Homeಅಂಕಣಗಳುಸತ್ಯವ ನುಡಿಯುವ ದಿಟ್ಟತೆಗೆ ಪ್ರತೀಕವಾದ ಗೌರಿ ಲಂಕೇಶ್

ಸತ್ಯವ ನುಡಿಯುವ ದಿಟ್ಟತೆಗೆ ಪ್ರತೀಕವಾದ ಗೌರಿ ಲಂಕೇಶ್

- Advertisement -
- Advertisement -

| ವಾಸು.ಎಚ್.ವಿ |

ಒಂದುವೇಳೆ ಅಂದು ಪತ್ರಿಕೆಯ ತಯಾರಿಯ ಕೆಲಸ ಇರದೇ ಇದ್ದಿದ್ದರೆ, ನೋಟು ರದ್ದತಿಯ ಒಂದು ವರ್ಷದ ಪರಿಣಾಮಗಳ ಕುರಿತಂತೆ ಕಾರ್ಯಕ್ರಮ ರೂಪಿಸಲು ನಾವು ಬಸವನಗುಡಿಯ ಕಚೇರಿಯಲ್ಲೇ ಸಭೆ ಸೇರಬೇಕಾಗಿತ್ತು. ಮೇಡಂ (ಗೌರಿ ಲಂಕೇಶ್) ಹಿಂದಿನ ದಿನವೇ ‘ಮರೀ, ನಾಳೆ ಆಫೀಸಿನಲ್ಲಿ ಆಗಲ್ಲ, ಗುರುವಾರದ ನಂತರವಾದರೆ ಇಲ್ಲೇ ಮಾಡಿಕೊಳ್ಳಬಹುದು’ ಎಂದಿದ್ದರು. ಅಂದಿನ ಸಭೆಯಲ್ಲಿ ದಕ್ಷಿಣ ಬೆಂಗಳೂರಿನ ಕೆಲವರು ಇರಲೇಬೇಕಿದ್ದುದರಿಂದ, ರವೀಂದ್ರ ಕಲಾಕ್ಷೇತ್ರದ ಹಿಂಭಾಗದ ಸಂಸ ಬಯಲು ರಂಗಮಂದಿರದಲ್ಲಿ ಸೇರಿಕೊಂಡಿದ್ದೆವು. ಸಭೆ ಮುಗಿಸಿ ಹೊರಡುವ ಹೊತ್ತಿಗೆ ಮೇಡಂ ಹತ್ಯೆಯ ಷಾಕಿಂಗ್ ಸುದ್ದಿ ಗೊತ್ತಾಯಿತು.

ಭಾರೀ ದುಃಖ ಹಾಗೂ ಆತಂಕದಿಂದ ದೊಡ್ಡಿಪಾಳ್ಯ ನರಸಿಂಹಮೂರ್ತಿ ಮತ್ತು ನಾನು ಮೇಡಂ ಮನೆಯ ಕಡೆಗೆ ಹೊರಟೆವು. ನಮ್ಮ ಮುಂದಿನ ಸಾರ್ವಜನಿಕ ಕೆಲಸದ ಜವಾಬ್ದಾರಿಯ ಪ್ರಯಾಣವೂ ಇನ್ನು ಮುಂದೆ ಬೇರೆಯಾಗುತ್ತದೆಂಬ ಕಲ್ಪನೆ ಆಗ ನಮ್ಮಿಬ್ಬರಿಗೂ ಇರಲಿಲ್ಲ. ರಾಜರಾಜೇಶ್ವರಿ ನಗರದ ಮನೆಯ ಮುಂದೆ ಕಳೆದ ಕೆಲವು ಗಂಟೆಗಳಲ್ಲೇ ಮುಂದಿನ ಜವಾಬ್ದಾರಿ ಅರ್ಥವಾಗತೊಡಗಿತು. ಕಚೇರಿಯ ಸಿಬ್ಬಂದಿ ಅಲ್ಲಿಗೆ ಬಂದು ತಲುಪಿದಾಗ ಮರುದಿನ ಪತ್ರಿಕೆ ಮುದ್ರಣಕ್ಕೆ ಹೋಗಬೇಕೆಂಬುದು ನೆನಪಾಯಿತು.

