Homeಅಂಕಣಗಳುಈಗ ಎತ್ತಿಗೆ ಲಾಳ ಕಟ್ಟೋರು ಯಾರು ಅಂತ

ಈಗ ಎತ್ತಿಗೆ ಲಾಳ ಕಟ್ಟೋರು ಯಾರು ಅಂತ

- Advertisement -
- Advertisement -

ಶಿವಮೊಗ್ಗ ಸಮೀಪ ನಿರ್ಮಾಣವಾಗುತ್ತಿರುವ ವಿಮಾನ ನಿಲ್ದಾಣಕ್ಕೆ ಎಡೂರಪ್ಪನವರ ಹೆಸರಿಡಲು ಮುಖ್ಯಮಂತ್ರಿ ಬೊಮ್ಮಾಯಿ ತೀರ್ಮಾನಿಸಿದ್ದಾರಂತಲ್ಲಾ. ಕಾರಣ ಹುಡುಕಿದರೆ ಎಡೂರಪ್ಪನ ಆಡಳಿತದ ವೈಖರಿಯಿಂದಲೇ ತಮಗೆ ಮುಖ್ಯಮಂತ್ರಿ ಪಟ್ಟಸಿಕ್ಕಿತು. ಒಂದು ವೇಳೆ ಅವರು ಹೈಕಮಾಂಡ್ ಮೆಚ್ಚುವಂತಹ ಆಡಳಿತ ನೀಡಿದ್ದರೆ ಈ ಜನ್ಮದಲ್ಲಿ ನಾನು ಮುಖ್ಯಮಂತ್ರಿಯಾಗುವಂತಿರಲಿಲ್ಲ. ಈ ಜನ್ಮದಲ್ಲಿ ತೀರಿಸಲಾಗದಂತಹ ಉಪಕಾರ ಮಾಡಿರುವ ಎಡೂರಪ್ಪನವರಿಗೆ ತಕ್ಕ ಉಪಕಾರ ಎಂದರೆ ವಿಮಾನ ನಿಲ್ದಾಣಕ್ಕೆ ಅವರ ಹೆಸರಿಡುವುದು. ಎಡೂರಪ್ಪನವರ ಇನ್ನೊಂದು ಸಾಧನೆಯೂ ಇಲ್ಲಿ ಪರಿಗಣಿತವಾಗುತ್ತದೆ. ಎಂತಹವರನ್ನೇ ಆಗಲಿ ಮುಖ್ಯಮಂತ್ರಿ ಮಾಡುವುದರಲ್ಲಿ ಅವರು ಎತ್ತಿದ ಕೈ. ಅವರು ಮನಸ್ಸು ಮಾಡಿದ್ದರಿಂದಲೇ ಕುಮಾರಸ್ವಾಮಿ ಮುಖ್ಯಮಂತ್ರಿಯಾದದ್ದು, ಅವರಿಂದಲೇ ಅಲ್ಲವೆ ಸದಾನಂದಗೌಡ, ಜಗದೀಶ್ ಶೆಟ್ಟರ್, ಸಿದ್ದರಾಮಯ್ಯ ಮತ್ತೆ ನನ್ನಂಥವನು ಮುಖ್ಯಮಂತ್ರಿಯಾಗಿ ಹೆಲಿಕಾಪ್ಟರಿನಲ್ಲಿ ಹಾರಾಡುವಂತಾದದ್ದು. ಅದಕ್ಕೆ ವಿಮಾನ ನಿಲ್ದಾಣಕ್ಕೆ ಎಡೂರಪ್ಪನ ಹೆಸರಿಟ್ಟದ್ದದು ಎಂದರಂತಲ್ಲಾ, ಥೂತ್ತೇರಿ.

