Homeಕರ್ನಾಟಕದೇವನೂರರನ್ನು ಕಂಡದ್ದು...

ದೇವನೂರರನ್ನು ಕಂಡದ್ದು…

- Advertisement -
- Advertisement -

“ದೇವನೂರು ಬರುತ್ತಾರಾ”? “ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಬೇಕಾಗಿದ್ದ ಎರಡು ಮೂರು ಪ್ರಮುಖ ಕಾರ್ಯಕ್ರಮಗಳಲ್ಲಿ ಅವರು ಕಾಣಿಸಿಕೊಂಡಿಲ್ಲ” ಎಂದೆ. “ಇಲ್ಲ ಈ ಸಭೆಗೆ ಬಂದೆ ಬರುತ್ತಾರೆ” ಎಂದರು ಸ್ನೇಹಿತರು .

“ದೇವನೂರು ಬಂದರು” ಎಂದು ಪಿಸುಗುಟ್ಟಿದರು ಪಕ್ಕದಲ್ಲಿದ್ದವರು. ಒಳಬರುತ್ತಲಿತ್ತು ಮೇರು ಪರ್ವತ. ಆರಡಿಗೆ ಒಂದೆರಡು ಇಂಚು ಕಡಿಮೆ ಇರುವ ದೇಹವದು. ಇಸ್ತ್ರಿ ಕಾಣದ ದೊಗಲೆ ಪ್ಯಾಂಟು, ಅದರ ಮೇಲೊಂದು ತುಂಬ ತೋಳಿನ ಹತ್ತಿಯ ನೂಲಿನ ಅಂಗಿ, ಅದರ ಮೇಲೊಂದು ಅರ್ಧತೋಳಿನ ಉಲನ್ ಸ್ವಿಟರ್, ಕೊರಳಲ್ಲಿ ಜೋತಾಡುತ್ತಿತ್ತೊಂದು ಟವೆಲ್. ಕಾಲಲ್ಲಿರುವ ಸಾದಾ ಚಪ್ಪಲಿಗಳನ್ನು ಬಾಗಿಲು ಬಳಿ ಬಿಟ್ಟು ಮುಗುಳುನಗುತ್ತ ಒಳಬಂದರು.

ದೇವನೂರ ಮಹಾದೇವರ ಬಗ್ಗೆ ಅನೇಕ ಬಾರಿ ಕೇಳಿದ್ದೆ ಅಂತೆಕಂತೆಗಳನ್ನು. ಅವರಿಗೆ ರಾಜಕಾರಣ ಆಸಕ್ತಿದಾಯಕ ವಿಷಯವಂತೆ; ಆದರೆ ರಾಜಕೀಯ ಮಾಡುವವರನ್ನು ಹತ್ತಿರಕ್ಕೆ ಸೇರಿಸೊಲ್ಲವಂತೆ; ವಿಧಾನಸಭೆಯ ಮೇಲ್ಮನೆಯ ಸದಸ್ಯತ್ವ ಮನೆ ಬಾಗಿಲಿಗೆ ಬಂದಾಗ ಬಾಗಿಲನ್ನು ತಗೆಯಲೇ ಇಲ್ಲವಂತೆ; ತಮ್ಮ ಮನೆ ಬಿಟ್ಟು ಯಾರ ಮನೆಗೂ ಹೋಗುವದಿಲ್ಲವಂತೆ; ಸಾಹಿತ್ಯ ಸಮ್ಮೇಳನದ ಅಧ್ಯಕ್ಷಗಿರಿಯನ್ನು ಗೌರವ ಪೂರ್ವಕವಾಗಿ ತಿರಸ್ಕರಿಸಿದರಂತೆ; ಇತ್ತೀಚೆಗೆ ಪ್ರಶಸ್ತಿಗಳನ್ನು ಸ್ವೀಕರಿಸುತ್ತಿಲ್ಲವಂತೆ; ಸಿಕ್ಕ ಪ್ರಶಸ್ತಿಗಳನ್ನು ಹಿಂದಿರುಗಿಸುತ್ತಿದ್ದಾರಂತೆ; ಯಾರಿಗೂ ಅನವಶ್ಯಕ ಶಿಫಾರಸ್ಸು ಮಾಡುವದಿಲ್ಲವಂತೆ; ಯಾರ ಹಂಗಿಗೂ ಒಳಗಾಗುವದಿಲ್ಲವಂತೆ; ತುಂಬ ನಿಷ್ಠುರವಾದಿಯಂತೆ; ಬರೆಯುವದು ಕಡಿಮೆಯಂತೆ; ಬರೆದಿದ್ದೆಲ್ಲ ಅಪ್ಪಟ ಚಿನ್ನವಂತೆ; ಹತ್ತಾರು ಪುಟಗಳನ್ನು ಅವರು ಬರೆದರೆ ಅದಕ್ಕೆ ಸಾವಿರಾರು ಪುಟಗಳ ವಿಮರ್ಶೆ ಬರುತ್ತವೆಯಂತೆ; ಹೀಗೆ ಅಂಕೆಯಿಲ್ಲದ ಅಂತೆಕಂತೆಗಳು ನನ್ನ ಮನಃಪಟ ದಲ್ಲಿದ್ದವು.

