Homeಕರ್ನಾಟಕದೇವನೂರರನ್ನು ಕಂಡದ್ದು...

ದೇವನೂರರನ್ನು ಕಂಡದ್ದು…

- Advertisement -
- Advertisement -

“ದೇವನೂರು ಬರುತ್ತಾರಾ”? “ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಬೇಕಾಗಿದ್ದ ಎರಡು ಮೂರು ಪ್ರಮುಖ ಕಾರ್ಯಕ್ರಮಗಳಲ್ಲಿ ಅವರು ಕಾಣಿಸಿಕೊಂಡಿಲ್ಲ” ಎಂದೆ. “ಇಲ್ಲ ಈ ಸಭೆಗೆ ಬಂದೆ ಬರುತ್ತಾರೆ” ಎಂದರು ಸ್ನೇಹಿತರು .

“ದೇವನೂರು ಬಂದರು” ಎಂದು ಪಿಸುಗುಟ್ಟಿದರು ಪಕ್ಕದಲ್ಲಿದ್ದವರು. ಒಳಬರುತ್ತಲಿತ್ತು ಮೇರು ಪರ್ವತ. ಆರಡಿಗೆ ಒಂದೆರಡು ಇಂಚು ಕಡಿಮೆ ಇರುವ ದೇಹವದು. ಇಸ್ತ್ರಿ ಕಾಣದ ದೊಗಲೆ ಪ್ಯಾಂಟು, ಅದರ ಮೇಲೊಂದು ತುಂಬ ತೋಳಿನ ಹತ್ತಿಯ ನೂಲಿನ ಅಂಗಿ, ಅದರ ಮೇಲೊಂದು ಅರ್ಧತೋಳಿನ ಉಲನ್ ಸ್ವಿಟರ್, ಕೊರಳಲ್ಲಿ ಜೋತಾಡುತ್ತಿತ್ತೊಂದು ಟವೆಲ್. ಕಾಲಲ್ಲಿರುವ ಸಾದಾ ಚಪ್ಪಲಿಗಳನ್ನು ಬಾಗಿಲು ಬಳಿ ಬಿಟ್ಟು ಮುಗುಳುನಗುತ್ತ ಒಳಬಂದರು.

ದೇವನೂರ ಮಹಾದೇವರ ಬಗ್ಗೆ ಅನೇಕ ಬಾರಿ ಕೇಳಿದ್ದೆ ಅಂತೆಕಂತೆಗಳನ್ನು. ಅವರಿಗೆ ರಾಜಕಾರಣ ಆಸಕ್ತಿದಾಯಕ ವಿಷಯವಂತೆ; ಆದರೆ ರಾಜಕೀಯ ಮಾಡುವವರನ್ನು ಹತ್ತಿರಕ್ಕೆ ಸೇರಿಸೊಲ್ಲವಂತೆ; ವಿಧಾನಸಭೆಯ ಮೇಲ್ಮನೆಯ ಸದಸ್ಯತ್ವ ಮನೆ ಬಾಗಿಲಿಗೆ ಬಂದಾಗ ಬಾಗಿಲನ್ನು ತಗೆಯಲೇ ಇಲ್ಲವಂತೆ; ತಮ್ಮ ಮನೆ ಬಿಟ್ಟು ಯಾರ ಮನೆಗೂ ಹೋಗುವದಿಲ್ಲವಂತೆ; ಸಾಹಿತ್ಯ ಸಮ್ಮೇಳನದ ಅಧ್ಯಕ್ಷಗಿರಿಯನ್ನು ಗೌರವ ಪೂರ್ವಕವಾಗಿ ತಿರಸ್ಕರಿಸಿದರಂತೆ; ಇತ್ತೀಚೆಗೆ ಪ್ರಶಸ್ತಿಗಳನ್ನು ಸ್ವೀಕರಿಸುತ್ತಿಲ್ಲವಂತೆ; ಸಿಕ್ಕ ಪ್ರಶಸ್ತಿಗಳನ್ನು ಹಿಂದಿರುಗಿಸುತ್ತಿದ್ದಾರಂತೆ; ಯಾರಿಗೂ ಅನವಶ್ಯಕ ಶಿಫಾರಸ್ಸು ಮಾಡುವದಿಲ್ಲವಂತೆ; ಯಾರ ಹಂಗಿಗೂ ಒಳಗಾಗುವದಿಲ್ಲವಂತೆ; ತುಂಬ ನಿಷ್ಠುರವಾದಿಯಂತೆ; ಬರೆಯುವದು ಕಡಿಮೆಯಂತೆ; ಬರೆದಿದ್ದೆಲ್ಲ ಅಪ್ಪಟ ಚಿನ್ನವಂತೆ; ಹತ್ತಾರು ಪುಟಗಳನ್ನು ಅವರು ಬರೆದರೆ ಅದಕ್ಕೆ ಸಾವಿರಾರು ಪುಟಗಳ ವಿಮರ್ಶೆ ಬರುತ್ತವೆಯಂತೆ; ಹೀಗೆ ಅಂಕೆಯಿಲ್ಲದ ಅಂತೆಕಂತೆಗಳು ನನ್ನ ಮನಃಪಟ ದಲ್ಲಿದ್ದವು.