******

ವಿಮಾನ ನಿಲ್ದಾಣಕ್ಕೆ ಎಡೂರಪ್ಪನ ಹೆಸರಿಡಲು ಮುಖ್ಯ ಕಾರಣ ಕೊಡುವ ಅವರ ಭಕ್ತರ ಪ್ರಕಾರ, “ನೋಡಿ ಸಾರ್ ಎಡೂರಪ್ಪ ಬೂಕನಕೆರೆಯಿಂದ ಬರಿಗೈಲಿ ಶಿಕಾರಿಪುರಕ್ಕೆ ಬಂದು ಶಿಕಾರಿ ಶುರುಮಾಡಿಕೊಂಡ್ರು; ಶಿಕಾರಿಪುರದ ಮುನಿಸಿಪಾಲಿಟಿಯಿಂದ ವಿಧಾನಸೌಧಕ್ಕೆ ಹೋದ್ರು. ವಿರೋಧಪಕ್ಷದ ನಾಯಕರಾದ್ರು; ಒಂದಲ್ಲ ಅಂತ ಮೂರುಸಲ ಮುಖ್ಯಮಂತ್ರಿಯಾದ್ರು. ಬೇಕಾದಷ್ಟು ಹಣ ಆಸ್ತಿ ಮಾಡಬಹುದಿತ್ತು ಮಾಡಲಿಲ್ಲ. ಕಾಲೇಜು, ಕಾಲೇಜಿಗೆ ಹಾಸ್ಟಲು, ಸ್ಟಾರ್ ಹೋಟ್ಲು ಕಟ್ಟಬಹುದಿತ್ತು, ಕಟ್ಟಲಿಲ್ಲ. ಯಾವನೋ ಚೆಕ್ ಮುಖಾಂತರ ಲಂಚಕೊಡಕ್ಕೆ ಬಂದ, ತಗಳ್ಳಿಲ್ಲ. ಪರಿಣಾಮ ಇವುರೇ ಜೈಲಿಗೋಗುವ ಸ್ಥಿತಿ ಬಂತು, ಹೆದರಲಿಲ್ಲ. ಹೋಗಿ ಬಂದ್ರು. ನಮ್ಮ ಶೋಭಕ್ಕನ್ನ ಬೆಳೆಸಿದ್ರು, ಕೈ ಬಿಡಲಿಲ್ಲ. ಇವತ್ತು ಯಾವುದೇ ನಾಯಕನಿಗೆ ನಮ್ಮ ಎಡೂರಪ್ಪನೋರ ಹೋಲಸಂಗೇಯಿಲ್ಲ. ಅದ್ಕೆ ವಿಮಾನ ನಿಲ್ದಾಣಕ್ಕೆ ಅವರೆಸರೇ ಸೂಕ್ತ ಸಾರು” ಅಂದನಲ್ಲ, ಥೂತ್ತೇರಿ.

