Homeಕರೋನಾ ತಲ್ಲಣFAQ's: ಕೊರೊನಾ ವ್ಯಾಕ್ಸಿನ್: ನಿಮಗೆ ಗೊತ್ತಿರಬೇಕಾದ ಸಂಗತಿಗಳು

FAQ’s: ಕೊರೊನಾ ವ್ಯಾಕ್ಸಿನ್: ನಿಮಗೆ ಗೊತ್ತಿರಬೇಕಾದ ಸಂಗತಿಗಳು

- Advertisement -
- Advertisement -

ಕೊರೊನಾ ಸಾಂಕ್ರಾಮಿಕ ಬಿಕ್ಕಟ್ಟು ಭಾರತದಲ್ಲಿ ಬಿಗಡಾಯಿಸಿರುವ ಸಂದರ್ಭದಲ್ಲಿ, ಒಕ್ಕೂಟ ಸರ್ಕಾರ ಲಸಿಕಾ ಅಭಿಯಾನವನ್ನು ರಾಜ್ಯ ಸರ್ಕಾರಗಳಿಗೆ ವಹಿಸಿದೆ. ಲಸಿಕೆ ತೆಗೆದುಕೊಳ್ಳುವ ಬಗ್ಗೆ ಹಲವು ರೀತಿಯ ಗೊಂದಲಗಳು ನಾಗರಿಕರಲ್ಲಿ ಮನೆ ಮಾಡಿವೆ. ಆದುದರಿಂದ ಲಸಿಕೆ ಬಗ್ಗೆ ಇರುವ ಕೆಲವು ಪ್ರಾಥಮಿಕ ಪ್ರಶ್ನೆಗಳಿಗೆ ಹಲವು ಅಧಿಕೃತ ಮೂಲಗಳಿಂದ ವಿಷಯ ಸಂಗ್ರಹಿಸಿ ಉತ್ತರ ನೀಡುವುದಕ್ಕೆ ಇಲ್ಲಿ ಸಾಧ್ಯವಾದಷ್ಟು ಪ್ರಯತ್ನಿಸಲಾಗಿದೆ. ಇನ್ನೂ ಹೆಚ್ಚಿನ ಪ್ರಶ್ನೆಗಳು ಇದ್ದಲ್ಲಿ ನ್ಯಾಯಪಥ ಪತ್ರಿಕೆಯ ಈಮೇಲ್ ವಿಳಾಸಕ್ಕೆ ([email protected]) ಬರೆಯಿರಿ. ನುರಿತ ತಜ್ಞರಿಂದ ಅವಕ್ಕೆ ಉತ್ತರ ನೀಡುವ ಪ್ರಯತ್ನ ಮಾಡಲಾಗುವುದು.

1. ಭಾರತದಲ್ಲಿ ಮತ್ತು ಕರ್ನಾಟಕದಲ್ಲಿ ಸದ್ಯಕ್ಕೆ ನೀಡಲಾಗುತ್ತಿರುವ ಕೋವಿಡ್ ಲಸಿಕೆಗಳು ಯಾವುವು?
ಇಡೀ ಭಾರತದಲ್ಲಿ ಸದ್ಯಕ್ಕೆ ಕೋವಿಶೀಲ್ಡ್ ಮತ್ತು ಕೋವ್ಯಾಕ್ಸಿನ್ ಎಂಬ ಹೆಸರಿನ ಎರಡು ಲಸಿಕೆಗಳನ್ನು ನೀಡಲಾಗುತ್ತಿದೆ. ಈ ಲಸಿಕೆಗಳನ್ನು ತೆಗೆದುಕೊಳ್ಳುವ ಆಯ್ಕೆ ಸಾಮಾನ್ಯವಾಗಿ ನೀಡಲಾಗಿರುವುದಿಲ್ಲ. ನಾಗರಿಕರು ತಾವು ತೆರಳುವ ಆಸ್ಪತ್ರೆಯಲ್ಲಿ/ಲಸಿಕಾ ಕೇಂದ್ರದಲ್ಲಿ ಅಂದು ಲಭ್ಯವಿರುವ ಲಸಿಕೆಯನ್ನು ತೆಗೆದುಕೊಳ್ಳಬೇಕಾಗುತ್ತದೆ.

2. ಅನ್ಯ ದೇಶಗಳಲ್ಲಿ ಬಳಸಲಾಗುತ್ತಿರುವ ಲಸಿಕೆಗಳು ಭಾರತದಲ್ಲಿ ಲಭ್ಯವೇ?
ಇಂದಿಗೆ ಲಭ್ಯವಿರುವ ಮಾಹಿತಿಯಂತೆ ರಶ್ಯಾ ದೇಶದಲ್ಲಿ ಬಳಕೆಯಲ್ಲಿರುವ ಸ್ಪುಟ್ನಿಕ್ ಲಸಿಕೆ ಭಾರತದಲ್ಲಿ ಎಮರ್ಜೆನ್ಸಿ ಬಳಕೆಗಾಗಿ ಪರವಾನಗಿ ಸಿಕ್ಕಿದೆ. ಆದರೆ ಈ ಲಸಿಕೆಗಳು ಇನ್ನೂ ಲಭ್ಯವಾಗಿಲ್ಲ. ಕೆಲವು ರಾಜ್ಯಗಳು ಈ ಲಸಿಕೆಗಳಿಗೆ ಬೇಡಿಕೆಯಿಟ್ಟಿದ್ದು ಮೇ ತಿಂಗಳ ಮಧ್ಯ ಭಾಗದಲ್ಲಿ ಇದು ಲಭ್ಯವಾಗುವ ಸೂಚನೆಗಳಿವೆ.
ಸ್ಪುಟ್ನಿಕ್ ಲಸಿಕೆಯನ್ನು ಯುರೋಪಿಯನ್ ಯೂನಿಯನ್ ಅಥವಾ ಅಮೆರಿಕಾ ’ಫುಡ್ ಅಂಡ್ ಡ್ರಗ್ ಅಡ್ಮಿನಿಸ್ಟ್ರೇಷನ್ ಅಪ್ರೂವ್ ಮಾಡಿಲ್ಲ.