ಹೆಚ್ಚು ಕೇಳಿದಂತೆ ಅವರ ಬಗ್ಗೆ ಆಸಕ್ತಿ ಬೆಳೆಯಲಾರಂಭಿಸಿತು. ಮೊದಲ ಭಾರಿ ಝೂಮ್ ಮಿಟಿಂಗನಲ್ಲಿ ಅವರನ್ನೊಮ್ಮೆ ಭೇಟಿಯಾಗಿದ್ದೆ. ಅಂದು ಅವರು ಜಿ.ಬಿ. ಪಾಟೀಲರ್‍ಯಾರು ಅವರನ್ನು ತೋರಿಸಿ ಎಂದಾಗ ನಾನು ನವ ವಧುವಿನಂತೆ ನಾಚಿ ನೀರಾಗಿದ್ದೆ. ವೈಯಕ್ತಿಕವಾಗಿ ಕಾಣುವ ಬಯಕೆ ಅಂದು ಈಡೇರಿತು. ಆದರೆ ಖುದ್ದು ಮುಖತಃ ಭೇಟಿಯ ಆಸೆ ಹಾಗೆಯೇ ಉಳಿದಿತ್ತು.

ಇವರ ಬಗ್ಗೆ ತಲೆಯಲ್ಲಿ ಹುಳ ಬಿಟ್ಟುಕೊಂಡೆ. ಅವರ ಬರೆದ ಸಾಹಿತ್ಯವು ಕಣ್ಣು ಮಂದೆ ತೇಲುತ್ತ ಹೋದವು. ಬರೆದಿದ್ದು ಒಂದೇ ಒಂದು ಕಾದಂಬರಿ ’ಕುಸುಮ ಬಾಲೆ’, ಎರಡು ಕಥಾ ಸಂಕಲನಗಳು ’ದ್ಯಾವನೂರು’ ಮತ್ತು ’ಒಡಲಾಳ’ ಎಂದು. ಭಾರತದಾದ್ಯಂತ ಚರ್ಚೆಯಾದ ’ಎದೆಗೆ ಬಿದ್ದ ಅಕ್ಷರ’ ಅವರ ಬಿಡಿ ಬರಹಗಳ ಸಂಕಲನ. ಇತ್ತೀಚೆಗೆ ಅವರ ಎದೆಯಿಂದ ಹೊರಬಂದ ಆರ್.ಎಸ್.ಎಸ್. ಆಳ ಮತ್ತು ಅಗಲ ಎಂಬ ಚಿಕ್ಕ ಕೃತಿ ಕೂಡ ಸೇರಿಕೊಂಡಿದೆ. ’ನೋಡು ಮತ್ತು ಕೂಡು’ ಎಂಬ ಅನುವಾದ ಪುಸ್ತಕವನ್ನು ಪ್ರಕಟಿಸಿದ್ದಾರೆ. ಇದರ ಜೊತೆಗೆ ಪ್ರಕಟವಾಗದೆ ಉಳಿದಿರುವ ಇನ್ನಷ್ಟು ಬಿಡಿ ಬರಹಗಳು ಕೂಡ ಇವೆ.