ಹೆಚ್ಚು ಕೇಳಿದಂತೆ ಅವರ ಬಗ್ಗೆ ಆಸಕ್ತಿ ಬೆಳೆಯಲಾರಂಭಿಸಿತು. ಮೊದಲ ಭಾರಿ ಝೂಮ್ ಮಿಟಿಂಗನಲ್ಲಿ ಅವರನ್ನೊಮ್ಮೆ ಭೇಟಿಯಾಗಿದ್ದೆ. ಅಂದು ಅವರು ಜಿ.ಬಿ. ಪಾಟೀಲರ್‍ಯಾರು ಅವರನ್ನು ತೋರಿಸಿ ಎಂದಾಗ ನಾನು ನವ ವಧುವಿನಂತೆ ನಾಚಿ ನೀರಾಗಿದ್ದೆ. ವೈಯಕ್ತಿಕವಾಗಿ ಕಾಣುವ ಬಯಕೆ ಅಂದು ಈಡೇರಿತು. ಆದರೆ ಖುದ್ದು ಮುಖತಃ ಭೇಟಿಯ ಆಸೆ ಹಾಗೆಯೇ ಉಳಿದಿತ್ತು.

ಇವರ ಬಗ್ಗೆ ತಲೆಯಲ್ಲಿ ಹುಳ ಬಿಟ್ಟುಕೊಂಡೆ. ಅವರ ಬರೆದ ಸಾಹಿತ್ಯವು ಕಣ್ಣು ಮಂದೆ ತೇಲುತ್ತ ಹೋದವು. ಬರೆದಿದ್ದು ಒಂದೇ ಒಂದು ಕಾದಂಬರಿ ’ಕುಸುಮ ಬಾಲೆ’, ಎರಡು ಕಥಾ ಸಂಕಲನಗಳು ’ದ್ಯಾವನೂರು’ ಮತ್ತು ’ಒಡಲಾಳ’ ಎಂದು. ಭಾರತದಾದ್ಯಂತ ಚರ್ಚೆಯಾದ ’ಎದೆಗೆ ಬಿದ್ದ ಅಕ್ಷರ’ ಅವರ ಬಿಡಿ ಬರಹಗಳ ಸಂಕಲನ. ಇತ್ತೀಚೆಗೆ ಅವರ ಎದೆಯಿಂದ ಹೊರಬಂದ ಆರ್.ಎಸ್.ಎಸ್. ಆಳ ಮತ್ತು ಅಗಲ ಎಂಬ ಚಿಕ್ಕ ಕೃತಿ ಕೂಡ ಸೇರಿಕೊಂಡಿದೆ. ’ನೋಡು ಮತ್ತು ಕೂಡು’ ಎಂಬ ಅನುವಾದ ಪುಸ್ತಕವನ್ನು ಪ್ರಕಟಿಸಿದ್ದಾರೆ. ಇದರ ಜೊತೆಗೆ ಪ್ರಕಟವಾಗದೆ ಉಳಿದಿರುವ ಇನ್ನಷ್ಟು ಬಿಡಿ ಬರಹಗಳು ಕೂಡ ಇವೆ.