ಇನ್ನು ಅಮೆರಿಕದಲ್ಲಿ ವ್ಯಾಪಕವಾಗಿ ಬಳಸಲಾಗುತ್ತಿರುವ ಫೈಜರ್-ಬಯೋಎನ್‌ಟೆಕ್ ಸಂಸ್ಥೆಯ ಲಸಿಕೆಗಳು ಇನ್ನೂ ಭಾರತದಲ್ಲಿ ಲಭ್ಯವಿಲ್ಲ. ಮೇ 2, 2021ರಂದು ಆ ಸಂಸ್ಥಯೆ ಸಿಇಒ ಮತ್ತು ಚೇರ್ಮನ್ ಆಲ್ಬರ್ಟ್ ಬೌರ್ಲಾ ಅವರು ನೀಡಿದ ಒಂದು ವಿಡಿಯೋ ಮೆಸೇಜ್‌ನಲ್ಲಿ, ಸುಮಾರು 70 ಮಿಲಿಯನ್ ಡಾಲರ್ ಮೌಲ್ಯದ ಔಷಧಿಯನ್ನು ಕೋವಿಡ್ ರೋಗಿಗಳಗೆ ನೆರವಾಗಲು ಭಾರತಕ್ಕೆ ಉಚಿತವಾಗಿ ಕಳಿಸಿಕೊಡುತ್ತಿದ್ದೇವೆ ಎಂದಿದ್ದರು. ಆದರೆ ಭಾರತದಲ್ಲಿ ನಮ್ಮ ಲಸಿಕೆ ಬಳಕೆಗೆ ಸಾಧ್ಯವಾಗಲು ನಾವು ಬಹಳ ಹಿಂದೆಯೇ ಅರ್ಜಿ ಸಲ್ಲಿಸಿದ್ದರೂ ಇನ್ನು ಪರವಾನಗಿ ಸಿಕ್ಕದೆ ಇರುವುದು ದುರದೃಷ್ಟಕರ ಎಂದು ಕೂಡ ಅದೇ ವಿಡಿಯೋದಲ್ಲಿ ಅವರು ಹೇಳಿದ್ದಾರೆ.
ಈ ಲಸಿಕೆಯನ್ನು -70ಡಿಗ್ರೀ ಸೆಲ್ಸಿಯಸ್‌ನಲ್ಲಿ ಸಂಗ್ರಹಿಸಿ ಇಡಬೇಕಿರುವುದರಿಂದ ಅದರ ಲಾಜಿಸ್ಟಿಕ್ಸ್ ಸಮಸ್ಯೆಯೂ ಇದೆ ಎನ್ನುವುದು ಮತ್ತೊಂದು ಅಂಶ.

ಚೀನಾದಲ್ಲಿ ಸಿನೋಫರ್ಮ್ ಮತ್ತು ಸಿನೋವಾಕ್ ಎಂಬ ಲಸಿಕೆಗಳು, ಹಲವು ಪಶ್ಚಿಮ ದೇಶಗಳಲ್ಲಿ ಮಾಡರ್ನಾ, ಜಾನ್ಸನ್ ಅಂಡ್ ಜಾನ್ಸನ್ ಲಸಿಕೆಗಳು ಬಳಕೆಯಲ್ಲಿವೆ.
ಸದ್ಯಕ್ಕೆ ಇವ್ಯಾವುವೂ ಭಾರತದಲ್ಲಿ ಲಭ್ಯವಿಲ್ಲ.

3. ಕೋವ್ಯಾಕ್ಸಿನ್ ಬಗ್ಗೆ..
ಭಾರತದ ಜನಪ್ರಿಯ ಲಸಿಕಾ ಉತ್ಪಾದಕ ಸಂಸ್ಥೆ ಭಾರತ್ ಬಯೋಟೆಕ್ ಈ ಲಸಿಕೆಯನ್ನು ಸಿದ್ಧಪಡಿಸಿದೆ. ಸುಮಾರು 123 ರಾಷ್ಟ್ರಗಳಿಗೆ 16 ವಿಭಿನ್ನ ಲಸಿಕೆಗಳನ್ನು ರಫ್ತು ಮಾಡುವ ಅನುಭವ ಹೊಂದಿರುವ ಈ ಸಂಸ್ಥೆ ಭಾರತದ ನ್ಯಾಶನಲ್ ಇನ್ಸ್ಟಿಟ್ಯೂಟ್ ಆಫ್ ವೈರಾಲಜಿ ಪ್ರತ್ಯೇಕಿಸಿದ್ದ ಕೊರೊನಾವೈರಸ್ ಸ್ಯಾಂಪಲ್ ಬಳಸಿ ಈ ಲಸಿಕೆಯನ್ನು ಸಿದ್ಧಪಡಿಸಿದೆ.

