Homeಅಂಕಣಗಳುಬಹುಜನ ಭಾರತ; ಸೋತು ಗೆಲ್ಲುವುದೇ ಯುಕ್ರೇನ್?

ಬಹುಜನ ಭಾರತ; ಸೋತು ಗೆಲ್ಲುವುದೇ ಯುಕ್ರೇನ್?

- Advertisement -
- Advertisement -

ರಷ್ಯಾ ಮತ್ತು ಯುಕ್ರೇನಿನ ನಡುವೆ ನಡೆದಿದ್ದ ಮಾತುಕತೆಗಳ ಭೂಮಿಕೆಯನ್ನು ಮತ್ತು ಚದುರಂಗದಾಟದ ಹಾಸನ್ನೇ ಎಳೆದು ಕಿತ್ತೆಸೆದು ನೇರವಾಗಿ ಯುದ್ಧವನ್ನು ಹೇರಿದ್ದಾರೆ ಪುಟಿನ್. ನವನಾಜಿಗಳಿಂದ ಮತ್ತು ಅಮೆರಿಕೆಯು ಬೆಂಬಲಿಸಿ ಸುರಿದಿರುವ ಶಸ್ತ್ರಾಸ್ತ್ರಗಳಿಂದ ಯುಕ್ರೇನನ್ನು ಮುಕ್ತಗೊಳಿಸುವುದು ಈ ಯುದ್ಧದ ಉದ್ದೇಶವೆಂದು ಸಾರಿದ್ದಾರೆ.

ಭಾರತದ ಪಾಲಿಗೆ ಪಾಕಿಸ್ತಾನ ಹೇಗೋ, ರಷ್ಯಾದ ಪಾಲಿಗೆ ಯುಕ್ರೇನ್ ಹಾಗೆ. ಭಾರತದ ಪರ ಪಾಕಿಸ್ತಾನವನ್ನು ಭಾರತ ಬಯಸುವಂತೆ ರಷ್ಯಾ ಪರ ಯುಕ್ರೇನನ್ನು ನಾವು ಬಯಸುತ್ತೇವೆ ಎಂಬುದು ರಷ್ಯಾದ ಅನಧಿಕೃತ ಅಂಬೋಣ.

ರಷ್ಯಾ ಮತ್ತು ಪಶ್ಚಿಮ ಜಗತ್ತಿನ ನಡುವಣ ತಿಸ್ರದಲ್ಲಿ ಯುಕ್ರೇನ್ ಪ್ರಜೆಗಳು ಬಡವಾಗುತ್ತಿದ್ದಾರೆ. ಅನಗತ್ಯ ಯುದ್ಧದ ವಿನಾಶವನ್ನು ಅವರ ಮೇಲೆ ಹೇರಲಾಗಿದೆ. ತಿಸ್ರದ ಈ ಬೆಂಕಿ ಇಡೀ ವಿಶ್ವವನ್ನೇ ತನ್ನ ಒಡಲಿಗೆ ಸೆಳೆಯದಿರಲಿ.

ರಷ್ಯಾದ ದಾಳಿಯನ್ನು ಖಂಡಿಸುವ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಸಭೆಯ ಗೊತ್ತುವಳಿಯನ್ನು ತನ್ನ ವಿಟೋ ಅಧಿಕಾರ ಚಲಾಯಿಸಿ ನಿಷ್ಫಲಗೊಳಿಸಿದೆ ರಷ್ಯಾ. ಮುಂದಿನ ಹೆಜ್ಜೆಯಾಗಿ ವಿಶ್ವಸಂಸ್ಥೆಯ ಜನರಲ್ ಅಸೆಂಬ್ಲಿ ಈ ಕುರಿತು ಸಭೆ ಸೇರಲಿದೆ. ರಷ್ಯಾದ ನಡೆಯನ್ನು ವಾಗ್ದಂಡನೆಗೆ ಗುರಿಪಡಿಸುವುದು ಈ ಸಭೆಯ ಉದ್ದೇಶ. ತನ್ನ ಈ ನಡೆಗೆ 80 ದೇಶಗಳ ಬೆಂಬಲವನ್ನು ಪಡೆದುಕೊಂಡಿದೆ.