ಮೂರು ದಶಕಗಳ ಹಿಂದೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಅವರನ್ನು ಹುಡುಕಿಕೊಂಡು ಬಂದಿತ್ತು. ’ಕುಸುಮಬಾಲೆ’ ಮುಟ್ಟಿದ್ದಳು ಕೇಂದ್ರ ಸಾಹಿತ್ಯ ಅಕಾಡೆಮಿಯನ್ನು. ’ಎದೆಗೆ ಬಿದ್ದ ಅಕ್ಷರ’ಗಳು ತಟ್ಟಿದ್ದವು ಕೊಲ್ಕತ್ತಾದ ಭಾರತೀಯ ಭಾಷಾ ಪರಿಷತ್ತಿನ ಎದೆಯನ್ನು. ಅವರು ದೇವನೂರನ್ನು ಗೌರವಿಸಿದರು ಸೃಜನಶೀಲ ಕೃತಿಕಾರರೆಂದು. ನಾನೇಕೆ ಇವರನ್ನು ಗುರುತಿಸಿಲ್ಲವೆಂದಿತು ಒಕ್ಕೂಟದ ಕೇಂದ್ರ ಸರಕಾರ. ’ಪದ್ಮಶ್ರಿ’ ಪ್ರಶಸ್ತಿ ಕೊಟ್ಟು ಗೌರವಿಸಿದರು ಅವರನ್ನು. ಮೈಸೂರಿನ ವಿಶ್ವವಿದ್ಯಾನಿಲಯದವರು ತಮ್ಮ ಪಕ್ಕದ ಹೋಬಳಿ ನಂಜನಗೂಡಿನ ಮಹದೇವನಿಗೆ ಗೌರವಿಸಿದರು ಡಾಕ್ಟರ್ ಎಂದು. ಆದರೂ ಇವರೆಂದೂ ತಮ್ಮ ಹೆಸರಿನ ಮುಂದಾಗಲಿ ಅಥವಾ ಹಿಂದಾಗಲಿ ಗೌರವ ಸೂಚಕ ಪ್ರಶಸ್ತಿಗಳನ್ನು ಬಳಸಲೇ ಇಲ್ಲ. ಇವರು ಇಂದು ಮತ್ತು ಎಂದೆಂದಿಗೂ ’ದೇವನೂರ ಮಹಾದೇವ’ ಮಾತ್ರ.

ಅಂದಿನ ಸಭೆಯಲ್ಲಿ ಇವರು ನನ್ನ ಪಕ್ಕದಲ್ಲಿದ್ದರು. ಗಂಭೀರವಾಗಿ ನಡೆಯುತ್ತಿದ್ದ ಸಭೆಯಲ್ಲಿ ತಟ್ಟನೆ ಎದ್ದು ಹೊರನಡೆದರು. ಕುತೂಹಲದಿಂದ ನಾನೂ ಅವರನ್ನು ಹಿಂಬಾಲಿಸಿದ್ದೆ ವರಾಂಡಾಕ್ಕೆ. ’ಸೇದುತ್ತಿರಾ’ ಎಂದು ಸಿಗರೇಟು ನೀಡಲು ಮುಂದಾದರು. ಸೇದಲಾರದ ನಾನು ಅವರನ್ನು ಒಬ್ಬಂಟಿಯಾಗಿ ಯೋಚಿಸಲು ಬಿಟ್ಟು ಒಳಬಂದೆ.

ಸಭೆಯಲ್ಲಿ ನಾವೆಲ್ಲರೂ ಸಾಮಾನ್ಯವಾಗಿ ಯೋಚಿಸುತ್ತಿದ್ದಂತೆ ಅವರು ಯೋಚಿಸುತ್ತಿರಲಿಲ್ಲವೆಂದೆನಿಸಿತು ಅಂದು ನನಗೆ. ಮುಂದೆ ಬಾಧಿಸಬಹುದಾದ ವಿಷಯಗಳ ಬಗ್ಗೆ ಅವರಿಂದ ತಟ್ಟನೆ ಪ್ರಶ್ನೆಗಳು ಬರುತ್ತಿದ್ದವು. “ಸರ್ ಇದನ್ನು ಮುಗಿಸಿ ಅಲ್ಲಿಗೆ ಬರುವೆ” ಎಂದು ಒದ್ದಾಡುತ್ತಿದ್ದರು ತಜ್ಞ ಸಂಘಟಕರು. ಇವರ ಯೋಚನಾ ಲಹರಿಯ ಆಳ ಅಗಲಗಳನ್ನು ನಾನು ಅರಿಯದಾದೆ.