ಮೂರು ದಶಕಗಳ ಹಿಂದೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಅವರನ್ನು ಹುಡುಕಿಕೊಂಡು ಬಂದಿತ್ತು. ’ಕುಸುಮಬಾಲೆ’ ಮುಟ್ಟಿದ್ದಳು ಕೇಂದ್ರ ಸಾಹಿತ್ಯ ಅಕಾಡೆಮಿಯನ್ನು. ’ಎದೆಗೆ ಬಿದ್ದ ಅಕ್ಷರ’ಗಳು ತಟ್ಟಿದ್ದವು ಕೊಲ್ಕತ್ತಾದ ಭಾರತೀಯ ಭಾಷಾ ಪರಿಷತ್ತಿನ ಎದೆಯನ್ನು. ಅವರು ದೇವನೂರನ್ನು ಗೌರವಿಸಿದರು ಸೃಜನಶೀಲ ಕೃತಿಕಾರರೆಂದು. ನಾನೇಕೆ ಇವರನ್ನು ಗುರುತಿಸಿಲ್ಲವೆಂದಿತು ಒಕ್ಕೂಟದ ಕೇಂದ್ರ ಸರಕಾರ. ’ಪದ್ಮಶ್ರಿ’ ಪ್ರಶಸ್ತಿ ಕೊಟ್ಟು ಗೌರವಿಸಿದರು ಅವರನ್ನು. ಮೈಸೂರಿನ ವಿಶ್ವವಿದ್ಯಾನಿಲಯದವರು ತಮ್ಮ ಪಕ್ಕದ ಹೋಬಳಿ ನಂಜನಗೂಡಿನ ಮಹದೇವನಿಗೆ ಗೌರವಿಸಿದರು ಡಾಕ್ಟರ್ ಎಂದು. ಆದರೂ ಇವರೆಂದೂ ತಮ್ಮ ಹೆಸರಿನ ಮುಂದಾಗಲಿ ಅಥವಾ ಹಿಂದಾಗಲಿ ಗೌರವ ಸೂಚಕ ಪ್ರಶಸ್ತಿಗಳನ್ನು ಬಳಸಲೇ ಇಲ್ಲ. ಇವರು ಇಂದು ಮತ್ತು ಎಂದೆಂದಿಗೂ ’ದೇವನೂರ ಮಹಾದೇವ’ ಮಾತ್ರ.

ಅಂದಿನ ಸಭೆಯಲ್ಲಿ ಇವರು ನನ್ನ ಪಕ್ಕದಲ್ಲಿದ್ದರು. ಗಂಭೀರವಾಗಿ ನಡೆಯುತ್ತಿದ್ದ ಸಭೆಯಲ್ಲಿ ತಟ್ಟನೆ ಎದ್ದು ಹೊರನಡೆದರು. ಕುತೂಹಲದಿಂದ ನಾನೂ ಅವರನ್ನು ಹಿಂಬಾಲಿಸಿದ್ದೆ ವರಾಂಡಾಕ್ಕೆ. ’ಸೇದುತ್ತಿರಾ’ ಎಂದು ಸಿಗರೇಟು ನೀಡಲು ಮುಂದಾದರು. ಸೇದಲಾರದ ನಾನು ಅವರನ್ನು ಒಬ್ಬಂಟಿಯಾಗಿ ಯೋಚಿಸಲು ಬಿಟ್ಟು ಒಳಬಂದೆ.