ಈ ವಾಗ್ದಂಡನೆಯ ಗೊತ್ತುವಳಿ ಅಂಗೀಕಾರವಾಗದಂತೆ ವಿಟೋ ಅಧಿಕಾರ ಚಲಾಯಿಸುವ ಅವಕಾಶ ರಷ್ಯಾಕ್ಕೆ ಈ ಸಭೆಯಲ್ಲಿ ಇರುವುದಿಲ್ಲ. ಆಫ್ರಿಕನ್ ದೇಶಗಳೂ ಸೇರಿದಂತೆ ಅಭಿವೃದ್ಧಿಶೀಲ ದೇಶಗಳು ಈ ಹಿಂದಿನಂತೆ ರಷ್ಯಾದ ಪರವಾಗಿ ಮತ ಚಲಾಯಿಸುವ ಅಥವಾ ಮತದಾನದಲ್ಲಿ ಭಾಗವಹಿಸದಿರುವ ಸಾಧ್ಯತೆಯೂ ಈಗ ಇಲ್ಲ. ರಷ್ಯಾದ ನಡೆಯನ್ನು ಕೀನ್ಯಾ ಈಗಾಗಲೇ ಬಲವಾಗಿ ಖಂಡಿಸಿರುವುದೇ ಬದಲಾಗಿರುವ ಈ ನಿಲುವಿನ ನಿಚ್ಚಳ ಸೂಚನೆ. ಅಂತಾರಾಷ್ಟ್ರೀಯ ಅಭಿಮತ ರಷ್ಯಾದ ವಿರುದ್ಧವಾಗಿ ತಿರುಗತೊಡಗಿದೆ. ಈ ಹಿನ್ನೆಲೆಯಲ್ಲಿ ಚೀನಾ ಕೂಡ ರಷ್ಯಾದೆಡೆ ತೋರುತ್ತ ಬಂದಿರುವ ತನ್ನ ಮೆದು ನೀತಿಯನ್ನು ಕೈಬಿಡುವ ಒತ್ತಡ ಎದುರಿಸಲಿದೆ. ಭಾರತ ಕೂಡ ಇಂದಲ್ಲ ನಾಳೆ ಇದೇ ನೀತಿಯನ್ನು ತಳೆಯಬೇಕಾದೀತು.

ಅಮೆರಿಕ ಸಂಯುಕ್ತ ಸಂಸ್ಥಾನಗಳು ಮತ್ತು ಐರೋಪ್ಯ ಒಕ್ಕೂಟ ಒಟ್ಟಾಗಿ ರಷ್ಯಾದ ಮೇಲೆ ಏಕಪಕ್ಷೀಯ ನಿರ್ಬಂಧಗಳನ್ನು ಈಗಾಗಲೇ ಹೇರಿವೆ. ಯುಕ್ರೇನ್ ಮೇಲಿನ ರಷ್ಯಾ ದಾಳಿಯ ಮೊನಚನ್ನು ಈ ನಿರ್ಬಂಧಗಳು ಮೊಂಡುಮಾಡುವ ಮತ್ತು ದಾಳಿಯ ದೀರ್ಘಾವಧಿಯನ್ನು ಮೊಟಕಾಗಿಸುವ ನಿರೀಕ್ಷೆಯನ್ನು ಅಮೆರಿಕ ಮತ್ತು ಐರೋಪ್ಯ ಒಕ್ಕೂಟ ಹೊಂದಿದೆ. ಯುಕ್ರೇನಿಗೆ ಶಸ್ತ್ರಾಸ್ತ್ರಗಳನ್ನು ಪೂರೈಕೆ ಮಾಡುವ ಭರವಸೆ ನೀಡಿವೆ ಅಮೆರಿಕ ಮತ್ತು ಜರ್ಮನಿ. ಆದರೆ ನೇರ ವಿದೇಶಿ ಸೇನಾ ನೆರವು ಹಾಗೂ ವಾಯದಾಳಿಯ ಬೆಂಬಲ ದೊರೆಯದೆ, ಕೇವಲ ತನ್ನ ಸ್ವಂತ ಬಲದಿಂದಲೇ ರಷ್ಯಾ ದಾಳಿಯನ್ನು ಯುಕ್ರೇನ್ ಹಿಮ್ಮೆಟ್ಟಿಸುವುದು ಅಸಾಧ್ಯ.