ಸತ್ತ ಕೊರೊನಾ ವೈರಸ್‌ನಿಂದ ಮಾಡಿರುವ ಈ ಲಸಿಕೆಯನ್ನು ಮನುಷ್ಯನ ದೇಹಕ್ಕೆ ಇಂಜೆಕ್ಟ್ ಮಾಡಿದಾಗ, ಅದು ರೋಗನಿರೋಧಕಗಳನ್ನು ಉತ್ಪಾದಿಸುವಂತೆ ಪ್ರಚೋದಿಸುತ್ತದೆ. ಆದರೆ ಈ ಸತ್ತ ಬಲಹೀನ ವೈರಸ್‌ಗಳು ಸೋಂಕು ಹರಡುವುದಿಲ್ಲ.

ಈ ಲಸಿಕೆಯನ್ನು ಸುಮಾರು 2-8 ಡಿಗ್ರೀ ಸೆಂಟಗ್ರೇಡ್‌ನಲ್ಲಿ ಸಂರಕ್ಷಿಸಬೇಕಿದ್ದು, ನಾಲ್ಕು ವಾರಗಳ ಅಂತರದಲ್ಲಿ ಎರಡು ಡೋಸ್ ತೆಗೆದುಕೊಳ್ಳಬೇಕಿದೆ.

ಇದರ ಮೂರನೇ ಹಂತಹ ಟ್ರಯಲ್ ನಡೆಯುತ್ತಿರುವಾಗಲೇ ಈ ಲಸಿಕೆಯನ್ನು ತುರ್ತು ಪರಿಸ್ಥಿತಿಯಲ್ಲಿ ಬಳಸಲು ಜನವರಿಯಲ್ಲಿ ಅನುಮತಿಸಲಾಗಿದೆ.

ಅಡ್ಡಪರಿಣಾಮಗಳ ಬಗ್ಗೆ: ದೀರ್ಘಕಾಲಿಕ ಅಡ್ಡಪರಿಣಾಮಗಳೇನಾಗಬಹುದು ಇತ್ಯಾದಿ ಹಲವು ಸಂಗತಿಗಳು ಇನ್ನೂ ಶೋಧನೆಗೊಳಪಟ್ಟಿಲ್ಲ.

ಆದರೆ ಇದನ್ನು ತೆಗೆದುಕೊಂಡಾಗ ಜ್ವರ, ಮೈ ಕೈ ನೋವು, ಇಂಜೆಕ್ಷನ್ ತೆಗೆದುಕೊಂಡ ಜಾಗದಲ್ಲಿ ಉರಿಯೂತದ ಕಾರಣದಿಂದ ನೋವು ಇತ್ಯಾದಿಗಳು ಇರಲಿವೆ. ಇವುಗಳು ಪ್ರಾಥಮಿಕ ಆರೈಕೆಯಿಂದ ಸುಲಭವಾಗಿ ವಾಸಿಯಾಗುತ್ತವೆ.

4. ಕೋವಿಶೀಲ್ಡ್ ಬಗ್ಗೆ..
ಆಕ್ಸ್‌ಫರ್ಡ್ – ಆಸ್ಟ್ರಾಜೆನೆಕಾ ಸಂಸ್ಥೆಯ ಈ ಲಸಿಕೆಯನ್ನು ಭಾರತದಲ್ಲಿ ಸೀರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ ಉತ್ಪಾದಿಸುತ್ತಿದೆ.
ಅಡಿನೋವೈರಸ್ ಎಂಬ ಸಾಮಾನ್ಯ ನೆಗಡಿ ವೈರಸ್‌ಅನ್ನು ಬಲಹೀನಗೊಳಿಸಿ, ಅದನ್ನು ಬದಲಾಯಿಸಿ ಅದರೊಳಗೆ ಕೊರೊನಾ ವೈರಸ್‌ನ ಮುಳ್ಳಿನ ಪ್ರೋಟೀನ್ ಸೇರಿಸಿ ಈ ಲಸಿಕೆಯನ್ನು ಸಿದ್ಧಪಡಿಸಲಾಗಿದೆ.
ಇದನ್ನು ಮನುಷ್ಯರಿಗೆ ನೀಡಿದಾಗ ರೋಗನಿರೋಧಕತೆಯನ್ನು ಉದ್ದೀಪನಗೊಳಿಸುತ್ತದೆ. ಇದೂ ಕೂಡ ಎರಡು ಡೋಸ್‌ಗಳಲ್ಲಿ ತೆಗೆದುಕೊಳ್ಳಬೇಕಿದ್ದು, ನಾಲ್ಕರಿಂದ 12 ವಾರಗಳ ಅಂತರದಲ್ಲಿ ಎರಡನೇ ಡೋಸ್ ತೆಗೆದುಕೊಳ್ಳಬೇಕಿದೆ.
ಅಡ್ಡಪರಿಣಾಮಗಳ ಬಗ್ಗೆ: ಕೋವ್ಯಾಕ್ಸೀನ್‌ಗೆ ಇದ್ದಂತೆಯೇ..