ಸಭೆಯಲ್ಲಿ ನಾವೆಲ್ಲರೂ ಸಾಮಾನ್ಯವಾಗಿ ಯೋಚಿಸುತ್ತಿದ್ದಂತೆ ಅವರು ಯೋಚಿಸುತ್ತಿರಲಿಲ್ಲವೆಂದೆನಿಸಿತು ಅಂದು ನನಗೆ. ಮುಂದೆ ಬಾಧಿಸಬಹುದಾದ ವಿಷಯಗಳ ಬಗ್ಗೆ ಅವರಿಂದ ತಟ್ಟನೆ ಪ್ರಶ್ನೆಗಳು ಬರುತ್ತಿದ್ದವು. “ಸರ್ ಇದನ್ನು ಮುಗಿಸಿ ಅಲ್ಲಿಗೆ ಬರುವೆ” ಎಂದು ಒದ್ದಾಡುತ್ತಿದ್ದರು ತಜ್ಞ ಸಂಘಟಕರು. ಇವರ ಯೋಚನಾ ಲಹರಿಯ ಆಳ ಅಗಲಗಳನ್ನು ನಾನು ಅರಿಯದಾದೆ.

ಇನ್ನೊಂದು ಸಣ್ಣ ವಿಷಯ ಹೇಳಿ ಮುಗಿಸುವೆ. ಹಿಂದೊಮ್ಮೆ ಇವರ ಶ್ರೀಮತಿಯವರು ಗಂಡನ ಅಂಗಿ, ಚೊಣ್ಣಗಳು ಮುದ್ದೆಯಾಗಿರುವದನ್ನು ಕಂಡು ಅವುಗಳಿಗೆ ಇಸ್ತ್ರಿಮಾಡಿಸಿ ಇಟ್ಟಿದ್ದರಂತೆ. ಗೂಟದಲ್ಲಿ ಕಾಣದ ಬಟ್ಟೆಗಳಿಗಾಗಿ ಹುಡುಕಿ ’ಎಲ್ಲಿವೆ ಅವು’ ಅಂದರಂತೆ. ಅವರು ಕಪಾಟು ಕಡೆ ಕೈ ತೋರಿಸಿದಾಗ ’ಅವ್ಯಾಕೆ ಹಿಂಗೆ’ ಎಂದು ಕಸಿವಿಸಿಗೊಂಡು ತಮ್ಮೆಲ್ಲ ಇಸ್ತ್ರಿ ಬಟ್ಟೆಗಳನ್ನು ನೀರಲ್ಲಿ ಅದ್ದಿ ಒಣಹಾಕಿಬಿಟ್ಟರಂತೆ. ಅಂದಿನಿಂದ ಇವರ ಬಟ್ಟೆಯ ಸಹವಾಸ ಬೇಡವೆಂದು ಅವರೂ ಕೈತೊಳೆದರಂತೆ.

ಯಾರಿಗೆ ಗೊತ್ತು ಮಹಾದೇವನ ಮಹಿಮೆ! ’ತನ್ನವರು ತೊಡುವ ಬಟ್ಟೆಗಳಿಗೆಲ್ಲಿವೆ ಇಸ್ತ್ರಿ?’ ಅಂದಿರಬೇಕು, ಈ ಅಕ್ಷರದ ಮಹದೇವ. ಅವರಿಗಿಲ್ಲದ ಇಸ್ತ್ರಿ ಬಟ್ಟೆಗಳು ತನಗೇಕೇ ಎಂದಿರಬೇಕು ದೇವನೂರಿನ ಫಕೀರ.

ಜಿ ಬಿ ಪಾಟೀಲ

ಜಿ ಬಿ ಪಾಟೀಲ
ಬಸವನಬಾಗೇವಾಡಿಯ ಜಿ.ಬಿ.ಪಾಟೀಲ್ ಅವರು ಬೆಂಗಳೂರಿನಲ್ಲಿ ಯಶಸ್ವಿ ಉದ್ಯಮಿಯಾಗಿದ್ದೂ, ಸಾಮಾಜಿಕ ಹಾಗೂ ರಾಜಕೀಯ ಸಂಗತಿಗಳಲ್ಲಿ ನಿರಂತರ ಆಸಕ್ತಿ ಹೊಂದಿದ್ದವರು. ಸದ್ಯ ಜಾಗತಿಕ ಲಿಂಗಾಯಿತ ಮಹಾಸಭಾದ ಪ್ರಧಾನ ಕಾರ್ಯದರ್ಶಿಯಾಗಿ ಸಕ್ರಿಯರಾಗಿದ್ದಾರೆ.