ಸೌದಿ ಅರೇಬಿಯಾದಲ್ಲಿ ಸಿಲುಕಿರುವ ಭಾರತೀಯರನ್ನು ಕರೆತರಲು ಖಾಲಿ ವಿಮಾನ!
PC: ISTOCK

******

ಶಿವಮೊಗ್ಗದ ವಿಮಾನ ನಿಲ್ದಾಣಕ್ಕೆ ಯಾರ ಹೆಸರು ಸೂಕ್ತ ಎಂಬ ಚರ್ಚೆ ನಡೆದಿರುವ ಸಮಯದಲ್ಲಿ, ಹಲವಾರು ದಿಕ್ಕಿನಿಂದ ಸಲಹೆ ಸೂಚನೆ ಬರತೊಡಗಿವೆಯೆಲ್ಲಾ. ಸಾಹಿತಿಗಳ ದಿಕ್ಕಿನಿಂದ “ನೋಡಿ ಸಾರ್ ನಮ್ಮ ಕುವೆಂಪು ಕಾವ್ಯ ಬರೀಬೇಕಾದ್ರೆ ಲೌಖಿಕ ಜೀವನದಿಂದ ಶುರುಮಾಡಿ ಪಾರಮಾರ್ಥಿಕಕ್ಕೆ ಹೋಗತಿದ್ರು. ಉದಾಹರಣೆಗೆ: ’ನಾನಿನಗೆ ನೀನನಗೆ ಜೇನಾಗುವ, ರಸದೇವಗಂಗೆಯಲ್ಲಿ ಮೀನಾಗುವ’ ಅಂತ ಎರಡನೇ ಜಿಗಿತಕ್ಕೆ ಆಕಾಶಕ್ಕೆ ಹಾರತಿದ್ರು, ಜೊತೆಗೆ ಎತ್ತರದ ಕನಸು ಕಾಣತಿದ್ರು, ಅವರು ಯಾವಾಗಲೂ ಊರ್ದ್ವಮುಖಿ. ’ನಾನೇರುವೆತ್ತರಕೆ ನೀನೇರಬಲ್ಲೆಯ’ ಅಂತಿದ್ರು. ’ಮನುಜಮತ ವಿಶ್ವಪಥ’ ಅಂತಿದ್ರು” ಅನ್ನುವ ವಾದ ಬಂತಂತೆಲ್ಲಾ. ಅವುರೆಸರು ಸೂಕ್ತ ಅನ್ನುವುದಾದರೆ ಅಳಿದುಳಿದ ರಾಜಕಾರಣಿಗಳ ಪ್ರಕಾರ, ಈ ದೇಶಕಂಡ ಅಪ್ರತಿಮ ರಾಜಕಾರಣಿ
ಗೋಪಾಲಗೌಡ ಹೆಸರಿಡಲು ಕೊಡುವ ಕಾರಣವೆಂದರೆ: “ಗೋಪಾಲಗೌಡ ಗುಡಿಸಲಿಂದ ಬಂದವರು. ಮೂರುಬಾರಿ ಶಾಸಕರಾದರೂ ಮನೆ ಇರಲಿಲ್ಲ, ಸೈಟ್ ಇರಲಿಲ್ಲ. ಬ್ಯಾಂಕ್‌ನ ಅಕೌಂಟೇ ಇರಲಿಲ್ಲ. ಇದ್ದ ಎರಡು ಮೂರು ಜುಬ್ಬ ಅಜೀಜ್ ಸೇಠ್ ಹೊಲಿಸಿಕೊಟ್ಟಿದ್ದು. ಇಂತಹ ವ್ಯಕ್ತಿಯ ನೆನಪನ್ನು ಹಸಿರಾಗಿಡಬೇಕಾದರೆ ಅಕಾಶದಲ್ಲಿ ಹಾರಾಡುವ ವಿಮಾನ ನಿಲ್ದಾಣಕ್ಕೆ ಅವರ ಹೆಸರು ಇಡಬೇಕೆಂದರಲ್ಲಾ”, ಥೂತ್ತೇರಿ.

*****

ಅಜೀಜ್ ಸೇಠ್ ಎಂದಕೂಡಲೇ ನೆನಪಾಯ್ತು. ಗೋಪಾಲಗೌಡರ ಹರಿದ ಜುಬ್ಬ ನೋಡಿ ಮನಕರಗಿದ ಸೇಠ್ ಜುಬ್ಬ ಹೊಲಿಸಿಕೊಟ್ಟಂತೆ, ನಮ್ಮ ನಡುವಿನ ಸಾಬರು ಹಳ್ಳಿಗಾಡಿನ ರೈತನ ಪಾಡಿನಲ್ಲಿ ಅನಾದಿಕಾಲದಿಂದ ಭಾಗಿಯಾಗುತ್ತ ಬಂದಿರುವುದು ಸಂಘಿಗಳ ಗಮನಕ್ಕೆ ಬಂದಿಲ್ಲವಂತಲ್ಲಾ. ಈಗ ಸಾಬರ ಬಳಿ ಮಾವಿನ ಹಣ್ಣು ಕೊಳ್ಳಬೇಡಿ ಎಂದು ಫತ್ವಾ ಹೊರಡಿಸಿರುವುದರ ಪರಿಣಾಮ ಮಾವಿನ ಹಣ್ಣಿನ ಕಂಟ್ರಾಕ್ಟಿಗೆ ಸಾಬರು ಬರುತ್ತಿಲ್ಲವಲ್ಲಾ. ಈ ಪುರೋಹಿತಶಾಹಿಗಳ ತಲೆಯಿಂದ ಮಂತ್ರಗಳು ಮಾಯವಾಗಿ ಮುಸ್ಲಿಂ ದ್ವೇಷ ತುಂಬಿಕೊಂಡ ಫಲವಾಗಿ ರೈತ ಬೆಳೆದ ಮಾವಿನಹಣ್ಣು, ವಾಣಿಜ್ಯ ಬೆಳೆಗಳಾದ ಹೊಂಗೆಬೀಜ, ಇಪ್ಪೆ ಅಳ್ಳು, ಬೇವಿನಬೀಜ, ಹಲಸಿನಹಣ್ಣು ಕೊಳ್ಳುವವರಿಲ್ಲವಾಗಿದೆಯಂತಲ್ಲಾ. ಇದಿನ್ನೂ ದೊಡ್ಡದಾಗಿ ಬೆಳೆದು, ಸದ್ಯದಲ್ಲೇ ದೇಶ ದಿವಾಳಿ ಎದ್ದು ಶ್ರೀಲಂಕಾದಂತಾಗುವ ಎಲ್ಲಾ ಸೂಚನೆಗಳು ಕಾಣುತ್ತಿವೆಯಲ್ಲಾ. ಅದಕ್ಕಿಂತ ಮುಖ್ಯ ಎತ್ತಿಗೆ ಲಾಳ ಕಟ್ಟುತ್ತಿದ್ದ ಸಾಬರು ಹಳ್ಳಿಕಡೆ ಬಾರದೆಯಿರುವುದರಿಂದ ಎತ್ತುಗಳ ಗೊರಸು ಸವೆದು ಕುಂಟತೊಡಗಿವೆ. ಇದೀಗ ರೈತರು ಎಚ್ಚೆತ್ತು “ಬಾರೊ ನಮ್ಮ ಎತ್ತಿಗೆ ಲಾಳ ಕಟ್ಟು” ಅಂದರೆ ಸಂಘಿಗಳ ಕತೆಯೇನೆಂದು ಉದ್ಘಾರ ತೆಗೆದರಲ್ಲಾ, ಥೂತ್ತೇರಿ.

