಶ ಸಿಎಂ ಜಗನ್ ಇದಕ್ಕೆ ಒಪ್ಪಿಗೆ ಸೂಚಿಸಿದ್ದರು. ಟಿಟಿಡಿ ಅಧ್ಯಕ್ಷರಾದ ಸುಬ್ಬಾ ರೆಡ್ಡಿ ಮತ್ತು ಸದಸ್ಯ ಮತ್ತು ವಿಎಚ್ಎಸ್ ಎಪಿ ನಾಯಕ ಗೋವಿಂದ್ ಹರಿ ಇದನ್ನು ಟಿಟಿಡಿ ಮಂಡಳಿಯ ಮೂಲಕ ಪ್ರಾಯೋಗಿಕವಾಗಿ ನಡೆಸಿದರು. ನನ್ನ ಕಾರ್ಯ ಪೂರ್ಣಗೊಂಡಿದೆ ಎಂದಿದ್ದಾರೆ.
My associate Satyapal Sabharwal and I had filed a PIL in Andhra HC seeking a CAG audit of Tirupati Temple funds for the last 5 years& hereafter. The CM Jagan gracefully consented. TTD Chm. Subba Reddy & Member & VHS AP leader Govind Hari piloted it thru TTD Board. Task complete!
— Subramanian Swamy (@Swamy39) September 2, 2020
ಈ ಕುರಿತು ವಕೀಲ ಸತ್ಯಪಾಲ್ ಸಭರ್ವಾಲ್ ಕೂಡ ಟ್ವೀಟ್ ಮಾಡಿದ್ದು, 5 ವರ್ಷಗಳಿಂದ ಸಿಎಜಿಯಿಂದ ಬಾಹ್ಯ ಲೆಕ್ಕಪರಿಶೋಧನೆಗೆ ನಾನು ಪ್ರಾರ್ಥಿಸುತ್ತಿದ್ದೇನೆ. ಇದೊಂದು ಬೃಹತ್ ಗೆಲುವು ಎಂದಿದ್ದಾರೆ.
WP (PIL) was co-petitioned by Dr. @Swamy39 and I praying for an external audit by CAG for last 5 years.
Today, Tirumala Tirupati Devasthanam through Res No. 141 has agreed and requested the State to conduct the audit & file affidavit in Court. Huge Win.
(Resolution attached) pic.twitter.com/5t6AEWnvRL
— Satya Sabharwal (@satyasabharwal) September 2, 2020
ಟಿಟಿಡಿ ಅಧ್ಯಕ್ಷ ವೈ.ವಿ ಸುಬ್ಬಾ ರೆಡ್ಡಿ ಅಂಗೀಕರಿಸಿದ 202 ಪುಟಗಳ ನಿರ್ಣಯದಲ್ಲಿ 2020-2021 ರಿಂದ ಟಿಟಿಡಿಯ ಲೆಕ್ಕಪರಿಶೋಧನೆಯನ್ನು ಸಿಎಜಿಗೆ ವಹಿಸಲು ಮಂಡಳಿ ನಿರ್ಧರಿಸಿದೆ.
ಜೊತೆಗೆ 2014-2015 ರಿಂದ 2019-2020 ರವರೆಗಿನ ಲೆಕ್ಕಪರಿಶೋಧನಾ ವರದಿಯನ್ನು ಈಗಾಗಲೇ ರಾಜ್ಯ ಲೆಕ್ಕಪರಿಶೋಧನಾ ಇಲಾಖೆ ಪೂರ್ಣಗೊಳಿಸಿರುವುದರಿಂದ, ಅದೇ ಅವಧಿಯ ವಿಶೇಷ ಲೆಕ್ಕಪರಿಶೋಧನೆಯನ್ನು ಕೈಗೆತ್ತಿಕೊಳ್ಳಲು ಮತ್ತು ಆರು ತಿಂಗಳೊಳಗೆ ತನ್ನ ವರದಿಯನ್ನು ನೀಡುವಂತೆ ಸಿಎಜಿಗೆ ಮನವಿ ಮಾಡಲು ಮಂಡಳಿ ರಾಜ್ಯ ಸರ್ಕಾರವನ್ನು ಕೋರಿದೆ.
ಟಿಟಿಡಿ ದೇವಸ್ಥಾನದಲ್ಲಿ ಸಂಪೂರ್ಣ ಪಾರದರ್ಶಕತೆ ಇರಬೇಕು ಎಂದು ಮುಖ್ಯಮಂತ್ರಿ ಅಭಿಪ್ರಾಯಪಟ್ಟಿದ್ದಾರೆ. ಮಾಜಿ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಈ ವಿಷಯದಲ್ಲಿ ಏನೂ ಮಾಡಿಲ್ಲ. ಈಗ ನಮಗೆ ಹೊಸ ಮುಖ್ಯಮಂತ್ರಿ ಇದ್ದಾರೆ. ಕಳೆದ ಐದು ವರ್ಷಗಳಿಂದ ತಿರುಮಲ ದೇವಸ್ಥಾನದ ಖಾತೆಗಳನ್ನು ಲೆಕ್ಕಪರಿಶೋಧಿಸಲು ಸಿಎಜಿ ಅಥವಾ ಇನ್ನಿತರ ಸ್ವತಂತ್ರ ಸಂಸ್ಥೆಗೆ ಅವಕಾಶ ನೀಡುವಂತೆ ನಾನು ಕೇಳುತ್ತಿದ್ದೇನೆ ಮತ್ತು ಭಕ್ತರು ಠೇವಣಿ ಇಟ್ಟ ಹಣಕ್ಕೆ ಏನಾಯಿತು ಎಂದು ನಮಗೆ ತಿಳಿಯಬೇಕಿದೆ ಎಂದಿದ್ದಾರೆ ಸುಬ್ಬಾ ರೆಡ್ಡಿ.
ಸದ್ಯ ಟಿಟಿಡಿ ಮಂಡಳಿಯು ತನ್ನ ನಿರ್ಧಾರವನ್ನು ತಿಳಿಸಿ ಹೈಕೋರ್ಟ್ಗೆ ಅಫಿಡವಿಟ್ ಕಳುಹಿಸುತ್ತದೆ. ಲೆಕ್ಕಪರಿಶೋಧನಾ ವರದಿಯಲ್ಲಿ ಸಾಮಾನ್ಯವಾಗಿ ದೇವಾಲಯದ ಎಲ್ಲಾ ಖಾತೆಗಳು, ಹಣದ ಬಳಕೆ ಮತ್ತು ಆಭರಣಗಳು ಸೇರಿದಂತೆ ಸಮಗ್ರ ವಿವರಗಳಿರುತ್ತವೆ.
ಇದನ್ನೂ ಓದಿ: ತಿರುಪತಿ ವರ್ಸಸ್ ತಬ್ಲಿಘಿ: ಸಾಂಕ್ರಾಮಿಕದ ಕೋಮುವಾದೀಕರಣಕ್ಕೆ ಸ್ಪಷ್ಟ ಉದಾಹರಣೆ