ಇದನ್ನೂ ಓದಿ: ದೇವನೂರ ಮಹದೇವ ಅವರ ಕಿರುಹೊತ್ತಿಗೆ ’ಆರ್‌ಎಸ್‌ಎಸ್- ಆಳ ಮತ್ತು ಅಗಲ’ದಿಂದ ಆಯ್ದ ಅಧ್ಯಾಯ; ಇಂದು, ವರ್ತಮಾನದಲ್ಲಿ…

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ಸಾವರ್ಕರ್ ದೇವರನ್ನು, ಧಾರ್ಮಿಕ ನಂಬಿಕೆಗಳನ್ನು ಪ್ರಶ್ನಿಸಿದ್ದರು’: ಪುಣೆ ನ್ಯಾಯಾಲಯದಲ್ಲಿ ಮೊಮ್ಮಗ ಸತ್ಯಕಿ ಸಾವರ್ಕರ್ ಒಪ್ಪಿಗೆ

ಪುಣೆ: ಕಾಂಗ್ರೆಸ್ ನಾಯಕ ಹಾಗೂ ಸಂಸತ್ತಿನ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯ ವಿಚಾರಣೆಯು ಅತ್ಯಂತ ಕುತೂಹಲಕಾರಿ ಮತ್ತು ರಾಜಕೀಯ-ಸೈದ್ಧಾಂತಿಕ ತಿರುವನ್ನು ಪಡೆದುಕೊಂಡಿದೆ. ವಿನಾಯಕ ದಾಮೋದರ್...

ಮಾಜಿ ಸಚಿವ ಧರ್ಮೇಂದ್ರ ಪ್ರಧಾನ್ ಮಗಳ ಫೋನ್ ಬಿಲ್ ವಿವಾದ: ₹68 ಸಾವಿರ ಬಿಲ್-ಪೇ ಆಗಿದ್ದು ಸರ್ಕಾರಿ ಹಣದಲ್ಲಾ?

ಮಾಜಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ಪುತ್ರಿ ನೈಮಿಷಾ ಪ್ರಧಾನ್ ಅವರು ಮತ್ತೊಮ್ಮೆ ವಿವಾದದ ಕೇಂದ್ರಬಿಂದುವಾಗಿದ್ದಾರೆ. ವಾರಗಳ ಹಿಂದೆ ನೀಟ್ ಪರೀಕ್ಷೆಯ ಪತ್ರಿಕೆ ಸೋರಿಕೆ ಖಂಡಿಸಿ ಕಾಕ್ರೋಚ್ ಜನತಾ ಪಾರ್ಟಿ...

ಇರಾನ್ ವಸತಿ ಕಟ್ಟಡದ ಮೇಲೆ ಅಮೆರಿಕಾ ದಾಳಿ: ಎರಡು ವರ್ಷದ ಮಗು ಸೇರಿ ಒಂದೇ ಕುಟುಂಬದ ಮೂವರ ಸಾವು

ಮಧ್ಯಪ್ರಾಚ್ಯದಲ್ಲಿ ಅಮೆರಿಕ ತನ್ನ ಸಾಮ್ರಾಜ್ಯಶಾಹಿ ಆಧಿಪತ್ಯ ಸ್ಥಾಪನೆಗಾಗಿ ನಡೆಸುತ್ತಿರುವ ಯುದ್ಧಕೋರ ನೀತಿ ಮತ್ತೊಮ್ಮೆ ನಿರಪರಾಧಿ ಸಾರ್ವಜನಿಕರ ರಕ್ತ ಹರಿಸಿದೆ. ಇರಾನ್ ಮೇಲಿನ ಅಮೆರಿಕ ಪಡೆಗಳ ಸರಣಿ ಮತ್ತು ಭೀಕರ ಬಾಂಬ್ ದಾಳಿಗಳು ಕೇವಲ...