*******

ಈ ಬಿಜೆಪಿಗಳು ಆಡಳಿತ ನಡೆಸಲು ಅಳವಡಿಸಿಕೊಂಡಿರುವುದು ಗೋಳವಲಕರನ ಅರ್ಥ ವ್ಯವಸ್ಥೆಯಂತಲ್ಲಾ. ಆತನ ಅರ್ಥಶಾಸ್ತ್ರದ ಪ್ರಕಾರ ನಾವು ಸುಖವಾಗಿ ಭೋಜನ ಬಾರಿಸುತ್ತ ಗರ್ಭಗುಡಿಯಲ್ಲಿರಬೇಕಾದರೆ ಈ ದೇಶದಲ್ಲಿ ಬಡವರಿರಬೇಕು ಅವರು ಆಸ್ತಿವಂತರಾಗಬಾರದು, ಅಕಸ್ಮಾತ್ ಆದರೆ ನಮ್ಮ ಮಾತನ್ನ ಕೇಳುವುದಿಲ್ಲ; ನಾವೇಳಿದ ಕೆಲಸ ಮಾಡುವುದಿಲ್ಲ; ಆದ್ದರಿಂದ ಅವರು ಆಸ್ತಿವಂತರಾಗದಂತೆ ನೋಡಿಕೊಳ್ಳಬೇಕು; ಅದರಲ್ಲೂ ಮುಸ್ಲಿಮರು ಆರ್ಥಿಕವಾಗಿ ಮುಂದೆ ಬರಲೇಬಾರದು ಎಂದಿದೆಯಂತಲ್ಲಾ. ಅದರ ಫಲವಾಗಿ ಚರ್ಮೋದ್ಯಮ ನಾಶವಾಯ್ತು. ಹಳ್ಳಿಗಳ ಕಡೆ ಹಬ್ಬವಾದರೆ ಚರ್ಮ ಕೊಳ್ಳಲು ಸಾಬರು ಬರುತ್ತಿದ್ದರು. ಈಗ ಗುಂಡಿ ತೆಗೆದು ಚರ್ಮವನ್ನೂ ಹೂಳುತ್ತಿದ್ದಾರೆ. ಇಲ್ಲಿಂದ ಶುರುವಾದ ಮುಸ್ಲಿಮರ ಆರ್ಥಿಕ ಅವನತಿ, ರೈತರ ಕಡೆಗೂ ತಿರುಗಿ ಸದ್ಯದಲ್ಲೇ ರೈತರ ಪತನವಾಗಿ ಅವರೆಲ್ಲಾ ಇನ್ನೂ ಬಡವರಾಗುವುದರಲ್ಲಿ ಯಾವ ಸಂಶಯವೂ ಇಲ್ಲವಂತಲ್ಲಾ, ಥೂಥೂ ಥೂತ್ತೇರಿ.