ಅಲ್ಲಿಂದ ಆಚೆಗೆ ಹಲವು ಬೆಳವಣಿಗೆಗಳು ನಡೆದವು. ಅದುವರೆಗಿನ ನಮ್ಮ ಇತರ ಜವಾಬ್ದಾರಿಗಳಿಂದ ಸ್ವಲ್ಪ ಸ್ವಲ್ಪ ಬಿಡಿಸಿಕೊಂಡು, ಇದೀಗ ಪತ್ರಿಕೆಯ ನೊಗಕ್ಕೆ ಹೆಗಲು ಕೊಡುವ ಕೆಲಸವನ್ನು ಪತ್ರಿಕೆಯ ಹಿಂದಿನ ಸಿಬ್ಬಂದಿಯ ಜೊತೆಗೆ ನಾವೂ ಮಾಡುತ್ತಿದ್ದೇವೆ.

ಇದು ಹಿಂದಿನ ಗೌರಿ ಲಂಕೇಶ್ ಪತ್ರಿಕೆಯ ಯಥಾರೂಪವಲ್ಲ. ಸ್ವತಃ ಮೇಡಂ ಈಗ ಭೌತಿಕವಾಗಿ ಇಲ್ಲ. ಅವರ ಬದಲಿಗೆ ರಾಜ್ಯ ಮತ್ತು ದೇಶಗಳ ಗಡಿ ದಾಟಿ ಸತ್ಯ ನುಡಿಯುವ ದಿಟ್ಟತೆಗೆ ಪ್ರತೀಕವಾಗಿರುವ ಗೌರಿಯವರ ನೆನಪು ಹಾಗೂ ಬಲಿದಾನದ ಔನ್ನತ್ಯ ಇಲ್ಲೇ ನಮ್ಮೊಂದಿಗಿದೆ.

ಸೆಪ್ಟೆಂಬರ್ 12ರಂದು ನಡೆದ ಪ್ರತಿರೋಧ ಸಮಾವೇಶದ ಹೊತ್ತಿಗೇ ಅದು ಸ್ಪಷ್ಟವಾಗತೊಡಗಿತ್ತು. ಗೌರಿಯವರ ರೇಖಾಚಿತ್ರವೊಂದನ್ನು ಕಲಾವಿದ ವಿಜಯ್ ಮತ್ತು ಗೆಳೆಯರು ತಯಾರಿಸಿದ್ದರು. ಆ ಚಿತ್ರ ಎಲ್ಲೆಡೆ ಕಾಣತೊಡಗಿತ್ತು. ಬ್ಯಾನರ್, ಎದೆಬಿಲ್ಲೆ, ತಲೆಪಟ್ಟಿ ಹೀಗೆ. ಸಾವಿರಗಟ್ಟಲೇ ಸಂಖ್ಯೆಯಲ್ಲಿ ಬಂದವರೆಲ್ಲರ ಹೃದಯದಲ್ಲಿ, ಮನಸ್ಸಿನಲ್ಲಿ ಮಾತ್ರವಲ್ಲದೇ ಭೌತಿಕವಾಗಿಯೂ ಗೌರಿಯವರ ಫೋಟೋ ಎದ್ದು ಕಾಣುತ್ತಿತ್ತು. ಆ ದಿನದ ಮಟ್ಟಿಗಂತೂ ಎಲ್ಲೆಲ್ಲೂ ಕಾಣುವ ಚೆಗೆವಾರನ ಫೋಟೋದಂತೆ ಗೌರಿಯವರ ಚಿತ್ರ ಕಾಣುತ್ತಿತ್ತು. ಅಲ್ಲಿಂದಾಚೆಗೆ ದೇಶದ ಮತ್ತು ಪ್ರಪಂಚದ ನೂರಾರು ಕಡೆ ಗೌರಿಯವರ ಹತ್ಯೆಯನ್ನು ಖಂಡಿಸಿ ಪ್ರತಿಭಟನೆಗಳು ನಡೆದವು. ಎಲ್ಲೆಡೆ ಬೆಳೆಯುತ್ತಿದ್ದ ಬಲಪಂಥೀಯ ದಬ್ಬಾಳಿಕೆಯನ್ನು ವಿರೋಧಿಸುತ್ತಿದ್ದ ಪ್ರಜಾತಂತ್ರವಾದಿಗಳಿಗೆ ಗೌರಿ ತಮ್ಮ ಪ್ರತಿನಿಧಿ ಎನಿಸಿತು.