5. ಸ್ಪುಟ್ನಿಕ್ ಬಗ್ಗೆ..
ಮಾಸ್ಕೋದ ಗೆಮೆಲಿಯಾ ಇನಸ್ಟಿಟ್ಯೂಟ್ ಸಿದ್ಧಪಡಿಸಿರುವ ಲಸಿಕೆ ಇದು. ಮೂರನೇ ಹಂತದ ಟ್ರಯಲ್ ಮುಗಿಸಿದ್ದು 92% ರಕ್ಷಣೆ ನೀಡುತ್ತದೆ ಎಂದು ಪ್ರತಿಪಾದಿಸಲಾಗಿದೆ.

ಇದೂ ಸಹಾ ಕೋವಿಶೀಲ್ಡ್‌ನಂತೆಯೇ ನೆಗಡಿ ವೈರಸ್‌ನೊಳಗೆ ಕೊರೊನಾವೈರಸ್‌ನ ತುಣುಕನ್ನು ಸೇರಿಸಿ ಮಾಡಿದ ವ್ಯಾಕ್ಸಿನ್ ಆಗಿದೆ. ಅದಕ್ಕೆ ದೇಹದಲ್ಲಿ ರೋಗನಿರೋಧಕತೆಯನ್ನು ಉಂಟು ಮಾಡುವುದರಿಂದ ಮುಂದೆ ಕೊರೊನಾ ವೈರಸ್ ದೇಹದೊಳಗೆ ಬಂದರೆ, ಅದನ್ನು ಗುರುತಿಸಿ ಪ್ರತಿರೋಧ ಒಡ್ಡುತ್ತದೆ.

ಇತರ ವ್ಯಾಕ್ಸಿನ್‌ಗಳಂತಲ್ಲದೇ, ಇಲ್ಲಿ 21 ದಿನಗಳ ಅಂತರದಲ್ಲಿ ನೀಡುವ ಎರಡು ಡೋಸ್‌ಗಳು ಭಿನ್ನವಾದುದಾಗಿರುತ್ತವೆ. ಅಂದರೆ ಮೊದಲ ಡೋಸ್ ಒಂದು ರೀತಿಯದ್ದು; ಎರಡನೇ ಡೋಸ್ ಇನ್ನೊಂದು ರೀತಿಯದ್ದು. ಎರಡೂ ಸಹಾ ಕೊರೊನಾ ವೈರಸ್‌ನ ಮುಳ್ಳು ಪ್ರೋಟೀನ್‌ಅನ್ನು ಹೊಂದಿರುತ್ತದಾದರೂ, ಅದನ್ನು ಹೊತ್ತುಕೊಳ್ಳುವ ಇನ್ನೊಂದು ವೈರಸ್‌ಅನ್ನು ಬೇರೆ ಬೇರೆಯಾಗಿ ಉಪಯೋಗಿಸಿರುತ್ತಾರೆ. ಇದರಿಂದ ಇನ್ನೂ ಹೆಚ್ಚಿನ ಪ್ರತಿರೋಧ ಶಕ್ತಿಯು ಒದಗುತ್ತದೆಂದು ಹೇಳಲಾಗಿದೆ.

ಹೈದರಾಬಾದ್ ಮೂಲದ ರೆಡ್ಡಿ ಲ್ಯಾಬೊರೇಟರೀಸ್ ಈ ಲಸಿಕೆಯ ಸುಮಾರು 12.5 ಕೋಟಿ ಡೋಸ್‌ಗಳನ್ನು ಆಮದು ಮಾಡಿಕೊಳ್ಳಲಿದೆ ಎಂದು ವರದಿಯಾಗಿದ್ದು, ನಿರ್ದಿಷ್ಟವಾಗಿ ಎಂದಿನಿಂದ ಮತ್ತು ಎಲ್ಲೆಲ್ಲಿ ಲಭ್ಯವಾಗಲಿದೆ ಎಂಬುದರ ಬಗ್ಗೆ ನಿಖರ ಮಾಹಿತಿಯಿಲ್ಲ.

6. ಲಸಿಕೆ ಯಾರ್ಯಾರು ತೆಗೆದುಕೊಳ್ಳಬಹುದು ಮತ್ತು ಅದಕ್ಕಾಗಿ ಎಲ್ಲಿಗೆ ಹೋಗಬೇಕು?
ಈಗ ಎಲ್ಲ ರಾಜ್ಯ ಸರ್ಕಾರಗಳು ಮೇ 1ರಿಂದ 18 ವರ್ಷಗಳ ಮೇಲ್ಪಟ್ಟ ತಮ್ಮ ನಾಗರಿಕರಿಗೆ ಲಸಿಕೆ ನೀಡಬಹುದೆಂದು ಕೇಂದ್ರ ಸರ್ಕಾರ ತಿಳಿಸಿದೆ. ಈ ನಿಟ್ಟಿನಲ್ಲಿ ಕರ್ನಾಟಕದಲ್ಲಿಯೂ ಮೇ 1ರಿಂದ ಹಲವು ಕಡೆ 18 ವರ್ಷ ಮೇಲ್ಪಟ್ಟವರಿಗೆ ಲಸಿಕೆ ಅಭಿಯಾನ ಪ್ರಾರಂಭವಾಗಬೇಕಿತ್ತು. ಆದರೆ ಇನ್ನೂ 45 ವರ್ಷಗಳ ಮೇಲಿನವರಿಗೇ ಎಲ್ಲರಿಗೂ ವ್ಯಾಕ್ಸೀನ್ ಲಭ್ಯವಾಗಿಲ್ಲದಿರುವುದರಿಂದ ಇದನ್ನು ಈಗಲೇ ಕೊಡುವುದಿಲ್ಲ ಎಂದು ಸರ್ಕಾರ ತಿಳಿಸಿದೆ.