ಇದನ್ನೂ ಓದಿ: ಈಶ್ವರಪ್ಪ ಪರಸೆಂಟೇಜಲ್ಲಿ ಜಗದ್ಗುರುಗಳ ಪಾಲಿತ್ತಂತಲ್ಲಾ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಗಾಝಾದಲ್ಲಿ ರಕ್ತಸಿಕ್ತ ಈದ್: ಇಸ್ರೇಲ್ ಭೀಕರ ದಾಳಿಗೆ 26 ಪ್ಯಾಲೆಸ್ಟೀನಿಯನ್ನರು ಬಲಿ, ವಿಶ್ವಸಂಸ್ಥೆ ತೀವ್ರ ಆತಂಕ

ಗಾಝಾ: ಇಸ್ಲಾಂ ಧರ್ಮದ ಅತ್ಯಂತ ಪವಿತ್ರ ದಿನಗಳಲ್ಲಿ ಒಂದಾದ ‘ಈದ್ ಅಲ್-ಅಧಾ’ ಹಬ್ಬದ ಸಂದರ್ಭದಲ್ಲೂ ಗಾಝಾ ಪಟ್ಟಿಯಲ್ಲಿ ರಕ್ತಪಾತ ಮುಂದುವರಿದಿದ್ದು, ಹಬ್ಬದ ಮುನ್ನಾದಿನದಿಂದ ಆರಂಭಿಸಿ ಇಸ್ರೇಲ್ ಪಡೆಗಳು ನಡೆಸಿದ ಸರಣಿ ದಾಳಿಗಳಲ್ಲಿ ಕನಿಷ್ಠ...

ಜನರಿಗೆ ಇಂಧನ ಉಳಿಸುವ ಪಾಠ, ಪ್ರಧಾನಿಗೆ ರೋಡ್‌ಶೋಗಳ ಆಟ

ಮೇ 10 ರಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಸಾರ್ವಜನಿಕರಲ್ಲಿ ಮಿತವ್ಯಯದ ಅಪೀಲು ಮಾಡಿದ್ದು, ಇಂಧನ ಬಳಕೆಯನ್ನು ಕನಿಷ್ಠ ಮಟ್ಟಕ್ಕೆ ಇಳಿಸುವಂತೆ ಕೋರಿದ್ದರು. ಜನರು ಖಾಸಗಿ ವಾಹನಗಳ ಬಳಕೆಯನ್ನು ಬಿಟ್ಟು ಸಾರ್ವಜನಿಕ ಸಾರಿಗೆಯನ್ನು...

ಏಷ್ಯನ್ ಗೇಮ್ಸ್‌ ಟ್ರಯಲ್ಸ್‌ನಲ್ಲಿ ಸ್ಪರ್ಧಿಸಲು ವಿನೇಶ್ ಫೋಗಟ್‌ಗೆ ಅನುಮತಿಸಿದ ಭಾರತೀಯ ಕುಸ್ತಿ ಒಕ್ಕೂಟ

ಮಾಜಿ ವಿಶ್ವ ಚಾಂಪಿಯನ್‌ಶಿಪ್ ಪದಕ ವಿಜೇತೆ ವಿನೇಶ್ ಫೋಗಟ್ ಅವರು (ಮೇ 30) ಏಷ್ಯನ್ ಗೇಮ್ಸ್ ಆಯ್ಕೆ ಟ್ರಯಲ್ಸ್‌ನಲ್ಲಿ ಮಹಿಳೆಯರ 53 ಕೆಜಿ ವಿಭಾಗದಲ್ಲಿ ಸ್ಪರ್ಧಿಸಲು ಅವಕಾಶ ಪಡೆದಿದ್ದಾರೆ. ಭಾರತೀಯ ಕುಸ್ತಿ ಒಕ್ಕೂಟ...