ಭಾರತವೆಂಬ ದೇಶದ ಕಲ್ಪನೆಗೇ ಅಪಾಯ ತಂದೊಡ್ಡಿದ್ದವರು ಸರ್ಕಾರ ಮತ್ತು ಸಮಾಜದಲ್ಲಿ ಪ್ರಾಬಲ್ಯ ಸಾಧಿಸುತ್ತಿದ್ದ ಬದಲಾಗುತ್ತಿದ್ದ ಕಾಲಘಟ್ಟವದು. ಅಂತಹ ಹೊತ್ತಿನಲ್ಲಿ ಸಾಮಾನ್ಯ ಜನರನ್ನೆಲ್ಲಾ ತಲುಪಬಹುದಾದ ಮಾಧ್ಯಮ, ಕಥನ, ಭಾಷೆ ಹಾಗೂ ಭಾವ ಏನಿರಬೇಕು ಎಂದು ಯೋಚಿಸುವ ನಿಟ್ಟಿನಲ್ಲಿ ಗೌರಿಯವರ ಪ್ರಯತ್ನ ಇರಲಿಲ್ಲ. ಅವರಷ್ಟೇ ಅಲ್ಲದೇ, ದೇಶದ ಬಹುತೇಕ ಪ್ರಜಾತಂತ್ರವಾದಿಗಳು ಅಂತಹ ಹುಡುಕಾಟಕ್ಕೆ ತೊಡಗಿರಲಿಲ್ಲ. ಭಾರತದ ಪ್ರಜಾತಂತ್ರ ವಿಸ್ತಾರಗೊಂಡ 60, 70, 80ರ ದಶಕದ ಪರಿಭಾಷೆಯೇ ಚಾಲ್ತಿಯಲ್ಲಿತ್ತು. ಆದರೆ, ಎಷ್ಟೋ ‘ದೊಡ್ಡವರು’ ಪ್ರತಿರೋಧದ ಗಟ್ಟಿ ದನಿಯನ್ನೂ ಮೊಳಗಿಸದೇ ಇದ್ದಾಗ ಗೌರಿ ಲಂಕೇಶ್ ಒಂದಿನಿತೂ ಹಿಂಜರಿಯಲಿಲ್ಲ. ಅದಕ್ಕಾಗಿ ಅವರೆಂದಿಗೂ ನಮಗೆ ಮಾದರಿಯಾಗಿ ನಿಲ್ಲುತ್ತಾರೆ. ಎರಡು ವರ್ಷದ ನಂತರವೂ ನಮ್ಮೆದೆಯೊಳಗೆ ಪ್ರತಿರೋಧದ ಪ್ರತೀಕ ಗೌರಿಯವರು ಮಾಸದೇ ಉಳಿದಿರುವುದೇ ಅದಕ್ಕೆ ಸಾಕ್ಷಿ.