ರಷ್ಯಾದ ಈ ದಾಳಿಯನ್ನು ರಷ್ಯಾದ ಮಿತ್ರದೇಶಗಳು ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಹೆಚ್ಚು ಕಾಲ ಸಮರ್ಥಿಸುವ ಸ್ಥಿತಿಯಲ್ಲಿ ಇಲ್ಲ. ರಷ್ಯಾ ಬೆನ್ನಿಗೆ ಬಲವಾಗಿ ನಿಲುತ್ತ ಬಂದಿರುವ ಚೀನಾ ದೇಶ ಕೂಡ ಈ ಮಾತಿಗೆ ಹೊರತಲ್ಲ.

ತಾನು ಗೆದ್ದೆನೆಂದು ಪುಟಿನ್ ಬೀಗಬಹುದು. ಆದರೆ ಅವರು ಗೆದ್ದು ಸೋಲಲಿದ್ದಾರೆ. ಯುಕ್ರೇನ್‌ನ ಜನ ಸೋತು ಗೆಲ್ಲಲಿದ್ದಾರೆ. ಈ ಗೆಲುವು ಸೋಲುಗಳ ನಡುವಣ ರಕ್ತಪಾತ, ಕಣ್ಣೀರು, ಸಾವುನೋವು, ವಿನಾಶದ ಬೆಲೆ ಕಟ್ಟಲಾದೀತೇ?

ರಷ್ಯಾದ ಮಿಲಿಟರಿ ಶಕ್ತಿಗೆ ಹೆದರಿ ದಂಗುಬಡಿದು ಆರಂಭದಲ್ಲೇ ಶರಣಾದೀತು ಎಂಬ ನಿರೀಕ್ಷೆಯನ್ನು ಯುಕ್ರೇನ್ ಹುಸಿಮಾಡಿದೆ. ದಿಟ್ಟ ಪ್ರತಿರೋಧ ತೋರಿರುವ ಯುಕ್ರೇನ್ ಸೇನೆ ಸುಲಭಕ್ಕೆ ಮಣಿಯುವುದಿಲ್ಲವೆಂದು ಸಾಬೀತುಮಾಡಿದೆ. ವಿಶ್ವಾದ್ಯಂತ ಬ್ರಹ್ಮಾಸ್ತ್ರವನ್ನು ಎದುರಿಸುತ್ತಿರುವ ಗುಬ್ಬಿ ಎಂಬ ಅನುಕಂಪ ಮೆಚ್ಚುಗೆಯನ್ನು ಗಳಿಸಿದೆ. ಜನಸಾಮಾನ್ಯರೂ ಸೇನೆಯ ಸಮವಸ್ತ್ರ ಧರಿಸಿ ಶಸ್ತ್ರಗಳನ್ನು ಕೈಗೆತ್ತಿಕೊಂಡು ಸೆಣಸುತ್ತಿದ್ದಾರೆ. ಯುಕ್ರೇನ್ ಅಧ್ಯಕ್ಷ ವೋಲೋಡಿಮಿರ್ ಝೆಲೆಸ್ಸ್ಕಿ ನಿಜ ನಾಯಕಮಣಿಯಂತೆ ತಮ್ಮ ಸೇನೆಯ ಮುಂಚೂಣಿಯಲ್ಲಿದ್ದು ಮುನ್ನಡೆಸುತ್ತಿದ್ದಾರೆ. ತಮ್ಮ ಜನರ ಜೊತೆ ಗಟ್ಟಿಯಾಗಿ ನಿಂತಿದ್ದಾರೆ. ಅಮೆರಿಕದ ಕೈಗೊಂಬೆಯಾಗಿರುವ ನವನಾಜೀವಾದಿ ಎಂಬ ರಷ್ಯಾದ ನಿಂದನೆ ಅವರಿಗೆ ಅಂಟಿದಂತಿಲ್ಲ.

ತನ್ನ ಅನುಗಾಲದ ಮಿತ್ರ ರಷ್ಯಾ ದೇಶ ತನ್ನ ನೆರೆಹೊರೆಯ ದುರ್ಬಲ ಸ್ವತಂತ್ರ ಸಾರ್ವಭೌಮ ದೇಶದ ಮೇಲೆ ನಡೆಸಿರುವ ಈ ಹಿಂಸಾತ್ಮಕ ಯುದ್ಧವನ್ನು ಖಚಿತವಾಗಿ ಖಂಡಿಸುವ ಸ್ಥಿತಿಯಲ್ಲಿ ಭಾರತ ಇಲ್ಲ. ಆದರೆ ಪುಟಿನ್ ದಾಳಿ ಮುಂಬರುವ ದಿನಗಳಲ್ಲಿ ಮತ್ತಷ್ಟು ವಿನಾಶಕಾರಿಯಾದರೆ ಭಾರತ ಮೌನ ಮುರಿಯಲೇಬೇಕಾಗುತ್ತದೆ.

