ಉತ್ತರ ಪ್ರದೇಶದ ಝಾನ್ಸಿ ನಗರದ ಸರ್ಕಾರಿ ಆಸ್ಪತ್ರೆಯಲ್ಲಿ ಕೊರೊನಾ ರೋಗಿಯೊಬ್ಬರು ಚಿತ್ರೀಕರಿಸಿದ ವಿಡಿಯೋ , ಸೋಮವಾರ ಅವರ ಮರಣದ ನಂತರ ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲ್ಪಟ್ಟಿದೆ. ಸರ್ಕಾರಿ ಆಸ್ಪತ್ರೆಗಳಲ್ಲಿ ಕೊರೊನಾ ರೋಗಿಗಳಿಗಿರುವ ಕೆಟ್ಟ ಸೌಲಭ್ಯಗಳಿಗೆ ಸಂಬಂಧಿಸಿದಂತೆ ಯೋಗಿ ಆದಿತ್ಯನಾಥ್ ಸರ್ಕಾರದ ವಿರುದ್ಧ ಟೀಕೆಗಳು ಕೇಳಿಬಂದಿವೆ.
52 ಸೆಕೆಂಡುಗಳ ವಿಡಿಯೋ ಝಾನ್ಸಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಕೋವಿಡ್ ವಾರ್ಡ್ಗೆ ಸಂಬಂಧಿಸಿದ್ದಾಗಿದೆ. ಈ ವಿಡಿಯೋ ಅವರು ಉಸಿರಾಡುವಾಗ ಹೆಣಗಾಡುತ್ತಿರುವದನ್ನು ತೋರಿಸುತ್ತದೆ. ಅವರ ಬಟ್ಟೆ ರಕ್ತದಲ್ಲಿ ನೆನೆದಿರುವಂತೆ ಕಂಡುಬರುತ್ತದೆ.
“ಇಲ್ಲಿ ನೀರಿಗಾಗಿ ಯಾವುದೇ ವ್ಯವಸ್ಥೆ ಇಲ್ಲ. ನನಗೆ ತುಂಬಾ ತೊಂದರೆಯಾಗಿದೆ. ಇಲ್ಲಿ ಯಾರೂ ಕಾಳಜಿ ತೋರುವುದಿಲ್ಲ, ಸಂಪೂರ್ಣ ನಿರ್ಲಕ್ಷ್ಯವಿದೆ. ಹಾಗಾಗಿ ನನ್ನನ್ನು ಬೇರೆ ಆಸ್ಪತ್ರೆಗೆ ವರ್ಗಾಯಿಸಿ” ಎಂದು ವ್ಯಕ್ತಿ ಹೇಳುತ್ತಿರುವುದು ದಾಖಲಾಗಿದೆ. ಕೊರೊನಾ ವಾರ್ಡ್ ತೋರಿಸಲು ಅವನು ಕ್ಯಾಮೆರಾವನ್ನು ತಿರುಗಿಸಿದಾಗ, ಆಸ್ಪತ್ರೆಯಲ್ಲಿ ಅವನ ಸುತ್ತ ಹಾಸಿಗೆಗಳ ಮೇಲೆ ರೋಗಿಗಳು ಮಲಗಿರುವುದನ್ನು ಕಾಣಬಹುದು.
ವಿಡಿಯೋ ಚಿತ್ರೀಕರಣ ಮತ್ತು ಅವರ ಸಾವಿನ ನಡುವಿನ ಸಮಯದ ಅಂತರ ಇನ್ನೂ ಸ್ಪಷ್ಟವಾಗಿಲ್ಲ. “ಅವರ ಪತ್ನಿ ಮತ್ತು ಮಗಳು ಸಹ ಕೊರೊನಾ ಸೋಂಕಿಗೆ ಒಳಗಾಗಿದ್ದಾರೆ. ಅವರನ್ನು ಝಾನ್ಸಿಯಲ್ಲಿರುವ ಮತ್ತೊಂದು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಝಾನ್ಸಿಯ ಮುಖ್ಯ ವೈದ್ಯಾಧಿಕಾರಿ ಜಿಕೆ ನಿಗಮ್ ಸೋಮವಾರ ಸಂಜೆ ಸುದ್ದಿಗಾರರಿಗೆ ತಿಳಿಸಿದ್ದಾರೆ.
@dmjhansi1 @CMOfficeUP @IgrangeJhansi @AnuraagJhansi Reality is far away from this social media campaign. Jhansi district Medical Infrastructure is completely on ventilator… Covid Patient Died today with this massage pic.twitter.com/xK4Mi4P8wK
— Amit Nagariya (@amit_nagariya) July 27, 2020
ವಿಡಿಯೋದಲ್ಲಿ ಮಾಡಿದ ಆರೋಪಗಳಿಗೆ ಮುಖ್ಯ ವೈದ್ಯಕೀಯ ಅಧಿಕಾರಿ ಪ್ರತಿಕ್ರಿಯಿಸಲಿಲ್ಲ. ಯುಪಿಯಲ್ಲಿ ಸರ್ಕಾರ ನಡೆಸುವ ಕೊರೊನಾ ಆರೈಕೆ ಕೇಂದ್ರಗಳಲ್ಲಿ ರೋಗಿಗಳಿಗೆ ಸರಿಯಾಗಿ ಚಿಕಿತ್ಸೆ ನೀಡುತ್ತಿಲ್ಲ ಎಂಬ ಆರೋಪದ ಸರಣಿ ವಿಡಿಯೋದಲ್ಲಿ ಇದು ಇತ್ತೀಚಿನದಾಗಿದೆ.