ಅದನ್ನು ಜಾರಿಗೆ ತಂದ ನಂತರ 18 ವರ್ಷದ ಮೇಲ್ಪಟ್ಟ ಎಲ್ಲರೂ ಲಸಿಕೆ ಪಡೆಯಬಹುದಾಗಿದ್ದು ಅದಕ್ಕಾಗಿ ಹತ್ತಿರದ ಸರ್ಕಾರಿ ಅಥವಾ ಖಾಸಗಿ ಆಸ್ಪತ್ರೆಗೆ ತೆರಳಬಹುದಾಗಿದೆ. ಅದಕ್ಕೂ ಮೊದಲು ಕೋವಿನ್ ಪ್ಲಾಟ್‌ಫಾರ್ಮ್ ಅಥವಾ ಆರೋಗ್ಯ ಸೇತು ಆಪ್‌ನಲ್ಲಿ ನೊಂದಾಯಿಸಿಕೊಳ್ಳಬೇಕಿದೆ ಎಂದು ಸರ್ಕಾರ ತಿಳಿಸಿದೆ.

7. ಎರಡು ಡೋಸ್‌ಗಳು ಅಂದರೆ ಏನು? ಎರಡು ಡೋಸ್‌ಗಳು ಕೊಡುವುದು ಯಾತಕ್ಕಾಗಿ? ಎರಡೂ ಡೋಸ್‌ಗಳಲ್ಲೂ ಒಂದೇ ಅಂಶ ಇರುತ್ತದೆಯೇ? ಒಂದು ಡೋಸ್ ಒಂದು ವ್ಯಾಕ್ಸಿನ್ ತೆಗೆದುಕೊಂಡು ಮತ್ತೊಂದು ಡೋಸ್ ಬೇರೆಯ ಬ್ರಾಂಡ್ ಲಸಿಕೆ ತೆಗೆದುಕೊಳ್ಳಬಹುದೇ?
ಪೋಲಿಯೋ, ಡಿಪಿಟಿಯಂತೆಯೇ ಈ ವ್ಯಾಕ್ಸಿನ್ ಸಹಾ ಒಂದಕ್ಕಿಂತ ಹೆಚ್ಚು ಡೋಸ್ ಕೇಳುತ್ತದೆ. ಏಕೆಂದರೆ ಮೊದಲನೇ ಡೋಸ್‌ನಿಂದಲೇ ಅಗತ್ಯವಿರುವ ಪ್ರಮಾಣದ ರೋಗನಿರೋಧಕತೆ ಉತ್ಪತ್ತಿಯಾಗುವುದಿಲ್ಲ. ಸ್ಫುಟ್ನಿಕ್ ಬಿಟ್ಟು ಉಳಿದೆಲ್ಲಾ ವ್ಯಾಕ್ಸಿನ್‌ಗಳಲ್ಲೂ ಎರಡೂ ಡೋಸ್‌ಗಳಲ್ಲಿ ಒಂದೇ ರೀತಿಯ ಅಂಶ ಇರುತ್ತದೆ. ಒಂದು ಡೋಸ್ ವ್ಯಾಕ್ಸಿನ್ ಯಾವುದನ್ನು ತೆಗೆದುಕೊಂಡಿರುತ್ತೇವೋ ಅದನ್ನೇ ಎರಡನೇ ಬಾರಿಯೂ ತೆಗೆದುಕೊಳ್ಳಬೇಕು.

8. ವ್ಯಾಕ್ಸಿನ್ ತೆಗೆದುಕೊಂಡ ಮೇಲೂ ಕೊರೊನಾ ಸೋಂಕು ತಗುಲುವ ಸಾಧ್ಯತೆ ಇದೆಯೇ?
ಹಲವು ಲಸಿಕೆಗಳು ತಮ್ಮ ಯಶಸ್ಸಿನ ಪರಿಣಾಮವನ್ನು ವಿಭಿನ್ನ ರೀತಿಯಲ್ಲಿ ಹೇಳಿಕೊಂಡಿವೆ. ಫೈಜರ್ ಟ್ರಯಲ್‌ನಲ್ಲಿ 92% ಯಶಸ್ಸನ್ನು ಪ್ರತಿಪಾದಿಸಿದರೆ, ಕೋವಿಶೀಲ್ಡ್ ಯಶಸ್ಸು ಸುಮಾರು 76% ಎನ್ನಲಾಗುತ್ತದೆ.
ಅಂದರೆ ಲಸಿಕೆ ಹಾಕಿಸಿಕೊಂಡ ನಂತರವೂ ಸೋಂಕು ತಗಲುವ ಸಾಧ್ಯತೆ ಇದ್ದರೂ ಅದು ಬಹಳ ಕಡಿಮೆ, ಅದರ ತೀವ್ರತೆಯೂ ಕಡಿಮೆ ಇರುತ್ತದೆ ಎನ್ನಲಾಗುತ್ತದೆ. ಅಂದರೆ ಲಸಿಕೆಯಿಂದ ಒಟ್ಟಾರೆಯಾಗಿ ದೊರಕುವ ಲಾಭ ಅದರಿಂದ ಉಂಟಾಗುವ ಅಡ್ಡಪರಿಣಾಮಗಳಿಗಿಂತ ಹೆಚ್ಚಿರುವುದರಿಂದ ಇದನ್ನು ಶಿಫಾರಸ್ಸು ಮಾಡಲಾಗಿದೆ.