ಇನ್ನೊಂದು ಸಣ್ಣ ವಿಷಯ ಹೇಳಿ ಮುಗಿಸುವೆ. ಹಿಂದೊಮ್ಮೆ ಇವರ ಶ್ರೀಮತಿಯವರು ಗಂಡನ ಅಂಗಿ, ಚೊಣ್ಣಗಳು ಮುದ್ದೆಯಾಗಿರುವದನ್ನು ಕಂಡು ಅವುಗಳಿಗೆ ಇಸ್ತ್ರಿಮಾಡಿಸಿ ಇಟ್ಟಿದ್ದರಂತೆ. ಗೂಟದಲ್ಲಿ ಕಾಣದ ಬಟ್ಟೆಗಳಿಗಾಗಿ ಹುಡುಕಿ ’ಎಲ್ಲಿವೆ ಅವು’ ಅಂದರಂತೆ. ಅವರು ಕಪಾಟು ಕಡೆ ಕೈ ತೋರಿಸಿದಾಗ ’ಅವ್ಯಾಕೆ ಹಿಂಗೆ’ ಎಂದು ಕಸಿವಿಸಿಗೊಂಡು ತಮ್ಮೆಲ್ಲ ಇಸ್ತ್ರಿ ಬಟ್ಟೆಗಳನ್ನು ನೀರಲ್ಲಿ ಅದ್ದಿ ಒಣಹಾಕಿಬಿಟ್ಟರಂತೆ. ಅಂದಿನಿಂದ ಇವರ ಬಟ್ಟೆಯ ಸಹವಾಸ ಬೇಡವೆಂದು ಅವರೂ ಕೈತೊಳೆದರಂತೆ.

ಯಾರಿಗೆ ಗೊತ್ತು ಮಹಾದೇವನ ಮಹಿಮೆ! ’ತನ್ನವರು ತೊಡುವ ಬಟ್ಟೆಗಳಿಗೆಲ್ಲಿವೆ ಇಸ್ತ್ರಿ?’ ಅಂದಿರಬೇಕು, ಈ ಅಕ್ಷರದ ಮಹದೇವ. ಅವರಿಗಿಲ್ಲದ ಇಸ್ತ್ರಿ ಬಟ್ಟೆಗಳು ತನಗೇಕೇ ಎಂದಿರಬೇಕು ದೇವನೂರಿನ ಫಕೀರ.

ಜಿ ಬಿ ಪಾಟೀಲ

ಜಿ ಬಿ ಪಾಟೀಲ
ಬಸವನಬಾಗೇವಾಡಿಯ ಜಿ.ಬಿ.ಪಾಟೀಲ್ ಅವರು ಬೆಂಗಳೂರಿನಲ್ಲಿ ಯಶಸ್ವಿ ಉದ್ಯಮಿಯಾಗಿದ್ದೂ, ಸಾಮಾಜಿಕ ಹಾಗೂ ರಾಜಕೀಯ ಸಂಗತಿಗಳಲ್ಲಿ ನಿರಂತರ ಆಸಕ್ತಿ ಹೊಂದಿದ್ದವರು. ಸದ್ಯ ಜಾಗತಿಕ ಲಿಂಗಾಯಿತ ಮಹಾಸಭಾದ ಪ್ರಧಾನ ಕಾರ್ಯದರ್ಶಿಯಾಗಿ ಸಕ್ರಿಯರಾಗಿದ್ದಾರೆ.


ಇದನ್ನೂ ಓದಿ: ದೇವನೂರ ಮಹದೇವ ಅವರ ಕಿರುಹೊತ್ತಿಗೆ ’ಆರ್‌ಎಸ್‌ಎಸ್- ಆಳ ಮತ್ತು ಅಗಲ’ದಿಂದ ಆಯ್ದ ಅಧ್ಯಾಯ; ಇಂದು, ವರ್ತಮಾನದಲ್ಲಿ…

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...