Uttarakhand | ಬಜರಂಗದಳದ ಕಾರ್ಯಕರ್ತರು ಈಗ ದ್ವೇಷ ಬಿತ್ತುವ ವೃತ್ತಿಪರ ಇನ್‌ಫ್ಲ್ಯುಯೆನ್ಸರ್ಸ್!

ಈ ವರ್ಷದ ಆರಂಭದಲ್ಲಿ ಉತ್ತರಾಖಂಡದ ಕೋಟದ್ವಾರದಲ್ಲಿ ಹಿಂದುತ್ವ ಗುಂಪೊಂದು ವೃದ್ಧ ಮುಸ್ಲಿಂ ವ್ಯಕ್ತಿಯೊಬ್ಬರ ಅಂಗಡಿಗೆ ನುಗ್ಗಿ, ಅಂಗಡಿಯ ಹೆಸರಾದ ‘ಬಾಬಾ’ ಎಂಬುವುದನ್ನು ಬದಲಾಯಿಸುವಂತೆ ಒತ್ತಾಯಿಸಿತ್ತು. ‘ಬಾಬಾ’ ಎಂಬುವುದು ‘ಹಿಂದೂ’ ಹೆಸರಾಗಿದೆ ಎಂದು ಆ...

​ನಿಗಿ ನಿಗಿ ಕೆಂಡದಂತಾಗಿರುವ ಬಿಡದಿ, ಡಿಕೆಶಿಗೆ ಬಿಸಿ ತುಪ್ಪದಂತಾದ ರೈತರು

​ಬದಲಾದ ರಾಜಕೀಯ ಸಂದರ್ಭದಲ್ಲಿ ಕರ್ನಾಟಕದ ಮುಂದಿನ ಮುಖ್ಯಮಂತ್ರಿ ಎಂದೇ ಬಿಂಬಿತವಾಗಿರುವ ಡಿ.ಕೆ. ಶಿವಕುಮಾರ್ ಪ್ರತಿಷ್ಠೆಯಾಗಿ ತೆಗೆದುಕೊಂಡಿರುವ ಬಿಡದಿಯ ಟೌನ್‌ಶಿಪ್ ಯೋಜನೆಯ ವಿರುದ್ಧ ನಡೆಯುತ್ತಿರುವ ರೈತರ ಹೋರಾಟ ದಿನದಿಂದ ದಿನಕ್ಕೆ ಉಗ್ರ ರೂಪ ಪಡೆಯುತ್ತಿದೆ. ​ಭೂಸ್ವಾಧೀನದ...

ಪ್ರಜಾಪ್ರಭುತ್ವವನ್ನು ಹತ್ತಿಕ್ಕಲು ‘SIR’ ಅನ್ನೇ ಅಸ್ತ್ರವನ್ನಾಗಿಸಿಕೊಂಡ ನರೇಂದ್ರ ಮೋದಿ!

ಪಶ್ಚಿಮ ಬಂಗಾಳದ ವಿಧಾನಸಭಾ ಚುನಾವಣೆಯ ಫಲಿತಾಂಶ ಪ್ರಕಟವಾದ ತಕ್ಷಣ (ಮೇ 4 ರಂದು), ಕಾಳೀಘಾಟ್‌ನಲ್ಲಿರುವ ತಮ್ಮ ನಿವಾಸದಲ್ಲಿ ಸುದ್ದಿಗೋಷ್ಠಿ ನಡೆಸಿದ ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅತ್ಯಂತ ಆಕ್ರೋಶದಿಂದ ಮಾತನಾಡಿದ್ದರು. ಅಷ್ಟೇ ಅಲ್ಲದೆ,...