9. ಈಗ ಇರುವ ಸೌಲಭ್ಯದಲ್ಲಿ ಬಹುತೇಕ ನಾಗರಿಕರು ವ್ಯಾಕ್ಸಿನೇಟೇಡ್ ಆಗುವುದಕ್ಕೆ ಎಷ್ಟು ಸಮಯ ತೆಗೆದುಕೊಳ್ಳಬಹುದು?
ಇದರ ಬಗ್ಗೆ ನಿರ್ದಿಷ್ಟವಾಗಿ ಹೇಳಲಾಗದಾದರೂ, ಅತ್ಯದ್ಭುತವಾಗಿ ಎಲ್ಲವೂ ನಡೆದರೆ ಬಹುತೇಕರಿಗೆ ವ್ಯಾಕ್ಸೀನ್ ಕೊಡಲು ಈ ವರ್ಷದ ಕೊನೆಯವರೆಗೆ ಬೇಕಾಗಬಹುದು. ಆದರೆ ಆ ರೀತಿ ಸುಸೂತ್ರವಾಗಿ ಲಸಿಕೆ ಅಭಿಯಾನ ನಡೆಯುವ ಸಾಧ್ಯತೆ ಕಡಿಮೆ ಇದೆ.

10. ಯಾವುದಾದರೂ ನಿರ್ದಿಷ್ಟ ಸಂದರ್ಭಗಳಲ್ಲಿ (ಮಹಿಳೆಯರು ಪೀರಿಯಡ್ಸ್ ಸಮಯದಲ್ಲಿ, ಗರ್ಭಿಣಿಯರು, ಬಾಣಂತಿಯರು) ಲಸಿಕೆ ತೆಗೆದುಕೊಳ್ಳಬಾರದೇ?
ಗರ್ಭಿಣಿಯರು ಮತ್ತು ಬಾಣಂತಿಯರಲ್ಲಿ ಕೊರೊನಾ ವ್ಯಾಕ್ಸೀನ್‌ಅನ್ನು ಪೂರ್ಣವಾಗಿ ಪರಿಶೀಲಿಸಿಲ್ಲ. ಹಾಗಾಗಿ ಅದು ಸುರಕ್ಷಿತವೋ ಅಲ್ಲವೋ ಹೇಳಲು ಬರುವುದಿಲ್ಲ. ರಿಸ್ಕ್ ಆಧರಿಸಿ ತೀರ್ಮಾನ ಮಾಡಬೇಕಿದೆ. ಪೀರಿಯಡ್ಸ್‌ಗೂ ಇದಕ್ಕೂ ಸಂಬಂಧವಿಲ್ಲವಾದರೂ, ಸುಸ್ತು ಹೆಚ್ಚಾಗುವುದರಿಂದ ಸಾಧ್ಯವಿದ್ದರೆ ಮುಂದೂಡಿ ತೆಗೆದುಕೊಳ್ಳಬಹುದು.

11. ಲಸಿಕೆಯ ಮೊದಲನೇ ಡೋಸ್ ತೆಗೆದುಕೊಂಡ ನಂತರ ಕೊರೊನಾ ಸೋಂಕಿಗೆ ಒಳಗಾಗಿದ್ದರೆ ಎರಡನೇ ಡೋಸ್ ಅಗತ್ಯ ಇದೆಯೇ?
ಒಮ್ಮೆ ರೋಗಲಕ್ಷಣಗಳು ಇರುವಷ್ಟು ಪ್ರಮಾಣದಲ್ಲಿ ಕೊರೊನಾ ಬಂದವರಿಗೆ ಮತ್ತೆ ಕೊರೊನಾ ಬರುವ ಸಾಧ್ಯತೆ ಕಡಿಮೆ. ಆದರೆ ಇಲ್ಲವೇ ಇಲ್ಲವೆಂದು ಹೇಳಲಾಗದು. ಹಾಗಾಗಿ ಅವರು ವ್ಯಾಕ್ಸಿನ್ ಪಡೆಯಲು ಮಿಕ್ಕವರಿಗೆ ಮೊದಲು ಅವಕಾಶ ಮಾಡಿಕೊಟ್ಟರೆ ಒಳ್ಳೆಯದು. ಮೊದಲನೇ ಡೋಸ್ ತೆಗೆದುಕೊಂಡ ನಂತರ ಸೋಂಕು ಬಂದರೆ ಎರಡನೇ ಡೋಸ್ ಅಗತ್ಯವಿಲ್ಲ.


ಇದನ್ನೂ ಓದಿ: ‘ಮೋದಿಯೇ ಕೊರೋನಾ ಸೂಪರ್ ಸ್ಪ್ರೆಡರ್, 2ನೆ ಅಲೆಗೆ ಅವರೇ ಕಾರಣ’: ಭಾರತೀಯ ವೈದ್ಯಕೀಯ ಸಂಘದ ಉಪಾಧ್ಯಕ್ಷರ ಟೀಕೆ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ತೆಲಂಗಾಣ ಜಾತಿ ಸಮೀಕ್ಷೆ: ಜನರ ಆರ್ಥಿಕ ಭವಿಷ್ಯ ನಿರ್ಧರಿಸುತ್ತಿರುವ ಜಾತಿ ಹಿನ್ನೆಲೆ

ತೆಲಂಗಾಣದಲ್ಲಿರುವ ಎಲ್ಲಾ ಪರಿಶಿಷ್ಟ ಜಾತಿ ಕಾರ್ಮಿಕರಲ್ಲಿ ಸುಮಾರು ಅರ್ಧದಷ್ಟು ಜನರು ದಿನಗೂಲಿ ಕಾರ್ಮಿಕರು. ಆದರೆ, ಸಾಮಾನ್ಯ ಜಾತಿ ಕಾರ್ಮಿಕರಲ್ಲಿ 10 ರಲ್ಲಿ ಒಬ್ಬರು ಮಾತ್ರ ದಿನಗೂಲಿ ಮಾಡುತ್ತಾರೆ. ಬ್ರಾಹ್ಮಣರು ಎಸ್‌ಟಿ ಸಮುದಾಯದ ಕೋಲಂಗಿಂತ...