ಮತ್ತೊಂದು ಪ್ರಕರಣದಲ್ಲಿ, 57 ವರ್ಷ ವಯಸ್ಸಿನ ಕೊರೊನಾ ವೈರಸ್ ರೋಗಿಯೊಬ್ಬರು ಪ್ರಯಾಗರಾಜ್ ನಗರದ ಸರ್ಕಾರಿ ಆಸ್ಪತ್ರೆಯ ಹೊರಗಡೆ ಕ್ಯಾಮರಾದಲ್ಲಿ ಸಿಕ್ಕಿಬಿದ್ದಿದ್ದು, ಈ ಆಸ್ಪತ್ರೆಗೆ ದಾಖಲಾದ 24 ಗಂಟೆಗಳ ನಂತರ ಭಾನುವಾರ ಸಂಜೆ ಶವವಾಗಿ ಪತ್ತೆಯಾಗಿದ್ದಾರೆ. ಆಸ್ಪತ್ರೆಯಿಂದ ಕೇವಲ 500 ಮೀಟರ್ ದೂರದಲ್ಲಿರುವ ಪೊದೆಗಳಲ್ಲಿ ಅವರ ಶವ ಪತ್ತೆಯಾಗಿದೆ. ಅವರ ಕುಟುಂಬವು ಆಸ್ಪತ್ರೆಯ ನಿರ್ಲಕ್ಷ್ಯವೇ ಇದಕ್ಕೆ ಕಾರಣ ಎಂದು ಆರೋಪಿಸಿದೆ.
ಉಸಿರಾಟದ ತೊಂದರೆಯಿರುವ ಅವರನ್ನು ಶುಕ್ರವಾರ ಸಂಜೆ ಪ್ರಯಾಗರಾಜ್ನ ಸ್ವರೂಪ್ ರಾಣಿ ನೆಹರು ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಆಸ್ಪತ್ರೆಯಿಂದ ತಪ್ಪಿಸಿಕೊಳ್ಳುವ ಕೆಲವು ಗಂಟೆಗಳ ಮೊದಲು, ಶನಿವಾರ ಬೆಳಿಗ್ಗೆ ರೋಗಿಯು ತನಗೆ ತೊಂದರೆಯಾಗುತ್ತಿದೆ ಎಂದು ವೈದ್ಯರಿಗೆ ತಿಳಿಸಿದ್ದಾನೆ ಎಂದು ಅವರ ಕುಟುಂಬವು ಆಡಿಯೊ ಕ್ಲಿಪ್ ಅನ್ನು ಬಿಡುಗಡೆ ಮಾಡಿತು. ಆಸ್ಪತ್ರೆಯಲ್ಲಿ ಅವರ ದೂರುಗಳನ್ನು ತೆಗೆದುಕೊಂಡಿಲ್ಲ ಎಂದು ವರದಿಯಾಗಿದೆ.
“ರಾತ್ರಿಯಿಡೀ ನನ್ನ ಬಾಯಿ ಒಣಗಿತ್ತು. ನಾನು ವೆಂಟಿಲೇಟರ್ನಿಂದಾಗಿ ಉಸಿರುಗಟ್ಟಿದೆ ಎಂದು ಭಾವಿಸಿದೆ. ಸಹಾಯ ಮಾಡಲು ನಾನು ಇಲ್ಲಿ ಕೆಲವರಿಗೆ ಹೇಳಲು ಪ್ರಯತ್ನಿಸಿದೆ ಆದರೆ ಯಾರೂ ಕೇಳಿಸಿಕೊಳ್ಳಲಿಲ್ಲ” ಎಂದು ವ್ಯಕ್ತಿಯು ತನ್ನ ಸಂಭಾಷಣೆಯ ಉದ್ದೇಶಿತ ಆಡಿಯೊ ರೆಕಾರ್ಡಿಂಗ್ನಲ್ಲಿ ಹೇಳುವುದನ್ನು ಕೇಳಬಹುದು. ಕುಟುಂಬವು ಇದನ್ನು ಭಾನುವಾರ ಬಿಡುಗಡೆ ಮಾಡಿದೆ.
ಇದನ್ನೂ ಓದಿ: ರಾಜಸ್ಥಾನ: ಕಾಂಗ್ರೆಸ್ ವಿರುದ್ಧ ಮತ ಚಲಾಯಿಸಿ, ಇಲ್ಲ ಪಕ್ಷದ ಸದಸ್ಯತ್ವ ರದ್ದು – ಮಾಯಾವತಿ