‘ನಿನ್ನನ್ನು ಕೊಲ್ಲಬೇಕು’ ಎಂದು ಫೇಸ್‍ಬುಕ್‍ನಲ್ಲಿ ಬರೆದ ಯುವಕನಿಗೆ, ‘ಮಗೂ, ನನ್ನನ್ನು ಕೊಲ್ಲುವ ಮಾತನಾಡುತ್ತಿರುವ ನೀನೂ ನನ್ನ ಮಗನೇ. ಆದರೆ, ನಿನಗೆ ನಿನ್ನ ಚಿಂತನೆ ದೇಶವನ್ನು ಎಲ್ಲಿಗೆ ಕರೆದುಕೊಂಡು ಹೋಗಬಹುದು ಎಂಬ ವಾಸ್ತವದ ಅರಿವಿಲ್ಲ’ ಎಂದು ಪ್ರೀತಿಯಿಂದ ಬರೆದಿದ್ದ ಗೌರಿಯವರ ನಡೆ ಬಹುಶಃ ನಮಗೆ ದಾರಿ ತೋರಬಹುದು.
ಪತ್ರಿಕಾ ಸಂಸ್ಥೆಯ ಆರ್ಥಿಕ ಸ್ಥಿತಿ ಅತ್ಯಂತ ಸುಸ್ಥಿತಿಯಲ್ಲಿ ಎಂದೂ ಇಲ್ಲದಿದ್ದರೂ, ನಿರಂತರ ಶ್ರಮ ಹಾಗೂ ನೈತಿಕವಾದ ರೀತಿಯಲ್ಲಿಯೇ ಸಂಪನ್ಮೂಲ ಹೊಂದಿಸುವ ಒದ್ದಾಟದಲ್ಲೇ ಸಂಸ್ಥೆಯನ್ನು ನಡೆಸುತ್ತಾ ಬಂದ ಅವರ ನಿಲುವು ನಮ್ಮನ್ನು ಎಚ್ಚರಿಸುತ್ತಿರುತ್ತದೆ. ಜೂನ್ 2016ರಲ್ಲಿ ಮೇಡಂ ಇದ್ದಾಗಲೇ ತೀರ್ಮಾನಿಸಿದಂತೆ, ಪತ್ರಿಕೆಯೊಂದಿಗೆ ಇಂದಿನ ಅಗತ್ಯಕ್ಕೆ ತಕ್ಕಂತೆ ವೆಬ್ ಮತ್ತು ಇನ್ನಿತರ ಸಾಧ್ಯತೆಗಳಿಗೆ ಅಪ್‍ಡೇಟ್ ಆಗುವ ನಿಟ್ಟಿನಲ್ಲಿ ನಾವು ಸತತವಾಗಿ ಮುನ್ನಡೆಯುತ್ತಿರಬೇಕಿದೆ.

ನಿಂದಿಸುವ, ಅಪಪ್ರಚಾರಗಳನ್ನು ಮಾಡುವ, ದ್ವೇಷಿಸುವ ಜನರು, ಹಿತಶತ್ರುಗಳು ಅಂದೂ ಇದ್ದರು; ಮುಂದೆಯೂ ಇರುತ್ತಾರೆ. ಆದರೆ, ಅದು ಉನ್ನತ ಆಶಯದತ್ತ ಸಾಗಬೇಕಾದ ನಮ್ಮ ಸಂಕಲ್ಪವನ್ನು ಅಲುಗಾಡಿಸಬಾರದು. ಎಲ್ಲಕ್ಕಿಂತ ಮುಖ್ಯವಾಗಿ ಬದಲಾದ ಕಾಲಘಟ್ಟದಲ್ಲಿ ಬದಲಾಗಬೇಕಾದ ಮಾಧ್ಯಮದ ಸ್ವರೂಪ, ಪರಿಭಾಷೆಗಳು ಮತ್ತು ಕಥನದ ಕುರಿತು ಗಂಭೀರವಾಗಿ ಆಲೋಚಿಸಿ ಆ ನಿಟ್ಟಿನಲ್ಲಿ ಮುಂದಡಿಯಿಡಬೇಕಿದೆ. ಆ ದಿಕ್ಕಿನಲ್ಲಿ ನಮ್ಮಲ್ಲಿರುವ ಆಲೋಚನೆಗಳನ್ನು ನಿಮ್ಮೆಲ್ಲರಲ್ಲಿ ಹಂಚಿಕೊಳ್ಳುತ್ತೇವೆ. ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ಸಮಾಲೋಚನಾ ಸಭೆಗಳು, ಚರ್ಚಾಗೋಷ್ಠಿಗಳನ್ನು ಆಯೋಜಿಸಲು ಗೆಳೆಯರು ಉತ್ಸುಕತೆ ತೋರಿದ್ದಾರೆ. ಖುದ್ದಾಗಿ ಇಲ್ಲವೇ ಪತ್ರದ ಮುಖಾಂತರ ನಿಮ್ಮೆಲ್ಲರ ಜೊತೆ ನಡೆಯುವ ಸಂವಾದದಲ್ಲಿ, ನಿಮ್ಮ ಆಲೋಚನೆಗಳನ್ನೂ ಒಳಗೊಂಡು ನಮ್ಮ ಕರ್ತವ್ಯವನ್ನು ನಿಭಾಯಿಸುತ್ತೇವೆಂಬ ಭರವಸೆ ನೀಡಬಯಸುತ್ತೇವೆ.