SIR: ASDDO ಪಟ್ಟಿಯಲ್ಲಿ ಬೆಂಗಳೂರಿಗೆ ಪ್ರಥಮ ಸ್ಥಾನ, ರಾಜ್ಯದಲ್ಲಿ 2 ಕೋಟಿ ಮತದಾರರ ಹೆಸರು ರದ್ದಾಗುವ ಬೀತಿ

ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ರಾಜಧಾನಿ ಬೆಂಗಳೂರು ಅತ್ಯಂತ ಪ್ರಮುಖ ಹಾಗೂ ಕಳವಳಕಾರಿ ಕೇಂದ್ರವಾಗಿ ಹೊರಹೊಮ್ಮಿದೆ. ರಾಜ್ಯದಲ್ಲಿರುವ ಒಟ್ಟು 5.54 ಕೋಟಿ ನೋಂದಾಯಿತ ಮತದಾರರ ಪೈಕಿ...

ಉಮರ್ ಖಾಲಿದ್ ಜಾಮೀನು ಅರ್ಜಿ; ಪೊಲೀಸರ ನಿಲುವು ಕೇಳಿದ ದೆಹಲಿ ಹೈಕೋರ್ಟ್

ಫೆಬ್ರವರಿ 2020 ರಲ್ಲಿ ಈಶಾನ್ಯ ದೆಹಲಿಯಲ್ಲಿ ನಡೆದ ಗಲಭೆಯ ಹಿಂದಿನ "ದೊಡ್ಡ ಪಿತೂರಿ"ಗೆ ಸಂಬಂಧಿಸಿದಂತೆ ಭಯೋತ್ಪಾದನಾ ವಿರೋಧಿ ಕಾನೂನು ಯುಎಪಿಎ ಅಡಿಯಲ್ಲಿ ಪ್ರಕರಣದಲ್ಲಿ ಜಾಮೀನು ಕೋರಿ ಉಮರ್ ಖಾಲಿದ್ ಸಲ್ಲಿಸಿದ ಅರ್ಜಿಯ ಕುರಿತು...

ಮುಂಬೈ: ‘ಶಾಲಾ ಜಿಹಾದ್’ ಎಂಬ ಬಿಜೆಪಿ ನಾಯಕನ ಕೋಮುದ್ವೇಷಕ್ಕೆ ಶಾಲೆಗೆ ನುಗ್ಗಿದ ಬುಲ್ಡೋಜರ್: ಬಿಎಂಸಿಗೆ ಚಾಟಿ ಬೀಸಿದ ಬಾಂಬೆ ಹೈಕೋರ್ಟ್

ಬಿಜೆಪಿ ನಾಯಕ ಕಿರೀಟ್ ಸೋಮಯ್ಯ ಅವರ “ಶಾಲಾ ಜಿಹಾದ್” ಎಂಬ ವಿಷಕಾರಿ ಹೇಳಿಕೆಯ ನಂತರ ಮುಂಬೈನ ಗೋವಂಡಿಯಲ್ಲಿ ಬಡ ಮುಸ್ಲಿಂ ಮಕ್ಕಳ ಶಿಕ್ಷಣದ ಆಶಾಕಿರಣವಾಗಿದ್ದ ತೆಹ್ಜೀಬ್ ಇಸ್ಲಾಮಿಕ್ ಇಂಗ್ಲಿಷ್ ಶಾಲೆಯನ್ನು ಬೃಹನ್ಮುಂಬೈ ಮುನ್ಸಿಪಲ್...