ಯುದ್ಧ ನಡೆಸುತ್ತಿರುವ ಪುಟಿನ್ ತಮ್ಮ ದೇಶವಾಸಿಗಳಲ್ಲಿ ಅಸ್ಮಿತೆಯ ಸಂಕಟದೊಂದಿಗೆ ಆರ್ಥಿಕ ಸಂಕಟವನ್ನೂ ಹುಟ್ಟುಹಾಕಿದ್ದಾರೆ. ರಷ್ಯಾದ ನಾಗರಿಕರ ಹತ್ತಾರು ಲಕ್ಷ ಬಂಧು-ಮಿತ್ರರು ಯುಕ್ರೇನಿನಲ್ಲಿದ್ದಾರೆ. ಯುಕ್ರೇನಿನ ಮೇಲೆ ಯುದ್ಧ ಹೇರಿರುವ ರಷ್ಯಾದ ನಡೆಯನ್ನು ರಷ್ಯಾದ ನಾಗರಿಕರು ಬಲವಾಗಿ ವಿರೋಧಿಸಿದ್ದಾರೆ. ಯುಕ್ರೇನಿನೊಂದಿಗೆ ತಾವು ಸಾರಿರುವುದು ಪೂರ್ಣಪ್ರಮಾಣದ ಯುದ್ಧ ಎಂಬ ಸಂಗತಿಯನ್ನು ತಮ್ಮ ನಾಗರಿಕರಿಂದ ಮುಚ್ಚಿಡಲು ಪ್ರಯತ್ನಿಸಿದ್ದಾರೆ. ಈ ಯುದ್ಧವನ್ನು ಯುದ್ಧವೆಂದು ಕರೆಯದಂತೆ ರಷ್ಯನ್ ಸಮೂಹ ಮಾಧ್ಯಮಗಳಿಗೆ ತಾಕೀತು ಮಾಡಿದ್ದಾರೆ. ನಿಧಾನವಾಗಿ ಆದರೆ ನಿಶ್ಚಿತವಾಗಿ ಆರ್ಥಿಕ ತಳಮಳ ರಷ್ಯಾ ಜನಜೀವನಕ್ಕೆ ಬಿಸಿಮುಟ್ಟಿಸತೊಡಗಿದೆ. ಪಶ್ಚಿಮ ಜಗತ್ತು ಹೇರುತ್ತಿರುವ ನಿರ್ಬಂಧಗಳು ಮತ್ತು ಡಾಲರ್-ರೂಬಲ್ ವಿನಿಮಯ ದರ ಕುಸಿತದ ಬೆಳವಣಿಗೆಗಳು ಬೆಲೆ ಏರಿಕೆಯ ಝಳವನ್ನು ಹೆಚ್ಚಿಸುತ್ತಿವೆ. ಪುಟಿನ್‌ರನ್ನು ಮಹಾನ್ ಎಂದು ಗಟ್ಟಿಯಾಗಿ ಜಯಕಾರ ಹಾಕುತ್ತಿದ್ದ ಜನದನಿಗಳು ಕ್ಷೀಣಗೊಳ್ಳತೊಡಗಿವೆ. ಭಿನ್ನದನಿಗಳನ್ನು ಉಕ್ಕಿನ ಹಸ್ತದಿಂದ ಹಿಸುಕಿ ಹತ್ತಿಕ್ಕುವ ಸೂಚನೆಗಳು ನಿಚ್ಚಳವಾಗತೊಡಗಿವೆ. ಯುಕ್ರೇನ್ ಮೇಲಿನ ದಾಳಿ ದಟ್ಟ, ಹಿಂಸಾತ್ಮಕ ಹಾಗೂ ವಿನಾಶಕಾರಿಯಾದಷ್ಟೂ ರಷ್ಯಾದ ಜನಮಾನಸದಲ್ಲಿ ಪುಟಿನ್ ವರ್ಚಸ್ಸು ಕುಸಿಯಲಿದೆ. ಈ ಯಾವ ಕಾರಣಗಳೂ ಪುಟಿನ್ ಅವರನ್ನು ವಿಚಲಿತಗೊಳಿಸಿಲ್ಲ.