ಮೇಡಂ ಇಲ್ಲವಾದ ಎರಡು ವರ್ಷದ ಈ ದಿನದಂದು ನಮ್ಮ ಜವಾಬ್ದಾರಿ ಮತ್ತಷ್ಟು ಹೆಚ್ಚಿರುವುದನ್ನು ಅರ್ಥ ಮಾಡಿಕೊಂಡಿದ್ದೇವೆಂದು ತಂಡದ ಪರವಾಗಿ ಹೇಳಬಯಸುತ್ತೇನೆ. ನಾವು ನೀವೆಲ್ಲರೂ ಜೊತೆಗೂಡಿ ಸಾಗಬೇಕಾದ ದಾರಿ ಇದು. ಜೊತೆಗೂಡಿದರೆ ಮಾತ್ರ ಸಾಗುವ ದಾರಿಯೂ ಹೌದು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

  1. ನಿಜವಾಗಿ ಆ ಕೆಲಸವನ್ನು ನಾವು ನಮ್ಮ ನೀವುಗಳು ಕೂಡಿ ಪ್ರತಿ ಜಿಲ್ಲಾ ಕೇಂದ್ರಗಳಲ್ಲಿ ಸಮಾನಮನಸ್ಕರ ಸಮಾನತೆಯ ಸಭೆ ಮಾಡಬೇಕಿರುವದು.

LEAVE A REPLY

Please enter your comment!
Please enter your name here

- Advertisment -

‘ಸಾವರ್ಕರ್ ದೇವರನ್ನು, ಧಾರ್ಮಿಕ ನಂಬಿಕೆಗಳನ್ನು ಪ್ರಶ್ನಿಸಿದ್ದರು’: ಪುಣೆ ನ್ಯಾಯಾಲಯದಲ್ಲಿ ಮೊಮ್ಮಗ ಸತ್ಯಕಿ ಸಾವರ್ಕರ್ ಒಪ್ಪಿಗೆ

ಪುಣೆ: ಕಾಂಗ್ರೆಸ್ ನಾಯಕ ಹಾಗೂ ಸಂಸತ್ತಿನ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯ ವಿಚಾರಣೆಯು ಅತ್ಯಂತ ಕುತೂಹಲಕಾರಿ ಮತ್ತು ರಾಜಕೀಯ-ಸೈದ್ಧಾಂತಿಕ ತಿರುವನ್ನು ಪಡೆದುಕೊಂಡಿದೆ. ವಿನಾಯಕ ದಾಮೋದರ್...

ಮಾಜಿ ಸಚಿವ ಧರ್ಮೇಂದ್ರ ಪ್ರಧಾನ್ ಮಗಳ ಫೋನ್ ಬಿಲ್ ವಿವಾದ: ₹68 ಸಾವಿರ ಬಿಲ್-ಪೇ ಆಗಿದ್ದು ಸರ್ಕಾರಿ ಹಣದಲ್ಲಾ?

ಮಾಜಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ಪುತ್ರಿ ನೈಮಿಷಾ ಪ್ರಧಾನ್ ಅವರು ಮತ್ತೊಮ್ಮೆ ವಿವಾದದ ಕೇಂದ್ರಬಿಂದುವಾಗಿದ್ದಾರೆ. ವಾರಗಳ ಹಿಂದೆ ನೀಟ್ ಪರೀಕ್ಷೆಯ ಪತ್ರಿಕೆ ಸೋರಿಕೆ ಖಂಡಿಸಿ ಕಾಕ್ರೋಚ್ ಜನತಾ ಪಾರ್ಟಿ...