ಲೆಬನಾನ್‌ನಲ್ಲಿ ಯೇಸುವಿನ ಪ್ರತಿಮೆ ಧ್ವಂಸ ಮಾಡಿದ ಇಸ್ರೇಲಿ ಸೈನಿಕ; ಫೋಟೋ ವೈರಲ್

ಇಸ್ರೇಲಿ ಸೈನಿಕನೊಬ್ಬ ದಕ್ಷಿಣ ಲೆಬನಾನ್‌ನಲ್ಲಿ ಸ್ಲೆಡ್ಜ್ ಹ್ಯಾಮರ್‌ನಿಂದ ಯೇಸುಕ್ರಿಸ್ತನ ಪ್ರತಿಮೆಯನ್ನು ಧ್ವಂಸ ಮಾಡುತ್ತಿರುವುದನ್ನು ತೋರಿಸುವ ವೈರಲ್ ಚಿತ್ರದ ಸತ್ಯಾಸತ್ಯತೆಯನ್ನು ಇಸ್ರೇಲ್ ರಕ್ಷಣಾ ಪಡೆಗಳು (ಐಡಿಎಫ್‌) ದೃಢಪಡಿಸಿದ್ದು, ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಎಕ್ಸ್ ನಲ್ಲಿ 6.8...

TCS ನಾಸಿಕ್ ಪ್ರಕರಣ : ಮಾಧ್ಯಮಗಳ ಸುಳ್ಳು ಮತ್ತು ಕಂಪನಿ ಹೇಳಿದ ಸತ್ಯ

ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್‌) ಕಂಪನಿಯ ಬಿಪಿಒ ಘಟಕದಲ್ಲಿ ನಡೆದಿದೆ ಎನ್ನಲಾದ ಪ್ರಕರಣವೊಂದು ಪ್ರಸ್ತುತ ಇಡೀ ದೇಶದಾದ್ಯಂತ ಭಾರೀ ಚರ್ಚೆಯ ವಿಷಯವಾಗಿದೆ. ಈ ಪ್ರಕರಣದಲ್ಲಿ ಮುಖ್ಯವಾಗಿ ಲೈಂಗಿಕ ಕಿರುಕುಳ ಮತ್ತು...

‘ಅಮೆರಿಕದೊಂದಿಗೆ ಮಾತುಕತೆ ಇಲ್ಲ..’; ಇಸ್ಲಾಮಾಬಾದ್‌ ಸಭೆಯಲ್ಲಿ ಇರಾನ್ ಭಾಗವಹಿಸುವುದು ಅನುಮಾನ

ಯುನೈಟೆಡ್ ಸ್ಟೇಟ್ಸ್ (ಅಮೆರಿಕ) ಜೊತೆ ಹೊಸ ಸುತ್ತಿನ ಮಾತುಕತೆಗಾಗಿ ಇಸ್ಲಾಮಾಬಾದ್‌ಗೆ ಸಂಧಾನಕಾರರನ್ನು ಕಳುಹಿಸುವ ಯಾವುದೇ ಯೋಜನೆ ಇಲ್ಲ ಎಂದು ಇರಾನ್ ಸೂಚಿಸಿದೆ. ಕದನ ವಿರಾಮ ಮುಕ್ತಾಯಗೊಳ್ಳಲು 48 ಗಂಟೆಗಳ ಮೊದಲು ಯುದ್ಧ ನಿರತ...

ಇರಾನ್, ಇಸ್ರೇಲ್-ಅಮೆರಿಕ ಯುದ್ಧ : ವಿನಾಶದ ನಡುವೆಯೂ ಲಾಭ ಪಡೆದವರು ಯಾರು?

ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್‌) 2026ರ ಜಾಗತಿಕ ಬೆಳವಣಿಗೆಯ ಅಂದಾಜನ್ನು ಶೇಕಡ 3.3 ರಿಂದ 3.1ಕ್ಕೆ ಇಳಿಸಿದೆ. ಇರಾನ್ ವಿರುದ್ಧದ ಅಮೆರಿಕ-ಇಸ್ರೇಲ್ ಯುದ್ಧದ ಪರಿಣಾಮ ಮತ್ತು ಹಾರ್ಮುಝ್ ಜಲಸಂಧಿಯನ್ನು ಮುಚ್ಚಿರುವುದು ವಿಶ್ವ ಆರ್ಥಿಕತೆಯ...