ಕೇರಳದಲ್ಲಿ ಶಾಲಾ ಬಾಲಕಿಯರಿಗೆ ಮೂರು ದಿನ ಮುಟ್ಟಿನ ರಜೆ, ಅಸಂಘಟಿತ ವಲಯದ ಮಹಿಳೆಯರಿಗೆ ಆರು ತಿಂಗಳ ಹೆರಿಗೆ ರಜೆ ಘೋಷಣೆ 

ತಿರುವನಂತಪುರಂ: ಕೇರಳದ ವಿ.ಡಿ. ಸತೀಶನ್ ನೇತೃತ್ವದ ಕಾಂಗ್ರೆಸ್ ಸರ್ಕಾರವು ಮಹಿಳೆಯರಿಗೆ ಹಲವಾರು ಕಲ್ಯಾಣ ಕ್ರಮಗಳನ್ನು ಘೋಷಿಸಿದೆ, ಇದರಲ್ಲಿ ಶಾಲಾ ವಿದ್ಯಾರ್ಥಿಗಳಿಗೆ ಮೂರು ದಿನಗಳ ಮಾಸಿಕ ಮುಟ್ಟಿನ ರಜೆ, ಕೆಲಸದ ಸ್ಥಳಗಳಲ್ಲಿ ಮಹಿಳೆಯರಿಗೆ ಸಮಾನ...

ಜಿರಳೆ ಜನತಾ ಪಕ್ಷದ ಖಾತೆಗೆ ನಿರ್ಬಂಧ; ದೆಹಲಿ ಹೈಕೋರ್ಟ್‌ನಿಂದ ಕೇಂದ್ರ-ಎಕ್ಸ್‌ಗೆ ನೋಟಿಸ್

ಜಿರಳೆ ಜನತಾ ಪಕ್ಷದ (ಸಿಜೆಪಿ) ಸಂಸ್ಥಾಪಕ ಅಭಿಜೀತ್ ದಿಪ್ಕೆ ಅವರು ತಮ್ಮ ಸಾಮಾಜಿಕ ಮಾಧ್ಯಮ ಖಾತೆಗಳನ್ನು ನಿರ್ಬಂಧಿಸಿದ್ದನ್ನು ಪ್ರಶ್ನಿಸಿ ಅರ್ಜಿ ಸಲ್ಲಿಸಿದ್ದು, ದೆಹಲಿ ಹೈಕೋರ್ಟ್ (ಮೇ 29) ಕೇಂದ್ರ ಸರ್ಕಾರ ಮತ್ತು ಸಾಮಾಜಿಕ...

“ದಲಿತ ಮುಖ್ಯಮಂತ್ರಿ” ಅರ್ಹರು ಯಾರಿಲ್ಲಿ?

ಸದ್ಯ ಕರ್ನಾಟಕದಲ್ಲಿ ಮುಖ್ಯಮಂತ್ರಿಗಳ ಬದಲಾವಣೆಗೆ ವೇದಿಕೆ ಸಜ್ಜುಗೊಂಡಿದೆ. ಸುಧೀರ್ಘಾವಧಿ ಮುಖ್ಯಮಂತ್ರಿಯಾಗಿ ಅಧಿಕಾರ ನಡೆಸಿದ ಅಹಿಂದ ರಾಜಕಾರಣದ ಕುರಿತು ಮಾತಾಡುತ್ತಿದ್ದ, ಸಮಾಜವಾದಿ ಹಿನ್ನೆಲೆಯ ಸಿದ್ದರಾಮಯ್ಯ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಡಿ.ಕೆ. ಶಿವಕುಮಾರ್‌ ಮುಖ್ಯಮಂತ್ರಿಯಾಗಿ...

‘ನಾನು ಪ್ರೀತಿ-ವಿಶ್ವಾಸಗಳಿಗೆ ತಲೆಬಾಗುವವನೇ ಹೊರತು ಒತ್ತಡ-ಪ್ರಭಾವಗಳಿಗೆ ಒಳಗಾಗುವವನಲ್ಲ’: ವಿದಾಯ ಭಾಷಣದಲ್ಲಿ ಸಿದ್ದರಾಮಯ್ಯ

ಹೈಕಮಾಂಡ್ ಯಾವಾಗ ಸೂಚಿಸುತ್ತದೆಯೋ ಆಗ ರಾಜೀನಾಮೆ ಕೊಡುತ್ತೇನೆ ಎಂದು ಹೇಳಿದ್ದ ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ 2026 ಮೇ 28 ರಂದು ಹೈಕಮಾಂಡ್ ಸೂಚನೆ ಮೇರೆಗೆ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಈ ಮೂಲಕ...