ಇರಾನ್ ವಸತಿ ಕಟ್ಟಡದ ಮೇಲೆ ಅಮೆರಿಕಾ ದಾಳಿ: ಎರಡು ವರ್ಷದ ಮಗು ಸೇರಿ ಒಂದೇ ಕುಟುಂಬದ ಮೂವರ ಸಾವು

ಮಧ್ಯಪ್ರಾಚ್ಯದಲ್ಲಿ ಅಮೆರಿಕ ತನ್ನ ಸಾಮ್ರಾಜ್ಯಶಾಹಿ ಆಧಿಪತ್ಯ ಸ್ಥಾಪನೆಗಾಗಿ ನಡೆಸುತ್ತಿರುವ ಯುದ್ಧಕೋರ ನೀತಿ ಮತ್ತೊಮ್ಮೆ ನಿರಪರಾಧಿ ಸಾರ್ವಜನಿಕರ ರಕ್ತ ಹರಿಸಿದೆ. ಇರಾನ್ ಮೇಲಿನ ಅಮೆರಿಕ ಪಡೆಗಳ ಸರಣಿ ಮತ್ತು ಭೀಕರ ಬಾಂಬ್ ದಾಳಿಗಳು ಕೇವಲ...

SIR: ASDDO ಪಟ್ಟಿಯಲ್ಲಿ ಬೆಂಗಳೂರಿಗೆ ಪ್ರಥಮ ಸ್ಥಾನ, ರಾಜ್ಯದಲ್ಲಿ 2 ಕೋಟಿ ಮತದಾರರ ಹೆಸರು ರದ್ದಾಗುವ ಬೀತಿ

ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ರಾಜಧಾನಿ ಬೆಂಗಳೂರು ಅತ್ಯಂತ ಪ್ರಮುಖ ಹಾಗೂ ಕಳವಳಕಾರಿ ಕೇಂದ್ರವಾಗಿ ಹೊರಹೊಮ್ಮಿದೆ. ರಾಜ್ಯದಲ್ಲಿರುವ ಒಟ್ಟು 5.54 ಕೋಟಿ ನೋಂದಾಯಿತ ಮತದಾರರ ಪೈಕಿ...

ಉಮರ್ ಖಾಲಿದ್ ಜಾಮೀನು ಅರ್ಜಿ; ಪೊಲೀಸರ ನಿಲುವು ಕೇಳಿದ ದೆಹಲಿ ಹೈಕೋರ್ಟ್

ಫೆಬ್ರವರಿ 2020 ರಲ್ಲಿ ಈಶಾನ್ಯ ದೆಹಲಿಯಲ್ಲಿ ನಡೆದ ಗಲಭೆಯ ಹಿಂದಿನ "ದೊಡ್ಡ ಪಿತೂರಿ"ಗೆ ಸಂಬಂಧಿಸಿದಂತೆ ಭಯೋತ್ಪಾದನಾ ವಿರೋಧಿ ಕಾನೂನು ಯುಎಪಿಎ ಅಡಿಯಲ್ಲಿ ಪ್ರಕರಣದಲ್ಲಿ ಜಾಮೀನು ಕೋರಿ ಉಮರ್ ಖಾಲಿದ್ ಸಲ್ಲಿಸಿದ ಅರ್ಜಿಯ ಕುರಿತು...

ಮುಂಬೈ: ‘ಶಾಲಾ ಜಿಹಾದ್’ ಎಂಬ ಬಿಜೆಪಿ ನಾಯಕನ ಕೋಮುದ್ವೇಷಕ್ಕೆ ಶಾಲೆಗೆ ನುಗ್ಗಿದ ಬುಲ್ಡೋಜರ್: ಬಿಎಂಸಿಗೆ ಚಾಟಿ ಬೀಸಿದ ಬಾಂಬೆ ಹೈಕೋರ್ಟ್

ಬಿಜೆಪಿ ನಾಯಕ ಕಿರೀಟ್ ಸೋಮಯ್ಯ ಅವರ “ಶಾಲಾ ಜಿಹಾದ್” ಎಂಬ ವಿಷಕಾರಿ ಹೇಳಿಕೆಯ ನಂತರ ಮುಂಬೈನ ಗೋವಂಡಿಯಲ್ಲಿ ಬಡ ಮುಸ್ಲಿಂ ಮಕ್ಕಳ ಶಿಕ್ಷಣದ ಆಶಾಕಿರಣವಾಗಿದ್ದ ತೆಹ್ಜೀಬ್ ಇಸ್ಲಾಮಿಕ್ ಇಂಗ್ಲಿಷ್ ಶಾಲೆಯನ್ನು ಬೃಹನ್ಮುಂಬೈ ಮುನ್ಸಿಪಲ್...