ಕ್ಷೇತ್ರ ಮರುವಿಂಗಡಣೆ ವಿರುದ್ಧ ದಕ್ಷಿಣದ ರಾಜ್ಯಗಳ ಪಟ್ಟು: ಭವಿಷ್ಯದ ಮರುಚಿಂತನೆಗೆ ಇದುವೇ ಸೂಕ್ತ ಕಾಲ

ಲೋಕಸಭೆಯಲ್ಲಿ 131 ನೇ ಸಾಂವಿಧಾನಿಕ ತಿದ್ದುಪಡಿ ಮಸೂದೆಯನ್ನು ತಿರಸ್ಕರಿಸಿರುವುದು ಭಾರತದ ಪ್ರಜಾಪ್ರಭುತ್ವ ಪಥದಲ್ಲಿ ಮಹತ್ವದ ಕ್ಷಣವಾಗಿದೆ. ಇದು ಕೇವಲ ಶಾಸಕಾಂಗದ ಹಿನ್ನಡೆಯನ್ನು ಮಾತ್ರವಲ್ಲ, ಒಕ್ಕೂಟ ವ್ಯವಸ್ಥೆಯ ಸೂಕ್ಷ್ಮ ಸಮತೋಲನವನ್ನು ಹಾಳುಮಾಡುವ ಅಪಾಯವನ್ನುಂಟುಮಾಡುವ ಪ್ರಸ್ತಾಪಗಳ...

ಮೋದಿ ಸರ್ಕಾರದ ಯೂಟರ್ನ್ : ಜನಸಂಖ್ಯಾ ಸ್ಫೋಟದ ಕಳವಳದಿಂದ ಹೆಚ್ಚು ಜನಸಂಖ್ಯೆಯ ರಾಜ್ಯಗಳಿಗೆ ಗಿಫ್ಟ್ ಕೊಡುವವರೆಗೆ

ಭಾರತದ ಜನಸಂಖ್ಯೆಯ ಬಗ್ಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಅವರ ಸರ್ಕಾರ ನಿಜವಾಗಿಯೂ ಬಹಳ ಕಳವಳ ವ್ಯಕ್ತಪಡಿಸುತ್ತಿದೆ– ಅಥವಾ ಅವರು ನಮಗೆ ಆ ರೀತಿ ನಂಬುವಂತೆ ಮಾಡಿದ್ದಾರೆ. ಏಕೆಂದರೆ... 2019ರ ಸ್ವಾತಂತ್ರ್ಯ ದಿನಾಚರಣೆಯಂದು ಮೋದಿಯವರು,...

ದೇಶವನ್ನುದ್ದೇಶಿಸಿ ಮೋದಿ ಭಾಷಣ : ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆ

ಕ್ಷೇತ್ರ ಮರುವಿಂಗಡನೆಗೆ ಉದ್ದೇಶಿಸಿದ್ದ ಸಂವಿಧಾನದ 131ನೇ ತಿದ್ದುಪಡಿ ಮಸೂದೆಗೆ ಲೋಕಸಭೆಯಲ್ಲಿ ಸೋಲಾದ ಬೆನ್ನಲ್ಲೇ ಶನಿವಾರ (ಏ.18) ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಪ್ರತಿಪಕ್ಷಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ಸಂಸತ್ತಿನಲ್ಲಿ ವಿರೋಧ...

ಫ್ಯಾಕ್ಟ್‌ಚೆಕ್ : ಅತ್ಯಾಚಾರ ಅಪರಾಧಿ ಪರ ವಕೀಲೆಗೆ ಟಿಎಂಸಿಯಿಂದ ರಾಜ್ಯಸಭೆ ಸೀಟ್; ಬಿಜೆಪಿ ಆರೋಪದ ಸತ್ಯಾಸತ್ಯತೆ ಏನು?

ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಗೆ ಪಾಣಿಹತಿ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿರುವ ಆರ್‌ಜಿ ಕರ್‌ ಸಂತ್ರಸ್ತೆಯ ತಾಯಿ ಮತ್ತು ವಕೀಲೆ ಹಾಗೂ ತೃಣಮೂಲ ಕಾಂಗ್ರೆಸ್ (ಟಿಎಂಸಿ) ರಾಜ್ಯಸಭಾ ಸದಸ್ಯೆ ಮೇನಕಾ ಗುರುಸ್ವಾಮಿ ಅವರ ಎಐ-ರಚಿತ...

ತಾರತಮ್ಯ ಮುಕ್ತ ಕ್ಯಾಂಪಸ್ ನಿರ್ಮಾಣದತ್ತ ಮಹತ್ವದ ಹೆಜ್ಜೆ; ‘ರೋಹಿತ್ ವೇಮುಲ ಮಸೂದೆ’ಗೆ ಸಚಿವ ಸಂಪುಟ ಅನುಮೋದನೆ

ಕರ್ನಾಟಕ ಸರ್ಕಾರದ ಸಚಿವ ಸಂಪುಟ ಗುರುವಾರ (ಏ.16) ದಂದು ಕರ್ನಾಟಕ ರೋಹಿತ್ ವೇಮುಲ (ಹೊರಗಿಡುವಿಕೆ ಅಥವಾ ಅನ್ಯಾಯ ತಡೆಗಟ್ಟುವಿಕೆ) (ಶಿಕ್ಷಣ ಮತ್ತು ಘನತೆಯ ಹಕ್ಕು) ಮಸೂದೆ’ಗೆ ಅನುಮೋದನೆ ನೀಡಿದೆ. ಹೈದರಾಬಾದ್‌ನ ಕೆಂದ್ರೀಯ ವಿಶ್ವವಿದ್ಯಾಲಯದಲ್ಲಿ...