ರಷ್ಯಾ ಮತ್ತು ಯುಕ್ರೇನಿನ ನಡುವೆ ನಡೆದಿದ್ದ ಮಾತುಕತೆಗಳ ಭೂಮಿಕೆಯನ್ನು ಮತ್ತು ಚದುರಂಗದಾಟದ ಹಾಸನ್ನೇ ಎಳೆದು ಕಿತ್ತೆಸೆದು ನೇರವಾಗಿ ಅಲ್ಲಿನ ಜನರ ಮೇಲೆ ಯುದ್ಧವನ್ನು
ಹೇರಿದ್ದಾರೆ ಪುಟಿನ್. ನವನಾಜಿಗಳಿಂದ ಮತ್ತು ಅಮೆರಿಕೆಯು ಬೆಂಬಲಿಸಿ ಸುರಿದಿರುವ ಶಸ್ತ್ರಾಸ್ತ್ರಗಳಿಂದ ಯುಕ್ರೇನನ್ನು ಮುಕ್ತಗೊಳಿಸುವುದು ಈ ಯುದ್ಧದ ಉದ್ದೇಶವಂತೆ.

ಹಾಲಿ ಪ್ರಧಾನಿ ವೊಲೋಡೋಮಿರ್ ಝೆಲೆಸ್ಕಿ ಅವರ ಆಡಳಿತದಲ್ಲಿ ನ್ಯಾಟೋದತ್ತ ಹೆಚ್ಚುಹೆಚ್ಚು ನಿಶ್ಚಿತವಾಗಿ ವಾಲಿದ ಯುಕ್ರೇನ್ ರಷ್ಯಾದ ಜೊತೆಗಿನ ವಾಣಿಜ್ಯ ವ್ಯಾಪಾರವನ್ನೂ ತಗ್ಗಿಸಿದ್ದು ಪುಟಿನ್ ಅವರನ್ನು ಕೆರಳಿಸಿದೆ.

ರಷ್ಯಾ ಮತ್ತು ಪಶ್ಚಿಮ ಜಗತ್ತಿನ ನಡುವಣ ತಿಸ್ರದಲ್ಲಿ ಯುಕ್ರೇನ್ ಪ್ರಜೆಗಳು ಬಡವಾಗುತ್ತಿದ್ದಾರೆ. ಅನಗತ್ಯ ಯುದ್ಧದ ವಿನಾಶವನ್ನು ಅವರ ಮೇಲೆ ಹೇರಲಾಗಿದೆ. ಈ ದುರ್ಬಲ ದೇಶದ ಮೇಲೆ ಅಣ್ವಸ್ತ್ರಗಳನ್ನು ಪ್ರಯೋಗಿಸುವ ಬೆದರಿಕೆಯನ್ನು ಪುಟಿನ್ ಹಾಕಿದ್ದಾರೆ. ದುರ್ಬಲ ಯುಕ್ರೇನ್ ಮಾತುಕತೆಯ ಮೇಜಿಗೆ ಬರಲು ಒಪ್ಪಿದೆ. ಪುಟಿನ್ ಯುದ್ಧ ಗೆಲ್ಲಬಹುದೇ ವಿನಾ ಮನಸುಗಳನ್ನಲ್ಲ


ಇದನ್ನೂ ಓದಿ: ಯುದ್ಧಪಿಪಾಸು ಶಕ್ತಿಗಳ ಮತ್ತು ಪಾಪ್ಯುಲಿಸ್ಟ್ ಮುಖಂಡರ ನಡುವೆ ನಲುಗುತ್ತಿರವ ಮುಗ್ಧ ಜನರ ಪ್ರಾಣ

ಇದನ್ನೂ ಓದಿ: ರಷ್ಯಾ-ಉಕ್ರೇನ್ ಬಿಕ್ಕಟ್ಟು: 352 ಉಕ್ರೇನಿಯನ್ ನಾಗರಿಕರು ಸಾವು, 1,684 ಮಂದಿಗೆ ಗಾಯ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...