ಹಾಕಿ ತಂಡಕ್ಕೆ ಕೇಸರಿ ಜರ್ಸಿ: ‘ನಮ್ಮ ಗುರುತೇ ನೀಲಿ, ಕೇಸರಿ ಬಣ್ಣದ ತರ್ಕವೇನು?’: ಮಾಜಿ ಹಾಕಿ ಪಟು ಆಕ್ರೋಶ: ಬಿಜೆಪಿ ನಡೆಗೆ ವಿಪಕ್ಷಗಳ ಟೀಕೆ

ಭಾರತೀಯ ಕ್ರೀಡಾರಂಗದ ಹೆಮ್ಮೆಯ ಸಾಂಪ್ರದಾಯಿಕ 'ನೀಲಿ' (ಬ್ಲೂ) ಬಣ್ಣವನ್ನು ಕಳಚಿ, ಹಾಕಿ ತಂಡಕ್ಕೆ ಬಲವಂತವಾಗಿ ಕೇಸರಿ ಬಣ್ಣದ ಜೆರ್ಸಿ ತೊಡಿಸಲು ಹೊರಟಿರುವುದು ಇದೀಗ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಮುಂಬರುವ ಎಫ್‌ಐಎಚ್ (FIH) ವಿಶ್ವಕಪ್‌ಗಾಗಿ...

ತಮಿಳುನಾಡು: ಶಾಲಾ ಮಕ್ಕಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡಲು ಚಿಂತನೆ

ತಮಿಳುನಾಡಿನ ಸರ್ಕಾರಿ ಶಾಲೆಗಳ ಮಧ್ಯಾಹ್ನದ ಬಿಸಿಊಟದ ಯೋಜನೆಯಡಿಯಲ್ಲಿ ವಿದ್ಯಾರ್ಥಿಗಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡುವ ಪ್ರಸ್ತಾವನೆಯನ್ನು ತಮಿಳುನಾಡು ಸರ್ಕಾರ ಪರಿಶೀಲಿಸುತ್ತಿದ್ದು, ಶಾಲಾ ಶಿಕ್ಷಣ ಸಚಿವ ರಾಜ್‌ಮೋಹನ್ ಅವರು ಈ ಕುರಿತು ಮುಖ್ಯಮಂತ್ರಿ ಸಿ....

ಪ್ರಶ್ನೆಪತ್ರಿಕೆ ಸೋರಿಕೆ ವಿರೋಧಿ ಮಸೂದೆಯಲ್ಲಿ ಸುಧಾರಣೆಗಳಿಲ್ಲ, ರಾಜಕೀಯ ಮಾತ್ರ: ಕೇಂದ್ರದ ವಿರುದ್ಧ ಖರ್ಗೆ ವಾಗ್ದಾಳಿ

ಪಬ್ಲಿಕ್ ಪರೀಕ್ಷೆಗಳ (ಅನ್ಯಾಯಯುತ ವಿಧಾನಗಳ ತಡೆಗಟ್ಟುವಿಕೆ) ತಿದ್ದುಪಡಿ ಮಸೂದೆ 2026 ರ ಚರ್ಚೆಯ ಸಂದರ್ಭದಲ್ಲಿ ಮಾತನಾಡಿದ ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಕೇಂದ್ರ ಸರ್ಕಾರದ ಮೇಲೆ ತೀವ್ರ ವಾಗ್ದಾಳಿ ನಡೆಸಿದರು....

ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಕೆ ಆರೋಪ; ಗೃಹ ಸಚಿವ ಅಮಿತ್‌ ಶಾ ಮೌನ ಪ್ರಶ್ನಿಸಿದ ಕಪಿಲ್ ಸಿಬಲ್

ಜುಲೈ 20 ರಂದು ದೆಹಲಿಯಲ್ಲಿ ನಡೆದ ಸಂಶತ್ ಚಲೋ ಪ್ರತಿಭಟನಾ ಮೆರವಣಿಗೆಯಲ್ಲಿ ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಸಲಾಗಿದೆ ಎಂಬ ಆರೋಪದ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಮೌನವನ್ನು...