Homeಕರೋನಾ ತಲ್ಲಣ‘ಮೋದಿಯೇ ಕೊರೋನಾ ಸೂಪರ್ ಸ್ಪ್ರೆಡರ್, 2ನೆ ಅಲೆಗೆ ಅವರೇ ಕಾರಣ’: ಭಾರತೀಯ ವೈದ್ಯಕೀಯ ಸಂಘದ ಉಪಾಧ್ಯಕ್ಷರ...

‘ಮೋದಿಯೇ ಕೊರೋನಾ ಸೂಪರ್ ಸ್ಪ್ರೆಡರ್, 2ನೆ ಅಲೆಗೆ ಅವರೇ ಕಾರಣ’: ಭಾರತೀಯ ವೈದ್ಯಕೀಯ ಸಂಘದ ಉಪಾಧ್ಯಕ್ಷರ ಟೀಕೆ

- Advertisement -
- Advertisement -

ಭಾರತೀಯ ವೈದ್ಯಕೀಯ ಸಂಘದ (ಐಎಂಎ) ರಾಷ್ಟ್ರೀಯ ಉಪಾಧ್ಯಕ್ಷ ಡಾ.ನವಜೋತ್ ದಹಿಯಾ ಅವರು ಪ್ರಧಾನಿ ನರೇಂದ್ರ ಮೋದಿಯವರನ್ನು ಕೊರೋನಾ ‘ಸೂಪರ್ ಸ್ಪ್ರೆಡರ್’ ಎಂದು ಟೀಕಿಸಿದ್ದು ಕೋವಿಡ್ 2ನೆ ಅಲೆಗೆ ಮೋದಿಯವರೇ ಕಾರಣ ಎಂದು ಆರೋಪಿಸಿದ್ದಾರೆ.

“ವೈದ್ಯಕೀಯ ಸಮೂಹವು ಜನರಿಗೆ ಕಡ್ಡಾಯವಾದ ಕೋವಿಡ್ ಮಾನದಂಡಗಳನ್ನು ಅರ್ಥ ಮಾಡಿಸಲು ಶ್ರಮಿಸುತ್ತಿದ್ದರೆ, ಎಲ್ಲಾ ಕೋವಿಡ್ ಮಾರ್ಗಸೂಚಿಗಳನ್ನು ಗಾಳಿಯಲ್ಲಿ ತೂರುವ ದೊಡ್ಡ ರಾಜಕೀಯ ರ‍್ಯಾಲಿಗಳನ್ನು ನಡೆಸಲು ಪ್ರಧಾನಿ ಮೋದಿ ಹಿಂಜರಿಯಲಿಲ್ಲ” ಎಂದು ಡಾ ದಹಿಯಾ ದಿ ಟ್ರಿಬ್ಯೂನ್‌ಗೆ ತಿಳಿಸಿದ್ದಾರೆ.

ಆರೋಗ್ಯ ಬಿಕ್ಕಟ್ಟಿನ ತೀವ್ರತೆಯ ಹೊರತಾಗಿಯೂ, ಚುನಾವಣಾ ರ‍್ಯಾಲಿಗಳು ಮತ್ತು ಹರಿದ್ವಾರದಲ್ಲಿನ ಕುಂಭಮೇಳದಂತಹ ಧಾರ್ಮಿಕ ಸಭೆಗಳು ಮುಂದುವರೆದವು, ಇದು, ಮಾರಣಾಂತಿಕ ವೈರಸ್ ಹರಡುವುದನ್ನು ನಿಭಾಯಿಸಲು ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಗಂಭೀರತೆಯ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ ಎಂದು ಅವರು ಹೇಳಿದ್ದಾರೆ.

“ವೈದ್ಯಕೀಯ ಆಮ್ಲಜನಕದ ಕೊರತೆಯು ದೇಶದ ಪ್ರತಿಯೊಂದು ಭಾಗದಲ್ಲೂ ಅನೇಕ ರೋಗಿಗಳ ಸಾವಿಗೆ ಕಾರಣವಾಗಿದೆ, ಆಮ್ಲಜನಕ ಸ್ಥಾವರಗಳನ್ನು ಸ್ಥಾಪಿಸುವ ಹಲವಾರು ಯೋಜನೆಗಳು ಇನ್ನೂ ಕೇಂದ್ರ ಸರ್ಕಾರದಲ್ಲಿ ಬಾಕಿ ಉಳಿದಿವೆ, ಆದರೆ ಇಂತಹ ಪ್ರಮುಖ ಅಗತ್ಯಕ್ಕೆ ಮೋದಿ ಸರ್ಕಾರ ಯಾವುದೇ ಗಮನ ನೀಡಲಿಲ್ಲ’ ಎಂದು ದಹಿಯಾ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ದೇಶದ ಎಲ್ಲ ನಗರದ ಆಸ್ಪತ್ರೆಗಳಲ್ಲಿ ಭರ್ತಿಯಾಗುತ್ತಿರುವ ಶವಾಗಾರಗಳು ಮತ್ತು ಆಸ್ಪತ್ರೆಗಳ ಹೊರಗಿನ ಆಂಬುಲೆನ್ಸ್‌ಗಳ ಉದ್ದದ ಸಾಲುಗಳಲ್ಲಿ ಸಾಂಕ್ರಾಮಿಕ ರೋಗವು ದೇಶಾದ್ಯಂತ ಹರಡಿದ್ದು ಸ್ಪಷ್ಟವಾಗಿ ಗೋಚರಿಸುತ್ತದೆ ಎಂದು ಅವರು ಟ್ರಿಬ್ಯೂನ್‌ಗೆ ತಿಳಿಸಿದ್ದಾರೆ.