ಹಾಕಿ ತಂಡಕ್ಕೆ ಕೇಸರಿ ಜರ್ಸಿ: ‘ನಮ್ಮ ಗುರುತೇ ನೀಲಿ, ಕೇಸರಿ ಬಣ್ಣದ ತರ್ಕವೇನು?’: ಮಾಜಿ ಹಾಕಿ ಪಟು ಆಕ್ರೋಶ: ಬಿಜೆಪಿ ನಡೆಗೆ ವಿಪಕ್ಷಗಳ ಟೀಕೆ

ಭಾರತೀಯ ಕ್ರೀಡಾರಂಗದ ಹೆಮ್ಮೆಯ ಸಾಂಪ್ರದಾಯಿಕ 'ನೀಲಿ' (ಬ್ಲೂ) ಬಣ್ಣವನ್ನು ಕಳಚಿ, ಹಾಕಿ ತಂಡಕ್ಕೆ ಬಲವಂತವಾಗಿ ಕೇಸರಿ ಬಣ್ಣದ ಜೆರ್ಸಿ ತೊಡಿಸಲು ಹೊರಟಿರುವುದು ಇದೀಗ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಮುಂಬರುವ ಎಫ್‌ಐಎಚ್ (FIH) ವಿಶ್ವಕಪ್‌ಗಾಗಿ...

ತಮಿಳುನಾಡು: ಶಾಲಾ ಮಕ್ಕಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡಲು ಚಿಂತನೆ

ತಮಿಳುನಾಡಿನ ಸರ್ಕಾರಿ ಶಾಲೆಗಳ ಮಧ್ಯಾಹ್ನದ ಬಿಸಿಊಟದ ಯೋಜನೆಯಡಿಯಲ್ಲಿ ವಿದ್ಯಾರ್ಥಿಗಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡುವ ಪ್ರಸ್ತಾವನೆಯನ್ನು ತಮಿಳುನಾಡು ಸರ್ಕಾರ ಪರಿಶೀಲಿಸುತ್ತಿದ್ದು, ಶಾಲಾ ಶಿಕ್ಷಣ ಸಚಿವ ರಾಜ್‌ಮೋಹನ್ ಅವರು ಈ ಕುರಿತು ಮುಖ್ಯಮಂತ್ರಿ ಸಿ....

ಪ್ರಶ್ನೆಪತ್ರಿಕೆ ಸೋರಿಕೆ ವಿರೋಧಿ ಮಸೂದೆಯಲ್ಲಿ ಸುಧಾರಣೆಗಳಿಲ್ಲ, ರಾಜಕೀಯ ಮಾತ್ರ: ಕೇಂದ್ರದ ವಿರುದ್ಧ ಖರ್ಗೆ ವಾಗ್ದಾಳಿ

ಪಬ್ಲಿಕ್ ಪರೀಕ್ಷೆಗಳ (ಅನ್ಯಾಯಯುತ ವಿಧಾನಗಳ ತಡೆಗಟ್ಟುವಿಕೆ) ತಿದ್ದುಪಡಿ ಮಸೂದೆ 2026 ರ ಚರ್ಚೆಯ ಸಂದರ್ಭದಲ್ಲಿ ಮಾತನಾಡಿದ ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಕೇಂದ್ರ ಸರ್ಕಾರದ ಮೇಲೆ ತೀವ್ರ ವಾಗ್ದಾಳಿ ನಡೆಸಿದರು....

ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಕೆ ಆರೋಪ; ಗೃಹ ಸಚಿವ ಅಮಿತ್‌ ಶಾ ಮೌನ ಪ್ರಶ್ನಿಸಿದ ಕಪಿಲ್ ಸಿಬಲ್

ಜುಲೈ 20 ರಂದು ದೆಹಲಿಯಲ್ಲಿ ನಡೆದ ಸಂಶತ್ ಚಲೋ ಪ್ರತಿಭಟನಾ ಮೆರವಣಿಗೆಯಲ್ಲಿ ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಸಲಾಗಿದೆ ಎಂಬ ಆರೋಪದ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಮೌನವನ್ನು...