ತಮ್ಮ ವೈಫಲ್ಯವನ್ನು ಖಾಸಗಿ ವೈದ್ಯಕೀಯ ವಲಯ ಮತ್ತು ರಾಜ್ಯ ಸರ್ಕಾರಗಳಿಗೆ ವರ್ಗಾಯಿಸಲು ಯತ್ನಿಸಿದ ಪ್ರಧಾನಮಂತ್ರಿಯವರ ವಿರುದ್ಧ ಡಾ. ದಹಿಯಾ ಕಿಡಿ ಕಾರಿದ್ದಾರೆ.

“ಕೃಷಿ ಕಾನೂನುಗಳ ವಿರುದ್ಧ ನಿಂತ ರೈತರ ಆಂದೋಲನದ ವಿಷಯದಲ್ಲೂ, ಪ್ರಧಾನಿ ನರೇಂದ್ರ ಮೋದಿ ಅವರು ಯಾವುದೇ ರೀತಿಯಲ್ಲಿ ಜವಾಬ್ದಾರಿಯುತವಾಗಿ ಕಾರ್ಯನಿರ್ವಹಿಸಲಿಲ್ಲ. ರೈತರ ಸಮಸ್ಯೆಗಳನ್ನು ಪರಿಹರಿಸದೆ ರೈತರು ಬೃಹತ್ ಸಂಖ್ಯೆಯಲ್ಲಿ ಸೇರುವುದಕ್ಕೆ ಕಾರಣರಾದ ಮೋದಿ, ಕೋವಿಡ್ ಹರಡುವಿಕೆಯ ಸಾಧ್ಯತೆಯನ್ನು ಹೆಚ್ಚಿಸಿದರು ಎಂದು ದಹಿಯಾ ತಿಳಿಸಿದ್ದಾರೆ.

ಭಾರತದಲ್ಲಿ ಕೋವಿಡ್ ಎರಡನೇ ಅಲೆಯನ್ನು ಮೋದಿ ಮತ್ತು ಅವರ ಸರ್ಕಾರವು ನಿರ್ವಹಿಸುತ್ತಿರುವುದನ್ನು ಜಾಗತಿಕ ಸುದ್ದಿ ಸಂಸ್ಥೆಗಳು ವ್ಯಾಪಕವಾಗಿ ಟೀಕಿಸಿವೆ.
ಸದ್ಯ ದೈನಿಕ ಕೇಸುಗಳ ಸಂಖ್ಯೆ 3.6 ಲಕ್ಷವನ್ನು ದಾಟಿದೆ ಮತ್ತು ದೈನಿಕ ಸಾವುಗಳ ಸಂಖ್ಯೆ 3 ಸಾವಿರದಷ್ಟಿದೆ.


ಇದನ್ನೂ ಓದಿ: 8 ಸಾವುಗಳಾದರೂ ಎಚ್ಚೆತ್ತುಕೊಳ್ಳದ ಕೋಲಾರದ ಜಿಲ್ಲಾಸ್ಪತ್ರೆ: ಅಲ್ಲೆ ದಾಖಲಾಗಿರುವ ಮಹಿಳಾ ಮುಖಂಡೆ ವಿ.ಗೀತಾ ಆಕ್ರೋಶ…

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

3 COMMENTS

  1. Why not every district responsible person is suing against the district authority who suppose to control the religious. Election. Many other gatherings. They are the main responsible allowed the gathering

  2. Modi controlled election commission to have election in many phases to help them but failed to anticipate second wave.
    Even Pakistan has done better in controlling second wave of Covid-19.
    Now time has come to replace Modi govt and his supporters by responsibly voting for nation building people.

LEAVE A REPLY

Please enter your comment!
Please enter your name here

- Advertisment -

Must Read

2ಜಿ ತರಂಗಾಂತರ ತೀರ್ಪಿನ ಸ್ಪಷ್ಟನೆ ಕೋರಿದ್ದ ಕೇಂದ್ರದ ಅರ್ಜಿ ತಿರಸ್ಕರಿಸಿದ ಸುಪ್ರೀಂ ಕೋರ್ಟ್ ರಿಜಿಸ್ಟ್ರಿ

0
2ಜಿ ತರಂಗಾಂತರ ಹಂಚಿಕೆ ಪ್ರಕರಣಕ್ಕೆ ಸಂಬಂಧಪಟ್ಟಂತೆ 2012ರಲ್ಲಿ ನೀಡಿರುವ ತೀರ್ಪಿನ ಸ್ಪಷ್ಟನೆ ಕೋರಿ ಕೇಂದ್ರ ಸರ್ಕಾರ ಸಲ್ಲಿಸಿದ್ದ ಅರ್ಜಿಯನ್ನು ಸ್ವೀಕರಿಸಲು ಸುಪ್ರೀಂ ಕೋರ್ಟ್‌ನ ರಿಜಿಸ್ಟ್ರಾರ್ ನಿರಾಕರಿಸಿದ್ದಾರೆ. ಕೆಲ ಸಂದರ್ಭಗಳಲ್ಲಿ ಸಾರ್ವಜನಿಕ ಹರಾಜು ಹೊರತುಪಡಿಸಿ...